ಲೈಫ್ ಸ್ಟೈಲ್
ಪಕ್ಷಿ ಪರಿಚಯ | ಚಿಟ್ಟು ಮಡಿವಾಳ

- ಭಗವತಿ ಎಂ.ಆರ್
ಬಾಲವನ್ನು ನಿಮಿರಿಸಿಕೊಂಡು ನೆಲಮಟ್ಟದಲ್ಲಿ, ಮತ್ತು ಕುರುಚಲು ಗಿಡಗಳ ಮೇಲೆ ಓಡಾಡಿಕೊಂಡಿರುವ ಚಿಟ್ಟು ಮಡಿವಾಳ (Indian Robin) ಹಕ್ಕಿಯನ್ನು ನೀವು ನೋಡಿರಬಹುದು. ಈ ಹಕ್ಕಿಗಳಿಗೆ ಹಣ್ಣು, ಕೀಟಗಳೆ ಮುಖ್ಯ ಆಹಾರ. ಇವು ಆಹಾರ ಹುಡುಕುವಾಗ ಬಹಳ ಚುರುಕಿನಿಂದ ಅತ್ತಿಂದಿತ್ತ ನೆಲಮಟ್ಟದಲ್ಲಿ ಓಡಾಡುತ್ತವೆ.
ಗಂಡು ಮಡಿವಾಳ ಹಕ್ಕಿಗೆ ನೀಲಿ ಮಿಶ್ರಿತ ಕಪ್ಪು, ಬಣ್ಣವಿದ್ದು , ಬಾಲದ ಬುಡದಲ್ಲಿ ಇಟ್ಟಿಗೆಯ ಬಣ್ಣವಿದ್ದು,, ರೆಕ್ಕೆಯ ಭಾಗದಲ್ಲಿ ಬಿಳಿಯ ಪಟ್ಟೆಯಿದೆ. ಇವು ಕಡು ನೀಲಿ ಬಣ್ಣದಾಗಿರುವುದರಿಂದ ಸಂಸ್ಕೃತದಲ್ಲಿ ಇದಕ್ಕೆ ಕೃಷ್ಣ ಪಕ್ಷಿ ಎಂಬ ಹೆಸರಿದೆ. ಹೆಣ್ಣು ಚಿಟ್ಟು ಮಡಿವಾಳ ಹಕ್ಕಿಗೆ ಕಂದು ಮಿಶ್ರಿತ ಕಪ್ಪು ಬಣ್ಣವಿದ್ದು, ಬಾಲದ ಅಂಚು ಕಪ್ಪಾಗಿರುತದೆ. ಇದಕ್ಕೆ ರೆಕ್ಕೆಯ ಮೇಲೆ ಬಿಳಿ ಪಟ್ಟೆಗಳಿಲ್ಲ.
ಚಿಟ್ಟು ಮಡಿವಾಳ ಹಕ್ಕಿ ಏಪ್ರಿಲ್ ನಿಂದ ಜೂನ್ ತಿಂಗಳ ನಡುವೆ ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಇವು ಸಾಮಾನ್ಯವಾಗಿ ಎರಡರಿಂದ ಮೂರು ಮೊಟ್ಟೆ ಇಡುತ್ತವೆ. ಇವು ಗೂಡನ್ನು ನೆಲ ಮಟ್ಟದಲ್ಲಿಯೇ ಕಟ್ಟುತ್ತವೆ. ಕಲ್ಲುಗಳನ್ನು ಕೆದರಿ ದೂರ ಸರಿಸಿ ನೆಲದಲ್ಲಿ ಬಟ್ಟಲಿನಾಕಾರದಲ್ಲಿ ಗುಂಡಿ ಮಾಡಿ, ಅದರಲ್ಲಿ ಒಣಗಿದ ಹುಲ್ಲು, ನಾರು, ಜೇಡರ ಬಲೆ, ಪುಕ್ಕ ಮುಂತಾದ ಮೃದುವಾದ ವಸ್ತುಗಳನ್ನು ಬಳಸಿ ಗೂಡು ಕಟ್ಟುತ್ತವೆ.
ಮಡಿವಾಳ ಹಕ್ಕಿಯ ಗೂಡು ಟಿಟ್ಟಿಭ ಮುಂತಾದ ಹಕ್ಕಿಗಳು ಕಟ್ಟುವಂತೆ ನೆಲಕ್ಕೆ ಸಮಾನಂತರವಾಗಿ ಇರುವುದಿಲ್ಲ. ಹೆಣ್ಣು ಚಿಟ್ಟು ಮಡಿವಾಳ ಮೊಟ್ಟೆಯ ಮೇಲೆ ಕೂತಾಗ ಗಂಡು ಹಕ್ಕಿ ದೂರದಲ್ಲಿ ಇದ್ದು ಗೂಡನ್ನು ಕಾಯುತ್ತದೆ. ಯಾರಾದರೂ ಹತ್ತಿರ ಹೋದರೆ ಕೂಗು ಹಾಕಿ ಎಚ್ಚರಿಸಿದಾಗ, ಹೆಣ್ಣು ಹಕ್ಕಿ ಗೂಡಿನಿಂದ ಆಚೆ ಬರುತ್ತದೆ. ಇವುಗಳ ಸಂತಾನೋತ್ಪತ್ತಿ ಕಾಲವು ಭಾರತ ಮತ್ತು ಬೇರೆಯೇ ದೇಶಗಳಲ್ಲಿ ಬೇರೆಬೇರೆಯಾಗಿದೆ. ಸಂತಾನೋತ್ಪತ್ತಿಯ ಸಮಯದಲ್ಲಿ ಗಂಡು ಹಕ್ಕಿಯು ತನ್ನ ಮಧುರವಾದ ಕಂಠದಿಂದ ಶಿಳ್ಳೆ ಹಾಕುತ್ತಾ ಹೆಣ್ಣು ಹಕ್ಕಿಗಳನ್ನು ಆಕರ್ಷಿಸುತ್ತವೆ.
ಇವು ಮನುಷ್ಯರನ್ನು ಕಂಡ ಕೂಡಲೆ ಹೆದರಿ ದೂರ ಹೋಗುವುದಿಲ್ಲ. ಮನುಷ್ಯರ ವಾಸದ ಸುತ್ತಲೂ ಧೈರ್ಯವಾಗಿ ಎಚ್ಚರಿಕೆಯಿಂದ ಅವರ ಸುತ್ತಮುತ್ತ ಹಾರಾಡಿಕೊಂದಿರುತ್ತವೆ. ಹೆಣ್ಣು ಮಡಿವಾಳಗಳಿಗಿಂತ ಗಂಡು ಮಡಿವಾಳ ಹಕ್ಕಿ ಮನುಷ್ಯರಿಗೆ ಸಮೀಪದಲ್ಲೇ ಇರುತ್ತವೆ. ಗುಬ್ಬಚ್ಚಿ, ಕಾಗೆ, ಪಾರಿವಾಳದ ಹಾಗೇ ಚಿಟ್ಟು ಮಡಿವಾಳಗಳು ಕೂಡ ಮನುಷ್ಯನ ನೆಲೆಗೆ ಸಮೀಪದಲ್ಲೇ ಇರುತ್ತವೆ. ಆದರೂ, ಸುರಕ್ಷಿತ ಅಂತರವನ್ನು ಸದಾಕಾಲವೂ ಕಾಯ್ದುಕೊಂಡಿರುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಅವಹೇಳನಕಾರಿ ಹೇಳಿಕೆ ; ಲೋಕಿಕೆರೆ ನಾಗರಾಜ್ ಕೂಡಲೇ ಕ್ಷಮೆ ಕೇಳಬೇಕು : ಸವಿತಾ ಹುಲ್ಲುಮನೆ ಗಣೇಶ್ ಆಗ್ರಹ
-
ದಿನದ ಸುದ್ದಿ3 days ago
ದೇಶಾದ್ಯಂತ 11 ದಿನಗಳ ಕಾಲ ತಿರಂಗ ಯಾತ್ರೆ
-
ದಿನದ ಸುದ್ದಿ4 days ago
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತ : ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
-
ದಿನದ ಸುದ್ದಿ4 days ago
ದಾವಣಗೆರೆ | ಮುಂಗಾರು ವಿಪತ್ತು ನಿರ್ವಹಣೆಗೆ ಸಿದ್ದತೆ, ಸಿಡಿಲಬ್ಬರ ಮುನ್ನೆಚ್ಚರಿಕೆಗೆ ಆಪ್ ಅಳವಡಿಸಿಕೊಳ್ಳಲು ಸಲಹೆ
-
ದಿನದ ಸುದ್ದಿ3 days ago
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರವು : ಪ್ರಧಾನಿ ನರೇಂದ್ರ ಮೋದಿ
-
ದಿನದ ಸುದ್ದಿ4 days ago
ದಾವಣಗೆರೆ | ಡಿ.ಇ.ಎಲ್.ಇಡಿ. ದಾಖಲಾತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಚನ್ನಗಿರಿ | ಇದೇ 15 ರಂದು ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ3 days ago
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ