Connect with us

ದಿನದ ಸುದ್ದಿ

ಅಭಿಯಾನದಲ್ಲಿ ಪೋಸ್ಟರ್ ಅಸ್ತ್ರ: ಸಲ್ಲದ ಎಡವಟ್ಟು..!

Published

on

ಸಾಂದರ್ಭಿಕ ಚಿತ್ರ
  • ಪ್ರಜ್ವಲ್ ತೇಜ ಡಿ.ಎಸ್, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ ವಿದ್ಯಾರ್ಥಿ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ಬೆಂಗಳೂರು ವಿಶ್ವವಿದ್ಯಾಲಯ

ತ್ತೀಚಿನ ದಿನಗಳಲ್ಲಿ ಪ್ರತಿ ಮಾಧ್ಯಮದಲ್ಲಿನ ಸಹ ಹೆಚ್ಚು ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನ ಸಾಕಷ್ಟು ಗಮನ ಸೆಳೆಯುವುದರಲ್ಲಿ ಗೆದ್ದಿದ್ದರು. ಇದು ಸಹ ಸಾರ್ವಜನಿಕರಲ್ಲಿ ಪ್ರಜ್ಞೆಯನ್ನು ಮೂಡಿಸುವಲ್ಲಿ ಎಷ್ಟು ಮಾತ್ರ ಯಶಸ್ಸು ಕಂಡಿದೆ ಎಂಬುದು ಗಮನಿಸಬೇಕಾದ ವಿಷಯ.

ಸಾಮಾನ್ಯವಾಗಿ ಯಾವುದೇ ಚುನಾವಣಾ ಅಭಿಯಾನಗಳಲ್ಲಿ ತಮ್ಮ ಪಕ್ಷಗಳ ಈ ಹಿಂದಿನ ಯಶಸ್ಸು, ಕಾರ್ಯ ಮತ್ತು ಸಾಧನೆಗಳನ್ನು ತೋರ್ಪಡಿಸುವುದು ಅಥವಾ ಮುಂದೆ ತಮ್ಮ ಗುರಿಯೇನು ಎನ್ನುವುದು ಜನರಲ್ಲಿ ಪ್ರಜ್ಞಾವಂತಿಗೆ ಮೂಡಿಸುವ ಕೆಲಸ ಮಾಡುತ್ತಿತ್ತು. ಅದುವೇ ಪ್ರಚಾರದ ಭಾಗವಾಗಿತು. ಆದರೆ ಈಗ ಸುದ್ದಿಯಲ್ಲಿರುವ ಪೋಸ್ಟರ್ ಅಭಿಯಾನಗಳು ಜನರಲ್ಲಿ ಆಸಕ್ತಿ ಮೂಡಿಸುವ ಬದಲು ಪಕ್ಷಗಳ ಪರಸ್ಪರ ಸಂಘರ್ಷ, ಒಬ್ಬರ ಮೇಲೊಬ್ಬರು ಮಾಡುತ್ತಿರುವ ಆರೋಪಗಳು ಮಾತ್ರ ಕಾಣಸಿಗುತ್ತದೆ. ಇದು ಯಾವ ರೀತಿ ಉಪಯುಕ್ತವೆನ್ನುವುದು ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸಬೇಕಾಗಿದೆ.

ಮುಖ್ಯವಾಗಿ ಜನರಿಗೆ ಪಕ್ಷವು ಯಾವ ರೀತಿಯ ಸಂದೇಶವನ್ನು ನೀಡುತ್ತಿದ್ದೇವೆ ಎಂದು ಯೋಚಿಸಬೇಕು. ಈ ಹಿಂದೆ ಪೋಸ್ಟರ್ ಗಳು ತಮ್ಮ ತಮ್ಮ ರಾಜಕೀಯ ಪಕ್ಷಗಳ ಯೋಜನೆ ಮತ್ತು ಜನರನ್ನು ತಲುಪುವ ಪ್ರಚಾರದ ಸಾಧನವಾಗಿ ಇರುತ್ತಿತು. ಆದರೆ, ಈಗ ಎದುರಾಳಿ ಪಕ್ಷದ ತೇಜೋವಧೆ ಮಾಡುವ ಸಾಧನವಾಗಿದೆ. ಈ ಪೋಸ್ಟರ್ ಅಭಿಯಾನವು ವಿರೋಧ ಪಕ್ಷ ಕಾಂಗ್ರೆಸ್ ನ ನಾಯಕರು ‘ಪೇ ಸಿಎಂ’ ಎಂದು ಶುರು ಮಾಡಿದ ಕಾರಣ ಅದು ಆಡಳಿತ ಪಕ್ಷದ ಕೆಂಗಣ್ಣಿಗೆ ಗುರಿಯಾಗಿ ಸಾಕಷ್ಟು ಕೋಲಹಲ ಮತ್ತು ಚರ್ಚೆಗೆ ಕಾರಣವಾಗಿತ್ತು. ಆ ಪೋಸ್ಟರ್ ಗಳಲ್ಲಿ ಕ್ಯೂಆರ್ ಕೋಡ್ ಇರಿಸಿ 40% ಕಮಿಷನ್ ಆರೋಪಿಗಳಿಗೆ ತುಪ್ಪ ಸುರಿಯಿತು. ಅದನ್ನು ಆಡಳಿತ ಪಕ್ಷವು ಅದನ್ನು ಸರಿಪಡಿಸಲು ಅಥವಾ ಸಮರ್ಥನೆ ನೀಡಲು ಹೋಗದೆ ಪ್ರತ್ಯುತ್ತರವಾಗಿ ಮತ್ತೊಂದು ಪೋಸ್ಟರ್ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ ತಾವು ಹಿಂದೆ ಬಿದ್ದಿಲ್ಲ ಎಂದು ತೋರಿಸುವ ಪ್ರಯತ್ನವಾಯಿತು

ಅದರಿಂದಾಗಿ ಹೊರಗೆ ಬಂದ ಸವಾಲು ಕೆಪಿಸಿಸಿ (ಕರ್ನಾಟಕ ಪ್ರೋವಿಜಿನಲ್ ಕರಪ್ಶನ್ ಕಂಪನಿ) ಪೋಸ್ಟರ್ ಗಳು. ಇದರಿಂದ ಒಬ್ಬರ ಮೇಲೆ ಒಬ್ಬರು ಕೆಸರು ಎರಚುವ ಕೆಲಸ ಮಾಡಿದ್ದಾರೆ. ಹೊರತು ಅದರಿಂದ ಯಾವುದೇ ಸಕಾರಾತ್ಮಕ ಬೆಳವಣಿಗೆಗೆ ದಾರಿ ಮಾಡಲಿಲ್ಲ. ಈ ಗಲಭೆ ಅಲ್ಲಿಗೆ ನಿಲ್ಲದೆ ಹೊಸ ರೂಪ ಪಡೆಯುತ್ತಾ ಸೇ ಸಿಎಂ ಮತ್ತು ಸೇ ಮೇಯರ್ ಎಂದು ವಿವಿಧ ನಗರಗಳ ಆಡಳಿತ ಪಕ್ಷದ ಮೇಯರ್ ಗಳ ಮೇಲೆ ದಾಳಿ ನಡೆಸುವ ಕೆಲಸ ಪ್ರತಿಪಕ್ಷವು ಮುಂದುವರೆಸಿದೆ.

ಇದು ಪರಸ್ಪರ ವಾಗ್ದಾಳಿಗೆ ಮತ್ತು ಕೋಲಾಹಲ ಸೃಷ್ಟಿಸುತ್ತಿದೆ. ಈ ರೀತಿಯ ಬೆಳವಣಿಗೆ ಎಷ್ಟು ಮಾತ್ರ ಉಪಯುಕ್ತ ಎನ್ನುವುದು ಪರಸ್ಪರ ಎಲ್ಲಾ ರಾಜಕೀಯ ಪಕ್ಷಗಳು ಒಮ್ಮೆ ಯೋಚಿಸುವುದು ಸರಿ ಇಲ್ಲವಾದಲ್ಲಿ ಅದು ನಗೆ ಪಾಟಲು ಆಗುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಒಂದೆಡೆ ಸಾಕಷ್ಟು ಸಾವು ನೋವುಗಳು ಮತ್ತು ವರುಣನ ಆರ್ಭಟ ಹೆಚ್ಚಾಗಿ ರಾಜ್ಯವೇ ಅಲ್ಲೋಲ ಕಲ್ಲೋಲ ಆಗಿರುವ ಸಮಯದಲ್ಲಿ ಈ ರೀತಿಯ ಪರಸ್ಪರ ವಾಗ್ದಾಳಿಗಳು ಯಾವ ರೀತಿ ಪ್ರಜ್ಞಾವಂತಿಕೆ ಯನ್ನು ಜನರಲ್ಲಿ ಮೂಡಿಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕಾಗಿದೆ.

ಚರ್ಚಿಸಲು ಮತ್ತು ಗಮನಿಸಬೇಕಾದ ಸಾಕಷ್ಟು ಸಮಸ್ಯೆಗಳಿರುವಾಗ ಜನರಲ್ಲಿ ಮತ್ತು ರಾಜಕೀಯ ಪಕ್ಷಗಳ ವಲಯದಲ್ಲಿ ಈ ಪೋಸ್ಟರ್ ವಿವಾದವು ಯಾವುದೇ ಏಳಿಗೆ ಮಾಡುವಲ್ಲಿ ಉಪಯೋಗವಿಲ್ಲ. ಇದರ ಜತೆ ಜತೆಗೆ ನಡೆಯುತ್ತಿರುವ ಜನ ಸಂಕಲ್ಪ ಮತ್ತು ಭಾರತ್ ಜೋಡೋ ಯಾತ್ರೆಗಳು ಇದಕ್ಕೆ ಒಂದಷ್ಟು ಪುಷ್ಟಿ ನೀಡುವ ಕೆಲಸ ಮಾಡುತ್ತಿದೆ. ಚುನಾವಣೆಯ ಪ್ರಚಾರವೆಂದರೆ ಜನರು ತಮ್ಮನ್ನು ತಮ್ಮ ಪಕ್ಷವನ್ನು ಏಕೆ ಜನ ಆರಿಸಬೇಕು ಎಂಬುದು ತಿಳಿ ಹೇಳಬೇಕೆ ಹೊರತು ಅದು ತಮ್ಮ ಎದುರಾಳಿ ಪಕ್ಷಕ್ಕೆ ಧಕ್ಕೆ ಮತ್ತು ತೇಜೋವಧೆ ಮಾಡುವಂತಿರಬಾರದು, ಇದು ಕೇವಲ ನೈತಿಕತೆಯ ವಿಚಾರವಲ್ಲ ಅದು ಕಾನೂನಿನಲ್ಲಿರುವ ಒಂದು ಚೌಕಟ್ಟು.

ಪ್ರಜ್ವಲ್ ತೇಜ ಡಿ.ಎಸ್

ಪ್ರತಿಪಕ್ಷಗಳನ್ನು ಚುನಾವಣೆಯ ಸಮಯದಲ್ಲಿ ತೇಜೋವಧೆ ಮಾಡುವುದು ಅಥವಾ ಅವರ ಮನೋಭಾವನೆಗಳನ್ನು ನೋಯಿಸುವುದು ಕಾನೂನು ರೀತಿಯಲ್ಲಿ ಅಪರಾಧವಾಗುತ್ತದೆ. ಜನರಿಗೆ ಬಿಡಿಸಿ ಹೇಳಬೇಕಾಗಿರುವ ಸ್ಥಾನದಲ್ಲಿರುವ ನಾಯಕರೇ ಅಪರಾಧಿಗಳಾಗಿ ನಿಲ್ಲುವುದು ಎಷ್ಟು ಸರಿ. ಪೋಸ್ಟರ್ ಎನ್ನುವುದು ಸ್ವಯಂ ಪ್ರಚಾರಕ್ಕಾಗಿ ಮೂಡಿ ಬಂದಿರುವ ಒಂದು ಸಾಧನ ಅಷ್ಟೇ ಅದಕ್ಕೆ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಈ ಪೋಸ್ಟರ್ ಅಭಿಯಾನ ಚುನಾವಣೆ ಮುಗಿಯುವವರೆಗೂ ಚಲಾವಣಾಯಾಗುವ ಎಲ್ಲ ಸಾಧ್ಯತೆಗಳು ಇವೆ.

ಮೊದಲು ಕೇವಲ ಬೆಂಗಳೂರು ನಗರದಲ್ಲಿ ಶುರುವಾಗಿ ನಂತರ ಈಗ ರಾಜ್ಯದ ನಾನಾ ಭಾಗಗಳಿಗೂ ವಿಸ್ತರಿಸಿದೆ. ಹೊಸ ಹೊಸ ರೂಪದಲ್ಲಿ ಜನರಿಗೆ ದರ್ಶನ ನೀಡುತ್ತಿದೆ. ಶುರುವಾಗಿ ಸಾಕಷ್ಟು ದಿನಗಳು ಕಳೆದರು ಸಹ ಇದರ ಕಾವು ಇನ್ನು ಕಡಿಮೆಯಾಗಿಲ್ಲ, ಜತೆ ಜತೆಗೆ ಇದಕ್ಕೆ ಸಾಮಾನ್ಯರು ಕೂಡ ಸಮೂಹ ಮಾಧ್ಯಮಗಳಲ್ಲಿ ಪ್ರಚಾರ ಮಾಡುತ್ತಿರುವುದು ವಿಪರ್ಯಾಸ. ಇದು ಜನರಲ್ಲಿ ಒಂದು ರೀತಿಯ ಮನರಂಜನೆ ಮತ್ತು ವ್ಯಂಗ್ಯ ಚಿತ್ರಣ ಹಾಸ್ಯವಾಗಿ ಮೂಡಿ ಬರುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸುದ್ದಿ ಮಾಡುತ್ತಿದೆ. ಸುದ್ದಿಯಾಗಿದೆ ಅಂದರೆ ಅದು ಇಷ್ಟವಾಗಿದೆ ಎಂದು ತಿಳಿಯುವುದು ಮೂರ್ಖತನವಾಗುತ್ತದೆ. ಈ ಪೋಸ್ಟರ್ ಅಭಿಯಾನ ಮಾಡುವ ಬದಲು ಜನರಲ್ಲಿ ವಿಶ್ವಾಸ ಮೂಡಿಸುವ ಸಾಕಷ್ಟು ಅವಕಾಶಗಳು ಇರುವುದನ್ನು ಬಳಸಿಕೊಳ್ಳುವುದೇ ಉತ್ತಮ.

ಈಗ ಆಗಿರುವ ಬದಲಾವಣೆಗಳು ಸಾಮಾನ್ಯರಿಗೆ ಉಪಯುಕ್ತ ಆಗುವ ಲಕ್ಷಣಗಳಿಲ್ಲ, ಇವುಗಳನ್ನು ಮಾಡುವ ಬದಲು ಜನರಿಗೆ ಬೇಕಾದ ಅಥವಾ ಉಪಯುಕ್ತವಾದ ವಿಚಾರಗಳನ್ನು ಚರ್ಚಿಸುವ ಅವಶ್ಯಕತೆ ಪ್ರಸ್ತುತ ಹೆಚ್ಚಿದೆ. ಈ ಹಿಂದೆ ಮತ್ತು ಪ್ರಸ್ತುತ ನಡೆಯುತ್ತಿರುವಂತಹ ಯಾತ್ರೆಗಳಿಗಿಂತ ಈ ಪೋಸ್ಟರ್ ಅಭಿಯಾನ ಹೆಚ್ಚು ಸುದ್ದಿಯಾಗಿರುವುದು ವಿಪರ್ಯಾಸವೇ ಸರಿ. ಈ ರೀತಿಯ ಅಭಿಯಾನಗಳು ಜನರಲ್ಲಿ ವಿಶ್ವಾಸ ಮತ್ತು ಸಕಾರಾತ್ಮಕತೆ ಮೂಡಿಸುವ ಬದಲು ನಕಾರಾತ್ಮಕವಾದ ವಾತಾವರಣ ಸೃಷ್ಟಿಯಾಗುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending