Connect with us

ಬಹಿರಂಗ

‘ಯೆಹೂದಿ ನರಮೇಧ 75’ : 60 ಲಕ್ಷ ಯೆಹೂದಿಗಳ ನರಮೇಧ 1933-45 ಅವಧಿಯಲ್ಲಿ ಹೇಗಾಯಿತು?

Published

on

 

  • ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು.ಇದರ ಭಾಗವಾಗಿ ಯೆಹೂದಿಯರನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ‘ಅಮಾನವೀಯ’ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

ನಾಗರಾಜ ನಂಜುಂಡಯ್ಯ

ಜನವರಿ 27 ರಂದು, ಪೊಲೆಂಡಿನಲ್ಲಿರುವ ‘ಆಶ್ವಿಟ್ಜ್’ ಯಾತನಾ ಶಿಬಿರವಾಸಿಗಳು ಸೋವಿಯೆಟ್ ಕೆಂಪು ಸೇನೆಯಿಂದ, ವಿಮೋಚನೆ ಹೊಂದಿದ ದಿನದ 75ನೇ ವಾರ್ಷಿಕೋತ್ಸವವನ್ನು ಆಚÀರಿಸಲಾಯಿತು. ಈಗ ಅದನ್ನು ‘ಅಂತರರಾಷ್ಟ್ರೀಯ ಯೆಹೂದಿ ನರಮೇಧ ನೆನಪಿನ ದಿನ” ವೆಂದು ಆಚರಿಸಲಾಗುತ್ತಿದೆ. ಸುಮಾರು 55 ರಿಂದ 60 ಲಕ್ಷ ಜನ ಈ ಯೆಹೂದಿ ನರಮೇಧದಲ್ಲಿ ಕೊಲ್ಲಲ್ಪಟ್ಟರು. ಆಶ್ವಿಟ್ಜ್ ಸಂಕೀರ್ಣದ ಯಾತನಾ ಶಿಬಿರ (ಕಾನ್ಸೆಂಟ್ರೇಶನ್ ಕ್ಯಾಂಪ್) ವೊಂದರಲ್ಲೇ ಸುಮಾರು 9.6 ಲಕ್ಷ ಜನರು, ಅದರಲ್ಲಿ ಬಹುತೇಕ ಎಲ್ಲರೂ ಯೆಹೂದಿ ಸಮುದಾಯುದವರೇ ಸಾವನ್ನಪ್ಪಿದ್ದರು ಎಂದು ದಾಖಲಾಗಿದೆ.

ಲಕ್ಷಾಂತರ ಯೆಹೂದಿಗಳನ್ನು ನಾಜಿಗಳು ‘ನಿರ್ಮೂಲನ’ (ಸಾಮಾನ್ಯವಾಗಿ ವಿನಾಶಕಾರಿ ಕೀಟಗಳಿಗೆ ಬಳಸುವ ಶಬ್ದ) ಮಾಡಿದ್ದರ ಕುರಿತು ಅರಿಯಲು, ಯೆಹೂದಿಗಳನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ಅಮಾನವೀಯ ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು.

1945ರ ಹೊತ್ತಿಗೆ ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು. ಈ ನೀತಿಗಳು ಹಂತ ಹಂತವಾಗಿ ಹೊಮ್ಮುತ್ತಾ ಹೋದಂತೆ, ಅವುಗಳ ಭೀಕರತೆ ಜರ್ಮನಿಯ ಹೊರಗೂ ಒಳಗೂ ಸ್ಪಷ್ಟವಾಗಿ ಗೋಚರಿಸಿದರೂ ಅದನ್ನು ನಿರ್ಲಕ್ಷಿಸಲಾಯಿತೆಂದೇ ಹೇಳಬೇಕು.

ನ್ಯೂರೆಂಬರ್ಗ್ ಕಾನೂನುಗಳು
ಇಂತಹ ಸರಣಿಯ ಮೊದಲ ಹಂತವೆಂದರೆ, ಎಲ್ಲಾ ಯೆಹೂದಿಗಳ ಗುರುತಿಸುವಿಕೆ ಮತ್ತು ಅವರ ನೊಂದಾಣಿ. ಇದನ್ನು ನಂತರ ಅವರ ಆಸ್ತಿಯನ್ನು ವಿವಿಧ ರೀತಿಯಲ್ಲಿ ಮುಟ್ಟು ಗೋಲು ಹಾಕಿಕೊಳ್ಳುವುದಕ್ಕೆ ಬಳಸಲಾಯಿತು. ಆ ನಂತರ ಅವರ ಪೌರತ್ವ, ಜೀವನೋಪಾಯದ ವಿಧಾನಗಳು ಮತ್ತು ಕಾನೂನುಬದ್ಧ ಪರಿಹಾರಗಳನ್ನು ತಡೆಯುವ ಕಾನೂನುಗಳನ್ನು ಅಂಗೀಕರಿಸಲಾಯಿತು.

ಈ ಎಲ್ಲಾ ಪ್ರಭುತ್ವ-ಪ್ರಾಯೋಜಿತ ಕ್ರಮಗಳ ಮೂಲಕ ಯೆಹೂದಿಯರಿಗೆ ಬೆದರಿಕೆಗಳನ್ನು ಒಡ್ಡಲಾಯಿತು, ಅವರ ಮೇಲೆ ಹಿಂಸಾಚಾರ ವೆಸಗಲಾಯಿತು. ಅವರನ್ನು ಇನ್ನಷ್ಟು ಬಡತನದತ್ತ ಮತ್ತು ಪರಕೀಯಭಾವದತ್ತ ತಳ್ಳಲಾಯಿತು. ಇವೆಲ್ಲದರ ಫಲವಾಗಿ 1933 ಒಂದು ವರ್ಷದಲ್ಲೇ ಸುಮಾರು 37 ಸಾವಿರ ಯೆಹೂದಿಯರು ಜರ್ಮನಿ ಬಿಟ್ಟು ವಲಸೆ ಹೋದರು.

“ನ್ಯೂರೆಂಬರ್ಗ್ ಕಾನೂನುಗಳು” ಎಂದು ಕುಪ್ರಸಿದ್ಧವಾದ 1935ರಲ್ಲಿ ತರಲಾದ ಕಾನೂನಿನಲ್ಲಿ ಎರಡು ಅಂಶಗಳಿದ್ದವು. ಮೊದಲನೆಯದು “ಯೆಹೂದಿ” ಯಾರೆಂದು ಪ್ರತ್ಯೇಕವಾಗಿ ಗುರುತಿಸುವುದು. ಮತ್ತೊಂದು, “ಜರ್ಮನ್ ಪೌರತ್ವದ ” ಪ್ರತ್ಯೇಕತೆಯನ್ನು ವ್ಯಾಖ್ಯಾನಿಸಿದ ರೀತಿ. ಈ ಎರಡು ಕಾನೂನುಗಳಲ್ಲಿ ಮೊದಲನೆಯದರಲ್ಲಿ, ಯೆಹೂದಿ ಯಾರೆಂದು ಸ್ಪಷ್ಟಿಕರಿಸಲಾಗಿತ್ತು. ಎರಡನೆಯದರಲ್ಲಿ ‘ಜರ್ಮನ್ ಪೌರತ್ವ’ ಯಾರಿಗೆ ಕೊಡಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.

ಮೊದಲನೆಯ ಕಾನೂನಿನಲ್ಲಿ ‘ಯೆಹೂದಿ’ ಮತ್ತು ‘ಜರ್ಮನ’ರ ನಡುವಿನ ವಿವಾಹವನ್ನು ನಿಷೇಧಿಸಲಾಯಿತು. ಜೊತೆಗೆ, ಯೆಹೂದಿಯರ ಮನೆಗಳಲ್ಲಿ 45 ವರ್ಷದೊಳಗಿನ ಜರ್ಮನ್ ಮಹಿಳೆಯರು ಕೆಲಸ ಮಾಡುವುದನ್ನು ನಿóಷೇಧಿಸಲಾಯಿತು. ಜರ್ಮನ ರ ಪೌರತ್ವವನ್ನು ‘ರಕ್ತದ’ ಮತ್ತು ‘ನಡವಳಿಕೆಯ ನಿರಂತರತೆ’ಗಳ ಮೂಲಕ ಸಾಬೀತು ಪಡಿಸಬೇಕೆಂದು ಕಾನೂನು ಹೇಳಿತು. ಪೌರತ್ವ ಹೊಂದಿದವರು ” ಕಡ್ಡಾಯವಾಗಿ ಜರ್ಮನ್ ಜನರು ಮತ್ತು ರೀಚ್ ‘ ಗೆ ಸೇವೆ ಸಲ್ಲಿಸಲು ಸಿದ್ದರಿರಬೇಕು. ಒಟ್ಟಿನಲ್ಲಿ ‘ನ್ಯೂರೆಂಬರ್ಗ್ ಕಾನೂನುಗಳು’ ಯೆಹೂದಿಯರ ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆ ಮತ್ತು ಕಳಂಕಿತತೆಯನ್ನು ಪೂರ್ಣಗೊಳಿಸಿದವು.

ಈ ಪ್ರತ್ಯೇಕತೆ ಮತ್ತು ಕಳಂಕಿತತೆಗಳು 1938 ರಲ್ಲಿ, ಕುಖ್ಯಾತ ‘ಕ್ರಿಸ್ಟಾಲ್ನಕ್ತ್’ (ಒಡೆದ ಗಾಜುಗಳ ರಾತ್ರಿ) ನಲ್ಲಿ ಪರಿಸಮಾಪ್ತಿಯಿತು. ಈ ಕಾನೂನನ್ನು ಬಳಸಿಕೊಂಡು, ಪ್ರಭುತ್ವ ಪ್ರಾಯೋಜಿತ ಹಿಂಸಾತ್ಮಕ ಕೃತ್ಯಗಳು ಮತ್ತು ಕಿರುಕುಳಗಳನ್ನು ನಡೆಸಲಾಯಿತು. ನಾಜಿ ಅರೆ ಸೈನಿಕರು, ನಾಗರಿಕರು ಒಟ್ಟಾಗಿ ಯೆಹೂದಿ ಮನೆಗಳು, ಅವರ ವ್ಯಾಪಾರ ವಹಿವಾಟುಗಳು, ಆಸ್ಪತ್ರೆಗಳು ಮತ್ತು ಅವರ ಪೂಜಾಮಂದಿರ(ಸಿನೆಗಾಗ್) ಗಳ ಮೇಲೆ ದಾಳಿ ನಡೆಸಿದರು. ಇದನ್ನು ಜರ್ಮನ್ ಆಡಳಿತ ಪೋಲಿಸಿನ ಎದುರೇ ನಡೆಸಿದ್ದು, ಅವರು ಅದಕ್ಕೆ ಮೂಕಸಾಕ್ಷಿಗಳಾಗಿದ್ದರು.

ಸತತ ‘ರಾಕ್ಷಸೀಕರಣ’
ಆನಂತರವೂ ವಲಸೆ ಹೋಗದ ಯೆಹೂದಿಗಳನ್ನು 1939ರಲ್ಲಿ ನಾಜಿ ಆಕ್ರಮಣ ನಡೆಸಿ ವಶಪಡಿಸಿಕೊಂಡ ಪೆÇೀಲೆಂಡಿನ ಕೊಳೆಗೇರಿ (ಘೆಟ್ಟೋಸ್) ಗಳಿಗೆ ಓಡಿಸಲಾಯಿತು. ಹೀಗೆ ಒಂದೇ ಸ್ಥಳದಲ್ಲಿ ಅವರನ್ನು ಕೂಡಿಹಾಕಿದ್ದು, ಮುಂದೆ 1941ರ ಹೊತ್ತಿಗೆ ನಾಜಿ ಕಾರ್ಯಕರ್ತರು ಇಡೀ ಯೆಹೂದಿ ಕುಟುಂಬಗಳನ್ನು ಸಮರ್ಥವಾಗಿ ಸುತ್ತುವರಿದು ಯಾತನಾ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಿಗೆ ಕಳಿಸುವುದನ್ನು ಸುಗಮಗೊಳಿಸಿತು.

ಈ ಇಡೀ ಅವಧಿಯಲ್ಲಿ ಯೆಹೂದಿಗಳ (ಅವರನ್ನು ರಾಕ್ಷಸರಂತೆ ಬಿಂಬಿಸುವ) ‘ರಾಕ್ಷಸಿಕರಣ’ ಸತತವಾಗಿ ಮುಂದುವರೆದಿತ್ತು. 1941 ರಲ್ಲಿಯೇ ಫೀಲ್ಡ್ ಮಾರ್ಷಲ್ ವಾಲ್ಟರ್ ವಾನ್ ರೀಚೆನೌ ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳು ಪ್ರಾಣಿಗಳೆಂದು ಪರಿಗಣಿಸುವ ‘ಕಠೋರ ಆಜ್ಞೆ’ ಹೊರಡಿಸಿದ್ದ. ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳುಪ್ರಾಣಿಗಳೆಂದು ಪರಿಗಣಿಸಿದ ಮೇಲೆ, ನಿರ್ಲಿಪ್ತ ದಕ್ಷತೆಯಿಂದ ಅವರ ನಿರ್ಮೂಲನೆಗೆ ಮುಂದಾದರು.

ಫೀಲ್ಡ್ ಮಾರ್ಷಲ್ ರೀಚೆನೌ ರವರ ಆಜ್ಞೆಯಲ್ಲಿ ‘ಕಠೋರ ಆದರೆ, ನ್ಯಾಯಯುತ ಪ್ರತಿಕಾರ” ಎಂದು ಎಚ್ಚರಿಕೆಯಿಂದ ಕೊಡಲಾದ ಸಂದೇಶ ಯೆಹೂದಿ ಗಳನ್ನು ಕೊಲ್ಲುವ ಸಂಕೇತವಾಗಿತ್ತು. ಇಂತಹುದೇ ಸಂದೇಶವನ್ನು ಇತರ ಆಜ್ಞೆಗಳಲ್ಲೂ ಕೊಡಲಾಯಿತು. ಇದು ಜರ್ಮನಿ ವಶಪಡಿಸಿಕೊಂಡ ಪೋಲೆಂಡ್ ಮತ್ತು ಸೋವಿಯೆಟ್ ಒಕ್ಕೂಟದ ಪ್ರದೇಶಗಳಲ್ಲಿ ನರಮೇಧಧ ಅತ್ಯಂತ ಕ್ರೂರವಾದ ಹಂತವಾಗಿತ್ತು.

ನಾಜಿ ‘ಕೊಲೆಗಡುಕ ದಳ’ಗಳು, ಜರ್ಮನ್ ಮಿಲಿಟರಿ ಪಡೆ ಮತ್ತು ಸ್ಥಳೀಯ ಸಹಾಯಕ ಪಡೆಗಳೊಂದಿಗೆ 13 ಲಕ್ಷ ಯೆಹೂದಿಯರನ್ನು ಸುತ್ತುವರೆದು ಸಾಮೂಹಿಕವಾಗಿ ಗುಂಡುಹೊಡೆದು ಕೊಲೆ ಮಾಡಿದರು. ಮೊದ ಮೊದಲು ಯೆಹೂದಿ ಹುಡುಗರು ಮತ್ತು ಪುರುಷರು, ಬುದ್ಧಿಜೀವಿಗಳು ಮತ್ತು ವಿರೋಧಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು (ಅವರು ಯೆಹೂದಿ ಅಲ್ಲದಿದ್ದರೂ) ವಿವಿಧ ಬೊಗಳೆ ಆಪಾದನೆಗಳ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಯಿತು. ಕ್ರಮೇಣ ಈ ಕಾನೂನುಗಳ ನೆನಪಗಳನ್ನು ಬದಿಗಿಡಲಾಯಿತು ಮತ್ತು ಹೆಣ್ಣು ಮಕ್ಕಳನ್ನು ಹೆಂಗಸರನ್ನು ಸಹ ಗುಂಡಿಕ್ಕಿ ಕೊಲ್ಲಲಾಯಿತು.

ದುರಂತವೆಂದರೆ ನಾಜಿ ‘ಕೊಲೆಗಡುಕ ದಳ’ಗಳಿಗೆ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಸಹಾಯಕ ಪಡೆಗಳು ಬೆಂಬಲ ನೀಡಿದವು. ಒಬ್ಬ ನಾಜಿ ‘ಕೊಲೆಗಡುಕ ದಳ’ದ ಸದಸ್ಯನಿಗೆ 10 ಸ್ಥಳೀಯ ಸಹಾಯಕರು ಬೆಂಬಲ ನೀಡುತ್ತಿದ್ದರು. ಆಕ್ರಮಣಕೋರ ಜರ್ಮನಿಯ ಮಿಲಿಟರಿ ಪಡೆಗಳು ಹೊಸ ಹೊಸ ಪ್ರದೇಶಗಳಿಗೆ ದಾಳಿ ಮಾಡುವಾಗ, ಯೆಹೂದಿಯವರ ಮೇಲೆ ದಾಳಿ ಮಾಡಲು ಸ್ಥಳೀಯರನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದ್ದರು.

1941 ರ ಜೂನ್ ನಲ್ಲಿ ಸೋವಿಯೆತ್ ಒಕ್ಕೂಟದ ಆಕ್ರಮಣದ ನಂತರದ 6 ತಿಂಗಳಲ್ಲಿ, ಲಾಟ್ವಿಯಾ, ಲಿಥುವೇನಿಯಾ, ಮತ್ತು ಉಕ್ರೇನ್ ನಲ್ಲಿ, 60 ಕ್ಕೂ ಹೆಚ್ಚು ಹತ್ಯಾಕಾಂಡಗಳು ನಡೆದು, ಸುಮಾರು 24,000 ಯೆಹೂದಿ ಜೀವಗಳನ್ನು ಬಲಿ ಪಡೆದವು. ‘ನಾಜಿ ಕೊಲೆಗಡುಕ ದಳ’ಗಳÀ ಅತ್ಯಂತ ಕುಖ್ಯಾತ ನರಮೇಧಗಳಲ್ಲಿ ಒಂದು ಕೀವ್ ಬಳಿಯ ಬಾಬಿಯಾರ್ ನಲ್ಲಿ ನಡೆಯಿತು. ಅಲ್ಲಿ 33 ಸಾವಿರಕ್ಕೂ ಹೆಚ್ಚು ಯೆಹೂದಿಗಳನ್ನು ಕೊಲ್ಲಲಾಯಿತು. ಹಾಗೆಯೇ, 1941 ರ ನವೆಂಬರ್ ಮತ್ತು ಡಿಸೆಂಬರ್ ನ ಎರಡು ದಿನಗಳಲ್ಲಿ, ರಿಗಾ ಬಳಿಯ ರುಂಬುಲಾ ದಲ್ಲಿ ಸುಮಾರು 25 ಸಾವಿರ ಯೆಹೂದಿಗಳನ್ನು ಬಲಿ ತೆಗೆದು ಕೊಳ್ಳಲಾಗಿದೆ. ಆದಾಗ್ಯೂ, ಈ ಸಾಮೂಹಿಕ ಕೊಲೆಗಳು ಅಸಮರ್ಪಕ ಮತ್ತು ದುಬಾರಿಯಾಗಿದ್ದವು. ಇದು ಸೈನಿಕರ ಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಮಿಲಿಟರಿ ಕಮಾಂಡರುಗಳು ದೂರುತ್ತಿದ್ದರು.

ಈ ಹಿನ್ನೆಲೆಯಲ್ಲಿ ಜನವರಿ 1942ರಲ್ಲಿ ಯೆಹೂದಿಗಳ ‘ಸಮಸ್ಯೆ’ಯ ‘ಅಂತಿಮ ಪರಿಹಾರ’ದ ಯೋಜನೆ ರೂಪಿಸಲಾಯಿತು. ಸಾಧ್ಯವಿರುವ (ವಿಶೇಷವಾಗಿ ಯುರೋಪಿನ) ಎಲ್ಲಾ ಯೆಹೂದಿಯರನ್ನು ನಿರ್ಮೂಲನ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೆಹೂದಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದ್ದು ಸಾಮೂಹಿಕ ಗುಂಡೇಟು ‘ದಕ್ಷ’ ವಿಧಾನವಲ್ಲ ಎಂದು ನಾಜಿUಳು ಪರಿಗಣಿಸಿದರು.

ಆದ್ದರಿಂದ ನರಮೇಧವನ್ನು ದೊಡ್ಡ ಪ್ರಮಾಣದ ‘ಕೈಗಾರಿಕೀಕರಣ’ದ ವಿಧಾನ ಬಳಸಿ ಮಾಡುವುದು ‘ಅಂತಿಮ ಪರಿಹಾರ’ದ ಯೋಜನೆಯ ಭಾಗವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಕೊಲ್ಲುವ ‘ಗ್ಯಾಸ್ ಕೋಣೆ’ಗಳನ್ನು ಹೊಂದಿದ್ದ ಜರ್ಮನಿಯ ಆಶ್ವಿಟ್ಝ್ ಯಾತನಾ ಶಿಬಿರವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ‘ಗ್ಯಾಸ್ ಕೋಣೆ’ಗಳು ಸ್ನಾನದ ಕೋಣೆಯ ಹಾಗೆ ಕಾಣುತ್ತಿತ್ತು. ಶಿಬಿರವಾಸಿಗಳನ್ನು ಸರದಿಯಲ್ಲಿ ಸ್ನಾನಕ್ಕೆಂದು ಕಳಿಸಿ ಸೈನೈಡ್ ವಿಷ ಗ್ಯಾಸ್ ಬಿಟ್ಟು ಅವರನ್ನು ಕೊಲ್ಲಲಾಗುತ್ತಿತ್ತು. ಕೆಲವು ನಿಮಿಷಗಳ ಭೀಕರ ಯಾತನೆಯ ನಂತರ ಅವರ ಹೆಣ ಬೀಳುತ್ತಿತ್ತು. ಈ ಯಾತನಾ ಶಿಬಿರಕ್ಕೆ ರೈಲುಗಳಲ್ಲಿ ಸಾಮಾಹಿಕವಾಗಿ ಕಳಿಸಲಾದ 13 ಲಕ್ಷ ಯೆಹೂದಿಯರಲ್ಲಿ 11 ಲಕ್ಷ ಬಲಿಯಾದರು.

ಹೆಚ್ಚಿನವರು ‘ಗ್ಯಾಸ್ ಕೋಣೆ’ಗಳಲ್ಲಿ ಬಲಿಯಾದರು. ಉಳಿದವರು ಹಸಿವಿಗೆ, ಹಸಿವಿನಿಂದ ಉಂಟಾದ ನಿಶ್ಶಕ್ತಿಗೆ, ರೋಗಗಳಿಗೆ ಬಲಿಯಾದರು. ‘ಗ್ಯಾಸ್ ಕೋಣೆ’ಗಳ ಹೆಣಗಳ ಬೆಲೆಬಾಳುವ ವಸ್ತುಗಳನ್ನು ಕಿತ್ತು ಹಾಕಲಾಗುತ್ತಿತ್ತು. ಮಹಿಳೆಯರ ಕೂದಲು ಕತ್ತರಿಸಲಾಗುತ್ತಿತ್ತು. ಚಿನ್ನದ ಹಲ್ಲುಗಳನ್ನು ದಂತವೈದ್ಯರುಗಳು ಚಿನ್ನವನ್ನು ಪ್ರತ್ಯೇಕಿಸುತ್ತಿದ್ದರು.

1944ರ ವರೆಗೆ ಈ ರೀತಿಯಲ್ಲಿ 10-12 ಕೆ.ಜಿ ಚಿನ್ನ ಸಂಗ್ರಹಿಸಲಾಗಿತ್ತು ಎಂದು ದಾಖಲಾಗಿದೆ.
ಯೆಹೂದಿಯರ ಹೆಣಗಳನ್ನೂ ಸಹ ಪೂರ್ಣವಾಗಿ ಈ ರೀತಿ ‘ಅಮಾನವೀಯ’ಗೊಳಿಸಲಾಗಿತ್ತು. ನಾಜಿ ಸೈನ್ಯವನ್ನು ಸೋವಿಯೆಟ್ ಕೆಂಪು ಸೈನ್ಯ ಸೋಲಿಸಿ ಆಶ್ವಿಟ್ಝ್ ತಲುಪಿ ಅಲ್ಲಿರುವ ಶಿಬಿರವಾಸಿಗಳನ್ನು ಬಿಡುಗಡೆ ಮಾಡದಿದ್ದರೆ ಎಷ್ಟು ಕಾಲ ಈ ನರಮೇಧ ಮುಂದುವರೆಯುತ್ತಿತ್ತೋ ಗೊತ್ತಿಲ್ಲ.

ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಅದಕ್ಕಾಗಿ ಈ ವಾರ್ಷಿಕವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಹಿಟ್ಲರನ ಸಂತಾನ ಕೊನೆಗೊಂಡಿಲ್ಲ. ಬದಲಾಗಿ ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶ ಸೇರಿದಂತೆ ಇಡೀ ಜಗತ್ತಿನಲ್ಲಿ ಬೆಳೆಯುತ್ತಿದೆ. ಅವರು ಈ ಚರಿತ್ರೆಯನ್ನು ಅರಗಿಸಿಕೊಂಡು ಅದನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಡೆಯುವತ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

Mysuru Dasara Elephants: ದಸರಾ ಗಜಪಡೆಯ ತೂಕ ಪರೀಕ್ಷೆ: ಶ್ರೀಕಂಠ ಭಾರೀ ಗಜ, ಏಕಲವ್ಯಕ್ಕೆ 2ನೇ ಸ್ಥಾನ; ಅಂಬಾರಿ ಆನೆ ಆಯ್ಕೆ ಇನ್ನೂ ಬಾಕಿ

Published

on

mysuru-dasara-elephants-srikanta-5790-kg-ekalavya-elephant-weight
Mysuru Dasara Elephants: 5,790 ಕೆಜಿ ತೂಕದ ಶ್ರೀಕಂಠ ನಂಬರ್ 1; ಗಜಪಡೆಯ ಆನೆಗಳ ತೂಕ ಎಷ್ಟು?

ಸುದ್ದಿದಿನ,ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಸಿದ್ಧತೆಗಳು ಆರಂಭವಾಗಿದ್ದು, ಮೊದಲ ಹಂತದಲ್ಲಿ ಆಗಮಿಸಿರುವ 9 ಆನೆಗಳಿಗೆ ಸಾಂಪ್ರದಾಯಿಕ ತೂಕ ಪರೀಕ್ಷೆ ನಡೆಸಲಾಗಿದೆ. ಈ ಬಾರಿ ಮತ್ತಿಗೋಡು ಶಿಬಿರದ 57 ವರ್ಷದ ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಗಜಪಡೆಯಲ್ಲೇ ಅತ್ಯಂತ ಭಾರವಾದ ಆನೆಯಾಗಿ ಮೊದಲ ಸ್ಥಾನ ಪಡೆದುಕೊಂಡಿದ್ದಾನೆ. ಭೀಮನಕಟ್ಟೆ ಶಿಬಿರದ 41 ವರ್ಷದ ಏಕಲವ್ಯ 5,600 ಕೆಜಿ ತೂಗಿ ಎರಡನೇ ಸ್ಥಾನದಲ್ಲಿದ್ದಾನೆ.

ನಗರದ ಧನ್ವಂತರಿ ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್ ವೇ ಬ್ರಿಡ್ಜ್‌ನಲ್ಲಿ ಭಾನುವಾರ ಬೆಳಗ್ಗೆ ಎಲ್ಲ 9 ಆನೆಗಳ ತೂಕ ಪರೀಕ್ಷೆ ನಡೆಸಲಾಯಿತು. ಕಳೆದ ವರ್ಷ ಭೀಮ ಮತ್ತು ಅಭಿಮನ್ಯು ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿದ್ದರು. ಆದರೆ ಈ ಬಾರಿ ಇವರಿಬ್ಬರನ್ನೂ ದಸರಾಗೆ ಕರೆತಂದಿಲ್ಲ. ಹೀಗಾಗಿ ಶ್ರೀಕಂಠನ ತೂಕವೇ ಈ ವರ್ಷದ ಗಜಪಡೆಯ ಗಮನ ಸೆಳೆದಿದೆ.

ಹೈಲೈಟ್ಸ್: 57 ವರ್ಷದ ಶ್ರೀಕಂಠನೇ ಗಜಪಡೆಯ ತೂಕದ ಬಾದ್‌ಷಾ

  • ಶ್ರೀಕಂಠ 5,790 ಕೆಜಿ ತೂಕದೊಂದಿಗೆ ಮೊದಲ ಸ್ಥಾನ
  • ಏಕಲವ್ಯ 5,600 ಕೆಜಿ ತೂಕದೊಂದಿಗೆ ಎರಡನೇ ಸ್ಥಾನ
  • ಮೊದಲ ಹಂತದಲ್ಲಿ ಒಟ್ಟು 9 ಆನೆಗಳಿಗೆ ತೂಕ ಪರೀಕ್ಷೆ
  • ಆನೆಗಳ ತೂಕದ ಆಧಾರದ ಮೇಲೆ ಆಹಾರ ಮತ್ತು ತಾಲೀಮು ನಿರ್ಧಾರ
  • ಅಂತಿಮ ತಾಲೀಮಿನ ಬಳಿಕವೇ ಚಿನ್ನದ ಅಂಬಾರಿ ಆನೆ ಆಯ್ಕೆ

http://Visit : www.suddidina.com

ಗಂಡಾನೆಗಳ ತೂಕ 5 ಸಾವಿರ ಕೆಜಿಗೂ ಅಧಿಕ

ಈ ಬಾರಿಯ ಮೊದಲ ಹಂತದ ಗಜಪಡೆಯ ವಿಶೇಷತೆಯೆಂದರೆ ಬಹುತೇಕ ಗಂಡಾನೆಗಳು 5 ಸಾವಿರ ಕೆಜಿಗೂ ಹೆಚ್ಚು ತೂಕ ಹೊಂದಿರುವುದು. ಆದರೆ ಆನೆಗಳ ತೂಕ ಹೆಚ್ಚಿಸುವುದೇ ಅರಣ್ಯ ಇಲಾಖೆಯ ಮುಖ್ಯ ಗುರಿಯಲ್ಲ. ಬದಲಿಗೆ ಅವುಗಳ ಆರೋಗ್ಯ, ದೈಹಿಕ ಸಾಮರ್ಥ್ಯ ಮತ್ತು ತಾಲೀಮಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ.

ಡಿಸಿಎಫ್ ಡಾ. ಐ.ಬಿ. ಪ್ರಭುಗೌಡ ಅವರ ಪ್ರಕಾರ, ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ನೀಡಬೇಕಾದ ಆಹಾರದ ಪ್ರಮಾಣ ಮತ್ತು ಪೌಷ್ಟಿಕ ಆಹಾರವನ್ನು ನಿರ್ಧರಿಸಲಾಗುತ್ತದೆ. ಪ್ರತಿಯೊಂದು ಆನೆಯ ದೈಹಿಕ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ತಾಲೀಮು ರೂಪಿಸಲಾಗುತ್ತದೆ.

9 ಆನೆಗಳ ತೂಕದ ಆಧಾರದಲ್ಲೇ ಆಹಾರ

ದಸರಾ ಗಜಪಡೆಯಲ್ಲಿರುವ ಆನೆಗಳ ಆರೋಗ್ಯ ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ. ತೂಕ ಪರೀಕ್ಷೆಯ ಮೂಲಕ ಆನೆಗಳ ದೈಹಿಕ ಸ್ಥಿತಿಯ ಬಗ್ಗೆ ಅಗತ್ಯ ಮಾಹಿತಿ ಪಡೆಯಲಾಗುತ್ತದೆ. ಅದರ ಆಧಾರದ ಮೇಲೆ ಪೌಷ್ಟಿಕ ಆಹಾರ, ದಿನನಿತ್ಯದ ಚಟುವಟಿಕೆ ಹಾಗೂ ತಾಲೀಮಿನಲ್ಲಿ ಅಗತ್ಯ ಬದಲಾವಣೆ ಮಾಡಲಾಗುತ್ತದೆ.

ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಈಗಿರುವ ಎಲ್ಲ ಆನೆಗಳೂ ಅಂಬಾರಿ ಹೊರುವ ಸಾಮರ್ಥ್ಯ ಹೊಂದಿವೆ. ಅನುಭವಿ ಆನೆಗಳಾಗಿರುವುದರಿಂದ ಅಂತಿಮ ತಾಲೀಮು ಅತ್ಯಂತ ಮಹತ್ವ ಪಡೆಯಲಿದೆ.

ಅಂಬಾರಿ ಆನೆ ಯಾರು? ಕುತೂಹಲ

ಈ ಬಾರಿಯ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಆನೆ ಯಾರು ಎಂಬ ಕುತೂಹಲ ಈಗಾಗಲೇ ಹೆಚ್ಚಾಗಿದೆ. ಕೇವಲ ತೂಕದ ಆಧಾರದ ಮೇಲೆ ಅಂಬಾರಿ ಆನೆಯನ್ನು ಆಯ್ಕೆ ಮಾಡುವುದಿಲ್ಲ. ಆನೆಯ ಆರೋಗ್ಯ, ಸಾಮರ್ಥ್ಯ, ಅನುಭವ, ತಾಲೀಮು ಮತ್ತು ಅಂತಿಮ ಹಂತದ ಪ್ರದರ್ಶನವನ್ನು ಪರಿಗಣಿಸಿ ಆಯ್ಕೆ ಮಾಡಲಾಗುತ್ತದೆ.

ಮೊದಲ ಹಂತದ ತಾಲೀಮು ಮುಗಿದ ಬಳಿಕ ನಡೆಯುವ ಅಂತಿಮ ತಾಲೀಮಿನ ನಂತರವೇ ಚಿನ್ನದ ಅಂಬಾರಿ ಹೊರುವ ಆನೆಯನ್ನು ಅಂತಿಮಗೊಳಿಸಲಾಗುತ್ತದೆ. ಹೀಗಾಗಿ ಶ್ರೀಕಂಠ ತೂಕದಲ್ಲಿ ನಂಬರ್‌ 1 ಆಗಿದ್ದರೂ, ಅಂಬಾರಿ ವಿಚಾರದಲ್ಲಿ ಅಂತಿಮ ನಿರ್ಧಾರ ಇನ್ನೂ ಬಾಕಿಯಿದೆ.

ಆನೆಗಳ ಬಳಿ ಸಾರ್ವಜನಿಕರಿಗೆ ನಿರ್ಬಂಧ

ದಸರಾ ಆನೆಗಳ ವೀಕ್ಷಣೆಗೆ ಯಾವುದೇ ಟಿಕೆಟ್‌ ವ್ಯವಸ್ಥೆ ಮಾಡಿಲ್ಲ ಎಂದು ಡಿಸಿಎಫ್ ಸ್ಪಷ್ಟಪಡಿಸಿದ್ದಾರೆ. ಸಾರ್ವಜನಿಕರು ಆನೆಗಳ ಬಳಿ ತೆರಳದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ದಸರಾ ಆನೆಗಳ ಕುರಿತು ಸುಳ್ಳು ಮಾಹಿತಿ ಹರಡಿದರೆ ಕ್ರಮ ಕೈಗೊಳ್ಳುವುದಾಗಿಯೂ ಅರಣ್ಯ ಇಲಾಖೆ ಎಚ್ಚರಿಕೆ ನೀಡಿದೆ.

“ಆನೆಗಳಿಗೆ ಹಂತ ಹಂತವಾಗಿ ತಾಲೀಮು ಮಾಡಲಾಗುತ್ತದೆ. ಸದ್ಯಕ್ಕೆ ಎಲ್ಲ ಆನೆಗಳ ಆರೋಗ್ಯ ಚೆನ್ನಾಗಿದೆ. ಅಂತಿಮ ಹಂತದ ತಾಲೀಮಿನ ಬಳಿಕ ಅಂಬಾರಿ ಹೊರುವ ಆನೆ ಆಯ್ಕೆ ಮಾಡಲಾಗುವುದು.”

                                                   – ಡಾ.ಐ.ಬಿ.ಪ್ರಭುಗೌಡ, ಡಿಸಿಎಫ್‌ 

ದಸರಾ ಗಜಪಡೆಯ ತೂಕದ ವಿವರ

  • ಶ್ರೀಕಂಠ: 5,790 ಕೆಜಿ
  • ಏಕಲವ್ಯ: 5,600 ಕೆಜಿ
  • ಧನಂಜಯ: 5,530 ಕೆಜಿ
  • ಮಹೇಂದ್ರ: 5,490 ಕೆಜಿ
  • ಪ್ರಶಾಂತ: 5,205 ಕೆಜಿ
  • ಗೋಪಿ: 5,170 ಕೆಜಿ
  • ಶ್ರೀರಾಮ: 4,820 ಕೆಜಿ
  • ಲಕ್ಷ್ಮೀ: 3,990 ಕೆಜಿ
  • ಕಾವೇರಿ: 3,075 ಕೆಜಿ
Continue Reading

ದಿನದ ಸುದ್ದಿ

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

Published

on

bengaluru-koodlugate-snn-raj-eternia-18-floor-building-demolition
ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ


ಸುದ್ದಿದಿನ,ಬೆಂಗಳೂರು:
ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ಎಸ್ಟೇಟ್‌ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್‌ಎನ್‌ಎನ್‌ ರಾಜ್‌ ಕಾರ್ಪ್‌ ಸಂಸ್ಥೆಯು ಎಚ್‌ಎಸ್‌ಆರ್‌ ಲೇಔಟ್‌ನಲ್ಲಿರುವ ತನ್ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್‌ಮೆಂಟ್‌ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.

ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.

₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ

ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ

ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್‌ಎನ್‌ಎನ್‌ ಅಪಾರ್ಟ್‌ಮೆಂಟ್‌ ನಿರ್ದೇಶಕ ಅನೂಜ್‌ ತಿಳಿಸಿದ್ದಾರೆ. ಫ್ಲ್ಯಾಟ್‌ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.

ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಾಣ

ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್‌ಮೆಂಟ್‌ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್‌ಗಳು ಮುಂಗಡವಾಗಿ ಬುಕ್‌ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.

ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

Continue Reading

ದಿನದ ಸುದ್ದಿ

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

Published

on

ಪಾಕ್‌ ಗಡಿಯಿಂದ ಡ್ರೋನ್ ಎಂಟ್ರಿ ಶಂಕೆ: ಪೂಂಚ್‌ನಲ್ಲಿ ಹೈ ಅಲರ್ಟ್, 3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಬೇಟೆ

ಸುದ್ದಿದಿನ,ಜಮ್ಮುಕಾಶ್ಮೀರ: ಜಮ್ಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಮತ್ತೆ ಡ್ರೋನ್ ಹಾರಾಟದ ಆತಂಕ ಎದುರಾಗಿದೆ. ಪೂಂಚ್ ಜಿಲ್ಲೆಯ ಮೆಂಧರ್ ಸೆಕ್ಟರ್‌ನಲ್ಲಿ ಪಾಕಿಸ್ತಾನ ಮೂಲದ್ದೆಂದು ಶಂಕಿಸಲಾದ ಡ್ರೋನ್‌ವೊಂದು ಕಾಣಿಸಿಕೊಂಡಿರುವುದು ಭದ್ರತಾ ಪಡೆಗಳನ್ನು ಅಲರ್ಟ್ ಮಾಡಿದೆ. ಗಡಿಯಾಚೆಯಿಂದ ನಡೆಯಬಹುದಾದ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ತಡೆಯಲು ಸೇನೆ ಹಾಗೂ ಭದ್ರತಾ ಪಡೆಗಳು ನಿಗಾ ಮತ್ತಷ್ಟು ಬಿಗಿಗೊಳಿಸಿವೆ.

ಹೈಲೈಟ್ಸ್

  • ಪೂಂಚ್‌ನ ಮೆಂಧರ್ ಸೆಕ್ಟರ್‌ನಲ್ಲಿ ಶಂಕಿತ ಡ್ರೋನ್ ಹಾರಾಟ
  • 🇵🇰 ಡ್ರೋನ್ ಪಾಕಿಸ್ತಾನದ ದಿಕ್ಕಿಗೆ ವಾಪಸ್ ತೆರಳಿದ ಶಂಕೆ
  • ಡ್ರೋನ್‌ನಿಂದ ವಸ್ತುಗಳನ್ನು ಕೆಳಗೆ ಹಾಕಲಾಗಿದೆಯೇ ಎಂದು ಶೋಧ
  • ಉಧಂಪುರ, ಕಥುವಾ, ರಾಜೌರಿಯಲ್ಲಿ ಜಂಟಿ ಸರ್ಚ್ ಆಪರೇಷನ್
  • ಶಸ್ತ್ರಸಜ್ಜಿತ ವ್ಯಕ್ತಿಗಳ ಮಾಹಿತಿ ಹಿನ್ನೆಲೆ ರಾಜೌರಿಯಲ್ಲೂ ಹೈ ಅಲರ್ಟ್

http://Visit : www.suddidina.com

ಬೆಹ್ರೂಟಿ ಗ್ರಾಮದ ಬಳಿ ಕಾಣಿಸಿಕೊಂಡ ಶಂಕಿತ ಡ್ರೋನ್

ಶುಕ್ರವಾರ ಸಂಜೆ ಬಾಲಕೋಟೆ ಪ್ರದೇಶದ ಬೆಹ್ರೂಟಿ ಗ್ರಾಮದ ಸಮೀಪ ಆಕಾಶದಲ್ಲಿ ಶಂಕಿತ ಡ್ರೋನ್ ಹಾರಾಟ ನಡೆಸಿರುವುದು ಸ್ಥಳೀಯರ ಹಾಗೂ ಭದ್ರತಾ ಪಡೆಗಳ ಗಮನಕ್ಕೆ ಬಂದಿದೆ. ಬಳಿಕ ಅದು ಮಂಗಲ್ನಾರ್-ದಬ್ರೋಟ್ ಪ್ರದೇಶದತ್ತ, ಅಂದರೆ ಗಡಿ ಪ್ರದೇಶದ ಸಮೀಪಕ್ಕೆ ತೆರಳಿ ಪಾಕಿಸ್ತಾನದ ದಿಕ್ಕಿನಲ್ಲಿ ವಾಪಸ್ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಡ್ರೋನ್ ಕಾಣಿಸಿಕೊಂಡ ಮಾಹಿತಿ ಸಿಗುತ್ತಿದ್ದಂತೆ LoC ವ್ಯಾಪ್ತಿಯಲ್ಲಿ ಭದ್ರತಾ ಕ್ರಮಗಳನ್ನು ತೀವ್ರಗೊಳಿಸಲಾಗಿದೆ. ಬೆಳಗ್ಗೆಯಿಂದಲೇ ಸರ್ಚ್ ಆಪರೇಷನ್ ಆರಂಭಿಸಲಾಗಿದ್ದು, ಡ್ರೋನ್ ಮೂಲಕ ಯಾವುದೇ ವಸ್ತು, ಶಸ್ತ್ರಾಸ್ತ್ರ ಅಥವಾ ಅನುಮಾನಾಸ್ಪದ ಸಾಮಗ್ರಿಗಳನ್ನು ಕೆಳಗೆ ಇಳಿಸಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ.

3 ಜಿಲ್ಲೆಗಳಲ್ಲಿ ಭದ್ರತಾ ಪಡೆಗಳ ಬೃಹತ್ ಶೋಧ

ಡ್ರೋನ್ ಆತಂಕದ ನಡುವೆಯೇ ಜಮ್ಮು-ಕಾಶ್ಮೀರದ ಉಧಂಪುರ, ಕಥುವಾ ಮತ್ತು ರಾಜೌರಿ ಜಿಲ್ಲೆಗಳ ವಿಶಾಲ ಅರಣ್ಯ ಪ್ರದೇಶಗಳಲ್ಲೂ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆ ತೀವ್ರಗೊಳಿಸಿವೆ.

ಉಧಂಪುರ-ಕಥುವಾ ಅರಣ್ಯ ಪ್ರದೇಶದ ಖುಬನ್, ನಾಗೈನ್, ಖ್ಟ್ರೈಲ್, ಗೋಡು ಫಲಾಲ್, ಪದೇತಾರ್, ಚೋರ್ ಮೊಟ್ಟು, ಕಿಯಾ, ಖೇಬಾ, ಭೇದ್, ಮಾರ್ತಾ ಹಾಗೂ ಜೋಫರ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಪೊಲೀಸರು, ಸೇನೆ ಮತ್ತು ಅರೆಸೇನಾ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸುತ್ತಿವೆ.

ರಾಜೌರಿಯಲ್ಲಿ ಶಸ್ತ್ರಸಜ್ಜಿತರ ಶಂಕೆ

ರಾಜೌರಿ ಜಿಲ್ಲೆಯ ಗೈಬಾಸ್, ಮಿಥಿಯಾನಿ, ಮೊಗ್ಲಾ ಮತ್ತು ನಾರ್ಲಾ ಪ್ರದೇಶಗಳಲ್ಲೂ ಪ್ರತ್ಯೇಕ ಸರ್ಚ್ ಆಪರೇಷನ್ ಕೈಗೊಳ್ಳಲಾಗಿದೆ. ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಸಂಚರಿಸುತ್ತಿರುವುದನ್ನು ಗ್ರಾಮಸ್ಥರು ಗಮನಿಸಿ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಹಿತಿ ಆಧರಿಸಿ ಭದ್ರತಾ ಪಡೆಗಳು ವ್ಯಾಪಕ ಶೋಧ ನಡೆಸಿದರೂ, ಇದುವರೆಗೆ ಯಾವುದೇ ಶಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗಡಿಯಲ್ಲಿ ಹೆಚ್ಚಿದ ಕಣ್ಗಾವಲು

ಡ್ರೋನ್ ಹಾರಾಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಶಂಕಿತ ವ್ಯಕ್ತಿಗಳ ಚಲನವಲನದ ಮಾಹಿತಿ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಯಾವುದೇ ಅನುಮಾನಾಸ್ಪದ ಚಟುವಟಿಕೆ ಕಂಡುಬಂದರೂ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೂ ಸೂಚನೆ ನೀಡಲಾಗಿದೆ.

ಪ್ರಸ್ತುತ ಕಾರ್ಯಾಚರಣೆಯ ಪ್ರಮುಖ ಉದ್ದೇಶ ಗಡಿಯಾಚೆಯಿಂದ ಸಂಭವಿಸಬಹುದಾದ ಒಳನುಸುಳುವಿಕೆ ಅಥವಾ ಅನುಮಾನಾಸ್ಪದ ಸಾಗಾಟವನ್ನು ತಡೆಯುವುದು ಮತ್ತು ಪ್ರದೇಶದಲ್ಲಿ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದಾಗಿದೆ.

Continue Reading

Trending