ದಿನದ ಸುದ್ದಿ
ಕನಯ್ಯ ಕುಮಾರ್-ರವೀಶ್ ಕುಮಾರ್-ಬ್ರಾಹ್ಮಣವಾದ
- ಮೂಲ ಇಂಗ್ಲಿಷ್ : ವಿಕಾಸ್ ಕುಮಾರ್ ( ದಲಿತ ಸಂಶೋಧನಾ ವಿದ್ಯಾರ್ಥಿ, ಐತಿಹಾಸಿಕ ಅಧ್ಯಯನ ಕೇಂದ್ರ. ಜೆಏನ್ ಯು),-ರಿತು (ಓಬಿಸಿ ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ,ದೆಹಲಿ ವಿಶ್ವವಿದ್ಯಾಲಯ)
- ಅನುವಾದ: ಹರೀಶ್ ಎಂ ಜಿ
ಇಂದು ಪ್ರಖ್ಯಾತ ಯುವ ನಾಯಕನೆಂದು ಕರೆಸಿಕೊಳ್ಳುವ ಕನಯ್ಯ ಕುಮಾರ್ ಹೆಸರುವಾಸಿಯಾಗಿದ್ದು 9 ಫೆಬ್ರವರಿ 2016 ಜೆಏನ್ ಯುದಲ್ಲಿ ನಡೆದ ಘಟನೆಯಿಂದಾಗಿ. ಆಗ ಕನಯ್ಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ. ಆತ ಮುಗ್ಧ. ಆತನ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಮಾಡಿ ಈ ವಿವಾದಗಳಿಗೆ ಎಳೆದುತರಲಾಗಿದೆಯೆಂದು ಎಡಪಂಥಿಯ ಲಿಬರಲ್ ಮೀಡಿಯಾದವರು ಅನುಕಂಪ ವ್ಯಕ್ತಪಡಿಸಿದ್ದರು.
ಲೆಫ್ಟ್ ಲಿಬರಲ್ ದೃಶ್ಯ ಮಾಧ್ಯಮಗಳು ಕೊಟ್ಟ ನಿರಂತರ ಪ್ರಚಾರದಿಂದ ಕನಯ್ಯಗೆ ಭಾರತೀಯ ರಾಜಕೀಯ ರಂಗದ ಬಾಗಿಲುಗಳು ತೆರೆದುಕೊಂಡವು. ಸಾವಿರಾರು ವೇದಿಕೆಗಳಿಗೆ ಆತನನ್ನು ಆಹ್ವಾನಿಸಲಾಯಿತು. ಅತ್ಯತ್ತಮ ವಾಗ್ಮಿ, ಭವಿಷ್ಯದ ನಾಯಕನೆಂದು ಮೆರೆಸಲಾಯಿತು.
ಜೆಏನ್ ಯು ಘಟನೆಯ ನಂತರ, ವಿದ್ಯಾರ್ಥಿ ಸಂಘಟನೆಯ ನಾಯಕನಾಗಿ ಕನಯ್ಯ “ ಆಜಾದಿ” ಘೋಷಣೆಯನ್ನ ಜನಪ್ರಿಯಗೊಳಿಸಿದ. ಸಾಕಷ್ಟು ಬಿಜೆಪಿ ಮುಖಂಡರ ಜೊತೆ ಹಲವಾರು ಚರ್ಚೆಗಳಲ್ಲಿ ಭಾಗವಹಿಸಿದ. ಜೆಏನ್ ಯು ಘಟನೆಯ ಇನೊಬ್ಬ ಆರೋಪಿ ಉಮರ್ ಖಾಲಿದ್ ಕುರಿತು ಭಾರತೀಯ ಮೀಡಿಯಾ ಬೇರೆಯದೇ ಅಪ್ರೋಚ್ ಅನುಸರಿಸಿತ್ತೆನ್ನುವುದು ಇಲ್ಲಿ ಗಮನಾರ್ಹ.
ಖಾಲಿದ್ ಇಂದಿಗೂ ಬಲ ಪಂಥಿಯರ ಪ್ರಮುಖ ಟಾರ್ಗೆಟ್ ಆಗಿಯೇ ಉಳಿದಿದ್ದಾನೆ. ಮೀಡಿಯಾ ಮತ್ತು ಪ್ರಭುತ್ವ ಕನಯ್ಯ ಮತ್ತು ಉಮರ್ ನನ್ನ ನೆಡಸಿಕೊಂಡ ರೀತಿ ಹಾಗು ಅವರ ನಡುವಿನ ವ್ಯತ್ಯಾಸ, ಅವರ ವಿಭಿನ್ನ ಅಸ್ಮಿತೆಯಲ್ಲಿಯೇ ಇದೆ. ಕನಯ್ಯ ಮೇಲ್ಜಾತಿ ಹಿಂದೂ ಭೂಮಿಹಾರ ಸಮುದಾಯಕ್ಕೆ ಸೇರಿದರೆ, ಉಮರ್ ಒಬ್ಬ ಮುಸ್ಲಿಂ.
ಕನಯ್ಯ ಕುಮಾರ್ ತನ್ನ ಈ ಅಸ್ಮಿತೆಯನ್ನ ಹಲವು ಬಾರಿ ಮರೆಮಾಚಿದರು ಅಥವಾ ಅಷ್ಟಾಗಿ ಹೇಳಿಕೊಳ್ಳದಿದ್ದರು, ಬೇಗುಸರೈ ಚುನಾವಣೆ ವೇಳೆಯಲ್ಲಿ ಆತ ತನ್ನ ಮೇಲ್ಜಾತಿ ಹಿಂದೂ ಅಸ್ಮಿತೆಯೊಂದಿಗೆ ಗುರುತಿಸಿಕೊಳ್ಳುತ್ತಿದ್ದುದು ಸ್ಪಷ್ಟವಾಗಿತ್ತು.
ಬೇಗುಸರೈ ಕ್ಷೇತ್ರದ ಪ್ರಬಲ ಪ್ರತಿಸ್ಪರ್ಧಿ ಗಿರಿರಾಜ್ ಸಿಂಗ್ ಕೂಡ ಭೂಮಿಹಾರ್ ಸಮುದಾಯಕ್ಕೆ ಸೇರಿದ್ದವರೇ. ಭೂಮಿಹಾರ್ ಸಮುದಾಯದ ರಾಜಕೀಯಕ್ಕೆ ಖ್ಯಾತವಾಗಿದ್ದ ಕ್ಷೇತ್ರದಿಂದ ಅದೇ ಸಮುದಾಯಕ್ಕೆ ಸೇರಿದವರ ನಡುವೆ ಹಣಾಹಣಿ ನಡೆಯಿತು. ಸ್ಥಳ ಮತ್ತು ನೆಲ ಮನುಷ್ಯನಲ್ಲಿ ಇಷ್ಟೆಲ್ಲಾ ಬದಲಾವಣೆಯನ್ನ ತರಬಹುದು!
2015-16ರಲ್ಲಿ ಜೆಏನ್.ಯು ಅಂಬೇಡ್ಕರ್ ವಾದದ ನೆರಳಿನಲ್ಲಿತ್ತು. ಹೈದರಬಾದ್ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆಗೆ ಶರಣಾದ ರೋಹಿತ್ ವೇಮುಲರ ಘಟನೆಯನ್ನ ರಾಜಕೀಯಕ್ಕಾಗಿ ಕನಯ್ಯ ತುಂಬಾ ಚನ್ನಾಗಿಯೇ ಬಳಸಿಕೊಂಡರು. ದಬ್ಬಾಳಿಕೆಗೆ ಒಳಪಟ್ಟ, ದಮನಿತ ಸಮಾಜದ ವಿಷಯಗಳಲ್ಲಿ ಕುಮಾರ್ ತನ್ನನ್ನ ತಾನು ತೊಡಗಿಸಿಕೊಂಡ. ಶೋಷಿತರ ಬಗ್ಗೆ ಮಾತನಾಡುವವರಲ್ಲಿ ಅಗ್ರಗಣ್ಯನಾದ.
ಮೀಡಿಯಾ ಕೂಡ ಈತನನ್ನ ಜಾತಿರಹಿತವಾಗಿಯೇ (casteless) ಬಿಂಬಿಸಿತು. ದಲಿತರ, ಶೋಷಿತರ, ದಮನಿತರ, ಹಿಂದುಳಿದ ವರ್ಗದವರ ರಾಜಕೀಯವನ್ನ, ದನಿಯನ್ನ ಮೇಲ್ಜಾತಿಯ ಕುಮಾರ್ ಸ್ವಾಧೀನಪಡಿಸಿಕೊಂಡಿದ್ದ, ತನ್ನದಾಗಿಸಿಕೊಂಡಿದ್ದ. ಹೀಗೆ ಸದಾ ವಂಚಿಸುವ ಮೇಲ್ಜಾತಿಯ ರಾಜಕೀಯ ಬಗ್ಗೆ ಯೋಚಿಸುವ ವ್ಯವಧಾನ ಭಾರತದಲ್ಲಾಗಲಿ ಜೆಏನ್ ಯುದಲ್ಲಾಗಲಿ ಇರಲಿಲ್ಲ.
ಬ್ರಹ್ಮಣವಾದಿ ಮೀಡಿಯಾಗಳು ನಿರ್ಲಜ್ಜ ರಾಜಕೀಯ
ಎಲ್ಲ ಮೇಲ್ಜಾತಿ ಮೀಡಿಯಾದವರು ಕನಯ್ಯಾನಿಗೆ ಅತಿಯಾಗಿ ಪ್ರಾಮುಖ್ಯತೆ ನೀಡಿದರೂ ಏನ್ ಡಿ ಟಿವಿಯ ಲಿಬರಲ್ ಪತ್ರಕರ್ತ ರವೀಶ್ ಕುಮಾರ್ ಒಂದು ಹೆಜ್ಜೆ ಮುಂದೆ ಹೋಗಿ ಕನಯ್ಯನಿಗೆ ವಿಶೇಷ ಗಮನ ನೀಡಿ ರಾತ್ರೋರಾತ್ರಿ ಸೆಲೆಬ್ರೆಟಿ ಮಾಡಿಬಿಟ್ಟ. ಜೆಏನ್ ಯು ವಿವಾದ ಸಮಯದಲ್ಲಿ ರವೀಶ್ ಕುಮಾರ್ ಕನಯ್ಯನಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತರೆ, 2019 ಬೇಗುಸರೈ ಚುನವಾಣೆ ವೇಳೆಗೆ ಅಲ್ಲಿಗೇ ಹೋಗಿ ಮೂರೂ ಬಾರಿ ಸುದೀರ್ಘ ಸಂದರ್ಶನ ನಡೆಸಿದ.
ಶಿಥಿಲಾವಸ್ತೆಯಲ್ಲಿದ ಆತನ ಮನೆ, ಅಂಗನವಾಡಿಯಲ್ಲಿ ಕೆಲಸ ಮಾಡುವ ಕನಯ್ಯನ ತಾಯಿ, ಗಾರ್ಡ್ ಕೆಲಸ ಮಾಡುವ ಸಹೋದರನ ಕುರಿತು ವರದಿಗಳು ಪ್ರಸಾರ ಮಾಡಿದ. ರವೀಶ್ ಕುಮಾರ ಕನಯ್ಯನನ್ನು ಕೆಳವರ್ಗದ ಬಡ ಅಭ್ಯರ್ಥಿಯೆಂದು ಬಿಂಬಿಸಿ, ಭಾರತೀಯ ಚುನಾವಣ ಇತಿಹಾಸದಲ್ಲೇ ಇದೊಂದು ವಿಶಿಷ್ಟಗಳಿಗೆಯೆಂದು ಕೊಂಡಾಡಿದ. ಹಣಬಲ, ತೋಳ್ಬಲಗಳ ಸಹಾಯವಿಲ್ಲದೆ ಸ್ಪರ್ಧಿಸುತ್ತಿರುವುದು ವಿಶೇಷವೆಂದ. ಸಮಾಜದ ಅಂಚಿನಲ್ಲಿರುವವರ ನೇತಾರನೆಂದ.
ರವೀಶ್ ಕುಮಾರ್ ಸ್ವತಃ ಬಿಹಾರಕ್ಕೆ ಸೇರಿದ ಮೇಲ್ಜಾತಿಯವನು. ಆತ ಕನಯ್ಯನನ್ನು ಸುರಕ್ಷಿತ ಜಾಗದಲ್ಲಿ ಕುಳ್ಳಿರಿಸಿದ. ಮೇಲ್ಜಾತಿಯ ಸವಲತ್ತು ಮತ್ತು ಕನಯ್ಯನ ರಾಜಕೀಯದಲ್ಲಿ ಅದರ ಪ್ರಭಾವನ್ನ ತುಂಬ ಸುಲಭವಾಗಿ ಕಡೆಗಣಿಸಿ ಮರೆಮಾಚಿದ. ಭೂಮಿಹಾರ್ ಸಮುದಾಯಕ್ಕೆ ಸೇರಿದವರಿಗೆ ಬಿಹಾರದಲ್ಲಿ ಸಿಗುವ ಸ್ಥಾನ-ಮಾನಗಳ ಕುರಿತು ಚರ್ಚಿಸಲೇ ಇಲ್ಲ ಅಥವಾ ಅದನ್ನ ನಾಜೂಕಾಗಿ ಪಕ್ಕಕ್ಕೆ ಸರಿಸಿದ.
ಐತಿಹಾಸಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೇಗುಸರೈ ಕ್ಷೇತ್ರದಲ್ಲಿ ಮೇಲ್ಜಾತಿ ಭೂಮಿಹಾರ್ ಸಮುದಾಯದವರ ಪ್ರಾಬಲ್ಯ ಕುರಿತು ಒಂದು ಪ್ರಶ್ನೆಯನ್ನೂ ಕೇಳಲಿಲ್ಲ. ಮೇಲ್ಜಾತಿಯಲ್ಲಿ ಹುಟ್ಟಿದ್ದರಿಂದ ಕನಯ್ಯನಿಗೆ ಸಿಕ್ಕ ಲಾಭಗಳ, ಅವಕಾಶಗಳ ಬಗ್ಗೆ ರವೀಶ್ ಮಾತಾನಾಡಲಿಲ್ಲ. ಎಲ್ಲ ಲಿಬರೆಲ್ಗಳಂತೆ ಕನಯ್ಯ ಕೂಡ ಜಾತಿರಹಿತನಾದ. ಆದರೆ ಕ್ಷೇತ್ರದ ಜನ ಜಾತಿಯ ಹೊರತಾಗಿ ಕನಯ್ಯನನ್ನು ಪರಿಗಣಿಸಿದರೆ?
28 ಸೆಪ್ಟೆಂಬರ್ 2021 ರಂದು ಕನಯ್ಯ ವಿಧ್ಯುಕ್ತವಾಗಿ ಕಾಂಗ್ರೆಸ್ ಪಾರ್ಟಿ ಸೇರಿದ. ಏನ್ ಡಿಟಿವಿ ಕನಯ್ಯನನ್ನು ವಿದ್ಯಾರ್ಥಿಗಳ ನಾಯಕನೆಂದು ಕರೆದರೆ, ಜಿಗ್ನೇಶ್ ಮೆವಾನಿಯನ್ನ ಗುಜರಾತ್ನ ದಲಿತ ನಾಯಕನೆಂದು ಕರೆಯಿತು. ಈ ಚಾನಲ್ ಚುನಾಯಿತ ಎಂಎಲ್ಎ ಮೆವಾನಿಯನ್ನ ದಲಿತ ಸಮುದಾಯಕ್ಕೆ ಸೇರಿದ ಪ್ರಾಂತೀಯ ನಾಯಕನೆಂದರೆ, ಕನಯ್ಯನನ್ನು ವಿದ್ಯಾರ್ಥಿ ನಾಯಕನೆಂದು ಹೆಸರಿಸಿ ಆತನ ಮೇಲ್ಜಾತಿಯ ಅಸ್ಮಿತೆಯನ್ನೇ ಮುಚ್ಚಿಹಾಕಿ ಅತನನ್ನ ಜಾತಿರಹಿತನನ್ನಾಗಿ ಮಾಡಿಬಿಟ್ಟಿತು.
ಸಮಾರೋಪ
2019ರ ಲೋಕಸಭಾ ಚುನಾವಣೆ ಕನಯ್ಯನನ್ನ ಜನನಾಯಕ, ಸಾಮಾಜಿಕ ನ್ಯಾಯದ ಹರಿಕಾರನೆಂದು ಬಿಂಬಿಸಲಾಯಿತು. ಎಡ ಪಂಥೀಯ ಬುದ್ದಿಜೀವಿಗಳು ಹಾಗು ಪತ್ರಕರ್ತರು ಕನಯ್ಯ ಕುಮಾರ್ನಂತವರು ಭಾರತೀಯ ರಾಜಕಾರಣಕ್ಕೆ ಅತ್ಯಾವಶ್ಯಕನೆಂದು ಜನರಿಗೆ ಪದೇ ಪದೆ ಹೇಳಿದರು. ಕಮ್ಯುನಿಸ್ಟ್ ಪಾರ್ಟಿಯಿಂದ ಆತ ಚುನಾವಣ ಕಣಕ್ಕಿಳಿದರಿಂದ ಪ್ರಶಂಸಿಸಲಾಯಿತು. ಆತ ತನ್ನ ಖ್ಯಾತಿಯನ್ನ ಬಳಸಿಕೊಂಡು ಕಳೆಗುಂದಿದ ಕಮ್ಯುನಿಸ್ಟ್ ಪಾರ್ಟಿಗೆ ಹೊಸ ಚೈತನ್ಯವನ್ನೂ ತುಂಬಿದ.
ಚುನಾವಣೆ ವೇಳೆಯಲ್ಲಿ ರೋಟಿ ಹಾಗು ರೋಜ್ಗಾರ್ ಗಾಗಿ ಹೋರಾಟ ಮಾಡುತ್ತಿದೇನೆಂದು ಹೇಳಿದ. ಬೇರೆಲ್ಲ ಮೇಲ್ಜಾತಿ ನಾಯಕರಂತೆ, ಬಿಹಾರದ ಜಾತಿ ಆಧಾರಿತ ಶೋಷಣೆ ಕುರಿತು ಮಾತನಾಡಲಿಲ್ಲ. ಬಿಹಾರದಲ್ಲಿ ಬಹುಜನರ ಮೇಲೆ ಮೇಲ್ಜಾತಿ/ ಮತ್ತವನ ಜಾತಿಯವರೇ ನಡೆಸುವ ದೌರ್ಜನ್ಯಗಳ ಬಗ್ಗೆ ತನ್ನನ್ನ ತಾನು ಪ್ರಶ್ನಿಸಿಕೊಳ್ಳಲೆ ಇಲ್ಲ. ಆತನ ಚುನಾವಣ ಅಭಿಯಾನವೆಲ್ಲಾ ಮೋದಿಯವರಿಂದ ಉತ್ತರ ಕೇಳುವುದೇ ಆಗಿತ್ತು.
28 ಸೆಪ್ಟೆಂಬರಂದು ಆತ ಕಮ್ಯುನಿಸ್ಟನಾಗಿ ಉಳಿಯದೆ, ಗಾಂಧಿಯ ಅನುಯಾಯಿಯಾದ. ಕಾಂಗ್ರೆಸ್ ಸೇರ್ಪಡೆ ಸಮಯದಲ್ಲಿ ಮಾಡಿದ ಪತ್ರಿಕಾ ಗೋಷ್ಠಿಯಲ್ಲಿ ಗಾಂಧಿಯನ್ನ ಹಲವು ಬಾರಿ ಹಾಡಿ ಹೊಗಳಿದ. ಅಂಬೇಡ್ಕರ್, ಭಗತ್ ಸಿಂಗ್ ನಾಮಕಾವಸ್ತೆ ಭಾಷಣದಲ್ಲಿ ಬಂದು ಹೋದರು. ಹೀಗೆ ಕನಯ್ಯ ಸಂಪೂರ್ಣ ಗಾಂಧಿವಾದಿಯಾದ. ಕಮ್ಯುನಿಸ್ಟ್ ಪಾರ್ಟಿ ನಿಧಾನ ಗತಿಯಲ್ಲಿ ಕೆಲಸ ಮಾಡುತ್ತದೆ ಅದಕ್ಕೆ ಕಾಂಗ್ರೆಸ್ ಪಾರ್ಟಿಗೆ ಸೇರಿದೆನೆಂದ.
ಕನಯ್ಯ ಕಾಂಗ್ರೆಸ್ ಪಾರ್ಟಿಯಲ್ಲಿ ಯಾವ ಯಾವ ಬದಲಾವಣೆ ತರುತ್ತಾನೋ ಅದನ್ನ ಈಗಲೇ ಊಹಿಸುವುದು ಕಷ್ಟ. ಒಳಕಿತ್ತಾಟ, ಅಸೂಯೆಯ ಗೂಡಾಗಿರುವ ಕಾಂಗ್ರೆಸ್ ಪಾರ್ಟಿಯ ಹಿರಿಯ ನಾಯಕರು ಕನಯ್ಯ ವಿರುದ್ಧ ಅಸಮಾದಾನ ಹೊರಹಾಕಿ ಮತ್ತಷ್ಟು ಕಾಂಗ್ರೆಸ್ನ ಕುಸಿಯಲು ಕಾರಣನಾಗುವನೋ ಕಾದುನೋಡಬೇಕು.
ಕಮ್ಯುನಿಸ್ಟ್ ಪಾರ್ಟಿ ತನ್ನ ತೆಳುವಾದ ಸಿದ್ದಾಂತಗಳನ್ನ, ಸದಾ ಅಲುಗಾಡುವ ನಾಯಕತ್ವ ಬಗ್ಗೆ ಗಮನಹರಿಸಬೇಕು. ಒಂದಂತೂ ಸತ್ಯ ಕನಯ್ಯ ಕುಮಾರನ ಮೇಲ್ಜಾತಿ ಭೂಮಿಹಾರ್ ಹಿನ್ನಲೆ, ಮೀಡಿಯಾ ಬೆಂಬಲ ಆತನ ರಾಜಕೀಯ ಯಾನವನ್ನ ನಿರ್ವಿಘ್ನವಾಗಿಸಿದೆ. ಸಮಾಜದ ಅಂಚಿನಿಂದ ಬರುವವರ, ದಮನಿತರ ರಾಜಕೀಯ ಯಾನ ಎಂದಿಗೂ ಇಷ್ಟು ಸಲೀಸಾಗಿರದು.
ಕ್ಲಿಕ್ ಮಾಡಿ ಮೂಲ ಲೇಖನ ಓದಿ : Brahmanwad : Ravish Kumar and Kanhaiya Kumar
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!
ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣಗಳ ನಡುವೆ ನೀರಿನ ಹರಿವನ್ನು ನಿಯಂತ್ರಿಸುವ ವಿಶೇಷ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಯೋಜನೆಯಡಿ ಸುಮಾರು 65 ಕಿ.ಮೀ. ಉದ್ದದ ನೀರಿನ ಮಾರ್ಗ ನಿರ್ಮಿಸುವ ಚಿಂತನೆ ನಡೆದಿದೆ.
ನಗರದಲ್ಲಿ ಮಳೆ ಸುರಿದಾಗ ರಸ್ತೆಗಳು ಜಲಾವೃತವಾಗುವುದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗುವುದು ಹಾಗೂ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುವುದು ಸಾಮಾನ್ಯವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನೀರಿನ ಹರಿವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಪ್ರಮುಖ ಗುರಿಯಾಗಿದೆ.
http://Visit : www.suddidina.com
ಮೆಟ್ರೋ ಮಾರ್ಗದ ಸಮೀಪ ವಿಶೇಷ ವ್ಯವಸ್ಥೆ
ಬಿನ್ನಿಗಾನಹಳ್ಳಿ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳ ಮಧ್ಯದಲ್ಲಿರುವ ಓಲ್ಡ್ ಮದ್ರಾಸ್ ಗರ್ದನ್ಸೇತುವೆಯಲ್ಲಿ ಪ್ರಸಕ್ತ ನೀರು ಹರಿವಿಗೆ ಸಂಬಂಧಿಸಿದ ನಿಯಂತ್ರಣ ಕಾಮಗಾರಿ ನಡೆಯುತ್ತಿದೆ. ತಾಂತ್ರಿಕ ತಂಡದ ಪರಿಶೀಲನೆ ಬಳಿಕ ಗರ್ದನ್ಸೇತುವೆ ಸುರಕ್ಷತಾ ತಪಾಸಣೆ ನಡೆಸಲಾಗಿದ್ದು, ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸುವುದರಿಂದ ಜಲಾವೃತ ಸಮಸ್ಯೆಯನ್ನು ಕಡಿಮೆ ಮಾಡುವ ನಿರೀಕ್ಷೆ ಇದೆ. ನಗರದಲ್ಲಿ ಮಳೆಗಾಲದ ಸಂದರ್ಭದಲ್ಲಿ ನೀರು ನಿಂತು ಉಂಟಾಗುವ ಸಮಸ್ಯೆಗಳಿಗೆ ಇದು ಪ್ರಮುಖ ಪರಿಹಾರ ಕ್ರಮವಾಗಬಹುದು.
ರೈಲು ಸಂಚಾರಕ್ಕೂ ಸುರಕ್ಷತೆ
ರೈಲು ಸುರಕ್ಷತಾ ನಿಯಮಗಳ ಪ್ರಕಾರ ತಾಂತ್ರಿಕ ಮೇಲ್ವಿಚಾರಣೆ ನಡೆಸಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಿರಂತರ ಮಳೆ ಸುರಿದ ಸಂದರ್ಭದಲ್ಲೂ ರೈಲು ಸಂಚಾರಕ್ಕೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಜಾರಿಗೆ ತರಲಾಗಿದೆ.
ರೈಲು ಸಂಪರ್ಕ ಇರುವ ಪ್ರದೇಶಗಳಲ್ಲಿ ನೀರು ಸಂಗ್ರಹವಾಗುವುದರಿಂದ ಹಳಿಗಳ ಸುರಕ್ಷತೆ ಹಾಗೂ ರೈಲು ಸಂಚಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ನೀರು ಹರಿವಿನ ವ್ಯವಸ್ಥೆಯನ್ನು ಸುಧಾರಿಸುವುದರ ಜೊತೆಗೆ ರೈಲು ಮೂಲಸೌಕರ್ಯದ ಸುರಕ್ಷತೆಯನ್ನೂ ಗಮನದಲ್ಲಿಟ್ಟುಕೊಂಡು ಕಾಮಗಾರಿ ನಡೆಸಲಾಗುತ್ತಿದೆ.
ಮುಂದಿನ ಹಂತದಲ್ಲಿ ದೊಡ್ಡ ಯೋಜನೆ
ಈ ನೀರಿನ ನಿರ್ವಹಣಾ ಕಾಮಗಾರಿಯ ಆಚ್ಚೋಬಲದಂದೇ ವಾರದೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಇದೆ. ಕಾಮಗಾರಿ ಮುಗಿದ ಬಳಿಕ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ವ್ಯವಸ್ಥೆ ರೂಪಿಸಲಾಗುತ್ತದೆ. ಮುಂದಿನ ಹಂತದಲ್ಲಿ ಮಳೆ ನೀರು ಸಂಗ್ರಹಣೆ ಹಾಗೂ ನೀರಿನ ಹರಿವಿನ ನಿರ್ವಹಣೆಯನ್ನು ಇನ್ನಷ್ಟು ಬಲಪಡಿಸುವ ಯೋಜನೆಗಳೂ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
ನಗರದ ವೇಗದ ಬೆಳವಣಿಗೆಗೆ ತಕ್ಕಂತೆ ಮೂಲಸೌಕರ್ಯ ವಿಸ್ತರಣೆ ನಡೆಯುತ್ತಿರುವ ಸಂದರ್ಭದಲ್ಲಿ ಮಳೆ ನೀರು ನಿರ್ವಹಣೆ ಬೆಂಗಳೂರಿಗೆ ಅತ್ಯಂತ ಅಗತ್ಯವಾಗಿದೆ. 65 ಕಿ.ಮೀ. ನೀರು ಮಾರ್ಗದ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾದರೆ, ಮಳೆಗಾಲದ ಜಲಾವೃತ ಸಮಸ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆಯಾಗಲಿದೆ.

ದಿನದ ಸುದ್ದಿ
ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್ಮೆಂಟ್ಗೆ ‘ಡೆಮಾಲಿಷನ್’ ಶುರು!
ಕೂಡ್ಲುಗೇಟ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ
ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ ಕೂಡ್ಲುಗೇಟ್ನ ಎಸ್ಎನ್ಎನ್ ಎಸ್ಟೇಟ್ ಒಡೆತನದ 18 ಅಂತಸ್ತಿನ ಕಟ್ಟಡದ ತೆರವು ಕಾರ್ಯಾಚರಣೆ ಶುಕ್ರವಾರದಿಂದ ಆರಂಭವಾಗಿದೆ. ಬೆಂಗಳೂರಿನ ಗಮನ ಸೆಳೆದಿದ್ದ ಈ ಪ್ರಕರಣದಲ್ಲಿ ಎಸ್ಎನ್ಎನ್ ರಾಜ್ ಕಾರ್ಪ್ ಸಂಸ್ಥೆಯು ಎಚ್ಎಸ್ಆರ್ ಲೇಔಟ್ನಲ್ಲಿರುವ ತನ್ನ ಎಸ್ಎನ್ಎನ್ ರಾಜ್ ಎಟರ್ನಿಯಾ ಪ್ರೀಮಿಯಂ ವಸತಿ ಸಂಕೀರ್ಣದ 49 ಅಪಾರ್ಟ್ಮೆಂಟ್ ಘಟಕಗಳನ್ನು ನಿಯಂತ್ರಿತ ರೀತಿಯಲ್ಲಿ ಕೆಡವುವ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಒಟ್ಟು 972 ಮನೆಗಳನ್ನು ಹೊಂದಿರುವ ಈ ವಸತಿ ಯೋಜನೆಯಲ್ಲಿನ 49 ಘಟಕಗಳ ತೆರವು ಈಗ ಭಾರಿ ಕುತೂಹಲ ಮೂಡಿಸಿದೆ. ಕಟ್ಟಡದ ಸುರಕ್ಷತೆ ಕುರಿತು ತಾಂತ್ರಿಕ ಪರಿಶೀಲನೆ ನಡೆಸಿದ ಬಳಿಕ ಈ ಕ್ರಮಕ್ಕೆ ಮುಂದಾಗಲಾಗಿದೆ.
₹200 ಕೋಟಿ ವೆಚ್ಚದ ಕಟ್ಟಡದಲ್ಲಿ ದೋಷ ಪತ್ತೆ
ಸುಮಾರು ₹200 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಕಟ್ಟಡ ಇದಾಗಿದೆ. ತಾಂತ್ರಿಕ ಪರಿಶೀಲನೆ ವೇಳೆ ಕಟ್ಟಡದ ರಚನೆಯಲ್ಲಿ ಹಾನಿಯಾಗಿರುವುದು ಹಾಗೂ ಕಟ್ಟಡ ವಾಲಿರುವುದು ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ನಿವಾಸಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಕಟ್ಟಡದ ನಿರ್ದಿಷ್ಟ ಭಾಗಗಳನ್ನು ತೆರವುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ತೆರವು ಕಾರ್ಯಾಚರಣೆಯನ್ನು ಯಾವುದೇ ರೀತಿಯ ಆತಂಕ ಅಥವಾ ಅಪಾಯ ಉಂಟಾಗದಂತೆ ಅತ್ಯಂತ ನಿಯಂತ್ರಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಕಟ್ಟಡ ತೆರವು ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೂ ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.
ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ
ತೆರವು ಕಾರ್ಯವನ್ನು ಮುಂಬೈ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದೆ ಎಂದು ಎಸ್ಎನ್ಎನ್ ಅಪಾರ್ಟ್ಮೆಂಟ್ ನಿರ್ದೇಶಕ ಅನೂಜ್ ತಿಳಿಸಿದ್ದಾರೆ. ಫ್ಲ್ಯಾಟ್ಗಳನ್ನು ಹಂತ ಹಂತವಾಗಿ ತೆರವುಗೊಳಿಸುವ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಈ ಕುರಿತು ಮಾತನಾಡಿರುವ ಅವರು, ಬಿಬಿಎಂಪಿಗೂ ಸಂಸ್ಥೆಯ ವತಿಯಿಂದ ಪತ್ರ ಬರೆಯಲಾಗಿದೆ ಎಂದು ತಿಳಿಸಿದ್ದಾರೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ತೆರವು ಕಾರ್ಯ ನಡೆಸಲಾಗುವುದು ಎಂಬ ಭರವಸೆಯನ್ನೂ ನೀಡಿದ್ದಾರೆ.
ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಾಣ
ಪ್ರಸ್ತುತ ಕಟ್ಟಡದ ತೆರವು ಕಾರ್ಯ ಪೂರ್ಣಗೊಂಡ ಬಳಿಕ ಅದೇ ಜಾಗದಲ್ಲಿ ಹೊಸ ಅಪಾರ್ಟ್ಮೆಂಟ್ ನಿರ್ಮಿಸುವ ಯೋಜನೆ ಇದೆ ಎಂದು ಸಂಸ್ಥೆ ತಿಳಿಸಿದೆ. ಈಗಾಗಲೇ ಕೆಲವು ಫ್ಲ್ಯಾಟ್ಗಳು ಮುಂಗಡವಾಗಿ ಬುಕ್ ಆಗಿದ್ದ ಹಿನ್ನೆಲೆಯಲ್ಲಿ ಖರೀದಿದಾರರೊಂದಿಗೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವುದಾಗಿ ಸಂಸ್ಥೆ ಹೇಳಿದೆ.
ಯಾರಿಗೂ ತೊಂದರೆಯಾಗದಂತೆ ಸಂಪೂರ್ಣ ಪ್ರಕ್ರಿಯೆ ನಡೆಸುವುದಾಗಿ ಸ್ಪಷ್ಟಪಡಿಸಿರುವ ಸಂಸ್ಥೆ, ನಿವಾಸಿಗಳು ಹಾಗೂ ಖರೀದಿದಾರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಕ್ರಮ ಕೈಗೊಳ್ಳಲಿದೆ.

ದಿನದ ಸುದ್ದಿ
ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!
ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು 35 ಮತಗಳನ್ನು ಪಡೆಯುವ ಮೂಲಕ ಜಯಗಳಿಸಿದ್ದು, ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ಮತ್ತೊಮ್ಮೆ ತನ್ನದಾಗಿಸಿಕೊಂಡಿದ್ದಾರೆ. ಬಿಜೆಪಿಯ ಅಭ್ಯರ್ಥಿಗಳು 29 ಮತಗಳನ್ನು ಪಡೆದು ಹಿನ್ನಡೆ ಅನುಭವಿಸಿದ್ದಾರೆ.
ಈ ಫಲಿತಾಂಶದೊಂದಿಗೆ ಕಲಬುರಗಿ ಮಹಾನಗರ ಪಾಲಿಕೆಯ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.
ಮೇಯರ್ ಸ್ಥಾನಕ್ಕೆ ಅಜಿಲ್ ಅಹಮದ್ ಗೋಲಾ
ಈ ಚುನಾವಣೆಯಲ್ಲಿ 21ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಅಜಿಲ್ ಅಹಮದ್ ಗೋಲಾ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಮತದಾನದ ಬಳಿಕ ಕಾಂಗ್ರೆಸ್ ಅಭ್ಯರ್ಥಿಗೆ ಬಹುಮತ ದೊರೆತಿದ್ದು, ಅವರು ಮೇಯರ್ ಸ್ಥಾನವನ್ನು ಅಲಂಕರಿಸಿದ್ದಾರೆ.
ಪಾಲಿಕೆಯ ಮುಂದಿನ ಆಡಳಿತದಲ್ಲಿ ಮೇಯರ್ ಸ್ಥಾನ ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಅಜಿಲ್ ಅಹಮದ್ ಗೋಲಾ ಅವರ ಆಯ್ಕೆ ಇದೀಗ ಗಮನ ಸೆಳೆದಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ 35 ಮತಗಳು ದೊರೆತಿರುವುದು ಚುನಾವಣೆಯಲ್ಲಿ ಪಕ್ಷದ ಬಲವನ್ನು ತೋರಿಸಿದೆ.
ಉಪ ಮೇಯರ್ ಸ್ಥಾನವೂ ಕಾಂಗ್ರೆಸ್ ಪಾಲು
20ನೇ ವಾರ್ಡ್ನ ಕಾಂಗ್ರೆಸ್ ಸದಸ್ಯೆ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ದೊರೆತ ಬಹುಮತದ ಹಿನ್ನೆಲೆಯಲ್ಲಿ ಫಹಾನಾ ಖಮ್ರೋ ಜಗೀರ್ದಾರ್ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಹಾಗೂ ಉಪ ಮೇಯರ್ ಎರಡೂ ಸ್ಥಾನಗಳು ಕಾಂಗ್ರೆಸ್ ಪಾಲಾಗಿರುವುದರಿಂದ ಪಾಲಿಕೆಯ ಆಡಳಿತದ ಮೇಲೆ ಪಕ್ಷದ ಹಿಡಿತ ಮತ್ತಷ್ಟು ಬಲಗೊಂಡಿದೆ.
ಆಗಸ್ಟ್ 7ರಿಂದ ಆಗಸ್ಟ್ 29ಕ್ಕೆ ಮುಂದೂಡಿಕೆ
ಆರಂಭದಲ್ಲಿ ಈ ಚುನಾವಣೆ ಆಗಸ್ಟ್ 7ರಂದು ನಡೆಯಬೇಕಿತ್ತು. ಆದರೆ ಕೆಲವು ಅನಿವಾರ್ಯ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು. ಬಳಿಕ ಪ್ರಾದೇಶಿಕ ಆಯುಕ್ತರ ಆದೇಶದ ನಂತರ ಪರಿಷ್ಕೃತ ದಿನಾಂಕ ನಿಗದಿಪಡಿಸಿ ಆಗಸ್ಟ್ 29ರಂದು ಚುನಾವಣೆ ನಡೆಸಲಾಯಿತು.
ಅದರಂತೆ ಶನಿವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಮೇಯರ್ ಹಾಗೂ ಉಪ ಮೇಯರ್ ಸ್ಥಾನಗಳನ್ನು ಗೆದ್ದುಕೊಂಡಿದ್ದಾರೆ. ಒಟ್ಟು ಮತಗಳ ಲೆಕ್ಕಾಚಾರದಲ್ಲಿ ಕಾಂಗ್ರೆಸ್ 35 ಮತಗಳನ್ನು ಪಡೆದರೆ, ಬಿಜೆಪಿ 29 ಮತಗಳಿಗೆ ಸೀಮಿತವಾಯಿತು.
ಈ ಮೂಲಕ ಕಲಬುರಗಿ ಮಹಾನಗರ ಪಾಲಿಕೆಯ 24ನೇ ಅವಧಿಯ ಆಡಳಿತದ ಚುಕ್ಕಾಣಿ ಮತ್ತೊಮ್ಮೆ ಕಾಂಗ್ರೆಸ್ ಕೈಗೆ ಬಂದಂತಾಗಿದೆ. ಮುಂದಿನ ದಿನಗಳಲ್ಲಿ ಪಾಲಿಕೆಯ ಅಭಿವೃದ್ಧಿ ಹಾಗೂ ಆಡಳಿತಾತ್ಮಕ ವಿಚಾರಗಳಲ್ಲಿ ಹೊಸ ಮೇಯರ್ ಮತ್ತು ಉಪ ಮೇಯರ್ ಅವರ ಕಾರ್ಯವೈಖರಿ ಹೇಗಿರಲಿದೆ ಎಂಬುದು ಇದೀಗ ಕುತೂಹಲ ಮೂಡಿಸಿದೆ.

-
ಅಂತರಂಗ7 days agoಡಾ. ಆತ್ಮಾರಾಮನ ಆತ್ಮನಿವೇದನೆ | ಮೆಟ್ಟಿಲಿನವನು
-
ದಿನದ ಸುದ್ದಿ4 days agoವಂಚನೆ | ಪ್ರಭಾರ ಕಾರ್ಯಪಾಲಕ ಅಭಿಯಂತರ ಸೋಮ್ಲನಾಯ್ಕ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoಭರವಸೆ ಕೊಟ್ಟು ಯುವಜನರನ್ನು ಮನೆಗೆ ಕಳುಹಿಸಿದ ಸರ್ಕಾರಕ್ಕೆ ಈಗ ಪ್ರತಿಭಟನೆಯ ಬಿಸಿ: ಸೆ.5ಕ್ಕೆ ದೆಹಲಿಯಲ್ಲಿ CJP ಬೃಹತ್ ಮೆರವಣಿಗೆ!
-
ದಿನದ ಸುದ್ದಿ5 days agoKPSC ಪರೀಕ್ಷಾ ಹಗರಣ: 329 ಅಭ್ಯರ್ಥಿಗಳಿಗೆ CID ನೋಟಿಸ್, IAS ಅಧಿಕಾರಿ ವಿರುದ್ಧ ED ಆರೋಪ
-
ದಿನದ ಸುದ್ದಿ4 days agoಇಂಗ್ಲಿಷ್ ಕಲಿಯಲು ಬಂದ ಜಪಾನ್ ಯುವಕ ಜೈಲು ಸೇರಿದ ; 75000 ಪರಿಹಾರ ಪಡೆದ
-
ದಿನದ ಸುದ್ದಿ5 days agoಸರ್ವರ್ ಡೌನ್, ಅಧಿಕಾರಿಗಳ ವಿಳಂಬ: ‘ಎ-ಖಾತೆ’ಗಾಗಿ ಕಾದು ಕುಳಿತ 60 ಸಾವಿರಕ್ಕೂ ಹೆಚ್ಚು ಅರ್ಜಿದಾರರು!
-
ದಿನದ ಸುದ್ದಿ5 days ago₹25 ಕೋಟಿ ಮೌಲ್ಯದ ಬಿಡಿಎ ಆಸ್ತಿ ವಶಕ್ಕೆ: ರಾಜಾಜಿನಗರ ಬಡಾವಣೆಯಲ್ಲಿ ಅನಧಿಕೃತ ನಿರ್ಮಾಣಕ್ಕೆ ಬಿತ್ತು ಬೀಗ
-
ದಿನದ ಸುದ್ದಿ5 days agoಭದ್ರಾ ಡ್ಯಾಂ ನೀರು ಹರಿಸುವಂತೆ ಆಗ್ರಹಿಸಿ ಕರೆ ನೀಡಿದ್ದ ದಾವಣಗೆರೆ ಬಂದ್ ನೀರಸ


