Connect with us

ಸಿನಿ ಸುದ್ದಿ

ಮೀಡಿಯಾ ಸತ್ಯವನ್ನ ನಿರ್ಧಾರ ಮಾಡುತ್ತಾ..? ಇದು ಹೇಳಿದ್ದೆಲ್ಲಾ ಸತ್ಯವಾ..? : ‘ಜನಗಣಮನ’ ಸಿನೆಮಾಂತರಂಗ..!

Published

on

  • ಜಿ.ಟಿ.ತುಮರಿ

ಪ್ರಶ್ನೆ ಕೇಳುತ್ತಾ ಹೋದಂತೆ ಒಬ್ಬ ಪತ್ರಕರ್ತನಾಗಿ ತಣ್ಣಗೆ ಬೆವರಿಬಿಟ್ಟೆ. ನನ್ನ ಕಣ್ಣಮುಂದೆ ಹಲವು ಸುದ್ದಿ ಚಾನೆಲ್ ಮತ್ತು ವಿಷ ಕಾರುವ ಅದರ ನಿರೂಪಕರು, ಅವರ ನಿಲುವುಗಳ ಹಿಂದಿರುವ ಅಪವಿತ್ರ ಮೈತ್ರಿಗಳು, ಅದರಲ್ಲೂ ಈಚೆಯ ವರ್ಷದಲ್ಲಿ ಪೇಸ್ಭುಕ್, ಟ್ವಿಟರ್, ವ್ಯಾಟ್ಸಪ್ , ಇನ್ಸ್ಟಾಗ್ರಾಮ್ ಇತ್ಯಾದಿ ಮೂಲಕ ಸುಳ್ಳು ಸುರಿಯುವ ರಾಜಕೀಯ ಸಾಮಾಜಿಕ ಹುನ್ನಾರಗಳು ಥಟ್ಟನೆ ಮನಸಿಗೆ ಬಂದವು.

ಮಲಯಾಳಂ ನಟ ಪೃಥ್ವಿರಾಜ್ ಈಚೆಗೆ ಬಿಡುಗಡೆಯಾದ ಜನಗಣಮನ ಸಿನಿಮಾದಲ್ಲಿ ಡೈಲಾಗ್ ಮಾತ್ರ ಹೇಳುತ್ತಾ ಇರಲಿಲ್ಲ ಆ ಕಂಚಿನ ಕಂಠದಲ್ಲಿ ಸಿನಿಮಾ ನೋಡುತ್ತಾ ಇರುವ ಪ್ರತಿ ಭಾರತೀಯನ ಆತ್ಮಸಾಕ್ಷಿ ತಿವಿಯುತ್ತಾ ಹೋಗುತ್ತಾನೆ. ಆ ಮೂಲಕ ನಮ್ಮ ಸುತ್ತಲ ವರ್ತಮಾನದ ಸತ್ಯಗಳಿಗೆ ಕುರುಡಾದ ಕೆಪ್ಪಾದ ಕಣ್ಣು ಕಿವಿಯ ಜತೆ ಸತ್ತ ಹಾಗೆ ಇರುವ ನಮ್ಮೊಳಗಿನ ನಮ್ಮನ್ನು ಬಡಿದೆಬ್ಬಿಸುತ್ತಾ ಹೋಗುತ್ತದೆ ಜನಗಣಮನ ಸಿನಿಮಾ.

” ಒಂದು ನಾಯಿ ಸತ್ತರೂ ಕೇಳೋ ಈ ದೇಶದಲ್ಲಿ ಆ ನಾಲ್ಕು ಜನ ಬೀದಿನಾಯಿಗಳ ಹಾಗೆ ಸತ್ತರು. ಯಾವ ಆಧಾರನೂ ಬೇಡ, ಯಾವ ನ್ಯಾಯ ಕೋರ್ಟ್ ಬೇಡ ಅವರನ್ನ ಕೊಲ್ಲಬೇಕು. ಇದಕ್ಕೆ ಕಾರಣ ಅವರ ಗುರುತು, 2 ನೇ ಕ್ಲಾಸ್ ಮಗುವಿಗೆ ಬಣ್ಣದ ಮೇಲೆ ಚಂದ ಕುರೂಪ ಅಂತ ಚಿತ್ರ ಬರೆದು ತಾರತಮ್ಯವನ್ನ ತುಂಬುವ ಮತದ ರಾಜಕೀಯ, ಅವರನ್ನು ನೋಡಿದ್ರೆ ಗೊತ್ತಾಗಲ್ಲವಾ ಅನ್ನೋ ಜಾತಿ ರಾಜಕೀಯ ಇಲ್ಲಿ ನಡೀತಾ ಇದೆ”

ಯೂನಿವರ್ಸಿಟಿಯೊಂದರಲ್ಲಿ ಜಾತಿಯ ಕಾರಣದಿಂದ ಹತ್ಯೆಗೆ ಒಳಗಾಗುವ ವಿದ್ಯಾರ್ಥಿನಿಗೆ ನ್ಯಾಯ ನೀಡಲು ಮುಂದಾಗುವ ಮಹಿಳಾ ಪ್ರೊಫೆಸರ್ ಒಬ್ಬರನ್ನು ಅಲ್ಲಿನ ವ್ಯವಸ್ಥೆ ಕೊಂದುಹಾಕಿದ ಪ್ರಕರಣವೊಂದನ್ನು ಸತ್ಯದ ಮರೆಮಾಚಿ ನಕಲಿ ಎನ್ ಕೌಂಟರ್ ಹೇಗೆ ಸೃಷ್ಟಿಯಾಗಲು ಇರುವ ಸಾಮಾಜಿಕ ರಾಜಕೀಯ ಕಾರಣಗಳನ್ನ ಜನಗಣಮನ ಸಿನಿಮಾ ಬಿಚ್ಚಿಡುತ್ತಾ ಹೋಗುತ್ತದೆ. ಘಟನೆಯೊಂದರ ರಾಜಕೀಯ ಲಾಭವನ್ನ ಹೇಗೆ ಮಾಧ್ಯಮಗಳು, ಸಮೂಹ ಮಾಧ್ಯಮಗಳ ಮೂಲಕ ಜನರಲ್ಲಿ ಸುಳ್ಳು ಬಿತ್ತಿ ಪರಿಸ್ಥಿತಿ ಲಾಭ ಪಡೆಯಬಹುದು ಎನ್ನುವುದನ್ನು ಇಡೀ ಸಿನಿಮಾ ಎಳೆ ಎಳೆಯಾಗಿ ವಿವರಿಸುತ್ತದೆ.

ಈ ನಿರ್ದೇಶಕರಿಗೆ ಸೆಲ್ಯೂಟ್.. ಒಂದು ಸಿನಿಮಾ ಕೇವಲ ರಂಜನೆ ನೀಡಿದರೆ ಸಾಕು ಎನ್ನುವ ಸೀಮಿತ ಲೆಕ್ಕಾಚಾರದ ನಡುವೆ ಸಿನಿಮಾವೊಂದು ನಮ್ಮ ಸುತ್ತಲಿನ ಸುಡು ವರ್ತಮಾನಕ್ಕೆ ವಿಮರ್ಶೆ ಬರೆದಿದೆ. ಹೇಗೆ ದೇಶದ ಜನರು ವಿಸ್ಮೃತಿಗೆ ಒಳಗಾಗಿ ಹೌದಪ್ಪ ಆಗಿದ್ದೇವೆ ಎನ್ನುವುದನ್ನ ಪ್ರತಿ ದ್ರಶ್ಯ ಕಟ್ಟಿ ಕೊಡುತ್ತದೆ. ಸಿನಿಮಾದ ಮೊದಲು ಅರ್ಧ ಭಾವನಾತ್ಮಕ ಕಥಾಹಂದರ ಕಟ್ಟಿ ಕೊಟ್ಟರೆ. ದ್ವಿತೀಯಾರ್ಧದಲ್ಲಿ ನಾವು ಈ ಮೊದಲು ಸಿನಿಮಾ ಆರಂಭದಲ್ಲಿ ಕಟ್ಟಿಕೊಂಡ ಭಾವುಕತೆ ಎಷ್ಟು ಕೃತಕ ಮತ್ತು ಸುಳ್ಳು ಎನ್ನುವುದನ್ನ ವಕೀಲನಾದ ಸಿನಿಮಾ ನಾಯಕ ಮೂಲಕ ಪ್ರಖರವಾಗಿ ಹೇಳಿಸುವ ಮೂಲಕ ಮಿಥ್ ಗಳನ್ನು ಸೃಷ್ಟಿ ಮಾಡುವ ಹುನ್ನಾರಗಳನ್ನ ಸಿನಿಮಾ ಏಕ ಕಾಲದಲ್ಲಿ ತೆರೆಯಮೇಲೆ ಮತ್ತು ನಮ್ಮೊಳಗೆ ಅನುಭವಕ್ಕೆ ತರಿಸುತ್ತದೆ.

ಇಂತ ಸಿನಿಮಾ ಮಾಡಲು ಪ್ರತಿಭೆ ಮಾತ್ರ ಇದ್ದರೆ ಸಾಕಾಗದು ಅದಕ್ಕೆ ಒಂದು ಬದ್ಧತೆ ಮತ್ತು ದೈರ್ಯ ಬೇಕು. ಸಾಮಾಜಿಕ ಮತ್ತು ರಾಜಕೀಯ ಸತ್ಯವನ್ನ ಹೇಳುವ ಸಮಾಜಮುಖಿ ಸಿನಿಮಾಗಳು ಹಾಗೆ ನೋಡಿದರೆ ಕನ್ನಡ ಚಿತ್ರರಂಗದಲ್ಲಿ 2000 ಕ್ಕಿಂತ ಮೊದಲು ಸಿನಿಮಾಗಳ ಸರಣಿಗಳೇ ಇವೆ. ಬಹಳ ಮುಖ್ಯವಾಗಿ ರಾಜ್ ಕುಮಾರ್ ಸಿನಿಮಾಗಳನ್ನ ಉಲ್ಲೇಖ ಮಾಡಬಹುದು. ಆದರೆ ಕಳೆದ ಒಂದು ದಶಕವನ್ನ ಗಮನಿಸಿದರೆ ಮಲಯಾಳಂ ಮತ್ತು ತಮಿಳು ಚಿತ್ರರಂಗ ಈ ನಡೆಯಲ್ಲಿ ಮುಂದೆ ಇವೆ. ಹುಡುಗ ಹುಡುಗಿ ಮರ ಸುತ್ತಿಸಿ ಮಚ್ಚು ಲಾಂಗು ಹಿಡಿಸಿ ಎರಡು ಮಾಸ್ ಸಾಂಗ್ ಹಾಕಿ ನಾಯಕನನ್ನು ಮೆರೆಸಲು ಮತ್ತೆರೆಡು ಹಾಡು ಬರೆಸುವುದರಲ್ಲಿ ಕನ್ನಡ ಮತ್ತು ತೆಲುಗು ಚಿತ್ರರಂಗ ಪೈಪೋಟಿ ಇದ್ದಂತೆ ಇವೆ. ಆದರೆ ಮಲಯಾಳಿ ಮತ್ತು ತಮಿಳು ಚಿತ್ರರಂಗ ಇದಕ್ಕೆ ಭಿನ್ನ ಇವೆ. ಅಲ್ಲಿನ ಸಿನಿಮಾದಲ್ಲಿ ಭಿನ್ನ ನೆಲೆಯ ನಿರೂಪಣೆಯ ಕಥೆ, ಕಡಿಮೆ ವೈಭವೀಕರಣ, ಕೌಶಲ್ಯದ ನಟನೆಯಂತ ಹಲವು ಕಾರಣ ಇವೆ. ಕರ್ಣನ್, ಅಸುರ, ಜೈ ಭೀಮ್, ಗ್ರೇಟ್ ಇಂಡಿಯನ್ ಕಿಚನ್ ರೂಮ್, ಕೋಲ್ಡ್ ಕೇಸ್, ಬೀಸ್ಟ್, ಬಿಗಿಲ್, ಇಂದ್ರನ್ ನಟನೆ ಸಿನಿಮಾಗಳು, ಡ್ರೈವಿಂಗ್ ಲೈಸೆನ್ಸ್, ಅಯ್ಯಪ್ಪನ್, ಫಾಸಿಲ್ ಸರಣಿ ಸಿನಿಮಾಗಳು ಹೀಗೆ.

ಜನಗಣಮನ….ಈಚೆಯ ವರ್ಷಗಳಲ್ಲಿ ನಾನು ಕಂಡ ಸಿನಿಮಾಗಳಲ್ಲೇ ಶ್ರೇಷ್ಠ ಸಿನಿಮಾ. ರಾಜಕೀಯ ಪೊಲೀಸ್ ವ್ಯವಸ್ಥೆಯನ್ನ ಹೇಗೆ ದುರ್ಬಳಕೆ ಮಾಡಿಕೊಂಡು ತನ್ನ ಬೇಳೆ ಕಾಳು ಬೇಯಿಸಿ ಬಳಸಿ ಬಿಸಾಡುತ್ತದೆ ಎನ್ನುವುದನ್ನು ಕಥಾವಸ್ತು ಒಳಗೊಳ್ಳುವ ಜತೆ ರಾಜಕೀಯ ಪೊಲೀಸ್ ಮತ್ತು ಮಾಧ್ಯಮ ಮೂರು ಭ್ರಷ್ಟ ಮೈತ್ರಿಯಾದರೆ ಸತ್ಯ ಹೇಗೆ ಸುಳ್ಳಾಗಿ ಸಂವಿಧಾನದ ಆಶಯ ವಿರುದ್ಧ ಅಪವಿತ್ರ ಮೈತ್ರಿಯಾಗಿ ಜನಗಣಮನಕ್ಕೆ ವಿಷ ಉಣಿಸಿ ಸ್ವಾರ್ಥ ಸಾಧಿಸುತ್ತದೆ ಎನ್ನುವುದು ಅತ್ಯುತ್ತಮವಾಗಿ ನಿರೂಪಿಸಿ ದೃಶ್ಯವಾಗಿಸಿದೆ ಸಿನಿಮಾ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಕ್ಯಾನ್ಸ್ ಚಲನಚಿತ್ರೋತ್ಸವ | ಭಾರತದ ನಿರ್ಮಾಪಕಿ ಪಾಯಾಲ್ ಕಪಾಡಿಯಾಗೆ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ

Published

on

ಸುದ್ದಿದಿನ ಡೆಸ್ಕ್ : ಫ್ರಾನ್ಸ್‌ನಲ್ಲಿ ನಡೆದಿರುವ ಕ್ಯಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರ ನಿರ್ಮಾಪಕಿ ಪಾಯಲ್ ಕಪಾಡಿಯಾ, ಗ್ರಾಂಡ್ ಪ್ರಿಕ್ಸ್, ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಇಬ್ಬರು ನರ್ಸ್‌ಗಳ ಜೀವನ ಸುತ್ತಲಿನ ಕಥಾವಸ್ತು ಹೊಂದಿರುವ ’ಆಲ್ ವಿ ಇಮ್ಯಾಜಿನ್ ಆಜ್ ಲೈಟ್’ ಚಿತ್ರ ಪಾಮೆ ಡೋರ್ ವರ್ಗದಲ್ಲಿ ನಾಮನಿರ್ದೇಶಿತಗೊಂಡಿದ್ದು, ಈ ವರ್ಗದ 2ನೇ ಸ್ಥಾನವಾದ ಗ್ರಾಂಡ್ ಪ್ರಿಕ್ಸ್‌ಗೆ ಪಾತ್ರವಾಯಿತು.

ಇದರೊಂದಿಗೆ ಭಾರತ ಈ ಉತ್ಸವದಲ್ಲಿ ಚಿತ್ರ ನಿರ್ಮಾಣಕ್ಕಾಗಿ 2, ನಟನೆಗಾಗಿ 1, ಹಾಗೂ ಛಾಯಾಗ್ರಹಣಕ್ಕಾಗಿ 1ಹೀಗೆ ಒಟ್ಟು 4 ಗೌರವಗಳನ್ನು ಪಡೆದಂತಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಈ ಸಾಧನೆಗಾಗಿ ಪಾಯಲ್ ಕಪಾಡಿಯಾ ಅವರನ್ನು ಅಭಿನಂದಿಸಿದ್ದಾರೆ.

ಎಫ್‌ಟಿಐಐನ ಹಳೆಯ ವಿದ್ಯಾರ್ಥಿ ಪಾಯಲ್ ಕಪಾಡಿಯಾ ಅವರ ವಿಶೇಷವಾದ ಕೌಶಲ್ಯ ಭಾರತೀಯ ಹೊಸ ತಲೆಮಾರಿನ ನಿರ್ಮಾಪಕರಿಗೆ ಸ್ಫೂರ್ತಿಯಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

Continue Reading

ದಿನದ ಸುದ್ದಿ

ಉಪೇಂದ್ರ UI ಸಿನೆಮಾ | ಇತಿಹಾಸ ನಿರ್ಮಿಸಲು ಸಜ್ಜು ; ಹಂಗೇರಿಯಲ್ಲಿ ಮ್ಯೂಸಿಕ್..!

Published

on

“UI” ಭಾರತೀಯ ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಮೊದಲ ಬಾರಿಗೆ, ಹಂಗೇರಿಯ ಬುಡಾಪೆಸ್ಟ್‌ನಲ್ಲಿ 90-ಪೀಸ್ ಆರ್ಕೆಸ್ಟ್ರಾ ಭಾರತೀಯ ಚಲನಚಿತ್ರಕ್ಕಾಗಿ ಸಂಗೀತವನ್ನು ರೆಕಾರ್ಡ್ ಮಾಡುತ್ತಿದೆ. ಈ ಅದ್ಭುತ ಸಾಧನೆಯು ತನ್ನ ಪ್ರೇಕ್ಷಕರಿಗೆ ಸಾಟಿಯಿಲ್ಲದ ಶ್ರವಣೇಂದ್ರಿಯ ಅನುಭವವನ್ನು ನೀಡುವ ಚಿತ್ರದ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

“UI” ಗೆ ಹಿನ್ನೆಲೆ ಸಂಗೀತವನ್ನು ಹೆಸರಾಂತ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ರಚಿಸುತ್ತಿದ್ದಾರೆ. ಯುರೋಪ್‌ನ ವಿಶ್ವ-ದರ್ಜೆಯ ಬುಡಾಪೆಸ್ಟ್ ಆರ್ಕೆಸ್ಟ್ರಾದೊಂದಿಗಿನ ಅವರ ಸಹಯೋಗವು ಅದರ ಅಸಾಧಾರಣ ಸಂಗೀತ ಪರಾಕ್ರಮ ಮತ್ತು ಅತ್ಯಾಧುನಿಕ ಸೌಲಭ್ಯಗಳಿಗೆ ಹೆಸರುವಾಸಿಯಾಗಿದೆ, ಇದು ಮಹಾಕಾವ್ಯ ಮತ್ತು ತಲ್ಲೀನಗೊಳಿಸುವ ಸೌಂಡ್‌ಸ್ಕೇಪ್ ಅನ್ನು ನೀಡಲು ಹೊಂದಿಸಲಾಗಿದೆ. ಈ ಐತಿಹಾಸಿಕ ಸಹಯೋಗವು ಭಾರತೀಯ ಚಲನಚಿತ್ರೋದ್ಯಮದಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತದೆ, ಸಿನಿಮಾ ಸಂಗೀತದ ಗಡಿಗಳನ್ನು ತಳ್ಳುವ ನಮ್ಮ ಸಮರ್ಪಣೆಯನ್ನು ಪ್ರದರ್ಶಿಸುತ್ತದೆ.

“UI” ಅನ್ನು ಉಪೇಂದ್ರ ಅವರು ನಿರ್ದೇಶಿಸಿದ್ದಾರೆ, ಅವರ ದೂರದೃಷ್ಟಿಯ ವಿಧಾನವು ಕಥೆ ಹೇಳುವಿಕೆ ಮತ್ತು ಚಲನಚಿತ್ರ ತಯಾರಿಕೆಯಲ್ಲಿ ಸತತವಾಗಿ ಹೊದಿಕೆಯನ್ನು ತಳ್ಳಿದೆ. ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣದ ಈ ಚಿತ್ರವು ಪ್ರೇಕ್ಷಕರಿಗೆ ಹೊಸ ಮಟ್ಟದ ಸಿನಿಮೀಯ ಶ್ರೇಷ್ಠತೆಯನ್ನು ತರುವ ಭರವಸೆಯನ್ನು ನೀಡುತ್ತದೆ. “ಸರಿಲೇರು ನೀಕೆವ್ವರು,” “ವಿಕ್ರಾಂತ್ ರೋನಾ,” “ಕೆಜಿಎಫ್ – 2,” ಮತ್ತು “ಸಲಾರ್” ನಂತಹ ಅಗ್ರ ಭಾರತೀಯ ಚಲನಚಿತ್ರಗಳು ಈ ಹಿಂದೆ ಬುಡಾಪೆಸ್ಟ್‌ನಲ್ಲಿ ತಮ್ಮ ಸ್ಕೋರ್‌ಗಳನ್ನು ರೆಕಾರ್ಡ್ ಮಾಡಿದ್ದರೆ, “ಯುಐ” ಪೂರ್ಣ 90-ಪೀಸ್ ಅನ್ನು ಬಳಸಿಕೊಳ್ಳುವಲ್ಲಿ ಮೊದಲಿಗರಾಗಿ ನಿಂತಿದೆ. ಅದರ ಹಿನ್ನೆಲೆ ಸ್ಕೋರ್‌ಗಾಗಿ ಆರ್ಕೆಸ್ಟ್ರಾ. ಈ ಸಾಧನೆಯು ಚಲನಚಿತ್ರದ ನವೀನ ವಿಧಾನವನ್ನು ಒತ್ತಿಹೇಳುತ್ತದೆ ಮತ್ತು ಪ್ರೇಕ್ಷಕರಿಗೆ ನಿಜವಾದ ಮಹಾಕಾವ್ಯ ಮತ್ತು ತಲ್ಲೀನಗೊಳಿಸುವ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿದೆ.

“UI” ನ ಇಡೀ ಪ್ರಪಂಚದಾದ್ಯಂತದ ಅಭಿಮಾನಿಗಳೊಂದಿಗೆ ಈ ಅಸಾಮಾನ್ಯ ಸಂಗೀತ ಪ್ರಯಾಣವನ್ನು ಹಂಚಿಕೊಳ್ಳಲು ಎದುರು ನೋಡುತ್ತಿದೆ. “UI” ಬಿಡುಗಡೆಯ ಕುರಿತು ಹೆಚ್ಚಿನ ನವೀಕರಣಗಳಿಗಾಗಿ ಟ್ಯೂನ್ ಮಾಡಿ ಮತ್ತು ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡಗಳನ್ನು ಹೊಂದಿಸುವ ಭರವಸೆ ನೀಡುವ ಚಲನಚಿತ್ರವನ್ನು ಅನುಭವಿಸಲು ಸಿದ್ಧರಾಗಿ.

“UI” ಮುಂಬರುವ ಕನ್ನಡ ಚಲನಚಿತ್ರವಾಗಿದ್ದು, ಅದರ ಬಲವಾದ ಕಥೆ, ಬೆರಗುಗೊಳಿಸುವ ದೃಶ್ಯಗಳು ಮತ್ತು ಅದ್ಭುತ ಸಂಗೀತದ ಸ್ಕೋರ್‌ನೊಂದಿಗೆ ಪ್ರೇಕ್ಷಕರನ್ನು ಸೆಳೆಯುವ ಗುರಿಯನ್ನು ಹೊಂದಿದೆ. ಲಹರಿ ಫಿಲ್ಮ್ಸ್ ಮತ್ತು ವೀನಸ್ ಎಂಟರ್‌ಟೈನರ್ಸ್ ನಿರ್ಮಾಣದ ದೂರದೃಷ್ಟಿಯ ಉಪೇಂದ್ರ ನಿರ್ದೇಶಿಸಿದ್ದಾರೆ ಮತ್ತು ಮೆಚ್ಚುಗೆ ಪಡೆದ ಬಿ. ಅಜನೀಶ್ ಲೋಕನಾಥ್ ಅವರ ಸಂಗೀತವನ್ನು ಒಳಗೊಂಡಿರುವ ಈ ಚಿತ್ರವು ಭಾರತೀಯ ಚಿತ್ರರಂಗದಲ್ಲಿ ಹೆಗ್ಗುರುತಾಗಲಿದೆ.

ಮಾಹಿತಿ ಕೃಪೆ : ciniloka.co.in

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಜೂನಿಯರ್ ಅಮಿತಾಬ್ ಬಚ್ಚನ್ ನಿಧನ

Published

on

ಸುದ್ದಿದಿನ ಡೆಸ್ಕ್ : ಜೂನಿಯರ್ ಅಮಿತಾಬ್ ಬಚ್ಚನ್, ಜನಪ್ರಿಯ ಕಿರುತೆರೆ ನಟ ಫಿರೋಜ್ ಖಾನ್‌ ಅವರು ಉತ್ತರ ಪ್ರದೇಶದ ಬದೌನ್‌ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಅವರು ‘ಭಾಬಿಜಿ ಘರ್ ಪರ್ ಹೈ!’, ‘ಜೀಜಾ ಜಿ ಛತ್ ಪರ್ ಹೈ’, ‘ಸಾಹೇಬ್ ಬೀಬಿ ಔರ್ ಬಾಸ್‌’, ‘ಹಪ್ಪು ಕಿ ಉಲ್ತಾನ್ ಪಲ್ತಾನ್’, ಮತ್ತು ‘ಶಕ್ತಿಮಾನ್’ ಚಿತ್ರಗಳಲ್ಲಿ ಅಭಿನಯಿಸಿದ್ದರು. ಫಿರೋಜ್ ಖಾನ್ ಅವರು ಅಮಿತಾಬ್ ಬಚ್ಚನ್ ಅವರ ಮಿಮಿಕ್ರಿಗೂ ಹೆಸರುವಾಸಿಯಾಗಿದ್ದರು.

ಗಾಯಕ ಅದ್ವಾನ್ ಸಾಮಿ ಅವರ ‘ಥೋಡಿ ಸಿ ತು ಲಿಫ್ಟ್ ಕರ ದೇ’ ಹಾಡಿನಲ್ಲಿ ಭಾಗವಾಗಿದ್ದರು. ಬಾಲಿವುಡ್ ಚಿತ್ರರಂಗ ಇವರಿಗೆ ತೀವ್ರ ಸಂತಾಪಗಳನ್ನು ಸೂಚಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending