ದಿನದ ಸುದ್ದಿ
ದಲಿತರ ಮೇಲೆ ಸವರ್ಣೀಯರಿಂದ ದೌರ್ಜನ್ಯ : ಈ ಊರಲ್ಲಿ ದಲಿತರಿಗೆ ಪ್ರವೇಶವಿಲ್ಲ

ಸುದ್ದಿದಿನ ವಿಶೇಷ : ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆ ಎನ್ನಾದರು ಬಲೀರಾ ಅಂತ ದಾಸರೇ ಹೇಳಿದ್ದಾರೆ.ಆದ್ದರೆ ಅಂತಹ ಕುಲದ ಹೊಡೆದಾಟ ಇನ್ನು ಸಹಿತ ನಡೀತಿದೆ .ಇವನ್ನು ಮೇಲು ಕೀಳು ಎಂಬ ಭಾವನೆ ಇಂದಿಗು ಸಹ ಜೀವಂತವಾಗಿ ಕಣ್ಣಮುಂದೆ ಕಾಣ್ತಿದೆ.ಮೇಲ್ಜಾತಿಯವರು ಕೇಳ್ಜಾತಿವರ ಮೇಲೆ ನಿರಂತರವಾಗಿ ಶೋಷಣೆ ಮಾಡ್ತಿದ್ದಾರೆ .ಅಂತಹ ಅಸ್ಪೃಶ್ಯತೆಯ ಜನಾಂಗ ದೌರ್ಜನಕ್ಕೆ ಒಳಗಾಗಿ ಕೇಸರಿನ ಹುಳುಗಳ ರೀತಿಯಲ್ಲಿ ಬದುಕುತ್ತಿದ್ದಾರೆ .ಅಂತಹ ಹೃದಯ ವಿದ್ರಾವಕ ಘಟನೆ ಇಲ್ಲಿನ ಜನರದ್ದಾಗಿ ಇವರ ಪರಿಸ್ಥಿತಿ.
ಇದು ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಯರಜಂತಿ ಗ್ರಾಮ ಈ ಗ್ರಾಮದಲ್ಲಿ ದಲಿತರಿಗೆ ಅಸ್ಪೃಶ್ಯರಿಗೆ ಗ್ರಾಮದಲ್ಲಿ ಅವಕಾಶ ಇಲ್ಲ ಯಾವುದೇ ಗುಡಿ ಗುಂಡಾರಗಳಲ್ಲಿ ,ಊರು ಕೇರಿಗಳಲ್ಲಿ ಹೊಗುವಂತಿಲ್ಲ .ಯಾರು ಮುಟ್ಟಬಾರದು ಯಾರು ಇವರನ್ನು ಮಾತನಾಡಿಸಬಾರದು .ಯಾವುದೇ ಅಂಗಡಿಗಳಿಗು ಸಹ ಹೋಗುವಹಾಗಿಲ್ಲ ಅಷ್ಟೇ ಯಾಕ್ಕೆ ಇವರು ಮಕ್ಕಳಿಗು ಸಹ ಶಾಲೆಯಲ್ಲಿ ಅವಕಾಶ ಇಲ್ವಂತೆ ಅವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಒಂದು ತುತ್ತು ಊಟವನ್ನು ಹಾಕ್ತಿಲ.ಇಲ್ಲಿರುವ ಕೇಳವರ್ಗದವರು ಜನರು ಒಡಾಡುವ ರಸ್ತೆ ನೋಡಿದ್ರೆ ಭಯಬೀತರಾಗಿ ಬಿಡ್ತಿರಾ ಯಾಕಂದ್ರೆ ಇವರು ಒಡಾಡುವ ರಸ್ತೆ ಕಲ್ಲು ಮುಳಿನ ಗುಡ್ಡಗಳಿಂದ ಕೂಡಿದ ಸಾವಿನ ದಿಬ್ಬವಾಗಿ ಪರಿಣಮಿಸಿದೆ. ಅದೇ ರೀತಿ ಮೇಲ್ಜಾತಿಯವರ ರಸ್ತೆಗಳು ಆರ್ ಸಿ ಸಿ ರಸ್ತೆಯಾಗಿದೆ.ಒಂದು ವೇಳೆ ಅವರ ನಿಯಮವನ್ನು ತಪ್ಪಿದ್ದರೆ ಇವರ ಮೇಲೆ ಮಚ್ಚಿನಿಂದ ಕೊಚ್ಚಿ ಹಾಕುತ್ತೆನೆ . ಅಂತ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗುತ್ತಾರೆ.ಬಾಯಿಗೆ ಬಂದಂತೆ ಸ್ತ್ರೀ ಯರ ಮೇಲೆ ನಿಂದನೆ ಮಾಡೋದು ತೊಡೆ ತಟ್ಟಿ ಕರೆಯೊದು ಇಂತಹ ಅವಮಾನವೀಯ ನಡವಳಿಕೆ ಇಲ್ಲಿನ ಗ್ರಾಮಸ್ಥರು ಮತ್ತು ಇಲ್ಲಿನ ಪಂಚಾಯಿತಿಯ ಸದ್ಯಸರು ದೌರ್ಜನ್ಯವೆಸಗುತ್ತಿದ್ದಾರೆ.
ಈ ಊರಿನಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಆಟೋಗಳ ಮುಖಾಂತರವಾಗಿ ಬರಬೇಕು ಅಂತಹ ಪರಿಣಾಮವಾಗಿದೆ .ಹೀಗಿರುವಾಗ ದಲಿತರು ಬಂದರೆ ಅವರಿಗೆ ಆಟೋಗಳಲ್ಲಿಯು ಅವಕಾಶ ಇಲ್ಲ ಸಾವು ಬದುಕುನ ನಡುವೆ ಹೋರಾಡುತ್ತಿದ್ದಾರೆ ಚಿಕಿತ್ಸೆ ಪಡೆಯಲು ಅವರು ಪರದಾಟ ಪಟ್ಟ ಸ್ಥಿತಿ ಅಷ್ಟ ಇಷ್ಟಲ. ಕುಡಿಯಲು ನೀರಿಗೆ ಸುಮಾರು ದೂರಹೋಗಿ ತರಬೇಕು ಅದು ಜಾನುವಾರಗಳು ಕುಡಿಯುವ ನೀರಿನ ಹೊಂಡದಲ್ಲಿ. ಇನ್ನು ಇಲ್ಲಿನ ಜನರಿಗೆ ಯಾವುದೇ ಸರಕಾರಿ ಮನೆಗಳು ಶೌಚಾಲಯಗಳಿಲ ಸರಕಾರದ ಬೋಮಿಯನ್ನು ಸಹ ಲಪಟಾಯಿಸ್ಸಿದ್ದಾರೆ. ವಾಸಿಸಲು ಮನೆ ಇಲ್ಲದೆ ಊರಿನ ಹೊರ ಭಾಗದ ದಿಬ್ಬದಲ್ಲಿ ವಾಸ ಮಾಡ್ತಿದ್ದಾರೆ.ಇಂತಹ ಚಿತ್ರಣವನ್ನು ನೊಡುತ್ತಿದ್ದರೆ ಇದು ರಾಮರಾಜ್ಯದ ಕನಸ್ಸಿನ ಕರ್ನಾಟಕ ನಾ ಇಲ್ಲ ರಾವಣ ದೌರ್ಜನ್ಯ ಪ್ರದೇಶ ನಾ ಅಂತ ಗೋಚ್ಚರಿಸುತ್ತಿದೆ.ಇಂತಹ ಇಷ್ಟ ಕಷ್ಟಗಳ ಸಂಕೊಲೆಗಳಲಿ ಜನ ಜೀವಂತ ಶವವಾಗಿ ಬದುಕುತ್ತಿದ್ದಾರೆ.ಎಲ್ಲಿದೆ ಮಾನವನ ಮೂಲಭೂತ ಹಕ್ಕು ಎಂಬ ಪ್ರಶ್ನೆ ಕಾಡುತ್ತಿದೆ.ಈ ಜನರ ಕಣ್ಣಿರಿನ ಆಕ್ರೋಶದ ಕಥೆಯನ್ನು ಕೇಳಿದ್ರೆ ಎಂತಹ ಹಿಟ್ಲರನ ಹೃದಯದವನಿದ್ದರು ಕರಗುತ್ತಾನೆ.
ಇನ್ನೂ ರಾಜಕೀಯ ನಾಯಕರು ತಮ್ಮ ಬೇಳೆಯನ್ನು ಬೆಯಿಸಿಕೊಳಲು ಚುನಾವಣೆ ಬಂದಾಗ ಅವರ ಮನೆಯಲ್ಲಿ ಊಟ ಮಾಡೊದು ನೀರು ಕುಡಿಯೊದು ಮಲಗೊದು ಇಂತಹ ನಾಟಕವನ್ನು ಬಿಟ್ಟು ಇವರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕೈ ಜೋಡಿಸಿ ಅಂಬೇಡ್ಕರ್ ಹೊತ್ತ ಕನಸಿನ ಆದರ್ಶ ಪ್ರರೂಪಗಳು ಪಾಲಿಸಿ .ಕಾಲ್ತುಳಿತಕ್ಕೆ ಒಳಗಾಗಿರುವ ಇಂತಹ ಕಾಯಕ ಸಮಾಜದವನ್ನು ಉನ್ಬತಿ ಕರಿಸಿ ಅಸ್ಪೃಶ್ಯತೆಯ ವಿರುದ್ದ ದಬ್ಬಾಳಿಕೆ ಮಾಡುವವರನ್ನು ಶಿಕ್ಷಿಸಿ. ಕಾಯಕ ಸಮಾಜಕ್ಕೆ ಸಿಗಲಿ ಸ್ಥಾನ ಮಾನ.
ನೀರಿಗ ಯಾವ ಕುಲ
ಅಗ್ನಿಗೆ ಯಾವ ಕುಲ,
ವಾಯುಗೆ ಯಾವ ಕುಲ,
ರಕ್ತಕ್ಕೆ ಯಾವ ಕುಲ .
ಇರುವುದು ಒಂದೆ ಕುಲ ಅದು ಮನುಷ್ಯ ಕುಲ…ಮನುಷ್ಯ ಕುಲ

ದಿನದ ಸುದ್ದಿ
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿತ ಕಾರ್ಮಿಕರ ಮಕ್ಕಳು ಪ್ರಸಕ್ತ ಸಾಲಿನಲ್ಲಿ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ಟಾಪ್ಗಳನ್ನು ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ ಉಪ ವಿಭಾಗದ ಕಾರ್ಮಿಕ ಅಧಿಕಾರಿ ಇವರ ವ್ಯಾಪ್ತಿಯಲ್ಲಿ ನೋಂದಣಿಯಾಗಿರುವ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯಬಹುದು. ಅರ್ಜಿ ನಮೂನೆಯನ್ನು ಸಂಬಂಧಿಸಿದ ಕಾರ್ಮಿಕ ನಿರೀಕ್ಷಕರ ಕಛೇರಿಯಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಕಾರ್ಮಿಕ ನಿರೀಕ್ಷಕರಿಗೆ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 11 ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕಾರ್ಮಿಕ ಅಧಿಕಾರಿಯವರ ಕಚೇರಿ ದೂ ಸಂ:08192-237332 ಸಂಪರ್ಕಿಸಲು ಕಾರ್ಮಿಕ ಅಧಿಕಾರಿ ಇಬ್ರಾಹಿಂ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ

ಸುದ್ದಿದಿನ ಡೆಸ್ಕ್ : ತಮಿಳುನಾಡಿಗೆ 3 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನದಿ ನೀರು ಸಮಿತಿ ತೀರ್ಪಿನ ಕುರಿತು ಕಾನೂನು ತಜ್ಞರ ಜೊತೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ನಿನ್ನೆ ಹೇಳಿದ್ದಾರೆ.
ತಮಿಳುನಾಡಿಗೆ ನಾಳೆಯಿಂದ (ಸೆಪ್ಟಂಬರ್28) ಅಕ್ಟೋಬರ್ 15ರ ತನಕ ಪ್ರತಿನಿತ್ಯ 3 ಸಾವಿರ ಕ್ಯೂಸೆಕ್ನಂತೆ ನೀರು ಹರಿಸುವಂತೆ, ಕಾವೇರಿ ನದಿ ನೀರು ಸಮಿತಿ ನಿನ್ನೆ ಕರ್ನಾಟಕಕ್ಕೆ ನಿರ್ದೇಶನ ನೀಡಿದೆ. ಕಾವೇರಿ ನದಿ ನೀರು ಸಮಿತಿ ವರ್ಚುವಲ್ ಮೂಲಕ ನಡೆದ ಸಭೆಯಲ್ಲಿ ಈ ನಿರ್ದೇಶನ ನೀಡಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ

ಸುದ್ದಿದಿನ, ಬಳ್ಳಾರಿ : ಸಿರಿಗೇರಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ (ಬಸವನಪೇಟೆ) ಮುಖ್ಯ ಗುರುಗಳಾದ ಶ್ರೀಮತಿ ಸುಮಂಗಳಾ ಮೇಟಿಯವರು 2023-24 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಶಿಕ್ಷಕ ವೃತ್ತಿ ಧರ್ಮ ನೇ ತನ್ನ ಸರ್ವಸ್ವ ಎಂದು ತಿಳಿದುಕೊಂಡಂತಹ ಶ್ರೀಮತಿ ಸುಮಂಗಳಾ ಮೇಟಿಯವರು, ಶಿಕ್ಷಕ ವೃತ್ತಿಯಲ್ಲಿ ಉತ್ತಮ ಕರ್ತವ್ಯ ಹಾಗೂ ಸೇವೆಯನ್ನು ಸಲ್ಲಿಸಿದನ್ನು ಪರಿಗಣಿಸಿ ಈ ಹಿಂದೆಯೇ 2022-23 ನೇ ಸಾಲಿನ ಬಳ್ಳಾರಿ ಜಿಲ್ಲಾ ಮಟ್ಟದ ಸಾವಿತ್ರಿ ಬಾಯಿ ಫುಲೆ ಶಿಕ್ಷಕಿ ಪ್ರಶಸ್ತಿ ಪುರಸ್ಕೃತರಾಗಿದ್ದು, ಇವರ ಶಿಕ್ಷಣ ಕ್ಷೇತ್ರದಲ್ಲಿನ ಅಗಾಧವಾದ ಕರ್ತವ್ಯ ಮತ್ತು ಸೇವೆ ನಿಷ್ಠೆಯನ್ನು ಗುರುತಿಸಿದ ಶಾಲಾ ಶಿಕ್ಷಣ ಇಲಾಖೆ ಬಳ್ಳಾರಿ ವತಿಯಿಂದ 2023-24 ನೇ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಇದೇ ಸಂದರ್ಭದಲ್ಲಿ ಗ್ರಾಮಸ್ಥರು, ಸಮಸ್ತ ಶಿಕ್ಷಕರ ವರ್ಗದವರು, ಅತಿಥಿ ಶಿಕ್ಷಕರು, ಹಿತೈಷಿಗಳು, ಹಳೆಯ ವಿದ್ಯಾರ್ಥಿ ಬಳಗ, ಶಿಕ್ಷಣ ಪ್ರೇಮಿಗಳು, ಅಭಿಮಾನಿ ಬಳಗ,
ಮುಂತಾದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ2 days ago
ನಾಳೆಯಿಂದ ತಮಿಳುನಾಡಿಗೆ ಕಾವೇರಿ ನೀರು ; ಕಾವೇರಿ ನದಿ ನೀರು ಸಮಿತಿ ನಿರ್ದೇಶನ
-
ದಿನದ ಸುದ್ದಿ3 days ago
ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ನಗರದೆಲ್ಲೆಡೆ ಬಿಗಿ ಬಂದೋಬಸ್ತ್ : ಪೊಲೀಸ್ ಕಮೀಷನರ್ ದಯಾನಂದ್
-
ದಿನದ ಸುದ್ದಿ1 day ago
ಉಚಿತ ಲ್ಯಾಪ್ಟಾಪ್ ಪಡೆಯಲು ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ತಮ ಶಿಕ್ಷಕರ ಪ್ರಶಸ್ತಿಗೆ ಸುಮಂಗಳಾ ಮೇಟಿ ಆಯ್ಕೆ