ದಿನದ ಸುದ್ದಿ
38,32,50,000- ಈ ಸಂಖ್ಯೆಯೊಂದಿಗೆ ಬೆಂಗಳೂರಿನ ನಂಟೇನು? ಗಾಯಕ ವಾಸು ದೀಕ್ಷಿತರಿಗೆ ಇದರಿಂದ ಸ್ಪೂರ್ತಿ ಏನು?
ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಗಾಯಕ ವಾಸು ದೀಕ್ಷಿತ್ ಸಹಯೋಗದಲ್ಲಿ, ಬೆಂಗಳೂರಿನ ಸರ್ಕುಲಾರ್ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರದ ಕುರಿತು ಹ್ಯಾಪಿ ನಂಬರ್ ಹಾಡು ಮಾತನಾಡುತ್ತದೆ.
ಸುದ್ದಿದಿನ,ಬೆಂಗಳೂರು: ಬೆಂಗಳೂರಿನ ಸರ್ಕುಲಾರ್ ಎಕಾನಮಿಯಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಪಾತ್ರ ಮತ್ತು ಕೊಡುಗೆಯನ್ನು ಹೈಲೈಟ್ ಮಾಡುವ “Invaluables”ನ ಎರಡನೇ ಹಂತದ #Invaluable Recyclers ಪ್ರಾರಂಭಿಸುವುದಾಗಿ ಬಿಬಿಸಿ ಮೀಡಿಯಾ ಆಕ್ಷನ್ ಇಂದು ಘೋಷಿಸಿತು.
ಬಿಬಿಸಿ ಮೀಡಿಯಾ ಆಕ್ಷನ್ ಗಾಯಕ ವಾಸು ದೀಕ್ಷಿತ್ ಅವರ ಸಹಯೋಗದೊಂದಿಗೆ ‘ಹ್ಯಾಪಿ ನಂಬರ್’ ಎಂಬ ಶೀರ್ಷಿಕೆಯ ಹಾಡನ್ನು ಬಿಡುಗಡೆ ಮಾಡಿದೆ. ಇದು ನಗರದಲ್ಲಿ ತ್ಯಾಜ್ಯ ಸಂಗ್ರಾಹಕರ ಕೊಡುಗೆಯನ್ನು ಎತ್ತಿ ತೋರಿಸುತ್ತದೆ. ನಗರದಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಇತರ ಮರುಬಳಕೆ ಮಾಡಬಹುದಾದ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುವುದು ಮತ್ತು ಮರುಬಳಕೆ ಮಾಡುವುದರ ಮೂಲಕ ಭೂಮಿಯ ಒಡಲು ಸೇರಬಹುದಾದ 383,250 ಟನ್ ತ್ಯಾಜ್ಯವನ್ನು ಬೇರೆಡೆ ವರ್ಗಾಯಿಸುವ ಪ್ರಕ್ರಿಯೆಯಾಗಿದೆ.
ಭೂಮಿಯ ಒಡಲಲ್ಲಿ ತ್ಯಾಜ್ಯ ಸಂಗ್ರಹವಾಗುವುದರಿಂದ ಅಪಾರ ಪ್ರಮಾಣದಲ್ಲಿ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಉಂಟಾಗುತ್ತದೆ. ಇದು ಗಾಳಿ, ನೀರು ಮತ್ತು ಮಣ್ಣಿನ ಮಾಲಿನ್ಯ ಮತ್ತು ಹವಾಮಾನ ಬದಲಾವಣೆಗೂ ಕಾರಣವಾಗುತ್ತದೆ.
ಬಿಬಿಸಿ ಮೀಡಿಯಾ ಆಕ್ಷನ್ ಮತ್ತು ಅದರ ಪಾಲುದಾರರು ಇಂದು ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಗಾಯಕ ವಾಸು ದೀಕ್ಷಿತ್, ಪರಿಸರವಾದಿ ವಾಣಿ ಮೂರ್ತಿ ಮತ್ತು ನಟಿ ಶ್ರದ್ಧಾ ಜೈನ್ ಅವರ ಉಪಸ್ಥಿತಿಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಯಿತು. ಬೆಂಗಳೂರಿಗರಲ್ಲಿ ತ್ಯಾಜ್ಯವನ್ನು ಆರಿಸುವ ಸಮುದಾಯದ ಬಗ್ಗೆ ಜಾಗೃತಿ ಮತ್ತು ಸಹಾನುಭೂತಿ ಮೂಡಿಸುವುದು ಇದರ ಉದ್ದೇಶ.
ಭಾರತದ ಸಿಲಿಕಾನ್ ವ್ಯಾಲಿ ಬೆಂಗಳೂರು ಮತ್ತು 22,500 ಕ್ಕೂ ಹೆಚ್ಚು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರಿಗೆ ನೆಲೆಯೂ ಹೌದು. ಅವರು ನಗರದ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದ್ದಾರೆ. ಮರುಬಳಕೆ ಮಾಡಲಾಗದ ವಸ್ತುಗಳು ಮಾತ್ರ ಲ್ಯಾಂಡ್ ಫಿಲ್ನಲ್ಲಿ ಉಳಿಯವಂತೆ ಅವರು ನೋಡಿಕೊಳ್ಳುತ್ತಾರೆ.
Invaluable Recyclers ಬಗ್ಗೆ ಮಾತನಾಡಿದ ಬಿಬಿಸಿ ಮೀಡಿಯಾ ಆಕ್ಷನ್ನ ಕಾರ್ಯನಿರ್ವಾಹಕ ಕ್ರಿಯೇಟಿವ್ ಡೈರೆಕ್ಟರ್ ಸೋಮಾ ಕಟಿಯಾರ್, “ಸಾಂಕ್ರಾಮಿಕ ಸಂಕಷ್ಟದ ಪರಿಣಾಮ ಅಂಕಿ-ಸಂಖ್ಯೆಗಳು ಭಯಾನಕವಾಗಿವೆ. ಕೆಟ್ಟ ಸಂಭವನೀಯ ಸುದ್ದಿಗಳ ಮುನ್ನುಡಿ ಇದು! ಆದರೆ, ನಾವು ತಿಳಿದುಕೊಳ್ಳಬೇಕಾದ ಮತ್ತು ಆಚರಿಸಬೇಕಾದ ‘ಸಂತೋಷದ ಸಂಖ್ಯೆ’ ಇಲ್ಲಿದೆ – ಅಂದಾಜು 38,32,50,000 ಕಿಲೋಗ್ರಾಂ ತ್ಯಾಜ್ಯವನ್ನು ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಈಗಾಗಲೇ ತುಂಬಿರುವ ಲ್ಯಾಂಡ್ ಫಿಲ್ಗಳಿಗೆ ಸೇರದಂತೆ ತಡೆದಿದ್ದಾರೆ.
ನಾವು ಅವರನ್ನು ಸದ್ದಿಲ್ಲದೇ ಕೆಲಸ ಮಾಡುವ ಪರಿಸರವಾದಿಗಳಂತೆ ಕಾಣುತ್ತೇವೆ. ತ್ಯಾಜ್ಯ ಮರುಬಳಕೆಯ ವ್ಯಾಲ್ಯೂ ಚೇನ್ನಲ್ಲಿ ಅವರೇ ಮೊದಲಿಗರು. ಅವರು ನಗರಕ್ಕಾಗಿ ಮಾಡುವ ಈ ಅಮೂಲ್ಯವಾದ ಕೆಲಸವನ್ನು “#InvaluableRecyclers ” ಈ ಹಾಡು ಕೊಂಡಾಡುತ್ತದೆ ಮತ್ತು ಅವರಿಗೆ ಗೌರವ ಸಲ್ಲಿಸುತ್ತದೆ. ಬಿಬಿಸಿ ಮೀಡಿಯಾ ಆಕ್ಷನ್ ನಗರದ ಸರ್ಕುಲಾರ್ ಎಕಾನಮಿಯಲ್ಲಿ ಈ ಹ್ಯಾಪಿ ನಂಬರ್ ಹಾಡು ಮತ್ತು ಅಭಿಯಾನದ ಮೂಲಕ, ತ್ಯಾಜ್ಯವನ್ನು ಆರಿಸುವ ವೃತ್ತಿಗೆ ಕೌಶಲ್ಯ ಮತ್ತು ಪರಿಣತಿಯನ್ನು ತಂದು ಅವರ ಪಾತ್ರವನ್ನು ಹೈಲೈಟ್ ಮಾಡುತ್ತದೆ.
ಹ್ಯಾಪಿ ನಂಬರ್ ಹಾಡನ್ನು ಸಂಯೋಜಿಸಿದ ಸಂಗೀತಗಾರ ವಾಸು ದೀಕ್ಷಿತ್ (@dixitvasu), “ಬೆಂಗಳೂರಿನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ವಿಚಾರದಲ್ಲಿ ನಾಗರಿಕರಾದ ನಮಗೆ ಹೊಣೆಗಾರಿಕೆ ಇದೆ.ನಮ್ಮ ಪರಿಸರವನ್ನು ರಕ್ಷಿಸುವ ಅವರಿಗೆ ಅರ್ಹ ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳುವ ಹೊಣೆಗಾರಿಕೆ ಅದು. ನಾವು ಅವರಿಗೆ ನೀಡುವ ತ್ಯಾಜ್ಯ ಮರುಬಳಕೆಗೆ ಯೋಗ್ಯವಾದುದು ಎಂಬುದನ್ನು ನಾವು ಖಾತರಿಪಡಿಸಬೇಕು. ಹ್ಯಾಪಿ ನಂಬರ್ ಹಾಡು ಅವರನ್ನು ಮತ್ತು ಅವರ ಕೆಲಸವನ್ನು ಪರಿಚಯಿಸಿ ಸಂಭ್ರಮಿಸುವುದಕ್ಕೆ ನನಗೆ ಸಿಕ್ಕ ಉತ್ತಮ ಅವಕಾಶ.
ಬೆಂಗಳೂರಿಗರು ಜೊತೆಯಲ್ಲಿ ಹಾಡಿದರೆ ಮತ್ತು ತ್ಯಾಜ್ಯ ತೆಗೆಯುವವರನ್ನು ಗುರುತಿಸಿದರೆ ಆ ಕನಸು ನನಸಾದಂತೆ ಆಗುತ್ತದೆ ಎಂದು ಹೇಳಿದರು.
ಬಿಬಿಸಿ ಮೀಡಿಯಾ ಆಕ್ಷನ್ನ ಸಂಶೋಧನೆಯ ಪ್ರಕಾರ, ಬೆಂಗಳೂರಿನ ಬೀದಿಗಳಲ್ಲಿ ತ್ಯಾಜ್ಯವು ಗೋಚರಿಸುತ್ತಿದೆ. ವಾಸ್ತವದಲ್ಲಿ ಇದು ಕಳವಳಕಾರಿಯಾಗಿದ್ದರೂ, ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ವರ್ಚುವಲ್ ಆಗಿ ಹೆಚ್ಚಿನ ಜನರಿಗೆ ‘ಅಗೋಚರ’ವಾಗಿದ್ದಾರೆ ಎಂಬುದು ವ್ಯಕ್ತವಾಗಿದೆ. ಅಧ್ಯಯನ ಸಮೀಕ್ಷೆಯಲ್ಲಿ ಭಾಗವಹಿಸಿದ ಸುಮಾರು ಶೇಕಡ 55% ರಷ್ಟು ಜನ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರನ್ನು ನೋಡುವುದಕ್ಕೆ ಕೊಳಕಾಗಿ ಇರುತ್ತಾರೆ ಎಂದಿದ್ದಾರೆ.
ಶೇಕಡ 56% ರಷ್ಟು ಜನ ಕಟ್ಟಡ ಸಂಕೀರ್ಣಗಳು ಮತ್ತು ಸಮಾಜದೊಳಗೆ ಅವರ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಹೇಳಿದ್ದಾರೆ.
ಪ್ರಚಾರ ಪೂರ್ವದಲ್ಲಿ ಸಹಕರಿಸಿದ ಜನಪ್ರಿಯ ಹಾಸ್ಯ ನಿರೂಪಕಿ ಮತ್ತು ನಟಿ ಶ್ರದ್ಧಾ ಜೈನ್ (@AiyyoShraddha), “ಈ ಹ್ಯಾಪಿ ನಂಬರ್ ಹಾಡನ್ನು ಇನ್ನಷ್ಟು ಹೆಚ್ಚು ಜನರಿಗೆ ತಲುಪಿಸುವ ಅವಕಾಶ ಸಿಕ್ಕಿದ್ದು ಒಂದು ಸುಯೋಗವೆಂದು ಭಾವಿಸುತ್ತೇನೆ. ತ್ಯಾಜ್ಯ ಆಯುವವರು ಬೆಂಗಳೂರಿಗೆ ಏನು ಮಾಡುತ್ತಾರೆ ಎಂಬುದು ಮುಖ್ಯ. ಅವರ ಕೌಶಲ್ಯಪೂರ್ಣ ಕೆಲಸವು ನಮ್ಮ ಜೀವನವನ್ನು ಹಗುರಾಗಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹ್ಯಾಪಿ ನಂಬರ್ ಮತ್ತು #InvaluableReclyers ಅಭಿಯಾನವು ಅವರ ಪಾತ್ರದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಬೆಂಗಳೂರಿನ ಜನರು ಅವರ ಕೊಡುಗೆಯನ್ನು ಗುರುತಿಸಬೇಕಾಗಿದೆ” ಎಂದು ಹೇಳಿದರು.
ಪ್ಲಾಸ್ಟಿಕ್ ಅನ್ನು ಪರಿಣಾಮಕಾರಿಯಾಗಿ ಮರುಬಳಕೆ ಮಾಡುವುದಕ್ಕಾಗಿ ತ್ಯಾಜ್ಯ ಆಯುವವರು, ಗೋಡೌನ್ ಪ್ರಕಾರವನ್ನು ಅವಲಂಬಿಸಿ ಅವುಗಳನ್ನು 35 ರಿಂದ 70 ಕ್ಕೂ ಹೆಚ್ಚು ವರ್ಗಗಳಾಗಿ ವಿಂಗಡಿಸುತ್ತಾರೆ. ನೋಟ, ಸ್ಪರ್ಶದ ಧ್ವನಿ ಮತ್ತು ದಪ್ಪದ ಆಧಾರದ ಮೇಲೆ ವಸ್ತುಗಳನ್ನು ಗುರುತಿಸುವಲ್ಲಿ ಇವರು ಪರಿಣತರು ಮತ್ತು ಅನುಭವಿಗಳು.
ಗೊಬ್ಬರ ತಯಾರಿಕೆ ಮತ್ತು ನಗರ ಕೃಷಿ ಬಗ್ಗೆ ಒಲವು ಹೊಂದಿರುವ ಪರಿಸರವಾದಿ ವಾಣಿ ಮೂರ್ತಿ (@WormRani), “ನಗರದಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಪೆಟ್ ತ್ಯಾಜ್ಯವನ್ನು ಸಂಗ್ರಹಿಸಿ ಮರುಬಳಕೆ ಮಾಡುವಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರು ಪ್ರಮುಖ ಪಾತ್ರ ವಹಿಸುತ್ತಾರೆ. ನಾವು ಪ್ಲಾಸ್ಟಿಕ್ ಆಹಾರದ ಪಾತ್ರೆಗಳನ್ನು ತ್ಯಾಜ್ಯವೆಂದು ಬಿಸಾಡುವ ಮೊದಲು ತೊಳೆಯುವಂತಹ ಸರಳ ಕ್ರಮಗಳನ್ನು ಅನುಸರಿಸಿದರೆ ಸಾಕು.
ಈ ಕ್ರಮವು ಪ್ಲಾಸ್ಟಿಕ್ ಅನ್ನು ಮರುಬಳಕೆಗೆ ಯೋಗ್ಯವಾಗಿಸುತ್ತದೆ. ಮಾತ್ರವಲ್ಲದೆ ತ್ಯಾಜ್ಯ ಸಂಗ್ರಾಹಕರ ಕೆಲಸವನ್ನು ಸುಲಭ ಮಾಡುತ್ತದೆ. ಅದೇ ರೀತಿ, ಆಹಾರ ಅಥವಾ ತ್ಯಾಜ್ಯ ಕೊಳೆತು ಸಂಗ್ರಾಹಕರಿಗೆ ಆಗಬಹುದಾದ ಅಪಾಯದಿಂದ ರಕ್ಷಿಸುತ್ತದೆ. ಒಟ್ಟಾಗಿ, ನಾವು ಬಿಸಾಡುವ ತ್ಯಾಜ್ಯದ ಮೌಲ್ಯವನ್ನು ತಿಳಿದಿರುವ ಜನರನ್ನು ಆದರಿಸೋಣ ಮತ್ತು ಗೌರವಿಸೋಣ”.
ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಬಗ್ಗೆ ಇರುವ ಗ್ರಹಿಕೆಗಳನ್ನು ಬದಲಾಯಿಸುವ ನಿಟ್ಟಿನಲ್ಲಿ ಬಿಬಿಸಿ ಮೀಡಿಯಾ ಆಕ್ಷನ್ನ #Invaluables ಸಾಮಾಜಿಕ ಮಾಧ್ಯಮ ಅಭಿಯಾನದ ಎರಡನೇ ಹಂತ ಈ #InvaluableRecyclers. ಹಿಂದಿನ ಹಂತದ ಈ ಅಭಿಯಾನದ ನಂತರದಲ್ಲಿ ನಡೆದ ಸಂಶೋಧನೆಯು ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜಾಗೃತಿ ವಿಚಾರಕ್ಕೆ ಪ್ರತಿಕ್ರಿಯಿಸಿದವರಲ್ಲಿ ಸುಮಾರು ಶೇಕಡ 6% ರಷ್ಟು ಹೆಚ್ಚಳವಾಗಿದೆ.
ತ್ಯಾಜ್ಯವನ್ನು ಆರಿಸುವ ಮತ್ತು ವಿಂಗಡಿಸುವ ಮೂಲಕ ಪರಿಸರಕ್ಕೆ ಸಹಾಯ ಮಾಡುವಲ್ಲಿ ಅವರ ಕೊಡುಗೆಯ ಅರಿವು ಅವರಿಗೆ ಆಗಿದೆ.
ಬೆಂಗಳೂರಿನಲ್ಲಿ ಅನೌಪಚಾರಿಕ ತ್ಯಾಜ್ಯ ಸಂಗ್ರಾಹಕರ ಜೀವನವನ್ನು ಸುಧಾರಿಸುವುದಕ್ಕಾಗಿ ಬಿಬಿಸಿ ಮೀಡಿಯಾ ಆಕ್ಷನ್ ಮಾಡುತ್ತಿರುವ ಕೆಲಸವು ಎಚ್&ಎಂ ಫೌಂಡೇಶನ್ ಅನುದಾನಿತ ಸಾಮೂಹಿಕ ಶಕ್ತಿ ಉಪಕ್ರಮದ ಭಾಗವಾಗಿದೆ. ಕೇರ್ ಇಂಡಿಯಾ, ಹಸಿರು ದಳ, ಲೇಬರ್ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ ಮತ್ತು ವಾಟರ್ಏಡ್, ಜೊತೆಗೆ ದಿ ನಡ್ಜ್ ಫೌಂಡೇಶನ್ ಮಧ್ಯಸ್ಥಿಕೆಗೆ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತ ಈ ಸಹಯೋಗದ ಪಾಲುದಾರಿಕೆ ಹೊಂದಿವೆ.
ಬಿಬಿಸಿ ಮೀಡಿಯಾ ಆಕ್ಷನ್ನ ಕಿರುಪರಿಚಯ
ಬಿಬಿಸಿ ಮೀಡಿಯಾ ಆಕ್ಷನ್ ಎಂಬುದು ಬಿಬಿಸಿ ಅಂತಾರಾಷ್ಟ್ರೀಯ ಚಾರಿಟಿಯಾಗಿದೆ. ನಾವು ಮಾಧ್ಯಮ ಮತ್ತು ಸಂವಹನವಿರುವುದು ಒಳಿತಿಗಾಗಿ ಎಂದು ನಂಬುತ್ತೇವೆ. ಪ್ರಪಂಚದ ಕೆಲವು ಬಡ ಮತ್ತು ಅತ್ಯಂತ ದುರ್ಬಲ ದೇಶಗಳಲ್ಲಿ ನಾವು ಪ್ರತಿ ವರ್ಷ 100 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ತಲುಪುತ್ತೇವೆ. ನಮ್ಮ ಯೋಜನೆಗಳು ಮತ್ತು ಕಾರ್ಯಕ್ರಮಗಳು ಜೀವಗಳನ್ನು ಉಳಿಸುತ್ತವೆ ಹಾಗೂ ಜೀವನೋಪಾಯವನ್ನು ರಕ್ಷಿಸುತ್ತವೆ. ಅದೇ ರೀತಿ ತಪ್ಪು ಮಾಹಿತಿಯನ್ನು ನಿವಾರಿಸುತ್ತವೆ. ಪೂರ್ವಾಗ್ರಹಗಳಿಗೆ ಸವಾಲೊಡ್ಡಿ ಪ್ರಜಾಪ್ರಭುತ್ವಕ್ಕೆ ಬಲ ತುಂಬುತ್ತೇವೆ ಮಾನವ-ಕೇಂದ್ರಿತ ವಿನ್ಯಾಸ ವಿಧಾನವನ್ನು ಬಳಸಿಕೊಂಡು ಮಾಡುವ ನಮ್ಮ ಕೆಲಸವು ಪುರಾವೆಗಳು ಮತ್ತು ಒಳನೋಟಗಳಿಂದ ಕೂಡಿಕೊಂಡಿದೆ.
ಸಾಮಾಜಿಕ ಮತ್ತು ನಡವಳಿಕೆಯ ಬದಲಾವಣೆಯನ್ನು ತರುವುದಕ್ಕಾಗಿ ಪ್ರಭಾವ-ಪರೀಕ್ಷಿತ, ಸ್ಕೇಲೆಬಲ್, ದೊಡ್ಡ ಆಲೋಚನೆಗಳನ್ನು ನಿಯಂತ್ರಿಸುತ್ತ ಮುನ್ನಡೆಯುತ್ತೇವೆ. ಭಾರತದಲ್ಲಿ ಕಳೆದ ಎರಡು ದಶಕಗಳಲ್ಲಿ, ನಾವು ಆರೋಗ್ಯ (ಎಚ್ಐವಿ ತಡೆಗಟ್ಟುವಿಕೆ, ಕ್ಷಯರೋಗ, ರೋಗನಿರ್ಣಯ ಮತ್ತು ಚಿಕಿತ್ಸೆ, ಸಂತಾನೋತ್ಪತ್ತಿ, ತಾಯಿಯ, ನವಜಾತ ಶಿಶುಗಳು ಮತ್ತು ಮಕ್ಕಳ ಆರೋಗ್ಯ), ನೈರ್ಮಲ್ಯ, ಲಿಂಗ ಸಮಾನತೆ, ಹವಾಮಾನ ಬದಲಾವಣೆ ಮತ್ತು ಜೀತ ತಡೆಗಟ್ಟುವಿಕೆಯಲ್ಲಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸಿದ್ದೇವೆ.
ವೆಬ್ಸೈಟ್:https://www.bbc.co.uk/mediaaction/where-we-work/asia/india/
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ
ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.
ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
-
ದಿನದ ಸುದ್ದಿ4 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ