ದಿನದ ಸುದ್ದಿ
ಹಿಟ್ಲರ್ ಸತ್ತು ಇಂದಿಗೆ ಏಳು ದಶಕ

ಸುದ್ದಿದಿನ ವಿಶೇಷ: ಜರ್ಮನಿಯ ಸರ್ವಾಧಿಕಾರಿ ಅಡಲ್ಫ್ ಹಿಟ್ಲರ್ ಸತ್ತು ಏ.30 ಇಂದಿಗೆ 73 ವರ್ಷ. ಜನಾಂಗೀಯ ದ್ವೇಷದ ಮೂಲಕ ಜರ್ಮನಿಯನ್ನು ಆಳಿದ ಹಿಟ್ಲರ್ ಯಹೂದಿ ಸಮುದಾಯಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದ. ಅಷ್ಟೇ ಅಲ್ಲ ಇಡೀ ವಿಶ್ವವನ್ನು ಗೆಲ್ಲುವ ಕನಸು ಕಾಣುತ್ತಿದ್ದ ಹಿಟ್ಲರ್ ಜಗತ್ತಿನ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ. ಇಡೀ ಜರ್ಮನಿಯಲ್ಲಿ ಯಹೂದಿಗಳು ನರಕಯಾತನೆ ಅನುಭವಿಸಿದ್ದರು. ಜಿಲೆಟಿನ್ ಎಂಬ ಯಂತ್ರಕ್ಕೆ ಬಲಿಯಾದ ಜೀವಗಳಿಗೆ ಲೆಕ್ಕವಿರಲಿಲ್ಲ. ಇಂತಹ ಹಿಟ್ಲರ್ ಬಗೆಗೆ ಸಾವಿರಾರು ಕಥೆಗಳು ಹುಟ್ಟಿಕೊಂಡಿವೆ. ಕೆಲ ಸಿನೆಮಾಗಳಲ್ಲಿ ಕೂಡ ಅದು ಅಭಿವ್ಯಕ್ತಿಯಾಗಿದೆ.
ಭಯದ ವ್ಯಕ್ತಿ ಹಿಟ್ಲರ್
ಜಗತ್ತಿನ ನಿದ್ದೆಗೆಡಿಸಿದ್ದ ಹಿಟ್ಲರ್ ಮೂಲತಃ ಸಂಕೋಚ ಹಾಗೂ ಭಯದ ವ್ಯಕ್ತಿಯಾಗಿದ್ದನಂತೆ. ನೋಡುವುದಕ್ಕೆ ಕುಳ್ಳ ವ್ಯಕ್ತಿಯಾಗಿದ್ದ ಆತನಿಗೆ ಮೊದಲು ಜರ್ಮನಿಯ ಸೇನೆಯಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆತ ಎಷ್ಟು ಸಂಕೋಚ ಹಾಗೂ ಭಯದ ವ್ಯಕ್ತಿಯಾಗಿದ್ದ ಎಂಬುದನ್ನು ಚಾರ್ಲಿ ಚಾಪ್ಲಿನ್ ‘ದಿ ಡಿಕ್ಟೇಟರ್’ ಎಂಬ ಸಿನೆಮಾದಲ್ಲಿ ತೋರಿಸಿದ್ದಾರೆ. ಇಡೀ ಸಿನೆಮಾ ಅಡಲ್ಫ್ ಹಿಟ್ಲರ್ ನನ್ನು ಕೇಂದ್ರವಾಗಿಸಿಕೊಂಡಿದ್ದು, ಹಿಟ್ಲರ್ ನ ಸ್ವಭಾವವನ್ನು ಹಾಸ್ಯದ ಮೂಲಕ ಅನಾವರಣ ಮಾಡಲಾಗಿದೆ.
Read Also: ‘ಅತ್ಯಾಚಾರ’ ಮಾನವ ನಿರ್ಮಿತ ವಿಕೃತಿ
ಹಿಟ್ಲರ್ ಗೆ ಲೈಂಗಿಕ ಆಸಕ್ತಿ ಇರಲಿಲ್ಲ
ಹಿಟ್ಲರ್ ವೈಯಕ್ತಿಕ ಬದುಕಿನ ಬಗೆಗೆ ಹಲವು ವಿಶಿಷ್ಟ ಕತೆಗಳು ಹುಟ್ಟಿಕೊಂಡಿವೆ. ಹಿಟ್ಲರ್ ಗೆ ಲೈಂಗಿಕ ಆಸಕ್ತಿ ಇರಲಿಲ್ಲ. ಆತನಿಗೆ ಕೇವಲ ಒಂದು ವೃಷಣವಿತ್ತು, ಆತ ಸಲ್ಲಿಂಗಿಯಾಗಿದ್ದ ಎಂಬ ತರಹೇವಾರಿ ಕತೆಗಳು ಇವೆ. ಇತಂಹ ಹಿಟ್ಲರ್ ಸುಮಾರು ಎಂಟು ಮಹಿಳೆಯರೊಂದಿಗೆ ಸಖ್ಯ ಹೊಂದಿದ್ದ, ಆತ ರತಿಕ್ರೀಡೆ ಆಡುವಾಗು ಕೂಡ ಶಿಸ್ತು ಪಾಲಿಸುತ್ತಿದ್ದ. ಪೂರ್ತಿ ಬಟ್ಟೆ ಬಿಚ್ಚದೇ ಮಿಲನದಲ್ಲಿ ಭಾಗಿಯಾಗುತ್ತಿದ್ದ ಎಂದು ಹೇಳಲಾಗುತ್ತಿದೆ. ಆತ ಸಖ್ಯ ಹೊಂದಿದ್ದ ಮಹಿಳೆಯರು ಆತನಿಗಿಂದ ಅತಿ ಕಿರಿಯ ವಯಸ್ಸಿನವರು ಆಗಿರುತ್ತಿದ್ದರು ಎಂಬುದು ವಿಶೇಷ.
ಜಿಲೆಟಿನ್ ಯಂತ್ರ
ಭಯ ಹಾಗೂ ಸಂಕೋಚ ಸ್ವಭಾವ ಹೊಂದಿದ್ದ ಹಿಟ್ಲರ್ ನಲ್ಲಿ ಹಲವು ವಿಕೃತಿ ಮನೆ ಮಾಡಿದ್ದವು. ಲಕ್ಷಾಂತರ ಯಹೂದಿಗಳ ಮಾರಣ ಹೋಮ ನಡೆಸಿದ್ದ ಹಿಟ್ಲರ್ ಸಾವಿನ ಸಂಭ್ರಮ ಮಾಡಿದ್ದ. ಸುಮಾರು ಹತ್ತು ಸಾವಿರ ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಯಹೂದಿಗಳು ಜಿಲೆಟಿನ್ ಎಂಬ ಯಂತ್ರಕ್ಕೆ ಕೊರಳೊಡ್ಡಿದ್ದರು. ಆತನಿಂದ ತಪ್ಪಿಸಿಕೊಳ್ಳಲು ಯಹೂದಿಗಳು ಜರ್ಮನಿ ತೊರೆದು ಜಗತ್ತಿನ ನಾನಾ ದೇಶಗಳಿಗೆ ಪಲಾಯನ ಮಾಡಿದ್ದರು. ಇತಂಹ ಹಿಟ್ಲರ್ ಕೊನೆಗೆ ಒಂದು ದಿನ ಆತ್ಮಹತ್ಯೆಗೆ ಶರಣಾದ.

ದಿನದ ಸುದ್ದಿ
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ21 hours ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ2 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ21 hours ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ
-
ದಿನದ ಸುದ್ದಿ10 hours ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ