Connect with us

ಕ್ರೀಡೆ

ಫಿಪಾ ವಿಶ್ವಕಪ್ ಟೂರ್ನಿ ಪುಟ್ಬಾಲ್ ತಯಾರಾಗಿದ್ದು ಎಲ್ಲಿ ಗೊತ್ತಾ..?

Published

on

Photo Courtesy: Daily Times

ಸುದ್ದಿದಿನ ಡೆಸ್ಕ್ : ಷ್ಯಾದಲ್ಲಿ ಇನ್ನು ಕೆಲವೇ ದಿನಗಳಲ್ಲಿ ನಡೆಯಲಿರು ಫುಟ್ಬಾಲ್ ಫಿಫಾ ವಿಶ್ವ ಕಪ್ ಟೂರ್ನಿಗೆ ಬಹುತೇಕ ತಯಾರಿಗಳು ಪೂರ್ಣಗೊಂಡಿವೆ. ಅಂದಹಾಗೆ, ಈ ಟೂರ್ನಿಯಲ್ಲಿ ನ ಪಂದ್ಯಗಳಿಗೆ ಬಳಸುವ ಪುಟ್ಬಾಲ್ ಚೆಂಡು ತಯಾರಾಗುವುದು ಪಾಕಿಸ್ತಾನದ ಸೈಲ್ ಕೋಟ್ ನಲ್ಲಿ.

ಅಡಿಡಾಸ್ ಟೆಲ್ ಸ್ಟಾರ್ 18 ಚೆಂಡನ್ನು ಈ ಸಲದ ಫಿಪಾ ವಿಶ್ವಕಪ್ ಪಂದ್ಯಲ್ಲಿ ಬಳಸಲಾಗುತ್ತೆ. ಈ ಚಂಡನ್ನು ಪಾಕಿಸ್ತಾನದಲ್ಲಿ‌ ತಯಾರಿಸಲಾಗಿದೆ. ಈ ಟೋರ್ನಿಗೆ ಚಂಡನ್ನು ತಯಾರಿಸುತ್ತಿರುವುದು ಇದೇ ಮೊದಲೇನಲ್ಲ. 2014 ರಲ್ಲಿ ನಡೆದ ಬ್ರೆಜಿಲ್ ವಿಶ್ವಕಪ್ ಟೂರ್ನಿಯ ಬ್ರಝೂಕಾ ಚೆಂಡನ್ನೂ ಕೂಡಾ ಪಾಕಿಸ್ತಾನದಲ್ಲಿಯೇ ತಯಾರಿಸಲಾಗಿತ್ತು.

ಫಿಫಾ ವಿಶ್ವಕಪ್‌ಗಾಗಿ 40 ಮಿಲಿಯನ್ ಚೆಂಡುಗಳನ್ನ ಪಾಕಿಸ್ತಾನ ತಯಾರಿಸಿದೆ. ವಿಶೇಷವಾಗಿ ಅಡಿಡಾಸ್ ಟೆಲ್‌ಸ್ಟಾರ್ 18 ಚೆಂಡನ್ನಶೂನ್ಯ ಗುರುತ್ವಾಕರ್ಷಣೆಯಲ್ಲಿ ಈ ಚೆಂಡನ್ನ ತಯಾರಿಸಲಾಗಿದೆ. ಕೃತಕ ಉಪಗ್ರಹದಲ್ಲಿ ತಯಾರಿಸಲಾದ ಈ ಚೆಂಡು, ಈ ಬಾರಿಯ ಫುಟ್ಬಾಲ್ ಟೂರ್ನಿಯ ವಿಶೇಷತೆಯಲ್ಲೊಂದು.

ಈ ಫೀಫಾ ವಿಶ್ವಕಪ್‌ ಗೆ ಸುಮಾರಯ 40ಮಿಲಿಯನ್ ಚೆಂಡುಗಳನ್ನು, ಅಡಿಡಾಸ್ ಟೆಲ್ ಸ್ಟಾರ್ 18 ನ್ನು ಶೂನ್ಯ ಗುರುತ್ವಾಕರ್ಷಣೆಯಲ್ಲಿ ತಯಾರಿಸಲಾಗಿದೆಯಂತೆ. ಕೃತಕ ಉಪಗ್ರಹದಲ್ಲಿ ತಯಾರಿಸಿರುವ ಈ ಚೆಂಡು ಟೂರ್ನಿಯ ವಿಷೇಶವಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

ವಿಶ್ವಕಪ್ ಶೂಟಿಂಗ್ ಪಂದ್ಯಾವಳಿ; ಭಾರತದ ರೈತಮ್ ಸಂಗ್ವಾನ್‌ಗೆ ಕಂಚಿನ ಪದಕ

Published

on

ಸುದ್ದಿದಿನ ಡೆಸ್ಕ್ : ಅಜರ್ ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ರೈತಮ್ ಸಂಗ್ವಾನ್ ಕಂಚಿನ ಪದಕ ಗೆದ್ದಿದ್ದಾರೆ.

ಅಂತಿಮ ಸುತ್ತಿನಲ್ಲಿ ಅವರು,219.1 ಅಂಕ ಗಳಿಸುವ ಮೂಲಕ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು, ಕಂಚಿನ ಪದಕ ತಮ್ಮದಾಗಿಸಿಕೊಂಡರು. ವಿಶ್ವಕಪ್ ಶೂಟಿಂಗ್ ಪಂದ್ಯಾವಳಿಯಲ್ಲಿ ಇದು ಸಂಗ್ವಾನ್ ಅವರ ಪ್ರಥಮ ವೈಯಕ್ತಿಕ ಪದಕವಾಗಿದೆ.

 

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್: ಭಾರತದ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಸ್ವರ್ಣ ಪದಕ

Published

on

ಸುದ್ದಿದಿನ, ದುಬೈ : ದುಬೈನಲ್ಲಿ ನಡೆದ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ನಿನ್ನೆ ನಡೆದ ಫೈನಲ್ ಪಂದ್ಯದಲ್ಲಿ 8ನೇ ಶ್ರೇಯಾಂಕಿತ ಮಲೇಷ್ಯಾದ ಟಿಯೊ ಇ ಯಿ ಮತ್ತು ಒಂಗ್ ಯೆವ್ ಸಿನ್ ವಿರುದ್ಧ 16-21,21-17ಮತ್ತು 21-19 ಗೇಮ್ ಗಳ ಅಂತರದಿಂದ ಗೆದ್ದು ಇತಿಹಾಸ ನಿರ್ಮಿಸಿದೆ.1965ರಲ್ಲಿ ದಿನೇಶ್ ಖನ್ನಾ ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಚಿನ್ನ ಗೆದ್ದ ನಂತರ ಭಾರತಕ್ಕೆ ಒಲಿದ ಮೊದಲ ಸ್ವರ್ಣ ಪದಕ ಇದಾಗಿದೆ.

ಭಾರತ ಬ್ಯಾಡ್ಮಿಂಟನ್ ಕ್ಷೇತ್ರದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿರುವ ಚಿರಾಗ್ ಮತ್ತು ಸಾತ್ವಿಕ್ ಜೋಡಿಗೆ ಪ್ರಧಾನಿ ನರೇಂದ್ರ ಮೋದಿ, ಕ್ರೀಡಾ ಸಚಿವ ಹಾಗೂ ಭಾರತ ಬ್ಯಾಡ್ಮಿಂಟನ್ ಸಂಸ್ಥೆ ಸೇರಿದಂತೆ ಹಲವು ಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ, ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಪುರುಷರ ಡಬಲ್ಸ್ ಜೋಡಿಯಾಗಿರುವ ಸಾತ್ವಿಕ್‌ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿಗೆ ಅಭಿನಂದನೆಗಳು ಎಂದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಐಪಿಎಲ್ ಕ್ರಿಕೆಟ್ : ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಮುಖಾಮುಖಿ

Published

on

ಸುದ್ದಿದಿನ ಡೆಸ್ಕ್ : ಐಪಿಎಲ್ ಟೂರ್ನಿಯ ಇಂದಿನ ಬಹು ನಿರೀಕ್ಷಿತ ಪಂದ್ಯದಲ್ಲಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ನೇ ಸ್ಥಾನದಲ್ಲಿರುವ ಆತಿಥೇಯ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿದೆ.

ಟೂರ್ನಿಯೂದ್ದಕ್ಕೂ ಅತ್ಯೂತ್ತಮ ಪ್ರದರ್ಶನ ನೀಡುತ್ತಿರುವ ಎರಡೂ ತಂಡಗಳು ಜಯ ಗಳಿಸಲಿಕ್ಕೆ ತಮ್ಮದೇ ಆದ ಕಾರ್ಯತಂತ್ರ ರೂಪಿಸುತ್ತಿವೆ. ಆಡಿರುವ 7 ಪಂದ್ಯಗಳಲ್ಲಿ ತಮ್ಮ ಅಮೋಘ ನಾಯಕತ್ವದ ಪ್ರದರ್ಶನದಿಂದಾಗಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ತಂಡ ಐದು ಪಂದ್ಯ ಜಯಿಸಿ ಅಪಾರ ಆತ್ಮ ವಿಶ್ವಾಸದಿಂದ ಬೀಗುತ್ತಿದೆ.

ಇತ್ತ ಆರ್ ಆರ್ ತಂಡ ಸಹ ಸಂಜು ಸ್ಯಾಮ್ಸನ್ ನಾಯಕತ್ವದ ಗರಡಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಇಂದಿನ ಪಂದ್ಯ ತೀವೃ ಪೈಪೋಟಿಯಿಂದ ಕೂಡಿರಲಿದೆ. ಇನ್ನೊಂದೆಡೆ ಕಳೆದ ರಾತ್ರಿ ಐಪಿಎಲ್ ಪಂದ್ಯಾವಳಿಯ ಬಹು ನೀರಿಕ್ಷಿತ ರಾಯಲ್ ಚಾಲೆಂಜರ್‍ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್‍ಸ್ ತಂಡದ ಮಧ್ಯೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ 36ನೇ ಪಂದ್ಯದಲ್ಲಿ, ಕೆಕೆಆರ್ ತಂಡ ಆತಿಥೇಯ ರಾಯಲ್ಸ್ ಚಾಲೆಂಜರ್‍ಸ್ ತಂಡವನ್ನು 21ರನ್‌ಗಳಿಂದ ಮಣಿಸಿತು.

ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಕೋಹ್ಲಿ ಮೊದಲು ಎದುರಾಳಿ ತಂಡವನ್ನು ಬ್ಯಾಟಿಂಗ್‌ಗೆ ಅಹ್ವಾನಿಸಿದರು. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಕೋಲ್ಕತ್ತಾ ತಂಡ, ಜೆಸನ್ ರಾಯ್, ನಾಯಕ ನಿತಿಶ್ ರಾಣಾ ಮತ್ತು ವೆಂಕಟೇಶ್ ಐಯ್ಯರ್ ಅವರ ಅತ್ಯೂತ್ತಮ ಬ್ಯಾಟಿಂಗ್‌ನಿಂದ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 200 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕೆ ಪ್ರತ್ಯೂತ್ತರವಾಗಿ ಬ್ಯಾಟ್ ಬೀಸಿದ ಆತೀಥೇಯ ರಾಯಲ್ ಚಾಲೇಂಜರ್‍ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 179 ರನ್ ಗಳಿಸಿ ಎದುರಾಳಿ ತಂಡಕ್ಕೆ 21 ರನ್‌ಗಳಿಂದ ಶರಣಾಯಿತು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending