ದಿನದ ಸುದ್ದಿ
ಸಾಧನೆಯ ಶಿಖರ ತರಳಬಾಳು ವಿಶ್ವಗುರುವಿನ ಸಾರ್ಥಕ ಸಮಾಜಭ್ಯುದಯಕ್ಕೆ ನಾಲ್ಕು ದಶಕಗಳ ಸಂಭ್ರಮ

ಪರಮಪೂಜನೀಯ ಶ್ರೀ ಮದುಜ್ಜಯನಿ ಸದ್ದರ್ಮ ಸಿಂಹಾಸನಧೀಶ ಶ್ರೀ ತರಳಬಾಳು ಜಗದ್ಗುರು ಡಾ.ಶ್ರೀ ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಜಿಗಳವರು ಶ್ರೀ ತರಳಬಾಳು ಜಗದ್ಗುರು ಬೃಹನ್ಮಠದ ಪಟ್ಟಾಭಿಷಿಕ್ತರಾಗಿ ( 11-02-1979 ಭಾನುವಾರ ) ನಿನ್ನೆಗೆ ನಲವತ್ತು ವರ್ಷಗಳ ಸಂದ ಸುದಿನ.
ಬಸವಾದಿ ಮರುಳಸಿದ್ದರ ಬಳಿವಿಡಿದು , ಶ್ರೀ ಗುರು ಪಿತಾಮಹಾ ಶ್ರೀ ಗುರುಶಾಂತದೇಶಿಕೇಂದ್ರ ಮಹಾಸ್ವಾಮೀಜಿಗಳವರ ಆಶಯದ ಕಾರಣಿಕ ತೇಜಸ್ವಿಗುರುವಾಗಿ ,ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಗಳವರ ಕರಕಮಲ ಸಂಜಾತರಾಗಿ ಸಮಾಜದ ಅಭ್ಯುಧಯಕ್ಕೆ ಅಹರ್ನಿಶಿ ಕೈಕಂಕರ್ಯ ಬದ್ದರಾಗಿ ,ಕಾಯಕವೇ ಕೈಲಾಸ ಅದುವೇ ಕರ್ತವ್ಯದ ಮಹಾಉದ್ದೇಶವೆಂದು ಸಮಾಜಮುಖಿ,ರೈತಮುಖಿ,ಶರಣಮುಖಿ,ಧಾರ್ಮಮುಖಿ,ನ್ಯಾಯಮುಖಿ,ಶಿಕ್ಷಣಮುಖಿಯಾಗಿ ಸಾಧನೆಗಳ ಪರ್ವತವಾಗಿ ,ಸರಸ್ವತಿ ವರಪುತ್ರ ವಿದ್ವತ್ ಪ್ರವೀಣರಂತೆ ಅಪರೂಪದ ಗುರುರಾಜತೇಜಪುಂಜದಿ ವಿರಾಜಮಾನರಾಗಿ ನೊಂದ ಮನಗಳಿಗೆ ಬೆಂದ ಹೃದಯಗಳಿಗೆ ಬೆಳದಿಂಗಳ ನೀರ ತಾವರೆಯಂತೆ ಸುಧಾರಣೆಯ ಕಂಪನ್ನು ಪಸರಿಸುತ್ತಿರುವ ಅಸಂಖ್ಯಾತ ಶಿಷ್ಯರ ವಿಶ್ವಗುರುವಿಗೆ ಭಕ್ತಿ ಪೂರ್ವಕ ಅನಂತ ಪ್ರಣಾಮಗಳು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಇಂದು ರಾತ್ರಿ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡುಗಡೆ : ಸಾರ್ವಜನಿಕರಿಗೆ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ: ಬಳ್ಳಾರಿ ಜಿಲ್ಲೆ, ಹೂವಿನಹಡಗಲಿ ತಾಲ್ಲೂಕು, ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಪ್ರಸಕ್ತ ವಾರ್ಷಿಕ ಕಾರ್ಣಿಕೋತ್ಸವ ಜರುಗುವ ಪ್ರಯುಕ್ತ ಭದ್ರಾ ಜಲಾಶಯದಿಂದ ಫೆ.25 ರಂದು ರಾತ್ರಿ 10:30 ಕ್ಕೆ ತುಂಗಾಭದ್ರಾ ನದಿಗೆ ಅವಶ್ಯಕತೆಗೆ ಅನುಗುಣವಾಗಿ ನೀರನ್ನು ಹರಿಸಲಾಗುವುದು.
ನದಿಗೆ ನೀರು ಹರಿಸುವ ಕಾರಣ, ನದಿ ಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದಾಗಲಿ, ದನಕರುಗಳನ್ನು ನದಿಗೆ ಇಳಿಸುವುದಾಗಲೀ ಇತ್ಯಾದಿ ಚಟುವಟಿಕೆಗಾಗಿ ನದಿ ಪಾತ್ರದಲ್ಲಿ ನದಿಗೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಈ ಅವಧಿಯಲ್ಲಿ ರೈತಬಾಂಧವರು ನದಿ ದಂಡೆಯಲ್ಲಿ ಅಳವಡಿಸಿರುವ ಪಂಪ್ಸೆಟ್ಗಳಿಂದ ನೀರೆತ್ತುವುದನ್ನೂ ಸಹ ನಿಷೇಧಿಸಲಾಗಿದೆ ಎಂದು ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿ ಹಾಗೂ ಅಧೀಕ್ಷಕ ಅಭಿಯಂತರ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಕಲಚೇತನರ ವಿದ್ಯಾರ್ಥಿಗಳಿಂದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಕೆ : ಕೊನೆಯ ದಿನಾಂಕ ವಿಸ್ತರಣೆ

ಸುದ್ದಿದಿನ,ಕಲಬುರಗಿ: ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕಚೇರಿಯಿಂದ 2020-21ನೇ ಸಾಲಿಗಾಗಿ ವಿಕಲಚೇತನರ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಯಡಿ ಅರ್ಹ ವಿಕಲಚೇತನರ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು 2021ರ ಮಾರ್ಚ್ 5 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಈ ಹಿಂದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು 2021ರ ಫೆಬ್ರವರಿ 19 ರಂದು ನಿಗದಿಪಡಿಸಲಾಗಿತ್ತು, ಆದರೆ ಈಗ ಶಾಲಾ-ಕಾಲೇಜುಗಳು ತಡವಾಗಿ ಪ್ರಾರಂಭಿಸಿರುವ ಹಿನ್ನೆಲೆ ಹಾಗೂ ಈ ಯೋಜನೆಯಡಿ ಹೆಚ್ಚಿನ ಫಲಾನುಭವಿಗಳು ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಈ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ | ದಾವಣಗೆರೆ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ : ಮೇಯರ್ ಆಗಿ ಎಸ್.ಟಿ.ವೀರೇಶ್, ಉಪಮೇಯರ್ ಆಗಿ ಶಿಲ್ಪಾ ಜಯಪ್ರಕಾಶ್
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅಥವಾ ವಿಕಲಚೇತನರ ಗ್ರಾಮೀಣ ಪುನರ್ವಸತಿ ಯೋಜನೆಯಡಿ ತಾಲೂಕು ಪಂಚಾಯತ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಅಗತ್ಯ ದಾಖಲಾತಿಗಳೊಂದಿಗೆ ಕಲಬುರಗಿ ಜಿಲ್ಲಾ ವಿಕಲಚೇತನರ ಹಾಗೂ ಸಬಲೀಕರಣ ಕಚೇರಿಯಲ್ಲಿ ಸಲ್ಲಿಸಬೇಕು.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ ದೂರವಾಣಿ ಸಂಖ್ಯೆ 08472-235222, ಕಲಬುರಗಿ ತಾಲೂಕು ಪಂಚಾಯತ ಕಚೇರಿಯ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲ್ಯೂ) ಮೊಬೈಲ್ ಸಂಖ್ಯೆ 9972079714, ಅಫಜಲಪೂರ-9448808141, ಆಳಂದ-9483054495, ಜೇವರ್ಗಿ-9741875881, ಚಿತ್ತಾಪೂರ-9845204328, ಚಿಂಚೋಳಿ-9880671171, ಸೇಡಂ-9902417925 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇಂದು “ಮುದ್ರಕರ ದಿನಾಚರಣೆ” ; ಮುದ್ರಣವಿಲ್ಲದೆ ಹೋಗಿದ್ದರೆ..?

- ಸ್ವ್ಯಾನ್ ಕೃಷ್ಣಮೂರ್ತಿ,ಮುದ್ರಕರು,ಬೆಂಗಳೂರು
ಜ್ಞಾನದ ಬ್ಯಾಂಕಿನಲ್ಲಿ ಠೇವಣಿ ಇರುತ್ತಿರಲಿಲ್ಲ. ಪ್ರಪಂಚದೊಡನೆ ಸಂಪರ್ಕ ಸಲೀಸಾಗುತ್ತಿರಲಿಲ್ಲ. ಆರ್ಥಿಕ ರಾಜಕೀಯ ಸಾಂಸ್ಕೃತಿಕ ಸಂಚಲನ ಇರುತ್ತಿರಲಿಲ್ಲ. ಪತ್ರಿಕೆಗಳಲ್ಲಿ ರೋಚಕ ಸುದ್ದಿಗಳ ಅವತಾರಗಳು ಅನಾವರಣವಾಗುತ್ತಿರಲಿಲ್ಲ. ದೈನಂದಿನ ಘಟನೆಗಳು ದಾಖಲಾಗಲು ಕ್ಯೂ ನಿಲ್ಲಬೇಕಾಗುತ್ತಿತ್ತು. ಜಾಹಿರಾತು ಜಗತ್ತು ನಿಷ್ಕ್ರೀಯವಾಗಿರುತ್ತಿತ್ತು.
ಮನುಷ್ಯನಿಗೆ ನೀರು, ಗಾಳಿ, ಅಗ್ನಿ, ಆಕಾಶ, ಭೂಮಿಗಳೆಂಬ ಪಂಚಭೂತಗಳ ನಂತರದ ಸ್ಥಾನದಲ್ಲಿ 6ನೇ ಅವಶ್ಯಕತೆಯಾಗಿ ಮುದ್ರಣ ಎಂಬುದು ಇಂದಿನ ದೈನಂದಿನ ಬದುಕಿಗೆ ಅತ್ಯಂತ ಅನಿವಾರ್ಯ ಎಂದೆನಿಸುತ್ತದೆ. ಮುದ್ರಣರಹಿತ ಪ್ರಪಂಚ ಹೇಗಿರಬಹುದಿತ್ತೆಂಬುದನ್ನು ಊಹಿಸಿಕೊಂಡು ನೋಡಿದಾಗ ಮುದ್ರಣದ ಮಹತ್ವ ಅರಿವಾಗುತ್ತದೆ. ಮನುಷ್ಯ ಉಪಯೋಗಿಸುವ ಪ್ರತಿ ವಸ್ತುಗಳು ಒಂದಲ್ಲವೊಂದು ರೀತಿಯ ಮುದ್ರಣವನ್ನು ಅವಲಂಬಿಸಿರುತ್ತವೆ.
ಮುದ್ರಣದ ಮಹತ್ವ
ಶ್ರೀ ಎಂ. ಎ. ರಾಮಾನುಜಯ್ಯಂಗಾರ್ ವಿರಚಿತ ಒಂದು ಪ್ರಬಂಧದಲ್ಲಿ ಮುದ್ರಣದ ಮಹತ್ವವನ್ನು ಒಂದು ರೂಪಕದಿಂದ ಮನಂಬುಗುವಂತೆ ಬಣ್ಣಿಸಲಾಗಿದೆ.
ಲೇಖನಿಯು ಸದಾಕಾಲ ಗೋಳಾಡುತ್ತಿತ್ತಂತೆ.! “ಅಯ್ಯೋ ನನ್ನ ಜೀವಾಶ್ರಯ(ಎಂದರೆ ಹಸ್ತ ಪ್ರತಿ)ವನ್ನೇ ಮುಟ್ಟಿದರೆ ಸಾಯುವ ಗೆದ್ದಲು ಹುಳುವೂ ತಿಂದುಬಿಡುವುದು. ಬಡಿದರೆ ಚದುರುವ ನೀರು ತಾರಿಸಿಬಿಡುವುದು. ಉರುಬಿದರೆ ನಂದುವ ದೀಪವು ಸುಟ್ಟು ಬಿಡುವುದು. ನಾನು ಇಷ್ಟು ಉಪಕಾರಿ ಆದರೂ ನನ್ನ ಬಾಳು ಇಷ್ಟೇ. ನನ್ನನ್ನು ಕಾಪಾಡುವವರಿಲ್ಲ”.
ಇದನ್ನೂ ಓದಿ | ಮೌಲಾನಾ ಆಜಾದ್ ಆಂಗ್ಲ ಮಾದರಿ
ಶಾಲೆ ಅತಿಥಿ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅದನ್ನು ಕೇಳಿ ಅನುತಾಪಬಟ್ಟು ಅಚ್ಚು (ಮುದ್ರಣ) ಹೀಗೆ ಹೇಳಿತಂತೆ “ಏಕೆ ಈ ಗೋಳು ? ರಾಜನನ್ನು ಭಟರು ಕಾಪಾಡುವಂತೆ ನಿನಗೆ ಸದೃಶರಾದ ಹೊಸ ಹೊಸ ಭಟರನ್ನು ಸೃಷ್ಟಿಸಿ ಕಾಪಾಡುತ್ತಿರುವೆನು. ಒಬ್ಬ ಭಟನು ಸತ್ತರೆ ಅನೇಕ ಭಟರು ನಿನಗೆ ಬೆಂಬಲವಾಗಿ ನಿಂತೇ ಇರುವರು. ಈ ಭಟರಿಂದ ಪ್ರಪಂಚವೆಲ್ಲಾ ನಿನ್ನ ರಾಜ್ಯವಾಗಿ ಆಗುವುದು. ಅವರು ಜ್ಞಾನದ ಬೆಳಕು ಬೀಳುವ ಕಡೆಯಲ್ಲೆಲ್ಲ ನಿನ್ನ ಪ್ರಾಬಲ್ಯವನ್ನು ಹೊಗಳುತ್ತಾ ಬರುವರು. ನಿನ್ನ ಆಜ್ಞೆಗೆ ಎಲ್ಲೂ ತಡೆಯಿಲ್ಲದಂತೆ ಆಗುವುದು”.
ಮುದ್ರಣ ಕ್ಷೇತ್ರಕ್ಕೆ ಮಹತ್ವದ ತಿರುವನ್ನು ಕೊಟ್ಟು, ಮುದ್ರಣ ಲೋಕದ ಪಿತಾಮಹ ವೆನಿಸಿಕೊಂಡ *ಗುಟೆನ್ ಬರ್ಗ್* ಅವರ ಸ್ಮರಣಾರ್ಥ ವಿಶ್ವದ ಅತಿದೊಡ್ಡ ಮುದ್ರಣಕಾರರ ಸಂಘವಾದ ‘ ಆಲ್ ಇಂಡಿಯಾ ಫೆಡರೇಷನ್ ಆಫ್ ಮಾಸ್ಟರ್ ಪ್ರಿಂಟರ್ಸ್ ‘(All India Federation of Master Printers – AIFMP) ಸಂಸ್ಥೆಯು ಫೆಬ್ರವರಿ 24 ರಂದು ‘ಮುದ್ರಕರ ದಿನ’ ವೆಂದು ಘೋಷಿಸಿ ಪ್ರತಿವರ್ಷ ಅಂದು ಮುದ್ರಕರ ದಿನಾಚರಣೆಯನ್ನು ಆಚರಿಸುತ್ತಾ ಬರುತ್ತಿದೆ.
ಮುದ್ರಣಲೋಕದ ಪಿತಾಮಹಾ ‘ಗುಟೆನ್ ಬರ್ಗ್’
1454ರಲ್ಲಿ ಜರ್ಮನಿಯ ಅಕ್ಕಸಾಲಿಗ (ಗೋಲ್ಡ್ ಸ್ಮಿತ್) ಗುಟೆನ್ಬರ್ಗ್ ಎಂಬಾತ ನಿರಂತರ ಅಧ್ಯಯನ, ಪ್ರಾತ್ಯಕ್ಷಿಕೆ ಮಾಡಿ ಕಡಿಮೆ ಸಮಯದಲ್ಲಿ ಹೆಚ್ಚಿನ ಉತ್ಪತ್ತಿಯನ್ನು ಮಾಡಲು ಅನುಕೂಲವಾಗುವಂತೆ ಬಿಡಿ ಅಕ್ಷರಗಳ ಮೊಳೆಗಳನ್ನು (Moveable Types) ಹಾಗೂ ಆ ಮೊಳೆಗಳಿಗೆ ಹೊಂದುವಂತಹ ಮುದ್ರಣ ಯಂತ್ರವನ್ನು ಕಂಡುಹಿಡಿದು ಮುದ್ರಣ ಲೋಕದ ಪಿತಾಮಹಾ ಎನ್ನಿಸಿಕೊಂಡರು.
1456ರಲ್ಲಿ ಗುಟೆನ್ಬರ್ಗ್ ಮೊಟ್ಟಮೊದಲ ಬೈಬಲನ್ನು ಮುದ್ರಿಸಿದರು. ಮುಂದೆ ಮುದ್ರಣ ಕಲೆಯು ಫ್ರಾನ್ಸ್, ಇಟಲಿ, ಪೋರ್ಚುಗಲ್, ಹಾಲೆಂಡ್, ಇಂಗ್ಲೆಂಡ್ ಮುಂತಾದ ರಾಷ್ಟ್ರಗಳಲ್ಲಿ ಅತ್ಯಂತ ಭರದಿಂದ ಹಬ್ಬಿತು.
ಅಲ್ಲಿಯವರೆಗೆ ಕೇವಲ ರಾಜ ಮಹಾರಾಜರ ಮತ್ತು ಸಿರಿವಂತರ ಸ್ವತ್ತಾಗಿದ್ದ ಜ್ಞಾನಾರ್ಜನೆಯೂ, ಗ್ರಂಥರಚನೆಯೂ ಮುಂದೆ ಸಾರ್ವತ್ರಿಕವಾಗಿ ಜನಸಾಮಾನ್ಯರಿಗೂ ದೊರೆಯುವಂತಾಯಿತು. ಅಲ್ಲಿಂದ ಪ್ರಾರಂಭವಾದ ಮುದ್ರಣ ಕಲೆಯ ನವನವೀನ ಆವಿಷ್ಕಾರಗಳು ಒಂದರ ಮೇಲೊಂದು ಎಂಬಂತೆ ಸೃಷ್ಟಿಯಾದವು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ಅಂತರಂಗ5 days ago
‘ಪ್ರೀತಿಯಲ್ಲಿ ಗೆದ್ದವ ಚುನಾವಣೆಯಲ್ಲಿ ಗೆದ್ದು ಗದ್ದುಗೆಯೇರಿದ’..!
-
ದಿನದ ಸುದ್ದಿ5 days ago
ಬಡವರನ್ನು ಸಬಲೀಕರಣಗೊಳಿಸಲು ಉಚಿತ ಅನಿಲ ಸಂಪರ್ಕ ನೀಡಿದ್ದೇವೆ : ಪ್ರಧಾನಿ ಮೋದಿ
-
ಭಾವ ಭೈರಾಗಿ5 days ago
ಕರುಣಾಳು ಅವನು, ಅವನು ನನ್ನವನು..!
-
ದಿನದ ಸುದ್ದಿ5 days ago
ದಿಶಾ ಕೇಸ್ | ನನ್ನ ಆತ್ಮಸಾಕ್ಷಿಯನ್ನು ದಾಖಲೆ ಸಹಿತ ಒಪ್ಪಿಸಿ..! ಮೂರು ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದ ನ್ಯಾಯಾಧೀಶರು..!
-
ಲೈಫ್ ಸ್ಟೈಲ್4 days ago
ಮೂತ್ರದಲ್ಲಿನ ಸಕ್ಕರೆ ಅಂಶ ನಿಯಂತ್ರಣದಲ್ಲಿಡುತ್ತೆ ಈ ಸೀಮೆ ಬದನೆಕಾಯಿ..!
-
ಕ್ರೀಡೆ4 days ago
ಭಾರತ ಟಿ20ಐ ಪಂದ್ಯಾವಳಿಗೆ ತಂಡ ಪ್ರಕಟಿಸಿದ ಬಿಸಿಸಿಐ
-
ಲೈಫ್ ಸ್ಟೈಲ್4 days ago
ರೆಸಿಪಿ | ಮನೇಲೇ ಮಾಡಿ ಜಿಲೇಬಿ
-
ದಿನದ ಸುದ್ದಿ5 days ago
ಫೆ.23 ರಂದು ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕುರಿತು ಕಾರ್ಯಾಗಾರ