ದಿನದ ಸುದ್ದಿ
ದಲಿತರ ಮೇಲೆ ಸವರ್ಣೀಯರಿಂದ ದೌರ್ಜನ್ಯ : ಈ ಊರಲ್ಲಿ ದಲಿತರಿಗೆ ಪ್ರವೇಶವಿಲ್ಲ
ಸುದ್ದಿದಿನ ವಿಶೇಷ : ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆ ಎನ್ನಾದರು ಬಲೀರಾ ಅಂತ ದಾಸರೇ ಹೇಳಿದ್ದಾರೆ.ಆದ್ದರೆ ಅಂತಹ ಕುಲದ ಹೊಡೆದಾಟ ಇನ್ನು ಸಹಿತ ನಡೀತಿದೆ .ಇವನ್ನು ಮೇಲು ಕೀಳು ಎಂಬ ಭಾವನೆ ಇಂದಿಗು ಸಹ ಜೀವಂತವಾಗಿ ಕಣ್ಣಮುಂದೆ ಕಾಣ್ತಿದೆ.ಮೇಲ್ಜಾತಿಯವರು ಕೇಳ್ಜಾತಿವರ ಮೇಲೆ ನಿರಂತರವಾಗಿ ಶೋಷಣೆ ಮಾಡ್ತಿದ್ದಾರೆ .ಅಂತಹ ಅಸ್ಪೃಶ್ಯತೆಯ ಜನಾಂಗ ದೌರ್ಜನಕ್ಕೆ ಒಳಗಾಗಿ ಕೇಸರಿನ ಹುಳುಗಳ ರೀತಿಯಲ್ಲಿ ಬದುಕುತ್ತಿದ್ದಾರೆ .ಅಂತಹ ಹೃದಯ ವಿದ್ರಾವಕ ಘಟನೆ ಇಲ್ಲಿನ ಜನರದ್ದಾಗಿ ಇವರ ಪರಿಸ್ಥಿತಿ.
ಇದು ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಯರಜಂತಿ ಗ್ರಾಮ ಈ ಗ್ರಾಮದಲ್ಲಿ ದಲಿತರಿಗೆ ಅಸ್ಪೃಶ್ಯರಿಗೆ ಗ್ರಾಮದಲ್ಲಿ ಅವಕಾಶ ಇಲ್ಲ ಯಾವುದೇ ಗುಡಿ ಗುಂಡಾರಗಳಲ್ಲಿ ,ಊರು ಕೇರಿಗಳಲ್ಲಿ ಹೊಗುವಂತಿಲ್ಲ .ಯಾರು ಮುಟ್ಟಬಾರದು ಯಾರು ಇವರನ್ನು ಮಾತನಾಡಿಸಬಾರದು .ಯಾವುದೇ ಅಂಗಡಿಗಳಿಗು ಸಹ ಹೋಗುವಹಾಗಿಲ್ಲ ಅಷ್ಟೇ ಯಾಕ್ಕೆ ಇವರು ಮಕ್ಕಳಿಗು ಸಹ ಶಾಲೆಯಲ್ಲಿ ಅವಕಾಶ ಇಲ್ವಂತೆ ಅವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಒಂದು ತುತ್ತು ಊಟವನ್ನು ಹಾಕ್ತಿಲ.ಇಲ್ಲಿರುವ ಕೇಳವರ್ಗದವರು ಜನರು ಒಡಾಡುವ ರಸ್ತೆ ನೋಡಿದ್ರೆ ಭಯಬೀತರಾಗಿ ಬಿಡ್ತಿರಾ ಯಾಕಂದ್ರೆ ಇವರು ಒಡಾಡುವ ರಸ್ತೆ ಕಲ್ಲು ಮುಳಿನ ಗುಡ್ಡಗಳಿಂದ ಕೂಡಿದ ಸಾವಿನ ದಿಬ್ಬವಾಗಿ ಪರಿಣಮಿಸಿದೆ. ಅದೇ ರೀತಿ ಮೇಲ್ಜಾತಿಯವರ ರಸ್ತೆಗಳು ಆರ್ ಸಿ ಸಿ ರಸ್ತೆಯಾಗಿದೆ.ಒಂದು ವೇಳೆ ಅವರ ನಿಯಮವನ್ನು ತಪ್ಪಿದ್ದರೆ ಇವರ ಮೇಲೆ ಮಚ್ಚಿನಿಂದ ಕೊಚ್ಚಿ ಹಾಕುತ್ತೆನೆ . ಅಂತ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗುತ್ತಾರೆ.ಬಾಯಿಗೆ ಬಂದಂತೆ ಸ್ತ್ರೀ ಯರ ಮೇಲೆ ನಿಂದನೆ ಮಾಡೋದು ತೊಡೆ ತಟ್ಟಿ ಕರೆಯೊದು ಇಂತಹ ಅವಮಾನವೀಯ ನಡವಳಿಕೆ ಇಲ್ಲಿನ ಗ್ರಾಮಸ್ಥರು ಮತ್ತು ಇಲ್ಲಿನ ಪಂಚಾಯಿತಿಯ ಸದ್ಯಸರು ದೌರ್ಜನ್ಯವೆಸಗುತ್ತಿದ್ದಾರೆ.
ಈ ಊರಿನಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಆಟೋಗಳ ಮುಖಾಂತರವಾಗಿ ಬರಬೇಕು ಅಂತಹ ಪರಿಣಾಮವಾಗಿದೆ .ಹೀಗಿರುವಾಗ ದಲಿತರು ಬಂದರೆ ಅವರಿಗೆ ಆಟೋಗಳಲ್ಲಿಯು ಅವಕಾಶ ಇಲ್ಲ ಸಾವು ಬದುಕುನ ನಡುವೆ ಹೋರಾಡುತ್ತಿದ್ದಾರೆ ಚಿಕಿತ್ಸೆ ಪಡೆಯಲು ಅವರು ಪರದಾಟ ಪಟ್ಟ ಸ್ಥಿತಿ ಅಷ್ಟ ಇಷ್ಟಲ. ಕುಡಿಯಲು ನೀರಿಗೆ ಸುಮಾರು ದೂರಹೋಗಿ ತರಬೇಕು ಅದು ಜಾನುವಾರಗಳು ಕುಡಿಯುವ ನೀರಿನ ಹೊಂಡದಲ್ಲಿ. ಇನ್ನು ಇಲ್ಲಿನ ಜನರಿಗೆ ಯಾವುದೇ ಸರಕಾರಿ ಮನೆಗಳು ಶೌಚಾಲಯಗಳಿಲ ಸರಕಾರದ ಬೋಮಿಯನ್ನು ಸಹ ಲಪಟಾಯಿಸ್ಸಿದ್ದಾರೆ. ವಾಸಿಸಲು ಮನೆ ಇಲ್ಲದೆ ಊರಿನ ಹೊರ ಭಾಗದ ದಿಬ್ಬದಲ್ಲಿ ವಾಸ ಮಾಡ್ತಿದ್ದಾರೆ.ಇಂತಹ ಚಿತ್ರಣವನ್ನು ನೊಡುತ್ತಿದ್ದರೆ ಇದು ರಾಮರಾಜ್ಯದ ಕನಸ್ಸಿನ ಕರ್ನಾಟಕ ನಾ ಇಲ್ಲ ರಾವಣ ದೌರ್ಜನ್ಯ ಪ್ರದೇಶ ನಾ ಅಂತ ಗೋಚ್ಚರಿಸುತ್ತಿದೆ.ಇಂತಹ ಇಷ್ಟ ಕಷ್ಟಗಳ ಸಂಕೊಲೆಗಳಲಿ ಜನ ಜೀವಂತ ಶವವಾಗಿ ಬದುಕುತ್ತಿದ್ದಾರೆ.ಎಲ್ಲಿದೆ ಮಾನವನ ಮೂಲಭೂತ ಹಕ್ಕು ಎಂಬ ಪ್ರಶ್ನೆ ಕಾಡುತ್ತಿದೆ.ಈ ಜನರ ಕಣ್ಣಿರಿನ ಆಕ್ರೋಶದ ಕಥೆಯನ್ನು ಕೇಳಿದ್ರೆ ಎಂತಹ ಹಿಟ್ಲರನ ಹೃದಯದವನಿದ್ದರು ಕರಗುತ್ತಾನೆ.
ಇನ್ನೂ ರಾಜಕೀಯ ನಾಯಕರು ತಮ್ಮ ಬೇಳೆಯನ್ನು ಬೆಯಿಸಿಕೊಳಲು ಚುನಾವಣೆ ಬಂದಾಗ ಅವರ ಮನೆಯಲ್ಲಿ ಊಟ ಮಾಡೊದು ನೀರು ಕುಡಿಯೊದು ಮಲಗೊದು ಇಂತಹ ನಾಟಕವನ್ನು ಬಿಟ್ಟು ಇವರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕೈ ಜೋಡಿಸಿ ಅಂಬೇಡ್ಕರ್ ಹೊತ್ತ ಕನಸಿನ ಆದರ್ಶ ಪ್ರರೂಪಗಳು ಪಾಲಿಸಿ .ಕಾಲ್ತುಳಿತಕ್ಕೆ ಒಳಗಾಗಿರುವ ಇಂತಹ ಕಾಯಕ ಸಮಾಜದವನ್ನು ಉನ್ಬತಿ ಕರಿಸಿ ಅಸ್ಪೃಶ್ಯತೆಯ ವಿರುದ್ದ ದಬ್ಬಾಳಿಕೆ ಮಾಡುವವರನ್ನು ಶಿಕ್ಷಿಸಿ. ಕಾಯಕ ಸಮಾಜಕ್ಕೆ ಸಿಗಲಿ ಸ್ಥಾನ ಮಾನ.
ನೀರಿಗ ಯಾವ ಕುಲ
ಅಗ್ನಿಗೆ ಯಾವ ಕುಲ,
ವಾಯುಗೆ ಯಾವ ಕುಲ,
ರಕ್ತಕ್ಕೆ ಯಾವ ಕುಲ .
ಇರುವುದು ಒಂದೆ ಕುಲ ಅದು ಮನುಷ್ಯ ಕುಲ…ಮನುಷ್ಯ ಕುಲ
ದಿನದ ಸುದ್ದಿ
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ
ಸುದ್ದಿದಿನ,ದಾವಣಗೆರೆ: ಭದ್ರಾ ಜಲಾಶಯ ಯೋಜನೆ ವ್ಯಾಪ್ತಿಗೆ ಬರುವ ದೇವರಬೆಳಕೆರೆ ಪಿಕ್ಅಪ್ ಅಣೆಕಟ್ಟಿನ ಸ್ಕವರಿಂಗ್ ಸ್ಪೂಯೀಸ್ ಗೇಟ್ ಮುಖಾಂತರ ಜಲಾಶಯದ ಡೆಡ್ ಸ್ಟೋರೇಜ್ ನೀರನ್ನು ಸೂಳೆಕೆರೆ ಹಳ್ಳಕ್ಕೆ ಮಾರ್ಚ್ 28 ರಿಂದ ಏಪ್ರಿಲ್ 3 ರವರೆಗೆ ಪ್ರತಿದಿನ 20 ಕ್ಯೂಸೆಕ್ಸ್ಗಳಲ್ಲಿ ಜನ-ಜಾನುವಾರು ಪಕ್ಷಿಗಳಿಗೆ ಕುಡಿಯುವ ನೀರು ಒದಗಿಸಲು ಹಾಗೂ ಅಕ್ಕಪಕ್ಕದ ಗ್ರಾಮಗಳ ಕುಡಿಯುವ ನೀರಿನ ಉದ್ದೇಶಕ್ಕೆ ಬಿಡಲಾಗುತ್ತಿದೆ.
ಈ ವೇಳೆ ಹಳ್ಳಕ್ಕೆ ದನ ಕರಗಳನ್ನು ಇಳಿಸುವುದಾಗಲಿ, ಪಂಪ್ಸೆಟ್ಗಳಿಂದ ನೀರೆತ್ತುವುದುನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಕನೀನಿನಿ ಕಾರ್ಯಪಾಲಕ ಇಂಜಿನಿಯರ್ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
ಸುದ್ದಿದಿನ ಡೆಸ್ಕ್ : ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಸಲು ಇಂದು ಕೊನೆಯ ದಿನವಾಗಿದೆ.
ನಾಳೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಇದೇ 30 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಇದೇ ವೇಳೆ ಬಿಹಾರದಲ್ಲಿ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆ ದಿನವಾಗಿದ್ದು, ಈ ತಿಂಗಳ 30 ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಏಪ್ರಿಲ್ 2ರಂದು ನಾಮತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುತ್ತದೆ.
ಏಪ್ರಿಲ್ 19 ರಂದು 17 ರಾಜ್ಯಗಳು ಮತ್ತು ನಾಲ್ಕು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಂತೆ ತಮಿಳುನಾಡಿನಲ್ಲಿ 39, ರಾಜಸ್ಥಾನದಲ್ಲಿ 12, ಉತ್ತರ ಪ್ರದೇಶದಲ್ಲಿ 8, ಮಧ್ಯಪ್ರದೇಶದಲ್ಲಿ 6, ಉತ್ತರಾಖಂಡ, ಅಸ್ಸಾಂ ಮತ್ತು ಮಹಾರಾಷ್ಟ್ರದಲ್ಲಿ ತಲಾ 5 , ಬಿಹಾರದಲ್ಲಿ 4, ಪಶ್ಚಿಮ ಬಂಗಾಳದಲ್ಲಿ 3, ಅರುಣಾಚಲ ಪ್ರದೇಶ, ಮಣಿಪುರ, ಮೆಘಾಲಯದಲ್ಲಿ ತಲಾ 2 ಮತ್ತು ಛತ್ತೀಸ್ಗಢ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್ ದ್ವೀಪಗಳು, ಜಮ್ಮು-ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ.
ಎರಡನೇ ಹಂತದಲ್ಲಿ 89 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಚುನಾವಣಾ ಆಯೋಗ ನಾಳೆ ಅಧಿಸೂಚನೆ ಹೊರಡಿಸಲಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
ಸುದ್ದಿದಿನ ಡೆಸ್ಕ್ : 18ನೇ ಲೋಕಸಭೆಗೆ ಸದಸ್ಯರನ್ನು ಆಯ್ಕೆ ಮಾಡಲು ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗ, ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿದೆ.
ದೇಶದಲ್ಲಿ ಚುನಾವಣೆಗಳನ್ನು ಪಾರದರ್ಶಕವಾಗಿ ಹಾಗೂ ಅತ್ಯಂತ ವಿಶ್ವಾಸಾರ್ಹ ರೀತಿಯಲ್ಲಿ ನಡೆಸುವ ಸಂಕಲ್ಪದೊಂದಿಗೆ ಚುನಾವಣಾ ಆಯೋಗ, ಸಮಸ್ತ ಚುನಾವಣಾ ಪ್ರಕ್ರಿಯೆಗಳನ್ನು ಸುಗಮಗೊಳಿಸಲು ತಂತ್ರಜ್ಞಾನದ ನೆರವನ್ನು ಬಳಸಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಮತದಾರರು, ಚುನಾವಣಾ ಸಿಬ್ಬಂದಿ ಹಾಗೂ ಆಯೋಗಕ್ಕೆ ನೆರವಾಗುವ ಹಲವು ಆಪ್ಗಳನ್ನು ಚುನಾವಣಾ ಆಯೋಗ ಅಭಿವೃದ್ಧಿಪಡಿಸಿದೆ.
ಈ ಪೈಕಿ ಇಂದು ಸಿ-ವಿಜಿಲ್ ಆಪ್ ಬಗ್ಗೆ ಮಾಹಿತಿ.
ದೇಶದಲ್ಲಿ ಚುನಾವಣೆಗಳ ವೇಳೆ ನಡೆಯುವ ಅಕ್ರಮಗಳು, ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಪ್ರಕರಣಗಳ ಮೇಲೆ ಕಣ್ಣಿಡುವುದು ಕೇವಲ ಚುನಾವಣಾ ಸಿಬ್ಬಂದಿಯ ಕೆಲಸವಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವೂ ಹೌದು. ಹಾಗಾಗಿ ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರು ಆಯೋಗಕ್ಕೆ ದೂರು ತಲುಪಿಸಲು ಭಾರತ ಚುನಾವಣಾ ಆಯೋಗ ಸಿ-ವಿಜಿಲ್ ಆಪ್ ಅನ್ನು ಅಭಿವೃದ್ಧಿ ಪಡಿಸಿದೆ.
ದೂರುಗಳನ್ನು ಆನ್ಲೈನ್ ಮೂಲಕ ಆಯೋಗಕ್ಕೆ ರವಾನಿಸಲು ಈ ಆಪ್ ನೆರವಾಗುವುದು. ಯಾವುದೇ ಚುನಾವಣಾ ಅಕ್ರಮಗಳ ಬಗ್ಗೆ ಧ್ವನಿಮುದ್ರಣ, ವಿಡಿಯೋ ಚಿತ್ರದ ತುಣುಕುಗಳು ಮತ್ತು ಫೋಟೊ ಮೊದಲಾದ ದಾಖಲೆಗಳನ್ನು ಸಾರ್ವಜನಿಕರು ಇದರ ಮೂಲಕ ಕಳುಹಿಸಬಹುದು.
ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮಾಡುವ ಖರ್ಚು-ವೆಚ್ಚ, ಮತದಾರರ ಮನವೊಲಿಕೆಗೆ ಆಮಿಷಗಳ ಬಳಕೆ ಮೊದಲಾದ ಅಕ್ರಮಗಳ ಬಗ್ಗೆ ದೂರು ನೀಡಲು ಇದನ್ನು ಬಳಸಬಹುದು. ಒಂದುನೂರು ನಿಮಿಷಗಳಲ್ಲಿ ಚುನಾವಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದಾರೆ.
ದೇಶದ ಯಾವ ಮೂಲೆಯಲ್ಲೇ ಆಗಲಿ ನಡೆಯುವ ಚುನಾವಣಾ ಅಕ್ರಮ ಅಥವಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ತಾವು ನೀಡಿದ ದೂರುಗಳನ್ನು ಆಯೋಗ ಪರಿಗಣಿಸಿದೆಯೇ ಎನ್ನುವ ವಿವರಗಳನ್ನು ಸಹ ಸಾರ್ವಜನಿಕರು ಸಿ-ವಿಜಿಲ್-ಆಪ್ ಮೂಲಕ ವೀಕ್ಷಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಲೋಕಸಭಾ ಚುನಾವಣೆ : ಚುನಾವಣಾ ಚಟುವಟಿಕೆಗಳ ಕುರಿತ ಜಿಲ್ಲಾವಾರು ಮಾಹಿತಿ
-
ದಿನದ ಸುದ್ದಿ6 days ago
ವಿಜಯಪುರ ಜಿಲ್ಲಾ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಮೈಬೂಬಸಾಹೇಬ.ವೈ.ಜೆ ಆಯ್ಕೆ
-
ದಿನದ ಸುದ್ದಿ6 days ago
ಬೆಂಗಳೂರಿನಲ್ಲಿ ಬಿಜೆಪಿ ನೂತನ ಮಾಧ್ಯಮಕೇಂದ್ರ ಆರಂಭ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ಹೊಸ ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ5 days ago
ಕವಿತೆ | ನೆನಪು
-
ದಿನದ ಸುದ್ದಿ3 days ago
ಚುನಾವಣಾ ಅಕ್ರಮ ; ಸಾರ್ವಜನಿಕರು ದೂರು ಸಲ್ಲಿಸಲು ಆಯೋಗದಿಂದ ಸಿ-ವಿಜಿಲ್ ಆಪ್ ಅಭಿವೃದ್ಧಿ
-
ದಿನದ ಸುದ್ದಿ2 days ago
ಲೋಕಸಭಾ ಚುನಾವಣೆಯ ಮೊದಲ ಹಂತಕ್ಕೆ ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನ
-
ದಿನದ ಸುದ್ದಿ1 day ago
ಇಂದಿನಿಂದ ಏ.3 ರವರೆಗೆ ಸೂಳೆಕೆರೆಗೆ ನೀರು ಬಿಡುಗಡೆ