ಲೈಫ್ ಸ್ಟೈಲ್
ಪಕ್ಕಾ ಚಾಕೊಲೇಟ್ ಗರ್ಲ್..!

ಚಾಕಲೇಟ್ ಯಾರಿಗೆ ತಾನೇ ಇಷ್ಟವಿಲ್ಲ. ಮಕ್ಕಳಿಂದ ವೃದ್ಧರು ಬಾಯಲ್ಲಿ ನೀರೂರಿಸುವ ಚಾಕಲೇಟ್ ಈಗ ಬ್ಯೂಟಿ ಪ್ರಪಂಚದಲ್ಲಿ ತನ್ನದೇ ಛಾಪು ಮೂಡಿಸಿದೆ. ಚಾಕಲೇಟ್ ಮೇಕಪ್ ಸದ್ಯ ಸೋಷಿಯಲ್ ಮೀಡಿಯಾ ದಲ್ಲಿ ಸದ್ದು ಮಾಡುತ್ತಿರುವ ಟ್ರೆಂಡ್ ಪಟ್ಟಿಗೆ ಸೇರ್ಪಡೆಯಾಗಿದೆ. ಬಾಯಿ ಚಪಲಕ್ಕೆ ತಿನ್ನುತ್ತಿದ್ದ ಚಾಕಲೇಟ್ ಈಗ ಮೇಕಪ್ ರೂಪ ಪಡೆದಿದೆ. ಯುವತಿಯರಿಗಂತೂ ಚಾಕಲೇಟ್ ಎಂದರೆ ಪಂಚಪ್ರಾಣ. ಈ ವೀಕ್ನೆಸ್ ಅರಿತ ಬ್ಯೂಟಿ ಎಕ್ಸ್ಪ್ರೆಟ್ಗಳು ಇದನ್ನೇ ಒಂದು ಟ್ರೆಂಡ್ ಆಗಿಸಿದ್ದಾರೆ. ಚಾಕಲೇಟ್ ವ್ಯಾಮೋಹ ವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ ಸೌಂದರ್ಯ ತಗ್ನರು.. ಈಗಾಗಲೇ ಚಾಕಲೇಟ್ ವ್ಯಾಕ್ಸಿಂಗ್.. ಚಾಕಲೇಟ್ ಪೆಡಿಕ್ಯೂರ್.. ಚಾಕಲೇಟ್ ಮೆನಿಕ್ಯೂರ್.. ಚಾಕಲೇಟ್ ಫೇಷಿಯಲ್ ಗಳನ್ನು ನೋಡಿದ್ದೀವಿ..ಈಗ ಚಾಕಲೇಟ್ ಮೇಕಪ್ ಸರದಿ! ಚಾಕಲೇಟ್ ನಷ್ಷೇ ಚಾಕಲೇಟ್ ಬಣ್ಣ ಯುವತಿಯರಿಗೆ ಬಲು ಪ್ರೀತಿ..
ಚಾಕಲೇಟ್ ಲಿಪ್ಸ್ಟಿಕ್!
ಚಾಕಲೇಟ್ ಬಣ್ಣದ ಲಿಪ್ಸ್ಟಿಕ್ ಮಾರುಕಟ್ಟೆಯಲ್ಲಿ ಈಗಾಗಲೇ ಹಳೆಯದಾಗಿ ಹೋಗಿದೆ.. ಈಗ ಬಂದಿರುವ ಹೊಸ ಚಾಕಲೇಟ್ ಲಿಪ್ಸ್ಟಿಕ್ ಅನ್ನು ನೀವು ಧರಿಸುವುದಲ್ಲದೇ, ಸವಿಯಲು ಬಹುದು. ಈ ಲಿಪ್ಸ್ಟಿಕ್ ನ ವಿಶೇಷ ಅಡಗಿರುವುದೇ ಇಲ್ಲಿ..ಮಹಿಳೆಯರ ಲಿಪ್ಸ್ಟಿಕ್ ಮೋಹ ಅರಿತಿದ್ದ ಕಂಪನಿ ಒಂದು ತುರಿಯನ್ನು ಅಲಂಕರಿಸಿ, ಹಾಗೇ ವಿಯಲೂ ಬಹುದಾದ “ಎಡಿಬಲ್ ಚಾಕಲೇಟ್ ಲಿಪ್ಸ್ಟಿಕ್ “ಅನ್ನು ನವಂಬರ್ 2017 ರಲ್ಲಿ ಮಾರುಕಟ್ಟೆಗೆ ತಂದಿದೆ. ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆ ನೀಡಲು ಅತ್ಯುತ್ತಮವಾಗಿದೆ. ಕೆಂಪು, ಗುಲಾಬಿ ಹಾಗೂ ಪಿಂಕ್ ಬಣ್ಣಗಳಲ್ಲಿ ಸದ್ಯ ಇವು ಲಭ್ಯವಿದೆ.
ಬ್ಯೂಟಿ ಬ್ಲಾಗರ್ಗಳು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಮೆಲ್ಟೆಡ್ ಚಾಕಲೇಟ್ ಅನ್ನು ತುಟಿಗಳಿಗೆ ಲಿಪ್ಸ್ಟಿಕ್ ನಂತೆ ಬಳಸಿ ಸೆಲ್ಫಿ ಕ್ಲಿಕ್ಕಿಸಿ ಸಂಭ್ರಮಿಸುತ್ತಿದ್ದಾರೆ! ಒಟ್ಟಿನಲ್ಲಿ ಚಾಕಲೇಟ್ ಬಣ್ಣದ ಲಿಪ್ಸ್ಟಿಕ್ ಹಚ್ಚಿ ಕೊಳ್ಳುವುದು ಈ 2018ರ ಹೊಸ ಫ್ಯಾಷನ್ ಎನಿಸಿಕೊಂಡಿದೆ.
ಚಾಕಲೇಟ್ ನೈಲ್ ಆರ್ಟ್!
ತಿನ್ನೋಕೆ ಅಷ್ಟೇ ಅಲ್ಲ, ಕೈ ಉಗುರಿನ ಮೇಲೂ ಚಾಕಲೇಟ್ ಹೋಲುವ ನೈಲ್ ಆರ್ಟ್ ಮಾಡಲಾಗುತ್ತದೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಚಾಕಲೇಟ್ ನ ಪುಟ್ಟ ಪುಟ್ಟ ಬಾಕ್ಸ್ ಹೋಲುವ ಚೌಕ ಗಳನ್ನು ಚಾಕಲೇಟ್ ನಲ್ಲಿಯೇ ಮೂಡಿಸುವ ಕ್ರೇಜ್ ಯುವತಿಯರ ಗಮನ ಸೆಳೆಯುತ್ತಿದೆ. ಕ್ಯಾಂಡಿ ನೈಲ್ ಆರ್ಟ್ ಟೀನೇಜರ್ ಗಳ ಎಂದಿಗೂ ಮಾಸದ ಫೇವರಿಟ್ ನೈಲ್ ಆರ್ಟ್ ಆಗಿದೆ. ಬಣ್ಣ ಬಣ್ಣದ ಕ್ಯಾಂಡಿ ಗಳನ್ನು ಉಗುರಿನ ಮೇಲೆ ರಚಿಸುವ ಫ್ಯಾಷನ್ ಈಗ ಬ್ಯೂಟಿ ಲೋಕದ ಹೊಸ ಟ್ರೆಂಡ್!
ಚಾಕಲೇಟ್ ಸ್ಮೋಕೀ ಐಸ್ !
ಕಣ್ಣಿನ ಆಕರ್ಷಣೆ ಹಚ್ಚಿಸಲು ಯುವತಿಯರು ಚಾಕಲೇಟ್ ಮೇಕಪ್ ನ ಮೊರೆ ಹೋಗುತ್ತಿದ್ದಾರೆ. ಫಾಡ ಬ್ರೌನ್ , ಬ್ರಾಂಜ್ , ಕಾಪರ್, ಗೋಲ್ಡ್ ಬಣ್ಣದ ಕಾಂಬಿನೇಷನ್ ಬಳಸಿ ಮಾಡಲಾಗುವ ಚಾಚಾಕಲೇಟ್ ಸ್ಮೋಕೀ ಐಸ್ ಮೇಕಪ್ , ಅಡ್ಡಿಗಳು ನಿದ್ದೆ ಕೆಡಿಸಿದೆ. ಕಣ್ಣಿನ ಆಕರ್ಷಣೆಯನ್ನು ದುಪ್ಪಟ್ಟು ಮಾಡುತ್ತಿದೆ ಈ ಚಾಕಲೇಟ್ ಐಸ್!
ರಾತ್ರಿ ಪಾರ್ಟಿ ಗಳಿಗೆ ಹೇಳಿಮಾಡಿಸಿದಂತಿದೆ ಈ ಲುಕ್. ಕಣ್ಣಿನಲ್ಲೇ ಕೊಲ್ಲುವ ಶಕ್ತಿ ಇದೆ ಈ ಚಾಕಲೇಟ್ ಲುಕ್ಕಿಗೆ. ರಾಂಪ್, ಫ್ಯಾಷನ್ ಷೋ, ಫೋಟೋ ಶೂಟ್ ಗಳಲ್ಲಿ ಈಗಾಗಲೇ ಸದ್ದು ಮಾಡುತ್ತಿದೆ ಈ ಚಾಕಲೇಟ್ ಮೇಕಪ್!
ಚಾಕಲೇಟ್ ಮೇಕಪ್!
ಸಾಮಾನ್ಯವಾಗಿ ಕೆಂಪು ಅಥವಾ ಗುಲಾಬಿ ಬಣ್ಣದ ಲಂಗನ್ನು ಕೆನ್ನೆಗೆ ಹೆಚ್ಚುವುದು ರೂಢಿ. ಆದರೆ ಚಾಕಲೇಟ್ ಮೇಕಪ್ ನಲ್ಲಿ ಫಾಡ ಬ್ರೌನ್ , ಬ್ರಾಂಜ್ , ಕಾಪರ್, ಗೋಲ್ಡ್ ಬಣ್ಣದ ಮಿಶ್ರಣ ವನ್ನು ಕೆನ್ನೆಗೆ ಹಚ್ಚಿ ಆಕರ್ಷಕ ಪಾರ್ಟಿ ಲುಕ್ ನೀಡಲಾಗುತ್ತಿದೆ. ಸೆಲಿಬ್ರಿಟಿಗಳು, ಮಾಡಲ್ಗಳು ಈ ಚಾಕಲೇಟ್ ಮೇಕಪ್ ಗೆ ಫುಲ್ ಫಿದಾ ಆಗಿದ್ದಾರೆ.
ಸ್ಟೈಲ್ ಟಿಪ್ಸ್!
1. ಚಾಕಲೇಟ್ ಮೇಕಪ್ ರಾತ್ರಿ ಪಾರ್ಟಿ ಹಾಗೂ ರಾಂಪ್ ಗಳಲ್ಲಿ ಹೆಚ್ಚು ಸೂಕ್ತ ಎನಿಸುತ್ತದೆ. ಸೀಕ್ವಿನ್ (ಚಮಕಿ) ಉಡುಪುಗಳೊಂದಿಗೆ ಈ ಮೇಕಪ್ ನಿಮ್ಮ ಸ್ಟೈಲ್ ಸ್ಟೇಟ್ಮೆಂಟನ್ನು ಎತ್ತಿ ಹಿಡಿಯುವಲ್ಲಿ ಯಶಸ್ವಿಯಾಗುತ್ತದೆ.
2. ಡಸ್ಕಿ ಲುಕ್ ನೀಡುವಲ್ಲಿ ಈ ಮೇಕಪ್ ಬಿಳಿ.. ಕಪ್ಪು.. ಚಾಕಲೇಟ್ ಬಣ್ಣದ ಉಡುಪುಗಳೊಂದಿಗೆ ಸರಿ ಹೊಂದುತ್ತದೆ.
3.ಚಾಕಲೇಟ್ ನೈಲ್ ಆರ್ಟ್ ಎಲ್ಲ ಬಣ್ಣದ ಹಾಗೂ ಎಲ್ಲಾ ರೀತಿಯ ಉಡುಪುಗಳೊಂದಿಗೆ ಮ್ಯಾಚ್ ಆಗುತ್ತದೆ. ಸಮಾರಂಭ ಗಳಲ್ಲಿ ನಿಮ್ಮಸ್ಟೈಲ್ ಸ್ಟೇಟ್ಮೆಂಟ್ಅನ್ನು ಇದು ತೋರ್ಪಡಿಸುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ