ದಿನದ ಸುದ್ದಿ
ಅಭಿಯಾನದಲ್ಲಿ ಪೋಸ್ಟರ್ ಅಸ್ತ್ರ: ಸಲ್ಲದ ಎಡವಟ್ಟು..!

- ಪ್ರಜ್ವಲ್ ತೇಜ ಡಿ.ಎಸ್, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ
ಇತ್ತೀಚಿನ ದಿನಗಳಲ್ಲಿ ಪ್ರತಿ ಮಾಧ್ಯಮದಲ್ಲಿನ ಸಹ ಹೆಚ್ಚು ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನ ಸಾಕಷ್ಟು ಗಮನ ಸೆಳೆಯುವುದರಲ್ಲಿ ಗೆದ್ದಿದ್ದರು. ಇದು ಸಹ ಸಾರ್ವಜನಿಕರಲ್ಲಿ ಪ್ರಜ್ಞೆಯನ್ನು ಮೂಡಿಸುವಲ್ಲಿ ಎಷ್ಟು ಮಾತ್ರ ಯಶಸ್ಸು ಕಂಡಿದೆ ಎಂಬುದು ಗಮನಿಸಬೇಕಾದ ವಿಷಯ.
ಸಾಮಾನ್ಯವಾಗಿ ಯಾವುದೇ ಚುನಾವಣಾ ಅಭಿಯಾನಗಳಲ್ಲಿ ತಮ್ಮ ಪಕ್ಷಗಳ ಈ ಹಿಂದಿನ ಯಶಸ್ಸು, ಕಾರ್ಯ ಮತ್ತು ಸಾಧನೆಗಳನ್ನು ತೋರ್ಪಡಿಸುವುದು ಅಥವಾ ಮುಂದೆ ತಮ್ಮ ಗುರಿಯೇನು ಎನ್ನುವುದು ಜನರಲ್ಲಿ ಪ್ರಜ್ಞಾವಂತಿಗೆ ಮೂಡಿಸುವ ಕೆಲಸ ಮಾಡುತ್ತಿತ್ತು. ಅದುವೇ ಪ್ರಚಾರದ ಭಾಗವಾಗಿತು. ಆದರೆ ಈಗ ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನಗಳು ಜನರಲ್ಲಿ ಆಸಕ್ತಿ ಮೂಡಿಸುವ ಬದಲು ಪಕ್ಷಗಳ ಪರಸ್ಪರ ಸಂಘರ್ಷ, ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪಗಳು ಮಾತ್ರ ಕಾಣಸಿಗುತ್ತದೆ. ಇದು ಯಾವ ರೀತಿ ಉಪಯುಕ್ತವೆನ್ನುವುದು ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸಬೇಕಾಗಿದೆ.
ಮುಖ್ಯವಾಗಿ ಜನರಿಗೆ ಪಕ್ಷವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೇವೆ ಎಂದು ಯೋಚಿಸಬೇಕು. ಈ ಹಿಂದೆ ಪೋಸ್ಟರ್ ಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳ ಯೋಜನೆ ಮತ್ತು ಜನರನ್ನು ತಲುಪುವ ಪ್ರಚಾರದ ಸಾಧನವಾಗಿ ಇರುತ್ತಿತು. ಆದರೆ, ಈಗ ಎದುರಾಳಿ ಪಕ್ಷದ ತೇಜೋವಧೆ ಮಾಡುವ ಸಾಧನವಾಗಿದೆ. ಈ ಪೋಸ್ಟರ್ ಅಭಿಯಾನವು ವಿರೋಧ ಪಕ್ಷ ಕಾಂಗ್ರೆಸ್ ನ ನಾಯಕರು ‘ಪೇ ಸಿಎಂ’ ಎಂದು ಶುರು ಮಾಡಿದ ಕಾರಣ ಅದು ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಸಾಕಷ್ಟು ಕೋಲಹಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆ ಪೋಸ್ಟರ್ ಗಳಲ್ಲಿ ಕ್ಯೂಆರ್ ಕೋಡ್ ಇರಿಸಿ 40% ಕಮಿಷನ್ ಆರೋಪಿಗಳಿಗೆ ತುಪ್ಪ ಸುರಿಯಿತು. ಅದನ್ನು ಆಡಳಿತ ಪಕ್ಷವು ಅದನ್ನು ಸರಿಪಡಿಸಲು ಅಥವಾ ಸಮರ್ಥನೆ ನೀಡಲು ಹೋಗದೆ ಪ್ರತ್ಯುತ್ತರವಾಗಿ ಮತ್ತೊಂದು ಪೋಸ್ಟರ್ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ತಾವು ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಪ್ರಯತ್ನವಾಯಿತು
ಅದರಿಂದಾಗಿ ಹೊರಗೆ ಬಂದ ಸವಾಲು ಕೆಪಿಸಿಸಿ (ಕರ್ನಾಟಕ ಪ್ರೋವಿಜಿನಲ್ ಕರಪ್ಶನ್ ಕಂಪನಿ) ಪೋಸ್ಟರ್ ಗಳು. ಇದರಿಂದ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಕೆಲಸ ಮಾಡಿದ್ದಾರೆ. ಹೊರತು ಅದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಗೆ ದಾರಿ ಮಾಡಲಿಲ್ಲ. ಈ ಗಲಭೆ ಅಲ್ಲಿಗೆ ನಿಲ್ಲದೆ ಹೊಸ ರೂಪ ಪಡೆಯುತ್ತಾ ಸೇ ಸಿಎಂ ಮತ್ತು ಸೇ ಮೇಯರ್ ಎಂದು ವಿವಿಧ ನಗರಗಳ ಆಡಳಿತ ಪಕ್ಷದ ಮೇಯರ್ ಗಳ ಮೇಲೆ ದಾಳಿ ನಡೆಸುವ ಕೆಲಸ ಪ್ರತಿಪಕ್ಷವು ಮುಂದುವರೆಸಿದೆ.
ಇದು ಪರಸ್ಪರ ವಾಗ್ದಾಳಿಗೆ ಮತ್ತು ಕೋಲಾಹಲ ಸೃಷ್ಟಿಸುತ್ತಿದೆ. ಈ ರೀತಿಯ ಬೆಳವಣಿಗೆ ಎಷ್ಟು ಮಾತ್ರ ಉಪಯುಕ್ತ ಎನ್ನುವುದು ಪರಸ್ಪರ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸುವುದು ಸರಿ ಇಲ್ಲವಾದಲ್ಲಿ ಅದು ನಗೆ ಪಾಟಲು ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಂದೆಡೆ ಸಾಕಷ್ಟು ಸಾವು ನೋವುಗಳು ಮತ್ತು ವರುಣನ ಆರ್ಭಟ ಹೆಚ್ಚಾಗಿ ರಾಜ್ಯವೇ ಅಲ್ಲೋಲ ಕಲ್ಲೋಲ ಆಗಿರುವ ಸಮಯದಲ್ಲಿ ಈ ರೀತಿಯ ಪರಸ್ಪರ ವಾಗ್ದಾಳಿಗಳು ಯಾವ ರೀತಿ ಪ್ರಜ್ಞಾವಂತಿಕೆ ಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ.
ಚರ್ಚಿಸಲು ಮತ್ತು ಗಮನಿಸಬೇಕಾದ ಸಾಕಷ್ಟು ಸಮಸ್ಯೆಗಳಿರುವಾಗ ಜನರಲ್ಲಿ ಮತ್ತು ರಾಜಕೀಯ ಪಕ್ಷಗಳ ವಲಯದಲ್ಲಿ ಈ ಪೋಸ್ಟರ್ ವಿವಾದವು ಯಾವುದೇ ಏಳಿಗೆ ಮಾಡುವಲ್ಲಿ ಉಪಯೋಗವಿಲ್ಲ. ಇದರ ಜತೆ ಜತೆಗೆ ನಡೆಯುತ್ತಿರುವ ಜನ ಸಂಕಲ್ಪ ಮತ್ತು ಭಾರತ್ ಜೋಡೋ ಯಾತ್ರೆಗಳು ಇದಕ್ಕೆ ಒಂದಷ್ಟು ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಚುನಾವಣೆಯ ಪ್ರಚಾರವೆಂದರೆ ಜನರು ತಮ್ಮನ್ನು ತಮ್ಮ ಪಕ್ಷವನ್ನು ಏಕೆ ಜನ ಆರಿಸಬೇಕು ಎಂಬುದು ತಿಳಿ ಹೇಳಬೇಕೆ ಹೊರತು ಅದು ತಮ್ಮ ಎದುರಾಳಿ ಪಕ್ಷಕ್ಕೆ ಧಕ್ಕೆ ಮತ್ತು ತೇಜೋವಧೆ ಮಾಡುವಂತಿರಬಾರದು, ಇದು ಕೇವಲ ನೈತಿಕತೆಯ ವಿಚಾರವಲ್ಲ ಅದು ಕಾನೂನಿನಲ್ಲಿರುವ ಒಂದು ಚೌಕಟ್ಟು.
ಪ್ರತಿಪಕ್ಷಗಳನ್ನು ಚುನಾವಣೆಯ ಸಮಯದಲ್ಲಿ ತೇಜೋವಧೆ ಮಾಡುವುದು ಅಥವಾ ಅವರ ಮನೋಭಾವನೆಗಳನ್ನು ನೋಯಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ. ಜನರಿಗೆ ಬಿಡಿಸಿ ಹೇಳಬೇಕಾಗಿರುವ ಸ್ಥಾನದಲ್ಲಿರುವ ನಾಯಕರೇ ಅಪರಾಧಿಗಳಾಗಿ ನಿಲ್ಲುವುದು ಎಷ್ಟು ಸರಿ. ಪೋಸ್ಟರ್ ಎನ್ನುವುದು ಸ್ವಯಂ ಪ್ರಚಾರಕ್ಕಾಗಿ ಮೂಡಿ ಬಂದಿರುವ ಒಂದು ಸಾಧನ ಅಷ್ಟೇ ಅದಕ್ಕೆ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಈ ಪೋಸ್ಟರ್ ಅಭಿಯಾನ ಚುನಾವಣೆ ಮುಗಿಯುವವರೆಗೂ ಚಲಾವಣಾಯಾಗುವ ಎಲ್ಲ ಸಾಧ್ಯತೆಗಳು ಇವೆ.
ಮೊದಲು ಕೇವಲ ಬೆಂಗಳೂರು ನಗರದಲ್ಲಿ ಶುರುವಾಗಿ ನಂತರ ಈಗ ರಾಜ್ಯದ ನಾನಾ ಭಾಗಗಳಿಗೂ ವಿಸ್ತರಿಸಿದೆ. ಹೊಸ ಹೊಸ ರೂಪದಲ್ಲಿ ಜನರಿಗೆ ದರ್ಶನ ನೀಡುತ್ತಿದೆ. ಶುರುವಾಗಿ ಸಾಕಷ್ಟು ದಿನಗಳು ಕಳೆದರು ಸಹ ಇದರ ಕಾವು ಇನ್ನು ಕಡಿಮೆಯಾಗಿಲ್ಲ, ಜತೆ ಜತೆಗೆ ಇದಕ್ಕೆ ಸಾಮಾನ್ಯರು ಕೂಡ ಸಮೂಹ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ. ಇದು ಜನರಲ್ಲಿ ಒಂದು ರೀತಿಯ ಮನರಂಜನೆ ಮತ್ತು ವ್ಯಂಗ್ಯ ಚಿತ್ರಣ ಹಾಸ್ಯವಾಗಿ ಮೂಡಿ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಸುದ್ದಿಯಾಗಿದೆ ಅಂದರೆ ಅದು ಇಷ್ಟವಾಗಿದೆ ಎಂದು ತಿಳಿಯುವುದು ಮೂರ್ಖತನವಾಗುತ್ತದೆ. ಈ ಪೋಸ್ಟರ್ ಅಭಿಯಾನ ಮಾಡುವ ಬದಲು ಜನರಲ್ಲಿ ವಿಶ್ವಾಸ ಮೂಡಿಸುವ ಸಾಕಷ್ಟು ಅವಕಾಶಗಳು ಇರುವುದನ್ನು ಬಳಸಿಕೊಳ್ಳುವುದೇ ಉತ್ತಮ.
ಈಗ ಆಗಿರುವ ಬದಲಾವಣೆಗಳು ಸಾಮಾನ್ಯರಿಗೆ ಉಪಯುಕ್ತ ಆಗುವ ಲಕ್ಷಣಗಳಿಲ್ಲ, ಇವುಗಳನ್ನು ಮಾಡುವ ಬದಲು ಜನರಿಗೆ ಬೇಕಾದ ಅಥವಾ ಉಪಯುಕ್ತವಾದ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಪ್ರಸ್ತುತ ಹೆಚ್ಚಿದೆ. ಈ ಹಿಂದೆ ಮತ್ತು ಪ್ರಸ್ತುತ ನಡೆಯುತ್ತಿರುವಂತಹ ಯಾತ್ರೆಗಳಿಗಿಂತ ಈ ಪೋಸ್ಟರ್ ಅಭಿಯಾನ ಹೆಚ್ಚು ಸುದ್ದಿಯಾಗಿರುವುದು ವಿಪರ್ಯಾಸವೇ ಸರಿ. ಈ ರೀತಿಯ ಅಭಿಯಾನಗಳು ಜನರಲ್ಲಿ ವಿಶ್ವಾಸ ಮತ್ತು ಸಕಾರಾತ್ಮಕತೆ ಮೂಡಿಸುವ ಬದಲು ನಕಾರಾತ್ಮಕವಾದ ವಾತಾವರಣ ಸೃಷ್ಟಿಯಾಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ತುಂಬಿದ ಕೊಡ ತುಳುಕಿತಲೇ ಪರಾಕ್..!

- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
“ತುಂಬಿದ ಕೊಡ ತುಳುಕಿತಲೇ ಪರಾಕ್” ಎಂದು ಕಾರ್ಣಿಕ ನುಡಿದ ಗೊರವಯ್ಯ, ಅದು ಮೈಲಾರ ಕೋಟ್ಯಾಂತರ ಭಕ್ತರ ಆರಾಧ್ಯದೈವ ಮೈಲಾರ ಲಿಂಗನ ಪುಣ್ಯ ಕ್ಷೇತ್ರ. ಈ ಪುಣ್ಯ ಕ್ಷೇತ್ರ ಪ್ರತಿ ವರ್ಷ ಕಾರ್ಣಿಕ ನುಡಿಗೆ ರಾಜ್ಯಾದ್ಯಂತ ಫೇಮಸ್. ನುಡಿ ಆಲಿಸಲು ಲಕ್ಷಾಂತರ ಜನ್ರು ಅಲ್ಲಿಗೆ ಆಗಮಿಸ್ತಾರೆ. ಇನ್ನು 18 ಅಡಿ ಬಿಲ್ಲನ್ನ ಏರಿ ಕಾರ್ಣಿಕ ನುಡಿ ನುಡಿಯುವ ಗೊರವಯ್ಯನ ನುಡಿಯನ್ನ ಮಳೆ, ಬೆಳೆ, ರಾಜಕೀಯ ಹೀಗೆ ಆಗು ಹೋಗಗಳ ಬಗ್ಗೆ ವಿಮರ್ಶೆ ಮಾಡ್ತಾರೆ ಹಾಗಾದ್ರೆ ಈ ವರ್ಷ ನುಡಿದ ಕಾರ್ಣಿಕ ನುಡಿ ಏನು…? ಅಂತಿರಾ ಈ ಸ್ಟೋರಿ ಓದಿ
ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ ಸದ್ದಲೇ ಎಂದು ಭವಿಷ್ಯವಾಣಿ ನುಡಿದ ಕಾರ್ಣಿಕದ ಗೊರವಯ್ಯ ರಾಮಣ್ಣ , 18 ಅಡಿ ಬಿಲ್ಲನ್ನು ಏರಿ ಕಾರ್ಣಿಕ ನುಡಿದು ಕೆಳಗೆ ಬಿದ್ದ ಗೊರವಯ್ಯ.
ತುಂಬಿದ ಕೊಡ ತುಳುಕಿತಲೇ ಪರಾಕ್… ಹೌದು ಇದು ಈ ವರ್ಷದ ಶ್ರೀ ಕ್ಷೇತ್ರ ಮೈಲಾರದ ಕಾರ್ಣಿಕ ( 2025 ರ ವರ್ಷ ಭವಿಷ್ಯ) ಅದು ಜಿಲ್ಲೆ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ. ಮೈಲಾರದ ಮೈಲಾರ ಲೀಂಗೆಶ್ವರನ ಜಾತ್ರೆ ಪ್ರತಿ ವರ್ಷ ನಡೆಯುತ್ತದೆ. ಭರತ ಹುಣ್ಣಿಮೆಯ ಬಳಿಕ ಶ್ರೀ ಕ್ಷೇತ್ರ ಮೈಲಾರದ ಡಂಕನಮರಡಿಯಲ್ಲಿ ಕಾರ್ಣಿಕ ನುಡಿಯನ್ನ 11 ದಿನಗಳ ಕಾಲ ಉಪವಾಸ ವಿದ್ದು ಭಕ್ತಿ ಭಾವ ಮಡಿ, 18 ಅಡಿಯ ಬಿಲ್ಲನ್ನ ಏರಿ ಕಾರ್ಣಿಕ ನುಡಿ ಭವಿಷ್ಯ ನುಡಿದ ಗೊರವಯ್ಯ ರಾಮಣ್ಣ, ತುಂಬಿದ ಕೊಡ ತುಳುಕಿತಲೇ ಪರಾಕ್ ಎಂದು ಭವಿಷ್ಯವಾಣಿ ನುಡಿದಿದ್ದಾರೆ ಸಂಪಾದೀತಲೇ ಪರಾಕ್.
|ವೆಂಕಪ್ಪಯ್ಯ ಒಡೆಯರ್, ಮೈಲಾರ ಕ್ಷೇತ್ರದ ಧರ್ಮದರ್ಶಿ
ಈ ಸಮಯದಲ್ಲಿ ಹೂವಿನಹಡಗಲಿ ಶಾಸಕ ಕೃಷ್ಣ ನಾಯಕ್
ಮಾತನಾಡಿದ ಅವರು ತುಂಬಿದ ಕೊಡಾ ತುಳುಕಿತಲೇ ಪರಾಕ್ ಎಂಬ ಎರಡೇ ಶಬ್ದದಲ್ಲಿ ಈ ವರ್ಷದ ದೈವವಾಣಿ ಹೇಳಿದ ಗೊರವಯ್ಯ ರಾಮಣ್ಣ, ಗೊರವಯ್ಯನ ಹೇಳಿಕೆಯಿಂದ ನೆರೆದಿದ್ದ ಲಕ್ಷಾಂತರ ಜನರಿಂದ ವ್ಯಕ್ತವಾದ ಹರ್ಷಾದ್ಘೋರ ಮುಗಿಲು ಮುಟ್ಟಿತು.ಈ ಬಾರಿ ಉತ್ತಮ ಮಳೆ,ಬೆಳೆಯಾಗಲಿದೆ. ದೇಶ ಸುಭಿಕ್ಷೆಯಾಗಿರಲಿದೆ ಎಂದು ಅರ್ಥೈಸಲಾಗುತ್ತಿದೆ.
ಇದಕ್ಕೂ ಮೊದಲು ಮೈಲಾರಲಿಂಗೇಶ್ವರನ ದೇವಸ್ಥಾನದಿಂದ ಶ್ರೀ ವೆಂಕಪ್ಪಯ್ಯ ಒಡೆಯರ್ ಕುದುರೆಯನ್ನೇರಿ ಡೆಂಕನಮರಡಿ ಪ್ರದೇಶದವರೆಗೆ ಮೆರವಣಿ ಮೂಲಕ ಸಾಗಿ ಬಂದು ಕಾರ್ಣಿಕ ನುಡಿಯುವ ಸ್ಥಳದ ಸುತ್ತ ಪ್ರದಕ್ಷಿಣೆ ಹಾಕಿ, ಭಕ್ತರಿಗೆ ಆಶೀರ್ವಾದ ನೀಡಿದರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸೇರಿ ರಾಜ್ಯದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತ ಭಕ್ತರು ನೆರೆದಿದ್ದರು.
ಒಟ್ಟಾರೆ ಹೇಳುವುದಾದರೆ, ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವವು ದೇಶ ಸುಭಿಕ್ಷವಾಗಿರಲಿದೆ, ಮಳೆ ಬೆಳೆ ಚೆನ್ನಾಗಿ ಆಗಲಿದೆ.. ರೈತರು ಉತ್ತಮ ರೀತಿಯಲ್ಲಿ ಇರ್ತಾರೆ ಅನ್ನೋ ಸಂದೇಶ ನೀಡಿದಂತಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ

ಸುದ್ದಿದಿನ,ದಾವಣಗೆರೆ:ನಗರದ ಪ್ರತಿಷ್ಠಿತ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ವಿಭಾಗದಿಂದ ಇತ್ತೀಚಿಗೆ ನಡೆದ ಕ್ಯಾಂಪಸ್ ಸಂದರ್ಶನ ಪ್ರಕ್ರಿಯೆಯಲ್ಲಿ ಜಿಎಂ ಡಿಪ್ಲೋಮೋ ಕಾಲೇಜಿನ ವಿವಿಧ ವಿಭಾಗಗಳಿಂದ 44 ಅಂತಿಮ ವರ್ಷದ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಮೆಕ್ಯಾನಿಕಲ್, ಸಿವಿಲ್, ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಒಟ್ಟು 44 ಅಂತಿಮ ವರ್ಷದ ವಿದ್ಯಾರ್ಥಿಗಳು ನ್ಯೂಜೈಸಾ ಟೆಕ್ನಾಲಜಿಸ್ ನಲ್ಲಿ ಉದ್ಯೋಗವಕಾಶಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ತೇಜಸ್ವಿ ಕಟ್ಟಿಮನಿ ಟಿ.ಆರ್. ತಿಳಿಸಿದ್ದಾರೆ.
ಆಯ್ಕೆಯಾದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಜಿಎಂ ಕಾಲೇಜಿನ ಚೇರ್ಮನ್ ಆದ ಜಿ.ಎಂ. ಲಿಂಗರಾಜು, ಜಿಎಂಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ್ ಪಾಂಡೆ ಎಂಬಿ, ಕಾಲೇಜಿನ ಆಡಳಿತ ಅಧಿಕಾರಿಗಳಾದ ವೈ.ಯು. ಸುಭಾಷ್ ಚಂದ್ರ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಎನ್. ಶ್ರೀಧರ್ ಅಭಿನಂದನೆ ಸಲ್ಲಿಸಿದ್ದು, 44 ವಿದ್ಯಾರ್ಥಿಗಳು ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ತಂದಿರುತ್ತಾರೆ ಎಂದು ಹರುಷ ವ್ಯಕ್ತಪಡಿಸಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದು, ಈ ಸಂಭ್ರಮದಲ್ಲಿ ಜಿಎಂ ಪಾಲಿಟೆಕ್ನಿಕ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರಾದ ಸಿ. ನಿಂಗರಾಜು, ಡಿಪ್ಲೋಮೋದ ತರಬೇತಿ ಮತ್ತು ಉದ್ಯೋಗ ವಿಭಾಗದ ಸಂಯೋಜಕರಾದ ಯಾಸ್ಮಿನ್ ಬೇಗಮ್, ಎಲೆಕ್ಟ್ರಿಕಲ್ ವಿಭಾಗದ ಮುಖ್ಯಸ್ಥರಾದ ಕೆ.ಬಿ. ಜನಾರ್ಧನ್, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರಾದ ಸಿ.ಎನ್. ಸಂದೀಪ್, ಮೆಕಾನಿಕಲ್ ವಿಭಾಗದ ಮುಖ್ಯಸ್ಥರಾದ ಎಂ. ಪ್ರವೀಣ್ ಕುಮಾರ್, ಕೆ. ಗಿರಿಜಾ ಸೇರಿದಂತೆ ಇತರರು ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಫೆಬ್ರವರಿ 14 ಮತ್ತು 15 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days ago
ಫೆಬ್ರವರಿ 17 ಮತ್ತು 18ಕ್ಕೆ ಕಲಬುರಗಿಯಲ್ಲಿ ಮೀಡಿಯಾ ಫೆಸ್ಟ್-2025
-
ದಿನದ ಸುದ್ದಿ3 days ago
ಪತ್ರಕರ್ತರ ಮೇಲೆ ಕೆ.ಎಂ.ಎಫ್ ಅಧ್ಯಕ್ಷ ಭೀಮಾನಾಯ್ಕ್ ಹಲ್ಲೆ, ಕೊಲೆ ಬೆದರಿಕೆ
-
ದಿನದ ಸುದ್ದಿ3 days ago
ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
-
ದಿನದ ಸುದ್ದಿ6 days ago
ಸರ್ಕಾರಿ, ಅನುದಾನಿತ, ಕಲ್ಯಾಣ ಕರ್ನಾಟಕದಲ್ಲಿನ ಖಾಲಿ ಇರುವ 25 ಸಾವಿರ ಶಿಕ್ಷಕರ ಹುದ್ದೆಗಳ ಭರ್ತಿಗಾಗಿ ಬಜೆಟ್ನಲ್ಲಿ ಅನುಮೋದನೆಗೆ ಪ್ರಸ್ತಾವನೆ : ಸಚಿವ ಎಸ್.ಮಧು ಬಂಗಾರಪ್ಪ
-
ದಿನದ ಸುದ್ದಿ1 day ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ34 minutes ago
ತುಂಬಿದ ಕೊಡ ತುಳುಕಿತಲೇ ಪರಾಕ್..!