ದಿನದ ಸುದ್ದಿ
ಜೀವನದ ಅಮೂಲ್ಯ ಸಮಯದ ಪರಿವೇ ಇಲ್ಲದೆ ಜಾಲತಾಣದಲ್ಲಿ ಮುಳುಗಿದ ಜನಸಾಮಾನ್ಯರು

- ಚಂದ್ರಿಕ ವಿ, ಪ್ರಥಮ ವರ್ಷದ ಸ್ನಾತಕೋತ್ತರ ಪದವಿ, ವಿದ್ಯಾರ್ಥಿನಿ,ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,ಬೆಂಗಳೂರು ವಿಶ್ವವಿದ್ಯಾಲಯ
ಇತ್ತೀಚಿನ ದಿನಗಳಲ್ಲಿ ನಾವು ನೋಡುವ ಮನಸ್ಥಿತಿಗಳು ತುಂಬಾ ಭಯಾನಕವಾಗುತ್ತಿರುವ ಸಂಗತಿಗಳು ಇಂದು ನಾವು ನೋಡಬಹುದು. ಪ್ರಸ್ತುತ ದಿನಗಳಲ್ಲಿ ಮನುಷ್ಯ-ಮನುಷ್ಯನ ನಡುವೆ ಒಂದು ಉತ್ತಮ ಸಂಬಂಧ ಜೀವನದ ಒಂದು ಬೇರು ಈ ಸಂಬಂಧ ಎಂದು ಬದುಕುತ್ತಿದರು.
ಹಾಗೆಯೇ ಪ್ರತಿಯೊಬ್ಬರೂ ಕೂಡ ಒಬ್ಬರಿಗೊಬ್ಬರು ಸಹಾಯ, ಪ್ರೀತಿ, ಅಭಿಮಾನ, ವಿಶ್ವಾಸದಿಂದ ಬದುಕುತ್ತಿದ್ದರು. ಜನ ಕಾಲ ಕಳೆದಂತೆ ಅಗತ್ಯಕೆ ತಕ್ಕಂತೆ ಮನುಷ್ಯನು ಕೂಡ ಬದಲಾಗುತ್ತಿರುವುದನ್ನು ಕಾಣಬಹುದು, ಇದೇ ಅವಿಭಕ್ತ ಕುಟುಂಬ ಭಯಸುತ್ತಿದ್ದ ಕಾಲದಲ್ಲಿ ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿರುವುದು ನಮ್ಮ ಕಣ್ಣೆದುರು ನಡೆಯುತ್ತವೆ. ಇಂದು ಕುಟುಂಬಗಳು ಹೆಚ್ಚು ತಮ್ಮವರ ಜತೆ ಸಮಯವನ್ನು ಕಳೆಯುತಿರುತ್ತಿದ್ದರು.
ಆದರೆ, ಮೊಬೈಲ್ (ಜಂಗಮವಾಣಿ)
ಎಂಬ ಸಂಪರ್ಕಗಳು ಚಾಲ್ತಿಯಲ್ಲಿರುವ ಸಂದರ್ಭದಲ್ಲೂ ಕೂಡ ಕುಟುಂಬದ ಸಂಬಂಧಗಳು ಕಡಿಮೆಯಾಗುತ್ತಾ ಹೋಗುತ್ತಿವೆ, ಹೆಚ್ಚಿನ ಸಮಯವನ್ನು ಮೊಬೈಲ್ ಜಂಗಮ ವಾಣಿ) ಜತೆ ಕಳೆಯುವ ಜನ ತಾನು ತನ್ನವರ ಜತೆ ಕಳೆಯದಂತಾಗಿದೆ.
ಮೊಬೈಲ್ (ಜಂಗಮವಾಣಿ) ಎಂದಾಕ್ಷಣ ಕೇವಲ ಮಾತಾಡಲು ಬಳಸುವ ಸಂಪರ್ಕವಾಗದೇ, ಅದರಲ್ಲಿ ಹೆಚ್ಚಾಗುತ್ತಿರುವ ಸಾಮಾಜಿಕ ಜಾಲತಾಣಗಳು ಬಳಸುವುದು ತಮ್ಮ ಅಮೂಲ್ಯವಾದ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುವುದು ಇದರಿಂದ ತಮ್ಮ ವಯಕ್ತಿಕ ಜೀವನಕ್ಕೆ ಅದು ತೊಂದರೆಯೂ ಉಂಟಾಗುತ್ತದೆಂದು ಎಂಬುದು ಪರಿವೇ ಇಲ್ಲದೇ ವರ್ತಿಸುವಂಥವರು ಆಗಿದ್ದರೆ ಎನ್ನಬಹುದು.
ಏನೇ ಕೆಲಸಗಳು ಕೊಟ್ಟರು ನಾವು ಸಾಮಾಜಿಕ ಜಾಲತಾಣಕ್ಕೆ ಪ್ರವೇಶವನ್ನು ನೀಡುವುದು ಅಭ್ಯಾಸ ವಾಗಿರುವುದು ನಗ್ನ ಸತ್ಯ, ಇನ್ನು ಲ ಜೀವನವನ್ನು ನಾವು ಸರಿಯಾಗಿ ಅರ್ಥಮಾಡಿಕೊಡುವ ಸಮಯ ತುಂಬಾ ಹತ್ತಿರ ಬರುವಂತದ್ದು ಆಗಿದೆ. ಆ ಸಮಯಕ್ಕೆ ನಾವು ಜೀವನದ ಅಮೂಲ್ಯ ಸಮಯವನ್ನು ನಾವು ಹಾಳುಮಾಡಿ ಕೊಂಡಿರುತೇವೆ ಅದಕ್ಕಾಗಿ ನಾವು ಯಾವ ಸಮಯಕ್ಕೆ ಎಷ್ಟನ್ನು ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದು ಅದನ್ನು ಅರ್ಥಮಾಡಿಕೊಂಡು ಸಾಗಿದರೆ ಜೀವನವು ನಮ್ಮ ಹಿಡಿತದಲ್ಲಿ ಇರುತ್ತದೆ.
ಆಗ ಬದುಕಿಗೂ ಒಂದು ಅರ್ಥವು ಬರುತ್ತದೆ. ನಾವು ಮತ್ತು ನೀವುಗಳು ಪ್ರತಿಯೊಬ್ಬರೂ ಕೂಡ ಜೀವನದ ಮೌಲ್ಯಗಳನ್ನು ಅರ್ಥಮಾಡಿಕೊಂಡು ಬದುಕನ್ನು ಸಾಗಿಸಿ ನಾವು ಅವಶ್ಯಕತೆಗೆ ತಕ್ಕಂತಹ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದರಿಂದ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ. ಕೆಲವೊಮ್ಮೆ ಗೊತ್ತಿಲ್ಲದೆ ಸಾಮಾಜಿಕ ಜಾಲತಾಣಗಳಿಂದ ಜೀವನವೇ ಒಂದು ದುಸ್ಥಿತಿಗೆ ಬಂದು ತಲುಪುವ ಪರಿಸ್ಥಿತಿಗೆ ಬಂದು ಬಿಟ್ಟಿರುತ್ತದೆ.
ಹಾಗಾಗಿ ಪ್ರತಿಯೊಬ್ಬರೂ ಕೂಡ ಎಚ್ಚರದಿಂದ ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಬೇಕಾಗುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಮುಳಿಗಿದರೆ ತನ್ನನ್ನು ತಾನು ಸರಿಯಾದ ರೀತಿಯಲ್ಲಿ ಅರ್ಥವನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬುದು ಭವಿಷ್ಯದ ಚಿಂತನೆಯು ಇರುವುದಿಲ್ಲ. ಸಂಬಂಧಗಳ ಅರಿವೇ ಇರುವುದಿಲ್ಲ ಎಂಬಂತೆ ಬದುಕು ಒಂದು ಸಾಮಾಜಿಕ ಜಾಲತಾಣದಿಂದ ಆಗುವಂತದು ಅದಕ್ಕಾಗಿ ತಂದೆ-ತಾಯಿ ಗುರು-ಹಿರಿಯರು ಸ್ನೇಹಿತರು ಇವರುಗಳು ನಮ್ಮ ಬದುಕಿಗೆ ಅತಿ ಮುಖ್ಯರಾಗುತ್ತಾರೆ. ಅದೇ ರೀತಿಯಲ್ಲಿ ಕಲಿತು ಕೊಂಡಷ್ಟು ಸಾಮಾಜಿಕ ಜಾಲತಾಣದಲ್ಲಿ ಕಲಿಯಲು ಸಾಧ್ಯವಿಲ್ಲ ಎಂಬುದು ಬದುಕಿಗೆ ಎಲ್ಲವೂ ಮುಖ್ಯವಾಗುತ್ತದೆ. ಊಟಕ್ಕೆ ಉಪ್ಪಿನ ಕಾಯಿ ಎಷ್ಟು ಮುಖ್ಯವೋ, ಬದುಕಿಗೆ ಮೊಬೈಲ್ (mobile) ಸಾಮಾಜಿಕ ತಾಣಗಳು ಅಷ್ಟೇ ಮುಖ್ಯ, ಇವುಗಳು ಅತಿಯಾದರೆ ಯಾವುದು ಶಾಶ್ವತವಾಗಿ ಉಳಿಯುವುದಿಲ್ಲ ಎಂಬ ಬದುಕು ಕೂಡ ನಶ್ವರವೆನಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಎಸ್.ಆರ್.ಶೀತಲ್ಗೆ ಮೂರು ಚಿನ್ನದ ಪದಕಗಳು

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್ನಲ್ಲಿ ಮೇ 15ರಂದು ನಡೆದ 59ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿಯಾದ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.
2023-24ನೇ ಸಾಲಿನಲ್ಲಿ 10,000 ಅಂಕಗಳಿಗೆ ಸರಾಸರಿ 9.104 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ

ಆರೋಗ್ಯಕರ ಡಯಟ್ ಮಾಡಲು ಈ ಟಿಪ್ಸ್ ಗಳನ್ನು ಅನುಸರಿಸಿ
1.ಪೌಷ್ಟಿಕತೆಯ ಸಮತೋಲನ
ಆರೋಗ್ಯಕರ ಡಯಟ್ನಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್ಗಳು (ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಕೊಬ್ಬು) ಮತ್ತು ಮೈಕ್ರೋನ್ಯೂಟ್ರಿಯೆಂಟ್ಗಳು (ವಿಟಮಿನ್ಗಳು, ಖನಿಜಗಳು) ಸಮತೋಲನವಿರಬೇಕು. ಉದಾಹರಣೆಗೆ, ಭಾರತೀಯ ಆಹಾರದಲ್ಲಿ ರಾಗಿ, ಜೋಳ, ಕ್ವಿನೋವಾ, ದ್ವಿದಳ ಧಾನ್ಯಗಳು, ಮತ್ತು ಸೊಪ್ಪುಗಳು ಸಮತೋಲಿತ ಆಹಾರವನ್ನು ಒದಗಿಸುತ್ತವೆ.
ಗ್ಲೈಸೆಮಿಕ್ ಇಂಡೆಕ್ಸ್ (GI) : ಕಡಿಮೆ GI ಆಹಾರಗಳಾದ ಓಟ್ಸ್, ಕಂದು ಅಕ್ಕಿ, ಮತ್ತು ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತವೆ, ಇದು ಡಯಾಬಿಟೀಸ್ ನಿರ್ವಹಣೆಗೆ ಸಹಾಯಕವಾಗಿದೆ.
2. ಸ್ಥಳೀಯ ಮತ್ತು ಋತುಮಾನದ ಆಹಾರಗಳ ಆಯ್ಕೆ
ಕರ್ನಾಟಕದಂತಹ ಪ್ರದೇಶಗಳಲ್ಲಿ, ರಾಗಿ ರೊಟ್ಟಿ, ತರಕಾರಿ ಸಾಂಬಾರ್, ಕೋಸಂಬರಿ, ಮತ್ತು ಒಣಗಿದ ಹಣ್ಣುಗಳು (ಬಾದಾಮಿ, ಗೋಡಂಬಿ) ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಆಯ್ಕೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ತಾಜಾತನವನ್ನು ಖಾತ್ರಿಪಡಿಸುತ್ತವೆ.
ಋತುಮಾನದ ಹಣ್ಣುಗಳು : ಮಾವಿನಹಣ್ಣು, ಜಾಮೂನ್, ದಾಳಿಂಬೆ ಇತ್ಯಾದಿಗಳು ವಿಟಮಿನ್ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.
3. ಗಟ್ ಹೆಲ್ತ್ (ಕರುಳಿನ ಆರೋಗ್ಯ)
ಆರೋಗ್ಯಕರ ಕರುಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಮೊಸರು, ಮಜ್ಜಿಗೆ, ಒಣಗಿದ ಹಣ್ಣುಗಳು, ಮತ್ತು ಫೈಬರ್ ಶ್ರೀಮಂತ ಆಹಾರಗಳಾದ ತರಕಾರಿಗಳು ಮತ್ತು ಧಾನ್ಯಗಳು ಪ್ರೋಬಯಾಟಿಕ್ಗಳು ಮತ್ತು ಪ್ರಿಬಯಾಟಿಕ್ಗಳನ್ನು ಒದಗಿಸುತ್ತವೆ. ಉದಾಹರಣೆ: ರಾಗಿ ಮತ್ತು ತರಕಾರಿಗಳಿಂದ ತಯಾರಿಸಿದ ಖಿಚಡಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.
4. ಸಂಸ್ಕರಿತ ಆಹಾರದಿಂದ ದೂರ
ಸಂಸ್ಕರಿತ ಆಹಾರಗಳು (ಚಿಪ್ಸ್, ಸಕ್ಕರೆಯಿಂದ ಕೂಡಿದ ಪಾನೀಯಗಳು, ಫಾಸ್ಟ್ ಫುಡ್) ದೀರ್ಘಕಾಲೀನವಾಗಿ ಒಬೇಸಿಟಿ, ಡಯಾಬಿಟೀಸ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳ ಬದಲಿಗೆ ತಾಜಾ, ಗೃಹ ತಯಾರಿಕೆಯ ಆಹಾರವನ್ನು ಆದ್ಯತೆ ನೀಡಿ.
5. ವೈಯಕ್ತಿಕಗೊಳಿಸಿದ ಡಯಟ್
ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಮತ್ತು ಆರೋಗ್ಯ ಸ್ಥಿತಿಗೆ ತಕ್ಕಂತೆ ಡಯಟ್ ರೂಪಿಸಿ. ಉದಾಹರಣೆಗೆ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್ಗಳು ಬೇಕಾಗುತ್ತವೆ, ಆದರೆ ವಯಸ್ಸಾದವರಿಗೆ ಕಡಿಮೆ ಕ್ಯಾಲೋರಿ ಆದರೆ ವಿಟಮಿನ್ಗಳ ಶ್ರೀಮಂತ ಆಹಾರ ಸೂಕ್ತವಾಗಿರುತ್ತದೆ.
6. ಹೈಡ್ರೇಷನ್ ಮತ್ತು ಜೀವನಶೈಲಿ
ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ತೆಂಗಿನೀರು, ಮಜ್ಜಿಗೆ, ಅಥವಾ ಗಿಡಮೂಲಿಕೆ ಚಹಾವನ್ನು ಸೇವಿಸಿ. ಆರೋಗ್ಯಕರ ಡಯಟ್ನ ಜೊತೆಗೆ, 30 ನಿಮಿಷಗಳ ದೈಹಿಕ ಚಟುವಟಿಕೆ (ಯೋಗ, ವಾಕಿಂಗ್, ಅಥವಾ ಜಿಮ್) ಮತ್ತು 7-8 ಗಂಟೆಗಳ ನಿದ್ರೆಯನ್ನು ಸಂಯೋಜಿಸಿ.
ನಿರ್ದಿಷ್ಟ ಆರೋಗ್ಯಕರ ಡಯಟ್ ಯೋಜನೆ
ಬೆಳಗಿನ ಉಪಾಹಾರ:ರಾಗಿ ದೋಸೆ + ಚಟ್ನಿ, ಅಥವಾ ಓಟ್ಸ್ ಉಪ್ಮಾ + ತರಕಾರಿಗಳು. ಮಧ್ಯಾಹ್ನದ ತಿಂಡಿ: ತೆಂಗಿನೀರು ಅಥವಾ ಮೊಸರು + ಒಂದು ಹಣ್ಣು (ಸೀಬೆ, ಬಾಳೆಹಣ್ಣು).
ಮಧ್ಯಾಹ್ನದ ಊಟ: ಕಂದು ಅಕ್ಕಿ, ಸಾಂಬಾರ್, ಪಾಲಕ್ ಸೊಪ್ಪಿನ ಪಲ್ಯ, ಮತ್ತು ಕೋಸಂಬರಿ. ಸಂಜೆಯ ತಿಂಡಿ: ಬೇಯಿಸಿದ ಕಾಳುಗಳು (ಕಡಲೆಕಾಯಿ, ಕಡಲೆ) ಅಥವಾ ಒಣಗಿದ ಹಣ್ಣುಗಳು.ರಾತ್ರಿಯ ಊಟ: ರಾಗಿ ರೊಟ್ಟಿ + ತರಕಾರಿ ಕೂಟು, ಅಥವಾ ಜೋಳದ ರೊಟ್ಟಿ + ಮೊಸರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೇ 22 | ಇಂದಿನ ಅಡಿಕೆ ದರ

ಇಂದು, ಮೇ 22, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್ಗೆ ರೂಪಾಯಿಗಳಲ್ಲಿ):
ಶಿವಮೊಗ್ಗ ಮಾರುಕಟ್ಟೆ:
ರಾಶಿ: ₹48,169 (ಕನಿಷ್ಠ) – ₹58,099 (ಗರಿಷ್ಠ), ಮೋಡಲ್ ಬೆಲೆ: ₹55,869
ಸರಕು: ₹60,399 (ಕನಿಷ್ಠ) – ₹92,510 (ಗರಿಷ್ಠ), ಮೋಡಲ್ ಬೆಲೆ: ₹77,009
ಬೆಟ್ಟೆ: ₹51,319 (ಕನಿಷ್ಠ) – ₹58,219 (ಗರಿಷ್ಠ), ಮೋಡಲ್ ಬೆಲೆ: ₹57,989
ಗೊರಬಲು: ₹15,499 (ಕನಿಷ್ಠ) – ₹30,699 (ಗರಿಷ್ಠ), ಮೋಡಲ್ ಬೆಲೆ: ₹28,429
ಚನ್ನಗಿರಿ ಮಾರುಕಟ್ಟೆ (ದಾವಣಗೆರೆ):
ರಾಶಿ: ₹41,199 (ಕನಿಷ್ಠ) – ₹59,312 (ಗರಿಷ್ಠ), ಮೋಡಲ್ ಬೆಲೆ: ₹57,767
ಸಾಗರ ಮಾರುಕಟ್ಟೆ (ಶಿವಮೊಗ್ಗ):
ಚಾಲಿ: ₹35,699 (ಕನಿಷ್ಠ) – ₹37,141 (ಗರಿಷ್ಠ), ಮೋಡಲ್ ಬೆಲೆ: ₹36,699
ಬಿಳೆಗೋಟು: ₹21,611 (ಕನಿಷ್ಠ) – ₹25,587 (ಗರಿಷ್ಠ), ಮೋಡಲ್ ಬೆಲೆ: ₹24,111
ಕೆಂಪುಗೋಟು: ₹17,599 (ಕನಿಷ್ಠ) – ₹27,499 (ಗರಿಷ್ಠ), ಮೋಡಲ್ ಬೆಲೆ: ₹24,919
ರಾಶಿ: ₹22,899 (ಕನಿಷ್ಠ) – ₹57,470 (ಗರಿಷ್ಠ), ಮೋಡಲ್ ಬೆಲೆ: ₹56,621
ಕುಮಟಾ ಮಾರುಕಟ್ಟೆ (ಉತ್ತರ ಕನ್ನಡ):
ಚಿಪ್ಪು: ₹11,199 (ಕನಿಷ್ಠ) – ₹26,919 (ಗರಿಷ್ಠ), ಮೋಡಲ್ ಬೆಲೆ: ₹24,549
ಕೋಕಾ: ₹6,899 (ಕನಿಷ್ಠ) – ₹22,189 (ಗರಿಷ್ಠ), ಮೋಡಲ್ ಬೆಲೆ: ₹20,429
ಹಣ್ಣು: ₹32,589 (ಕನಿಷ್ಠ) – ₹42,500 (ಗರಿಷ್ಠ), ಮೋಡಲ್ ಬೆಲೆ: ₹39,729
ಚಿತ್ರದುರ್ಗ ಮಾರುಕಟ್ಟೆ:
ರಾಶಿ: ₹52,449 (ಕನಿಷ್ಠ) – ₹52,899 (ಗರಿಷ್ಠ), ಮೋಡಲ್ ಬೆಲೆ: ₹52,679
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ಅಂಕಣ5 days ago
ಹನಿಗವಿತೆಗಳು | ಬೆಳಕಿನ ಬೆನ್ನ ಹಿಂದೆ
-
ದಿನದ ಸುದ್ದಿ4 days ago
ದಾವಣಗೆರೆ | ಕಾಂಗ್ರೆಸ್ ಸಾಧನೆಯ ಸಮರ್ಪಣೆ ಕಾರ್ಯಕ್ರಮ : ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ
-
ದಿನದ ಸುದ್ದಿ4 days ago
ಹೊಸಪೇಟೆ ನಗರದ ತುಂಬೆಲ್ಲಾ ಜಾಹೀರಾತುಗಳ ಹಾವಳಿ ; ಕಣ್ಣ್ಮುಚ್ಚಿ ಕುಳಿತ ಅಧಿಕಾರಿಗಳು
-
ದಿನದ ಸುದ್ದಿ4 days ago
ದಾವಣಗೆರೆ | ಬ್ಯಾಂಕ್ ಆಫ್ ಬರೋಡದಲ್ಲಿ ಮಾಜಿ ಸೈನಿಕರಿಗೆ ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಮಲೇಬೆನ್ನೂರು ಪುರಸಭೆ | ಗೌರವಧನ ಆಧಾರದ ಮೇಲೆ ತಾತ್ಕಾಲಿಕ ಸೇವೆ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಹೃದಯಾಘಾತದಿಂದ ತಪ್ಪಿಸಿಕೊಳ್ಳುವುದು ಹೇಗೇ..?
-
ದಿನದ ಸುದ್ದಿ3 days ago
ಇಂದಿನ ಅಡಿಕೆ ದರ ಪಟ್ಟಿ
-
ದಿನದ ಸುದ್ದಿ4 days ago
ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಪರೀಕ್ಷಾ ಪೂರ್ವ ತರಬೇತಿಗೆ ಅರ್ಜಿ ಆಹ್ವಾನ