ಸಿನಿ ಸುದ್ದಿ
‘Article 15’ ಒಂದು ಅಪರೂಪದ ಚಿತ್ರ
![](https://suddidina.com/wp-content/uploads/2019/07/Article-15-suddidina-65.jpg)
ಅನುಭವ ಸಿನ್ಹಾ ನಿರ್ದೇಶನದ ಆರ್ಟಿಕಲ್15 ಹಿಂದಿ ಚಲನಚಿತ್ರ ಇಂದಿನ ಸಮಾಜೋ-ರಾಜಕೀಯ ವ್ಯವಸ್ಥೆಗೆ ಕನ್ನಡಿ ಹಿಡಿದ ಕಹಿವಾಸ್ತವದ ಚಿತ್ರ. ಮೊಬ್ ಲಿಂಚಿಂಗ್ ,ದಲಿತ ಯುವಕರನ್ನು ತುಂಬಿದ ಬಾಜಾರಿನಲ್ಲಿ ವಾಹನದ ಹಿಂಬದಿಗೆ ಕಟ್ಟಿ ಥಳಿಸುವ, ಇಬ್ಬರು ದಲಿತ ಅಲ್ಪವಯಸ್ಸಿನ ಯುವತಿಯರನ್ನು ಎಳೆದೊಯ್ದು ಸಾಮೂಹಿಕ ಬಲಾತ್ಕಾರ ಎಸಗಿ ಜೀವಂತ ಮರಕ್ಕೆ ನೇತು ಹಾಕಿದ ಸತ್ಯ ಘಟನೆಯ ಆಧರಿಸಿದ ಸಮಕಾಲೀನ ವ್ಯಂಗ್ಯಾತ್ಮಕ ಚಿತ್ರ. ಕೆಲವು ಕಡೆ ಈ ಚಿತ್ರವನ್ನು ಕಾನೂನು,ಸುವ್ಯವಸ್ಥೆ ಹೆಸರಡಿ ನಿಷೇಧಿಸಲಾಗಿದೆ ಎಂಬ ವರದಿಯಿದೆ.
ಬಿಗಿಯಾದ ಚಿತ್ರಪಟಕಥೆಯ ನಿರೂಪಣೆ, ಚುರುಕಾದ ಎದೆಗಿಳಿವ ಕತ್ತಿಅಲಗಿನ ಸಂಭಾಷಣೆ, ದೃಶ್ಯ ಕಾವ್ಯದಂತಿರುವ ಛಾಯಾಗ್ರಹಣ-ಇವು ಇಡೀ ಚಿತ್ರವನ್ನು ಕುತೂಹಲದಿಂದ ವೀಕ್ಷಿಸುವಂತೆ ಪ್ರೇರೇಪಿಸುತ್ತವೆ. ದಟ್ಟ ಪರಿಣಾಮವನ್ನೂ ಉಂಟು ಮಾಡುತ್ತದೆ.ಚಿತ್ರ ಆರಂಭವಾಗುವುದು ಒಂದು ಕ್ರಾಂತಿ ಗೀತೆಯ ಹಾಡಿನ ಮೂಲಕ ಮತ್ತು ಅಂತ್ಯವಾಗುವುದು ಒಂದು ರ್ಯಾಪ್ ಹಾಡಿನಿಂದ. ಇದರ ಮಧ್ಯ ನಡೆವ ಪ್ರಸಂಗಗಳು ಮಾತ್ರ ಬೆಚ್ಚಿಬೀಳುಸುತ್ತ ಸಾಗುತ್ತವೆ.
ಉತ್ತರಪ್ರದೇಶದ ಒಂದು ಠಾಣೆಗೆ ಒಬ್ಬ ಯುವ ಅಡಿಷನಲ್ ದಕ್ಷ ಪೋಲಿಸ್ ಆಫೀಸರ್ ಸೇವೆಗೆ ನಿಯುಕ್ತನಾಗುತ್ತಾನೆ. ಆಗತಾನೆ ಸವರ್ಣಿಯವರಿಂದ ದೌರ್ಜನ್ಯಗಳು ನಡೆದಿರುತ್ತದೆ. ಜನವೂ ಸಹ ಇದು ಸರ್ವೇ ಸಾಮಾನ್ಯ ಎಂದು ಕುಂಡಿ ಹೊಸೆಯುತ್ತ ಬದುಕುತ್ತಿರುತ್ತಾರೆ. 25 ರೂಪೈಗೆ ದುಡಿಯುತ್ತಿದ್ದ ಮೂರು ಯುವತಿಯರು ಕೇವಲ3 ರೂಪೈ ಹೆಚ್ಚಿಗೆ ಕೇಳಿದ್ದಕ್ಕೆ ಅವರನ್ನು ಹೊತ್ತೊಯ್ದು ಸತತ ಆರುದಿನ ಗ್ಯಾಂಗ್ ರೇಪಿನ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿಸಿ ಅವರ ಸಮುದಾಯದ ಜನರಲ್ಲಿ ಭಯ ಹುಟ್ಟಿಸಲು ಮೂವರಲ್ಲಿ ಇಬ್ಬರನ್ನು ಊರಗಸಿಯ ಮರಕ್ಕೆ ಜೀವಂತ ನೇಣಿಗೆ ಹಾಕುತ್ತಾರೆ ಮತ್ತು ಅವರು ಖುಲ್ಲಮ್ ಖುಲ್ಲಾ ಯಾವ ಕಾನೂನಿನ ಭಯವಿಲ್ಲದೆ ಅಲೆಯುತ್ತಿರುತ್ತಾರೆ. ಒಬ್ಬಳು ಮಾತ್ರ ನಿಗೂಢವಾಗಿ ಕಣ್ಮರೆಯಾಗಿರುತ್ತಾಳೆ.
ಆ ದಲಿತ ತಂದೆಯರನ್ನು ಠಾಣೆಯಲ್ಲಿ ಕೇಳುವವರೇ ಇಲ್ಲ. ಇಡೀ ಕಾನೂನು ವ್ಯವಸ್ಥೆ ಉಚ್ಚಕುಲದವರ ಪರವಾಗಿ ರಕ್ಷಣೆಗೆ ಟೊಂಕಕಟ್ಟಿ ನಿಂತಿದೆ. ದಲಿತ,ಒಬಿಸಿ ಮುಂತಾದವರು ಇಲ್ಲಿ ಪ್ರಾಣಿ ಸಮ. ಅದಕ್ಕೆ ಆ ಊರ ಪಕ್ಕದ ” ಸುವ್ವರ್ ಕೀ ತಾಲಾಬ್” (ಹಂದಿಗಳನ್ನು ತೊಳೆಯುವವರ ಕೆರೆ) ಒಂದು ರೂಪಕವಾಗಿದೆ.
ಇಂಥ ಬೆಚ್ಚಿಸುವ ಸಾಮಾಜಿಕ,ರಾಜಕೀಯ ವರ್ತಮಾನದಲ್ಲಿ ಯುವ ಅಧಿಕಾರಿಗೆ ಇಲ್ಲಿಯ ರೇಪ್ ಘಟನೆ ಸವಾಲಾಗಿ ಕಾಣುತ್ತದೆ.ಆಗ ಒಟ್ಟು ವ್ಯವಸ್ಥೆಯ ಒಂದೊಂದು ಪದರುಗಳು ಬಿಚ್ಚತೊಡಗುತ್ತವೆ. ಸರಕಾರಿ ವ್ಯವಸ್ಥೆಯ ಅಂಗವಾದ ಕಾನೂನು ರಕ್ಷಕರು ಸಹ ತಮ್ಮ ಕಚೇರಿಯೊಳಗೆ ಜಾಠ್,ಯಾದವ,ಠಾಕೂರ್, ಚಮ್ಮಾರ್,ಒಬಿಸಿ,ಎಸ್.ಸಿ; ಎಸ್.ಟಿ ಎಂದು ಶ್ರೇಣೀಕೃತ ಮಾನಸಿಕತೆಯಲ್ಲಿ ಕುಂಡಿ ಹೊಸೆಯುತ್ತ ಒಣಪ್ರತಿಷ್ಠೆಯ ಹುಸಿ ಬದುಕು ಅರಸಿರುತ್ತಾರೆ.ಇಂಥವರ ಮೇಲಧಿಕಾರಿಯಾಗಿ ಬಂದ ಆ ಯುವ ಅಧಿಕಾರಿ ಬ್ರಾಹ್ಮಣ ಸಮುದಾಯಕ್ಕೆ ಸೇರಿರುತ್ತಾನೆ. ಅವನು ಶಹರಲಿ ಕನಸಿದ ನ್ಯೂಇಂಡಿಯಾ ಒಂದು ಅಣಕು ಆಗಿ ಇಲ್ಲಿ ಭಾಸವಾಗುತ್ತದೆ.ಇನ್ನೂ ಫ್ಯುಡಲ್ ಭ್ರಷ್ಟ ತೆಯ ಸಾಂಪ್ರದಾಯಿಕ ಒಲ್ಡ್ ಇಂಡಿಯಾದ ಭಯಾನಕ ಪಳೆಯುಳಿಕೆಗಳು ದಿಗಿಲುಗೊಳುಸುತ್ತಿರುತ್ತವೆ.
ದಲಿತರ ಪರ ಹೋರಾಡುವ,ನ್ಯಾಯ ಕೊಡಿಸಲು ಧಡಪಡಿಸುವ ದಲಿತ ಮಹಿಳೆ ಗೌರವ ಮತ್ತು ಆಕೆಯ ಪ್ರಿಯಕರರ ಹೋರಾಟಗಳು, ದಲಿತ ಮತ್ತು ಬ್ರಾಹ್ಮಣ ರಾಜಕೀಯ ನಾಯಕರು ಒಂದಾಗಿ “ಹಿಂದು ಏಕ” ಘೋಷಣೆಯ ಪರಿಕಲ್ಪನೆಯ ರಾಜಕೀಯ ತಂತ್ರ, ಪ್ರತಿತಂತ್ರಗಳ ಸಂಘರ್ಷ, ನ್ಯಾಯ ದೊರೆಕಿಸುವಲ್ಲಿ ನಿರ್ಣಾಯಕ ಹಂತ ತಲುಪಿದಾಗ ರಾಜಕೀಯ ಒತ್ತಡದಿಂದ ಸಿಬಿಐ ತನಿಖೆ ಎದುರಿಸುವ ದಕ್ಷ ಯುವ ಅಧಿಕಾರಿಯ ತಳಮಳ, ತಲ್ಲಣಗಳು.ಹೀಗೆ ಚಿತ್ರವು ಒಂದು ಆಳವಾದ ವಿಷಾದ ಗೀತೆಯಾಗಿ ಹೊರಹೊಮ್ಮಿದೆ. ಕೊನೆಗೂ ಅಪರಾಧಿಗಳ ಪತ್ತೆಹಚ್ಚುವಲ್ಲಿ ಯಶಸ್ಸು ಕಂಡು ತಲೆಮರೆಸಿಕೊಂಡಿದ್ದ ಮೂರನೆಯವಳನ್ನು ಶೋಧಿಸಿ ಜೀವ ಸುಧಾರಕನಾಗಿ ಕಾಣುವ ನಾಯಕನಿಗೆ ಅಚ್ಚರಿ ಕಾದಿತ್ತು. ಅಪರಾಧ ಎಸಗಿದವರಲ್ಲಿ ಪೋಲಿಸ್ ಇಲಾಖೆಯ ಹೆಸರುಗಳು ಇವೆ ಎಂಬುದು.ಇದು ಬೆಳಕಿಗೆ ಬಂದಾಗ ಇಡೀ ಚಿತ್ರವು ವ್ಯವಸ್ಥೆಯ ದರುಶನವಾಗಿ ಸ್ಫೋಟಗೊಳ್ಳುತ್ತದೆ.ಬಹುಜನ ಸಮುದಾಯದವರ ಕಣ್ತೆರೆಸಲು ಒಬ್ಬ ಬ್ರಾಹ್ಮಣ ಅಧಿಕಾರಿಯೇ ರಿಫಾರ್ಮರ್ ಆಗಿ ಬರಬೇಕಾಯಿತೆ! ಎನ್ನುವ ಒಂದು ಪ್ರಶ್ನೆ ಎದ್ದೇಳುತ್ತದೆ. ಆದರೆ ಇದು ವಾಸ್ತವವೂ ಹೌದು ಎಂದು ಒಪ್ಪಲೂಬೇಕಾಗುತ್ತದೆ.
–ಡಿ.ಎಸ್.ಚೌಗಲೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ
![](https://suddidina.com/wp-content/uploads/2024/06/guccha_suddidina.jpg)
ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.
ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
![](https://suddidina.com/wp-content/uploads/2024/06/Sarod_Maestro_Rajeev_Taranath_suddidina.jpg)
ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
![](https://suddidina.com/wp-content/uploads/2024/06/Darshan_suddidina_Kannada_actor.jpg)
ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.
ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.
ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ7 days ago
JOB NEWS | ಡಿ.ಇಡಿ ಮತ್ತು ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
-
ಅಂತರಂಗ7 days ago
ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
-
ದಿನದ ಸುದ್ದಿ6 days ago
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
-
ದಿನದ ಸುದ್ದಿ7 days ago
ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
-
ದಿನದ ಸುದ್ದಿ6 days ago
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
-
ದಿನದ ಸುದ್ದಿ7 days ago
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ಭಾರೀ ಮಳೆ ; ಡ್ಯಾಂಗಳಿಗೆ ಹರಿದು ಬಂದ ನೀರೆಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ
-
ಅಂತರಂಗ5 days ago
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ