Connect with us

ದಿನದ ಸುದ್ದಿ

ದಲಿತರು ಮತ್ತು ಮತಾಂತರ : ಪ್ರೊ. ಬಿ.ಕೃಷ್ಣಪ್ಪ ಅವರ ಲೇಖನ

Published

on

  • ಪ್ರೊ. ಬಿ.ಕೃಷ್ಣಪ್ಪ

ತಮಿಳು ನಾಡಿನ ಮೀನಾಕ್ಷಿಪುರಂ ದಲಿತರು ಮುಸ್ಲಿಮರಾಗುವುದರ ಮೂಲಕ ಕನ್ಯಾಕುಮಾರಿಯಿಂದ ಹಿಡಿದು ಹಿಮಾಲಯದವರೆಗೆ, ಅರಬ್ಬಿ ಸಮುದ್ರದಿಂದ ಹಿಡಿದು ಬಂಗಾಳ ಕೊಲ್ಲಿಯವರೆಗೆ ಹಬ್ಬಿರುವ ಈ ನೆಲದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದ್ದಾರೆ. ಇಡೀ ಹಿಂದು ರಾಷ್ಟ್ರವನ್ನು ಮುಸ್ಲಿಂ ರಾಷ್ಟ್ರವನ್ನಾಗಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಹಿಂದೂ ರಾಷ್ಟ್ರ ತಮ್ಮದು ಎಂದು ಬೊಗಳೆ ಹೊಡೆಯುವ ಹಿಂದುಗಳ ಬಾಯಿಗೆ ಬಲವಾದ ಗುಂಡು ಜಡಿದಿದ್ದಾರೆ. ನಿಂತ ಕಾಲ ಮೇಲೆ ಹಿಂದೂಗಳಿಗೆ ನೆಲ ಕುಸಿದಂತಾಗಿದೆ. ದಲಿತರು ಮನಸ್ಸು ಮಾಡಿದರೆ ಬಿರುಗಾಳಿಯಲ್ಲಿ ವಿಷಗಾಳಿಯಾಗಬಲ್ಲರು ಎಂಬುದಕ್ಕೆ ಇದು ಒಂದು ಉದಾಹರಣೆ ಮಾತ್ರ.

ಅಂಬೇಡ್ಕರ್ ಹೇಳಿದಂತೆ, ದಲಿತರು ಬೌದ್ಧರಾಗುತ್ತಿದ್ದರೆ, ಇಲ್ಲವೆ ಕ್ರಿಶ್ಚಿ ಯನ್ನರಾಗುತ್ತಿದ್ದರೆ, ಹಿಂದೂಗಳಿಗೆ ಈಗಿನಂತೆ ಷಾಕ್, ಚುರುಕು ತಟ್ಟುತ್ತಿರಲಿಲ್ಲ. ಏಕೆಂದರೆ ಈಗ ಹಾಲಿ ಇಂಡಿಯಾದಲ್ಲಿರುವ ಬೌದ್ಧ ಮತ್ತು ಕ್ರಿಶ್ಚಿಯನ್ ಧರ್ಮಗಳು ಹಿಂದೂ ಧರ್ಮದ ಕಕ್ಷೆ ಒಳಗೆ ಅದೆಷ್ಟು ರೂಪ ಪಡೆದುಕೊಳ್ಳುತ್ತಿವೆ. ಇತಿಹಾಸದಲ್ಲಿ ಎಂದೂ ಬೌದ್ಧ ಮತ್ತು ಕ್ರೈಸ್ತರು ಹಿಂದೂ ದ್ವೇಷಿಗಳಾಗಿ ವರ್ತಿಸಿಲ್ಲ. ಆದರೆ ಮುಸ್ಲಿ೦ ಮತ್ತು ಹಿಂದೂ ಧರ್ಮಗಳು ಶತಮಾನಗಳಿಂದ ಹಾವು ಮುಂಗುಸಿಗಳಂತೆ ಕಚ್ಚಾಡುತ್ತ,

ದ್ವೇಷದ ಕಿಡಿ ಕಾರುತ್ತ ಬಂದಿರುವುದಕ್ಕೆ ಇತಿಹಾಸವೇ ಸಾಕ್ಷಿ, ಇತ್ತೀಚೆಗಂತೂ ಆರ್. ಎಸ್. ಎಸ್. ನವರು ಹಳೆಯ ಗಾಯಕ್ಕೆ ಉಪ್ಪು ಸುರಿಯುತ್ತಿದ್ದಾರೆ.

ದೇಶದ 30 ಕೋಟಿ ದಲಿತರು ಮುಸ್ಲಿಮರಾದರೆ ಗತಿ ಏನು? ಜುಟ್ಟು ಜನಿವಾರಗಳು ಕಿತ್ತು ಹೋಗುತ್ತವೆ. ಮಠಮಾನ್ಯಗಳು ಮಸೀದಿಗಳಾಗುತ್ತವೆ. ರಾಜಕೀಯ ಅಧಿಕಾರ ಮುಸ್ಲಿಮರ ಕೈಗೆ ಹೋಗುತ್ತದೆ. ತ್ರಿವರ್ಣಧ್ವಜ ಹೋಗಿ ಚಂದ್ರ ಚುಕ್ಕೆ ಬಾವುಟ ಹಾರಾಡುತ್ತದೆ. ಕಾಶಿಗೆ ಬದಲಾಗಿ ಮೆಕ್ಕ ಮದೀನಗಳು ಧಾರ್ಮಿಕ ಶ್ರದ್ಧೆಯ ಕೇಂದ್ರಗಳಾಗುತ್ತವೆ.

ಇದನ್ನು ಊಹಿಸಿಕೊಂಡ ಹಿಂದೂ ಮಠಾಧಿಪತಿಗಳಿಗೆ, ರಾಜಕಾರಣಿಗಳಿಗೆ ಭೇದಿ ಕಿತ್ತುಕೊಂಡಿದೆ. ಮಲಗಿದ್ದ ಮುದ್ರೆ ನಾಮ, ವಿಭೂತಿಗಳು ಎದ್ದು ಕೂತಿವೆ. ಹಿಂದೂ ರಾಜಕಾರಣಿಗಳು ಪುರುಸೊತ್ತಿಲ್ಲದೆ ಓಡಾಡತೊಡಗಿದ್ದಾರೆ. ಪುರೋಹಿತಶಾಹಿ ಪತ್ರಿಕೆಗಳು ದಿನ ನಿತ್ಯ ಮತಾಂತರದ ಬಗ್ಗೆ ಬರೆಯತೊಡಗಿವೆ. ಎಂದಿನಂತೆ ಹಿಂದೂ ಮೆದುಳು ವಾಸ್ತವ ಸ್ಥಿತಿಯ ಸುತ್ತ ಇಲ್ಲ ಸಲ್ಲದ ಕತೆ ಕಟ್ಟತೊಡಗಿದೆ.

ದಲಿತರು ಮುಸ್ಲಿಮರಾಗಲು ಕಾರಣವೇನು? ಇದಕ್ಕೆ ಹೊಣೆ ಯಾರು? ಇಂಥ ಪ್ರಶ್ನೆಗಳಿಗೆ ಉತ್ತರ ಹೇಳ ಬೇಕಾದವರು ಅಸ್ಪೃಶ್ಯರಲ್ಲ. ದಲಿತರು ಹಿಂದೂ ಧರ್ಮ ಬಿಡುತ್ತಿದ್ದರೆ, ಅದಕ್ಕೆ ಹೊಣೆ ಸವರ್ಣೀಯರೆ ಹೊರತು ಅಸ್ಪೃಶ್ಯರಲ್ಲ.

ತಮ್ಮನ್ನು ಊರಿಂದ ಹೊರಗೆ ಇಟ್ಟಿದ್ದರೂ, ತಮ್ಮ ನೋಟ ಅಪವಿತ್ರ ಎಂದು ಭಾವಿಸಿದ್ದರೂ, ದೇವಸ್ಥಾನ, ಭಾವಿ, ಕೆರೆಗಳಲ್ಲಿ ನೀರು ಎತ್ತುವ ಅವಕಾಶ ಕೊಡದಿದ್ದರೂ, ತಮ್ಮ ಹುಟ್ಟು ಹೀನಾಯವೆಂದು ಹೀಗಳೆದರೂ, 5 ಸಾವಿರ ವರ್ಷಗಳಿಂದ ದಲಿತರು ತಮ್ಮನ್ನು ಹಿಂದೂಗಳು ಎಂದೇ ಭಾವಿಸಲಿಲ್ಲವೆ?

ಹಿಂದೂ ದೇವರು, ಪುರಾಣ, ಶಾಸ್ತ್ರಗಳನ್ನು ಪರಮಪೂಜ್ಯವೆಂದು ಆರಾಧಿಸಲಿಲ್ಲವೆ? ಒದ್ದ ಕಾಲುಗಳಿಗೆ ಚಪ್ಪಲಿ ಹೊಲಿದುಕೊಡಲಿಲ್ಲವೆ? ಬೆವರು ಸುರಿಸಿ ಮೂಕ ಪ್ರಾಣಿಗಳಂತೆ ಜೀತ ಮಾಡಲಿಲ್ಲವೆ? ಇಷ್ಟಾದರೂ ಹಿಂದೂಗಳು ಅವರನ್ನು ಮನುಷ್ಯರೆಂದು ಭಾವಿಸಿದರೇನು? ತಮ್ಮ ಸಹ ಸೋದರರೆಂದು ಅತ್ತುಗರೆದರೇನು? ಶತಮಾನಗಳು ಉರುಳಿದರೂ ಅವರ ಮನಸ್ಸು ಬದಲಾಗಿಲ್ಲ.

ಪಪಾ ಬೆಳ್ಳಿ ಕಿಲ್ಬಮನೆ, ನಾರಾಯಣಪುರ, ಇತ್ಯಾದಿ ಘಟನೆಗಳು ಇನ್ನೂ ಮುಂದುವರಿಯುತ್ತಲೇ ಇವೆ. ಅಡ್ಡಬಿದ್ದವರನ್ನೆ ಮತ್ತಷ್ಟು ತುಳಿಯುವ ಈ ಲಫಂಗ ಹಿಂದೂ ಧರ್ಮದಲ್ಲಿ ತಾವಾದರೂ ಏಕೆ ಇರಬೇಕು? ಎಂದು ಅಸ್ಪೃಶ್ಯರು ಭಾವಿಸಿದ್ದರೆ. ಅದಕ್ಕೆ ಹೊಣೆ ಯಾರು? ಜವಾಬ್ದಾರರು ಯಾರು?

ಮೀನಾಕ್ಷಿಪುರಂಗೆ ಧಾವಿಸಿದ ಭಾ.ಜ.ಪ. ನಾಯಕ ವಾಜಪೇಯಿ ಸುಬ್ರಮಣ್ಯಸ್ವಾಮಿ ನಾಮ ಮುದ್ರೆ, ವಿಭೂತಿ ಜುಟ್ಟಿನ ಖದೀಮ ಮಠಾಧಿಪತಿಗಳು, ಆರ್ ಎಸ್. ಎಸ್. ಚಡ್ಡಿಗಳು ಮೇಲು ಜಾತಿ ಗೃಹಮಂತ್ರಿ ಜೈಲ್‌ಸಿಂಗ್‌ ಅಸ್ಪೃಶ್ಯರು ಮತಾಂತರ ಹೊಂದಲು ವಿದೇಶಿ ಹಣ, ರೊಕ್ಕದ ಆಸೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಮೀನಾಕ್ಷಿಪುರಂ ಅಸ್ಪಶ್ಯರು ಸ್ಟೇಟ್ ಗೃಹ ಸಚಿವ ಅಸ್ಪೃಶ್ಯ ಮಂತ್ರಿ ಯೋಗೀಂದ್ರ ಮಕ್ಕಾನ ‘ಮತಾಂತರಕ್ಕೆ ಸಾಮಾಜಿಕ ಅವಹೇಳನ” ಕಾರಣ ಎಂದಿದ್ದಾರೆ. ಪೇಜಾವರ ಮಠಾಧಿಪತಿ ‘ಮತಾಂತರಕ್ಕೆ ಸಾಮಾಜಿಕ ಅಸಮಾನತೆ ಕಾರಣ’ ಎಂದಿರುವುದು ಗಮನಾರ್ಹ. ಇದರಲ್ಲಿ ಯಾವುದು ಮೂಲಭೂತ? ಯಾವುದು ನಿಜ? ಯಾವುದು ಸುಳ್ಳು?

5 ಸಾವಿರ ವರ್ಷಗಳಿಂದ ಅಸ್ಪಶ್ಯತೆಗೆ ಸಿಕ್ಕು ನರಳುತ್ತಿರುವ ಅಸ್ಪಶ್ಯರಾಗಿ ಹುಟ್ಟಿದ ಕಾರಣಕ್ಕಾಗಿಯೆ? ಅಮಾನುಷ ಹಿಂಸೆಗೆ ಬಲಿಯಾಗುತ್ತಿರುವ, ಈ ಜನರ ಮನಸ್ಸಿನ ಬೇಗುದಿ, ತಳಮಳ ಮೇಲ್ಮಾತಿಯ ನೋವಿಲ್ಲದ ಜನಕ್ಕೆ ಹೇಗೆ ಅರ್ಥವಾಗಬಲ್ಲದು? ಹಣಕ್ಕಾಗಿಯೇ ಅಸ್ಪೃಶ್ಯರು ಮತಾಂತರಗೊಳ್ಳುವುದಾಗಿದ್ದರೆ, ಇಂಡಿಯಾ ದೇಶ ಈಗಿರುವ ಸ್ಥಿತಿಯಲ್ಲಿ ಅದು ಹಿಂದೂ ದೇಶವಾಗಿ ಉಳಿಯುತ್ತಿರಲಿಲ್ಲ. ಎಂದೋ ಅದು ಕ್ರಿಶ್ಚಿಯನ್ ಅಥವಾ ಮುಸ್ಲಿಂ ರಾಷ್ಟ್ರವಾಗುತ್ತಿತ್ತು.

ಇಷ್ಟಾದರೂ ದಲಿತರು ಹಿಂದೂ ಧರ್ಮದಲ್ಲಿ ಉಳಿದಿರಲು ಕಾರಣ ಅವರಲ್ಲಿ ಮೌಢ ಅಜ್ಞಾನ ನಿರಕ್ಷರತೆಗಳನ್ನು ಪೋಷಿಸಿಕೊಂಡು ಬಂದಿರುವ ಹಿಂದೂ ಪರಿಸರ ಕಾರಣವಾಗಿದೆ. ಯಾವ ವಿದ್ಯಾವಂತ ದಲಿತನೇ ಆಗಲಿ, ಯಾವೊಬ್ಬ ಮಾನವತಾವಾದಿಯೇ ಆಗಲಿ ತನ್ನನ್ನು ಕೀಳಾಗಿ ಕಾಣುವ ಯಾವ ಧರ್ಮವನ್ನೂ ಗೌರವಿಸಲಾರ. ಗೌರವಿಸುವುದಿಲ್ಲ. ದಲಿತರು ವಿದ್ಯಾವಂತರಾಗುತ್ತಿರುವುದರಿಂದಲೆ ಮತಾಂತರ ಹೆಚ್ಚುತ್ತಿರುವುದು. ಆದ್ದರಿಂದಲೇ ಹಿಂದೂ ರಾಷ್ಟ್ರದ ಕನಸು ಕಾಣುತ್ತಿರುವ ಜಾತಿವಾದಿಗಳು ಮತಾಂತರ ನಿಷೇಧ ಮಸೂದ ಯನ್ನು ತರಲು ಶತ ಪ್ರಯತ್ನ ನಡೆಸಿದ್ದಾರೆ.

ಮತಾಂತರ ನಿಷೇಧ ಮಸೂದೆ ಎಂದರೆ ಅಸ್ಪೃಶ್ಯರು ಈ ದೇಶದಲ್ಲಿ ಅಸ್ಪೃಶ್ಯರಾಗಿಯೆ ಉಳಿಯಬೇಕು. ಸಮಾನತೆಯನ್ನು ಬಯಸಬಾರದು” ಎಂಬುದೇ ಆಗಿದೆ. ಮತಾಂತರದ ಗಾಳಿ ಹಿಂದೂ ರಾಜಕಾರಣಿಗಳಿಗೂ ಬಿಸಿ ತಟ್ಟಿಸಿದೆ. ಹಿಂದೂ ಸರ್ಕಾರ ಉರುಳಿ ಖೊಮನಿ ಸರ್ಕಾರ ಬಂದರೆ ತಮ್ಮನ್ನೆಲ್ಲ ರಾತ್ರೋ ರಾತ್ರಿ “ಬಿಸ್ಮಿಲ್ಲ” ಮಾಡಬಹುದೆಂಬ ಬೆದರಿಕೆಯಿಂದ ಅವರ ತೊಡೆ ನಡುಗತೊಡಗಿವೆ.

ಸ್ವಾತಂತ್ರ ಬಂದ 33 ವರ್ಷಗಳಲ್ಲಿ ರಾಜಕಾರಣಿಗಳು, ಆಳುವ ಪಕ್ಷಗಳು ಅಸ್ಪೃಶ್ಯರ ಬಗ್ಗೆ 3 ಅಂಶ 5 ಅಂಶ ಇತ್ಯಾದಿ ಕಾರಕ್ರಮಗಳನ್ನು ಹೇಳಿ ಅವು ಕಿಂಚಿತ್ತೂ ಕಾರರೂಪಕ್ಕೆ ಬರದೆ ಮತಾಂತರಕ್ಕೆ ಅದೂ ಕಾರಣವಾಗಿದೆ.

ಗುಜರಾತಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ನಡೆಸಿ ದಲಿತರ ಮಾರಣ ಹೋಮ ಮಾಡಿದ ಮರಾಠವಾಡ, ವಿಶ್ವವಿದ್ಯಾನಿಲಯಕ್ಕೆ ಅಂಬೇಡ್ಕರ್‌ ಹೆಸರನ್ನು ಇಡಬೇಕೆಂಬ ಬೇಡಿಕೆಯ ವಿರುದ್ಧ ಮಹಾರಾಷ್ಟ್ರದ ಅಸ್ಪೃಶ್ಯರನ್ನು ಅಮಾನುಷವಾಗಿ ಕೊಂದ, ಅಂಬೇಡ್ಕರ್‌ ಮೆರವಣಿಗೆ ಸವರ್ಣೀಯರ ಕೇರಿಯಲ್ಲಿ ಹೋಗಕೂಡದೆಂಬ ಕಾರಣಕ್ಕಾಗಿ ಇಡೀ ಬೀದರ್ ಜಿಲ್ಲೆ ಅಸ್ಪೃಶ್ಯರ ಮೇಲಿನ ಕಿಡಿಯಾಗಿ ಸಿಡಿದು ಅಸಂಖ್ಯ ದಲಿತರ ಸಾವು ನೋವಿಗೆ ಕಾರಣವಾದ ಹಿಂದೂಗಳು, ದಲಿತರ ಮೇಲೆ ತಮಗಿರುವ ದ್ವೇಷವನ್ನು ರಾಷ್ಟ್ರಮಟ್ಟದಲ್ಲಿ ಬಹಿರಂಗವಾಗಿ ತೋರ್ಪಡಿಸಿದ್ದಾರೆ.

ಅಷ್ಟೆ ಅಲ್ಲ ದಲಿತರ ಉದ್ಧಾರಕಿ ಎಂದು ಬೊಗಳೆ ಹೊಡೆಯುವ ಇಂದಿರಾ ಗಾಂಧಿಯಿಂದ ಹಿಡಿದು, ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ, ಮೊರಾರ್ಜಿ ದೇಸಾಯಿ ಮುಂತಾದ ಹಿಂದೂ ನಾಯಕರು ಜಗಜೀವನ ರಾಂನಂಥ ಅಸ್ಪೃಶ್ಯನೊಬ್ಬ ದೇಶದ ಪ್ರಧಾನಿಯಾಗುವುದನ್ನು ತಪ್ಪಿಸಿದರಲ್ಲಾ, ದಲಿತರು ಇವನ್ನು ಸುಲಭವಾಗಿ ಮರೆಯುತ್ತಾರೇನು? ಘಾಸಿಗೊಂಡ ಅವರ ಮನಸ್ಸು ಸೇಡಿನ ಕಿಡಿಯಾಗಿ ಉರಿಯುತ್ತದೆ.

ಈಗ ಹಾಲಿ ನಡೆಯುತ್ತಿರುವ ಮತಾಂತರವನ್ನು ತಡೆಗಟ್ಟಲು 3 ಮಾರ್ಗಗಳಿವೆ.

1. ಮತಾಂತರ ನಿಷೇಧ ಮಸೂದೆಯನ್ನು ತಂದು ಬಲವಂತವಾಗಿ ಮತಾಂತರವನ್ನು ತಡೆಗಟ್ಟುವುದು. ಅಸ್ಸಾಂ ಗುಡ್ಡಗಾಡು ಜನ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಿರುವಾಗ ಹಿಂದೂ ಜಾತಿವಾದಿಗಳು ಜನತಾ ಪಕ್ಷದ ಆಡಳಿತ ಕಾಲದಲ್ಲಿ “ಮತಾಂತರ ನಿಷೇಧ ಮಸೂದೆಯನ್ನು ಲೋಕಸಭೆಯಲ್ಲಿ ತರುವ ಯತ್ನ ಮಾಡಿದರು. ಭಾರತದ ಉದ್ದಗಲಕ್ಕೂ ಇರುವ ಕ್ರಿಶ್ಚಿಯನ್ನರು ಸಭೆ, ಮೆರವಣಿಗೆಗಳ ಮೂಲಕ ಮಸೂದೆಯನ್ನು ಪ್ರತಿಭಟಿಸಿದರು. ಅದು ರಾಜ್ಯಾಂಗದ 25(1) ಮೂಲಭೂತ ಹಕ್ಕನ್ನು ಕಿತ್ತುಕೊಳ್ಳುತ್ತಿದೆಯಾಗಿ ಆ ಮಸೂದೆ ತರುವುದು ಕಷ್ಟವಾಯಿತು ಮತ್ತು ಆ ರೀತಿಯ ಮಸೂದೆ ಈಗಿರುವ ಸಮಸ್ಯೆಗೆ ಸೂಕ್ತ ಪರಿಹಾರವಲ್ಲ.

2. ಮತಾಂತರಕ್ಕೆ ಮೂಲಕಾರಣ ಸಾಮಾಜಿಕ ಅಸಮಾನತೆ – ಅವಮಾನ, ಸಾಮಾಜಿಕ ಅವಮಾನ ಜಾತೀಯತೆಯಿಂದ ಬಂದದ್ದು. ಆದ್ದರಿಂದ ಜಾತಿ ನಿರ್ಮೂಲನ ಮತಾಂತರಕ್ಕೆ
ಇರುವ ಏಕೈಕ ಮತ್ತು ಸಮರ್ಥ ಪರಿಹಾರ, ಪೇಜಾವರ, ಕಂಚಿ ಕಾಮಕೋಠಿ ಮಠಾಧಿಪತಿಗಳು ಆರ್.ಎಸ್.ಎಸ್. ಹಿಂದೂ ಮಹಾಸಭೆ, ಆತ್ಮ ಸಮಾಜ, ಈಗ ಮಾತನಾಡುತ್ತಿರುವ ರೀತಿಯಲ್ಲಿ ಜಾತಿನಾಶ ಮಾಡಲು ಸಾಧ್ಯವೆ ಇಲ್ಲ.

ಪೇಜಾವರ ಸ್ವಾಮಿಗಳು ಅಸ್ಪೃಶ್ಯರ ಕಾಲೋನಿಗೆ ಹೋದ ಮಾತ್ರಕ್ಕೆ ಬ್ರಾಹ್ಮಣ ಅಸ್ಪಶ್ಯರ ಮನೆಯಲ್ಲಿ ಭೋಜನ ಮಾಡಿದ ಮಾತ್ರಕ್ಕೆ ಜಾತೀಯತೆ ಹೋಗಲಾರದು. ಜಾತಿಬೇರುಗಳು ಇರುವುದು ಹಿಂದೂ ಧರ್ಮದಲ್ಲಿ, ಜನನ. ವೈವಾಹಿಕ, ಮತ್ತು ಮರಣ ಕಾಲಗಳಲ್ಲಿ ನಡೆಸುವ ಕ್ರಿಯೆಗಳಲ್ಲಿ. ಮನು ಧರ್ಮಶಾಸ್ತ್ರ, ಗೃಹ್ಯ ಸೂತ್ರ ಪುರಾಣಗಳಲ್ಲಿ ಇವುಗಳನ್ನು ಅಮೂಲಾಗ್ರವಾಗಿ ನಾಶಮಾಡುವುದಾದರೆ ಜಾತಿ ಹೋಗಲು ಸಾಧ್ಯ.

ಒಂದು ಕಡೆ ಮನು ಧರ್ಮಶಾಸ್ತ್ರದಲ್ಲಿ ಆಳವಾಗಿ ಕಾಲಿಟ್ಟುಕೊಂಡು ಮತ್ತೊಂದು ಕಡೆ ಜಾತಿ ನಾಶಮಾಡುತ್ತೇವೆ ಎನ್ನುವ ಬೂಸ ಸುಧಾರಣಾವಾದಿಗಳ ಬಗ್ಗೆ ದಲಿತರು ಮೈತುಂಬ ಕಣ್ಣಿಟ್ಟು ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮ ನಾಶವ ಜಾತಿ ನಾಶವಾಗಿರುವಾಗ, ಹಿಂದೂ ಧರ್ಮ ಉಳಿಸಿಕೊಂಡು ಜಾತಿಯನ್ನು ಪ್ರತ್ಯೇಕವಾಗಿ ನಾಶಮಾಡುವುದು ಹೇಗೆ? ಹಿಂದೂ ಧರ್ಮ ಸಮಗ್ರ ಘಟಕವಾಗಿರುತ್ತಿದ್ದರೆ ಜಾತಿ ನಾಶ ಸುಲಭವಾಗಬಹುದಿತ್ತು.

ಬ್ರಾಹ್ಮಣ ಜಾತಿ ಬಿಡುತ್ತೇನೆ ಎಂದರೆ ಲಿಂಗಾಯಿತರು? ಗೌಡರು? ಕನಿಷ್ಠ ಅಗಸ? ಕುಂಬಾರ? ಇಂಥ ಭಿನ್ನ ಘಟಕಗಳು ಒಂದೊಂದೂ ಜಾತಿ ಕಲ್ಪನೆಯಿಂದ ಹೊರಬರಬೇಕಾದರೆ ಶತಮಾನಗಳೇ ಹಿಡಿದೀತು. ದಲಿತರಿಗೆ ಬೇಕಾಗಿರುವುದು ಜಾತಿ, ನೋವು ತುಳಿತಗಳಿಂದ ತಕ್ಷಣದ ಪರಿಹಾರ, ಅವರ ಬೇಡಿಕೆಯನ್ನು ಹಿಂದು ಧರ್ಮ ಪೂರೈಸಲಾರದು. ಅದು ಸಾಧ್ಯವು ಇಲ್ಲ. ಸಾಧ್ಯ ಎನ್ನುವುದಾದರೆ ಅದು ಅಷ್ಟೇ ವಿಳಂಬ.

ಆದ್ದರಿಂದ ಜೀತ, ಅವಮಾನ, ಹಿಂಸೆಗಳಿಂದ ಬಿಡುಗಡೆ ಹೊಂದಲು ದಲಿತರಿಗೆ ಉಳಿದ ಮಾರ್ಗ, ಮತಾಂತರವೊಂದೆ, ಆದರೆ ಯಾವ ಮತ? ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ದಲಿತರು ಚರ್ಚಿಸಬೇಕಾಗಿದೆ. ಸಮಗ್ರವಾಗಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಈ ಮಧ್ಯೆ ಯಾವುದೇ ಪೂರ್ವ ಚಿಂತನೆ ಇಲ್ಲದೆ ಹಸಿ ಹಸಿಯಾಗಿ ಮತಾಂತರಗೊಳ್ಳು ದಲಿತರ ಪಾಲಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಬಹುದು.

(ಪ್ರೊ. ಬಿ. ಕೃಷ್ಣಪ್ಪ : ಚಿಂತನೆಗಳು – ಬರಹಗಳು ಪುಸ್ತಕದಿಂದ ಈ ಲೇಖನ ಆಯ್ದು ಕೊಳ್ಳಲಾಗಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ದಾವಣಗೆರೆ | ನಾಳೆ ವಿವಿಧೆಡೆ ವಿದ್ಯುತ್ ವ್ಯತ್ಯಯ

Published

on

ಸುದ್ದಿದಿನ,ದಾವಣಗೆರೆ : 66/11 ಕೆ.ವಿ. ವಿದ್ಯುತ್ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ತುರ್ತು ನಿರ್ವಹಣಾ ಕಾಮಗಾರಿಗಳ ಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಜೂನ್ 23 ರಂದು ಬೆಳಿಗ್ಗೆ 10 ರಿಂದ ಸಂಜೆ 5.30 ರವರೆಗೆÉ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಮಾಮಾಸ್ ಜಾಯಿಂಟ್ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು, ಎಮ್.ಸಿ.ಸಿ.ಬಿ : ಶಾಬನೂರು ರಸ್ತೆ, ಎಸ್.ಎಸ್. ಲೇಔಟ್, ಎ ಬ್ಲಾಕ್, ಕುವೆಂಪು ನಗರ, ಬಾಟ್ಲಿ ಬಿಲ್ಡಿಂಗ್ ಸುತ್ತ ಮುತ್ತ, ಸಿದ್ದವೀರಪ್ಪ ಬಡಾವಣೆ, 1ನೇ ಅಡ್ಡ ರಸ್ತೆ ಯಿಂದ 7ನೇ ಅಡ್ಡರಸ್ತೆವರೆಗೆ, ಗ್ಲಾಸ್ ಹೌಸ್, ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಹಿಂಭಾಗದ ಪ್ರದೇಶ , ಬಿ.ಐ.ಇ.ಟಿ. ಕಾಲೇಜು ಹಾಗೂ ಸುತ್ತ ಮುತ್ತ ಪ್ರದೇಶಗಳು.

ಮಂಡಿಪೇಟೆ, ಬೆನ್ನೆ ಕಂಪನಿ ರಸ್ತೆ, ಎಮ್ ಜಿ ರಸ್ತೆ, ಎನ್ ಆರ್ ರಸ್ತೆ, ಬೆಲ್ಲೌಡಿಹಲ್ಲಿ, ಮಹಾವೀರ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಬಿ.ಟಿ.: ಮಂಡಕ್ಕಿ ಬಟ್ಟಿ, 1 ರಿಂದ 10 ನೇ ಕ್ರಾಸ್, ಇಂದಿರಾ ನಗರ, ಸಿದ್ದರಾಮೇಶ್ವರ ಬಡಾವಣೆ, ಕಾರ್ಲ್ ಮಾರ್ಸ್ ನಗರ, ಕೋಳಿ ಚನ್ನಪ್ಪ ಬಡಾವಣೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳು, ಮೌನೇಶ್ವರ : ಹೆಚ್.ಕೆ. ಆರ್. ಸರ್ಕಲ್, ಕೆ.ಇ.ಬಿ ಕಾಲೋನಿ, ನಿಟುವಳ್ಳಿ ಹಾಗು ನಿಟುವಳ್ಳಿ ಹೊಸಬಡಾವಣೆ, ಮೌನೇಶ್ವರ ಬಡಾವಣೆ, ಸೈಯದ್ ಪೀರ್ ಬಡಾವಣೆ, ಐ.ಟಿ.ಐ. ರಿಂಗ್ ರಸ್ತೆ, ಜಯನಗರ, ದುರ್ಗಾಂಬಿಕ ದೇವಸ್ಥಾನ ಸುತ್ತಮುತ್ತ.

ಎಸ್.ಎಸ್. ಹೈಟೆಕ್ ಆಸ್ಪತ್ರೆ ರಸ್ತೆ, ಭಗೀರಥ ಸರ್ಕಲ್, ಕಾಳಿಕಾಂಬ ದೇವಸ್ಥಾನ, ಶಕ್ತಿನಗರ, ಹಾಗು ಇ.ಎಸ್.ಐ ಆಸ್ಪತ್ರೆ ಮತ್ತು ಸುತ್ತ ಮುತ್ತಲಿನ ಪ್ರದೇಶಗಳ, ಪಿ.ಬಿ. ರಸ್ತೆ., ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಕೆಟಿಜೆ: ಶ್ರೀ ಮುರಘ ರಾಜೇಂದ್ರ ಸ್ವಾಮಿಗಳ ಮಠ, ಜಾಧವ್ ಕ್ಲಿನಿಕ್ ಸುತ್ತ ಮುತ್ತ , ಶಿವಪ್ಪ ವೃತ್ತದಿಂದ ಜಯದೇವ ವೃತ್ತದವರೆಗೆ ಹಾಗು ಸುತ್ತಮುತ್ತ ಪ್ರದೇಶಗಳು, ಪಿಜೆ: ಪೋಲೀಸ್ ಕ್ವಾಟ್ರಸ್, ತುಂಗ, ಭದ್ರ, ಸರಸ್ವತಿ, ಕೃಷ್ಣ ಬ್ಲಾಕ್, ಅರುಣಾ ಸರ್ಕಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಸಿಜಿಹೆಚ್: ಎಮ್.ಸಿ.ಸಿ. ಎ ಬ್ಲಾಕ್, ನ್ಯಾಯಾಧೀಶರ ವಸತಿ ಗೃಹಗಳು, ತೊಗಟವೀರ ಕಲ್ಯಾಣ ಮಂದಿರ, ವಿನೋಬ ನಗರ 1ನೇ ಮುಖ್ಯ ರಸ್ತೆ ಹಾಗೂ ಸುತ್ತ ಮುತ್ತಲಿನ ಪ್ರದೇಶಗಳು, ಎಸ್.ಎಸ್. ಬಡಾವಣೆ, ಎ ಬ್ಲಾಕ್, ಶಾಂತಿ ನಗರ, ಕುಂದುವಾಡ ರಸ್ತೆ, ಮಹಾನಗರ ಪಾಲಿಕೆ ಕುಡಿಯುವ ನೀರಿನ ಸ್ಥಾವರ, ಬಸವೇಶ್ವರ ಬಡಾವಣೆ, ಮಹಾಲಕ್ಷ್ಮೀ ಬಡಾವಣೆ, ಬಾಲಾಜಿ ನಗರ, ಕುಂದುವಾಡ ಕೆರೆ ಹಾಗು ಸುತ್ತಮುತ್ತ ಪ್ರದೇಶಗಳು.

ಕರೂರು ಇಂಡಸ್ಟ್ರಿಯಲ್ ಏರಿಯಾ, ಡಿ.ಸಿ. ಕಛೇರಿ, ಜಿ.ಎಂ.ಐ.ಟಿ. ಬಸವೇಶ್ವರ ನಗರ, ರಶ್ಮೀ, ಹರಿಹರ ರಸ್ತೆ, ವಿಜಯ ನಗರ, ಅಶೋಕ ನಗರ, ಆರ್.ಟಿ.ಓ. ಕಛೇರಿ, ಎಸ್.ಪಿ. ಕಛೇರಿ, ರಿಂಗ್ ರಸ್ತೆ, ಶಿಬಾರ, ಎಸ್.ಎಂ.ಕೆ. ನಗರ, ಹಾಗೂ ಚಿತ್ತನಹಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ನೀಲನಹಳ್ಳಿ, ದೇವರಹಟ್ಟಿ, ದೊಡ್ಡಬಾತಿ, ಹಳೆಬಾತಿ, ನಾರಾಯಣ ಕ್ಯಾಂಪ್, ಯರಗುಂಟಾ, ಕೋಡಿಹಳ್ಳಿ, ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮಾಗಾನಹಳ್ಳಿ, ಮಾಗಾನಹಳ್ಳಿ ಕ್ಯಾಂಪ್, ಓಬಜ್ಜಿಹಳ್ಳಿ, ಓಬಜ್ಜಿಹಳ್ಳಿ ಕ್ಯಾಂಪ್, ಕಡ್ಲೇಬಾಳು, ಹಳೆಕಡ್ಲೆಬಾಳು, ಮಾಳಗೊಂಡನಹಳ್ಳಿ, ಅರಸಾಪುರ, ಬದುನಾಯಕನತಾಂಡ, ಚಿಕ್ಕಓಬಜ್ಜೀಹಳ್ಳಿ, ದೊಡ್ಡಓಬಜ್ಜೀಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು, ಮ್ಯಾಸರಹಳ್ಳಿ, ಗುಮ್ಮನೂರು, ಹುಣಸೆಕಟ್ಟೆ, ಮುಡೇನಹಳ್ಳಿ, ಕೆಂಚಮ್ಮನಹಳ್ಳಿ, ಹೊಸಹಳ್ಳಿ, ಕಾಟಿಹಳ್ಳಿ.

ಮಂಡಲೂರು ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಹನುಮನಹಳ್ಳಿ, ಕೊಗ್ಗÀನೂರು, ಹನುಮನಹಳ್ಳಿ, ಆನಗೋಡು, ಹೆಬ್ಬಾಳು, ನೀರ್ಥಡಿ, ಶಿವಪುರ, ಹಾಲುವರ್ತಿ, ಗಂಗನಕಟ್ಟೆ, ನೇರ್ಲಿಗಿ, ಚಿನ್ನಸಮುದ್ರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಮತ್ತು ಆರಾಧ್ಯಾ ಕೈಗಾರಿಕೆ, ಅತ್ತಿಗೆರೆ, ಕುರ್ಕಿ, ಬಾಡ, ಕಬ್ಬೂರು, ಹೀರೆತೊಗಲೇರಿ, ಗೊಪಾನಾಳು, ಕಂದ್ಗಲ್, ರಾಮಗೊಂಡನಹಳ್ಳಿ, ಕಾಶೀಪುರ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳು ಆರ್.ಎಂ.ಸಿ. ಲಿಂಕ್ ರಸ್ತೆ, ಬಿ.ಟಿ. ಲೇಔಟ್, ಗುಜರಿ ಲೈನ್, ಬಂಬೂ ಬಜಾರ್, ಮಟ್ಟಿಕಲ್, ಬಿಡಿಓ ಕಛೇರಿ, ಇಮಾಮ್ ನಗರ, ಅಮರಪ್ಪನ ತೋಟ.

ಆನೆಕೊಂಡ, ಎಲ್.ಬಿ.ಎಸ್. ನಗರ.ಟಿ.ಸಿ. ಲೇಔಟ್, ಬಿಟಿ ಲೇಔಟ್, ಕೆ.ಆರ್. ರಸ್ತೆ, ಇಮಾಮ್ ನಗರ, ಆನೆಕೊಂಡ, ಐನಳ್ಳಿ ಕಾಂಪೌಂಡ್, ಎಪಿಎಂಸಿ, ಭಾರತ್ ಕಾಲೋನಿ, ಶೇಖ್ರಪ್ಪ ನಗರ ಹೆಚ್.ಕೆ.ಆರ್. ನಗರ, ಕಬ್ಬೂರು ಬಸಾಪುರ ನಗರ, ಆಣ್ಣಾ ನಗರ, ಬಸಾಪುರ ರಸ್ತೆ, ಗೋಶಾಲೆ, ಪಿ.ಬಿ. ರಸ್ತೆ, ರವಿ ಮಿಲ್ ಹಾಗೂ ಆವರಗೆರೆ, ಹೊನ್ನೂರು, ಐಗೂರು, ಮಲ್ಲಶೆಟ್ಟಿಹಳ್ಳಿ, ತೊಳಹುಣಸೆ, ದಾವಣಗೆರೆ ವಿಶ್ವವಿದ್ಯಾಲಯ ಗ್ರಾಮಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್

Published

on

ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.

ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.

ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.

ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಿಂಚಣಿ ದಾರರು ಸಕಾಲದಲ್ಲಿ ಜೀವಂತ ಪ್ರಮಾಣ ಪತ್ರ ಸಲ್ಲಿಸಿ

Published

on

ಸುದ್ದಿದಿನ,ದಾವಣಗೆರೆ: ಪಿಂಚಣಿ ಪಡೆಯಲು ಜೀವಂತ ಸದಸ್ಯರ ಪ್ರಮಾಣ ಪತ್ರಗಳು ಕಡ್ಡಾಯವಾಗಿರುವುದರಿಂದ ಸಕಾಲಕ್ಕೆ ಸೂಕ್ತ ದಾಖಲಾತಿಗಳನ್ನು ನೀಡುವ ಮೂಲಕ ಸಹಕರಿಸಿ ಎಂದು ಉಪ ಮಹಾಲೇಖಪಾಲರಾದ ಸಚ್ಚಿನ್ ಕೃಷ್ಣ ಕೌಶಿಕ್ ತಿಳಿಸಿದರು.

ಶುಕ್ರವಾರ ಜೂನ್(19) ‌ಬೆಂಗಳೂರಿನ ಮಹಾಲೇಖಪಾಲರು ದಾವಣಗೆರೆ ಜಿಲ್ಲಾ ಖಜಾನೆ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಭವಿಷ್ಯ ನಿಧಿ ಹಾಗೂ ಲೆಕ್ಕಪತ್ರ ಸಮಸ್ಯೆಗಳ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಿಂಚಣಿದಾರರು ತಮ್ಮ ಎಲ್ಲಾ ಬ್ಯಾಂಕ್‌ಗೆ 2ನೇ ವಾರ ಭೇಟಿ ನೀಡಿದರೆ ನಿಮ್ಮ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲಾಗುವುದು. ಜೀವಂತ ಸದಸ್ಯರ ದೃಢೀಕರಣ ಪತ್ರವನ್ನು ಪಡೆಯಲು ಸೈಬರ್‌ಕೆಫೆ ಇನ್ನಿತರ ಕೇಂದ್ರಗಳಿಗೆ ಅಲೆಯುವ ಅವಶ್ಯಕತೆ ಇಲ್ಲ. ನೀವು ಮನೆಯಲ್ಲಿ ಮೊಬೈಲ್‌ನಲ್ಲಿ ಅಫ್ ಲೋಡ್ ಮಾಡಿ ಪಡೆಯಬಹುದು. ಮತ್ತು ನಿಮ್ಮ ಸಮಸ್ಯೆಗಳನ್ನು ತಿಳಿಸುವಾಗ ಅರ್ಜಿಯಲ್ಲಿ ಇ-ಮೇಲ್ ವಿಳಾಸ, ಮೊಬೈಲ್ ನಂಬರ್‌ನ್ನು ಕಡ್ಡಾಯವಾಗಿ ನಮೂದಿಸಿದರೆ, ಇದರಿಂದ ನಿಮಗೆ ಮಾಹಿತಿ ನೀಡಲು ಅನುಕೂಲವಾಗುತ್ತದೆ ಎಂದರು.

ಪಿಂಚಣಿ ಅದಾಲತ್ ಎನ್ನುವುದು ನಿವೃತ್ತ ನೌಕರರು ಮತ್ತು ಪಿಂಚಣಿದಾರರ ದೀರ್ಘಕಾಲದ ಬಾಕಿ ಉಳಿದಿರುವ ಸಮಸ್ಯೆಗಳನ್ನು ಅಥವಾ ಕುಂದುಕೊರತೆಗಳನ್ನು ಪರಿಹರಿಸಲು ವಿಶೇಷ ವೇದಿಕೆಯಾಗಿದೆ. ಸ್ಥಳದಲ್ಲೇ ಅರ್ಜಿಗಳನ್ನು ಪರಿಶೀಲಿಸಿ, ಬ್ಯಾಂಕ್‌ ಅಧಿಕಾರಿಗಳ ಸಮ್ಮುಖದಲ್ಲಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಮಹಾಲೇಖಪಾಲರ ಕಚೇರಿಯ ಹಿರಿಯ ಲೆಕ್ಕಪರಿಶೋಧನಾ ಅಧಿಕಾರಿ ನಾಗಸೇನಾ.ಟಿ.ವಿ, ಮತ್ತು ಪದ್ಮವತಿ, ಜಿಲ್ಲಾ ಖಜಾನೆಯ ಉಪನಿರ್ದೇಶಕರಾದ ರಮೇಶ್ ಅರೆಮಲ್ಲಾಪುರ, ಸಹಾಯಕ ಲೆಕ್ಕಪರಿಶೋಧನಾ ಆಧಿಕಾರಿ ಚಂದನ್ ಮತ್ತು ಜಾಬ್‌ಲೀನೋ, ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending