ರಾಜಕೀಯ
ಸಂವಿಧಾನ ಸಂಭಾಷಣೆ ಮತ್ತು ದಲಿತ ಸಂವೇದನೆ

ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಸಂವಿದಾನ ಸಂಭಾಷಣೆ ಕಾರ್ಯಕ್ರಮಕ್ಕೆ ರಣಧೀರ ಪಡೆ ಪ್ರತಿಭಟನೆಯ ಮೂಲಕ ತಡೆಯೊಡ್ಡಿತು. ಇದು ನಮ್ಮ ಸಮಾನ ಮನಸ್ಕ ಗೆಳೆಯರ ಮಧ್ಯೆ ಪರ ವಿರೋಧ ಚರ್ಚೆಗೆ ಕಾರಣವಾಗಿದೆ.
ಕರ್ನಾಟಕ ರಣಧೀರ ಪಡೆಯ ರಾಜ್ಯಾಧ್ಯಕ್ಷನಾಗಿ, ದಲಿತ ಚಳುವಳಿ, ಸಂವಿದಾನ ಉಳಿಸಿ ಚಳುವಳಿ, ಮಾನವ ಹಕ್ಕು ಚಳುವಳಿಯ ಸಾಮಾನ್ಯ ಕಾರ್ಯಕರ್ತನಾಗಿ ಈ ಹೋರಾಟವನ್ನು ಯಾಕೆ ಮಾಡಿದೆವು ಎಂದು ಹೇಳಬೇಕಿದೆ. ಅದಕ್ಕಾಗಿ ಈ ಲೇಖನ….
ಸಂವಿಧಾನ ಸಂಭಾಷಣೆ ಎಂಬ ಕಾರ್ಯಕ್ರಮ ಸಮಾಜ ಕಲ್ಯಾಣ ಇಲಾಖೆಯು ಆಯೋಜಿಸಿದ್ದ ಕಾರ್ಯಕ್ರಮ ಎಂದು ಹೊರಗಿನ ಪ್ರಪಂಚ ಭಾವಿಸಿದೆ. ಆದರೆ ಅದು ಪೂರ್ಣ ಸತ್ಯವಲ್ಲ. ನಾಲ್ಕು ಕೋಟಿ ವೆಚ್ಚದ ಇಲಾಖೆಯ ಅನುದಾನದ ಎನ್ ಡಿಟಿವಿ ಮತ್ತು ಸಮೃದ್ದ ಭಾರತ ಟಿವಿ ಆಯೋಜಿಸಿದ್ದ ಚರ್ಚಾ ಕಾರ್ಯಕ್ರಮವದು. ಖಾಸಗಿ ಟಿವಿ ವಾಹಿನಿಯ ಚರ್ಚಾ ಕಾರ್ಯಕ್ರಮಕ್ಕೆ ಕನ್ನಡ ಜನಗಳ ತೆರಿಗೆ ಹಣ ಬಳಸಲಾಗಿತ್ತು.
ನಿಮಗೆ ನೆನಪಿರಬಹುದು. ಕೆಲವೇ ಕೆಲವು ತಿಂಗಳ ಹಿಂದೆ ಲಕ್ಷಾಂತರ ಜನರನ್ನು ಸೇರಿಸಿ ಐಶಾರಾಮಿಯಾಗಿ ಅಂಬೇಡ್ಕರ್ 150 ಕಾರ್ಯಕ್ರಮ ವನ್ನು ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿತ್ತು. ಅದರ ಫಲಿತಾಂಶ ಏನು ಎಂಬುದನ್ನು ಈಗ ಪ್ರಶ್ನಿಸೋದು ಬೇಡ. ಅದಕ್ಕಾಗಿ ಖರ್ಚಾದ ನೂರಾರು ಕೋಟಿಯ ಲೆಕ್ಕ ಕೇಳೋದೂ ಬೇಡ. ಅಂದು ಅತಿಥಿಗಳ ಆಯ್ಕೆಯಲ್ಲಿ ಕನಿಷ್ಠ ನ್ಯಾಯ ಪಾಲಿಸಲಾಗಿತ್ತು. ದೇಶ ವಿದೇಶದ ಉಪನ್ಯಾಸಕರ ಜೊತೆಗೆ ಕನ್ನಡ ಸಾಹಿತಿ, ಚಿಂತಕರು, ಹೋರಾಟಗಾರರಿಗೆ ವೇದಿಕೆಯಲ್ಲಿ ಸಮಾನಾವಕಾಶ ಒದಗಿಸಲಾಗಿತ್ತು. ಸಾವಿರಾರು ದಲಿತರು, ಯುವಕರು, ಮಹಿಳೆಯರು ಅವರ ಉಪನ್ಯಾಸದಿಂದ ಜ್ಞಾನ ಪಡೆದುಕೊಂಡಿದ್ದರು.
ಅದರ ದುಂದುವೆಚ್ಚವನ್ನು ನಾವು ವಿರೋಧಿಸಿದ್ದರೂ ಎಲ್ಲರ ಒಳಗೊಳ್ಳುವಿಕೆಯ ಕಾರಣಕ್ಕೆ ಸ್ವಾಗತಿಸಿದ್ದೆವು. ಕೆಲ ತಿಂಗಳ ಹಿಂದೆ ನಡೆದಿದ್ದ ಈ ಕಾರ್ಯಕ್ರಮವನ್ನು ಯೂನಿವರ್ಸಿಟಿ ಸಹಯೋಗದಲ್ಲಿ ಮಾಡಲಾಗಿತ್ತು. ಅತಿಥಿಗಳ ಆಯ್ಕೆ ಸೇರಿದಂತೆ ಎಲ್ಲಾ ವ್ಯವಸ್ಥೆಗಳಿಗೆ ಸಮಿತಿ ರಚಿಸಿ ನಡೆಸಲಾಗಿತ್ತು. ಇವತ್ತು ನಡೆಯುತ್ತಿದ್ದ ಸಂವಿಧಾನ ಸಂಭಾಷಣೆಗೆ ಅತಿಥಿಗಳನ್ನು ಯಾವ ಮಾನದಂಡದಲ್ಲಿ ಅಂತಿಮಗೊಳಿಸಲಾಯಿತು ? ಟಿವಿ ಕಾರ್ಯಕ್ರಮಕ್ಕೆ ಬೇಕಾದ ರೀತಿಯ ಟಿಆರ್ ಪಿ ವ್ಯಕ್ತಿಗಳನ್ನು ಮಾತ್ರ ಕರೆಯಲಾಗಿತ್ತು. ಕನ್ನಡ ನೆಲದ ಸಾಹಿತಿಗಳು, ಹೋರಾಟಗಾರರು, ದಲಿತ ಚಿಂತಕರಿಗೆ ವೇದಿಕೆಯಿರಲಿಲ್ಲ.
ಕನ್ನಡದ ದಲಿತ ಹೋರಾಟ, ಸಂವಿದಾನ ಉಳಿಸಿ ಹೋರಾಟದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವ ದೇವನೂರು ಮಹಾದೇವ, ಮಾವಳ್ಳಿ ಶಂಕರ್, ಡಾ ಸಿ ದ್ವಾರಕನಾಥ್, ದಿನೇಶ್ ಅಮಿನ್ ಮಟ್ಟು, ಕೆ ಎಲ್ ಅಶೋಕ್, ಡಾ ವಾಸು, ದು ಸರಸ್ವತಿ, ಎನ್ ಮಹೇಶ್, ಮಾರಸಂದ್ರ ಮುನಿಯಪ್ಪ, ಹರಿರಾಮ್, ಮಾರುತಿ ಮಾನ್ಪಡೆ, ಬರಗೂರು ರಾಮಚಂದ್ರ ಸೇರಿದಂತೆ ಯಾರೂ ಸಮಾಜ ಕಲ್ಯಾಣ ಇಲಾಖೆಗೆ ಗೊತ್ತೇ ಇಲ್ಲವೇ ? ಉತ್ತರ ಭಾರತದ ಸೊಫೆಸ್ಟಿಕೇಟೆಡ್ ಭಾಷಣಕಾರರು ಮತ್ತು ಬಿಜೆಪಿಗರನ್ನು ಕರೆಸಿ ಪ್ಯಾನಲ್ ಡಿಸ್ಕಷನ್ ಮಾಡಿ ಅರಚಾಟ ಮಾಡಿಸಲು ನಮ್ಮ ಸಮಾಜ ಕಲ್ಯಾಣ ಇಲಾಖೆಯ ಕೋಟಿ ಕೋಟಿ ಹಣವನ್ನು ನೀಡಬೇಕೇ ?
ಇವತ್ತು ನಮ್ಮ ಹೋರಾಟವನ್ನು ವಿರೋಧಿಸುವವರಿಗೆ ಇಂತಹ ಒಂದು ಕಾರ್ಯಕ್ರಮ ನಡೆಯುವುದಿತ್ತು ಎಂದು ಗೊತ್ತಾಗಿದ್ದು ಕಾರ್ಯಕ್ರಮ ರದ್ದಾದಾಗಲೇ ! ಹೊಟೇಲ್ ಅಶೋಕಾ ಎಂಬ ಸೆವೆನ್ ಸ್ಟಾರ್ ಹೊಟೆಲ್ ನಲ್ಲಿ ನಡೆಯುತ್ತಿದ್ದ ಈ ಕಾರ್ಯಕ್ರಮಕ್ಕೆ “ನನ್ನ ಜನಕ್ಕೆ” ಪ್ರವೇಶವಿರಲಿಲ್ಲ. ಸೂಟು ಬೂಟಿನ ಮಂದಿಗೆ ಮಾತ್ರ ಪ್ರವೇಶವಿತ್ತು. ಅದೂ 600 ಜನರಿಗೆ ಮಾತ್ರ. ಆನ್ ಲೈನ್ ನಲ್ಲಿ ನೊಂದಣಿ ಮಾಡಿಕೊಂಡು ಪ್ರವೇಶ ಪತ್ರವನ್ನು ಪಡೆಯಬೇಕಿತ್ತು. ನನ್ನ ಜನಗಳು ಆನ್ ಲೈನ್ ಪರಿಣತರಲ್ಲ. ನನ್ನ ಜನಗಳ ವೇಷಭೂಷನ ನೋಡಿದರೆ ಹೊಟೇಲ್ ಅಶೋಕದ ಸೂಟುದಾರಿ ವಾಚ್ ಮೆನ್ ಗೇಟು ತೆರೆಯಲ್ಲ. ಇದನ್ನೇ ಆಧುನಿಕ ಭಾರತದ ಬ್ರಾಹ್ಮಣ್ಯ ಎನ್ನುತ್ತಾರೆ.
ಸಮಾಜ ಕಲ್ಯಾಣ ಇಲಾಖೆಗೆ ಭ್ರಷ್ಟಾಚಾರದ ಹೊರತಾದ ಕಾರಣವಿದ್ದರೆ ಈ ಕಾರ್ಯಕ್ರಮವನ್ನು ವಸಂತನಗರದ ಅಂಬೇಡ್ಕರ್ ಭವನದಲ್ಲೋ, ಟೌನ್ ಹಾಲ್ ನಲ್ಲೋ, ಅರಮನೆ ಮೈದಾನದಲ್ಲೋ ನಡೆಸಬಹುದಿತ್ತು. ಅಥವಾ ಯಾವುದಾದರೂ ಯೂನಿವರ್ಸಿಸಿ ಮೂಲಕವಾದರೂ ಮಾಡಬಹುದು. ಒಂದಷ್ಟು ವಿದ್ಯಾರ್ಥಿಗಳು, ಯುವಕರು ಈ ಕಾರ್ಯಕ್ರಮದ ವ್ಯವಸ್ಥೆಯಲ್ಲಿ ತೊಡಗಿಕೊಂಡು ಸಂವಿದಾನ ಉಳಿಸುವ ಹೋರಾಟಗಾರರಾಗುತ್ತಿದ್ದರು. ಆದರೆ ಈ ಕಾರ್ಯಕ್ರಮದ ಪ್ರತಿಯೊಂದು ವ್ಯವಸ್ಥೆಯನ್ನು ಬಹುರಾಷ್ಟ್ರೀಯ ಕಾರ್ಪೋರೇಟ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು. ರಿಜಿಸ್ಟ್ರೇಷನ್, ಊಟ, ಅತಿಥಿ ಸತ್ಕಾರ ಎಲ್ಲವೂ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಗುತ್ತಿಗೆ. ಅವರಿಗೆ ದಲಿತ ಸಾಹಿತಿಯೂ ಗೊತ್ತಿಲ್ಲ, ಹೋರಾಟ ಅಂದರೇನು ಎಂದೇ ತಿಳಿದಿಲ್ಲ.
ಪ್ರತಿಯೊಬ್ಬರಿಗೂ 2500 ಬೆಲೆಯ ಊಟ, 350 ಬೆಲೆಯ ಟೀ ಕಾಫಿ, 700 ರೂಪಾಯಿ ಸಂಜೆಯ ಕಾಫಿ ಮತ್ತು ಲಘುಉಪಹಾರ, 1500 ರೂಪಾಯಿ ಬೆಲೆಯ ಬೆಳಗಿನ ಉಪಹಾರದ ವ್ಯವಸ್ಥೆಯನ್ನು 600 ಜನರಿಗೆ ಮಾಡಲಾಗಿತ್ತು. 35 ಸಾವಿರ ರೂಪಾಯಿ ಬೆಲೆಯ ಸೂಟ್ ರೂಂ, ಪ್ರತೀ ಗೆಸ್ಟ್ ಗೆ ಅತಿಥಿ ಸತ್ಕಾರಕ್ಕೆ ಕೆಎಎಸ್ ಅಧಿಕಾರಿ… ಈ ರೀತಿ ಒಟ್ಟು ನಾಲ್ಕು ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುತ್ತೆ. ಅಲ್ಲೆಲ್ಲೂ ಕನ್ನಡ ದಲಿತರಿಗೆ ಬಿಡಿ, ಕನ್ನಡದ ಸಾಹಿತಿ ಚಿಂತಕ, ದಲಿತ ಹೋರಾಟಗಾರರಿಗೂ ಪ್ರವೇಶವಿಲ್ಲ. ಟಿವಿ ಟಿಆರ್ ಪಿ ಹೊಂದಿರುವ ಪ್ಯಾನಲ್ ಡಿಸ್ಕಷನ್ ನಲ್ಲಿ ಅರಚಾಡುವ ಭಾಷಣಕಾರರಿಗೆ ಮಾತ್ರ ಪ್ರವೇಶ ! ಈ ಕಾರ್ಯಕ್ರಮಕ್ಕೆ ನಮ್ಮ ಸರಕಾರದ ತೆರಿಗೆ ಹಣ ಬಳಸಬೇಕೇ ? ಈ ಆಧುನಿಕ ಬ್ರಾಹ್ಮಣ್ಯದ ಭ್ರಷ್ಟಾಚಾರದ ಕಾರ್ಯಕ್ರಮವನ್ನು ನೋಡಿಯೂ ಸುಮ್ಮನಿರಬೇಕೇ ?
ಬಸವಣ್ಣನ ಅನುಯಾಯಿ, ಲಕ್ಷಾಂತರ ಬಡವರ ಬದುಕು ಬೆಳಗಿಸಿದ ಸಂತ ಶಿವಕುಮಾರ ಸ್ವಾಮಿಗಳ ನಿಧನದ ಹಿನ್ನಲೆಯಲ್ಲಿ ರಾಜ್ಯ ಸರಕಾರದ ಶೋಕಾಚರಣೆಯ ಆದೇಶವನ್ನು ಉಲ್ಲಂಘಿಸಿ ಈ ಕಾರ್ಯಕ್ರಮ ನಡೆಸಲಾಗುತ್ತದೆ. ಕನ್ನಡದ ಜನಗಳಿಗೆ ಉಪಯೋಗವಿಲ್ಲದ, ಕನ್ನಡದ ದಲಿತರಿಗೆ ಪ್ರವೇಶವಿಲ್ಲದ, ದಲಿತ ಸಂವೇದನೆಯಿಲ್ಲದ, ಚಳುವಳಿ ಸಂವೇದನೆ ಇಲ್ಲದ ಈ ಕಾರ್ಯಕ್ರಮಕ್ಕೆ ಕನ್ನಡದ ಸಂವೇದನೆಯೂ ಇರಲಿಲ್ಲ. ಆದ್ದರಿಂದ ಪ್ರತಿಭಟಿಸಿ ಕಾರ್ಯಕ್ರಮ ನಿಲ್ಲಿಸಿದೆವು. ಹೋರಾಟ ಇಷ್ಟಕ್ಕೆ ನಿಲ್ಲುವುದಿಲ್ಲ. ನಮ್ಮ ಜನಗಳ ಕಾರ್ಯಕ್ರಮವಲ್ಲದ ಈ ಕಾರ್ಯಕ್ರಮಕ್ಕೆ ಬಿಡುಗಡೆಯಾದ ನಮ್ಮ ಜನಗಳ ತೆರಿಗೆ ಹಣವಾದ ಇಲಾಖಾ ಅನುದಾನವನ್ನು ತಡೆ ಹಿಡಿಯಬೇಕು. ಅದು ಕನ್ನಡದ ದಲಿತೋದ್ದಾರಕ್ಕೆ ಮೀಸಲಾದ ಹಣ. ಅದು ನಮಗೇ ಸೇರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ಚಾಲ್ತಿಯಲ್ಲಿರುತ್ತದೆ.
-ಬಿ.ಹರೀಶ್ ಕುಮಾರ್
ರಾಜ್ಯಾಧ್ಯಕ್ಷ
ಕರ್ನಾಟಕ ರಣಧೀರ ಪಡೆ
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಕಳಪೆ ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ : ಸಿಎಂ ಸಿದ್ದರಾಮಯ್ಯ

ಸುದ್ದಿದಿನ,ಹುಬ್ಬಳ್ಳಿ : ಮಹದಾಯಿ, ಕೃಷ್ಣಾ ಮೇಲ್ದಂಡೆ, ಕಾವೇರಿ ವಿವಾದ ಸೇರಿದಂತೆ ಎಲ್ಲ ಯೋಜನೆಗಳ ಬಗ್ಗೆ ಕೇಂದ್ರಕ್ಕೆ ಒತ್ತಾಯಿಸಲು ಸರ್ವ ಪಕ್ಷದ ನಿಯೋಗದೊಂದಿಗೆ ತೆರಳಲು ಪ್ರಧಾನಮಂತ್ರಿಗಳ ಸಮಯ ಕೋರಿ ಪತ್ರ ಬರೆಯಲಾಗಿದ್ದು, ಕೇಂದ್ರದಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಮಹದಾಯಿ ಯೋಜನೆಗೆ ಚಾಲನೆ ನೀಡಲು ರಾಜ್ಯ ಸರ್ಕಾರ ತಯಾರಿದ್ದರೂ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿ ದೊರೆತಿಲ್ಲ. ಇದಕ್ಕೆ ಸಂಬಂಧಿಸಿದ ಎಲ್ಲ ವರದಿಗಳನ್ನು ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದರು.
ಬರಗಾಲ ಘೋಷಿತ ಪ್ರದೇಶಗಳಿಗೆ ಪರಿಹಾರ ಒದಗಿಸಲು ಇರುವ ಮಾರ್ಗಸೂಚಿಗಳನ್ನು ಪರಿಷ್ಕರಿಸಲು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಬರಗಾಲ ಘೋಷಿತ ಪ್ರದೇಶಗಳಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕುಡಿಯುವ ನೀರು, ಬಿತ್ತನೆಗೆ ನೆರವು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರದಿಂದ ಸಕಾಲದಲ್ಲಿ ನೆರವು ಬರಬೇಕಿದೆ ಎಂದು ಹೇಳಿದರು. ವಿದ್ಯಾವಿಕಾಸ ಯೋಜನೆಯಡಿ ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿದ್ದು, ಸಮವಸ್ತ್ರ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕೈಮಗ್ಗ ಸಂಸ್ಥೆಯಿಂದ ಮಕ್ಕಳಿಗೆ ನೀಡಲಾಗಿದ್ದ ಸಮವಸ್ತ್ರ ಕಳಪೆಯಾಗಿರುವ ಬಗ್ಗೆ ತನಿಖೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಕಳಪೆ ಬಟ್ಟೆ ನೀಡಿರುವುದಕ್ಕೆ ಪಾವತಿಯೂ ಆಗಿರುವುದರಿಂದ, ಸಂಬಂಧಪಟ್ಟವರನ್ನು ಇದಕ್ಕೆ ಜವಾಬ್ದಾರರನ್ನಾಗಿಸಬೇಕೆಂದು ತೀರ್ಮಾನಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯುತ್ತಿದ್ದು, ಸಂಬಂಧಪಟ್ಟವರಿಂದ ಪಾವತಿಸಲಾಗದ ಮೊತ್ತವನ್ನು ಮರುಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ 34 ಸಾವಿರ ಕೋಟಿ ರೂಪಾಯಿ ಮೀಸಲು : ಸಚಿವ ಡಾ.ಎಚ್.ಸಿ.ಮಹದೇವಪ್ಪ

ಸುದ್ದಿದಿನ, ಹುಬ್ಬಳ್ಳಿ: ಸಮಾಜ ಕಲ್ಯಾಣ ಇಲಾಖೆಯಿಂದ ವಿವಿಧ ಇಲಾಖೆಗಳಿಗೆ ವಿಶೇಷ ಘಟಕ ಯೋಜನೆಯಡಿ ಒಟ್ಟು 34ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಖಾತೆ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
ಪರಿಶಿಷ್ಟ ಜಾತಿಗೆ 24 ಸಾವಿರ ಕೋಟಿ ರೂಪಾಯಿ, ಪಂಗಡಕ್ಕೆ 8ಸಾವಿರ ಕೋಟಿ ರೂಪಾಯಿಯನ್ನು ಮೀಸಲಿಡಲಾಗಿದೆ. 40 ಇಲಾಖೆಗಳಿಗೆ ಮೀಸಲಿಡಲಾಗಿದೆ. ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ಪರಿಶಿಷ್ಟ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
ವಿಶೇಷ ಘಟಕ ಯೋಜನೆಯ ಹಣವನ್ನು ಇತರೆ ಯಾವುದೇ ವಿಭಾಗಕ್ಕೂ ಬಳಕೆ ಮಾಡುವುದಿಲ್ಲ. ಪರಿಶಿಷ್ಟ ಸಮುದಾಯಗಳ ಕಲ್ಯಾಣಕ್ಕಾಗಿ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನು ವಿನಿಯೋಗಿಸಲಾಗುವುದು ಎಂದು ಡಾ.ಮಹದೇವಪ್ಪ ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಆಗಸ್ಟ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ಟಿ ಮೊತ್ತ ಎಷ್ಟು ಗೊತ್ತಾ?!

ಸುದ್ದಿದಿನ ಡೆಸ್ಕ್ : ದೇಶದಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಒಟ್ಟು 1 ಲಕ್ಷ 59 ಸಾವಿರದ 69 ಕೋಟಿ ರೂಪಾಯಿ ಜಿಎಸ್ಟಿ ಆದಾಯ ಸಂಗ್ರಹವಾಗಿದೆ.
35 ಸಾವಿರದ 794ಕೋಟಿ ರೂಪಾಯಿ ಕೇಂದ್ರೀಯ ಜಿಎಸ್ಟಿ, 83ಸಾವಿರದ 251 ಕೋಟಿ ರೂಪಾಯಿ ಸಮಗ್ರ ಸರಕು ಮತ್ತು ಸೇವಾ ತೆರಿಗೆ ಇದು ಒಳಗೊಂಡಿದೆ. 37 ಸಾವಿರದ 581 ಕೋಟಿ ರೂಪಾಯಿಗಳನ್ನು ಕೇಂದ್ರ ಸರಕು ಮತ್ತು ಸೇವಾ ತೆರಿಗೆಗೆ ಹಾಗೂ 31 ಸಾವಿರದ 408ಕೋಟಿ ರೂಪಾಯಿಗಳನ್ನು ಸಮಗ್ರ ಸರಕು ಮತ್ತು ಸೇವಾ ತೆರಿಗೆ ಯಿಂದ ರಾಜ್ಯ ಸರಕು ಮತ್ತು ಸೇವಾ ತೆರಿಗೆಗೆ ಸರ್ಕಾರ ಇತ್ಯರ್ಥ ಪಡಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ5 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ4 days ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ