Connect with us

ದಿನದ ಸುದ್ದಿ

ಯುಪಿಯಲ್ಲಿ ಮತ್ತೊಬ್ಬ ದಲಿತ ಯುವತಿ ಮೇಲೆ ಅತ್ಯಾಚಾರ-ಕೊಲೆ : ಇಬ್ಬರ ಬಂಧನ

Published

on

ಸುದ್ದಿದಿನ ಡೆಸ್ಕ್ : ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಾದ ಬಲರಾಮ್‍ಪುರದಲ್ಲಿ ಮತ್ತೋರ್ವ ದಲಿತ ಯುವತಿ ಅತ್ಯಾಚಾರಕ್ಕೊಳಗಾಗಿ, ತೀವೃ ಗಾಯಗಳೊಂದಿಗೆ ಮೃತಪಟ್ಟಿದ್ದಾಳೆ.

ಬಲರಾಮ್ ಪುರದ ಗ್ರೈಸಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳಾದ ಶಾಹೀದ್ ಮತ್ತು ಸಾಹಿಲ್ ಎಂಬ ಯುವಕರನ್ನು ಪೋಲೀಸರು ಬಂಧಿಸಿದ್ದಾರೆ.

ಘಟನೆ ವಿವರ

22 ವರುಷದ ಈಕೆ ಮಂಗಳವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ (ಕೆಲ ವರದಿಗಳ ಪ್ರಕಾರ ಆಕೆ ಎರಡನೆಯ ವರುಷದ ಪದವಿ ಕಾಲೇಜಿನ ಅಡ್ಮಿಷನ್‍‍ಗಾಗಿ ಕಾಲೇಜಿಗೆ ಹೋಗಿ ಮನೆಗೆ ವಾಪಾಸ್ಸು ಬರುತ್ತಿದ್ದಳು) ಆಕೆಗೆ ಪರಿಚಯದ ಶಾಹಿದ್ ಹಾಗೂ ಸಾಹಿಲ್ ಎಂಬ ಇಬ್ಬರು ಯುವಕರು ಆಕೆಯನ್ನು ಬಲವಂತವಾಗಿ ಎಳೆದೊಯ್ದು ಅತ್ಯಾಚಾರವೆಸಗಿದ್ದಾರೆ.

ಆಕೆ ತೀವೃ ರಕ್ತಸ್ರಾವ ಹಾಗೂ ಯುವಕರ ಮೃಗೀಯ ವರ್ತನೆಯಿಂದ ನಡೆಯಲೂ ಆಗದ ಸ್ಥಿತಿಯಲ್ಲಿ ಇದ್ದುದ್ದನ್ನು ಕಂಡು ಹೆದರಿದ ಅತ್ಯಾಚಾರಿಗಳು, ಅದೇ ಯುವಕರು ಆಕೆಯನ್ನು ಆವರ ಪರಿಚಯದ ವೈದ್ಯರ ಬಳಿಗೆ ಕೊಂಡೊಯ್ದು, ಗ್ಲೂಕೋಸ್ ಡ್ರಿಪ್ಸ್ ಹಾಕಿ, ರಿಕ್ಷಾದಲ್ಲಿ ಕುಳ್ಳಿರಿಸಿ ಮನೆಗೆ ಕಳುಹಿಸಿದ್ದಾರೆ.

ಅಷ್ಟರವರೆಗೆ ಆಕೆಯ ಹುಡುಕಿ ಕಂಗಾಲಾಗಿದ್ದ ಹೆತ್ತವರು, ಆಕೆಯನ್ನು ತಂದ ರಿಕ್ಷಾ ಮನೆ ಬಳಿ ಬರುತ್ತಿದ್ದಂತೆ, ಆಕೆಯ ಪರಿಸ್ಥಿತಿಯನ್ನು ಕಂಡು, ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದರೆ ಚಿಕಿತ್ಸೆಗೆ ಪ್ರತಿಕ್ರಯಿಸದೆ, ಆಕೆ ಮೃತಪಟ್ಟಿದ್ದಾಳೆ. ಹೆತ್ತವರನ್ನು ನೋಡುತ್ತಲೇ “ಅಮ್ಮಾ ನನಗೆ ತೀವೃ ನೋವಾಗುತ್ತಿದೆ. ನಾನು ಬದುಕುಳಿಯಲಾರೆ,” ಎಂದು ಆಕೆ ನೋವಿನಿಂದ ನರಳುತ್ತಿದ್ದಳೆಂದು ಆಕೆಯ ಹೆತ್ತವರು ಹೇಳಿದ್ದಾರೆ. ಅವರ ಪ್ರಕಾರ ಅತ್ಯಾಚಾರಿಗಳು ಆಕೆಯ ಕೈಗಳನ್ನು ಮುರಿದಿದ್ದರು ಹಾಗೂ ಆಕೆಯ ಬೆನ್ನುಮೂಳೆಗೂ ಪೆಟ್ಟಾಗಿತ್ತು.‌ ಈ ಸಂಬಂಧ ಅತ್ಯಾಚಾರಿಗಳ ಮೇಲೆ ಕುಟುಂಬದವರು ಅತ್ಯಾಚಾರ-ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪೋಲಿಸ್ ಹೇಳಿಕೆ

ಬಲರಾಮ್ ಪೋಲೀಸರು ಮತ್ತಿತರ ಮರಣೋತ್ತರ ಪರೀಕ್ಷೆಯಲ್ಲಿ ಯುವತಿಯ ಕೈ-ಕಾಲು ಮುರಿದಿರುವುದು ದೃಢಪಟ್ಟಿಲ್ಲವೆಂದು ಟ್ವೀಟ್ ಮಾಡುವುದರ ಮೂಲಕ ಆರೋಪವನ್ನು ಅಲ್ಲಗಳೆದಿದ್ದಾರೆ.

ದೇವಿಪಟ್ನ ವಲಯದ ಐಜಿಪಿ ರಾಕೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ” ಯುವತಿಗೆ ಅತಿಯಾದ ರಕ್ತಸ್ರಾವ ಆದಕಾರಣ ಆಕೆ ಮೃತಪಟ್ಟಿದ್ದಾಳೆ. ಆಕೆಯ ಮೇಲೆ ಅತ್ಯಾಚಾರ ಆಗಿದೆಯೋ,ಇಲ್ಲವೋ ಎಂಬುದು ವೈದ್ಯರು ಪರೀಕ್ಷೆಯ ವರದಿ ಬಂದ ಮೇಲೆ ತಿಳಿಸಲಾಗುವುದು” ಎಂದು ಹೇಳಿಕೆ ನೀಡಿದ್ದಾರೆ‌.

https://twitter.com/priyankagandhi/status/1311507851831996416?s=20

https://m.timesofindia.com/city/lucknow/another-dalit-woman-raped-killed-in-up-2-arrested/amp_articleshow/78418057.cms

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಶ್ರೀಮಂತಿಕೆಯ ನಡುವೆ ಸರಳ ಬದುಕು: 50 ರೂ. ಹೇರ್‌ಕಟ್‌ ಹೇಳಿದ ಡಿಕೆಶಿ

Published

on

ಆಸ್ತಿ ಬಗ್ಗೆ ಹೆಮ್ಮೆ, ಬದುಕಿನಲ್ಲಿ ಸರಳತೆ: ಡಿಕೆಶಿ ಹೇಳಿಕೆಯ ಸುತ್ತ ಚರ್ಚೆ

ಸುದ್ದಿದಿನ,ಬೆಂಗಳೂರು: ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಅವರು ತಮ್ಮ ಆಸ್ತಿ ಮತ್ತು ಸರಳ ಜೀವನಶೈಲಿಯ ಕುರಿತು ನೀಡಿರುವ ಹೇಳಿಕೆ ಇದೀಗ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ಸಾರ್ವಜನಿಕರಲ್ಲೂ ಚರ್ಚೆಗೆ ಕಾರಣವಾಗಿದೆ. ಶ್ರೀಮಂತ ರಾಜಕಾರಣಿ ಎಂಬ ಗುರುತಿನ ನಡುವೆಯೂ, ತಾವು ಇಂದಿಗೂ ಹೇರ್‌ಕಟ್‌ಗೆ ಕೇವಲ 50 ರೂ. ಖರ್ಚು ಮಾಡುತ್ತೇನೆ ಎಂದು ಅವರು ಹೇಳಿರುವುದು ಗಮನ ಸೆಳೆದಿದೆ.

ಹೈಲೈಟ್ಸ್

  • ಈಗಲೂ 50 ರೂ. ನೀಡಿ ಹೇರ್‌ಕಟ್‌ ಮಾಡಿಸಿಕೊಳ್ಳುವುದಾಗಿ ಡಿಕೆಶಿ ಹೇಳಿದ್ದಾರೆ.
  • ದುಂದು ವೆಚ್ಚ ಇಷ್ಟವಿಲ್ಲ, ಅಗತ್ಯವಿರುವಷ್ಟೇ ಖರ್ಚು ಮಾಡುತ್ತೇನೆ ಮತ್ತು ಸರಳ ಜೀವನಕ್ಕೆ ಆದ್ಯತೆ ನೀಡುತ್ತೇನೆ
  • ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆಗೆ ಸಾಕಾಗುತ್ತದೆ
  • ‘ಅಮಿತ್‌ ಶಾ’ ಹೋಲಿಕೆ ಬೇಡ: ತಮ್ಮನ್ನು ಕಾಂಗ್ರೆಸ್‌ನ ಅಮಿತ್‌ ಶಾ ಎಂದು ಕರೆಯುವುದಕ್ಕೆ ಡಿಕೆಶಿ ವಿರೋಧ ವ್ಯಕ್ತಪಡಿಸಿದ್ದಾರೆ.
  • 2028ರ ವಿಶ್ವಾಸ: ಕರ್ನಾಟಕದಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಎರಡು-ಮೂರು ಪೀಳಿಗೆಗೆ ಸಾಕಾಗುವಷ್ಟು ಆಸ್ತಿ’

ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಮಂಡಲದ ಮುಂಗಾರು ಅಧಿವೇಶನದಲ್ಲಿ ಮಾತನಾಡಿದ್ದ ಡಿಕೆ ಶಿವಕುಮಾರ್‌, ತಮ್ಮ ಪೂರ್ವಜರು ಮತ್ತು ತಾವು ಸಂಪಾದಿಸಿರುವ ಆಸ್ತಿ ಎರಡು-ಮೂರು ಪೀಳಿಗೆ ಕುಳಿತು ತಿನ್ನುವಷ್ಟು ಇದೆ ಎಂದು ಹೇಳಿದ್ದರು. ಮುಖ್ಯಮಂತ್ರಿ ಸ್ಥಾನವನ್ನು ಹಣ ಸಂಪಾದಿಸುವ ಉದ್ದೇಶಕ್ಕಾಗಿ ಬಳಸಿಕೊಳ್ಳುವುದಿಲ್ಲ. ಬದಲಾಗಿ ಕರ್ನಾಟಕದಲ್ಲಿ ಹೊಸ ಇತಿಹಾಸ ಸೃಷ್ಟಿಸುವುದು ಮತ್ತು ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡುವುದು ತಮ್ಮ ಗುರಿ ಎಂದು ಅವರು ಹೇಳಿದ್ದರು.

ಡಿಕೆ ಶಿವಕುಮಾರ್‌ ಅವರು ದೇಶದ ಶ್ರೀಮಂತ ಮುಖ್ಯಮಂತ್ರಿಗಳ ಪೈಕಿ ಒಬ್ಬರು ಎಂಬ ವಿಚಾರವೂ ಈ ಹಿಂದೆ ವರದಿಯಾಗಿತ್ತು. ಆದರೆ ತಮ್ಮ ವೈಯಕ್ತಿಕ ಜೀವನಶೈಲಿಯಲ್ಲಿ ದುಂದು ವೆಚ್ಚಕ್ಕೆ ಆದ್ಯತೆ ನೀಡುವುದಿಲ್ಲ ಎಂಬ ಸಂದೇಶವನ್ನು ಅವರು ಇದೀಗ ನೀಡಿದ್ದಾರೆ.

http://Visit : www.suddidina.com

50 ರೂ. ಹೇರ್‌ಕಟ್‌: ಸರಳ ಬದುಕಿನ ಉದಾಹರಣೆ

ಆ.26ರಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಡಿಕೆ ಶಿವಕುಮಾರ್‌ ತಮ್ಮ ಹೇರ್‌ಕಟ್‌ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. “ನಾನು ನನ್ನ ಹೇರ್‌ಕಟ್‌ಗಾಗಿ 50 ರೂ. ಖರ್ಚು ಮಾಡುತ್ತೇನೆ. ಸರಳ ಜೀವನ ನನಗೆ ಇಷ್ಟ. ದುಂದು ವೆಚ್ಚ ನನಗೆ ಇಷ್ಟವಿಲ್ಲ” ಎಂಬರ್ಥದಲ್ಲಿ ಅವರು ಮಾತನಾಡಿದ್ದಾರೆ.

ದಿಲ್ಲಿಯಲ್ಲಿಯೂ ತಾವು 50 ರೂ. ನೀಡಿ ಹೇರ್‌ಕಟ್‌ ಮಾಡಿಸಿಕೊಳ್ಳುವುದಾಗಿ ಹೇಳಿರುವ ಅವರು, ಜೀವನ ನಡೆಸಲು ಎಷ್ಟು ಅಗತ್ಯವೋ ಅಷ್ಟನ್ನೇ ಖರ್ಚು ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅವರ ಆಸ್ತಿ ಪ್ರಮಾಣಕ್ಕಿಂತ ಅವರ ವೈಯಕ್ತಿಕ ಖರ್ಚಿನ ಈ ಉದಾಹರಣೆಯೇ ಇದೀಗ ಹೆಚ್ಚು ಗಮನ ಸೆಳೆಯುತ್ತಿದೆ.

‘ಕಾಂಗ್ರೆಸ್‌ನ ಅಮಿತ್‌ ಶಾ’ ಹೋಲಿಕೆಗೆ ಡಿಕೆಶಿ ವಿರೋಧ

ಇದೇ ಸಂದರ್ಶನದಲ್ಲಿ ತಮ್ಮನ್ನು ‘ಕಾಂಗ್ರೆಸ್‌ನ ಅಮಿತ್‌ ಶಾ’ ಎಂದು ಕರೆಯುವುದಕ್ಕೂ ಡಿಕೆ ಶಿವಕುಮಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ತಾವು ಕಾಂಗ್ರೆಸ್‌ನ ಸಾಮಾನ್ಯ ಕಾರ್ಯಕರ್ತನಾಗಿದ್ದು, ಪಕ್ಷ ನೀಡುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುವುದೇ ತಮ್ಮ ಕರ್ತವ್ಯ ಎಂದು ಹೇಳಿದ್ದಾರೆ.

ಯುವಜನರ ಶಕ್ತಿ, ಆಲೋಚನೆ ಮತ್ತು ಮಹತ್ವಾಕಾಂಕ್ಷೆಗಳ ಮೇಲೆ ಕಾಂಗ್ರೆಸ್‌ ನಂಬಿಕೆ ಇಟ್ಟಿದೆ. ಯುವಕರಿಗೆ ಕಲಿಯಲು, ಹೊಸದನ್ನು ಸೃಷ್ಟಿಸಲು ಹಾಗೂ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅವಕಾಶ ಕಲ್ಪಿಸುವುದು ತಮ್ಮ ದೃಷ್ಟಿಕೋನ ಎಂದು ಅವರು ಹೇಳಿದ್ದಾರೆ.

2028ರ ಚುನಾವಣೆಯಲ್ಲೂ ವಿಶ್ವಾಸ

2028ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೊಮ್ಮೆ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಡಿಕೆ ಶಿವಕುಮಾರ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಗೆ ಹೋಲಿಸಿದರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯನ್ನೂ ಅವರು ತಿಳಿಸಿದ್ದಾರೆ.

ಅಲ್ಲದೆ, 2029ರ ಲೋಕಸಭೆ ಚುನಾವಣೆಯಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ರಚನೆಯಾಗಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಡಿಕೆಶಿ ಅವರ ಇತ್ತೀಚಿನ ಸಂದರ್ಶನವು ಸರಳ ಜೀವನಶೈಲಿಯಿಂದ ಹಿಡಿದು ಕಾಂಗ್ರೆಸ್‌ನ ಭವಿಷ್ಯದ ರಾಜಕೀಯ ಗುರಿಗಳವರೆಗೆ ಹಲವು ವಿಚಾರಗಳನ್ನು ಮುನ್ನೆಲೆಗೆ ತಂದಿದೆ.

Continue Reading

ದಿನದ ಸುದ್ದಿ

ಹೆಬ್ಬಾಳ–ಮೇಖ್ರಿ ಸುರಂಗ ಮಾರ್ಗ: ಸಂಚಾರ ಪರಿಹಾರವೇ, ಹೊಸ ಸಮಸ್ಯೆಯೇ?

Published

on

ಹೆಬ್ಬಾಳ ಸುರಂಗ ಯೋಜನೆಗೆ IISc ತಡೆಗೋಡೆ? ಟ್ರಾಫಿಕ್ ಕಡಿಮೆ ಮಾಡುವ ಬದಲು ದಟ್ಟಣೆ ಹೆಚ್ಚಿಸಲಿದೆ ಎಂಬ ಎಚ್ಚರಿಕೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರದ ಪ್ರಮುಖ ಸಂಚಾರ ಕಿರಿಕಿರಿ ಕೇಂದ್ರವಾಗಿರುವ ಹೆಬ್ಬಾಳ ಜಂಕ್ಷನ್‌ನಿಂದ ಮೇಖ್ರಿ ವೃತ್ತದವರೆಗೆ ಉದ್ದೇಶಿಸಿರುವ ಸುರಂಗ ಮಾರ್ಗ ಯೋಜನೆ ಇದೀಗ ತಜ್ಞರ ವರದಿಯಿಂದ ಚರ್ಚೆಗೆ ಬಂದಿದೆ. ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದ ಈ ಯೋಜನೆಯೇ ಹೊಸ ಟ್ರಾಫಿಕ್ ಸಮಸ್ಯೆಗೆ ಕಾರಣವಾಗಬಹುದು ಎಂದು IISc ಅಧ್ಯಯನ ಎಚ್ಚರಿಸಿದೆ.

ಹೆಬ್ಬಾಳ ಸುರಂಗ ಯೋಜನೆಗೆ IISc ಆಕ್ಷೇಪ

ಕರ್ನಾಟಕ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಅಥಾರಿಟಿ (GBA) ಮಹತ್ವಾಕಾಂಕ್ಷೆಯ ಯೋಜನೆಯಾಗಿ ಪರಿಗಣಿಸಿರುವ ಹೆಬ್ಬಾಳ ಸುರಂಗ ಮಾರ್ಗಕ್ಕೆ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ಅಧ್ಯಯನ ವರದಿ ಹಲವು ಪ್ರಶ್ನೆಗಳನ್ನು ಎತ್ತಿದೆ. IIScಯ Sustainable Transportation (IST) Lab ನಡೆಸಿರುವ ಅಧ್ಯಯನದ ಪ್ರಕಾರ, ಕಿರು ಸುರಂಗ ಮಾರ್ಗ ನಿರ್ಮಾಣದಿಂದ ಹೆಬ್ಬಾಳದ ಒಟ್ಟಾರೆ ಸಂಚಾರ ಸಮಸ್ಯೆ ಪರಿಹಾರವಾಗುವ ಸಾಧ್ಯತೆ ಕಡಿಮೆ.

ಸುರಂಗದಿಂದ ಹೊರಬರುವ ವಾಹನಗಳ ದಟ್ಟಣೆ ಪಶುವೈದ್ಯಕೀಯ ಆಸ್ಪತ್ರೆ ಮತ್ತು ಎಸ್ಟೀಮ್ ಮಾಲ್ ಭಾಗದ ರಸ್ತೆಗಳತ್ತ ವರ್ಗಾವಣೆಯಾಗುವ ಸಾಧ್ಯತೆ ಇದೆ. ಇದರಿಂದ ಮೇಖ್ರಿ ವೃತ್ತದವರೆಗೆ ವಾಹನಗಳ ಸಾಲು ಹೆಚ್ಚಾಗಿ, ಒಂದು ಪ್ರದೇಶದ ಟ್ರಾಫಿಕ್ ಸಮಸ್ಯೆಯನ್ನು ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಿದಂತಾಗಬಹುದು ಎಂದು ವರದಿ ಎಚ್ಚರಿಸಿದೆ.

http://Visit : www.suddidina.com

ಸುರಂಗಕ್ಕಿಂತ ಮೆಟ್ರೋವೇ ಆರ್ಥಿಕ?

IISc ಸಿವಿಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಆಶಿಶ್ ವರ್ಮಾ ಸಿದ್ಧಪಡಿಸಿರುವ ಅಧ್ಯಯನದಲ್ಲಿ ಸುರಂಗ ಯೋಜನೆಯ ವೆಚ್ಚ ಮತ್ತು ಅದರ ಪ್ರಯೋಜನವನ್ನು ಹೋಲಿಸಲಾಗಿದೆ. ವರದಿ ಪ್ರಕಾರ, ಸುರಂಗ ಮಾರ್ಗದಲ್ಲಿ ಪ್ರತಿ ಪ್ರಯಾಣಿಕನಿಗೆ ಅಂದಾಜು ₹5.23 ವೆಚ್ಚವಾಗಲಿದ್ದು, ಮೆಟ್ರೋದಲ್ಲಿ ಇದೇ ಪ್ರಮಾಣದ ಪ್ರಯಾಣಿಕರಿಗೆ ಸುಮಾರು ₹0.86 ವೆಚ್ಚವಾಗಲಿದೆ.

ಪ್ರತಿ ಗಂಟೆಗೆ ಪ್ರತಿ ದಿಕ್ಕಿನ ಪ್ರಯಾಣಿಕರ ಸಾಮರ್ಥ್ಯದ ಆಧಾರದಲ್ಲಿಯೂ ವ್ಯತ್ಯಾಸ ದೊಡ್ಡದಾಗಿದೆ. ಸುರಂಗದ ಪ್ರತಿ ಯೂನಿಟ್ ಸಾಮರ್ಥ್ಯಕ್ಕೆ ಸುಮಾರು ₹13.74 ಲಕ್ಷ ವೆಚ್ಚವಾಗಬಹುದಾದರೆ, ಮೆಟ್ರೋಗೆ ₹2.26 ಲಕ್ಷ ಮಾತ್ರ ಬೇಕಾಗಬಹುದು. ಅಂದರೆ, ಸಾಮರ್ಥ್ಯದ ದೃಷ್ಟಿಯಿಂದ ಸುರಂಗ ಮಾರ್ಗವು ಮೆಟ್ರೋಗಿಂತ ಹಲವು ಪಟ್ಟು ದುಬಾರಿಯಾಗಲಿದೆ ಎಂಬುದು ಅಧ್ಯಯನದ ಪ್ರಮುಖ ಅಂಶ.

DPRನಲ್ಲೂ ಹಲವು ಲೋಪಗಳ ಆರೋಪ

ಯೋಜನೆಯ ವಿಸ್ತೃತ ಯೋಜನಾ ವರದಿ (DPR)ಯಲ್ಲೂ ಗಂಭೀರ ಲೋಪಗಳಿವೆ ಎಂದು IST Lab ಉಲ್ಲೇಖಿಸಿದೆ. ಹೆಬ್ಬಾಳ ಮೇಲ್ಸೇತುವೆಯ ಪಥಗಳ ಸಾಮರ್ಥ್ಯ ಅಂದಾಜಿನಲ್ಲಿ ಶಿಫಾರಸು ಮಾಡಬಹುದಾದ ಸಾಮರ್ಥ್ಯಕ್ಕಿಂತ ಕಡಿಮೆ ಅಂಕಿಅಂಶಗಳನ್ನು ಬಳಸಲಾಗಿದೆ ಎಂಬ ಆಕ್ಷೇಪವಿದೆ.

ಇದಲ್ಲದೆ, ಸುರಂಗದ ಅಗತ್ಯತೆಯನ್ನು ಸಮರ್ಥಿಸಲು ಮೂಲ ಸಂಚಾರ ದಟ್ಟಣಿಯ ಅಂಕಿಅಂಶಗಳಲ್ಲಿ ಬದಲಾವಣೆ ಮಾಡಲಾಗಿದೆ ಎಂಬ ಆರೋಪವೂ ವರದಿಯಲ್ಲಿದೆ.

ತಿರುವು, ಪ್ರವಾಹದ ಅಪಾಯವೂ ಪ್ರಶ್ನೆ

ಎಸ್ಟೀಮ್ ಮಾಲ್ ನಿರ್ಗಮನದ ಬಳಿ ಸುಮಾರು 60 ಮೀಟರ್ ತಿರುವು ಇರಲಿದ್ದು, ವಾಹನಗಳ ವೇಗವನ್ನು 60 ಕಿ.ಮೀ.ನಿಂದ 40 ಕಿ.ಮೀ.ಗೆ ಇಳಿಸುವ ಸಾಧ್ಯತೆಯಿದೆ. ಇದರಿಂದ ವಾಹನಗಳ ಸಾಲು ಹೆಚ್ಚಾಗುವ ಅಪಾಯವಿದ್ದರೂ DPRನಲ್ಲಿ ಈ ಅಂಶವನ್ನು ಸಮರ್ಪಕವಾಗಿ ಪರಿಗಣಿಸಿಲ್ಲ ಎಂದು ವರದಿ ಹೇಳಿದೆ.

ಹೆಬ್ಬಾಳ ಕೆರೆಯ ಸಮೀಪ ಸುರಂಗದ ಪ್ರವೇಶ ದ್ವಾರ ತಗ್ಗು ಪ್ರದೇಶದಲ್ಲಿರುವುದರಿಂದ ಮಳೆಗಾಲದಲ್ಲಿ ಪ್ರವಾಹದ ಅಪಾಯವೂ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಮೆಟ್ರೋ ಸಂಪರ್ಕಕ್ಕೆ ಒತ್ತು

ಒಟ್ಟಾರೆ, ಹೆಬ್ಬಾಳ ಸುರಂಗ ಯೋಜನೆಯ ಬದಲಿಗೆ ಸಮರ್ಥ ಸಾರ್ವಜನಿಕ ಸಾರಿಗೆ ವ್ಯವಸ್ಥೆ, ವಿಶೇಷವಾಗಿ ಮೆಟ್ರೋ ಸಂಪರ್ಕವನ್ನು ಬಲಪಡಿಸುವುದು ದೀರ್ಘಕಾಲೀನ ಪರಿಹಾರವಾಗಬಹುದು ಎಂಬ ಅಭಿಪ್ರಾಯವನ್ನು IISc ಅಧ್ಯಯನ ಮುಂದಿಟ್ಟಿದೆ. ಹೀಗಾಗಿ, ಯೋಜನೆಗೆ ಮುಂದುವರಿಯುವ ಮುನ್ನ ಅದರ ವೆಚ್ಚ, ಸಂಚಾರ ಪರಿಣಾಮ, ಸುರಕ್ಷತೆ ಮತ್ತು DPR ಅಂಕಿಅಂಶಗಳನ್ನು ಮರುಪರಿಶೀಲಿಸುವ ಅಗತ್ಯ ಎದುರಾಗಿದೆ.

Continue Reading

ದಿನದ ಸುದ್ದಿ

ಶಿವರಾಮ ಕಾರಂತ ಬಡಾವಣೆಗೆ ಮುಹೂರ್ತ: ಆ.31ಕ್ಕೆ 18 ಸಾವಿರ ನಿವೇಶನ ಹಂಚಿಕೆ?

Published

on

ದಶಕದ ಕಾನೂನು ಸಂಕೋಲೆ ಅಂತ್ಯ; ಕಾರಂತ ಬಡಾವಣೆಯಲ್ಲಿ 18 ಸಾವಿರ ನಿವೇಶನ ಹಂಚಿಕೆಗೆ ಮುಹೂರ್ತ!

ಸುದ್ದಿದಿನ,ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಹತ್ವಾಕಾಂಕ್ಷೆಯ ಡಾ. ಕೆ. ಶಿವರಾಮ ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ದೀರ್ಘಕಾಲದ ಕಾನೂನು ವಿವಾದಗಳ ಬಳಿಕ ಹೈಕೋರ್ಟ್‌ ಅನುಮತಿ ದೊರೆತಿರುವ ಹಿನ್ನೆಲೆಯಲ್ಲಿ, ಆ.31ರಂದು ಭೂಮಿ ನೀಡಿದ ರೈತರು ಹಾಗೂ ಭೂಮಾಲೀಕರಿಗೆ 18 ಸಾವಿರ ನಿವೇಶನ ಹಂಚಿಕೆ ಮಾಡುವ ಮೂಲಕ ಪ್ರಕ್ರಿಯೆಗೆ ಸಾಂಕೇತಿಕ ಚಾಲನೆ ನೀಡುವ ಸಾಧ್ಯತೆ ಇದೆ.

ಹೈಲೈಟ್ಸ್:

  • ಆ.31ರಂದು ಕಾರಂತ ಬಡಾವಣೆಯ ನಿವೇಶನ ಹಂಚಿಕೆಗೆ ಚಾಲನೆ ನೀಡುವ ಸಾಧ್ಯತೆ
  • 3,200 ರೈತರು ಹಾಗೂ ಭೂಮಾಲೀಕರಿಗೆ ಸುಮಾರು 18,000 ನಿವೇಶನ ಮೀಸಲು
  • ಹೈಕೋರ್ಟ್‌ ಹಸಿರು ನಿಶಾನೆ ಬಳಿಕ ದಶಕದ ಕಾನೂನು ತೊಡಕು ನಿವಾರಣೆ
  • ಸಾರ್ವಜನಿಕರಿಂದಲೂ ನಿವೇಶನಕ್ಕಾಗಿ ಅರ್ಜಿ ಆಹ್ವಾನಿಸುವ ನಿರೀಕ್ಷೆ
  • ವಸತಿ ನಿವೇಶನದ ದರ ಚದರ ಅಡಿಗೆ ₹6,000; 30×40 ಸೈಟ್‌ಗೆ ₹72 ಲಕ್ಷ

ಕಾನೂನು ತೊಡಕು ನಿವಾರಣೆ

ಉತ್ತರ ಬೆಂಗಳೂರಿನಲ್ಲಿ ರೂಪುಗೊಂಡಿರುವ ಡಾ. ಕೆ. ಶಿವರಾಮ ಕಾರಂತ ಬಡಾವಣೆ ಹಲವು ವರ್ಷಗಳಿಂದ ಕಾನೂನು ವಿವಾದಗಳಿಂದಾಗಿ ಸ್ಥಗಿತಗೊಂಡಿತ್ತು. ಇದೀಗ ಹೈಕೋರ್ಟ್‌ ನಿವೇಶನ ಹಂಚಿಕೆ ಹಾಗೂ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುವ ಪ್ರಕ್ರಿಯೆಗೆ ಹಸಿರು ನಿಶಾನೆ ತೋರಿಸಿರುವ ಹಿನ್ನೆಲೆಯಲ್ಲಿ ಬಡಾವಣೆಗೆ ಹೊಸ ಚೈತನ್ಯ ಬಂದಿದೆ.

ಸುಮಾರು 3,069 ಎಕರೆ ಪ್ರದೇಶದಲ್ಲಿ, ಆವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್‌ ಸೇರಿದಂತೆ 17 ಹಳ್ಳಿಗಳನ್ನು ಒಳಗೊಂಡಿರುವ ಈ ಬಡಾವಣೆ ದಶಕಕ್ಕೂ ಹೆಚ್ಚು ಕಾಲ ವಿವಿಧ ಕಾನೂನು ತೊಡಕುಗಳನ್ನು ಎದುರಿಸಿತ್ತು. ಸಮಸ್ಯೆ ಪರಿಹಾರಕ್ಕಾಗಿ ಸುಪ್ರೀಂ ಕೋರ್ಟ್‌ ವಿಶೇಷ ಮೂವರು ಸದಸ್ಯರ ಸಮಿತಿಯನ್ನೂ ರಚಿಸಿತ್ತು.

http://Visit : www.suddidina.com

3,200 ಭೂಮಾಲೀಕರಿಗೆ 18 ಸಾವಿರ ಸೈಟ್‌

ಬಡಾವಣೆ ನಿರ್ಮಾಣಕ್ಕಾಗಿ ಸುಮಾರು 3,200 ರೈತರು ಮತ್ತು ಭೂಮಾಲೀಕರು ತಮ್ಮ ಜಮೀನು ನೀಡಿದ್ದಾರೆ. ಅವರ ತ್ಯಾಗಕ್ಕೆ ಪ್ರತಿಫಲವಾಗಿ ಸುಮಾರು 18 ಸಾವಿರ ನಿವೇಶನಗಳನ್ನು ಮೀಸಲಿಡಲಾಗಿದೆ. ಒಟ್ಟಾರೆ ಬಡಾವಣೆಯಲ್ಲಿ ವಿವಿಧ ಅಳತೆಯ 34,992 ನಿವೇಶನಗಳನ್ನು ರಚಿಸಲಾಗಿದೆ ಎಂದು ಬಿಡಿಎ ಮೂಲಗಳು ತಿಳಿಸಿವೆ.

ಆ.31ರಂದು ನಡೆಯುವ ಸಾಧ್ಯತೆಯಿರುವ ಕಾರ್ಯಕ್ರಮದಲ್ಲಿ 600ರಿಂದ 1,000 ಮಂದಿ ಭೂಮಾಲೀಕರಿಗೆ ಮುಖ್ಯಮಂತ್ರಿಗಳಿಂದ ಸಾಂಕೇತಿಕವಾಗಿ ನಿವೇಶನ ಹಂಚಿಕೆ ಮಾಡುವ ನಿರೀಕ್ಷೆಯಿದೆ. ಉಳಿದ ಫಲಾನುಭವಿಗಳಿಗೆ ಪ್ರತ್ಯೇಕ ಕೌಂಟರ್‌ಗಳ ಮೂಲಕ ಹಂಚಿಕೆ ಮಾಡುವ ವ್ಯವಸ್ಥೆ ಕಲ್ಪಿಸುವ ಉದ್ದೇಶವಿದೆ.

ಸಾರ್ವಜನಿಕರಿಗೂ ಅರ್ಜಿ ಸಲ್ಲಿಕೆಗೆ ಅವಕಾಶ

ಭೂಮಾಲೀಕರಿಗೆ ನಿವೇಶನ ಹಂಚಿಕೆಯ ಜೊತೆಗೆ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸುವ ಪ್ರಕ್ರಿಯೆಗೂ ಚಾಲನೆ ನೀಡಲು ಬಿಡಿಎ ಮುಂದಾಗಿದೆ. ಇದರಿಂದ ಹಲವು ವರ್ಷಗಳಿಂದ ಕಾರಂತ ಬಡಾವಣೆಯಲ್ಲಿ ನಿವೇಶನ ಪಡೆಯುವ ನಿರೀಕ್ಷೆಯಲ್ಲಿದ್ದ ಸಾರ್ವಜನಿಕರಿಗೂ ಅವಕಾಶ ದೊರೆಯಲಿದೆ.

ಚದರ ಅಡಿಗೆ ₹6,000 ದರ

ಕಾರಂತ ಬಡಾವಣೆಯ ವಸತಿ ನಿವೇಶನಗಳ ಬೆಲೆಯನ್ನು ಚದರ ಅಡಿಗೆ ₹6,000 ಎಂದು ನಿಗದಿಪಡಿಸಲಾಗಿದೆ. ಮೂರು ವರ್ಷಗಳ ಹಿಂದೆ ಚದರ ಅಡಿಗೆ ₹5,000 ದರ ಪ್ರಸ್ತಾಪಿಸಲಾಗಿತ್ತು. ಇದೀಗ ₹1,000 ಹೆಚ್ಚಳ ಮಾಡಲಾಗಿದೆ.

ಪರಿಷ್ಕೃತ ದರದಂತೆ 30×40 ಅಡಿ, ಅಂದರೆ 1,200 ಚದರ ಅಡಿ ನಿವೇಶನಕ್ಕೆ ಸುಮಾರು ₹72 ಲಕ್ಷ ವೆಚ್ಚವಾಗಲಿದೆ.

ಹಲವು ವರ್ಷಗಳ ನಿರೀಕ್ಷೆಗೆ ತೆರೆ?

ನ್ಯಾಯಾಲಯದ ತೀರ್ಪು ಹಾಗೂ ಆಡಳಿತಾತ್ಮಕ ಪ್ರಕ್ರಿಯೆಗಳು ವೇಗ ಪಡೆದಿರುವ ಹಿನ್ನೆಲೆಯಲ್ಲಿ ಕಾರಂತ ಬಡಾವಣೆಯ ನಿವೇಶನ ಹಂಚಿಕೆ ಇದೀಗ ನಿರ್ಣಾಯಕ ಹಂತ ತಲುಪಿದೆ. ಆ.31ರ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೆ, ಭೂಮಿ ನೀಡಿದ ಸಾವಿರಾರು ಕುಟುಂಬಗಳ ಹಲವು ವರ್ಷಗಳ ನಿರೀಕ್ಷೆಗೆ ತೆರೆ ಬೀಳುವುದರ ಜೊತೆಗೆ ಸಾರ್ವಜನಿಕರಿಗೂ ನಿವೇಶನ ಪಡೆಯುವ ದಾರಿ ಮತ್ತಷ್ಟು ಸ್ಪಷ್ಟವಾಗಲಿದೆ.

Continue Reading

Trending