ದಿನದ ಸುದ್ದಿ
ಗೌರಿ ಲಂಕೇಶ್ ಕೊಂದದ್ದು ನಾನೇ : ಪರಶುರಾಮ್ ತಪ್ಪೊಪ್ಪಿಗೆ
![](https://suddidina.com/wp-content/uploads/2018/06/Gowrikiller-parashuram-suddidina.jpg)
ಸುದ್ದಿದಿನ, ಬೆಂಗಳೂರು : ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಕೊಂದದ್ದು ನಾನೇ ಎಂದು ಪರಶುರಾಮ್ ವಾಘ್ಮೋರೆ ತಪ್ಪೊಪ್ಪಿಕೊಂಡಿದ್ದಾನೆ ಎಂಬ ಸತ್ಯವನ್ನು ಎಸ್ ಐ ಟಿ ಹೇಳಿದೆ.
ಶುಕ್ರವಾರ (ಜೂನ್ 15) ರಂದು ಆತ ಕರೆ ಮಾಡಿದ ಕಾಯಿನ್ ಬೂತ್, ತಂಗಿದ್ದ ಸ್ಥಳ, ಗೌರಿ ಲಂಕೇಶ್ ಅವರ ಮನೆ, ಹಾಗೂ ಆತ ಬೈಕಿನಲ್ಲಿ ತಪ್ಪಿಸಿಕೊಂಡಿದ್ದ ಜಾಗವನ್ನು ತೋರಿಸಿದ್ದಾನೆ. ಅದೆಲ್ಲವನ್ನೂ ಪೊಲೀಸರು ಮಹಜರು ಮಾಡಿದ್ದಾರೆ.
ಪರಶುರಾಮ್ ಎಸ್ ಐ ಟಿ ಗೆ ಗೌರಿ ಹತ್ಯೆಗೆ ಹೇಗೆಲ್ಲಾ ತಯಾರಿ ನಡೆಸಲಾಯಿತು ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಅಪರಿಚಿತ ವ್ಯಕ್ತಿಯಿಂದ ಡೀಲ್
ಪರಶುರಾಮ್ ಗೆ ವ್ಯಕ್ತಿಯೊಬ್ಬ ಹಿಂದೂ ಧರ್ಮವನ್ನ ಇಷ್ಟೊಂದು ಪ್ರೀತಿಸುತ್ತಿರುವ ನಿನಗೇ ಆ ದೇವರು ಒಂದೊಳ್ಳೆ ಅವಕಾಶಮಾಡಿಕೊಟ್ಟಿದ್ದಾನೆ. ಈ ಅವಕಾಶವನ್ನು ಬಿಡಬೇಡ, ಈ ಕೆಲಸಕ್ಕೆ ನೀನು ಒಪ್ಪಿಗೆ ನೀಡಿದರೆ ನಿನಗೆ ಬೇಕಾದಂತಹ ಎಲ್ಲಾ ತಯಾರಿಯನ್ನು ನಾನು ಕೊಡುತ್ತೇನೆ ಎಂದು ಆ ವ್ಯಕ್ತಿ ನನ್ನ ಬ್ರೈನ್ ವಾಷ್ ಮಾಡಿದ ಎಂದು ಪರಶುರಾಮ್ ಹೇಳಿದ್ದಾನೆ. ಆದರೆ ಆ ವ್ಯಕ್ತಿ ಬಗ್ಗೆ ಹೆಚ್ಚು ಮಾಹಿತಿ ನನಗಿಲ್ಲ ಆದರೆ, ಆತನನ್ನು ನೋಡಿದರೆ ಗುರಿತಿಸಬಲ್ಲೆ. ಆ ವ್ಯಕ್ತಿ ನನಗೆ 2017ರಲ್ಲಿ ಭೇಟಿಯಾಗಿದ್ದ.
ವಿಡಿಯೋ ನೋಡಿ ರಕ್ತ ಕುದಿಯಿತು
ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡುವಂತೆ ಡೀಲ್ ಬಂದಾಗ ನಾನು ಆಕೆಯ ಭಾಷಣದ ವಿಡಿಯೋಗಳನ್ನ ನೋಡಿದೆ. ಆಕೆಯ ಆ ಮಾತುಗಳು ನನ್ನಲ್ಲಿ ರಕ್ತಕುದಿಯುವಂತೆ ಮಾಡಿತು. ಆಗ ನನಗೆ ಆಕೆಯನ್ನು ಕೊಲ್ಲಲೇ ಬೇಕೆನಿಸಿತು. ಆಗ ಕೊಲ್ಲಲು ಬೇಕಾದ ತಯಾರಿಯನ್ನು ನನಗೆ ಕೊಡಬೇಕಾಗಿ ಆ ವ್ಯಕ್ತಿಯನ್ನು ಕೇಳಿದೆ ಎಂದಿದ್ದಾನೆ ಪರಶುರಾಮ್.
ತರಬೇತಿ
ನಂತರ ಆ ವ್ಯಕ್ತಿ ನನಗೆ ಬೆಳಗಾವಿಯ ಒಂದು ನಿರ್ಜನ ಪ್ರದೇಶದಲ್ಲಿ ಗುಂಡು ಹಾರಿಸುವುದರ ಬಗ್ಗೆ ಏರ್ ಗನ್ ನಲ್ಲಿ ತರಬೇತಿ ನೀಡಿದ. ಈ ತರಬೇತಿಯು 20 ದಿನಗಳ ಕಾಲ ನಡೆಯಿತು. ಹಾಗೇ ಈ 20ದಿನಗಳಲ್ಲಿ ಸುಮಾರು 500 ಸುತ್ತು ಗುಂಡು ಹಾರಿಸಿದ್ದೇನೆ ಎಂದಿರುವ ಪರಶುರಾಮ್.
ಬೆಂಗಳೂರಿಗೆ ಪಯಣ
20 ದಿನದ ತರಬೇತಿಯ ನಂತರ ನನಗೆ ಆ ವ್ಯಕ್ತಿ ಒಂದು ಮೊಬೈಲ್ ನಂಬರ್ ನನಗೆ ಕೊಟ್ಟ. ಆ ನಂಬರ್ ಗೆ ನಾನು ಕೊಲೆಯ ತಯಾರಿಬಗೆಗೆ ಕಾಯಿನ್ ಬೂತ್ ನಿಂದ ಕರೆ ಮಾಡಿ ಮಾಹಿತಿ ಪಡೆಯುತ್ತಿದ್ದೆ. ನಂತರ ನನ್ನ ಕರೆ ಸ್ವೀಕರಿಸಿ ಮಾತನಾಡುತ್ತಿದ್ದ ಆ ವ್ಯಕ್ತಿಯ ಮಾತಿನಂತೆ ಸೆಪ್ಟೆಂಬರ್ 3 ರಂದು ಬೆಂಗಳೂರಿನ ಸುಂಕದಕಟ್ಟೆಯ ಮನೆಯೊಂದರಲ್ಲಿ ಉಳಿದೆ. ಆ ಮನೆಯಲ್ಲಿ ಸುಜಿತ್ ಅಲಿಯಾಸ್ ಪ್ರವೀಣ್ ಕೂಡಾ ಇದ್ದ.
ನಾನೇ ಶೂಟ್ ಮಾಡಿದೆ
ಕೇವಲ ಎರಡೇ ಎರಡು ಅಡಿದೂರದಿಂದ ನಾನು ಗೌರಿ ಲಂಕೇಶ್ ಗೆ ಗನ್ ನಿಂದ ಶೂಟ್ ಮಾಡಿದೆ. ಮೂರು ಗುಂಡು ಹೊಡೆದೆ. ನಂತರ ಸ್ವಲ್ಪ ಹಿಂದೆ ಬಂದು ಮತ್ತೆ ಗುಂಡು ಹಾರಿಸಿದೆ ಅದು ಗೊಡೆಗೆ ಬಿದ್ದಿತು. ಸುಮಾರು 5-6 ಸೆಕೆಂಡ್ ನಲ್ಲಿ ನಾವಂದು ಕೊಂಡ ಕೆಲಸ ಆಗಿಯೇ ಹೋಯ್ತು ಎಂದು ಹೇಳಿದ್ದಾನೆ.
ಶೂಟ್ ಮಾಡಿದ ಮೇಲೆ
ಶೂಟ್ ಮಾಡಿದ ಕೂಡಲೇ ನನ್ನ ಬಳಿ ಇದ್ದ ಗನ್ ಮತ್ತು ಜಾಕೆಟ್ ಅನ್ನು ಬೈಕ್ ಚಲಾಯಿಸುತ್ತಿದ್ದವ ತೆಗೆದುಕೊಂಡು “ಗುಡ್ ಜಾಬ್, ನಮಗಾರಿಗೂ ನೀನು ಕಾಲ್ ಮಾಡ್ಬೇಡ, ಸಮಯ ಬಂದಾಗ ನಾವೇ ನಿನ್ನ ಭೇಟಿ ಮಾಡ್ತೇವೆ” ಎಂದು ಹೇಳಿ ಹೋದ ಎಂದು ಎಸ್ ಐ ಟಿಗೆ ಹೇಳಿದ್ದಾನೆ.
ಆಡಿಕೊಂಡು ನಕ್ಕಿದ್ದ
ಗೌರಿ ಹತ್ಯೆಯ ಕೇಸಲ್ಲಿ ಕೆ.ಟಿ. ನವೀನ್ ನನ್ನು ಪೊಲೀಸರು ಬಂಧಿಸಿದ ಮಾಹಿತಿ ತಿಳಿದು, ಕೊಲೆ ಮಾಡಿದವನನ್ನು ಬಿಟ್ಟು ಯಾರೋ ಅಮಾಯಕನನ್ನು ಹಿಡಿದಿದ್ದಾರೆ ಎಂದು ಪರಶುರಾಮ್ ಆಡಿಕೊಂಡು ನಕ್ಕಿದ್ದನಂತೆ. ನಂತರ ಯಾವಾಗ ಸುಜಿತ್ ಅಲಿಯಾಸ್ ಪ್ರವೀಣ್ ನನ್ನು ಪೊಲೀಸ್ ಅರೆಸ್ಟ್ ಮಾಡಿದ್ರೋ ಆಗ ನಾನೂ ಕೂಡಾ ಅರೆಸ್ಟ್ ಆಗೋದು ಗ್ಯಾರಂಟಿ ಅಂತ ತಿಳ್ಕೊಂಡ್ನಂತೆ ಪರಶುರಾಮ.
126 ಕಾಯಿನ್ ಬೂತ್
ಎಸ್ ಐ ಟಿ ಯು ಲಕ್ಷಾಂತರ ಕರೆಗಳನ್ನ ಪರಿಶೀಲನೆ ನಡೆಸಿ, ಪರಶುರಾಮ್ ಕರೆ ಮಾಡಿದ್ದ ಕಾಯಿನ್ ಬೂತ್ ಗಳನ್ನ ಹಾಗೂ ಕರೆಗಳ ಮಾಹಿತಿ ಕಲೆಹಾಕಿದೆ. ಪರಶುರಾಮ್ ಒಟ್ಟು 126 ಕಾಯಿನ್ ಬೂತ್ ಬಳಸಿ ಕರೆ ಮಾಡಿದ್ದನಂತೆ.
ಪ್ರತ್ಯಕ್ಷದರ್ಶಿಗಳು
ಗೌರಿ ಲಂಕೇಶ್ ಹತ್ಯೆಯ ಪ್ರತ್ಯಕ್ಷದರ್ಶಿಗಳಾದ ಇಬ್ಬ ಪತ್ರಿಕೋದ್ಯಮ ವಿದ್ಯಾರ್ಥಿ ಮತ್ತು ಕೂಲಿ ಕೆಲಸದವರು ಪರಶುರಾಮ್ ನನ್ನ ಗುರುತಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!