Connect with us

ದಿನದ ಸುದ್ದಿ

ಚಂದ್ರಶೇಖರ್ ಆಜಾದ್ ಗೆಲುವು ಮತ್ತು ದಲಿತ ರಾಜಕಾರಣ 3.0..?

Published

on

  • ವಿಕಾಸ್ ಆರ್ ಮೌರ್ಯ

ತ್ತರಪ್ರದೇಶದ ನಾಗಿನ ಲೋಕಸಭಾ ಕ್ಷೇತ್ರವು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾಗಿದೆ. ಈ ಕ್ಷೇತ್ರದಿಂದ ಚಂದ್ರಶೇಖರ್ ಆಜಾದ್ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ದಲಿತ ರಾಜಕಾರಣದ ಭವಿಷ್ಯಕ್ಕೆ ಬೇರೆಯದ್ದೇ ಆದ ಮುನ್ನುಡಿ‌ ಬರೆದಿದ್ದಾರೆ.

ನಾಗಿನ ಮೀಸಲು ಕ್ಷೇತ್ರವು ಈ ಹಿಂದೆ ಬಾಬು ಜಗಜೀವನ್ ರಾಮ್ ಜಿ ಅವರ ಮಗಳು ಮೀರಾಕುಮಾರಿ ಹಾಗೂ BSP ಯ ಮಾಯಾವತಿಯವರನ್ನೂ ಗೆಲ್ಲಿಸಿತ್ತು. ಈಗ ಆಜಾದ್ ಆ ಸಾಲಿಗೆ ಸೇರಿಕೊಂಡಿದ್ದಾರೆ. ಈ ಕ್ಷೇತ್ರದ ವಿಶೇಷತೆ ಎಂದರೆ ಶೇ.60 ರಷ್ಟು ದಲಿತರು ಹಾಗೂ ಮುಸ್ಲಿಂ ಮತದಾರರಿರುವುದು. ಆಜಾದ್ ಈ ಬಾರಿ ಈ ಎರಡೂ ಸಮುದಾಯದ‌ ನೆಚ್ಚಿನ ನಾಯಕರಾಗಿದ್ದರು.

ಮತ್ತೊಂದು ಗಮನಾರ್ಹ ವಿಚಾರವೆಂದರೆ ಆಜಾದ್ ಅವರನ್ನು INDIA ಮೈತ್ರಿಕೂಟವೂ ಸಹ ಒಳಗೊಂಡಿರಲಿಲ್ಲ. ಆಜಾದ್ ಎದುರಿಗೆ ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿ ಒಂದು ಲಕ್ಷಕ್ಕೂ ಅಧಿಕ‌ ಮತ ಗಳಿಸಿ ಮೂರನೇ ಸ್ಥಾನದಲ್ಲಿದ್ದಾರೆ. ಬಿಎಸ್ಪಿಯೂ ಸಹ ಸ್ಪರ್ಧಿಸಿ 3000 ಮತ‌ ಗಳಿಸಿದೆ.

ಇಲ್ಲಿ ಆಜಾದ್ ಅವರು ಪೂನಾ ಒಪ್ಪಂದದ ಮಿತಿಯನ್ನು ದಾಟುವ ಪ್ರಯತ್ನ ಮಾಡಿ‌ ಯಶಸ್ವಿಯಾಗಿದ್ದಾರೆ. ಹಿಂದೂ ಮೇಲ್ಜಾತಿಗಳು ಯಾವಾಗಲೂ ತಮ್ಮ ಆಜ್ಞೆಗೆ ತಲೆಯಾಡಿಸುವ ದಲಿತ ನಾಯಕರನ್ನೇ ಆರಿಸುವ ಪರಿಪಾಠವನ್ನು ಬೆಳೆಸಿಕೊಂಡಿರುವಾಗ ಆಜಾದ್ ಗೆಲುವು ದಲಿತ ರಾಜಕಾರಣದ ಬೇರೆಯದೇ ದಾರಿಯನ್ನು ತೆರೆದಿಟ್ಟಿದೆ. ಇದು ಆರಂಭಿಕ ಕಾನ್ಶಿರಾಮ್ ಅವರ ಬಹುಜನ‌ ಹಿತಾಯ ಬಹುಜನ ಸುಖಾಯ BSP ರಾಜಕಾರಣವನ್ನು ನೆನಪಿಗೆ ತರುತ್ತದೆ. ಆದರೂ ಈ‌ ಸಂದಿಗ್ಧ ಪರಿಸ್ಥಿತಿಯಲ್ಲಿ ಆಜಾದ್ ದಲಿತ ರಾಜಕಾರಣ ಭರವಸೆ ಮೂಡಿಸುತ್ತಿದೆ.

ಕೇವಲ ಒಂದು ಸ್ಥಾನದಿಂದ ದೊಡ್ಡ ಕನಸು ಕಾಣಲು ಸಾಧ್ಯವಿಲ್ಲವಾದರೂ ದಲಿತ ರಾಜಕಾರಣವೇ ಇಲ್ಲದ ಸಂದರ್ಭದಲ್ಲಿ ಹೊಸ ಬೆಳಕು ಮೂಡಿಸಿದೆ. ಇತರೆ ರಾಜ್ಯಗಳಿಗೂ ಈ ದಲಿತ-ಮುಸ್ಲಿಂ ಮೈತ್ರಿ ವಿಸ್ತರಿಸಬೇಕಿದೆ. ಈ ಮೈತ್ರಿಗೆ ಅತಿ ಹಿಂದುಳಿದ ಜಾತಿಗಳು ಕೈಜೋಡಿಸಿದರೆ ಅದು ಮತ್ತೊಂದು ಲೆವೆಲ್ ತಲುಪುವುದು ಖಂಡಿತ. ದಲಿತ ರಾಜಕಾರಣ ಮತ್ತೊಂದು ಸದಾವಕಾಶಕ್ಕಾಗಿ ಕನಸು ಕಾಣಲು ಇದು ಪಕ್ವವಾದ ಕಾಲ ಎನಿಸುತ್ತಿದೆ.

ಅಂದಹಾಗೆ ಈ ಬಾರಿ INDIA ಮೈತ್ರಿಕೂಟದಂತೆ ಆಜಾದ್ ಸಹ ಸಂವಿಧಾನ ಉಳಿಸುವ ಘೋಷಣೆಯೊಂದಿಗೆ ಮತ ಯಾಚಿಸಿದ್ದರು. ಜೊತೆಗೆ 2024 ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಎಸ್ಸಿ/ಎಸ್ಟಿ ಮೀಸಲು ಕ್ಷೇತ್ರಗಳು ಇಂಡಿಯಾ ಮೈತ್ರಿಕೂಟಕ್ಕೆ ದಕ್ಕಿದೆ.

(ಬಾಬಾಸಾಹೇಬ್ ಅಂಬೇಡ್ಕರ್ ಸ್ಥಾಪಿತ ILP,SCF, RPI – ದಲಿತ ರಾಜಕಾರಣ 1.0
BSP – ದ.ರಾ 2.0
ಆಜಾದ್ ಮಾದರಿ – 3.0 ಆಗಬಹುದೆ?) ಬರಹ -ಪೇಸ್ಬುಕ್ ಕೃಪೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending