ಸಿನಿ ಸುದ್ದಿ
ದುನಿಯಾ ವಿಜಿ ‘ಖೈದಿ ನಂಬರ್ 9035’..!: ಈ ದಿನದ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ಓದಿ

ಸುದ್ದಿದಿನ, ಬೆಂಗಳೂರು : ಪರಪ್ಪನ ಆಗ್ರಹಾರ ಜೈಲಿನಲ್ಲಿ ದುನಿಯಾ ವಿಜಿಗೆ ನಂಬರ್ ಖೈದಿ ನಂಬರ್ ಕೊಡಲಾಗಿದೆ. ಜೈಲು ಅಧಿಕಾರಿಗಳಿಂದ ವಿಜಿಗೆ ವಿಚಾರಣಾಧೀನ ಖೈದಿ ಸಂಖ್ಯೆ ಮಂಜೂರು ಮಾಡಿದ್ದಾರೆ. ದುನಿಯಾ ವಿಜಿಗೆ 9035, ಪ್ರಸಾದ್ 9036, ಮಣಿ 9037, ಪ್ರಸಾದ್ 9038. ನಾಲ್ವರು ಆರೋಪಿಗಳಿಗೆ UTP (ಯು.ಟಿ.ಪಿ : ಅಂಡರ್ ಟ್ರಯಲ್ ಪ್ರಿಸನರ್) ಸಂಖ್ಯೆ ನೀಡಿದ ಜೈಲು ಆಧಿಕಾರಿಗಳು.
ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ದುನಿಯಾ ವಿಜಯ್ ಕೋರ್ಟ್ ಮೊರೆ ಹೋಗುದ್ದಾರೆ. 8ನೇ ACMM ಕೋರ್ಟ್ಗೆ ಜಾಮೀನು ಕೋರಿ ಅರ್ಜಿಸಲ್ಲಿಸಿದ್ದಾರೆ. A1 ಪ್ರಸಾದ್, A2 ದುನಿಯಾ ವಿಜಯ್, A3 ಮಣಿ ಇಂದ ಅರ್ಜಿ ಸಲ್ಲಿಸಲಾಗಿದ್ದು, ಮೂವರು ಆರೋಪಿಗಳ ಪರ ವಕೀಲ ಶಿವಕುಮಾರ್ ವಕಾಲತ್ತು ನಡೆಸಲಿದ್ದಾರೆ. ನ್ಯಾ.ಮಹೇಶ್ ಬಾಬು ರಿಂದ ಜಾಮೀನು ಅರ್ಜಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಗೆ ಬಂದ 3 ಆರೋಪಿಗಳಿಗೆ ಜಾಮೀನು ಅರ್ಜಿ
ನೀಡದಂತೆ ವಾದ ಮಂಡಿಸಲಾಯ್ತು. ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಸಲಿರುವ ಸರ್ಕಾರಿ ಅಭಿಯೋಜಕರು.
ದುನಿಯಾ ವಿಜಯ್ ಪತ್ನಿಯರ ಬಡಿದಾಟ ಪ್ರಕರಣ
ಇಬ್ಬರು ಪತ್ನಿಯರ ಹೇಳಿಕೆ ದಾಖಲಿಸಿರುವ ಪೊಲೀಸರು, ಕೀರ್ತಿ ಮನೆಯಲ್ಲಿ ನೆನ್ನೆ ನಡೆದಿದ್ದ ಪತ್ನಿಯರಿಬ್ಬರ ಬಡಿದಾಟ, ಪರಸ್ಪರ ತಳ್ಳಾಡಿ, ಬಡಿದಾಡಿಕೊಂಡು,ಕೈ ಗಳಿಂದ ಹಲ್ಲೆ ಮಾಡಿಕೊಂಡು ಜಗಳ. ದುನಿಯಾ ವಿಜಯ್ ತಂದೆ-ತಾಯಿ ಇಬ್ಬರಿಂದಲೂ ಹೇಳಿಕೆ ದಾಖಲಿಸಿಕೊಂಡಿರುವ ಪೊಲೀಸರು. ಕೀರ್ತಿ ಮತ್ತು ನಾಗರತ್ನ ಗಲಾಟೆಗೆ ಕಾರಣವೇನು ಎಂಬ ಅಂಶಗಳ ಕುರಿತ ಪೊಲೀಸರಿಗೆ ವಿವರಣೆ ಪಡೆಯಲಾಗಿದೆ. ಘಟನೆ ಸಂಪೂರ್ಣ ಚಿತ್ರಣ ಪೊಲೀಸರಿಗೆ ವಿವರಿಸಿರುವ ವಿಜಯ್ ಪೋಷಕರು. ವಿಜಯ್ ಮಕ್ಕಳ ಹೇಳಿಕೆ ದಾಖಲಿಸಲು ಪೊಲೀಸರ ನಿರ್ಧಾರ ಮಾಡಿದ್ದಾರೆ.
ಘಟನೆ ನಡೆದ ವೇಳೆ ಮನೆಯಲ್ಲಿ ಪ್ರತ್ಯಕ್ಷ ದರ್ಶಿಗಳಾಗಿದ್ದ ಮೂವರು ಮಕ್ಕಳ ಹೇಳಿಕೆಯನ್ನು ಸಂಜೆ ದಾಖಲಿಸಲು ನಿರ್ಧರಿಸಿರುವ ಗಿರಿನಗರ ಪೊಲೀಸರು.
ಪರಂ ಮೊರೆ ಹೋದ ಪಾನಿಪೂರಿಕಿಟ್ಟಿ
ಗೃಹಸಚಿವ ಜಿ. ಪರಮೇಶ್ವರ್ ಮೊರೆ ಹೋದ ಪಾನಿಪುರಿ ಕಿಟ್ಟಿಯು ದುನಿಯಾ ವಿಜಿ ಪ್ರಕರಣವನ್ನು ಸರ್ಕಾರಿ ವಿಶೇಷ ಅಭಿಯೋಜ ಕಾರಗಿ ಶ್ಯಾಂಮ್ ಸುಂದರ್ ಅವರನ್ನು ನೇಮಿಸುವಂತೆ ಮನವಿ ಮಾಡಿದ್ದಾರೆ. ಶ್ಯಾಂಮ್ ಸುಂದರ್ ವಿದ್ವತ್ ಪ್ರಕರಣವನ್ನು ತುಂಬಾ ಚೆನ್ನಾಗಿ ಹ್ಯಾಂಡಲ್ ಮಾಡಿದ್ರು,ಆರೋಪಿಗಳಿಗೆ ತಕ್ಕ ಶಿಕ್ಷೆ ಆಗುವಂತೆ ನೋಡಿಕೊಂಡಿದ್ರು, ಹೀಗಾಗಿ ಅವರನ್ನೆ ನೇಮಕ ಮಾಡಬೇಕೆಂದು ಗೃಹಸಚಿವರ ಬಳಿ ಮನವಿ ಮಾಡಿದ್ದಾರೆ ಕಿಟ್ಟಿ.
ವಿಜಿ ಪತ್ನಿ ನಾಗರತ್ನ ಹೀಗಂದ್ರು
ಪಾನಿಪುರಿ ಕಿಟ್ಟಿ ಒಳ್ಳೆ ಮನುಷ್ಯ. ವಿಜಯ್ ಜೊತೆ ತುಂಬಾ ಚೆನ್ನಾಗೆ ಇದ್ರು. ಪಾನಿಪುರಿ ಕಿಟ್ಟಿ ಅವರ ಮನೆಯಿಂದ ಊಟ ತಂದು ವಿಜಯ್ ಗೆ ಕೊಟ್ತೀದ್ರು. ನನ್ನ ಗಂಡನ ಜೊತೆ ತುಂಬಾ ಚೆನ್ನಾಗಿದ್ರು. ನಮ್ಮ ಮನೆಗೆ ಬಂದು ಹೋಗುತ್ತಿದ್ದರು. ಯಾಕೆ ಗಲಾಟೆ ಆಯಿತು ಅನ್ನೋದು ಗೊತ್ತಿಲ್ಲ ವಿಜಿ ಪತ್ನಿ ನಾಗರತ್ನ ಹೇಳಿಕೆ ನೀಡಿದ್ದಾರೆ. ದುನಿಯಾ ವಿಜಯ್ ತಂದೆ ಅವರೇ ನನ್ನ ಬಗ್ಗೆ ತಪ್ಪು ಮಾಹಿತಿ ನೀಡ್ತೀದ್ದಾರೆ. ನಾಗರತ್ನಗೆ ಆಸ್ತಿ ಕೊಟ್ಟಿದೇವೆ ಅಂತಾ ಹೇಳಿಕೊಂಡು ಓಡಾಡ್ತೀದ್ದಾರೆ. ಅವರೇ ಹಾದಿ ತಪ್ಪಿಸುತ್ತಿದ್ದಾರೆ ಎಂದಿದ್ದಾರೆ. ವಿಜಿ ಎರಡನೇ ಹೆಂಡ್ತಿ ಮೇಲೆ ದೂರು ನೀಡಿದ್ದ ನಾಗರತ್ನ . ನಿನ್ನೆ ದುನಿಯಾ ವಿಜಯ್ ಗಲಾಟೆ ವಿಚಾರ ಟಿವಿಯಲ್ಲಿ ನೋಡ್ದೆ. ಮಗಾ ಸಾಮ್ರಾಟ್ ಕೂಡಾ ವಿಜಯ್ ಜೊತೆ ಇದ್ರು ಅಂತಾ ನೋಡ್ದೆ. ಅದ್ಕೆ ಗಾಬರಿಯಾಗಿ ಕೀರ್ತಿ ಗೌಡ ಮನೆಗೆ ಹೋದೆ.ಯಾಕೆ ನನ್ನ ಮಗನನ್ನ ಅಷ್ಟೋತ್ತಿಗೆ ಕಳುಹಿಸಿದ್ರೆ ಅಂತಾ ಕೇಳ್ದೆ. ಆಗ ನಮ್ಮ ಮಾವಾ,ಅತ್ತೆ ಕೀರ್ತಿ ಗೌಡಗೆ ಸರ್ಫೋರ್ಟ್ ಮಾಡಿದ್ರು. ನಂತ್ರ ಮಾತಿಗೆ ಮಾತು ಬೆಳೆದು ಗಲಾಟೆ ಆಯಿತು, ಹೊಡೆದಾಟ ಆಯಿತು. ನಂತ್ರ ಪೊಲೀಸ್ ಠಾಣೆಗೆ ಕಂಪ್ಲೇಟ್ ಕೊಟ್ಟೆ.
ದುನಿಯಾ ವಿಜಯ್ ಗೆ ಬುದ್ಧಿ ಹೇಳೋರು ಯಾರು ಇಲ್ಲ
ಕಳೆದ ಎರಡು ವರ್ಷದಿಂದ ವಿಜಿ ಜೈಲು,ಪೊಲೀಸ್ ಠಾಣೆಗೆ ಹೋಗ್ತಾನೆ ಇದ್ದಾರೆ. ನಾನ್ ಬುದ್ಧಿ ಹೇಳೋಕೆ ಹೋದೆ ನನ್ನನ್ನ ದೂರ ಮಾಡಿದ್ರು. ಈಗ ಅವರು ದುಡ್ಡಿಗಾಗಿ ಬಂದವಳ ಜೊತೆ ಇದ್ದಾರೆ. ಅವ್ಳು ಸ್ವಲ್ಪ ದಿನ ಇರ್ತಾಳೆ ಆಮೇಲೆ ಹೋಗ್ತಾಳೆ. ಅವ್ರೆಲ್ಲ ದುಡ್ಡಿಗೆ ಬರೋರು. ಈಗ ಇವ್ರು ಜೈಲಿಗೆ ಹೋಗಿದ್ದಾರೆ, ನನ್ನ ಮಕ್ಕಳ ಗತಿ ಏನು. ಕೀರ್ತಿ ಗೌಡದು ದಾರಿದ್ರ ಕಾಲು.ಅವಳು ಕಾಲು ಇಟ್ಟಿದೆ ತಡ ವಿಜಯ್ ಪೊಲೀಸ್ ಠಾಣೆ ಮೆಟ್ಟಿಲೇರುತ್ತಿದ್ದಾರೆ. ನಾನ್ ಇದಿದ್ರೆ ಸುಮ್ಮನೆ ಇರ್ತಿದ್ನಾ..? ಈಗ ವಿಜಯ್ ಜೈಲಿಗೆ ಹೋಗೋಕ್ಕೆ ಕೀರ್ತಿ ಗೌಡನೇ ಕಾರಣ.
ಪಾನಿಪುರಿ ಕಿಟ್ಟಿ ಹೇಳಿಕೆ
ಮಾರುತಿ ಗೌಡ ಆರೋಗ್ಯ ಇನ್ನು ಚೇತರಿಕೆಯಾಗಿಲ್ಲ. ಎರಡಗಡೆ ಕಣ್ಣು ಸರಿಯಾಗಿ ಕಾಣುತ್ತಿಲ್ಲ ಎನ್ನುತ್ತಿದ್ದಾನೆ ಮಾರುತಿ ಗೌಡ. ರಾತ್ರಿಯೆಲ್ಲಾ ಕತ್ತು ತುಂಬಾ ನೋವು ಎನ್ನುತ್ತಿದ್ದ. ಏನು ತಿಂದರು ಮಾರುತಿ ಗೌಡ ವಾಂತಿ ಮಾಡಿಕೊಳ್ಳುತ್ತಿದ್ದಾನೆ. ಬಾಯಿಗೆ 14 ಹೊಲಿಗೆ ಹಾಕಿದ್ರು ಊತ ಕಡಿಮೆಯಾಗಿಲ್ಲ. ಮಾರುತಿ ಬಾಯಿ ಹಾಗೂ ತುಟಿ ಮತ್ತಷ್ಟು ಊತುಕೊಂಡಂತಿದೆ. ಸಿಟಿ ಸ್ಕ್ಯಾನ್ ರಿಪೋರ್ಟ್ ಗಾಗಿ ಕಾಯುತ್ತಿದ್ದೇವೆ. 9 ಗಂಟೆಗೆ ಸಿಟಿ ಸ್ಕ್ಯಾನ್ ರಿಪೋರ್ಟ್ ಬಂದಿರಬೇಕು.ನಾವು ಡಿಸಿಎಂ ಭೇಟಿ ಗೆ ಬಂದಿದ್ದೇವೆ. ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಮಾರುತಿಗೌಡ ಎಂದು ಪಾನಿಪುರಿ ಕಿಟ್ಟಿ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ7 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ3 days ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ2 days ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ
-
ದಿನದ ಸುದ್ದಿ5 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು