Connect with us

ದಿನದ ಸುದ್ದಿ

ಇಸ್ರೇಲಿ ಬೇಹುಗಾರಿಕೆ ಸಾಧನವನ್ನು ಬಳಸಿದವರು ಯಾರು?

Published

on

ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ತನ್ನ ಖಾತೆಗಳ ಹ್ಯಾಕ್ ಆಗಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.. ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು.

  • ಪೀಪಲ್ಸ್ ಡೆಮಾಕ್ರಸಿ ಸಂಪಾದಕೀಯ, ನವಂಬರ್ 10

ವಿವಿಧ ಕಾರ್ಯಕರ್ತರು, ಪತ್ರಕರ್ತರು ಮತ್ತು ರಾಜಕಾರಣಿಗಳ ವಾಟ್ಸ್ ಆಪ್ ಖಾತೆಗಳನ್ನು ಇಸ್ರೇಲಿ ಕಂಪನಿ ಪೆಗಸಸ್ ನ ಬೇಹುಗಾರಿಕೆ ಸಾಧನವನ್ನು ಬಳಸಿ ಸೀಳಿರುವ(ಹ್ಯಾಕ್ ಮಾಡಿರುವ) ಸುದ್ದಿ ಕಳವಳಕಾರಿ ಮತ್ತು ಖಂಡನೀಯ. ಇದು ಹೇಗಾಯಿತು, ಖಾಸಗಿತ್ವದ ಉಲ್ಲಂಘನೆ ಹೇಗೆ ಸಂಭವಿಸಿತು, ಇದಕ್ಕೆ ಯಾರು ಹೊಣೆ ಎಂಬುದಕ್ಕೆ ವಿವರಣೆ ನೀಡಬೇಕಾಗಿದೆ. ಸರಕಾರ ಯಾವುದೇ ವಿವರಣೆಯನ್ನು ಕೊಟ್ಟಿಲ್ಲವಾದರೂ, ಇದರಲ್ಲಿ, ಈ ಬೇಹುಗಾರಿಕೆಯಲ್ಲಿ ಸರಕಾರದ ಶಾಮೀಲಿನತ್ತ ಬೊಟ್ಟು ಮಾಡುವ ಹೆಚ್ಚಿನ ತಥ್ಯಗಳು ಸಾರ್ವಜನಿಕಗೊಂಡಿವೆ.

ಸರಕಾರ, ಈ ಸುದ್ದಿ ಹೊರಬಂದಾಗ, ಹಲವಾರು ಭಾರತೀಯರ ಖಾಸಗಿತ್ವದ ಉಲ್ಲಂಘನೆಯ ಬಗ್ಗೆ ವಾಟ್ಸ್ ಆಪ್ ಯಾವುದೇ ಸರಕಾರೀ ಸಂಸ್ಥೆಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎಂದು ಹೇಳಿತು. ಆದರೆ ತಾವು ದಸ್ತಾವೇಜುಗಳೊಂದಿಗೆ ಈ ಮಾಹಿತಿಯನ್ನು ನೀಡಿ, ವಾಸ್ತವವಾಗಿ, ಖಾಸಗಿತ್ವದ ಉಲ್ಲಂಘನೆಯಾಗಬಹುದು ಎಂದು ಭಾರತ ಸರಕಾರವನ್ನು ಎಚ್ಚರಿಸಿದ್ದೆವು ಎಂದು ವಾಟ್ಸ್ ಆಪ್ ನವರು ಪ್ರತ್ಯುತ್ತರ ನೀಡಿದರು. ಮೇ ತಿಂಗಳಲ್ಲಿ ಮತ್ತು ನಂತರ ಮತ್ತೆ ಸಪ್ಟಂಬರಿನಲ್ಲಿ ಈ ಎಚ್ಚರಿಕೆಯನ್ನು ನೀಡಿರುವುದಾಗಿ ಅವರು ಹೇಳಿದ್ದಾರೆ. ಸರಕಾರದ ಹೇಳಿಕೆಗೆ ಉತ್ತರವಾಗಿ ವಾಟ್ಸ್ ಆಪ್ ಮೇ ತಿಂಗಳಲ್ಲಿ ಕಳಿಸಿದ ಟಿಪ್ಪಣಿ ಮತ್ತು ಸಪ್ಟಂಬರ್‌ನಲ್ಲಿ ಕಳಿಸಿದ ಪತ್ರವನ್ನು ಲಗತ್ತಿಸಿತ್ತು.

ನಂತರ, ಸರಕಾರ ಇದನ್ನು ದೃಢ ಪಡಿಸಿತು, 121 ಭಾರತೀಯರನ್ನು ಪೆಗಸಸ್ ಬೇಹುಗಾರಿಕೆ ಸಾಧನ ಗುರಿ ಮಾಡಿರುವ ಮಾಹಿತಿಯನ್ನು ಸಪ್ಟಂಬರ್ ನಲ್ಲಿ ಪಡೆದಿರುವುದಾಗಿ ಹೇಳಿತು, ಆದರೆ ಮಾಹಿತಿ ತಂತ್ರಜ್ಞಾನ ಮಂತ್ರಾಲಯದ ಪ್ರಕಾರ ಈ ಪತ್ರ ಬಹಳ ಅಸ್ಪಷ್ಟವಾಗಿತ್ತು.

ವಾಟ್ಸ್ ಆಪ್ ಸರಕಾರದೊಂದಿಗೆ ಹಂಚಿಕೊಂಡ ಮಾಹಿತಿಯ ವಿವರಗಳನ್ನು ನೀಡಿರುವುದು, ಈ ಬೇಹುಗಾರಿಕೆಗೆ ಗುರಿಯಾದ ಜನಗಳ ಹೆಸರುಗಳೆಲ್ಲ ಸರಕಾರ ಮತ್ತು ಅದರ ಧೋರಣೆಗಳ ಟೀಕಾಕಾರರಾಗಿರುವ ಸುಪರಿಚಿತ ಕಾರ್ಯಕರ್ತರು ಮತ್ತು ಪತ್ರಕರ್ತರದ್ದಾಗಿರುವುದು, ಈ ಬಗ್ಗೆ ತಮಗೆ ಗೊತ್ತಿರಲಿಲ್ಲ ಎಂದು ನಟಿಸುವ ಸರಕಾರದ ಅಸಮರ್ಪಕ ಮತ್ತು ಕುಂಟು ನೆವವೊಡ್ಡುವ ಪ್ರಯತ್ನಗಳು-ಇವೆಲ್ಲವೂ ಸರಕಾರವೇ ತನ್ನನ್ನು ಟೀಕಿಸುವವರ ಖಾತೆಗಳನ್ನು ಸೀಳಲು ಇಸ್ರೇಲೀ ಬೇಹುಗಾರಿಕೆ ಸಾಧನವನ್ನು ಬಳಸುವಲ್ಲಿ ಶಾಮೀಲಾಗಿದೆ ಎಂಬ ಸಂದೇಹಗಳನ್ನು ದೃಢಪಡಿಸುತ್ತವೆ. ವಾಟ್ಸ್ ಆಪ್ ಸರಕಾರಕ್ಕೆ ನೀಡಿರುವ ಹೆಸರುಗಳಲ್ಲಿ ಭೀಮ-ಕೋರೆಗಾಂವ್ ವಿಷಯದಲ್ಲಿ ಆಪಾದಿತರಾಗಿರುವವರು ಮತ್ತು ಅವರ ರಕ್ಷಣೆಗೆ ನಿಂತಿರುವ ವಕೀಲರಲ್ಲಿ ಹಲವರ ಹೆಸರುಗಳು ಇವೆ. ಆದ್ದರಿಂದ ಇವೆರಡರ ನಡುವಿನ ಸಂಬಂಧ ಸಾಕಷ್ಟು ಸ್ಪಷ್ಟವಾಗಿದೆ.

ತನ್ನ ಬೇಹುಗಾರಿಕೆ ತಂತ್ರಜ್ಞಾನವನ್ನು ಸರಕಾರಗಳಿಗೆ ಮತ್ತು ಸರಕಾರೀ ಏಜೆನ್ಸಿಗಳಿಗೆ ಮಾತ್ರ ನೀಡುವುದು ಎಂದು ಅದನ್ನು ಉತ್ಪಾದಿಸಿದ ಎನ್ ಎಸ್ ಒ ಕಂಪನಿ ಹೇಳಿಕೆ ನೀಡಿದೆ. ಈ ಬೇಹುಗಾರಿಕೆ ತಂತ್ರಜ್ಞಾನ ವಿಪರೀತ ವೆಚ್ಚದಾಯಕವಾಗಿದ್ದು ಯಾವುದೇ ಖಾಸಗಿ ಸಂಸ್ಥೆಗೆ ಇದರ ವೆಚ್ಚ ಭರಿಸುವುದು ಸಾಧ್ಯವಿಲ್ಲ ಎಂಬುದನ್ನೂ ಇಲ್ಲಿ ಗಮನಿಸಬಹುದು.

ಈ ಇಡೀ ಕೊಳಕು ವ್ಯವಹಾರದ ಆಮೂಲಾಗ್ರ ತನಿಖೆ ನಡೆಯಬೇಕು. ಸರಕಾರೀ ಏಜೆನ್ಸಿಗಳು ಯಾವುದಾದರೂ ಈ ಕಾನೂನುಬಾಹಿರ ಕೃತ್ಯಕ್ಕೆ ಕಾರಣರಾಗಿದ್ದರೆ, ಅದಕ್ಕೆ ಹೊಣೆಗಾರರಾದವರನ್ನು ಶಿಕ್ಷಿಸಬೇಕು. ಈ ಪ್ರಕರಣ ಸಾಮಾನ್ಯ ನಾಗರಿಕರ ಹಕ್ಕುಗಳು ಮತ್ತು ಖಾಸಗಿತ್ವವನ್ನು ಕಾಪಾಡಿಕೊಳುವ್ಳ ಒಂದು ಸಮಗ್ರ ಮಾಹಿತಿ ರಕ್ಷಣಾ ಕಾಯ್ದೆಯನ್ನು ತರಬೇಕಾದ ತುರ್ತನ್ನು ಎತ್ತಿತೋರಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending