ಸಿನಿ ಸುದ್ದಿ
ವಿಜಿಗೆ ಪರಪ್ಪನ ಅಗ್ರಹಾರ ಖಾಯಂ..? : ದುನಿಯಾ ವಿಜಿ ಬಂಧನದ ಕಂಪ್ಲೀಟ್ ಡೀಟೆಲ್ಸ್

ಸುದ್ದಿದಿನ, ಬೆಂಗಳೂರು : ದುನಿಯಾ ವಿಜಿ ಹಾವಳಿ ಅತಿಯಾದ ಹಿನ್ನಲೆ ವಿಜಯ್ ಪ್ರಕರಣಗಳ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ನಗರ ಪೊಲೀಸ್ ಆಯುಕ್ತರ ಸೂಚನೆ ನೀಡಿದ್ದಾರೆ. ಡಿಸಿಪಿ ಶರಣ್ಪಗೆ ಸೂಚನೆ ನೀಡಿದ ಸುನೀಲ್ ಕುಮಾರ್ ದಕ್ಷಿಣ ವಿಭಾಗದಲ್ಲಿ ದುನಿಯಾ ವಿಜಯ್ ಮನೆಯಿದೆ ಹಾಗಾಗಿ ದಕ್ಷಿಣ ವಿಭಾಗದ ಪೊಲೀಸ್ರು ರೌಡಿಶೀಟ್ ಒಪನ್ ಮಾಡಬಹುದುಸಾರ್ವಜನಿಕ ವಲಯದಲ್ಲಿ ರೌಡಿಶೀಟ್ ಹಾಕುವ ಬಗ್ಗೆ ಮಾತುಗಳು ಕೇಳಿ ಬರುತ್ತಿರುವ ಹಿನ್ನಲೆ ಡಿಸಿಪಿಗೆ ಪ್ರಕರಣಗಳ ಮಾಹಿತಿ ಕೇಳಿದ್ದಾರೆ ಕಮೀಷನರ್.
ನಿರ್ಮಾಪಕ ಜಯಣ್ಣಗೆ ಬೆದರಿಕೆ
ದುನಿಯಾ ವಿಜಿ ಪ್ರಕರಣಕ್ಕೆ ಸಿಸಿಬಿ ಎಂಟ್ರಿ
ವೈಯಾಲಿ ಕಾವಲ್ ಠಾಣೆಗೆ ಸಿಸಿಬಿ ಇನ್ಸಪೆಕ್ಟರ್ ಪ್ರಕಾಶ್ ಆಗಮಿಸಿದರು. ಕೆಲವರಿಗೆ ಹಣದ ವಿಚಾರವಾಗಿ ಬೆದರಿಕೆ ಹಾಗೂ ಕಿಡ್ನಾಪ್ ಮಾಡುವುದಾಗಿ ಹೆದರಿಸಿರುವ ಆರೋಪ, ಹಾಗೂ ಆ ಪ್ರಕರಣಗಳಲ್ಲಿ ವಿಜಯ್ ವಿಚಾರಣೆ ಮಾಡಲಿರುವ ಸಿಸಿಬಿ. 2015ರಲ್ಲಿ ನಿರ್ಮಾಪಕ ಜಯಣ್ಣಗೆ ಬೆದರಿಕೆ ಹಾಕಿದ್ದ ಪ್ರಕರಣದಲ್ಲಿ ವಿಜಯ್ ಸಿಸಿಬಿ ತನಿಖೆ ಎದುರಿಸಿದ್ದರು.
ನ್ಯಾಯಾಧೀಶರ ಹತ್ತಿರ ವಿಜಿಯನ್ನು ಕರೆದೊಯ್ಯುತ್ತಿರುವ ಪೋಲಿಸ್
ಇನ್ನು ಕೆಲವೇ ನಿಮಿಷಗಳಲ್ಲಿ ನ್ಯಾಯಾಧೀಶರ ಮುಂದೆ ವಿಜಿ ಹಾಗೂ ಪಟಾಲಂ ಎದುರಾಗಲಿದೆ. ಎನ್ ಜಿ ವಿ ಕೋರಮಂಗಲದ ಬಳಿ ನ್ಯಾಯಾಧೀಶರ ಮನೆಯಲ್ಲಿ ಹಾಜರುಪಡಿಸಲಿದ್ದಾರೆ ಪೊಲೀಸರು. ವೈಯ್ಯಾಲಿ ಕಾವಲ್ ನಲ್ಲಿ ಸದ್ಯ ಆರೋಪಿಗಳ ವಿಚಾರಣೆ ಮಾಡುತ್ತಿರುವ ಪೊಲೀಸರು. ಇತ್ತ ವಿಜಯ ಕಡೆ ವಕೀಲರಿಂದ ಮಧ್ಯಂತರ ಜಾಮೀನು ಪಡೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಆದರೆ ಪ್ರಕರಣ ಗಂಬೀರವಾಗಿರುವುದರಿಂದ ಮಧ್ಯಂತರ ಜಾಮೀನು ಸಿಗುವುದಿಲ್ಲ. ಹಾಗಾಗಿ ವಿಜಯ್ ಅಂಡ್ ಪಟಾಲಂಗೆ ಇವತ್ತು ಪರಪ್ಪನ ಆಗ್ರಹಾರ ವಾಸ್ತವ್ಯ ಖಚಿತ.
ಕನ್ನಡ ಸಿನಿರಂಗದಿಂದ ವಿಜಿ ನಿಷೇಧ..?
ಖತಂ ಆಗಲಿದೆಯಾ ದುನಿಯಾ ಸಿನಿಮಾ ಭವಿಷ್ಯ. ಮಾಸ್ತಿಗುಡಿ ದುರಂತದಲ್ಲಿ ವಿಜಯ್ ರನ್ನ ಸಿನಿಮಾ ರಂಗದಿಂದ ನಿಷೇಧ ಹೇರಲಾಗಿತ್ತು
ಈಗ ಮತ್ತೆ ಜೈಲು ಪಾಲಾಗಲಿರುವ ದುನಿಯಾ ವಿಜಯ್ , ಈ ಹಿನ್ನಲೆ ವಿಜಯ್ ಭವಿಷ್ಯ ಡೋಲಾಯಮಾನ ಕ್ರಿಮಿನಲ್ ಬ್ಯಾಗ್ ಗ್ರೌಂಡ್ ಜಾಸ್ತಿಯಾಗುತ್ತಿರುವ ಹಿನ್ನಲೆ
ಚಿತ್ರರಂಗದಿಂದ ನಿಷೇಧ ಹೇರಲು ಚಿಂತನೆ..?
ಒಂದು ವೇಳೆ ರೌಡಿಶೀಟ್ ಒಪನ್ ಆದ್ರೆ ಚಿತ್ರರಂಗಕ್ಕೆ ಕಳಂಕ, ಈ ಹಿನ್ನಲೆ ದುನಿಯಾ ವಿಜಯ್ ನಿಷೇಧಕ್ಕೆ ಕನ್ಬಡ ಚಿತ್ರರಂಗದ ಚಿಂತನೆ..?
ಉಪಮುಖ್ಯಮಂತ್ರಿ ಪರಂ ಹೇಳಿಕೆ
ನಟ ದುನಿಯಾ ವಿಜಯ್ ಪ್ರಕರಣ ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೇವೆ. ಯಾವ ಅಧಿಕಾರಿಗೂ ನಾವು ಈ ತರಹದ ವಿಷಯದಲ್ಲಿ ಸೂಚನೆ ಬಿಡೋದಿಲ್ಲ.
ಅಲ್ಲಿನ ಗ್ರೌಂಡ್ ರಿಪೋರ್ಟ್ ನೋಡಿ ಕ್ರಮ ಕೈಗೊಳ್ಳುತ್ತಾರೆ. ಕಾನೂನನ್ನು ಯಾರು ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದರು.
ವಿಜಿಯಿಂದ ಪ್ರತಿ ದೂರು
ನಟ ದುನಿಯಾ ವಿಜಯ್ ನಿಂದ ಪತ್ರಿದೂರು
ಹೈ ಗ್ರೌಂಡ್ ಠಾಣೆ ಮುಂದೆ ನನ್ನ ಹಾಗೂ ಮಗನ ಮೇಲೆ ಹಲ್ಲೆ ಠಾಣೆಗೆ ನಡೆದುಕೊಂಡು ಬರುತ್ತಿರುವಾಗ ಹಲ್ಲೆ ಅವ್ಯಾಚ ಶಬ್ದಗಳಿಂದ ನಿಂದನೆ ನನ್ನ ಕಾರ್ ನ್ನು ಸಹ ಡ್ಯಾಮೇಜ್ ಮಾಡಿದ್ದಾರೆ ಎಂದು ರಾತ್ರಿನೇ ದೂರು ನೀಡಿರುವ ವಿಜಿ IPC 506, 323, ಜೀವ ಬೆದರಿಕೆ , ಹಲ್ಲೆ ಅಡಿಯಲ್ಲಿ ಪ್ರಕರಣ ಹೈ ಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಜೀಮ್ ಟೈನರ್ ಪಾನಿ ಪುರಿ ಕಿಟ್ಟಿ ಹಾಗೂ ಇತರರ ವಿರುದ್ದ ಹೈ ಗ್ರೌಂಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಿ ಮಾದಕವಸ್ತು ಸೇವನೆ
ಮಾದಕ ವಸ್ತು ಸೇವನೆ ಬಗ್ಗೆ ಅನುಮಾನ ವ್ಯಕ್ತ ಪಡಿಸಿರುವ ಪೊಲೀಸರು. ಘಟನೆ ನಡೆದಾಗ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನ
ಈ ಹಿನ್ನಲೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿರುವ ವೈದ್ಯರು, ವೈದ್ಯಕೀಯ ವರದಿ ಬಂದರೆ ಎನ್ ಡಿ ಪಿ ಎಸ್ ಆಕ್ಟ್ ಕೂಡ ಸೇರ್ಪಡೆಯಾಗುತ್ತೆ. ಡ್ರಗ್ಸ್ ಸೇವನೇ ಮಾಡಿ ಈ ಕೃತ್ಯ ಎಸಗಿರುವ ವಿಜಯ್ ಎಂಬ ಅನುಮಾನದ ಹಿನ್ನಲೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿ್ದೆ.
ಎನ್ ಡಿ ಪಿ ಎಸ್ ಆಕ್ಟ್ ಮಾದಕ ವಸ್ತುಗಳ ಸೇವನೆ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.
ರೌಡಿ ಶೀಟರ್ ವಿಜಯ್
ಶಾಶ್ವತವಾಗಿ ರೌಡಿಗಳ ಸಾಲಿಗೆ ಸೇರ್ತಾರಾ ದುನಿಯಾ ವಿಜಿ? ದುನಿಯಾ ವಿಜಿ ಮೇಲೆ ರೌಡಿಶೀಟರ್ ಓಫನ್ ಮಾಡೋಕೆ ಚಿಂತನೆ ನಡೆಸಿರೋ ನಗರ ಪೊಲೀಸ್ ಇಲಾಖೆ ಬೆಂಗಳೂರು ದಕ್ಷಿಣ ವಿಭಾಗದಲ್ಲಿ ರೌಡಿಶೀಟರ್ ತೆರೆಯುವ ಸಾಧ್ಯತೆ ಇದೆ. ದುನಿಯಾ ವಿಜಯ ಗಲಾಟೆಗಳಿಂದ ಬೇಸತ್ತ ನಗರ ಪೊಲೀಸ್ ಇಲಾಖೆಯು ಪದೇ-ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿರುವ ದುನಿಯಾ ವಿಜಿ ಹೊಡೆದಾಟ, ಗಲಾಟೆ,ಧಮಕಿ,ಪೊಲೀಸರ ಕರ್ತವ್ಯಕ್ಕೆ ಅಡ್ಡಿ ನಿವೃತ್ತ ಯೋಧರ ಮೇಲೆ ಹಲ್ಲೆ ಹೀಗೆ ಹೀಗೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ದುನಿಯಾ ವಿಜಯ್ ಗೂಂಡಾ ಪ್ರವೃತ್ತಿಯಿಂದ ಬೇಸತ್ತ ಪೊಲೀಸರು
ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ರೌಡಿಶೀಟರ್ ತೆರೆಯಲು ಪೊಲೀಸ ಇಲಾಖೆ ಸಿದ್ಧತೆ ಮಾಡಿದೆ.
ವಿಜಿ ಮೇಲಿರುವ ಕೇಸ್ ಗಳು
ಈ ಮೊದಲು ದುನಿಯಾ ವಿಜಿ ಮೇಲೆ ದಾಖಲಾಗಿದ್ದ ಕೇಸ್ಗಳು. ಮೇ 31 2018. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದ ಆರೋಪದ ಮೇರೆಗೆ ಎಫ್ಐಆರ್.
ಚೆನ್ನಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲು. IPC 353 ಪೊಲೀಸ್ ಆಧಿಕಾರಿಯ ಕರ್ತವ್ಯಕ್ಕೆ ಆಡ್ಡಿ ಪಡಿಸಿದ್ದು. 255 ಕರ್ತವ್ಯ ನಿರತ ಪೊಲೀಸ್ ಜೊತೆ ವಾಗ್ವಾದಕ್ಕಿಳಿದಿದ್ದು. ಜನವರಿ 18 2013 ಪತ್ನಿ ನಾಗರತ್ನಗೆ ಜೀವ ಬೆದರಿಕೆಯೊಡ್ಡಿದ ವಿಜಿ.
ಸಿಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು.
ಹಾಗೂ ವಿಜಿ ಸಂಬಂಧಿ ಶಿವಶಂಕರಗೌಡ ಎಂಬಾತನಿಗೆ ಹಲ್ಲೆಗೆ ಮುಂದಾಗಿದ್ದ. ಎರಡು ಪ್ರಕರಣ ದಾಖಲಿಸಿದ್ದ ಸಿಕೆ ಅಚ್ಚುಕಟ್ಟು ಪೊಲೀಸರು, ಬಳಿಕ ಜನವರಿ 17 2013 ರಲ್ಲಿ ಕೌಟುಂಬಿಕ ನ್ಯಾಯಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದರು ಪತ್ನಿ ನಾಗರತ್ನ.
ಆರೋಪ ಸಾಬೀತಾದರೆ ವಿಜಿ ಈ ಶಿಕ್ಷೆ
363 ಕಿಡ್ನ್ಯಾಪ್ ಸಾಬೀತಾದರೆ 7 ವರ್ಷ ಶಿಕ್ಷೆ ಜೊತೆಗೆ ದಂಡ. ಜಾಮೀನು ರಹಿತ ಅಪರಾಧ
323, ಸಾಮೂಹಿಕ ಹಲ್ಲೆಗೆ ಶಿಕ್ಷೆ ಗರಿಷ್ಟ ಒಂದು ವರ್ಷ ಶಿಕ್ಷೆ ಒಂದು ಸಾವಿರ ದಂಡ . 506 ,ಕೊಲೆ ಬೆದರಿಕೆ ಗರಿಷ್ಠ ಏಳು ವರ್ಷ ಶಿಕ್ಷೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401

ದಿನದ ಸುದ್ದಿ
‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರದ ಟಿಕೆಟ್ ಮೇಲೆ ಶೆ.20ರಷ್ಟು ಕಡಿತ

ಸುದ್ದಿದಿನ ಡೆಸ್ಕ್ : ರಕ್ಷಿತ್ ಶೆಟ್ಟಿ ಮತ್ತು ರುಕ್ಷಿಣಿ ವಸಂತ್ ಅಭಿನಯದ ‘ಸಪ್ತ ಸಾಗರದಾಚೆ ಎಲ್ಲೋ – ಸೈಡ್ ಬಿ’ ಚಿತ್ರವು ಕಳೆದ ಶುಕ್ರವಾರ ಬಿಡುಗಡೆಯಾಗಿ, ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ.
ಈ ಮಧ್ಯೆ, ಇನ್ನಷ್ಟು ಹೆಚ್ಚು ಜನರನ್ನು ಚಿತ್ರಮಂದಿರಗಳಿಗೆ ಕರೆತರುವ ನಿಟ್ಟಿನಲ್ಲಿ ಚಿತ್ರತಂಡ ಇಂದಿನಿಂದ ಪ್ರತಿ ಟಿಕೆಟ್ ಶೇ. 20ರಷ್ಟು ರಿಯಾಯ್ತಿಯನ್ನು ಚಿತ್ರತಂಡ ಘೋಷಿಸಿದೆ. ಈ ಚಿತ್ರವನ್ನು ಹೇಮಂತ್ ರಾವ್ ನಿರ್ದೇಶಿಸಿದ್ದು, ಗೋಪಾಲಕೃಷ್ಣ ದೇಶಪಾಂಡೆ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್, ರಮೇಶ್ ಅರವಿಂದ್ ಮುಂತಾದವರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಬ್ಯಾಡ್ ಮ್ಯಾನರ್ಸ್’ ಸಿನಿಮಾ ನೋಡಿದ ಮೊದಲ ಪ್ರೇಕ್ಷಕ ದರ್ಶನ್

ಸುದ್ದಿದಿನ ಡೆಸ್ಕ್ : ಸೂರಿ ನಿರ್ದೇಶನದಲ್ಲಿ ಅಭಿಷೇಕ್ ಅಂಬರೀಶ್ ಅಭಿನಯಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರವು ಇದೇ ನ.24ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ಈ ಮಧ್ಯೆ, ಇತ್ತೀಚೆಗೆ ಚಿತ್ರತಂಡ ಆಯೋಜಿಸಿದ್ದ ವಿಶೇಷ ಪ್ರದರ್ಶನದಲ್ಲಿ ದರ್ಶನ್ ಮತ್ತು ಸುಮಲತಾ ಅಂಬರೀಷ್ ಅವರು ಚಿತ್ರವನ್ನು ನೋಡಿದ್ದಾರೆ. ಚಿತ್ರದ ಬಗ್ಗೆ ಖುಷಿಯಿಂದ ಮಾತನಾಡಿರುವ ದರ್ಶನ್, ಅಭಿ ಬೆನ್ನಿಗೆ ‘ನಿಮ್ಮಪ್ರೀತಿಯ ದಾಸ’ ಎಂದು ಬರೆದು 5ಕ್ಕೆ 5 ಸ್ಟಾರ್ ಗಳನ್ನ ಕೊಟ್ಟಿದ್ದಾರೆ.
“ಈ ಸಿನಿಮಾದಲ್ಲಿ ನೀವು ರಿಯಲ್ ರೆಬೆಲ್ ಸ್ಟಾರ್ನ ನೋಡ್ತೀರಿ. ಹೆಮ್ಮೆಯಾಗ್ತಿದೆ ಎರಡನೇ ಸಿನಿಮಾದಲ್ಲಿ ಈ ಲೆವ್ವೆಲ್ಲಿಗೆ ಅಭಿ ಮಾಗಿರೋದು. ಸಿನಿಮಾ ಬೇರೆ ಲೆವ್ವಲ್ ಇದೆ. ದೊಡ್ಡ ಯಶಸ್ಸು ಇದಕ್ಕೆ ಖಂಡಿತ ಧಕ್ಕಲಿದೆ’ ಎಂದು ಬರೆಯುವ ಮೂಲಕ ದರ್ಶನ್ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
10,000 ಅಡಿ ಉದ್ದದ ‘ಘೋಸ್ಟ್’ ಪೋಸ್ಟರ್ ಬಿಡುಗಡೆ

ಸುದ್ದಿದಿನ ಡೆಸ್ಕ್ : ಶಿವರಾಜಕುಮಾರ್ ಅಭಿನಯದ ‘ಘೋಸ್ಟ್’ ಚಿತ್ರವು ಈಗಾಗಲೇ ನವೆಂಬರ್ 17ರಂದು ಜೀ5ನಲ್ಲಿ ಬಿಡುಗಡೆಯಾಗಿದೆ.
ಈ ಚಿತ್ರದ ಪ್ರಮೋಷನ್ಗೆ ಬರೋಬ್ಬರಿ 10 ಸಾವಿರ ಚದರ ಅಡಿಯ ‘ಘೋಸ್ಟ್’ ಪೋಸ್ಟರನ್ನು ಜೀ5 ಬಿಡುಗಡೆ ಮಾಡಿದೆ. ಜಯನಗರದ ಎಂ.ಇ.ಎಸ್ ಗ್ರೌಂಡ್ ನಲ್ಲಿ ‘ಘೋಸ್ಟ್’ ಸಿನಿಮಾದ 10,000 ಅಡಿ ಪೋಸ್ಟರ್ ಅನಾವರಣ ಮಾಡಲಾಗಿದೆ. ಥಿಯೇಟರ್ಗಳಲ್ಲಿ ಬಿಡುಗಡೆಯಾಗುತ್ತಿರುವ ಸಿನಿಮಾಗೆ ಬ್ಯಾನರ್, ಪೋಸ್ಟರ್ ಹಾಕೋದು ಸಹಜ. ಆದರೆ, ಈ ಬಾರಿ ಒಟಿಟಿ ರಿಲೀಸ್ಗೆ ಪೋಸ್ಟರ್ ಹಾಕಿ ವಿಭಿನ್ನವಾಗಿ ಪ್ರಚಾರ ಮಾಡಿದೆ ಜೀ ಕನ್ನಡ.
ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ‘ಘೋಸ್ಟ್’ ಚಿತ್ರವನ್ನು ಆರ್.ಜೆ. ಶ್ರೀನಿ ಬರೆದು, ನಿರ್ದೇಶಿಸಿದ್ದು, ಅರ್ಜುನ್ ಜನ್ಯಾ ಸಂಗೀತವಿದೆ. ಶಿವರಾಜಕುಮಾರ್ ಜೊತೆ ಮಲಯಾಳಂ ನಟ ಜಯರಾಮ್, ಹಿಂದಿ ನಟ ಅನುಪಮ್ ಖೇರ್, ಅರ್ಚನಾ ಜೋಯಿಸ್, ಸತ್ಯಪ್ರಕಾಶ್, ನಿರ್ದೇಶಕ ಎಂಜಿ ಶ್ರೀನಿವಾಸ್ ಹಾಗೂ ಇನ್ನಿತರರು ನಟಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಚನ್ನಗಿರಿ | ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಮುಷ್ಕರ ; ತಹಶೀಲ್ದಾರರಿಗೆ ಮನವಿ
-
ದಿನದ ಸುದ್ದಿ5 days ago
ದೇಹದಾಡ್ಯ ಸ್ಪರ್ಧೆ | ಶ್ರೀ ಶಿವಲಿಂಗೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಪ್ರೇಮ್ ಕುಮಾರ್ ಗೆ ‘ಮಿಸ್ಟರ್ ದಾವಣಗೆರೆ’ ಪ್ರಶಸ್ತಿ
-
ದಿನದ ಸುದ್ದಿ1 day ago
ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್
-
ದಿನದ ಸುದ್ದಿ3 days ago
ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು
-
ದಿನದ ಸುದ್ದಿ14 hours ago
ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ