Connect with us

ಬಹಿರಂಗ

‘ಯೆಹೂದಿ ನರಮೇಧ 75’ : 60 ಲಕ್ಷ ಯೆಹೂದಿಗಳ ನರಮೇಧ 1933-45 ಅವಧಿಯಲ್ಲಿ ಹೇಗಾಯಿತು?

Published

on

 

  • ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು.ಇದರ ಭಾಗವಾಗಿ ಯೆಹೂದಿಯರನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ‘ಅಮಾನವೀಯ’ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು. ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಇಂತಹ ಕ್ರಮಗಳನ್ನು ಕೈಗೊಳ್ಳುವುದರಿಂದ ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

ನಾಗರಾಜ ನಂಜುಂಡಯ್ಯ

ಜನವರಿ 27 ರಂದು, ಪೊಲೆಂಡಿನಲ್ಲಿರುವ ‘ಆಶ್ವಿಟ್ಜ್’ ಯಾತನಾ ಶಿಬಿರವಾಸಿಗಳು ಸೋವಿಯೆಟ್ ಕೆಂಪು ಸೇನೆಯಿಂದ, ವಿಮೋಚನೆ ಹೊಂದಿದ ದಿನದ 75ನೇ ವಾರ್ಷಿಕೋತ್ಸವವನ್ನು ಆಚÀರಿಸಲಾಯಿತು. ಈಗ ಅದನ್ನು ‘ಅಂತರರಾಷ್ಟ್ರೀಯ ಯೆಹೂದಿ ನರಮೇಧ ನೆನಪಿನ ದಿನ” ವೆಂದು ಆಚರಿಸಲಾಗುತ್ತಿದೆ. ಸುಮಾರು 55 ರಿಂದ 60 ಲಕ್ಷ ಜನ ಈ ಯೆಹೂದಿ ನರಮೇಧದಲ್ಲಿ ಕೊಲ್ಲಲ್ಪಟ್ಟರು. ಆಶ್ವಿಟ್ಜ್ ಸಂಕೀರ್ಣದ ಯಾತನಾ ಶಿಬಿರ (ಕಾನ್ಸೆಂಟ್ರೇಶನ್ ಕ್ಯಾಂಪ್) ವೊಂದರಲ್ಲೇ ಸುಮಾರು 9.6 ಲಕ್ಷ ಜನರು, ಅದರಲ್ಲಿ ಬಹುತೇಕ ಎಲ್ಲರೂ ಯೆಹೂದಿ ಸಮುದಾಯುದವರೇ ಸಾವನ್ನಪ್ಪಿದ್ದರು ಎಂದು ದಾಖಲಾಗಿದೆ.

ಲಕ್ಷಾಂತರ ಯೆಹೂದಿಗಳನ್ನು ನಾಜಿಗಳು ‘ನಿರ್ಮೂಲನ’ (ಸಾಮಾನ್ಯವಾಗಿ ವಿನಾಶಕಾರಿ ಕೀಟಗಳಿಗೆ ಬಳಸುವ ಶಬ್ದ) ಮಾಡಿದ್ದರ ಕುರಿತು ಅರಿಯಲು, ಯೆಹೂದಿಗಳನ್ನು ಮೊದಲು ಹೇಗೆ ಪ್ರತ್ಯೇಕಿಸಲಾಯಿತು, ನಂತರ ಬಹಿಷ್ಕರಿಸಲಾಯಿತು ಮತ್ತು ಆನಂತರ ಅಮಾನವೀಯ ಗೊಳಿಸಲಾಯಿತು, ಕೊನೆಗೆ ಹೇಗೆ ಕೊಲ್ಲಲಾಯಿತು ಎಂಬುದನ್ನು ನೆನಪಿಸಿಕೊಳ್ಳಬೇಕು.

1945ರ ಹೊತ್ತಿಗೆ ನಾಜಿಗಳ ‘ಅಂತಿಮ ಪರಿಹಾರ’ದ (ಫೈನಲ್ ಸೊಲ್ಯುಶನ್) ಯೋಜನೆ ಯುರೋಪಿನ ಮೂರನೆಯ-ಎರಡಷ್ಟು ಯೆಹೂದಿಯರನ್ನು ನಿರ್ಮೂಲನ ಮಾಡಿತು. ಯುರೋಪಿನ ಯೆಹೂದಿಯರನ್ನು ನಿರ್ಮೂಲನ ಮಾಡಲು ಹಿಟ್ಲರ್ ನೇತೃತ್ವದ ನಾಜಿ ಪಕ್ಷವು, ಒಂದು ನಿರ್ಧಾರವನ್ನು ತೆಗೆದುಕೊಳ್ಳಲಿಲ್ಲ. ಬದಲಾಗಿ, ಅವರು ಅಧಿಕಾರಕ್ಕೆ ಬಂದ ಸಮಯದಿಂದ, ಅದಕ್ಕಾಗಿ ಸೂಕ್ತ ನೀತಿಗಳ, ಕ್ರಮಗಳ ಮತ್ತು ಕಾನೂನುಗಳ ಒಂದು ಸರಣಿಯನ್ನು ರೂಪಿಸಿ ಜಾರಿಗೊಳಿಸಿದರು. ಈ ನೀತಿಗಳು ಹಂತ ಹಂತವಾಗಿ ಹೊಮ್ಮುತ್ತಾ ಹೋದಂತೆ, ಅವುಗಳ ಭೀಕರತೆ ಜರ್ಮನಿಯ ಹೊರಗೂ ಒಳಗೂ ಸ್ಪಷ್ಟವಾಗಿ ಗೋಚರಿಸಿದರೂ ಅದನ್ನು ನಿರ್ಲಕ್ಷಿಸಲಾಯಿತೆಂದೇ ಹೇಳಬೇಕು.

ನ್ಯೂರೆಂಬರ್ಗ್ ಕಾನೂನುಗಳು
ಇಂತಹ ಸರಣಿಯ ಮೊದಲ ಹಂತವೆಂದರೆ, ಎಲ್ಲಾ ಯೆಹೂದಿಗಳ ಗುರುತಿಸುವಿಕೆ ಮತ್ತು ಅವರ ನೊಂದಾಣಿ. ಇದನ್ನು ನಂತರ ಅವರ ಆಸ್ತಿಯನ್ನು ವಿವಿಧ ರೀತಿಯಲ್ಲಿ ಮುಟ್ಟು ಗೋಲು ಹಾಕಿಕೊಳ್ಳುವುದಕ್ಕೆ ಬಳಸಲಾಯಿತು. ಆ ನಂತರ ಅವರ ಪೌರತ್ವ, ಜೀವನೋಪಾಯದ ವಿಧಾನಗಳು ಮತ್ತು ಕಾನೂನುಬದ್ಧ ಪರಿಹಾರಗಳನ್ನು ತಡೆಯುವ ಕಾನೂನುಗಳನ್ನು ಅಂಗೀಕರಿಸಲಾಯಿತು.

ಈ ಎಲ್ಲಾ ಪ್ರಭುತ್ವ-ಪ್ರಾಯೋಜಿತ ಕ್ರಮಗಳ ಮೂಲಕ ಯೆಹೂದಿಯರಿಗೆ ಬೆದರಿಕೆಗಳನ್ನು ಒಡ್ಡಲಾಯಿತು, ಅವರ ಮೇಲೆ ಹಿಂಸಾಚಾರ ವೆಸಗಲಾಯಿತು. ಅವರನ್ನು ಇನ್ನಷ್ಟು ಬಡತನದತ್ತ ಮತ್ತು ಪರಕೀಯಭಾವದತ್ತ ತಳ್ಳಲಾಯಿತು. ಇವೆಲ್ಲದರ ಫಲವಾಗಿ 1933 ಒಂದು ವರ್ಷದಲ್ಲೇ ಸುಮಾರು 37 ಸಾವಿರ ಯೆಹೂದಿಯರು ಜರ್ಮನಿ ಬಿಟ್ಟು ವಲಸೆ ಹೋದರು.

“ನ್ಯೂರೆಂಬರ್ಗ್ ಕಾನೂನುಗಳು” ಎಂದು ಕುಪ್ರಸಿದ್ಧವಾದ 1935ರಲ್ಲಿ ತರಲಾದ ಕಾನೂನಿನಲ್ಲಿ ಎರಡು ಅಂಶಗಳಿದ್ದವು. ಮೊದಲನೆಯದು “ಯೆಹೂದಿ” ಯಾರೆಂದು ಪ್ರತ್ಯೇಕವಾಗಿ ಗುರುತಿಸುವುದು. ಮತ್ತೊಂದು, “ಜರ್ಮನ್ ಪೌರತ್ವದ ” ಪ್ರತ್ಯೇಕತೆಯನ್ನು ವ್ಯಾಖ್ಯಾನಿಸಿದ ರೀತಿ. ಈ ಎರಡು ಕಾನೂನುಗಳಲ್ಲಿ ಮೊದಲನೆಯದರಲ್ಲಿ, ಯೆಹೂದಿ ಯಾರೆಂದು ಸ್ಪಷ್ಟಿಕರಿಸಲಾಗಿತ್ತು. ಎರಡನೆಯದರಲ್ಲಿ ‘ಜರ್ಮನ್ ಪೌರತ್ವ’ ಯಾರಿಗೆ ಕೊಡಲಾಗುವುದು ಎಂದು ಸ್ಪಷ್ಟಪಡಿಸಲಾಯಿತು.

ಮೊದಲನೆಯ ಕಾನೂನಿನಲ್ಲಿ ‘ಯೆಹೂದಿ’ ಮತ್ತು ‘ಜರ್ಮನ’ರ ನಡುವಿನ ವಿವಾಹವನ್ನು ನಿಷೇಧಿಸಲಾಯಿತು. ಜೊತೆಗೆ, ಯೆಹೂದಿಯರ ಮನೆಗಳಲ್ಲಿ 45 ವರ್ಷದೊಳಗಿನ ಜರ್ಮನ್ ಮಹಿಳೆಯರು ಕೆಲಸ ಮಾಡುವುದನ್ನು ನಿóಷೇಧಿಸಲಾಯಿತು. ಜರ್ಮನ ರ ಪೌರತ್ವವನ್ನು ‘ರಕ್ತದ’ ಮತ್ತು ‘ನಡವಳಿಕೆಯ ನಿರಂತರತೆ’ಗಳ ಮೂಲಕ ಸಾಬೀತು ಪಡಿಸಬೇಕೆಂದು ಕಾನೂನು ಹೇಳಿತು. ಪೌರತ್ವ ಹೊಂದಿದವರು ” ಕಡ್ಡಾಯವಾಗಿ ಜರ್ಮನ್ ಜನರು ಮತ್ತು ರೀಚ್ ‘ ಗೆ ಸೇವೆ ಸಲ್ಲಿಸಲು ಸಿದ್ದರಿರಬೇಕು. ಒಟ್ಟಿನಲ್ಲಿ ‘ನ್ಯೂರೆಂಬರ್ಗ್ ಕಾನೂನುಗಳು’ ಯೆಹೂದಿಯರ ಸಾಮಾಜಿಕ ಮತ್ತು ಆರ್ಥಿಕ ಪ್ರತ್ಯೇಕತೆ ಮತ್ತು ಕಳಂಕಿತತೆಯನ್ನು ಪೂರ್ಣಗೊಳಿಸಿದವು.

ಈ ಪ್ರತ್ಯೇಕತೆ ಮತ್ತು ಕಳಂಕಿತತೆಗಳು 1938 ರಲ್ಲಿ, ಕುಖ್ಯಾತ ‘ಕ್ರಿಸ್ಟಾಲ್ನಕ್ತ್’ (ಒಡೆದ ಗಾಜುಗಳ ರಾತ್ರಿ) ನಲ್ಲಿ ಪರಿಸಮಾಪ್ತಿಯಿತು. ಈ ಕಾನೂನನ್ನು ಬಳಸಿಕೊಂಡು, ಪ್ರಭುತ್ವ ಪ್ರಾಯೋಜಿತ ಹಿಂಸಾತ್ಮಕ ಕೃತ್ಯಗಳು ಮತ್ತು ಕಿರುಕುಳಗಳನ್ನು ನಡೆಸಲಾಯಿತು. ನಾಜಿ ಅರೆ ಸೈನಿಕರು, ನಾಗರಿಕರು ಒಟ್ಟಾಗಿ ಯೆಹೂದಿ ಮನೆಗಳು, ಅವರ ವ್ಯಾಪಾರ ವಹಿವಾಟುಗಳು, ಆಸ್ಪತ್ರೆಗಳು ಮತ್ತು ಅವರ ಪೂಜಾಮಂದಿರ(ಸಿನೆಗಾಗ್) ಗಳ ಮೇಲೆ ದಾಳಿ ನಡೆಸಿದರು. ಇದನ್ನು ಜರ್ಮನ್ ಆಡಳಿತ ಪೋಲಿಸಿನ ಎದುರೇ ನಡೆಸಿದ್ದು, ಅವರು ಅದಕ್ಕೆ ಮೂಕಸಾಕ್ಷಿಗಳಾಗಿದ್ದರು.

ಸತತ ‘ರಾಕ್ಷಸೀಕರಣ’
ಆನಂತರವೂ ವಲಸೆ ಹೋಗದ ಯೆಹೂದಿಗಳನ್ನು 1939ರಲ್ಲಿ ನಾಜಿ ಆಕ್ರಮಣ ನಡೆಸಿ ವಶಪಡಿಸಿಕೊಂಡ ಪೆÇೀಲೆಂಡಿನ ಕೊಳೆಗೇರಿ (ಘೆಟ್ಟೋಸ್) ಗಳಿಗೆ ಓಡಿಸಲಾಯಿತು. ಹೀಗೆ ಒಂದೇ ಸ್ಥಳದಲ್ಲಿ ಅವರನ್ನು ಕೂಡಿಹಾಕಿದ್ದು, ಮುಂದೆ 1941ರ ಹೊತ್ತಿಗೆ ನಾಜಿ ಕಾರ್ಯಕರ್ತರು ಇಡೀ ಯೆಹೂದಿ ಕುಟುಂಬಗಳನ್ನು ಸಮರ್ಥವಾಗಿ ಸುತ್ತುವರಿದು ಯಾತನಾ (ಕಾನ್ಸಂಟ್ರೇಶನ್ ಕ್ಯಾಂಪ್)ಗಳಿಗೆ ಕಳಿಸುವುದನ್ನು ಸುಗಮಗೊಳಿಸಿತು.

ಈ ಇಡೀ ಅವಧಿಯಲ್ಲಿ ಯೆಹೂದಿಗಳ (ಅವರನ್ನು ರಾಕ್ಷಸರಂತೆ ಬಿಂಬಿಸುವ) ‘ರಾಕ್ಷಸಿಕರಣ’ ಸತತವಾಗಿ ಮುಂದುವರೆದಿತ್ತು. 1941 ರಲ್ಲಿಯೇ ಫೀಲ್ಡ್ ಮಾರ್ಷಲ್ ವಾಲ್ಟರ್ ವಾನ್ ರೀಚೆನೌ ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳು ಪ್ರಾಣಿಗಳೆಂದು ಪರಿಗಣಿಸುವ ‘ಕಠೋರ ಆಜ್ಞೆ’ ಹೊರಡಿಸಿದ್ದ. ಯೆಹೂದಿಯರನ್ನು ಮನುಷ್ಯರೇ ಅಲ್ಲದ ಕೀಳುಪ್ರಾಣಿಗಳೆಂದು ಪರಿಗಣಿಸಿದ ಮೇಲೆ, ನಿರ್ಲಿಪ್ತ ದಕ್ಷತೆಯಿಂದ ಅವರ ನಿರ್ಮೂಲನೆಗೆ ಮುಂದಾದರು.

ಫೀಲ್ಡ್ ಮಾರ್ಷಲ್ ರೀಚೆನೌ ರವರ ಆಜ್ಞೆಯಲ್ಲಿ ‘ಕಠೋರ ಆದರೆ, ನ್ಯಾಯಯುತ ಪ್ರತಿಕಾರ” ಎಂದು ಎಚ್ಚರಿಕೆಯಿಂದ ಕೊಡಲಾದ ಸಂದೇಶ ಯೆಹೂದಿ ಗಳನ್ನು ಕೊಲ್ಲುವ ಸಂಕೇತವಾಗಿತ್ತು. ಇಂತಹುದೇ ಸಂದೇಶವನ್ನು ಇತರ ಆಜ್ಞೆಗಳಲ್ಲೂ ಕೊಡಲಾಯಿತು. ಇದು ಜರ್ಮನಿ ವಶಪಡಿಸಿಕೊಂಡ ಪೋಲೆಂಡ್ ಮತ್ತು ಸೋವಿಯೆಟ್ ಒಕ್ಕೂಟದ ಪ್ರದೇಶಗಳಲ್ಲಿ ನರಮೇಧಧ ಅತ್ಯಂತ ಕ್ರೂರವಾದ ಹಂತವಾಗಿತ್ತು.

ನಾಜಿ ‘ಕೊಲೆಗಡುಕ ದಳ’ಗಳು, ಜರ್ಮನ್ ಮಿಲಿಟರಿ ಪಡೆ ಮತ್ತು ಸ್ಥಳೀಯ ಸಹಾಯಕ ಪಡೆಗಳೊಂದಿಗೆ 13 ಲಕ್ಷ ಯೆಹೂದಿಯರನ್ನು ಸುತ್ತುವರೆದು ಸಾಮೂಹಿಕವಾಗಿ ಗುಂಡುಹೊಡೆದು ಕೊಲೆ ಮಾಡಿದರು. ಮೊದ ಮೊದಲು ಯೆಹೂದಿ ಹುಡುಗರು ಮತ್ತು ಪುರುಷರು, ಬುದ್ಧಿಜೀವಿಗಳು ಮತ್ತು ವಿರೋಧಿ ರಾಜಕೀಯ ಪಕ್ಷಗಳ ಕಾರ್ಯಕರ್ತರನ್ನು (ಅವರು ಯೆಹೂದಿ ಅಲ್ಲದಿದ್ದರೂ) ವಿವಿಧ ಬೊಗಳೆ ಆಪಾದನೆಗಳ ಮೇಲೆ ಗುಂಡಿಕ್ಕಿ ಕೊಲೆ ಮಾಡಲಾಯಿತು. ಕ್ರಮೇಣ ಈ ಕಾನೂನುಗಳ ನೆನಪಗಳನ್ನು ಬದಿಗಿಡಲಾಯಿತು ಮತ್ತು ಹೆಣ್ಣು ಮಕ್ಕಳನ್ನು ಹೆಂಗಸರನ್ನು ಸಹ ಗುಂಡಿಕ್ಕಿ ಕೊಲ್ಲಲಾಯಿತು.

ದುರಂತವೆಂದರೆ ನಾಜಿ ‘ಕೊಲೆಗಡುಕ ದಳ’ಗಳಿಗೆ ದೊಡ್ಡ ಪ್ರಮಾಣದಲ್ಲಿ ಸ್ಥಳೀಯ ಸಹಾಯಕ ಪಡೆಗಳು ಬೆಂಬಲ ನೀಡಿದವು. ಒಬ್ಬ ನಾಜಿ ‘ಕೊಲೆಗಡುಕ ದಳ’ದ ಸದಸ್ಯನಿಗೆ 10 ಸ್ಥಳೀಯ ಸಹಾಯಕರು ಬೆಂಬಲ ನೀಡುತ್ತಿದ್ದರು. ಆಕ್ರಮಣಕೋರ ಜರ್ಮನಿಯ ಮಿಲಿಟರಿ ಪಡೆಗಳು ಹೊಸ ಹೊಸ ಪ್ರದೇಶಗಳಿಗೆ ದಾಳಿ ಮಾಡುವಾಗ, ಯೆಹೂದಿಯವರ ಮೇಲೆ ದಾಳಿ ಮಾಡಲು ಸ್ಥಳೀಯರನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದ್ದರು.

1941 ರ ಜೂನ್ ನಲ್ಲಿ ಸೋವಿಯೆತ್ ಒಕ್ಕೂಟದ ಆಕ್ರಮಣದ ನಂತರದ 6 ತಿಂಗಳಲ್ಲಿ, ಲಾಟ್ವಿಯಾ, ಲಿಥುವೇನಿಯಾ, ಮತ್ತು ಉಕ್ರೇನ್ ನಲ್ಲಿ, 60 ಕ್ಕೂ ಹೆಚ್ಚು ಹತ್ಯಾಕಾಂಡಗಳು ನಡೆದು, ಸುಮಾರು 24,000 ಯೆಹೂದಿ ಜೀವಗಳನ್ನು ಬಲಿ ಪಡೆದವು. ‘ನಾಜಿ ಕೊಲೆಗಡುಕ ದಳ’ಗಳÀ ಅತ್ಯಂತ ಕುಖ್ಯಾತ ನರಮೇಧಗಳಲ್ಲಿ ಒಂದು ಕೀವ್ ಬಳಿಯ ಬಾಬಿಯಾರ್ ನಲ್ಲಿ ನಡೆಯಿತು. ಅಲ್ಲಿ 33 ಸಾವಿರಕ್ಕೂ ಹೆಚ್ಚು ಯೆಹೂದಿಗಳನ್ನು ಕೊಲ್ಲಲಾಯಿತು. ಹಾಗೆಯೇ, 1941 ರ ನವೆಂಬರ್ ಮತ್ತು ಡಿಸೆಂಬರ್ ನ ಎರಡು ದಿನಗಳಲ್ಲಿ, ರಿಗಾ ಬಳಿಯ ರುಂಬುಲಾ ದಲ್ಲಿ ಸುಮಾರು 25 ಸಾವಿರ ಯೆಹೂದಿಗಳನ್ನು ಬಲಿ ತೆಗೆದು ಕೊಳ್ಳಲಾಗಿದೆ. ಆದಾಗ್ಯೂ, ಈ ಸಾಮೂಹಿಕ ಕೊಲೆಗಳು ಅಸಮರ್ಪಕ ಮತ್ತು ದುಬಾರಿಯಾಗಿದ್ದವು. ಇದು ಸೈನಿಕರ ಸ್ಥೈರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಮಿಲಿಟರಿ ಕಮಾಂಡರುಗಳು ದೂರುತ್ತಿದ್ದರು.

ಈ ಹಿನ್ನೆಲೆಯಲ್ಲಿ ಜನವರಿ 1942ರಲ್ಲಿ ಯೆಹೂದಿಗಳ ‘ಸಮಸ್ಯೆ’ಯ ‘ಅಂತಿಮ ಪರಿಹಾರ’ದ ಯೋಜನೆ ರೂಪಿಸಲಾಯಿತು. ಸಾಧ್ಯವಿರುವ (ವಿಶೇಷವಾಗಿ ಯುರೋಪಿನ) ಎಲ್ಲಾ ಯೆಹೂದಿಯರನ್ನು ನಿರ್ಮೂಲನ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಯೆಹೂದಿಗಳ ಸಂಖ್ಯೆ ಸಾಕಷ್ಟು ದೊಡ್ಡದಿದ್ದು ಸಾಮೂಹಿಕ ಗುಂಡೇಟು ‘ದಕ್ಷ’ ವಿಧಾನವಲ್ಲ ಎಂದು ನಾಜಿUಳು ಪರಿಗಣಿಸಿದರು.

ಆದ್ದರಿಂದ ನರಮೇಧವನ್ನು ದೊಡ್ಡ ಪ್ರಮಾಣದ ‘ಕೈಗಾರಿಕೀಕರಣ’ದ ವಿಧಾನ ಬಳಸಿ ಮಾಡುವುದು ‘ಅಂತಿಮ ಪರಿಹಾರ’ದ ಯೋಜನೆಯ ಭಾಗವಾಗಿತ್ತು. ದೊಡ್ಡ ಪ್ರಮಾಣದಲ್ಲಿ ಕೆಲವೇ ಕ್ಷಣಗಳಲ್ಲಿ ಕೊಲ್ಲುವ ‘ಗ್ಯಾಸ್ ಕೋಣೆ’ಗಳನ್ನು ಹೊಂದಿದ್ದ ಜರ್ಮನಿಯ ಆಶ್ವಿಟ್ಝ್ ಯಾತನಾ ಶಿಬಿರವನ್ನು ಇದಕ್ಕಾಗಿ ಸಜ್ಜುಗೊಳಿಸಲಾಯಿತು. ‘ಗ್ಯಾಸ್ ಕೋಣೆ’ಗಳು ಸ್ನಾನದ ಕೋಣೆಯ ಹಾಗೆ ಕಾಣುತ್ತಿತ್ತು. ಶಿಬಿರವಾಸಿಗಳನ್ನು ಸರದಿಯಲ್ಲಿ ಸ್ನಾನಕ್ಕೆಂದು ಕಳಿಸಿ ಸೈನೈಡ್ ವಿಷ ಗ್ಯಾಸ್ ಬಿಟ್ಟು ಅವರನ್ನು ಕೊಲ್ಲಲಾಗುತ್ತಿತ್ತು. ಕೆಲವು ನಿಮಿಷಗಳ ಭೀಕರ ಯಾತನೆಯ ನಂತರ ಅವರ ಹೆಣ ಬೀಳುತ್ತಿತ್ತು. ಈ ಯಾತನಾ ಶಿಬಿರಕ್ಕೆ ರೈಲುಗಳಲ್ಲಿ ಸಾಮಾಹಿಕವಾಗಿ ಕಳಿಸಲಾದ 13 ಲಕ್ಷ ಯೆಹೂದಿಯರಲ್ಲಿ 11 ಲಕ್ಷ ಬಲಿಯಾದರು.

ಹೆಚ್ಚಿನವರು ‘ಗ್ಯಾಸ್ ಕೋಣೆ’ಗಳಲ್ಲಿ ಬಲಿಯಾದರು. ಉಳಿದವರು ಹಸಿವಿಗೆ, ಹಸಿವಿನಿಂದ ಉಂಟಾದ ನಿಶ್ಶಕ್ತಿಗೆ, ರೋಗಗಳಿಗೆ ಬಲಿಯಾದರು. ‘ಗ್ಯಾಸ್ ಕೋಣೆ’ಗಳ ಹೆಣಗಳ ಬೆಲೆಬಾಳುವ ವಸ್ತುಗಳನ್ನು ಕಿತ್ತು ಹಾಕಲಾಗುತ್ತಿತ್ತು. ಮಹಿಳೆಯರ ಕೂದಲು ಕತ್ತರಿಸಲಾಗುತ್ತಿತ್ತು. ಚಿನ್ನದ ಹಲ್ಲುಗಳನ್ನು ದಂತವೈದ್ಯರುಗಳು ಚಿನ್ನವನ್ನು ಪ್ರತ್ಯೇಕಿಸುತ್ತಿದ್ದರು.

1944ರ ವರೆಗೆ ಈ ರೀತಿಯಲ್ಲಿ 10-12 ಕೆ.ಜಿ ಚಿನ್ನ ಸಂಗ್ರಹಿಸಲಾಗಿತ್ತು ಎಂದು ದಾಖಲಾಗಿದೆ.
ಯೆಹೂದಿಯರ ಹೆಣಗಳನ್ನೂ ಸಹ ಪೂರ್ಣವಾಗಿ ಈ ರೀತಿ ‘ಅಮಾನವೀಯ’ಗೊಳಿಸಲಾಗಿತ್ತು. ನಾಜಿ ಸೈನ್ಯವನ್ನು ಸೋವಿಯೆಟ್ ಕೆಂಪು ಸೈನ್ಯ ಸೋಲಿಸಿ ಆಶ್ವಿಟ್ಝ್ ತಲುಪಿ ಅಲ್ಲಿರುವ ಶಿಬಿರವಾಸಿಗಳನ್ನು ಬಿಡುಗಡೆ ಮಾಡದಿದ್ದರೆ ಎಷ್ಟು ಕಾಲ ಈ ನರಮೇಧ ಮುಂದುವರೆಯುತ್ತಿತ್ತೋ ಗೊತ್ತಿಲ್ಲ.

ಒಂದು ಸಮುದಾಯದ ನರಮೇಧದ ಹಲವು ಹಂತಗಳ ಈ ಭೀಕರ ಚರಿತ್ರೆ ಮರೆಯುವಂತಹದ್ದಲ್ಲ. ಇದು ಯಾವುದೇ ಇತರ ಸಮುದಾಯಕ್ಕೆ ಮರುಕಳಿಸಬಾರದು. ಅದಕ್ಕಾಗಿ ಈ ವಾರ್ಷಿಕವನ್ನು ಪ್ರತಿ ವರ್ಷ ಆಚರಿಸಲಾಗುತ್ತದೆ. ಆದರೆ ಹಿಟ್ಲರನ ಸಂತಾನ ಕೊನೆಗೊಂಡಿಲ್ಲ. ಬದಲಾಗಿ ಕಳೆದ ಒಂದೆರಡು ದಶಕಗಳಲ್ಲಿ ನಮ್ಮ ದೇಶ ಸೇರಿದಂತೆ ಇಡೀ ಜಗತ್ತಿನಲ್ಲಿ ಬೆಳೆಯುತ್ತಿದೆ. ಅವರು ಈ ಚರಿತ್ರೆಯನ್ನು ಅರಗಿಸಿಕೊಂಡು ಅದನ್ನು ಮರುಕಳಿಸಲು ಪ್ರಯತ್ನಿಸುತ್ತಿದ್ದಾರೆ. ಅವರನ್ನು ತಡೆಯುವತ್ತ ಕ್ರಮಗಳನ್ನು ಕೈಗೊಳ್ಳುವುದು ಮಾತ್ರ ‘ಯೆಹೂದಿ ನರಮೇಧ’ದಲ್ಲಿ ಬಲಿಯಾದವರ ನೆನಪಿಗೆ ಅರ್ಥಪೂರ್ಣ ಗೌರವ ಸಲ್ಲಿಸಿದಂತಾಗುತ್ತದೆ.

(ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಭಾರತದ ಜನಸಂಖ್ಯೆ ವರವೋ..? ಶಾಪವೋ..?

Published

on

ಸಾಂದರ್ಭಿಕ ಚಿತ್ರ

 

  • ಅಂಬಿಕಾ. ಕೆ
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
    ಬೆಂಗಳೂರು ವಿಶ್ವವಿದ್ಯಾಲಯ

 

ವಿಶ್ವ ಸಂಸ್ಥೆಯು ಪಾಪುಲೇಷನ್ ಫಂಡ್ ಮಾಡಿರುವ ಅಂದಾಜಿನ ಪ್ರಕಾರ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎನಿಸಿಕೊಂಡಿದೆ.

ದೇಶದ ಒಟ್ಟು ಜನಸಂಖ್ಯೆಯು 142.86 ಕೋಟಿಗೆ ಏರಿಕೆಯಾಗಿದ್ದು, ಚೀನಾ ಎರಡನೇ ಸ್ಥಾನಕ್ಕೆ ಇಳಿದಿದೆ, ಇಂತಹದೊಂದು ಹಿರಿಮೆಗೆ ಭಾರತವು ಪಾತ್ರವಾಗಲಿದೆ ಎಂಬುದರ ಅರಿವು ಹಿಂದೆಯೇ ಇತ್ತು. ಹೊಸ ಭಾರತದ ಜನಸಂಖ್ಯೆಯ ಸ್ವರೂಪವೇನು ಮತ್ತು ಯಾವ ವಯೋ ಮಾನದವರು ಎಷ್ಟಿದ್ದಾರೆ. ಆದಾಯ ಮಟ್ಟ ಹೇಗಿದೆ, ಆದಾಯ ಹಂಚಿಕೆ ಹೇಗಿದೆ ಎಂಬುದರ ಕುರಿತು ಕೂಡ ಚರ್ಚೆಗಳು ನಡೆಯುತ್ತಿವೆ. ಒಟ್ಟು ಜನಸಂಖ್ಯೆಯ ಜತೆಗೆ ಈ ಎಲ್ಲಾ ಅಂಶಗಳು ಕೂಡ ಸರ್ಕಾರದ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವಿಕೆ ಮೇಲೆ ಪ್ರಭಾವ ಬೀರುತ್ತವೆ. ರಾಜಕೀಯ ಪಕ್ಷಗಳು ಮತ್ತು ಗುಂಪುಗಳು ರಾಜಕೀಯ ಹಾಗೂ ಸಾಮಾಜಿಕ ಸ್ಥಾನಗಳನ್ನು ನಿರ್ಧರಿಸುವಲ್ಲಿಯೂ ಈ ಅಂಶಗಳು ಪಾತ್ರವಹಿಸುತ್ತವೆ ಭಾರತದಲ್ಲಿ ಗರಿಷ್ಠ ಸಂಖ್ಯೆಯು ಯುವ ಜನರಿದ್ದಾರೆ.

ಹಾಗೆಯೇ ಮುಂದುವರೆಯಲಿದೆ 15 ರಿಂದ 24 ವರ್ಷದೊಳಗಿನವರ ಸಂಖ್ಯೆಯು 25.4 ಕೋಟಿ ಎಂದು ಅಂದಾಜಿಸಲಾಗಿದೆ ಇನ್ನು ದೀರ್ಘಕಾಲ ಭಾರತವು ಈ ಸ್ಥಿತಿ ಕಾಯ್ದುಕೊಳ್ಳಲಿದೆ ಎಂಬುದರಲ್ಲಿಯೂ ಅನುಮಾನ ಇಲ್ಲ ಜನಸಂಖ್ಯೆಯಲ್ಲಿ ಜಗತ್ತಿನಲ್ಲಿ ಮೊದಲ ಸ್ಥಾನಕ್ಕೆ ಏರುವುದು, ಗೌರವ ಏನು ಅಲ್ಲ ಬದಲಿಗೆ ಇದು ದೇಶಕ್ಕೆ ಹಲವು ಸವಾಲುಗಳನ್ನು ಹುಟ್ಟುತ್ತದೆ ಜತೆಗೆ ಅವಕಾಶಗಳ ಬಾಗಿಗಳನ್ನು ತೆರೆಯುತ್ತದೆ ಆದರೆ, ಜನರನ್ನು ಸಕಾಲಿಕವಾಗಿ ಮತ್ತು ಪರಿಣಾಮಕಾರಿಯಾಗಿ ಬಲಿಸಿಕೊಳ್ಳದೆ ಇದ್ದರೆ ಜನಸಂಖ್ಯೆಯೇ ಶಾಪವಾಗಿ ದೊಡ್ಡ ಸವಾಲಾಗಿ ಪರಿಣಮಿಸಬಹುದು. ದೇಶ ಪ್ರತಿ ವರ್ಷವೂ ಹೆಚ್ಚು ಹೆಚ್ಚು ಜನರಿಗೆ ಆಹಾರ ಬಟ್ಟೆ ಶಿಕ್ಷಣ ಆರೋಗ್ಯ ಸೇವೆ ಉದ್ಯೋಗಾವಕಾಶಗಳನ್ನು ಒದಗಿಸಬೇಕಾಗುತ್ತದೆ.

ಅಂಬಿಕಾ. ಕೆ

ಹೀಗೆ ಮುಂದುವರೆದರೆ ಉದ್ಯೋಗಾವಕಾಶಗಳು ದೊರೆಯದೆ ಜನರ ಜೀವನ ಮಟ್ಟ ಸುಧಾರಿಸಿಕೊಳ್ಳುವುದು ಕಷ್ಟವೇ ಸರಿ ಕೆಲಸ ಮಾಡುವ ವಯೋಮಾನದ ಜನರನ್ನು ಸಮಂಜಸವಾಗಿ ಬಳಸಿಕೊಂಡರೇ ಮಾತ್ರ ಜನಸಂಖ್ಯೆಯು ದೇಶದ ಅಭಿವೃದ್ಧಿಗೆ ಪೂರಕವಾಗಿ ಪರಿಣಮಿಸುತ್ತದೆ. ದೇಶದಲ್ಲಿ ದೊಡ್ಡ ಸಂಖ್ಯೆಯ ಜನರಿಗೆ ಈಗಲೂ ಮೂಲ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗಿಲ್ಲ ಆದ್ದರಿಂದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಂಬಂಧಿಸಿದ ನೀತಿಗಳು ಮತ್ತು ಕಾರ್ಯತಂತ್ರ ಗಳಿಗೆ ಸಂಬಂಧಿಸಿದ ಪ್ರಯತ್ನಗಳನ್ನು ನಡೆಸದೇ ಇದ್ದರೆ ಜನಸಂಖ್ಯೆ ಹೆಚ್ಚಳದ ಲಾಭವು ದೊರೆಯದೆ ಹೋಗಬಹುದು ಇದರ ಪರಿಣಾಮವಾಗಿ ಲಾಭದ ಹೆಸರಿನಲ್ಲಿ ನಷ್ಟವೇ ಹೆಚ್ಚು ಅದುವೇ ಒಂದು ಹೊರೆಯುವಾಗಬಹುದು.

ಯುವ ಜನರಿಗೆ ಸೌಲಭ್ಯಗಳು ಮತ್ತು ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಹೆಚ್ಚುತ್ತಲೇ ಇರುವ ಹಿರಿಯ ನಾಗರಿಕರ ಹಾರೈಕೆಯು ವ್ಯವಸ್ಥೆ ಮಾಡಬೇಕಿದೆ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದು ಮತ್ತು ಸವಾಲುಗಳನ್ನು ಎದುರಿಸುವುದು ಭಾರತೀಯರ ಹೊರೆಗಾರಿಕೆ ದೇಶದ ಜನರ ಅಗತ್ಯಗಳನ್ನು ಪೂರೈಸಲು ವಿಫಲವಾದರೆ, ಸಾಮಾಜಿಕ ಸಂಘರ್ಷ ಮತ್ತು ರಾಜಕೀಯ ದೃಷ್ಟಿ ಉಂಟಾಗಿ ಅದು ಗಂಭೀರ ಪರಿಣಾಮಗಳಿಗೆ ಕಾರಣವಾಗಬಹುದು. ಮುಂದೆ ಜನಸಂಖ್ಯಾ ಸ್ಫೋಟವಾದರೂ ಆಶ್ಚರ್ಯ ಪಡಬೇಕಾಗಿಲ್ಲ ಈಗಿನ ಸನ್ನಿವೇಶದಲ್ಲಿ ದೊರಕುತ್ತಿರುವ ಸಂಪನ್ಮೂಲಗಳ ಗರಿಷ್ಠ ಬಳಕೆ ಮತ್ತು ಪರಿಣಾಮಕಾರಿ ಬಳಕೆ ಬಹಳ ಮಹತ್ವವಾಗಿದೆ.

ಮೀಸಲಾತಿ, ವಲಸೆ , ರಾಜಕೀಯ ಪ್ರಾತಿನಿಧ್ಯ ಸಂಪನ್ಮೂಲಗಳ ಹಂಚಿಕೆ ಮತ್ತು ಇದರ ವಿಚಾರಗಳು ಚರ್ಚೆಗೆ ಒಳಗಾಗುವ ಸಾಧ್ಯತೆ ಇದೆ ಸಮಾಜದ ಎಲ್ಲಾ ವರ್ಗಗಳನ್ನು ಸಮಾನವಾಗಿ ಒಳಗೊಳ್ಳುವ ಆರ್ಥಿಕ ಪ್ರಗತಿಯು ಸಾಧ್ಯವಾದರೆ ಜನಸಂಖ್ಯೆ ಏರಿಕೆ ಸವಾಲಾಗಿ ಪರಿಣಮಿಸಬಹುದು ಮಾನವ ಅಭಿವೃದ್ಧಿಯೇ ಅತ್ಯುತ್ತಮ ಕುಟುಂಬ ಕಲ್ಯಾಣ ಯೋಜನೆ ಇದರಿಂದ ಜನಸಂಖ್ಯೆಯ ಏರಿಕೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು ಜನಸಂಖ್ಯೆ ಹೆಚ್ಚಳ ಯಾವುದೋ ಒಂದು ಸಮುದಾಯ ಕಾರಣ ಎಂದು ದೂಷಿಸುವ ಪ್ರವೃತ್ತಿಗೆ ಜ್ಞಾನದಾದ ಆಧಾರ ಇಲ್ಲದ ಪೂರ್ವಗ್ರಹ ಕಾರಣದಿಂದ ಮತ್ತು ಇದು ತಪ್ಪು ನಡವಳಿಕೆಯ ಜನಸಂಖ್ಯೆಗೆ ಸಂಬಂಧಿಸಿದ ಸವಾಲುಗಳನ್ನು ಉತ್ತಮವಾಗಿ ಮತ್ತು ಜಾಣ್ಮೆಯಿಂದ ನಿರ್ವಹಿಸಿದರೆ ಈ ಶತಮಾನವನ್ನು ಭಾರತದ ಶತಮಾನವನ್ನಾಗಿ ಪರಿವರ್ತಿಸುವ ಅವಕಾಶ ನಮ್ಮ ಮುಂದೆ ಇದೆ ಜನರೇ ನಮ್ಮ ದೇಶದ ಸಂಪನ್ಮೂಲವನ್ನಾಗಿ ಮಾರ್ಪಾಡು ಮಾಡಿಕೊಳ್ಳುವ ಅವಕಾಶ ನಮ್ಮ ನಿಮ್ಮೆಲ್ಲರ ಮೇಲಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಬಾಬಾ ಸಾಹೇಬ ಅಂಬೇಡ್ಕರರ ‘ಧ್ಯಾನ’ ಗಾಯನ ; ವಿನೂತನ

Published

on

 

  • ವೆನ್ನೆಲಾ ಕೆ.
    ಎಂ.ಎ. ಪ್ರಥಮ ವರ್ಷದ ವಿದ್ಯಾರ್ಥಿನಿ,
    ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ,
    ಬೆಂಗಳೂರು ವಿಶ್ವವಿದ್ಯಾಲಯ,ಬೆಂಗಳೂರು

ತ್ತೀಚೆಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದ 132ನೇ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ಜನುಮ ನಿಮಿತ್ತವಾಗಿ “ಧಾನ್ಯ” ‘ಗಾಯನವು’ ವಿನೂತನವಾದ ಈ ಕಾರ್ಯಕ್ರಮವು 5 ಘಂಟೆ, 1ನಿಮಿಷ, 14 ಸೆಕೆಂಡ್ ಗೆ ಆರಂಭವಾಗಿದ್ದು ಅವಿಸ್ಮರಣೀಯವಾದ ದಿನ, ಇದೊಂದು ಭಾರತ ಇತಿಹಾಸದ ಪುಟದ ಚರಿತ್ರೆಯಲ್ಲೇ ಹೊಸ ದಾಖಲೆಯೂ ಅಂತ ಹೇಳಬಹುದು.

ಈ ಕಾರ್ಯಕ್ರಮವನ್ನು ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ವು ಇಡೀ ಭಾರತದಲ್ಲೇ ಯಾರು ಮಾಡಿರದ ಈ ವಿನೂತವಾದ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಬೆಂಗಳೂರು ನಗರದಲ್ಲಿರುವ ಗಾಂಧಿ ಭವನದ ಆವರಣದಲ್ಲಿ ‘ಅನನ್ಯ ಸಂಸ್ಥೆ’ ವತಿಯಿಂದ 132 ನೇ ‘ವಿಶ್ವದ ವೀರ ವಿದ್ಯಾರ್ಥಿ ಹುಟ್ಟಿದ ದಿನ’ ಹಾಗೂ ‘ರಾಷ್ಟ್ರದ ಸ್ಫೂರ್ತಿಯ ದಿನ’ ‘ಸರ್ವ ಸಮುದಾಯದ ಶಕ್ತಿಯ ದಿನ’ ಇದೊಂದು ನಮ್ಮೆಲ್ಲರ ಹಬ್ಬದ ದಿನ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಇಂತಹ ಮೇರು ಶಿಖರ ಟ್ಯಾಗ್ ಲೈನ್ ಗಳಿಂದ ಅದ್ಭುತವಾಗಿ
ಆಯೋಜಿಸಿದ ಕಾರ್ಯಕ್ರಮಕ್ಕೆ ರಾಜ್ಯ ಕಂಡ ಪ್ರಸಿದ್ಧ ಐಪಿಎಸ್ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ಸಿನಿಮಾ ಸೆಲೆಬ್ರಿಟಿಗಳು, ಸಮಸ್ತ ವಿದ್ಯಾರ್ಥಿ ಸಮೂಹ, ಸಾಮಾಜಿಕ ನ್ಯಾಯದ ವಿಚಾರಶೀಲರು, ಬರಹಗಾರರು, ಪತ್ರಕರ್ತರು ಇನ್ನೂ ಅನೇಕ ಮುಂತಾದವರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಇದಕ್ಕೆ ಮುಖ್ಯ ಕಾರಣಕರ್ತರಾದ ಅನನ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ರಾಂಪುರ ರಾಜೇಶ್ ರವರ ನಿರ್ದೇಶನದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿದ್ದು ಹೆಮ್ಮೆಯ ವಿಷಯ.

ಇದರ ಹಿನ್ನೆಲೆ: ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ದಲ್ಲಿ ಅತ್ಯುತ್ತಮ ಹಾಗೂ ಅತ್ಯಂತ ತುಂಬಾ ಮನಸ್ಸಿನಿಂದಲ್ಲೇ ವಿಶೇಷವಾದ ಆಸಕ್ತಿಯನ್ನು ಅಂಬೇಡ್ಕರ್ ರವರು ಸಂಗೀತ ಪ್ರಿಯರು ಹಾಗೂ ಅಂಬೇಡ್ಕರ್ ರವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು. ಹಾಗೇಯೆ ಇವರಿಗೆ ಚಿತ್ರಕಲೆಯೂ ಸಹ ಒಲಿದಿತ್ತು ಎಂಬುದು ಗಮನಾರ್ಹ ಸಂಗತಿ. ಇಂತಹ ವಿಷಯವನ್ನು ಯಾರು ಸಹ ಬೆಳಕು ಚೆಲ್ಲುವ ಸಾಹಸಕ್ಕೆ ಕೈ ಹಾಕಿ ಇರಲಿಲ್ಲ. ಇದೊಂದು ಅನನ್ಯ ಸಂಸ್ಥೆ ವತಿಯಿಂದ ಇಂತಹ ಕಾರ್ಯಕ್ರಮ ನಡೆಸಿಕೊಟ್ಟಿದ್ದು ಐತಿಹಾಸಿಕ ಚರಿತ್ರೆಗೆ ಮುನ್ನುಡಿವಾಗಿದೆ.

ಅಂಬೇಡ್ಕರ್ ರವರಿಗೆ ತಮ್ಮ ಬಿಡುವಿನ ವೇಳೆಯಲ್ಲಿ ಅದ್ಭುತವಾದ ಒಬ್ಬ ಸಂಗೀತ ಪ್ರಿಯರಾಗಿದ್ದರು. ಇವರು ಸುಶ್ರಾವ್ಯವಾಗಿ ವಯಲಿನ್ ನುಡಿಸುತ್ತಿದ್ದರು ಹಾಗೂ ವಿಶೇಷವಾಗಿ ಚಿತ್ರಕಲೆ ಸಹ ಸರಳವಾಗಿ ಮಾಡುವ ಮೂಲಕ ತಮ್ಮ ಮನದಲ್ಲಿ ಆಸಕ್ತಿ ಹೊಂದಿದ್ದರು. ಇನ್ನು ಹಲವಾರು ವಿಷಯದಲ್ಲಿ ಅಂದರೆ ಅಂಬೇಡ್ಕರ್ ರವರಿಗೆ ವಿಶೇಷವಾದ ಇವುಗಳಲ್ಲಿ ಆಸಕ್ತಿ ಮತ್ತು ಅಭಿರುಚಿಯನ್ನು ಹೊಂದಿದ್ದರು ಎಂಬುದನ್ನು ಮನಗಂಡ ಅನನ್ಯ ಸಂಸ್ಥೆಯ ವತಿಯಿಂದ ಆಯೋಜಿಸಿದ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಅತ್ಯುತ್ತಮವಾಗಿ ಮೂಡಿಬಂದಿದೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ವಿಶೇಷವಾಗಿ ದಕ್ಷಿಣ ಭಾರತದ ಖ್ಯಾತ ಸಂಗೀತ ನಿರ್ದೇಶಕರು ಹಾಗೂ ಚಿತ್ರ ಸಾಹಿತ್ಯಗಳು, ಅಂಬೇಡ್ಕರ್ ವಾದಿಗಳು ಮತ್ತು ಚಿತ್ರರಂಗದ ಬಹುಮುಖ ಪ್ರತಿಭೆ, ಮಹಾಗುರುಗಳಾದ ಡಾ. ಹಂಸಲೇಖ ರವರು ಹೊಸದಾಗಿ ಹಾಡನ್ನು ಬರೆದದ್ದು ತುಂಬಾ ಅವಿಸ್ಮರಣೀಯ ಅಂತ ಹೇಳಬಹುದು. ಇವರು ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿ, ಪ್ರೊತ್ಸಾಹ ನೀಡಿದ್ದು, ಸರ್ವ ಸಮುದಾಯದಕ್ಕೆ ಹೊಸ ಶಕ್ತಿ ತುಂಬಿದ್ದು ಮೇರು ವ್ಯಕ್ತಿಯಾಗಿದ್ದಾರೆ.

ವೆನ್ನೆಲಾ ಕೆ.

ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮದಲ್ಲಿ ಮುಖ್ಯವಾದ ಅಂಶವೆಂದರೆ ಇದರಲ್ಲಿ ಒಟ್ಟು ನಾಲ್ಕು ಭಗವಾನ್ ಬುದ್ಧ, ಅಂಬೇಡ್ಕರ್, ಬಸವೇಶ್ವರ ಮುಂತಾದರವರನ್ನು ವಿಷಯಗಳನ್ನು ಪರಿಗಣಿಸಿ ಅಂಬೇಡ್ಕರ್ ಧ್ಯಾನ ಹಾಡುಗಳ ರಚಿಸಿವುದರಲ್ಲಿ ಪ್ರಮುಖವಾಗಿ ರಾಜ್ಯದ ಹೆಸರಾಂತ ಸಾಹಿತಿ, ಪ್ರಗತಿಪರ ಚಿಂತಕರು ಹಾಗೂ ಮಾಜಿ ಅಧ್ಯಕ್ಷರಾದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರಿನ ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ
‘ಧೀ ಶಕ್ತಿಯೇ … ಜ್ಞಾನ ಪರ್ವತದ … ಧೀಮಂತ ಧೀಶಕ್ತಿಯೇ …
ಇಂತಹ ಸಾಲುಗಳನ್ನು, ಡಾ. ಕೈ.ವೈ.ನಾರಾಯಣಸ್ವಾಮಿರವರ ದೀಪಾ …. ಎಲ್ಲರೆದೆಯಲಿ … ಹಚ್ಚಿದ ದೀಪಾ .. ಭೂಪಾ … ಭೂಪಾ … ಭೀಮಾ ಭೂಪಾ .. ಬಾಬಾ .. ಸಾಹೇಬ್.. ಜೀವಸ್ವರವೇ … ಬಾಬಾ.. ಹಾಗೂ ರವಿ ಮರಿಯಪ್ಪರವರ ಹತ್ತು ಸಾವಿರ ವಯಲಿನನ್ನು … ವೀಣೆಗಳು ನೂರೆಂಟು … ಕೋಟಿ ಕೋಟಿ ಎದೆ ಸದ್ದಿನ ಡೊಳ್ಳು … ಸಂಯೋಜಿಸಿದರೇ .. ಸಂವಿಧಾನಾ … ಮತ್ತು ಚಿತ್ರ ಸಾಹಿತಿ, ಹೆಸರಾಂತ ಸಂಗೀತ ನಿರ್ದೇಶಕರು ಡಾ. ಹಂಸಲೇಖ ರವರು ನಿನ್ನ ಮೌನಾ … ದೀನ ಗಾನಾ… ನಿನ್ನ ಧ್ಯಾನಾ .. ಸಂವಿಧಾನಾ … ಈ ನಾಲ್ಕು ಅಂಬೇಡ್ಕರ್ ಧ್ಯಾನ ರಚನೆಗೆ ಇವರುಗಳ ಬರೆದಿರುವ ಅದ್ಭುತವಾದ ಅಂಬೇಡ್ಕರ್ ರವರ ಧ್ಯಾನ ಹಾಡುಗಳನ್ನು ನಮ್ಮ ಹಿಂದುಸ್ತಾನಿ ಸಂಗೀತ ಹಾಡುಗಳ ಮೂಲಕ ಕನ್ವರ್ಟ್ ಮಾಡುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತು.

ಹಾಗೆಯೇ ಅಂಬೇಡ್ಕರ್ ರವರ “ಧ್ಯಾನ” ‘ಗಾಯನ’ ಕಾರ್ಯಕ್ರಮವು ಬಹಳಷ್ಟು ಯಶಸ್ವಿಯಾಗಬೇಕಾದರೆ ಈ ಮೊದಲು ಪುಟ್ಟರಾಜ ಗವಾಯಿಗಳ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ಶ್ರೀ ಡಿ. ಕುಮಾರ್ ದಾಸ್ ಅವರ ವಿದ್ವತ್ ಶರೀರದಲ್ಲಿ ‘ಧ್ಯಾನ ಗಾಯನ’ ಹಾಗೂ ಇವರ ತಂಡದ ವತಿಯಿಂದ ನಡೆಸಿಕೊಟ್ಟ ಅದ್ಭತವಾದ ಅಂಬೇಡ್ಕರ್ ರವರ ಧ್ಯಾನವು ಹಿಂದುಸ್ತಾನಿ ಸಂಗೀತದ ಕನ್ವರ್ಟ್ ಮಾಡುವ ಮುಖಾಂತರ ಈ ಹಾಡುಗಳನ್ನು ಬಹಳ ಸೊಗಸಾಗಿ ಮೂಡಿಬಂದಿದ್ದು ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ಇನ್ನು ಮುಂಬರುವ ದಿನಗಳಲ್ಲಿ ಅದಷ್ಟು ಹಲವಾರು ವಿನೂತನವಾದ ಭಗವಾನ್ ಬುದ್ಧರ, ಬಸವೇಶ್ವರರ ಹಾಗೂ ವಿಶ್ವದ ವೀರ ವಿದ್ಯಾರ್ಥಿಯಾದ ಮೇರು ರಾಷ್ಟ್ರದ
ನಾಯಕರಾದ ಬಾಬಾಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ್ ರವರ ಹಲವಾರು ಹಾಡುಗಳನ್ನು
ಅನನ್ಯ ಮಾಧ್ಯಮ ಮತ್ತು ಬೆಳ್ಳಿತೆರೆ ಸಂಸ್ಥೆಯ ವತಿಯಿಂದ ಆಯೋಜಿಸಿದರೆ ಇನ್ನುಷ್ಟು ಭಾರತದ ಇತಿಹಾಸದ ಪುಟಗಳಲ್ಲಿ ಮರೆತು ಹೋಗಿರುವ ಹಲವು ಬಗ್ಗೆ ದಾಖಲೆ ಇಲ್ಲದ ನೈಜ ಸಂಗತಿಗಳನ್ನು ಪುನಃ ಹೊಸ ದಾಖಲೆಗೆ ಉಪಯುಕ್ತವಾದ ವಿಶಿಷ್ಟವಾದ ಮೇರು ನಾಯಕನ
ಅಂಬೇಡ್ಕರ್ ರವರ ವಿಚಾರ ಧಾರೆಗಳು ತಾವು ಅನುಭವಿಸಿದ ನೋವು, ನಲಿವು, ಭಾರತದ ರಾಜ್ಯಾಂಗದ ಶಿಲ್ಪಿಯನ್ನು ಮುಂಬರುವ ದಿನಗಳಲ್ಲಿ ಹೊಸ ಪೀಳಿಗೆಯ ಪರಿಚಯಿಸುವ ಕೀರ್ತಿದಾಯಿಕವಾಗಲಿ ಮತ್ತು ಅದಷ್ಟು ಮುಂಬರುವ ದಿನಗಳಲ್ಲಿ ಅಂಬೇಡ್ಕರ್ ರವರ ಆಸಕ್ತಿದಾಯಕ ವಿಚಾರಗಳು ಹಾಗೂ ಸಂಗೀತದ ಬಗ್ಗೆ ಹಲವಾರು ಮಾಹಿತಿಗಳು ಸಮಸಮಸಮಾಜಕ್ಕೆ ತಲುಪುವ ವ್ಯವಸ್ಥೆಗೆ ಸಾಕ್ಷಿಯಾಗಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಬಹಿರಂಗ

ರಷ್ಯಾದಲ್ಲಿ ಓಂ – ಭರತಾಸ್- ರಾಮ – ರಾವಣ ಲಂಕೇಶ – ಮಾರೀಚ – ಸೀತ ನದಿಗಳು..!

Published

on

  • ಲಕ್ಷ್ಮೀಪತಿ ಕೋಲಾರ, ಸಂಶೋಧಕರು, ಸಂಸ್ಕೃತಿ‌ ಚಿಂತಕರು, ಬೆಂಗಳೂರು

ಸ್ಲಾವ್ ಸಮುದಾಯದ ಲಿತುವೇನಿಯ, ಲಾತ್ವಿಯ, ಬೆಲಾರಸ್,ಉಕ್ರೇನ್ ಮತ್ತು ರಷಿಯಾದಂತಹ ದೇಶಗಳ ನದಿ,ನಗರಗಳು ಸಂಸ್ಕೃತ ಮೂಲದ ಹೆಸರುಗಳನ್ನೆ ಇಂದಿಗು ಉಳಿಸಿಕೊಂಡಿರುವುದು ಆ ಭಾಷೆ ಮತ್ತು ಸಂಬಂಧಿತ ಸಂಸ್ಕೃತಿಯೊಂದಿಗೆ ಅವು ಹಿಂದೊಮ್ಮೆ ಹೊಂದಿದ್ದ ಬಲವಾದ ನಂಟಿಗೆ ಸಾಕ್ಷಿಯಾಗಬಲ್ಲವು.

ಇದರೊಂದಿಗೆ ಉತ್ತರ ಭಾರತದ ಆರ್ಯ ವೈದಿಕರ ಭಾಷೆ ಸಂಸ್ಕೃತಿಯೊಂದಿಗೆ ಸ್ಲಾವ್ ಸಮುದಾಯಕ್ಕೆ ಎಷ್ಟು ನಿಕಟ ಸಂಬಂಧವಿತ್ತೆಂಬುದನ್ನು ಮತ್ತು ನಾಲ್ಕೈದು ಸಾವಿರ ವರ್ಷಗಳ ಹಿಂದೆ ಈ ಎಲ್ಲ ಆರ್ಯ ಸಮುದಾಯಗಳು ಒಟ್ಟಿಗೆ ಒಂದೆಡೆಯೇ ಕಳ್ಳುಬಳ್ಳಿಗಳಾಗಿ ಜೀವಿಸಿದ್ದರೆಂಬುದನ್ನ ಈ ಹಿನ್ನೆಲೆಯಲ್ಲಿ ನಾವು ಗ್ರಹಿಸಬಹುದಾಗಿದೆ.

ಅದರಲ್ಲು ವಿಶೇಷವಾಗಿ ಲಿತುವೇನಿಯ ಮತ್ತು ರಷಿಯಾದ ನದಿಗಳ ಹೆಸರುಗಳು ಎಷ್ಟು ಸಂಸ್ಕೃತಮಯವು (ಇಂಡೋ – ಯುರೋಪಿಯನ್ ಭಾಷಾಮೂಲದ) ಮತ್ತು ವೈದಿಕರ ಪುರಾಣ ಮೂಲದವು ಆಗಿವೆ ಎಂದರೆ, ನಂಬಲಿಕ್ಕು ಅಸಾಧ್ಯ ಎಂಬಂತಿವೆ. ಇದರರ್ಥ ಸ್ಲಾವ್ ಜನರು ವೈದಿಕರ ಪುರಾಣಗಳಿಂದ ಪ್ರೇರಿತಗೊಂಡಿದ್ದಾರೆ ಎಂಬುದಲ್ಲ.

ಬದಲಿಗೆ ವೈದಿಕರ ಇಂದಿನ ಪುರಾಣ – ಸಂಸ್ಕೃತಿ – ಭಾಷೆಗಳು ವೈದಿಕರಿಗೆ ಎಷ್ಟು ಸಂಬಂಧಿಸಿದ್ದೋ ಅದಕ್ಕು ಹೆಚ್ಚಿನದಾಗಿ ಸ್ಲಾವ್ ಸಮುದಾಯಕ್ಕೂ ಸಂಬಂಧಿಸಿದ್ದಾಗಿದ್ದವು. ಹಾಗೆ ನೋಡಿದರೆ ಬ್ರಹ್ಮ – ವೇದ ಮೂಲವು ಕೂಡ ಸ್ಲಾವ್ ಸಮುದಾಯದ ಉತ್ತರ ಧ್ರುವ ಪ್ರದೇಶಕ್ಕೆ ಹೋಗಿ ನಿಲ್ಲುತ್ತದೆ ಎಂಬುದು ಸೋಜಿಗವಾದರು ನಿರ್ವಿವಾದವಾಗಿ ಚಾರಿತ್ರಿಕ ಸತ್ಯವಾಗಿದೆ. 12 – 13 ನೇ ಶತಮಾನಗಳಲ್ಲಿ ಸ್ಲಾವ್ ಜನರು ಕ್ರೈಸ್ತರಾಗಿ ಪರಿವರ್ತಿತರಾಗುವವರೆಗು ಅವರು ಶತಾಂಶ ಮತ್ತು ಥೇಟ್ ಶ್ರೇಷ್ಟ ಆರ್ಯ ವೈದಿಕರೆ ಆಗಿದ್ದರು.

ರಷ್ಯ ಮತ್ತು ಲಿತುವೇನಿಯಾಗಳಲ್ಲಿ ಭರತಾಸ್, ಓಂ, ರಾಮ, ಸೀತ, ಲಂಕೇಶ, ರಾವಣ, ಮಾರೀಚ, ನೆಮುನ (ಯಮುನ), ಕಾಮ, ಯಂತ್ರ, ಶ್ವೇತೆ, ದ್ರವ, ಮೋಕ್ಷ, ಋಗ್ವೇದದ ದಾನವ ಮಾತೆ ದನು ನೆನಪಿನ ದನುಬೆ ಮುಂತಾದ ನದಿಗಳು ಮತ್ತು ನಾರದ (ಈಗ ನರೋದ್ನಯ ಎಂದಿದ್ದರು ಸ್ಥಳೀಯರು ನಾರದ ಬೆಟ್ಟ ಎಂದೇ ಕರೆಯುತ್ತಾರೆ) ಹೆಸರಿನ ಬೆಟ್ಟವು ಇವೆ ಎಂದರೆ ಯಾರೂ ಅಚ್ಚರಿಪಡುವಂತದ್ದೆ.

ಯಾರಿಗಾದರು ಈ ಸಂಗತಿಗಳಲ್ಲಿ ಅನುಮಾನ ಹುಟ್ಟುವುದು ಸಹಜವೆ. ಯಾಕೆಂದರೆ ಸ್ಲಾವ್ – ವೈದಿಕ ಆರ್ಯರ ಮೂಲ ಪ್ರದೇಶವೆ ಉತ್ತರ ದ್ರುವ ಪ್ರದೇಶವಾಗಿತ್ತು ಎಂಬ ಚರಿತ್ರೆಯನ್ನೇ ನಮ್ಮಿಂದ ಮರೆಮಾಚಲಾಗಿತ್ತು ಮತ್ತು ಅದು ಬಹುದೊಡ್ಡ ಸಾಂಸ್ಕೃತಿಕ ರಾಜಕಾರಣವೂ ಆಗಿತ್ತು. ಆದರೆ ತಿಲಕರು ತಮ್ಮ “Arctic Home In the Vedas” ಎಂಬ ಪುಸ್ತಕದಲ್ಲಿ ಉತ್ತರ ಭಾರತದ ವೈದಿಕ ಆರ್ಯರ ತವರು ನೆಲ ಉತ್ತರ ದ್ರುವ ಪ್ರದೇಶವೆ, ಅಂದರೆ ಇಂದಿನ ಲಿತುವೇನಿಯ, ಲಾತ್ವಿಯ, ಬೆಲಾರಸ್ ಪ್ರದೇಶಗಳೇ ಆಗಿದ್ದವು ಎಂದು ಸಮರ್ಥ ಸಾಕ್ಷಾಧಾರಗಳೊಂದಿಗೆ ನಿರೂಪಿಸಿದ್ದಾರೆ.

ರಷ್ಯಾದಲ್ಲಿ ಸಂಸ್ಕೃತ ಭಾಷಾಮೂಲದ ನೂರಾರು ನದಿಗಳಿವೆ. ಭಾರತದಲ್ಲಿ ಕೆಲವು ನದಿಗಳನ್ನ ಹೊರತುಪಡಿಸಿದರೆ ಆ ಪ್ರಮಾಣದ ವೈದಿಕ ಪುರಾಣ ಮೂಲದ ನದಿ ಹೆಸರುಗಳು ಈ ನೆಲದಲ್ಲಿ ಇಲ್ಲವೆಂಬುದು ಪ್ರಾಚೀನ ಕಾಲದಿಂದಲು ಆರ್ಯ ವೈದಿಕರು ಇಲ್ಲಿರಲಿಲ್ಲವೆಂಬುದನ್ನೇ ಸೂಚಿಸುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending