ಸಿನಿ ಸುದ್ದಿ
ವಿಜಿಗೆ ಪರಪ್ಪನ ಅಗ್ರಹಾರ ಖಾಯಂ..? : ದುನಿಯಾ ವಿಜಿ ಬಂಧನದ ಕಂಪ್ಲೀಟ್ ಡೀಟೆಲ್ಸ್

ಸುದ್ದಿದಿನ, ಬೆಂಗಳೂರು : ದುನಿಯಾ ವಿಜಿ ಹಾವಳಿ ಅತಿಯಾದ ಹಿನ್ನಲೆ ವಿಜಯ್ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರ ಸೂಚನೆ ನೀಡಿದ್ದಾರೆ. ಡಿಸಿಪಿ ಶರಣ್ಪಗೆ ಸೂಚನೆ ನೀಡಿದ ಸುನೀಲ್ ಕುಮಾರ್ ದಕ್ಷಿಣ ವಿಭಾಗದಲ್ಲಿ ದುನಿಯಾ ವಿಜಯ್ ಮನೆಯಿದೆ ಹಾಗಾಗಿ ದಕ್ಷಿಣ ವಿಭಾಗದ ಪೊಲೀಸ್ರು ರೌಡಿಶೀಟ್ ಒಪನ್ ಮಾಡಬಹುದುಸಾರ್ವಜನಿಕ ವಲಯದಲ್ಲಿ ರೌಡಿಶೀಟ್ ಹಾಕುವ ಬಗ್ಗೆ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆ ಡಿಸಿಪಿಗೆ ಪ್ರಕರಣಗಳ ಮಾಹಿತಿ ಕೇಳಿದ್ದಾರೆ ಕಮೀಷನರ್.
ನಿರ್ಮಾಪಕ ಜಯಣ್ಣಗೆ ಬೆದರಿಕೆ
ದುನಿಯಾ ವಿಜಿ ಪ್ರಕರಣಕ್ಕೆ ಸಿಸಿಬಿ ಎಂಟ್ರಿ
ವೈಯಾಲಿ ಕಾವಲ್ ಠಾಣೆಗೆ ಸಿಸಿಬಿ ಇನ್ಸಪೆಕ್ಟರ್ ಪ್ರಕಾಶ್ ಆಗಮಿಸಿದರು. ಕೆಲವರಿಗೆ ಹಣದ ವಿಚಾರವಾಗಿ ಬೆದರಿಕೆ ಹಾಗೂ ಕಿಡ್ನಾಪ್ ಮಾಡುವುದಾಗಿ ಹೆದರಿಸಿರುವ ಆರೋಪ, ಹಾಗೂ ಆ ಪ್ರಕರಣಗಳಲ್ಲಿ ವಿಜಯ್ ವಿಚಾರಣೆ ಮಾಡಲಿರುವ ಸಿಸಿಬಿ. 2015ರಲ್ಲಿ ನಿರ್ಮಾಪಕ ಜಯಣ್ಣಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ವಿಜಯ್ ಸಿಸಿಬಿ ತನಿಖೆ ಎದುರಿಸಿದ್ದರು.
ನ್ಯಾಯಾಧೀಶರ ಹತ್ತಿರ ವಿಜಿಯನ್ನು ಕರೆದೊಯ್ಯುತ್ತಿರುವ ಪೋಲಿಸ್
ಇನ್ನು ಕೆಲವೇ ನಿಮಿಷಗಳಲ್ಲಿ ನ್ಯಾಯಾಧೀಶರ ಮುಂದೆ ವಿಜಿ ಹಾಗೂ ಪಟಾಲಂ ಎದುರಾಗಲಿದೆ. ಎನ್ ಜಿ ವಿ ಕೋರಮಂಗಲದ ಬಳಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಿದ್ದಾರೆ ಪೊಲೀಸರು. ವೈಯ್ಯಾಲಿ ಕಾವಲ್ ನಲ್ಲಿ ಸದ್ಯ ಆರೋಪಿಗಳ ವಿಚಾರಣೆ ಮಾಡುತ್ತಿರುವ ಪೊಲೀಸರು. ಇತ್ತ ವಿಜಯ ಕಡೆ ವಕೀಲರಿಂದ ಮಧ್ಯಂತರ ಜಾಮೀನು ಪಡೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ಪ್ರಕರಣ ಗಂಬೀರವಾಗಿರುವುದರಿಂದ ಮಧ್ಯಂತರ ಜಾಮೀನು ಸಿಗುವುದಿಲ್ಲ. ಹಾಗಾಗಿ ವಿಜಯ್ ಅಂಡ್ ಪಟಾಲಂಗೆ ಇವತ್ತು ಪರಪ್ಪನ ಆಗ್ರಹಾರ ವಾಸ್ತವ್ಯ ಖಚಿತ.
ಕನ್ನಡ ಸಿನಿರಂಗದಿಂದ ವಿಜಿ ನಿಷೇಧ..?
ಖತಂ ಆಗಲಿದೆಯಾ ದುನಿಯಾ ಸಿನಿಮಾ ಭವಿಷ್ಯ. ಮಾಸ್ತಿಗುಡಿ ದುರಂತದಲ್ಲಿ ವಿಜಯ್ ರನ್ನ ಸಿನಿಮಾ ರಂಗದಿಂದ ನಿಷೇಧ ಹೇರಲಾಗಿತ್ತು
ಈಗ ಮತ್ತೆ ಜೈಲು ಪಾಲಾಗಲಿರುವ ದುನಿಯಾ ವಿಜಯ್ , ಈ ಹಿನ್ನಲೆ ವಿಜಯ್ ಭವಿಷ್ಯ ಡೋಲಾಯಮಾನ ಕ್ರಿಮಿನಲ್ ಬ್ಯಾಗ್ ಗ್ರೌಂಡ್ ಜಾಸ್ತಿಯಾಗುತ್ತಿರುವ ಹಿನ್ನಲೆ
ಚಿತ್ರರಂಗದಿಂದ ನಿಷೇಧ ಹೇರಲು ಚಿಂತನೆ..?
ಒಂದು ವೇಳೆ ರೌಡಿಶೀಟ್ ಒಪನ್ ಆದ್ರೆ ಚಿತ್ರರಂಗಕ್ಕೆ ಕಳಂಕ, ಈ ಹಿನ್ನಲೆ ದುನಿಯಾ ವಿಜಯ್ ನಿಷೇಧಕ್ಕೆ ಕನ್ಬಡ ಚಿತ್ರರಂಗದ ಚಿಂತನೆ..?
ಉಪಮುಖ್ಯಮಂತ್ರಿ ಪರಂ ಹೇಳಿಕೆ
ನಟ ದುನಿಯಾ ವಿಜಯ್ ಪ್ರಕರಣ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವ ಅಧಿಕಾರಿಗೂ ನಾವು ಈ ತರಹದ ವಿಷಯದಲ್ಲಿ ಸೂಚನೆ ಬಿಡೋದಿಲ್ಲ.
ಅಲ್ಲಿನ ಗ್ರೌಂಡ್ ರಿಪೋರ್ಟ್ ನೋಡಿ ಕ್ರಮ ಕೈಗೊಳ್ಳುತ್ತಾರೆ. ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ವಿಜಿಯಿಂದ ಪ್ರತಿ ದೂರು
ನಟ ದುನಿಯಾ ವಿಜಯ್ ನಿಂದ ಪತ್ರಿದೂರು
ಹೈ ಗ್ರೌಂಡ್ ಠಾಣೆ ಮುಂದೆ ನನ್ನ ಹಾಗೂ ಮಗನ ಮೇಲೆ ಹಲ್ಲೆ ಠಾಣೆಗೆ ನಡೆದುಕೊಂಡು ಬರುತ್ತಿರುವಾಗ ಹಲ್ಲೆ ಅವ್ಯಾಚ ಶಬ್ದಗಳಿಂದ ನಿಂದನೆ ನನ್ನ ಕಾರ್ ನ್ನು ಸಹ ಡ್ಯಾಮೇಜ್ ಮಾಡಿದ್ದಾರೆ ಎಂದು ರಾತ್ರಿನೇ ದೂರು ನೀಡಿರುವ ವಿಜಿ IPC 506, 323, ಜೀವ ಬೆದರಿಕೆ , ಹಲ್ಲೆ ಅಡಿಯಲ್ಲಿ ಪ್ರಕರಣ ಹೈ ಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಜೀಮ್ ಟೈನರ್ ಪಾನಿ ಪುರಿ ಕಿಟ್ಟಿ ಹಾಗೂ ಇತರರ ವಿರುದ್ದ ಹೈ ಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಿ ಮಾದಕವಸ್ತು ಸೇವನೆ
ಮಾದಕ ವಸ್ತು ಸೇವನೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವ ಪೊಲೀಸರು. ಘಟನೆ ನಡೆದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ
ಈ ಹಿನ್ನಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿರುವ ವೈದ್ಯರು, ವೈದ್ಯಕೀಯ ವರದಿ ಬಂದರೆ ಎನ್ ಡಿ ಪಿ ಎಸ್ ಆಕ್ಟ್ ಕೂಡ ಸೇರ್ಪಡೆಯಾಗುತ್ತೆ. ಡ್ರಗ್ಸ್ ಸೇವನೇ ಮಾಡಿ ಈ ಕೃತ್ಯ ಎಸಗಿರುವ ವಿಜಯ್ ಎಂಬ ಅನುಮಾನದ ಹಿನ್ನಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿ್ದೆ.
ಎನ್ ಡಿ ಪಿ ಎಸ್ ಆಕ್ಟ್ ಮಾದಕ ವಸ್ತುಗಳ ಸೇವನೆ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
ರೌಡಿ ಶೀಟರ್ ವಿಜಯ್
ಶಾಶ್ವತವಾಗಿ ರೌಡಿಗಳ ಸಾಲಿಗೆ ಸೇರ್ತಾರಾ ದುನಿಯಾ ವಿಜಿ? ದುನಿಯಾ ವಿಜಿ ಮೇಲೆ ರೌಡಿಶೀಟರ್ ಓಫನ್ ಮಾಡೋಕೆ ಚಿಂತನೆ ನಡೆಸಿರೋ ನಗರ ಪೊಲೀಸ್ ಇಲಾಖೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ತೆರೆಯುವ ಸಾಧ್ಯತೆ ಇದೆ. ದುನಿಯಾ ವಿಜಯ ಗಲಾಟೆಗಳಿಂದ ಬೇಸತ್ತ ನಗರ ಪೊಲೀಸ್ ಇಲಾಖೆಯು ಪದೇ-ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ದುನಿಯಾ ವಿಜಿ ಹೊಡೆದಾಟ, ಗಲಾಟೆ,ಧಮಕಿ,ಪೊಲೀಸರ ಕರ್ತವ್ಯಕ್ಕೆ ಅಡ್ಡಿ ನಿವೃತ್ತ ಯೋಧರ ಮೇಲೆ ಹಲ್ಲೆ ಹೀಗೆ ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದುನಿಯಾ ವಿಜಯ್ ಗೂಂಡಾ ಪ್ರವೃತ್ತಿಯಿಂದ ಬೇಸತ್ತ ಪೊಲೀಸರು
ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ರೌಡಿಶೀಟರ್ ತೆರೆಯಲು ಪೊಲೀಸ ಇಲಾಖೆ ಸಿದ್ಧತೆ ಮಾಡಿದೆ.
ವಿಜಿ ಮೇಲಿರುವ ಕೇಸ್ ಗಳು
ಈ ಮೊದಲು ದುನಿಯಾ ವಿಜಿ ಮೇಲೆ ದಾಖಲಾಗಿದ್ದ ಕೇಸ್ಗಳು. ಮೇ 31 2018. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದ ಮೇರೆಗೆ ಎಫ್ಐಆರ್.
ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲು. IPC 353 ಪೊಲೀಸ್ ಆಧಿಕಾರಿಯ ಕರ್ತವ್ಯಕ್ಕೆ ಆಡ್ಡಿ ಪಡಿಸಿದ್ದು. 255 ಕರ್ತವ್ಯ ನಿರತ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದು. ಜನವರಿ 18 2013 ಪತ್ನಿ ನಾಗರತ್ನಗೆ ಜೀವ ಬೆದರಿಕೆಯೊಡ್ಡಿದ ವಿಜಿ.
ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು.
ಹಾಗೂ ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಮುಂದಾಗಿದ್ದ. ಎರಡು ಪ್ರಕರಣ ದಾಖಲಿಸಿದ್ದ ಸಿಕೆ ಅಚ್ಚುಕಟ್ಟು ಪೊಲೀಸರು, ಬಳಿಕ ಜನವರಿ 17 2013 ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಪತ್ನಿ ನಾಗರತ್ನ.
ಆರೋಪ ಸಾಬೀತಾದರೆ ವಿಜಿ ಈ ಶಿಕ್ಷೆ
363 ಕಿಡ್ನ್ಯಾಪ್ ಸಾಬೀತಾದರೆ 7 ವರ್ಷ ಶಿಕ್ಷೆ ಜೊತೆಗೆ ದಂಡ. ಜಾಮೀನು ರಹಿತ ಅಪರಾಧ
323, ಸಾಮೂಹಿಕ ಹಲ್ಲೆಗೆ ಶಿಕ್ಷೆ ಗರಿಷ್ಟ ಒಂದು ವರ್ಷ ಶಿಕ್ಷೆ ಒಂದು ಸಾವಿರ ದಂಡ . 506 ,ಕೊಲೆ ಬೆದರಿಕೆ ಗರಿಷ್ಠ ಏಳು ವರ್ಷ ಶಿಕ್ಷೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
ಮತ್ತೆ ತಾಯಿಯಾಗಬೇಕು : ನಟಿ ಸಮಂತಾ

ಸುದ್ದಿದಿನಡೆಸ್ಕ್:ಇತ್ತೀಚೆಗೆ ನಟಿ ಸಮಂತಾ ಅವರ ಕಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಆ ಹೇಳಿಕೆಗಳ ಮೇಲೆ ನಾನಾ ರೀತಿಯ ಅನುಮಾನಗಳೂ ವ್ಯಕ್ತವಾಗಿವೆ.
ಟಾಲಿವುಡ್ ಸ್ಟಾರ್ ಹೀರೋಯಿನ್ ಸಮಂತಾ ಬಗ್ಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಸದ್ಯ ಸಮಂತಾ ಸತತ ಚಿತ್ರಗಳಲ್ಲಿ ಬ್ಯುಸಿಯಾಗಿರುವುದು ಗೊತ್ತೇ ಇದೆ. ಇತ್ತೀಚಿಗೆ ಸಮಂತಾ ಅವರ ವೆಬ್ ಸಿರೀಸ್ ವಿಚಾರಕ್ಕೆ ಸುದ್ದಿಯಾಗಿದ್ದರು. ನಟಿಯ ಇತ್ತೀಚಿನ ವೆಬ್ ಸಿರೀಸ್ ಸಿಟಾಡೆಲ್ ಸಖತ್ ಸುದ್ದಿಯಾಗಿದೆ. ಸದ್ಯ ಈ ವೆಬ್ ಸೀರೀಸ್ ಒಟಿಟಿಯಲ್ಲಿ ಸ್ಟ್ರೀಮ್ ಆಗುತ್ತಿದೆ ಎಂದು ತಿಳಿದುಬಂದಿದೆ. ಈ ವೆಬ್ ಸರಣಿಯ ಪ್ರಚಾರದ ವೇಳೆ ಮಾಡಿದ ಕಾಮೆಂಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇದರ ಭಾಗವಾಗಿ ಸಮಂತಾ ರಾಜ್ ಮತ್ತು ಡಿಕೆ ಸಂದರ್ಶನವೊಂದರಲ್ಲಿ ಹೇಳಿದ್ದು ದಿ ಫ್ಯಾಮಿಲಿ ಮ್ಯಾನ್ 2 ಚಿತ್ರೀಕರಣದ ವೇಳೆ ನಾನು ಹಲವು ಭಾವನೆಗಳಿಗೆ ಒಳಗಾಗಿದ್ದೆ ಎಂದು ಸಮಂತಾ ಹೇಳಿದ್ದಾರೆ. ಅಲ್ಲದೇ ಅವರ ನಿರ್ದೇಶನದಲ್ಲಿ ನಟಿಸುವುದು ಕಷ್ಟ ಎಂದಿದ್ದಾರೆ. ನಂತರ ಅದೇ ಸಂದರ್ಶನದಲ್ಲಿ ನಟಿ ಬೇರೆ ವಿಚಾರವನ್ನೂ ಹೇಳಿದ್ದಾರೆ.
ಹನಿ ಬನ್ನಿ ವೆಬ್ ಸರಣಿಯಲ್ಲಿ ತಾಯಿ ಪಾತ್ರದ ಬಗ್ಗೆ ಮಾತನಾಡುತ್ತಾ, ಅವರು ಸಂವೇದನಾಶೀಲ ಕಾಮೆಂಟ್ಗಳನ್ನು ಮಾಡಿದ್ದಾರೆ. ನನಗೆ ತಾಯಿಯಾಗುವ ಕನಸು ಇದೆ. ನಾನು ತಾಯಿಯಾಗಲು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.
ಇದಕ್ಕಾಗಿ ತಡವಾಗಿದೆ ಎಂದು ಅವರು ಭಾವಿಸುವುದಿಲ್ಲ. ನಾನು ಜೀವನದಲ್ಲಿ ತುಂಬಾ ಖುಷಿಯಾಗಿದ್ದೇನೆ ಎಂದು ಸಮಂತಾ ಹೇಳಿದ ಮಾತುಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಸಮಂತಾ ಈ ಕಾಮೆಂಟ್ ಮಾಡಿದ ನಂತರ ಮತ್ತೊಮ್ಮೆ ಅವರ ಎರಡನೇ ಮದುವೆಯ ಸುದ್ದಿಗೆ ವೇಗ ಸಿಕ್ಕಿದೆ. ಈ ಹಿಂದೆ ರಾಜ್ ಹಾಗೂ ಡಿಕೆಶಿಯಲ್ಲಿ ರಾಜ್ ನನ್ನು ಪ್ರೀತಿಸುತ್ತಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಸಮಂತಾ ಎರಡನೇ ಮದುವೆಯ ಸುದ್ದಿ ಮುನ್ನೆಲೆಗೆ ಬಂದಿದ್ದು, ಮತ್ತೆ ತಾಯಿಯಾಗಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇದರೊಂದಿಗೆ ರಾಜ್ ಎರಡನೇ ಮದುವೆಯಾಗಲಿದ್ದಾರೆ ಎಂಬ ಸುದ್ದಿಗೆ ವೇಗ ಸಿಕ್ಕಿದೆ. ಈ ಸುದ್ದಿಯಲ್ಲಿನ ಸತ್ಯಗಳ ಹೊರತಾಗಿ, ಈ ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದೆ. ಈ ಸುದ್ದಿಗೆ ಸಮಂತಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ನೋಡೋಣ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸಿಕ್ಕಾಬಟ್ಟೆ ಸಾಲ, ಸಾಲು ಸಾಲು ಚೆಕ್ಬೌನ್ಸ್ ಕೇಸ್ ; ನಿರ್ದೇಶಕ ಗುರುಪ್ರಸಾದ್ ಸಾವಿಗೆ ಕಾರಣವಾಯ್ತಾ..!?

ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
ಗುರುಪ್ರಸಾದ್ ಮೇಲೆ ಸಾಲು ಸಾಲು ಚೆಕ್ಬೌನ್ಸ್ ಕೇಸ್ಗಳಿದ್ದವು. ಸಿಕ್ಕ ಸಿಕ್ಕವರ ಬಳಿ ಸಾಲ ಮಾಡಿಕೊಂಡಿದ್ದರು. ಶ್ರೀನಿವಾಸ್ ಗೌಡ ಎಂಬುವರ ಜೊತೆ ಹಣದ ವ್ಯವಹಾರಕ್ಕೆ ಕಿರಿಕ್ ಕೂಡ ಆಗಿತ್ತು. ಗುರುಪ್ರಸಾದ್ಗೆ ಅಭಿಮಾನಿಯಾಗಿದ್ದ ಶ್ರೀನಿವಾಸ್ ಗೌಡ 25 ಲಕ್ಷ ಹಣ ನೀಡಿದ್ದರು. ಗುರುಪ್ರಸಾದ್ ಬರವಣಿಗೆ ಮೆಚ್ಚಿ ಜೊತೆಯಲ್ಲೇ ಇದ್ದರು ಶ್ರೀನಿವಾಸ್ ಗೌಡ.
ಹಣ ವಾಪಸ್ ಕೊಡಲಾಗದೇ ಕಿರಿಕ್ ಮಾಡಿಕೊಂಡಿದ್ದರು ನಿರ್ದೇಶಕ ಗುರುಪ್ರಸಾದ್ ಅವರು. ಈ ಬಗ್ಗೆ ಕೋರ್ಟ್ ಮೆಟ್ಟಿಲೇರಿದ್ದ, ಗುರುಪ್ರಸಾದ್ ವಿರುದ್ದ ಕಾನೂನು ಸಮರ ಸಾರಿದ್ದರು. ಅಕ್ಟೋಬರ್ 24ರಂದು ಇದ್ದ ಕೋರ್ಟ್ವಿಚಾರಣೆಗೂ ಹಾಜರಾಗಿರಲಿಲ್ಲ ಗುರುಪ್ರಸಾದ್. ಮೆಡಿಕಲ್ ರಿಪೋರ್ಟ್ ನೀಡಿ ವಿಚಾರಣೆ ಮುಂದೂಡಿಸಿಕೊಂಡಿದ್ದರು.
ನಿನ್ನೆ ಅಂದರೆ ನವೆಂಬರ್ 2ಕ್ಕೆ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು. ಶುಭಾಶಯ ಕೋರಲು ಕರೆಮಾಡಿದವರಿಗೂ ನಾಟ್ ರೀಚಬಲ್ ಬಂದಿತ್ತು ಮೊಬೈಲ್.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಮಠ’ ಸಿನೆಮಾ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ..!

ಸುದ್ದಿದಿನಡೆಸ್ಕ್:ಸ್ಯಾಂಡಲ್ವುಡ್ನ ಖ್ಯಾತ ನಿರ್ದೇಶಕ ʻಮಠʼ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ.
52 ವರ್ಷದ ಕನಕಪುರ ಮೂಲದ ಗುರುಪ್ರಸಾದ್ ಇನ್ನಿಲ್ಲಾ.. ತುಮಕೂರು ರಸ್ತೆಯ ಅಪಾರ್ಟ್ಮೆಂಟ್ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಲದ ಸುಳಿಗೆ ಸಿಲುಕಿದ್ದ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಠ ಸಿನಿಮಾ ಮೂಲಕ ನಿರ್ದೇಶಕರಾಗಿ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದರು. ಮಠ, ಎದ್ದೇಳು ಮಂಜುನಾಥ್ ಚಿತ್ರದ ಮೂಲಕ ಮನೆಮಾತಾಗಿದ್ದರು.
ನಿರ್ದೇಶಕ ʻಮಠʼ ಗುರುಪ್ರಸಾದ್ ಅವರು ನವೆಂಬರ್ 02, 1972 ರಂದು ರಾಮನಗರದಲ್ಲಿ ಜನಿಸಿದ್ದರು, ಅಂದರೆ ನಿನ್ನೆ ನಿರ್ದೇಶಕ ಗುರುಪ್ರಸಾದ್ ಹುಟ್ಟುಹಬ್ಬ ಇತ್ತು, ನಿನ್ನೆ ಬರ್ತ್ ಡೇ ವಿಶ್ ಮಾಡಲು ಕರೆಮಾಡಿದವರಿಗೆ ನೋ ಆನ್ಸರ್ ಅಂತ ಬರುತ್ತಿತ್ತು, ನಿರ್ದೇಶಕ ಗುರುಪ್ರಸಾದ್ ಅವರ ಮೊಬೈಲ್ ನಾಟ್ ರೀಚಬಲ್ ಆಗಿತ್ತು, ಗುರುಪ್ರಸಾದ್ ತಮ್ಮ ಜನ್ಮದಿನಕ್ಕೆ ಮುನ್ನವೇ ಜೀವನಕ್ಕೆ ಅಂತ್ಯ ಹಾಡಿಕೊಂಡಿದ್ದಾರೆ. ಬರ್ತಡೇಗೂ ಮುನ್ನವೇ ಡೆತ್ ಡೇ ಮಾಡಿಕೊಂಡ ಗುರುಪ್ರಸಾದ್..!
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಜಿಎಂ ಡಿಪ್ಲೋಮೋ ಕಾಲೇಜಿನ 44 ವಿದ್ಯಾರ್ಥಿಗಳು ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆ
-
ದಿನದ ಸುದ್ದಿ3 days ago
ಕವಿತೆ | ನಾನೊಲಿದೆನಯ್ಯಾ
-
ದಿನದ ಸುದ್ದಿ5 days ago
ತುಂಬಿದ ಕೊಡ ತುಳುಕಿತಲೇ ಪರಾಕ್..!
-
ದಿನದ ಸುದ್ದಿ4 days ago
ಜನಸಿರಿ ಫೌಂಡೇಶನ್ ವತಿಯಿಂದ ಕವಿಗಳ ಕಲರವ
-
ದಿನದ ಸುದ್ದಿ2 days ago
ಮಾರ್ಚ್ 3 ರಂದು ವಿಧಾನಮಂಡಲ ಅಧಿವೇಶನ; 7 ರಂದು ಬಜೆಟ್ ಮಂಡನೆಗೆ ಸರ್ಕಾರ ನಿರ್ಧಾರ
-
ದಿನದ ಸುದ್ದಿ23 hours ago
ಗ್ರಾಮೀಣ ಅಂಚೆ ಸೇವಕರ ನೇಮಕಾತಿಗಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಉತ್ಸವಗಳ ಹೆಸರಲ್ಲಿ ಮೌಢ್ಯ ತೊರೆಯಬೇಕು : ಈಶ್ವರಾನಂದಪುರಿ ಸ್ವಾಮೀಜಿ
-
ದಿನದ ಸುದ್ದಿ8 hours ago
ನಗರ ಗ್ರಂಥಾಲಯ ಪ್ರಾಧಿಕಾರಕ್ಕೆ ರೂ.1.99 ಕೋಟಿ