ದಿನದ ಸುದ್ದಿ
ದಲಿತರ ಮೇಲೆ ಸವರ್ಣೀಯರಿಂದ ದೌರ್ಜನ್ಯ : ಈ ಊರಲ್ಲಿ ದಲಿತರಿಗೆ ಪ್ರವೇಶವಿಲ್ಲ
![](https://suddidina.com/wp-content/uploads/2018/06/Dalita-dawrjanya-suddidina.jpg)
ಸುದ್ದಿದಿನ ವಿಶೇಷ : ಕುಲ ಕುಲ ಎಂದು ಹೊಡೆದಾಡದಿರಿ ನಿಮ್ಮ ಕುಲದ ನೇಲೆ ಎನ್ನಾದರು ಬಲೀರಾ ಅಂತ ದಾಸರೇ ಹೇಳಿದ್ದಾರೆ.ಆದ್ದರೆ ಅಂತಹ ಕುಲದ ಹೊಡೆದಾಟ ಇನ್ನು ಸಹಿತ ನಡೀತಿದೆ .ಇವನ್ನು ಮೇಲು ಕೀಳು ಎಂಬ ಭಾವನೆ ಇಂದಿಗು ಸಹ ಜೀವಂತವಾಗಿ ಕಣ್ಣಮುಂದೆ ಕಾಣ್ತಿದೆ.ಮೇಲ್ಜಾತಿಯವರು ಕೇಳ್ಜಾತಿವರ ಮೇಲೆ ನಿರಂತರವಾಗಿ ಶೋಷಣೆ ಮಾಡ್ತಿದ್ದಾರೆ .ಅಂತಹ ಅಸ್ಪೃಶ್ಯತೆಯ ಜನಾಂಗ ದೌರ್ಜನಕ್ಕೆ ಒಳಗಾಗಿ ಕೇಸರಿನ ಹುಳುಗಳ ರೀತಿಯಲ್ಲಿ ಬದುಕುತ್ತಿದ್ದಾರೆ .ಅಂತಹ ಹೃದಯ ವಿದ್ರಾವಕ ಘಟನೆ ಇಲ್ಲಿನ ಜನರದ್ದಾಗಿ ಇವರ ಪರಿಸ್ಥಿತಿ.
ಇದು ರಾಯಚೂರು ಜಿಲ್ಲೆ ಲಿಂಗಸುಗೂರ ತಾಲೂಕಿನ ಯರಜಂತಿ ಗ್ರಾಮ ಈ ಗ್ರಾಮದಲ್ಲಿ ದಲಿತರಿಗೆ ಅಸ್ಪೃಶ್ಯರಿಗೆ ಗ್ರಾಮದಲ್ಲಿ ಅವಕಾಶ ಇಲ್ಲ ಯಾವುದೇ ಗುಡಿ ಗುಂಡಾರಗಳಲ್ಲಿ ,ಊರು ಕೇರಿಗಳಲ್ಲಿ ಹೊಗುವಂತಿಲ್ಲ .ಯಾರು ಮುಟ್ಟಬಾರದು ಯಾರು ಇವರನ್ನು ಮಾತನಾಡಿಸಬಾರದು .ಯಾವುದೇ ಅಂಗಡಿಗಳಿಗು ಸಹ ಹೋಗುವಹಾಗಿಲ್ಲ ಅಷ್ಟೇ ಯಾಕ್ಕೆ ಇವರು ಮಕ್ಕಳಿಗು ಸಹ ಶಾಲೆಯಲ್ಲಿ ಅವಕಾಶ ಇಲ್ವಂತೆ ಅವರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಒಂದು ತುತ್ತು ಊಟವನ್ನು ಹಾಕ್ತಿಲ.ಇಲ್ಲಿರುವ ಕೇಳವರ್ಗದವರು ಜನರು ಒಡಾಡುವ ರಸ್ತೆ ನೋಡಿದ್ರೆ ಭಯಬೀತರಾಗಿ ಬಿಡ್ತಿರಾ ಯಾಕಂದ್ರೆ ಇವರು ಒಡಾಡುವ ರಸ್ತೆ ಕಲ್ಲು ಮುಳಿನ ಗುಡ್ಡಗಳಿಂದ ಕೂಡಿದ ಸಾವಿನ ದಿಬ್ಬವಾಗಿ ಪರಿಣಮಿಸಿದೆ. ಅದೇ ರೀತಿ ಮೇಲ್ಜಾತಿಯವರ ರಸ್ತೆಗಳು ಆರ್ ಸಿ ಸಿ ರಸ್ತೆಯಾಗಿದೆ.ಒಂದು ವೇಳೆ ಅವರ ನಿಯಮವನ್ನು ತಪ್ಪಿದ್ದರೆ ಇವರ ಮೇಲೆ ಮಚ್ಚಿನಿಂದ ಕೊಚ್ಚಿ ಹಾಕುತ್ತೆನೆ . ಅಂತ ಮಾರಣಾಂತಿಕ ಹಲ್ಲೆ ಮಾಡಲು ಮುಂದಾಗುತ್ತಾರೆ.ಬಾಯಿಗೆ ಬಂದಂತೆ ಸ್ತ್ರೀ ಯರ ಮೇಲೆ ನಿಂದನೆ ಮಾಡೋದು ತೊಡೆ ತಟ್ಟಿ ಕರೆಯೊದು ಇಂತಹ ಅವಮಾನವೀಯ ನಡವಳಿಕೆ ಇಲ್ಲಿನ ಗ್ರಾಮಸ್ಥರು ಮತ್ತು ಇಲ್ಲಿನ ಪಂಚಾಯಿತಿಯ ಸದ್ಯಸರು ದೌರ್ಜನ್ಯವೆಸಗುತ್ತಿದ್ದಾರೆ.
ಈ ಊರಿನಲ್ಲಿ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಆಟೋಗಳ ಮುಖಾಂತರವಾಗಿ ಬರಬೇಕು ಅಂತಹ ಪರಿಣಾಮವಾಗಿದೆ .ಹೀಗಿರುವಾಗ ದಲಿತರು ಬಂದರೆ ಅವರಿಗೆ ಆಟೋಗಳಲ್ಲಿಯು ಅವಕಾಶ ಇಲ್ಲ ಸಾವು ಬದುಕುನ ನಡುವೆ ಹೋರಾಡುತ್ತಿದ್ದಾರೆ ಚಿಕಿತ್ಸೆ ಪಡೆಯಲು ಅವರು ಪರದಾಟ ಪಟ್ಟ ಸ್ಥಿತಿ ಅಷ್ಟ ಇಷ್ಟಲ. ಕುಡಿಯಲು ನೀರಿಗೆ ಸುಮಾರು ದೂರಹೋಗಿ ತರಬೇಕು ಅದು ಜಾನುವಾರಗಳು ಕುಡಿಯುವ ನೀರಿನ ಹೊಂಡದಲ್ಲಿ. ಇನ್ನು ಇಲ್ಲಿನ ಜನರಿಗೆ ಯಾವುದೇ ಸರಕಾರಿ ಮನೆಗಳು ಶೌಚಾಲಯಗಳಿಲ ಸರಕಾರದ ಬೋಮಿಯನ್ನು ಸಹ ಲಪಟಾಯಿಸ್ಸಿದ್ದಾರೆ. ವಾಸಿಸಲು ಮನೆ ಇಲ್ಲದೆ ಊರಿನ ಹೊರ ಭಾಗದ ದಿಬ್ಬದಲ್ಲಿ ವಾಸ ಮಾಡ್ತಿದ್ದಾರೆ.ಇಂತಹ ಚಿತ್ರಣವನ್ನು ನೊಡುತ್ತಿದ್ದರೆ ಇದು ರಾಮರಾಜ್ಯದ ಕನಸ್ಸಿನ ಕರ್ನಾಟಕ ನಾ ಇಲ್ಲ ರಾವಣ ದೌರ್ಜನ್ಯ ಪ್ರದೇಶ ನಾ ಅಂತ ಗೋಚ್ಚರಿಸುತ್ತಿದೆ.ಇಂತಹ ಇಷ್ಟ ಕಷ್ಟಗಳ ಸಂಕೊಲೆಗಳಲಿ ಜನ ಜೀವಂತ ಶವವಾಗಿ ಬದುಕುತ್ತಿದ್ದಾರೆ.ಎಲ್ಲಿದೆ ಮಾನವನ ಮೂಲಭೂತ ಹಕ್ಕು ಎಂಬ ಪ್ರಶ್ನೆ ಕಾಡುತ್ತಿದೆ.ಈ ಜನರ ಕಣ್ಣಿರಿನ ಆಕ್ರೋಶದ ಕಥೆಯನ್ನು ಕೇಳಿದ್ರೆ ಎಂತಹ ಹಿಟ್ಲರನ ಹೃದಯದವನಿದ್ದರು ಕರಗುತ್ತಾನೆ.
ಇನ್ನೂ ರಾಜಕೀಯ ನಾಯಕರು ತಮ್ಮ ಬೇಳೆಯನ್ನು ಬೆಯಿಸಿಕೊಳಲು ಚುನಾವಣೆ ಬಂದಾಗ ಅವರ ಮನೆಯಲ್ಲಿ ಊಟ ಮಾಡೊದು ನೀರು ಕುಡಿಯೊದು ಮಲಗೊದು ಇಂತಹ ನಾಟಕವನ್ನು ಬಿಟ್ಟು ಇವರ ಮೇಲೆ ನಡೆಯುವ ದಬ್ಬಾಳಿಕೆ ವಿರುದ್ಧ ಕೈ ಜೋಡಿಸಿ ಅಂಬೇಡ್ಕರ್ ಹೊತ್ತ ಕನಸಿನ ಆದರ್ಶ ಪ್ರರೂಪಗಳು ಪಾಲಿಸಿ .ಕಾಲ್ತುಳಿತಕ್ಕೆ ಒಳಗಾಗಿರುವ ಇಂತಹ ಕಾಯಕ ಸಮಾಜದವನ್ನು ಉನ್ಬತಿ ಕರಿಸಿ ಅಸ್ಪೃಶ್ಯತೆಯ ವಿರುದ್ದ ದಬ್ಬಾಳಿಕೆ ಮಾಡುವವರನ್ನು ಶಿಕ್ಷಿಸಿ. ಕಾಯಕ ಸಮಾಜಕ್ಕೆ ಸಿಗಲಿ ಸ್ಥಾನ ಮಾನ.
ನೀರಿಗ ಯಾವ ಕುಲ
ಅಗ್ನಿಗೆ ಯಾವ ಕುಲ,
ವಾಯುಗೆ ಯಾವ ಕುಲ,
ರಕ್ತಕ್ಕೆ ಯಾವ ಕುಲ .
ಇರುವುದು ಒಂದೆ ಕುಲ ಅದು ಮನುಷ್ಯ ಕುಲ…ಮನುಷ್ಯ ಕುಲ
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!