ದಿನದ ಸುದ್ದಿ
ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ : ಡಾ.ಎ.ಬಿ. ರಾಮಚಂದ್ರಪ್ಪ
ಸುದ್ದಿದಿನ, ದಾವಣಗೆರೆ:ಕನ್ನಡ ಆಡಳಿತ ಭಾಷೆಯಾಗಬೇಕು ಎಂಬುದು ನಮ್ಮೆಲ್ಲರ ಬಹುಕಾಲದ ಬೇಡಿಕೆ. ಆದರೆ ಇವತ್ತಿಗೂ ಕನ್ನಡವನ್ನು ಆಡಳಿತ ಭಾಷೆಯಾಗಿ ಪರಿಪೂರ್ಣವಾಗಿ ತಂದುಕೊಳ್ಳ ಲಕ್ಕೆ ಆಗಿಲ್ಲ ಎಂಬ ಆತಂಕದಲ್ಲಿ ನಾವಿದ್ದೇವೆ ಎಂದು ಪ್ರಾಧ್ಯಾಪಕ ಡಾ.ಎ.ಬಿ ರಾಮಚಂದ್ರಪ್ಪನವರು ಎಚ್ಚರಿಸಿದರು.
ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿರುವ10 ನೇ ದಿನದ ಅಂತರ್ಜಾಲ ಮೂಲಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಡಳಿತ ಭಾಷೆಯಾಗಿ ಕನ್ನಡವನ್ನು ತರಬೇಕು ಎಂದು 1963 ರಿಂದ 2002 ರವರೆಗೂ ಒಟ್ಟು 25 ಸುತೋಲೆಗಳು ಸರ್ಕಾರದಿಂದ ಹೊರಬಿದ್ದಿವೆ. ಆದರೂ ಕೂಡ ಆಡಳಿತ ಭಾಷೆಯಾಗಿ ಕನ್ನಡವನ್ನು ಸಂಪೂರ್ಣವಾಗಿ ಇನ್ನೂ ಒಪ್ಪಿಕೊಂಡಿಲ್ಲ ಕಾರಣಗಳೇನು ಎಂದು ನೋಡಿದಾಗ ಕನ್ನಡ ನೆಲದಲ್ಲೇ ಕನ್ನಡವನ್ನು ಆಡಳಿತ ಭಾಷೆಯಾಗಿ ಮಾಡಲು ಇಷ್ಟೆಲ್ಲಾ ಹೋರಾಟಗಳನ್ನು ಮಾಡಬೇಕಾದ ಸಂದರ್ಭ ಬಂದೊದಗಿದೆ ಎಂದರು.
ಕನ್ನಡ ಇಂದು ಬೇರೆ ಬೇರೆ ಆಯಾಮಗಳ ಗೆ ಎದುರಿಸುತ್ತಿರುವ ಸವಾಲುಗಳು ಏನು ಎಂಬುದನ್ನು ನೋಡಿದಾಗ, ಜಗತ್ತಿನ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದು. ಪ್ರಾಚೀನ ಕವಿಗಳು ಕನ್ನಡವನ್ನು ಸಂಭ್ರಮದಿಂದ ಹಾಡಿಹೊಗಳಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಆರಂಭಕ್ಕೆ ಅರುಣೋದಯ ಮತ್ತು ನವೋದಯ ಕಾಲಕ್ಕೆ ಅಭಿಮಾನದ ಸಾಧ್ಯತೆಗಳನ್ನು ಪ್ರಧಾನವಾಗಿ ಅಭಿವ್ಯಕ್ತಿಸಿದಂತಹ ಸಾಧ್ಯತೆಯನ್ನು ಗಮನಿಸಬಹುದು ಎಂದು ಹೇಳಿದರು.
ಇವತ್ತು ಕನ್ನಡ ಎದುರಿಸುತ್ತಿರುವ ಸವಾಲುಗಳೇನು?
ವಾಸ್ತವಿಕವಾಗಿ ಜಗತ್ತಿನ ಯಾವುದೇ ಭಾಷೆಗೂ, ಧರ್ಮಕ್ಕೂ ಸಂಬಂಧವಿಲ್ಲ. ಇರಬಾರದು. ಆದ್ದರಿಂದ ಕನ್ನಡವನ್ನು ಒಂದು ಜಾತ್ಯಾತೀತ ಧರ್ಮದಿಂದ ನೋಡುವಂತಹ ಒಂದು ಮನೋಧರ್ಮ ರೂಪಗೊಳ್ಳ ಬೇಕಾಗಿರುವುದು ಬಹಳ ಮುಖ್ಯವಾದುದಾಗಿದೆ.
ಕನ್ನಡವನ್ನು ಯಾವುದೋ ಒಂದು ಜನವರ್ಗಕ್ಕೆ ಕಟ್ಟಾಕಿ ನೋಡುವಂತಹ ಪರಿಕಲ್ಪನೆ ನಮ್ಮ ನಡುವೆ ಇದೆ. ಇದು ಒಂದು ಕಡೆಯಾದರೆ, ಇನ್ನೊಂದೆಡೆ ಕನ್ನಡ ಭಾಷೆಯೆಂದರೆ ರಾಜಕೀಯ ಗಡಿಗೆ ಸೀಮಿತಗೊಳಿಸುವಂತ ಮನಸ್ಸು ನಮ್ಮಗಳ ನಡುವೆ ರೂಪಗೊಳ್ಳುತ್ತಿದೆ. ಹಾಗಾಗಿ ಭಾಷೆಗೂ ರಾಜಕೀಯ ಗಡಿಗೂ ಸಂಬಂಧಗಳನ್ನು ಕಲ್ಪಿಸಬಾರದು ನಮ್ಮ ಕನ್ನಡವನ್ನು ನಾವುಅಭಿವೃದ್ಧಿಗೊಳಿಸಬೇಕಾಗುತ್ತದೆ. ಬೆಳೆಸಬೇಕಾಗುತ್ತದೆ ಎಂಬ ಸವಾಲುಗಳು ನಮ್ಮ ಮುಂದಿವೆ.
ಕನ್ನಡವನ್ನು ಯಾವುದೇ ಧರ್ಮದ ಮೂಲದಿಂದ ನೋಡುವ ಪರಿಕಲ್ಪನೆಯಿಂದ ನಾವು ಬಿಡುಗಡೆಹೊಂದಿ ಬೇಕಾಗಿದೆ. ಇಂದು ನಾವೂ ಬಹು ದೊಡ್ಡ ಸವಾಲನ್ನು ನಾವು ಎದುರಿಸುತ್ತಿದ್ದೇವೆ. ಅದೆಂದರೆ ಮಾಧ್ಯಮದ್ದು. ಕನ್ನಡ ಮಾಧ್ಯಮವಾಗಿ ನಾವು ಇವತ್ತಿಗೂ ಕೂಡಾ ಅದನ್ನು ಸಕ್ರಿಯವಾಗಿ ಜನಮಾನಸದಲ್ಲಿ ಬಿತ್ತಲಿಕ್ಕೆ ಸಾಧ್ಯವಾಗುತ್ತಿಲ್ಲವೆಂಬ ಆತಂಕ ಇತ್ತೀಚಿನ ದಶಮಾನಗಳಲ್ಲಿ ಆರಂಭವಾಗಿದೆ.
ಇಂಗ್ಲಿಷ್ ಭಾಷೆಯ ವ್ಯಾಮೋಹದಿಂದ ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಹೆಚ್ಚಾಗುತ್ತಾ ಇವೆ. ಸರ್ಕಾರಗಳೂ ಕೂಡಾ ಪರೋಕ್ಷವಾಗಿ ಅದಕ್ಕೆ ಸಹಕಾರ ನೀಡುತ್ತಿದ್ದವೆಂದರೆ ತಪ್ಪಾಗಲಿಕ್ಕಿಲ್ಲ.
ಯಾವುದೇ ಭಾಷೆಯ ತಿಳುವಳಿಕೆ ನಮಗೆ ಬೇಕೆಂದಲ್ಲಿ ಇಂಗ್ಲೀಷು ಬೇಕು, ಇನ್ನೊಂದು ಭಾಷೆಯೂ ಬೇಕು. ಅದನ್ನು ಭಾಷೆಯಾಗಿ ಓದಬೇಕೇ ವಿನಃ ಮಾಧ್ಯಮವಾಗಿ ಓದುವುದಲ್ಲ.ಮಾಧ್ಯಮ ಕನ್ನಡದಲ್ಲೇ ಇರಬೇಕು.
ಪ್ರಜಾಪ್ರಭುತ್ವದ ಆಶಯಗಳು ಜನಮನಕ್ಕೆ ತಲುಪಬೇಕಾದರೆ ಶಿಕ್ಷಣ ಕೂಡ ಆಯಾ ಪ್ರದೇಶದ ಮಾತೃಭಾಷೆಯಲ್ಲಿ ಇರಬೇಕು. ಜನರಿಗೆ ಅದು ಅರಿವಿಗೆ ಬರಬೇಕು. ಆ ಕಾರಣಕ್ಕೆ ಕನ್ನಡ ಮಾಧ್ಯಮ ಎನ್ನುವುದು ಹೆಚ್ಚು ಹೆಚ್ಚಾಗಿ ನಮ್ಮಲ್ಲಿ ಸಾಧ್ಯವಾಗಿದೆ ಎಂದರೆ ಅಷ್ಟರ ಮಟ್ಟಿಗೆ ನಾವು ಪ್ರಜಾಪ್ರಭುತ್ವದ ಸಾಧ್ಯತೆಗಳನ್ನು ಯಶಸ್ವಿಗೊಳಿಸುತ್ತಿದ್ದೇವೆಂದೇ ಅರ್ಥ.
ಕನ್ನಡ ಮಾಧ್ಯಮವನ್ನು ನಾವು ಜನರ ನಡುವೆ ಹೊತ್ತೊಯ್ಯುವ ಕ್ರಮ ಹೇಗೆ ಎನ್ನುವುದನ್ನು ನಮ್ಮ ಆಡಳಿತಾರೂಢ ಸರ್ಕಾರಗಳು ಗಂಭೀರವಾಗಿ ಆಲೋಚನೆ ಮಾಡಬೇಕಾದ ಸಂದರ್ಭ ಇವತ್ತು ನಮ್ಮ ಕಣ್ಣೆದುರಿಗೆ ಇದೆ.
ಪ್ರಾದೇಶಿಕ ಭಾಷೆಗಳ ಮತ್ತು ನಮ್ಮ ನಡುವೆ ಒಂದು ದೊಡ್ಡ ತೊಡಕೆಂದರೆ, ಕನ್ನಡ ಎಂದರೆ ಒಂದೇ ಕನ್ನಡವಿಲ್ಲ. ಕನ್ನಡದೊಂದಿಗೆ ಹಲವು ಕನ್ನಡಗಳಿವೆ. ಧಾರವಾಡ ಕನ್ನಡ, ಮಂಗಳೂರು ಕನ್ನಡ, ಮೈಸೂರು ಕನ್ನಡ ಇರಬಹುದು ಇವುಗಳ ನಡುವೆ ಯಾವ ಕನ್ನಡ ಭಾಷೆಯನ್ನು ಆಡಳಿತ ಭಾಷೆಯಾಗಿ ಪ್ರಮಾಣಿಕೃತ ಭಾಷೆಯಾಗಿ ಸ್ವೀಕರಿಸಿದ್ದೇವೆ. ಪ್ರಮಾಣಿಕೃತ ಭಾಷೆಯೆಂದರೆ ಎಲ್ಲಾ ಜನರಿಗೆ ಯಾವ ಭಾಷೆ ಸರಳವಾಗಿ ಸಂವಹನವಾಗಬಲ್ಲದೋ ಅಂತಹದ್ದೊಂದು ಭಾಷೆಯನ್ನು ನಾವು ಪ್ರಮಾಣಿಕೃತ ಭಾಷೆಯೆಂದು ಸ್ವೀಕರಿಸಿದ್ದೇವೆ.
ಇದಕ್ಕಿಂತಲೂ ವಾಸ್ತವವಾಗಿ ಯಾವ ಪ್ರದೇಶದ ಜನರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಂಡಿರುವರೋ ಅವರ ಭಾಷೆಗೆ ಮಾನ್ಯತೆ ಇರುವಂತಹ ಸಾಧ್ಯತಯು ಕೂಡ ಹೆಚ್ಚಾಗಿದೆ. ನಮ್ಮಲ್ಲಿ ಹಲವು ಉಪ ಭಾಷೆಗಳು ಹಲವು ಸಾಮಾಜಿಕ ಭಾಷೆಗಳು ಅವಘನಗೊಳಗಾಗಿದ್ದವೆ. ಯಾವ ಜನಸಮುದಾಯ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಗೊಂಡಿದ್ದವೊ ಅವರ ಭಾಷೆಯನ್ನು ಆಸ್ವಾದಿಸುವಂತಹ, ಅದನ್ನೇ ಆಡಳಿತ ಕನ್ನಡವಾಗಿ ಸ್ವೀಕರಿಸುವ ಅಥವಾ ಅದನ್ನು ಪ್ರಮಾಣಿಕೃತ ಕನ್ನಡವಾಗಿ ಸ್ವೀಕರಿಸುವ ರಾಜಕೀಯ ಹುನ್ನಾರವೇ ನಮ್ಮ ನಡುವೆ ಇದೆ.
ಸಾಮಾಜಿಕ ಅಸಮಾನತೆಗಳು, ಆರ್ಥಿಕ ಅಸಮಾನತೆಗಳು, ಪ್ರಾದೇಶಿಕ ಅಸಮಾನತೆಗಳು ಇವು ಭಾಷಿಕ ನೆಲೆಗಳೊಳಗೂ ವ್ಯಕ್ತವಾಗುತ್ತಿರುತ್ತದೆ. ಹಾಗಾಗಿ ಭಾಷಿಕ ನೆಲೆಯ ತಾರತಮ್ಯತೆ ನಮ್ಮಲ್ಲಿ ಇಲ್ಲವಾಗಬೇಕಾದರೆ ನಮ್ಮ ನಡುವಿನ ತಾರತಮ್ಯಗಳನ್ನೂ ನಾವು ಹೋಗಲಾಡಿಸಬೇಕಾಗಿದೆ.
ಭಾಷಿಕ ಮೂಲಭೂತವಾದ ಹೆಚ್ಚು ಅಪಾಯಕಾರಿ. ಭಾಷಿಕ ಮೂಲಭೂತವಾದದ ಬೋನಿನಲ್ಲಿ ಇವತ್ತು ಕನ್ನಡ ನರಳುತ್ತಾ ಇದೆ ಆದ್ರಿಂದ ಬಿಡುಗಡೆಗೊಳಿಸಬೇಕಾದ್ದು ನಮ್ಮೆಲ್ಲರ ಮುಂದಿರುವ ಸವಾಲು.ವಿಶ್ವದ ಜ್ಞಾನವನ್ನು ಕನ್ನಡಕ್ಕೆ ತರುವ ಪ್ರಯತ್ನವನ್ನು ನಾವು ಮಾಡಬೇಕಾಗಿದೆ ಕನ್ನಡವನ್ನು ಒಂದು ಭಾಷೆಯಾಗಿ ಮಾಡಬೇಕಾದರೆ ನಾವು ಭಾಷಿಕ ಮೂಲಭೂತವಾದದಿಂದ ಹೊರಬಂದು ಜಗತ್ತಿನ ಎಲ್ಲಾ ಭಾಷೆಗಳನ್ನು ದಕ್ಕಿಸಿಕೊಳ್ಳಬೇಕಾಗಿದೆ. ಅಲ್ಲಿನ ಅರಿವನ್ನು ನಮ್ಮದಾಗಿ ಮಾಡಿಕೊಳ್ಳಬೇಕಾಗಿದೆ. ಆ ಮುಖೇನ ಕನ್ನಡವನ್ನು ನಾವು ನೀವು ಅಭಿವೃದ್ಧಿಗೊಳಿಸಲು ಸಾಧ್ಯ ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ದಾವಣಗೆರೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಬಿ ವಾಮದೇವಪ್ಪ ನವರು ಕನ್ನಡಕ್ಕೆ ಕುತ್ತು ತಂದೊಡ್ಡುತ್ತಿರುವ ಅನ್ಯ ಭಾಷಿಕರ ಮಧ್ಯೆ ಕನ್ನಡ ಸಿಡಿದೇಳುತ್ತದೆ. ಕನ್ನಡ ನಾಡು ವೈಭವದ ನಾಡು. ನಿನ್ನೆಯನು ಮರೆತವನು ಇಂದು ಬದುಕಲಾರ.ನಾಳೆಯನ್ನು ಕಟ್ಟಲಾರ. ನಮ್ಮ ನಾಡು ನುಡಿಯ ಇತಿಹಾಸ ತಿಳಿಯಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಏಕೆಂದರೆ ಕನ್ನಡ ಕಟ್ಟುವ ಕೆಲಸ ನಮ್ಮಿಂದ ಆಗಬೇಕಾಗಿದೆ. ವಿವಿಧತೆಯಲ್ಲಿ ಏಕತೆ ಸಾಧಿಸುವ ನಾವು ಸುಂದರ ಭವ್ಯ ಕನ್ನಡದ ಬೆಳವಣಿಗೆಗೆ ಕಂಕಣಕಟ್ಟಿ ದುಡಿಯೋಣ ಎಂದು ಕರೆಕೊಟ್ಟರು.
ಆರಂಭದಲ್ಲಿ ಎಚ್ಕೆ ಸತ್ಯಭಾಮ ಇವರು ಸರ್ವರನ್ನು ಸ್ವಾಗತಿಸಿದರು ವೇದಿಕೆಯ ಶಾರದಾ ತಂಡದವರು ಸುಗಮ ಸಂಗೀತ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ನಡೆದ ಕೊಲೆಗಳೆಷ್ಟು ? ಅತ್ಯಾಚಾರಗಳೆಷ್ಟು ಗೊತ್ತಾ?
ಸುದ್ದಿದಿನ ಡೆಸ್ಕ್ : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಹಾದಿ ಬೀದಿಯಲ್ಲಿ ಹತ್ಯೆಗಳು ಆಗುತ್ತಿವೆ. ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ.
ಕಳೆದ ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ 430 ಹತ್ಯೆಗಳು ಮತ್ತು 198ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ರಾಜ್ಯಗೃಹ ಇಲಾಖೆ ಕಾರ್ಯನಿರ್ವಹಿಸುತ್ತಿದೆಯೋ ಅಥವಾ ನಿದ್ದೆ ಮಾಡುತ್ತಿದೆಯೋ ? ಎಂದು ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಪ್ರಶ್ನಿಸಿದೆ.ಇದೇ ವೇಳೆ, ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದ್ದು, ಅಪರಾಧ ಪ್ರಮಾಣ ಹೆಚ್ಚಳವಾಗಿರುವುದರಿಂದ ಕೂಡಲೇ ಈ ಬಗ್ಗೆ ಕ್ರಮವಹಿಸಬೇಕೆಂದು ಆಗ್ರಹಿಸಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಬಿಜೆಪಿ ನಿಯೋಗ ದೂರು ನೀಡಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಹಾದಿಬೀದಿಯಲ್ಲಿ ಕೊಲೆಗಳಾಗುತ್ತಿವೆ. ರಾಜ್ಯವು ಅತ್ಯಾಚಾರಿಗಳ ಆಡಂಬೋಲವಾಗಿದೆ. ಬೆಂಗಳೂರು ಮಹಾನಗರದಲ್ಲಿ ಮಾದಕ ವಸ್ತುಗಳ ದಂಧೆ ಅವ್ಯಾಹತವಾಗಿದೆ. ಕೇವಲ 4 ತಿಂಗಳಲ್ಲಿ ಇಷ್ಟೆಲ್ಲಾ ನಡೆದಿದೆ!! 1/2#ಜನರಿಗಿಲ್ಲ_ನೆಮ್ಮದಿಯ_ಗ್ಯಾರಂಟಿ pic.twitter.com/iu3tqqEYZ3
— Janata Dal Secular (@JanataDal_S) May 18, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ್
ಸುದ್ದಿದಿನ, ತುಮಕೂರು : ರಾಜ್ಯದಲ್ಲಿ ಜನರು ಶಾಂತಿ ಮತ್ತು ನೆಮ್ಮದಿಯಿಂದ ಬದುಕಲು ಯಾವುದೇ ಕ್ರಮ ತೆಗೆದುಕೊಳ್ಳಲು ಸಿದ್ಧ. ಬಿಜೆಪಿ ಆರೋಪದಂತೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಹೇಳಿದರು.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಶಾಂತಿಯನ್ನು ಕದಡಲು ಎಷ್ಟು ಪ್ರಯತ್ನ ನಡೆಸಿದರೂ ಅದನ್ನು ನಿಯಂತ್ರಿಸುವ ಶಕ್ತಿ ನಮ್ಮ ಸರ್ಕಾರಕ್ಕಿದೆ ಎಂದು ತಿರುಗೇಟು ನೀಡಿದರು. ರಾಜ್ಯದಲ್ಲಿ ಅಪರಾಧ ಪ್ರಕರಣ ಹೆಚ್ಚಳವಾಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳೊಂದಿಗೆ ಕೂಲಂಕುಷವಾಗಿ ಚರ್ಚಿಸಿ, ಅಪರಾಧ ಪ್ರಕರಣಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ವಿಧಾನ ಪರಿಷತ್ ಚುನಾವಣೆ ; 91 ನಾಮಪತ್ರಗಳು ಪುರಸ್ಕೃತ
ಸುದ್ದಿದಿನ ಡೆಸ್ಕ್ : ಕರ್ನಾಟಕ ವಿಧಾನ ಪರಿಷತ್ನ ಚುನಾವಣೆಗೆ ಸಂಬಂಧಪಟ್ಟಂತೆ ಒಟ್ಟು 91ನಾಮಪತ್ರಗಳು ಪುರಸ್ಕೃತಗೊಂಡಿವೆ. ಈಶಾನ್ಯ ಪದವಿಧರ ಕ್ಷೇತ್ರಕ್ಕೆ ಒಟ್ಟು 26 ನಾಮಪತ್ರಗಳು ಪುರಸ್ಕೃತಗೊಂಡಿದೆ.
ಅದೇ ರೀತಿ ಕರ್ನಾಟಕದ ಆಗ್ನೇಯಾ ಶಿಕ್ಷಕರ ಕ್ಷೇತ್ರಕ್ಕೆ 15, ಬೆಂಗಳೂರು ಪದವೀಧರರ ಕ್ಷೇತ್ರಕ್ಕೆ 16, ಕರ್ನಾಟಕ ನೈಋತ್ಯ ಶಿಕ್ಷಕರ ಕ್ಷೇತ್ರಕ್ಕೆ 9, ಕನಾಟಕ ನೈಋತ್ಯ ಪದವೀಧರ ಕ್ಷೇತ್ರಕ್ಕೆ12 ಹಾಗೂ ಕರ್ನಾಟಕ ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ಒಟ್ಟು 13 ನಾಮಪತ್ರಗಳು ಪುರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗದ ಪ್ರಕಟಣೆ ತಿಳಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
ಆತ್ಮಕತೆ | ಕೋರಿನ ತೋಟ ಮತ್ತು ನಮ್ಮೂರ ದೇವರ ಗುಡಿಯಲ್ಲಿ ಪಂಚಾಯ್ತಿ
-
ದಿನದ ಸುದ್ದಿ3 days ago
ವಿಧಾನಪರಿಷತ್ ಚುನಾವಣೆ ; ಇಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನ
-
ದಿನದ ಸುದ್ದಿ3 days ago
ಪೌರತ್ವ ಪ್ರಮಾಣಪತ್ರ ಹಸ್ತಾಂತರ
-
ದಿನದ ಸುದ್ದಿ2 days ago
ಸಂಗೀತಗಾರರ ಹುದ್ದೆಗಳಿಗೆ ನೇಮಕಾತಿ
-
ದಿನದ ಸುದ್ದಿ3 days ago
ದಾವಣಗೆರೆ | ಶಿಕ್ಷಕರ ಹುದ್ದೆಗೆ ನೇರ ಸಂದರ್ಶನ
-
ದಿನದ ಸುದ್ದಿ3 days ago
ಮೊರಾರ್ಜಿ ದೇಸಾಯಿ ವಿಜ್ಞಾನ ಕಾಲೇಜು ; ಪಿಯುಸಿ ಕೋರ್ಸ್ ಗಳಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ2 days ago
ಪ್ರಜ್ವಲ್ ಪೆನ್ಡ್ರೈವ್ ಪ್ರಕರಣ | ಎಸ್ಐಟಿ ಸೂಕ್ತ ತನಿಖೆ ನಡೆಸುತ್ತಿಲ್ಲ : ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
-
ದಿನದ ಸುದ್ದಿ4 days ago
ಅಂಧ ಹೆಣ್ಣು ಮತ್ತು ಗಂಡು ಮಕ್ಕಳಿಗೆ ದಾಖಲಾತಿ ಪ್ರಾರಂಭ