Connect with us

ಸಿನಿ ಸುದ್ದಿ

ಬಾಲಿವುಡ್‍ನಲ್ಲಿ ಬದಲಾವಣೆ ಗಾಳಿ ಬೀಸಲಿದೆಯೇ ‘ಕರ್ವಾನ್’..?

Published

on

ಸುದ್ದಿದಿನ ಡೆಸ್ಕ್ |ಸಿನಿಮ್ಯಾಟಿಕ್, ಸೈನ್ಸ್ ಫಿಕ್ಷನ್, ಫ್ಯಾಂಟಸಿ ವಿಷಯಾಧಾರಿತ ಸಾಲು ಸಾಲು ಹಿಟ್ ಸಿನಿಮಾಗಳನ್ನು ಮೆಚ್ಚಿದ ಬಾಲಿವುಡ್ ಸಿನಿ ಪ್ರಿಯರು ಕಲಾತ್ಮಕ ಎಲಿಮೆಂಟ್‍ಗಳುಳ್ಳ ಸಿನಿಮಾವನ್ನು ಮೆಚ್ಚುತ್ತಾರೆಯೇ ಎಂಬ ಪ್ರಶ್ನೆಯನ್ನು ಕರ್ವಾನ್ ಸಿನಿಮಾ ಹುಟ್ಟುಹಾಕಿದೆ.

ಮಲೆಯಾಳಂನ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ ಅವರು ಈ ಸಿನಿಮಾ ಮೂಲಕ ಎಂಟ್ರಿ ಪಡೆದಿದ್ದಾರೆ. ಈಗಾಗಲೇ ತಮಿಳು ಹಾಗೂ ತೆಲಗು ಸಿನಿಮಾಗಳಲ್ಲಿ ನಟಿಸಿದ್ದ ದುಲ್ಕರ್ ಅವರು ಈ ಮೂಲಕ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದಾರೆ. ಮಾಲಿವುಡ್ ಸೂಪರ್ ಸ್ಟಾರ್ ಮಮ್ಮೂಟಿ ಅವರ ಪುತ್ರ ದುಲ್ಕರ್ ನಟನಾ ಚಾತುರ್ಯವು ಬಾಲಿವುಡ್‍ನಲ್ಲಿ ಫಲಿಸಲಿದೆಯೇ ಎಂಬುದಕ್ಕೂ ಈ ಸಿನಿಮಾ ಉತ್ತರ ಕೊಡಲಿದೆ. ಈಗಾಗಲೇ ಲಕ್ಷಾಂತರ ಜನ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಬುಕ್ ಮೈ ಶೋ, ಜಸ್ಟ್ ಟಿಕೆಟ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ, ಭವಿಷ್ಯದಲ್ಲಿ ಕರ್ವಾನ್ ತರದ ಸಿಂಪಲ್ ಕತೆಗಳುಳ್ಳ ಸಿನಿಮಾವನ್ನು ಉತ್ತರ ಭಾರತೀಯರು ಒಪ್ಪುತ್ತಾರೋ ಇಲ್ಲವೋ ಎಂಬುದು ಈಗ ಉದ್ಭವಿಸಿರುವ ಪ್ರಶ್ನೆ.

ಕರ್ವಾನ್ ಸಿನಿಮಾ ಬಗ್ಗೆ ಹೇಳುವುದಾದರೆ ಇದೊಂದು ದಕ್ಷಿಣ ಭಾರತದ ಅಭಿರುಚಿ ಹೊಂದಿರುವ ಬಾಲಿವುಡ್ ಸಿನಿಮಾ, ಅವಿನಾಶ್ ಚಿತ್ರದ ನಾಯಕ ಸಾಫ್ಟ್‍ವೇರ್ ಉದ್ಯೋಗಿ. ಖ್ಯಾತ ಫೋಟೊಗ್ರಾಫರ್ ಆಗಬೇಕೆಂದು ಕನಸು ಹೊತ್ತಿರುವ ಹುಡುಗ ಅಪ್ಪನ ಬಲವಂತಕ್ಕಾಗಿ ಸಾಫ್ಟ್‍ವೇರ್ ಕೆಲಸಕ್ಕೆ ಸೆರುತ್ತಾನೆ. ಕೆಲಸದಲ್ಲಿ ನಿರಾಸಕ್ತಿ, ರೋಟೀನ್ ಲೈಫ್‍ನಿಂದ ಬೇಸತ್ತಿರುವ ನಾಯಕ ಹೇಗಾದರೂ ಮಾಡಿ ತನ್ನ ಕನಸಿನಂತೆ ಫೋಟೊಗ್ರಾಫರ್ ಆಗುವಂತೆ ಹಂಬಲಿಸುತ್ತಾನೆ.
ಈ ನಡುವೆ ಗಂಗೋತ್ರಿಗೆ ಪ್ರವಾಸ ಹೋಗುವ ಅವಿನಾಶ್‍ನ ತಂದೆ ಸಾವಿಗೀಡಾಗುತ್ತಾರೆ. ಅಪ್ಪನ ಸಾವನ್ನು ಹಗುರವಾಗಿ ಸ್ವೀಕರಿಸುವ ಅವಿನಾಶ್‍ಗೆ ಈಗಲಾದರೂ ತಾನು ಫೋಟೊಗ್ರಾಫರ್ ಆಗಬಹುದೆಲ್ಲ ಎಂದು ಸಮಾಧಾನ ಪಟ್ಟಿಕೊಳ್ಳುತ್ತಾನೆ.

ಏರ್‍ಪೋರ್ಟ್‍ಗೆ ತನ್ನ ತಂದೆಯ ದೇಹದ ಬದಲು ಮಹಿಳೆಯೊಬ್ಬರ ಮೃತ ದೇಹ ಬರುತ್ತದೆ. ಅಕಸ್ಮಾತಾಗಿ ಅದು ಕೊಚ್ಚಿನ್‍ನವರದ್ದಾಗಿರುತ್ತದೆ. ತನ್ನ ತಂದೆ ದೇಹ ಅಲ್ಲಿಗೆ ಸೇರಿರುತ್ತದೆ. ಶವಪೆಟ್ಟಿಗೆಗಳನ್ನು ಬದಲಾಯಿಸುವ ಸಲುವಾಗಿ ಸ್ನೇಹಿತ ಶೌಕತ್ (ಇರ್ಫಾನ್ ಖಾನ್) ಜತೆ ಬೆಂಗಳೂರಿನಿಂದ ಕೊಚ್ಚಿನ್‍ಗೆ ಪ್ರಯಾಣ ಬೆಳೆಸುವ ಅವಿನಾಶ್‍ಗೆ, ದಾರಿ ಮಧ್ಯೆ ನಾಯಕಿ ಪರಿಚಯವಾಗುತ್ತದೆ. ಆಕೆಯ ಚೆಲ್ಲಾಟ, ಅವಳಿಷ್ಟದಂತೆ ಬದುಕುವ ರೀತಿ ನೋಡಿ ತಾನು ಬದಲಾಗಬೇಕೆನಿಸುತ್ತದೆ. ಮಾರ್ಗ ಮಧ್ಯೆ ಎದುರಾಗುವ ಸವಾಲುಗಳು ಹಾಗೂ ಸಿನಿಮೀಯ ಸನ್ನವೇಶಗಳೇ ಸಿನಿಮಾದ ಜೀವಾಳ.

ಸಿನಿಮಾ ಒಂದು ಸರಳ ಕತಾವಸ್ತು, ನಿರೂಪಣೆ ಹೊಂದಿದೆ ಈ ವಿಷಯದಲ್ಲಿ ನಿರ್ದೇಶಕರು ಗೆಲ್ಲುತ್ತಾರೆ. ಇರ್ಫಾನ್ ಖಾನ್ ಅವರ ಮಾತಿನ ಶೈಲಿಯೇ ನಗೆಯ ಬುಗ್ಗೆ ಹೊಮ್ಮಿಸುತ್ತದೆ. ಬೆಂಗಳೂರು, ಮೈಸೂರು, ನಂಜನಗೂಡಿನಲ್ಲೂ ಚಿತ್ರ ಶೂಟ್ ಆಗಿರುವುದು ವಿಷೇಶದ ಜತೆ ಕನ್ನಡಿಗರಿಗೂ ಹತ್ತರಿವಾಗುತ್ತದೆ. ಒಟ್ಟಾರೆ ಹೇಳುವುದಾದರೆ ಆಫ್ ಬೀಟ್ ಸಿನಿಮಾ ಪ್ರಿಯರು ತಪ್ಪದೇ ನೋಡಬೇಕಿರುವ ಸಿನಿಮಾ ಇದು. ಬಾಲಿವುಡ್‍ನಲ್ಲಿ ಒಂದು ಬದಲಾವಣೆ ಗಾಳಿ ಬೀಸಿ ಕರ್ವಾನ್ ರೀತಿಯ ಸಿನಿಮಾಗಳು ಮೂಡಿಬಂದರೆ ಸಿನಿಮಾ ಪ್ರಿಯರಿಗೆ ಹಬ್ಬದೂಟವೇ ಸರಿ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ

Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್‌; ಕಿಚ್ಚ ಸುದೀಪ್‌ ಸಾರಥ್ಯದ ಬಿಗ್‌ಬಾಸ್‌ ಕನ್ನಡ 13ರ ವಿಶೇಷತೆಗಳೇನು?

Published

on

Source: Vijayakarnataka
Bigg Boss Kannada 13: ಅರಮನೆಗೆ ಗುಡ್‌ಬೈ, ಈ ಬಾರಿ ‘ಫ್ಲೈಟ್’ನಲ್ಲಿ ಬಿಗ್‌ಬಾಸ್‌ ಪ್ರಯಾಣ; ಸೆ.6ರಿಂದ ಹೊಸ ಸೀಸನ್‌ ಶುರು!

ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್‌ ಕನ್ನಡ ಸೀಸನ್‌ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಕುತೂಹಲ ಹೆಚ್ಚಿಸಿರುವ ಕಾರ್ಯಕ್ರಮದ ಟಿವಿ ಸೀಸನ್‌ ಸೆಪ್ಟೆಂಬರ್‌ 6ರಿಂದ ಆರಂಭವಾಗಲಿದೆ. ಹೊಸ ಸೀಸನ್‌ನಲ್ಲಿ ಮನೆ, ಥೀಮ್‌, ಸ್ಪರ್ಧಿಗಳ ಆಯ್ಕೆ ಹಾಗೂ ವೀಕ್ಷಣಾ ಅನುಭವದಲ್ಲೂ ಹಲವು ವಿಶೇಷತೆಗಳನ್ನು ಪರಿಚಯಿಸಲಾಗುತ್ತಿದೆ.

ಕಳೆದ 12 ಸೀಸನ್‌ಗಳಂತೆ ಈ ಬಾರಿಯೂ ಕಿಚ್ಚ ಸುದೀಪ್‌ ಕಾರ್ಯಕ್ರಮದ ನಿರೂಪಕರಾಗಿ ಮುಂದುವರಿಯಲಿದ್ದಾರೆ. ಸತತ 13 ಸೀಸನ್‌ಗಳನ್ನು ನಿರೂಪಣೆ ಮಾಡುತ್ತಿರುವುದು ಬಿಗ್‌ಬಾಸ್‌ ಇತಿಹಾಸದಲ್ಲೇ ಗಮನಾರ್ಹ ದಾಖಲೆಯಾಗಿದೆ.

ಹೈಲೈಟ್ಸ್: ಸೆಪ್ಟೆಂಬರ್ 6ರಿಂದ ಬಿಗ್‌ಬಾಸ್‌ ಹವಾ

  • ಸೆಪ್ಟೆಂಬರ್‌ 6ರಂದು ಸಂಜೆ 7ಕ್ಕೆ ಬಿಗ್‌ಬಾಸ್‌ ಕನ್ನಡ 13ರ ಗ್ರ್ಯಾಂಡ್‌ ಪ್ರೀಮಿಯರ್‌
  • ಈ ಬಾರಿ ‘Flight’ ಥೀಮ್‌ನಲ್ಲಿ ಬಿಗ್‌ಬಾಸ್‌ ಮನೆ ಮತ್ತು ಕಾರ್ಯಕ್ರಮ
  • ಸೆಲೆಬ್ರಿಟಿಗಳ ಜತೆಗೆ ಮೂವರು ಸಾಮಾನ್ಯ ಸ್ಪರ್ಧಿಗಳಿಗೆ ಅವಕಾಶ
  • ಜಿಯೋಹಾಟ್‌ಸ್ಟಾರ್‌ನಲ್ಲಿ 24×7 ಲೈವ್‌ ವೀಕ್ಷಣೆಯ ಸೌಲಭ್ಯ
  • ಕಿಚ್ಚ ಸುದೀಪ್‌ ಸತತ 13ನೇ ಸೀಸನ್‌ಗೂ ನಿರೂಪಕರಾಗಿ ಮುಂದುವರಿಕೆ

http://Visit : www.suddidina.com

ಈ ಬಾರಿ ‘Flight’ ಥೀಮ್‌ ಏಕೆ ವಿಶೇಷ?

ಕಳೆದ ಸೀಸನ್‌ನಲ್ಲಿ ವೀಕ್ಷಕರು ಅರಮನೆ ಮಾದರಿಯ ಬಿಗ್‌ಬಾಸ್‌ ಮನೆಯನ್ನು ಕಂಡಿದ್ದರು. ಆದರೆ ಈ ಬಾರಿ ಇಡೀ ಕಾರ್ಯಕ್ರಮದ ಕಲ್ಪನೆಯೇ ಬದಲಾಗಿದೆ. ‘Flight’ ಥೀಮ್‌ ಆಧಾರಿತವಾಗಿ ಸೀಸನ್‌ 13 ರೂಪಿಸಲಾಗಿದ್ದು, ಈಗಾಗಲೇ ಬಿಡುಗಡೆಯಾಗಿರುವ ಪ್ರೋಮೋದಲ್ಲೂ ಇದರ ಝಲಕ್‌ ಕಾಣಿಸಿಕೊಂಡಿದೆ.

ವಿಶೇಷವೆಂದರೆ ಫ್ಲೈಟ್‌ ಥೀಮ್‌ ಕೇವಲ ಪ್ರೋಮೋಗೆ ಸೀಮಿತವಾಗಿಲ್ಲ. ಬಿಗ್‌ಬಾಸ್‌ ಮನೆಯ ವಿನ್ಯಾಸದಲ್ಲೂ ಇದೇ ಪರಿಕಲ್ಪನೆಯನ್ನು ಬಳಸಲಾಗಿದೆ. ಹೀಗಾಗಿ ಈ ಬಾರಿ ಮನೆ ಹೇಗೆ ಕಾಣಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.

ಸೆಲೆಬ್ರಿಟಿಗಳ ಜತೆಗೆ ಕಾಮನ್‌ ಮ್ಯಾನ್‌ ಎಂಟ್ರಿ

ಬಿಗ್‌ಬಾಸ್‌ ಕನ್ನಡದ ಪ್ರತಿ ಸೀಸನ್‌ನಲ್ಲೂ ಸ್ಪರ್ಧಿಗಳ ಆಯ್ಕೆ ಪ್ರಮುಖ ಆಕರ್ಷಣೆಯಾಗಿರುತ್ತದೆ. ಈ ಬಾರಿ ಸೆಲೆಬ್ರಿಟಿಗಳ ಜತೆಗೆ ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗುತ್ತಿದೆ.

‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ ಆಯ್ಕೆಯಾಗುವ ಮೂವರು ಸಾಮಾನ್ಯ ಸ್ಪರ್ಧಿಗಳು ಸೀಸನ್‌ 13ರ ಮನೆಗೆ ಪ್ರವೇಶಿಸಲಿದ್ದಾರೆ. ಇದರಿಂದ ಮನೆಯಲ್ಲಿ ವಿಭಿನ್ನ ಹಿನ್ನೆಲೆಯ ವ್ಯಕ್ತಿಗಳ ನಡುವಿನ ಸಂವಹನ, ಅಭಿಪ್ರಾಯ ಭೇದ ಹಾಗೂ ಹೊಸ ರೀತಿಯ ಸ್ಪರ್ಧೆ ಮೂಡುವ ನಿರೀಕ್ಷೆಯಿದೆ.

ಮನೆಯ ಪ್ರತಿಕ್ಷಣವೂ 24×7 ಲೈವ್‌

ಈ ಬಾರಿ ವೀಕ್ಷಕರಿಗೆ ಮತ್ತೊಂದು ದೊಡ್ಡ ಸೌಲಭ್ಯ ಸಿಗಲಿದೆ. ಟಿವಿ ಎಪಿಸೋಡ್‌ಗಳಿಗೆ ಮಾತ್ರ ಸೀಮಿತವಾಗದೆ, ಜಿಯೋಹಾಟ್‌ಸ್ಟಾರ್‌ನಲ್ಲಿ ಬಿಗ್‌ಬಾಸ್‌ ಮನೆಯ 24×7 ಲೈವ್‌ ವೀಕ್ಷಣೆ ಲಭ್ಯವಿರಲಿದೆ.

ಅಂದರೆ ದಿನದ ಎಪಿಸೋಡ್‌ನಲ್ಲಿ ಪ್ರಸಾರವಾಗದ ಮನೆಯೊಳಗಿನ ಹಲವು ಬೆಳವಣಿಗೆಗಳನ್ನೂ ವೀಕ್ಷಕರು ಗಮನಿಸಬಹುದು. ಸ್ಪರ್ಧಿಗಳ ನಡುವಿನ ಮಾತುಕತೆ, ಚಟುವಟಿಕೆಗಳು ಹಾಗೂ ಅನಿರೀಕ್ಷಿತ ಘಟನೆಗಳನ್ನು ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ ಸಿಗಲಿದೆ.

ಪ್ರಸಾರದ ಸಮಯವೂ ಫಿಕ್ಸ್‌

ಸೆಪ್ಟೆಂಬರ್‌ 6ರಂದು ಸಂಜೆ 7 ಗಂಟೆಗೆ ಗ್ರ್ಯಾಂಡ್‌ ಪ್ರೀಮಿಯರ್‌ ಪ್ರಸಾರವಾಗಲಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9:30ಕ್ಕೆ ಹೊಸ ಸಂಚಿಕೆಗಳು ಪ್ರಸಾರವಾಗಲಿವೆ.

ಇನ್ನು ವಾರಾಂತ್ಯದಲ್ಲಿ ಕಿಚ್ಚ ಸುದೀಪ್‌ ನಡೆಸಿಕೊಡುವ ಶನಿವಾರ ಮತ್ತು ಭಾನುವಾರದ ವಿಶೇಷ ಸಂಚಿಕೆಗಳು ರಾತ್ರಿ 9 ಗಂಟೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿವೆ.

ಬಿಗ್‌ಬಾಸ್‌ ಪ್ರಯಾಣ ಯಾವ ದಿಕ್ಕಿಗೆ?

ಫ್ಲೈಟ್‌ ಥೀಮ್‌, ಹೊಸ ಮುಖಗಳು, ಸಾಮಾನ್ಯ ಸ್ಪರ್ಧಿಗಳ ಪ್ರವೇಶ ಮತ್ತು 24×7 ಲೈವ್‌ ವೀಕ್ಷಣೆಯೊಂದಿಗೆ ಸೀಸನ್‌ 13 ಕುತೂಹಲ ಮೂಡಿಸಿದೆ. ಈ ‘ಫ್ಲೈಟ್‌’ನಲ್ಲಿ ಯಾರು ಟೇಕಾಫ್‌ ಆಗುತ್ತಾರೆ, ಯಾರು ಮಧ್ಯದಲ್ಲೇ ಎಲಿಮಿನೇಟ್‌ ಆಗುತ್ತಾರೆ ಮತ್ತು ಕೊನೆಯವರೆಗೂ ಯಾರು ಪ್ರಯಾಣ ಮುಂದುವರಿಸುತ್ತಾರೆ ಎಂಬುದೇ ಮುಂದಿನ ದಿನಗಳ ಪ್ರಮುಖ ಪ್ರಶ್ನೆ.

Continue Reading

ದಿನದ ಸುದ್ದಿ

Bigg Boss Agniparikshé: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಕುಮಾರಿ ಎಕ್ಸಿಟ್; ಆಟ ಮುಗಿದರೂ ಭವಿಷ್ಯಕ್ಕೆ ಸಿಕ್ಕಿತು ದೊಡ್ಡ ಗಿಫ್ಟ್

Published

on

Bigg Boss Agniparikshé: ಅನಾರೋಗ್ಯದಿಂದ ಅರ್ಧಕ್ಕೆ ಶೋ ಬಿಟ್ಟ ನಂಜನಗೂಡಿನ ಕುಮಾರಿ; ₹5 ಲಕ್ಷ ನೆರವು, ದುಬೈ ಉದ್ಯೋಗದ ಆಫರ್!

ಸುದ್ದಿದಿನ,ಬೆಂಗಳೂರು: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಸರಳತೆ, ಮುಗ್ಧತೆ ಹಾಗೂ ಸಹಜ ವರ್ತನೆಯಿಂದ ವೀಕ್ಷಕರ ಗಮನ ಸೆಳೆದಿದ್ದ ನಂಜನಗೂಡಿನ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ ಕಾರ್ಯಕ್ರಮದಿಂದ ಅರ್ಧಕ್ಕೆ ನಿರ್ಗಮಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕುಮಾರಿ, ವೈದ್ಯರ ಸಲಹೆಯಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶೋನಿಂದ ಹೊರಬಂದಿದ್ದಾರೆ.

ಕಳೆದ ಕೆಲವು ಸಂಚಿಕೆಗಳಲ್ಲಿ ಕುಮಾರಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ವೀಕ್ಷಕರಲ್ಲಿ ಸಾಕಷ್ಟು ಕುತೂಹಲ ಮೂಡಿತ್ತು. ಅವರು ಯಾಕೆ ಕಾರ್ಯಕ್ರಮದಲ್ಲಿ ಕಾಣಿಸುತ್ತಿಲ್ಲ ಎಂಬ ಪ್ರಶ್ನೆಯೂ ಚರ್ಚೆಗೆ ಬಂದಿತ್ತು. ಇದೇ ಸಂದರ್ಭದಲ್ಲಿ ಮತ್ತೊಬ್ಬ ಸ್ಪರ್ಧಿ ಪೂರ್ಣಿಮಾ, ತಮ್ಮನ್ನು ಕಳುಹಿಸಿ ಕುಮಾರಿಯನ್ನು ಕರೆತರಲಾಗುತ್ತಿದೆ ಎಂದು ಆರೋಪಿಸಿದ್ದರು. ಇದೀಗ ಕುಮಾರಿ ಶೋನಿಂದ ದೂರ ಉಳಿದಿರುವ ನಿಜವಾದ ಕಾರಣ ಅನಾರೋಗ್ಯ ಎಂಬುದು ಸ್ಪಷ್ಟವಾಗಿದೆ.

http://Visit : www.suddidina.com

ಆಟ ಅರ್ಧಕ್ಕೆ ನಿಂತರೂ ಸಿಕ್ಕಿತು ₹5 ಲಕ್ಷ!

ಕುಮಾರಿಯ ಬಿಗ್ ಬಾಸ್ ಪಯಣ ಅರ್ಧಕ್ಕೆ ಅಂತ್ಯಗೊಂಡಿದ್ದರೂ, ಕಾರ್ಯಕ್ರಮದ ವೇದಿಕೆ ಅವರಿಗೆ ನಿರೀಕ್ಷೆಗೂ ಮೀರಿದ ನೆರವು ನೀಡಿದೆ. ಕಾರ್ಯಕ್ರಮದ ಪ್ರಾಯೋಜಕರಾದ ಇಕೋ ಪ್ಲ್ಯಾನೆಟ್ ಎಲಿವೇಟರ್ ಸಂಸ್ಥೆ ಕುಮಾರಿಗೆ ಬರೋಬ್ಬರಿ ₹5 ಲಕ್ಷ ನಗದು ನೆರವು ನೀಡಿದೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಕುಮಾರಿಗೆ ಈ ಹಣ ದೊಡ್ಡ ಆರ್ಥಿಕ ಆಸರೆಯಾಗುವ ನಿರೀಕ್ಷೆಯಿದೆ. ವಿಶೇಷವಾಗಿ ಕುಟುಂಬದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯ ಚಿಕಿತ್ಸೆಗೆ ಈ ಹಣ ನೆರವಾಗಬಹುದು ಎಂಬ ನಿರೀಕ್ಷೆಯೂ ಇದೆ.

ಶಿಕ್ಷಣದ ಬಳಿಕ ಉದ್ಯೋಗಕ್ಕೂ ಭರವಸೆ

₹5 ಲಕ್ಷ ನೆರವಿನ ಜತೆಗೆ ಕುಮಾರಿಗೆ ಮತ್ತೊಂದು ಮಹತ್ವದ ಅವಕಾಶವನ್ನು ಸಂಸ್ಥೆ ಘೋಷಿಸಿದೆ. ಅವರು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿದ ಬಳಿಕ ಕರ್ನಾಟಕದಲ್ಲಿರುವ ಸಂಸ್ಥೆಯ ಯಾವುದೇ ಶಾಖೆಯಲ್ಲಿ ಅಥವಾ ದುಬೈನಲ್ಲಿರುವ ಶಾಖೆಯಲ್ಲಿ ಉದ್ಯೋಗ ಪಡೆಯುವ ಅವಕಾಶ ನೀಡಲಾಗಿದೆ.

ಇದು ಕುಮಾರಿಯ ಭವಿಷ್ಯಕ್ಕೆ ಹೊಸ ದಿಕ್ಕು ನೀಡುವ ಘೋಷಣೆಯಾಗಿದೆ. ರಿಯಾಲಿಟಿ ಶೋನಿಂದ ಸಿಕ್ಕ ಜನಪ್ರಿಯತೆಯ ಜತೆಗೆ ಇದೀಗ ಶಿಕ್ಷಣ ಮತ್ತು ಉದ್ಯೋಗದ ಮೂಲಕ ಸ್ವಾವಲಂಬನೆಯತ್ತ ಹೆಜ್ಜೆ ಇಡುವ ಅವಕಾಶವೂ ದೊರೆತಿದೆ.

ಭಾವುಕ ವಿದಾಯ, ಹೊಸ ಬದುಕಿನ ಭರವಸೆ

ಹಳ್ಳಿಯಿಂದ ಬಂದ ಕುಮಾರಿಗೆ ಬೆಂಗಳೂರನ್ನು ನೋಡುವ ಅವಕಾಶದಿಂದ ಹಿಡಿದು ದೊಡ್ಡ ರಿಯಾಲಿಟಿ ಶೋ ವೇದಿಕೆಯಲ್ಲಿ ಸ್ಪರ್ಧಿಸುವವರೆಗೆ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಹಲವು ಹೊಸ ಅನುಭವಗಳನ್ನು ನೀಡಿದೆ. ಶೋನಿಂದ ನಿರ್ಗಮಿಸುವ ಸಂದರ್ಭದಲ್ಲಿ ಕುಮಾರಿ ಸೇರಿದಂತೆ ಇತರ ಸ್ಪರ್ಧಿಗಳು ಭಾವುಕರಾದರು.

ಸ್ಪರ್ಧೆಯಲ್ಲಿ ಮುಂದುವರಿಯಲು ಸಾಧ್ಯವಾಗದ ನೋವಿನ ನಡುವೆಯೂ, ಇಷ್ಟು ದೊಡ್ಡ ವೇದಿಕೆಯಲ್ಲಿ ಅವಕಾಶ ಸಿಕ್ಕಿದ್ದಕ್ಕೆ ಕುಮಾರಿ ಸಂತಸ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದಾಗಿ ಅವರ ಆಟ ಅಂತ್ಯಗೊಂಡಿದ್ದರೂ, ₹5 ಲಕ್ಷ ನೆರವು ಮತ್ತು ಭವಿಷ್ಯದ ಉದ್ಯೋಗದ ಭರವಸೆ ಕುಮಾರಿಯ ಜೀವನದಲ್ಲಿ ಹೊಸ ಅಧ್ಯಾಯಕ್ಕೆ ಕಾರಣವಾಗುವ ಸಾಧ್ಯತೆಯಿದೆ.

ಹೀಗಾಗಿ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಲ್ಲಿ ಕುಮಾರಿಯ ಆಟ ಅರ್ಧಕ್ಕೆ ನಿಂತಿದ್ದರೂ, ಕಾರ್ಯಕ್ರಮದ ವೇದಿಕೆಯಿಂದ ಸಿಕ್ಕ ಬೆಂಬಲ ಅವರ ಮುಂದಿನ ಬದುಕಿಗೆ ಮಹತ್ವದ ತಿರುವು ನೀಡಿದೆ.

Continue Reading

ಸಿನಿ ಸುದ್ದಿ

Chikkanna Wedding: ಬೆಳ್ಳಿ ತೆರೆ ಮೇಲೆ ನಗಿಸಿದ ಚಿಕ್ಕಣ್ಣ ಬದುಕಿನ ಹೊಸ ಅಧ್ಯಾಯಕ್ಕೆ ಕಾಲಿಟ್ಟರು; ಪಾವನಾ ಜೊತೆ ಸಪ್ತಪದಿ

Published

on

Chikkanna Wedding: ಪಾವನಾ ಕೈಹಿಡಿದ ಕಾಮಿಡಿ ಸ್ಟಾರ್ ಚಿಕ್ಕಣ್ಣ; ಮೈಸೂರಿನಲ್ಲಿ ಅದ್ದೂರಿ ವಿವಾಹ, ನಾಚಿ ನೀರಾದ ವರ!

ಸುದ್ದಿದಿನ,ಮೈಸೂರು: ‘ಕಿರಾತಕ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ ತಮ್ಮ ವಿಭಿನ್ನ ಕಾಮಿಡಿ ಶೈಲಿಯಿಂದ ಪ್ರೇಕ್ಷಕರ ಮನಗೆದ್ದಿರುವ ನಟ ಚಿಕ್ಕಣ್ಣ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಕುಟುಂಬಸ್ಥರು, ಆಪ್ತರು, ಸ್ನೇಹಿತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಪಾವನಾ ಅವರ ಕೈಹಿಡಿದಿದ್ದಾರೆ.

ಬೆಳಗ್ಗೆ 10.45ರಿಂದ 11.25ರವರೆಗೆ ನಡೆದ ಶುಭ ಮುಹೂರ್ತದಲ್ಲಿ ಮಾಂಗಲ್ಯ ಧಾರಣೆ ನೆರವೇರಿತು. ಒಕ್ಕಲಿಗ ಸಂಪ್ರದಾಯದಂತೆ ಚಿಕ್ಕಣ್ಣ ಹಾಗೂ ಪಾವನಾ ಸಪ್ತಪದಿ ತುಳಿದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮಾಂಗಲ್ಯ ಧಾರಣೆ ವೇಳೆ ಕುಟುಂಬಸ್ಥರು ಹಾಗೂ ಅಭಿಮಾನಿಗಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಈ ವೇಳೆ ಚಿಕ್ಕಣ್ಣ ನಾಚಿ ನೀರಾದ ಕ್ಷಣಗಳು ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿವೆ.

ಹೈಲೈಟ್ಸ್:

ಮೈಸೂರಿನಲ್ಲಿ ಅದ್ದೂರಿಯಾಗಿ ನಡೆದ ಚಿಕ್ಕಣ್ಣ-ಪಾವನಾ ಮದುವೆ

  • ಪಾವನಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟ ಚಿಕ್ಕಣ್ಣ
  • ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್‌ನಲ್ಲಿ ಅದ್ದೂರಿ ವಿವಾಹ
  • ಒಕ್ಕಲಿಗ ಸಂಪ್ರದಾಯದಂತೆ ಸಪ್ತಪದಿ ತುಳಿದ ನವಜೋಡಿ
  • ಆರಕ್ಷತೆಗೆ ಡಾಲಿ ಧನಂಜಯ್, ಶ್ರೀಮುರಳಿ ಸೇರಿದಂತೆ ಹಲವು ಸೆಲೆಬ್ರಿಟಿಗಳ ಆಗಮನ
  • ‘ಲಕ್ಷ್ಮೀ ಪುತ್ರ’ ಸಿನಿಮಾದಲ್ಲಿ ನಾಯಕನಾಗಿ ಮತ್ತೆ ಚಿಕ್ಕಣ್ಣ ಮಿಂಚಲು ಸಜ್ಜು

http://Visit : www.suddidina.com

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ನವಜೋಡಿ

ಮದುವೆ ಸಮಾರಂಭದಲ್ಲಿ ಚಿಕ್ಕಣ್ಣ ಸ್ಫಟಿಕ ಮಣಿಗಳಿಂದ ಅಲಂಕರಿಸಲಾದ ಪೇಟ ಧರಿಸಿ, ಪೈಜಾಮಾ ಹಾಗೂ ಶರ್ಟ್‌ನಲ್ಲಿ ಸಾಂಪ್ರದಾಯಿಕ ಲುಕ್‌ನಲ್ಲಿ ಕಾಣಿಸಿಕೊಂಡರು. ಪಾವನಾ ಅವರು ರೇಷ್ಮೆ ಸೀರೆಯಲ್ಲಿ ಮಿಂಚಿದ್ದು, ಅದಕ್ಕೆ ಹೊಂದುವ ಜುಮುಕಿ, ಹೆಣೆದ ಜಡೆ ಹಾಗೂ ಮಲ್ಲಿಗೆ ಹೂವಿನ ಅಲಂಕಾರದಿಂದ ಕಂಗೊಳಿಸಿದರು.

ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಆಗಮಿಸಿದ್ದ ಹಿನ್ನೆಲೆಯಲ್ಲಿ ಕಲ್ಯಾಣ ಮಂಟಪದ ಸುತ್ತಮುತ್ತ ಬಿಗಿ ಭದ್ರತೆ ಕಲ್ಪಿಸಲಾಗಿತ್ತು.

ಆರಕ್ಷತೆಯಲ್ಲಿ ಸೆಲೆಬ್ರಿಟಿಗಳ ದಂಡು

ವಿವಾಹಕ್ಕೂ ಮುನ್ನ ಆಗಸ್ಟ್‌ 29ರಂದು ನಡೆದ ಆರಕ್ಷತೆ ಕಾರ್ಯಕ್ರಮವೂ ಅದ್ದೂರಿಯಾಗಿತ್ತು. ಚಿಕ್ಕಣ್ಣ ಬ್ಲೂ ಸೂಟ್‌ನಲ್ಲಿ ಕಾಣಿಸಿಕೊಂಡರೆ, ಪಾವನಾ ಬ್ಲೂ ಲೆಹಂಗಾದಲ್ಲಿ ಮಿಂಚಿದರು. ನವಜೋಡಿಯ ರೊಮ್ಯಾಂಟಿಕ್ ಫೋಟೋಶೂಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಆರಕ್ಷತೆ ಕಾರ್ಯಕ್ರಮಕ್ಕೆ ಮಂಡ್ಯ ರಮೇಶ್, ಶ್ರೀಮುರಳಿ, ಡಾಲಿ ಧನಂಜಯ್, ನಿರ್ದೇಶಕ ಎ.ಪಿ. ಅರ್ಜುನ್ ಸೇರಿದಂತೆ ಹಲವರು ಆಗಮಿಸಿ ನವಜೋಡಿಗೆ ಶುಭ ಹಾರೈಸಿದರು.

‘ಕಿರಾತಕ’ದಿಂದ ‘ಲಕ್ಷ್ಮೀ ಪುತ್ರ’ವರೆಗೆ ಚಿಕ್ಕಣ್ಣ ಜರ್ನಿ

‘ಕಿರಾತಕ’ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಚಿಕ್ಕಣ್ಣ, ನಂತರ ‘ರಾಜಾಹುಲಿ’, ‘ಅಧ್ಯಕ್ಷ’, ‘ರಾಜ್-ವಿಷ್ಣು’, ‘ಉಪಾಧ್ಯಕ್ಷ’, ‘ಛೂ ಮಂತರ್’, ‘ಮಾರ್ಟಿನ್’, ‘ಜೇಮ್ಸ್’, ‘ರಾಬರ್ಟ್’, ‘ಮದಗಜ’, ‘ಫಾರೆಸ್ಟ್’, ‘ಪೊಗರು’, ‘ಕಿಸ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕಾಮಿಡಿ ಪಾತ್ರಗಳ ಮೂಲಕ ಜನಪ್ರಿಯತೆ ಗಳಿಸಿದ ಅವರು ‘ಉಪಾಧ್ಯಕ್ಷ’ ಬಳಿಕ ನಾಯಕನಾಗಿ ಮತ್ತೊಮ್ಮೆ ಮಿಂಚಲು ಸಜ್ಜಾಗಿದ್ದಾರೆ. ಅವರ ಪ್ರಮುಖ ಪಾತ್ರದ ‘ಲಕ್ಷ್ಮೀ ಪುತ್ರ’ ಸಿನಿಮಾ ನವೆಂಬರ್ 27ರಂದು ಬಿಡುಗಡೆಯಾಗಲಿದೆ. ಎ.ಪಿ. ಅರ್ಜುನ್ ಕಥೆ ಬರೆದು ನಿರ್ಮಿಸಿರುವ ಈ ಚಿತ್ರವನ್ನು ವಿಜಯ್ ಸ್ವಾಮಿ ನಿರ್ದೇಶಿಸಿದ್ದಾರೆ.

ಹೀಗೆ ವರ್ಷಗಳಿಂದ ತಮ್ಮ ಹಾಸ್ಯದ ಮೂಲಕ ಪ್ರೇಕ್ಷಕರನ್ನು ರಂಜಿಸಿರುವ ಚಿಕ್ಕಣ್ಣ ಇದೀಗ ಪಾವನಾ ಅವರೊಂದಿಗೆ ಜೀವನದ ಹೊಸ ಪಯಣ ಆರಂಭಿಸಿದ್ದು, ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.

Continue Reading
Advertisement

Title

Source: Vijayakarnataka Source: Vijayakarnataka
ದಿನದ ಸುದ್ದಿ18 hours ago

Bigg Boss Kannada 13: ಹೊಸ ಥೀಮ್, ಹೊಸ ಸ್ಪರ್ಧಿಗಳು, 24×7 ಲೈವ್‌; ಕಿಚ್ಚ ಸುದೀಪ್‌ ಸಾರಥ್ಯದ ಬಿಗ್‌ಬಾಸ್‌ ಕನ್ನಡ 13ರ ವಿಶೇಷತೆಗಳೇನು?

ಸುದ್ದಿದಿನ,ಬೆಂಗಳೂರು: ಅಂತೂ ಇಂತೂ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ **‘ಬಿಗ್‌ಬಾಸ್‌ ಕನ್ನಡ ಸೀಸನ್‌ 13’**ಗೆ ಅಧಿಕೃತ ಚಾಲನೆ ಸಿಗುವ ಸಮಯ ಬಂದಿದೆ. ಈಗಾಗಲೇ ‘ಬಿಗ್‌ಬಾಸ್‌ ಅಗ್ನಿಪರೀಕ್ಷೆ’ ಮೂಲಕ...

ದಿನದ ಸುದ್ದಿ18 hours ago

ಕುಂದುಕೊರತೆಗಳಿಗೆ ತ್ವರಿತ ಪರಿಹಾರ ನೀಡಲು ಏಕೀಕೃತ ವ್ಯವಸ್ಥೆ; ಶನಿವಾರ ಜನಸಂಪರ್ಕ, ಬುಧವಾರ ಮೂರು ಹಂತದ ಪರಿಶೀಲನೆ

ಬೆಂಗಳೂರು: ಸರ್ಕಾರಿ ಸೇವೆ ಪಡೆಯಲು ಕಚೇರಿಯಿಂದ ಕಚೇರಿಗೆ ಅಲೆಯಬೇಕಾದ ದಿನಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ಕರ್ನಾಟಕ ಸರ್ಕಾರ ‘ಪ್ರಜಾಸೇವಾ ಅಭಿಯಾನ’ಕ್ಕೆ ಚಾಲನೆ ನೀಡಲು ಸಜ್ಜಾಗಿದೆ. ಸೆಪ್ಟೆಂಬರ್ 5ರಂದು...

karnataka-fake-doctors-582-cases-health-department-action karnataka-fake-doctors-582-cases-health-department-action
ದಿನದ ಸುದ್ದಿ19 hours ago

Fake Doctors in Karnataka: ಜೀವದ ಜೊತೆ ಚೆಲ್ಲಾಟವಾಡುವ ನಕಲಿ ವೈದ್ಯರು; ದಾಳಿ, ದಂಡ, ಕೇಸ್‌ಗಳ ನಡುವೆಯೂ ಮುಂದುವರಿದ ಜಾಲ

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ಕಳಪೆ ಔಷಧ ಪ್ರಕರಣಗಳು ಚರ್ಚೆಯಲ್ಲಿರುವ ನಡುವೆಯೇ, ವೈದ್ಯಕೀಯ ಕ್ಷೇತ್ರದ ಮತ್ತೊಂದು ಆತಂಕಕಾರಿ ಬೆಳವಣಿಗೆ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ಅನಧಿಕೃತವಾಗಿ ವೈದ್ಯಕೀಯ ಸೇವೆ ನೀಡುತ್ತಿರುವ ನಕಲಿ...

ದಿನದ ಸುದ್ದಿ19 hours ago

₹4 ಕೋಟಿ ಯೋಜನೆಗೆ ಮಹಿಳಾ ಚಾಲಕರ ಕೊರತೆ; ಸುರಕ್ಷತೆ ಮತ್ತು ಸ್ವಾವಲಂಬನೆಯ ಕನಸು ಸಾಕಾರವಾಗುವುದೇ?

ಸುದ್ದಿದಿನ,ಹುಬ್ಬಳ್ಳಿ: ಮಹಿಳೆಯರು ಮತ್ತು ಬಾಲಕಿಯರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸುವುದರ ಜತೆಗೆ ಮಹಿಳೆಯರಿಗೆ ಸ್ವಾವಲಂಬಿ ಉದ್ಯೋಗ ಒದಗಿಸುವ ಉದ್ದೇಶದಿಂದ ಹು-ಧಾ ಮಹಾನಗರ ಪಾಲಿಕೆ ರೂಪಿಸಿರುವ ‘ಪಿಂಕ್‌ ಆಟೋ’...

mysuru-dasara-elephants-srikanta-5790-kg-ekalavya-elephant-weight mysuru-dasara-elephants-srikanta-5790-kg-ekalavya-elephant-weight
ದಿನದ ಸುದ್ದಿ21 hours ago

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ...

ದಿನದ ಸುದ್ದಿ21 hours ago

Bigg Boss Agniparikshé: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ಯಿಂದ ಕುಮಾರಿ ಎಕ್ಸಿಟ್; ಆಟ ಮುಗಿದರೂ ಭವಿಷ್ಯಕ್ಕೆ ಸಿಕ್ಕಿತು ದೊಡ್ಡ ಗಿಫ್ಟ್

ಸುದ್ದಿದಿನ,ಬೆಂಗಳೂರು: ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ರಿಯಾಲಿಟಿ ಶೋನಲ್ಲಿ ತಮ್ಮ ಸರಳತೆ, ಮುಗ್ಧತೆ ಹಾಗೂ ಸಹಜ ವರ್ತನೆಯಿಂದ ವೀಕ್ಷಕರ ಗಮನ ಸೆಳೆದಿದ್ದ ನಂಜನಗೂಡಿನ ಕುಮಾರಿ ಇದೀಗ ಅನಾರೋಗ್ಯದ ಕಾರಣದಿಂದ...

ಸಿನಿ ಸುದ್ದಿ21 hours ago

Chikkanna Wedding: ಬೆಳ್ಳಿ ತೆರೆ ಮೇಲೆ ನಗಿಸಿದ ಚಿಕ್ಕಣ್ಣ ಬದುಕಿನ ಹೊಸ ಅಧ್ಯಾಯಕ್ಕೆ ಕಾಲಿಟ್ಟರು; ಪಾವನಾ ಜೊತೆ ಸಪ್ತಪದಿ

ಸುದ್ದಿದಿನ,ಮೈಸೂರು: ‘ಕಿರಾತಕ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿ ತಮ್ಮ ವಿಭಿನ್ನ ಕಾಮಿಡಿ ಶೈಲಿಯಿಂದ ಪ್ರೇಕ್ಷಕರ ಮನಗೆದ್ದಿರುವ ನಟ ಚಿಕ್ಕಣ್ಣ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ...

rainy-season-skin-care-home-remedies-honey-milk-tomato-potat rainy-season-skin-care-home-remedies-honey-milk-tomato-potat
ಲೈಫ್ ಸ್ಟೈಲ್21 hours ago

ಮಳೆಗಾಲದ ಚರ್ಮದ ಸಮಸ್ಯೆಗೆ ಮನೆಮದ್ದು: ಮೊಡವೆ, ಒರಟುತನ, ಕಪ್ಪು ಚುಕ್ಕೆಗಳಿಂದ ಮುಕ್ತಿ ಪಡೆಯಲು ಸರಳ ಉಪಾಯಗಳು

ಸುದ್ದಿದಿನ,ಬೆಂಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ವಾತಾವರಣದಲ್ಲಿ ತೇವಾಂಶ ಹೆಚ್ಚಾಗುತ್ತದೆ. ಮಳೆ, ಧೂಳು, ಬೆವರು ಹಾಗೂ ಹವಾಮಾನದಲ್ಲಿನ ಬದಲಾವಣೆಗಳು ಚರ್ಮದ ಮೇಲೆ ಪರಿಣಾಮ ಬೀರುತ್ತವೆ. ಕೆಲವರಲ್ಲಿ ಚರ್ಮ ಒರಟಾಗುವುದು, ಸುಕ್ಕುಗಟ್ಟಿದಂತೆ...

ನಿತ್ಯ ಭವಿಷ್ಯ21 hours ago

ಆಗಸ್ಟ್‌ 31ರ ರಾಶಿಫಲ: ಹಣ, ಉದ್ಯೋಗ, ಕುಟುಂಬ, ಆರೋಗ್ಯದಲ್ಲಿ ನಿಮ್ಮ ದಿನ ಹೇಗಿದೆ?

ಸುದ್ದಿದಿನ,ಬೆಂಗಳೂರು: ಆಗಸ್ಟ್‌ 31, 2026ರ ಸೋಮವಾರ ಇಂದಿನ ಪಂಚಾಂಗದ ಪ್ರಕಾರ ಕೃಷ್ಣ ಪಕ್ಷದ ತೃತೀಯೆ ಬೆಳಗ್ಗೆ ಸುಮಾರು 8:50ರವರೆಗೆ ಇದ್ದು, ಬಳಿಕ ಚತುರ್ಥಿ ಆರಂಭವಾಗುತ್ತದೆ. ರೇವತಿ ನಕ್ಷತ್ರದ...

ದಿನದ ಸುದ್ದಿ2 days ago

ಸೋಶಿಯಲ್ ಮೀಡಿಯಾ ಪೋಸ್ಟ್‌ಗೆ ಕೇಸ್‌, ಉಡುಪಿಯಿಂದ ವ್ಯಕ್ತಿಯನ್ನು ಠಾಣೆಗೆ ಕರೆತಂದ ಕ್ರಮಕ್ಕೆ ಹೈಕೋರ್ಟ್‌ ಗರಂ

ಸುದ್ದಿದಿನ,ಬೆಂಗಳೂರು: ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಕಾರ್ಯಕ್ರಮ ರದ್ದಾದ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯನ್ನು ವಿಚಾರಣೆ ಹೆಸರಿನಲ್ಲಿ ಠಾಣೆಗೆ ಕರೆತಂದ ವೈಟ್‌ಫೀಲ್ಡ್ ಪೊಲೀಸರ ಕ್ರಮಕ್ಕೆ ಕರ್ನಾಟಕ...

Trending