ನಿತ್ಯ ಭವಿಷ್ಯ
ಈ ರಾಶಿಯವರಿಗೆ ಶೀಘ್ರ ಮದುವೆ, ಸಂತಾನ ಅಪೇಕ್ಷಿಸಿದವರಿಗೆ ಸಿಹಿ ಸುದ್ದಿ ಮತ್ತು ಆರೋಗ್ಯದಿಂದ ಶೀಘ್ರ ಗುಣಮುಖವಾಗಲಿದ್ದೀರಿ..! ಶುಕ್ರವಾರ- ರಾಶಿ ಭವಿಷ್ಯ ಏಪ್ರಿಲ್-2,2021
Good Friday :ಸೂರ್ಯೋದಯ: 06:14 AM, ಸೂರ್ಯಸ್ತ: 06:30 PM
ಶಾರ್ವರೀ ನಾಮ ಸಂವತ್ಸರ
ಫಾಲ್ಗುಣ ಮಾಸ, ಶಿಶಿರ ಋತು, ಉತ್ತರಾಯಣ, ಕೃಷ್ಣ ಪಕ್ಷ,
ತಿಥಿ: ಪಂಚಮೀ ( 08:15 )
ನಕ್ಷತ್ರ: ಜ್ಯೇಷ್ಠ ( 27:43 )
ಯೋಗ: ವ್ಯತೀಪಾತ ( 23:39 )
ಕರಣ: ತೈತಲೆ ( 08:15 )
ಗರಜ ( 19:03 )
ರಾಹು ಕಾಲ: 10:30 – 12:00
ಯಮಗಂಡ: 03:00 – 04:30
ಜಾತಕ ಆಧಾರದ (ಜನ್ಮ ದಿನಾಂಕ ಮತ್ತು ಸಮಯ ತಿಳಿಸಿದರೆ ಜಾತಕ ಬರೆದು ತಿಳಿಸಲಾಗುವುದು) ಜಾತಕದ ಆಧಾರ ಹಾಗೂ ಹಸ್ತಸಾಮುದ್ರಿಕೆ ಆಧಾರ ಮೇಲೆ ವಿವಾಹ, ಪ್ರೇಮ ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಕುಟುಂಬ ಕಲಹ, ಸಂತಾನ ಭಾಗ್ಯ, ಹಣಕಾಸು ವ್ಯವಹಾರದಲ್ಲಿ ನಷ್ಟ, ವ್ಯಾಪಾರ ನಷ್ಟ, ಉದ್ಯೋಗದಲ್ಲಿ ಕಿರುಕುಳ, ವಿದೇಶ ಪ್ರವಾಸ, ಆಸ್ತಿ ಖರೀದಿ, ಜನವಶ ಧನವಶ, ಇನ್ನು ಮುಂತಾದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಹಾಗೂ ಮಾರ್ಗದರ್ಶನ ನೀಡಲಾಗುವುದು. ನಿಮ್ಮ ಯಾವುದೇ ಸಮಸ್ಯೆಗಳ ಸಮಾಲೋಚನೆಗಾಗಿ ಕರೆ ಮಾಡಿರಿ.
ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯ ಶಾಸ್ತ್ರ, ವಾಸ್ತುಶಾಸ್ತ್ರ, ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 93534 88403
ಮೇಷ
ನಿಮ್ಮ ಆರೋಗ್ಯದಲ್ಲಿ ತೊಂದರೆ ಇದೆ,ಶೀಘ್ರ ಗುಣಮುಖವಾಗಲಿದ್ದೀರಿ. ನಿಮಗೆ ಸ್ನಾಯುಗಳ ಸೆಳೆತ ಇರುವುದರಿಂದ ತೈಲದಿಂದ ನಿಮ್ಮ ದೇಹಕ್ಕೆ ಮಸಾಜ್ ಮಾಡಿ. ತಾವು ಸರಕಾರಿ ಉದ್ಯೋಗಕ್ಕಾಗಿ ಎಷ್ಟೇ ಪ್ರಯತ್ನ ಮಾಡಿದರೂ ವ್ಯರ್ಥ ,ನೀವು ಹಣಕಾಸಿನ ಲಾಭ ತರುವ ಅದ್ಭುತವಾದ ಹೊಸ ಉದ್ಯಮ ಪ್ರಾರಂಭಿಸುವಿರಿ. ನೀವು ಸಂಗಾತಿಯೊಡನೆ ಸ್ವಲ್ಪ ಸಮಯ ಕಳೆಯಬೇಕು ಮತ್ತು ಅವರಿಗೆ ಒಳ್ಳೆಯ ಉಡುಗರೇ ಕೋಡಿಸುವಿರಿ.
ತಮ್ಮ ಉದ್ಯೋಗದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವಿರಿ. ಕೆಲಸದ ಸ್ಥಳದಲ್ಲಿ ಸಾಮರ್ಥ್ಯವನ್ನು ಸುಧಾರಿಸಲು ನಿಮ್ಮ ಕೌಶಲ್ಯದ ಮಟ್ಟವನ್ನು ತೋರಿಸುವಿರಿ. ಇಂದು ನೀವು ಧನಾತ್ಮಕ ವಿಚಾರಗಳಿಂದ ತುಂಬಿರುತ್ತೀರಿ. ನಿಮ್ಮ ನಿರೀಕ್ಷೆಗಳನ್ನು ಮೀರಿ ನಿಮಗೆ ಆದಾಯ ತರುತ್ತದೆ. ನಿಮ್ಮ ವೈವಾಹಿಕ ಜೀವನ ಮನಸ್ತಾಪಗಳು ಹೆಚ್ಚು. ಹಣಕಾಸಿನ ಪರಿಸ್ಥಿತಿಗಳು ನಿಜವಾಗಿಯೂ ಚಿಂತಾಜನಕ.ಅದೃಷ್ಟ ಸಂಖ್ಯೆ:5
ಶುಭ ಸಮಯ: ಬೆಳಗ್ಗೆ 9ರಿಂದ 10
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ವೃಷಭ
ಮಿತ್ರನಿಂದ ಧನಸಹಾಯ ಸಿಗುವುದು ಎಂಬ ಬಯಕೆ ಇದೆ, ಆಸ್ತಿ ಮಾರಾಟ ವಿಳಂಬ ಸಾಧ್ಯತೆ,
ಆರೋಗ್ಯ ಉತ್ತಮವಾದ ದಿನ. ನಿಮ್ಮ ಹರ್ಷಚಿತ್ತದ ಮನಸ್ಸು ಸಂಗಾತಿಯೊಡನೆ ಸಂತೋಷ. ಸಂಗಾತಿಯು ನಿಮಗೆ ಬಯಸಿದ ಟಾನಿಕ್ ನೀಡುತ್ತಾಳೆ. ನಿಮಗೆ ಆತ್ಮವಿಶ್ವಾಸ ತರುತ್ತದೆ. ಆರ್ಥಿಕ ನಿರ್ಬಂಧಗಳನ್ನು ಬಗೆಹರಿಸಲು ಸಾಲ ಪಡೆಯುವಿರಿ. ನಿಮ್ಮ ಬಜೆಟ್ಗೆ ಪ್ರತಿಕೂಲವಾಗಿ ಪತ್ನಿಯ ಸಹಕಾರ ಸಿಗಲಿದೆ. ಅತಿಥಿಗಳು ನಿಮ್ಮ ಮನೆಯನ್ನು ಒಂದು ಆಹ್ಲಾದಕರ ಮತ್ತು ಅದ್ಭುತ ಸಂಜೆಗಾಗಿ ಬಳಸಿಕೊಳ್ಳುತ್ತಾರೆ.
ನಿಮ್ಮ ಪ್ರೀತಿ ಸಂಗಾತಿಯ ಒಂದು ಹೊಸ ಅದ್ಭುತ ದಿನ ಅನುಭವಿಸುವಿರಿ. ಕೆಲಸದಲ್ಲಿ ನಿಮ್ಮ ಮ್ಯಾನೇಜರ್ ಕಿರಿಕಿರಿಯುಂಟು ಮಾಡುವನು. ಇಂದು ಇದ್ದಕ್ಕಿದ್ದಂತೆ ಧನಪ್ರಾಪ್ತಿ. ನಿಮ್ಮ ಆಸ್ತಿಯ ಕಾಗದಪತ್ರ ಬಗ್ಗೆ ಅಸಡ್ಡೆ ಹೊಂದಿದ್ದಲ್ಲಿ ನಷ್ಟ ಅಥವಾ ಕಳ್ಳತನ ಆಗಬಹುದು. ನಿಮ್ಮ ಸಂಗಾತಿಯ ಜೊತೆ ಇಂದು ನೀವು ನಿಜವಾಗಿಯೂ ರೋಮಾಂಚಕಾರಿಯಾದದ್ದನ್ನು ಮಾಡುತ್ತೀರಿ .ಅದೃಷ್ಟ ಸಂಖ್ಯೆ: 6ಶುಭ ಸಮಯ _ ಬೆಳಗ್ಗೆ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮಿಥುನ
ವ್ಯಾಪಾರದಲ್ಲಿ ಹಣದ ಒಳಹರಿವು ಉತ್ತಮವಾಗಿದೆ ಆದರೆ ಉಳಿತಾಯದಲ್ಲಿ ಶೂನ್ಯವಾಗಿದೆ, ಸಾಲದ ಬಾಧೆಯಿಂದ ಚಿಂತನೆ,ನಿಮ್ಮ ಕುಟುಂಬವರ್ಗದವರು ನೀಡುವ ವರ್ತನೆ ಪರೋಕ್ಷವಾಗಿ ನಿಮಗೆ ಆಶೀರ್ವಾದವೇ ಆಗುತ್ತದೆ. ನೀವು ಅನುಮಾನ, ನಿರಾಸೆ, ವಿಶ್ವಾಸರಾಹಿತ್ಯ ಅಹಂಭಾವ ಮತ್ತು ಅಸೂಯೆಯಂಥ ಅನೇಕ ದುರ್ಗುಣಗಳಿಂದ ಮುಕ್ತಿ ಹೊಂದುವ ಸಾಧ್ಯತೆಗಳಿವೆ. ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಲಾಭದಾಯಕವಾಗಬಹುದು.
ನಿಮ್ಮ ಜ್ಞಾನದಾಹ ನಿಮಗೆ ಹೊಸ ಹೊಸ ಉದ್ಯೋಗ ಪಡೆಯಲು ಸಹಾಯ ಮಾಡುತ್ತದೆ. ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಇಂದು ನಿಮ್ಮ ಕಲಾತ್ಮಕ ಮತ್ತು ಸೃಜನಶೀಲ ಸಾಮರ್ಥ್ಯ ಬಹಳಷ್ಟು ಮೆಚ್ಚುಗೆ ತರುತ್ತದೆ ಮತ್ತು ನಿಮಗೆ ಅನಿರೀಕ್ಷಿತ ಪ್ರತಿಫಲಗಳನ್ನು ತರುತ್ತದೆ. ಇಂದು ನೀವು ನಿಮ್ಮ ಅದೃಷ್ಟ ಪರೀಕ್ಷಿಸುತ್ತೀರಿ.ನಿಮ್ಮಲ್ಲಿ ಕೆಲವು ಹಿತೈಷಿಗಳಿಂದ ಚದುರಂಗ – ಪದಬಂಧ ಆಡುವಿರಿ. ಹೆಣ್ಣು ಮಕ್ಕಳು ವಿವಾಹದ ನಿಜವಾದ ಭಾವಪರವಶತೆಯನ್ನು ತಿಳಿಯುತ್ತೀರಿ.
ಅದೃಷ್ಟ ಸಂಖ್ಯೆ: 7ಶುಭ ಸಮಯ: ಸಾಯಂಕಾಲ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕರ್ಕಾಟಕ
ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿ ಗೊಂದಲ, ಸಹೋದರಿಗಳಿಗೆ ನಿರಾಶೆ, ದಾಯಾದಿಗಳಿಂದ ಮನಸ್ತಾಪ,ನಿಮ್ಮ ಹಾಸ್ಯಪ್ರಜ್ಞೆ ಇಂದ ಅವಮಾನ ಸಂಭವ. ನಿಮ್ಮ ಮಾತಾಪಿತೃ ಹಾಗೂ ಮಕ್ಕಳ ಅನಾರೋಗ್ಯ ಗುಣಪಡಿಸಲು ಪ್ರಯತ್ನಿಸುವಿರಿ. ಹೆಣ್ಣು ಕೊಟ್ಟ ಮಾವ ಹಾಗೂ ಅತ್ತೆ ಆಶೀರ್ವಾದ ಹಾಗೂ ಅದೃಷ್ಟ ನಿಮ್ಮ ಬಳಿ ಬರುತ್ತಿದ್ದ ಹಾಗೆ ನಿಮ್ಮ ಬಯಕೆಗಳು ಪೂರೈಸಲ್ಪಡುತ್ತವೆ. ಹಿಂದಿನ ದಿನಗಳ ಶ್ರಮ ಈಗ ಸಂಬಳ ರೂಪದಲ್ಲಿ ಫಲ ನೀಡುತ್ತದೆ. ಸಂಗಾತಿಯೊಡನೆ ಸಂಜೆ ಸಂತೋಷಕರವಾಗಿರುತ್ತದೆ.
ಪ್ರಣಯದ ನಡತೆಗಳು ಮರು ನೆನಪು ಕಾಡುವುದು. ನಿಮ್ಮ ಪ್ರಿಯತಮೆಯೇ ಅತ್ಯುತ್ತಮವಾಗಿರುವುದರಿಂದ ನೀವು ಅದೃಷ್ಟಶಾಲಿಗಳು ಎಂದು ನಿಮಗೆ ಅರಿವಾಗುತ್ತದೆ. ಉದ್ಯೋಗಕ್ಕಾಗಿ ಪ್ರಯಾಣಿಸುತ್ತಿದ್ದಲ್ಲಿ ನೀವು ಎಲ್ಲಾ ಪ್ರಮುಖ ದಾಖಲೆಗಳನ್ನು ತೆಗೆದುಕೊಳ್ಳುತ್ತೀರೆಂದು ಖಚಿತಪಡಿಸಿಕೊಳ್ಳಿ. ಇವತ್ತು ಯಾವುದೇ ಯೋಜನೆಯನ್ನು ಹಾಕುವ ಮೊದಲು ನಿಮ್ಮ ಪತ್ನಿಯಿಂದ ಸಲಹೆ ಪಡೆದುಕೊಳ್ಳುವಿರಿ .ನೀವು ವಿರೋಧಿಗಳಿಂದ ಒಂದು ವ್ಯತಿರಿಕ್ತ ಪ್ರತಿಕ್ರಿಯೆಯನ್ನು ಪಡೆಯಬಹುದು.ಅದೃಷ್ಟ ಸಂಖ್ಯೆ: 5ಶುಭ ಸಮಯ: ಮಧ್ಯಾಹ್ನಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಸಿಂಹ
ಮದುವೆ ಗೊಂದಲ, ವ್ಯಾಪಾರದಲ್ಲಿ ನಷ್ಟ,ಮಾನಸಿಕ ಖಿನ್ನತೆ ಒಳಗಾಗುವಿರಿ. ಸಕಾರಾತ್ಮಕ ಚಿಂತನೆ. ಉಜ್ವಲವಾದ ಭವಿಷ್ಯ ನಿಮ್ಮದಾಗುತ್ತದೆ. ಹಣಕಾಸು ಅನಿರೀಕ್ಷಿತ ಲಾಭ ಮೂಲಕ ಸುಧಾರಣೆಯಾಗಲಿದೆ. ಆರೋಗ್ಯದ ಸಮಸ್ಯೆಗಳಿಂದಾಗಿ ದೂರದ ವೈದ್ಯರಿಗೆ ಭೇಟಿ. ಕುಟುಂಬದ ಜೊತೆ ಪ್ರಯಾಣ ಜಾಗ್ರತೆಯಿಂದ ವಾಹನ ಚಲಾಯಿಸಿ. ವಿದೇಶ ಪ್ರಯಾಣ ಮುಂದೂಡಲಾಗಬಹುದು. ಸಂಗಾತಿಯೊಡನೆ ಪ್ರೀತಿಯ ರಸದೌತಣ ಅನುಭವಿಸಬಹುದು. ನಿಮ್ಮ ಗುರಿಗಳನ್ನು ಮುಟ್ಟಲು ಒಳ್ಳೆಯ ದಿನ.
ಅವುಗಳನ್ನು ಮುಂಚಿತವಾಗಿ ಸಾಧಿಸಲು ಪಟ್ಟುಬಿಡದೆ ಕೆಲಸ ಮಾಡಲು ಶ್ರೀ ದುರ್ಗಾದೇವಿ ಸಂಕಲ್ಪ ಮಾಡಿ. ಈ ವಿಷಯದಲ್ಲಿ ನೀವು ನಿಮ್ಮ ಮಾತ ಪಿತೃ ಸಹಾಯ ತೆಗೆದುಕೊಳ್ಳಬಹುದು. ಪತ್ನಿಯ ಮುಖ ದರ್ಶನದಿಂದ ನಿಮ್ಮ ಆತ್ಮ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ರಾಜಕಾರಣಿಗಳು ,ಸಮಾಜ ಸೇವಕರು ವಿಚಾರಗೋಷ್ಠಿಗಳು ಮತ್ತು ಪ್ರದರ್ಶನಗಳು ನಿಮಗೆ ಹೊಸ ಜ್ಞಾನ ಮತ್ತು ಸಂಪರ್ಕಗಳನ್ನು ಒದಗಿಸುತ್ತವೆ. ಇಂದು,ಅದೃಷ್ಟ ಸಂಖ್ಯೆ: 4
ಶುಭ ಸಮಯ: ಮುಂಜಾನೆಶ್ರೀ ಸೋಮಶೇಖರ್ ಗುರೂಜಿB.Scಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕನ್ಯಾ
ಖರೀದಿಸಿರುವ ಆಸ್ತಿ ವಿಚಾರದಲ್ಲಿ ಕಾನೂನು ಮೆಟ್ಟಿಲು ಹತ್ತುವ ಸಂಭವ,ನಿಮ್ಮ ಆರೋಗ್ಯ ಸುಧಾರಿಸಲು ರಜೆ ಪಡೆಯುವಿರಿ .ಇಂದು ನೀವು ಸುಲಭವಾಗಿ ಸಾಲ ಪಡೆಯುವಿರಿ. ಬಂಡವಾಳ ಹೂಡಿಕೆ ಬೇಡ. ಬಾಕಿಯಿರುವ ಸಾಲಗಳನ್ನು ಇತ್ಯಾರ್ಥ. ಹೊಸ ಯೋಜನೆಗಳ ಪ್ರಾರಂಭ ಬೇಡ. ಸಾಮಾಜಿಕ ಕೂಟಗಳಲ್ಲಿ ನಿಮ್ಮ ನಡೆ-ನುಡಿ ಸಂಸ್ಕಾರ ನಿಮ್ಮನ್ನು ಜನಪ್ರಿಯಗೊಳಿಸುತ್ತದೆ. ಯಶಸ್ಸು ಖಂಡಿತವಾಗಿಯೂ ನಿಮ್ಮದಾಗಿದೆ.
ನೀವು ಒಂದು ಬಾರಿ ಒಂದೇ ಹೆಜ್ಜೆಯಿಟ್ಟರೆ ಇದು ಪ್ರಮುಖ ಬದಲಾವಣೆ ತರುತ್ತದೆ. ಧರ್ಮಕಾರ್ಯಗಳು / ಹವನಗಳು / ಮಂಗಳಕರ ಸಮಾರಂಭಗಳನ್ನು ಮನೆಯಲ್ಲಿ ಕೈಗೊಳ್ಳಲಾಗುವುದು. ಸಂಬಂಧಿಕರಿಂದಾಗಿ ವಿರೋಧ ಸಾಧ್ಯತೆಯಿದೆ. ನೀವು ಶಾಂತವಾಗಿರುವುದು ಉತ್ತಮ.ಅದೃಷ್ಟ ಸಂಖ್ಯೆ: 6ಶುಭ ಸಮಯ :ಸಂಜೆ
ಶ್ರೀ ಸೋಮಶೇಖರ್ ಗುರೂಜಿB.Scಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ತುಲಾ
ಮಹಿಳಾ ಅಧಿಕಾರಿ ವರ್ಗದವರಿಗೆ ಪ್ರಭಾವಶಾಲಿ ವ್ಯಕ್ತಿಯ ಒತ್ತಡದಿಂದ ತುಂಬಾ ಕಿರುಕುಳ ಎದುರಿಸಬೇಕಾದೀತು,ನಿಮ್ಮ ದೈಹಿಕ ಬಲವನ್ನು ಹೆಚ್ಚಿಸಲು ಯೋಗಾಸನದಲ್ಲಿ ಸಮಯ ಕಳೆಯುವ ಸಾಧ್ಯತೆಗಳಿವೆ. ವೃತ್ತಿ ಯೋಜನೆ ಬಹಳ ಮುಖ್ಯ. ನಿಮ್ಮ ಪೋಷಕರನ್ನು ಮತ್ತು ಪತ್ನಿ ಯನ್ನು ಎರಡನ್ನೂ ಸಂಭಾಳಿಸಬೇಕು. ಸಂಗಾತಿಯೊಡನೆ ಚಾಕ್ಲೆಟ್ ಸೇವಿಸುವಿರಿ. ಹೊಸ ವಿಷಯಗಳನ್ನು ಕಲಿಯುವ ಆಸಕ್ತಿ ನಿಮ್ಮದಾಗಿರುತ್ತದೆ.
ಮಧ್ಯಸ್ಥಿಕೆ ಜನರ ಚಾಡಿ ಮಾತುಗಳ ಕಟ್ಟುಕತೆಗಳು ಮತ್ತು ವದಂತಿಗಳಿಂದ ದೂರವಿರಿ. ನೀವು ಮತ್ತು ನಿಮ್ಮ ಸಂಗಾತಿ ಮದುವೆ ಬಗ್ಗೆ ಚರ್ಚೆ ಮಾಡುವಿರಿ. ಇತ್ತೀಚಿನ ದಿನಗಳಲ್ಲಿ ಆರೋಗ್ಯದಲ್ಲಿ ಬಹಳ ಏರು-ಪೇರು ಸಾಧ್ಯತೆ. ನಿಮ್ಮ ಧರ್ಮಪತ್ನಿ ಸಂತೋಷದಿಂದಿಲ್ಲದಿದ್ದರೆ, ನೀವಿಂದು ಹುಚ್ಚು ಮೋಜನ್ನು ಹೊಂದಲಿದ್ದೀರಿ.ಅದೃಷ್ಟ ಸಂಖ್ಯೆ: 6ಶುಭ ಸಮಯ :ಬೆಳಗಿನ ಜಾವಶ್ರೀ ಸೋಮಶೇಖರ್ ಗುರೂಜಿB.Scಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 9353488403
ವೃಶ್ಚಿಕ
ಅಧಿಕಾರಿವರ್ಗದವರು ತಿಳಿಯದೆ ತಪ್ಪು ಕೆಲಸ ಮಾಡುವ ಸಾಧ್ಯತೆ ಇದೆ, ರಾಜಕಾರಣಿಗಳು
“ಕಾಯಕವೇ ಕೈಲಾಸ” ಎಂದು ತಿಳಿದು ಕೆಲಸಗಳನ್ನು ಮಾಡಲು ಒಂದು ಅದ್ಭುತ ದಿನ. ನೀವು ಕಾನೂನುಬದ್ಧ ಹೂಡಿಕೆಗಳನ್ನು ಮಾಡಿದಲ್ಲಿ ಒಳ್ಳೆಯ ಹಣ ಮಾಡುತ್ತೀರಿ. ಸಾಮಾಜಿಕ ಸಮಾರಂಭಗಳು ಪ್ರಭಾವಿ ಮತ್ತು ಪ್ರಮುಖ ಜನರೊಡನೆ ನಿಮ್ಮ ಬಾಂಧವ್ಯವ ವೃದ್ಧಿಯ ದಿನ. ನಿಮ್ಮ ವ್ಯಾಪಾರ ಸುಧಾರಿಸಲು ಒಂದು ಪರಿಪೂರ್ಣ ದಿನವಾಗಿದೆ. ಹೊಸ ಉದ್ಯೋಗ ಅವಕಾಶವಿದೆ.
ಸಂಗಾತಿಯೊಡನೆ ಪ್ರೀತಿಯಲ್ಲಿ ನಿರಾಶೆ. ನಿಮ್ಮ ಬಾಸ್ ಮತ್ತು ಹಿರಿಯರನ್ನು ಮನೆಗೆ ಆಮಂತ್ರಿಸಲು ಒಳ್ಳೆಯ ದಿನವಲ್ಲ. ಇಂದು ಬೇರೆಯವರಿಗೆ ನೀವು ನೀಡಿದ ಹಣದ ನೆರವನ್ನು ಒಪ್ಪಿಕೊಂಡಾಗ ನೀವೇ ಕೇಂದ್ರಬಿಂದುವಾಗಿರುತ್ತೀರಿ. ನಿಮ್ಮ ಸಂಗಾತಿಯ ಒರಟುತನ ದಿನವಿಡೀ ನಿಮ್ಮನ್ನು ಕಾಡಲಿದೆ.ಅದೃಷ್ಟ ಸಂಖ್ಯೆ: 4ಶುಭ ಸಮಯ ದಿನಪೂರ್ತಿ
ಶ್ರೀ ಸೋಮಶೇಖರ್ ಗುರೂಜಿB.Scಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಧನಸ್ಸು
ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಿಂದ ಸಮಸ್ಯೆಗಳ ಸುರಿಮಳೆ ಎದುರಿಸುವಿರಿ,ಮಾನಸಿಕ ಶಾಂತಿಗಾಗಿ ಸೇವಾ ಶ್ರಮಕ್ಕೆ ಭೇಟಿ. ಇಂದು ನೀವು ಒಳ್ಳೆಯ ಹಣ ಗಳಿಸುತ್ತೀರಿ. ಖರೀದಿಸಿರುವ ಆಸ್ತಿ ಅದು ನಿಮ್ಮ ಕೈಯಿಂದ ಜಾರಿಹೋಗದಿರಲು ಪ್ರಯತ್ನಿಸಿ. ಕೆಲವರಿಗೆ ಕುಟುಂಬದಲ್ಲಿ ಒಂದು ಹೊಸ ಸದಸ್ಯ ಆಗಮನ ಸಂಭ್ರಮಾಚರಣೆ. ಪತ್ನಿ-ಮಕ್ಕಳ ಜೊತೆ ಆನಂದದ ಕ್ಷಣಗಳನ್ನು ಅನುಭವಿಸುವಿರಿ.
ಕೆಲವರಿಗೆ ಪ್ರಣಯದಾಟ ಅನಿವಾರ್ಯ. ನಿಮ್ಮ ಪತ್ನಿಯ ಸಹನೆ ಮತ್ತು ಪ್ರೀತಿ ನಿಮ್ಮ ಜೀವನವನ್ನು ಅರಳಿಸುತ್ತದೆ. ಮನೆ ಕಟ್ಟುವ ಯೋಜನೆ ನಿಮ್ಮ ದಿನವಾಗಿದೆ. ನಿಮ್ಮ ನೋಟ ಮತ್ತು ವ್ಯಕ್ತಿತ್ವವ ದಿಂದ ತೊಂದರೆ. ನಿಮ್ಮ ಮಕ್ಕಳ ಮದುವೆ ಮಾಡುವ ಆಸೆ . ಅಳಿಯನಿಗೆ ತನ್ನ ತಪ್ಪು ಅರಿವು ಮೂಡುವುದು. ಕುಟುಂಬದ ಸಮಸ್ಯೆಗೆ ಕಾರಣ ಯಾರು ಎಂಬುದು? ನಿಮಗೆ ಅರಿವಾಗುತ್ತದೆ.ಅದೃಷ್ಟ ಸಂಖ್ಯೆ: 5
ಶುಭ ಸಮಯ ಸಂಜೆಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 9353488403
ಮಕರ
ಅಧಿಕಾರಿ ವರ್ಗದವರಿಗೆ ಸಾರ್ವಜನಿಕರಿಂದ ತುಂಬಾ ಕಿರುಕುಳ,ಕುಟುಂಬದ ಸದಸ್ಯರು ನಿಮ್ಮಿಷ್ಟದಂತೆ ನಡೆದುಕೊಳ್ಳುವಂತೆ ಒತ್ತಾಯಿಸಬೇಡಿ. ಸಂಗಾತಿಯ ಬಯಕೆ ಮತ್ತು ಆಸಕ್ತಿಯ ಬಗ್ಗೆ ಯೋಚಿಸಿ. ನಿಮಗೆ ಮಕ್ಕಳ ಸಂತಾನದ ಸಂತೋಷ ಕೇಳುವಿರಿ. ಬಹು ದಿನದಿಂದ ಸಿಲುಕಿಕೊಂಡಿರುವ ದುಡ್ಡು ಮರಳಿ ಬರುತ್ತದೆ.
ನಿಮ್ಮ ಸ್ನೇಹಿತರ ಅಥವಾ ಪತ್ನಿಯ ಬಂಧು ಬಳಗದಿಂದ ಹಣಕಾಸು ಸಮಸ್ಯೆಗಳು ನಿವಾರಣೆಯಾಗುತ್ತವೆ. ಕನಸಿನ ಕನ್ಯ ಜೊತೆ ಮದುವೆ ಚಿಂತನೆ. ಚಿಂತೆಗಳನ್ನು ಬಿಟ್ಟು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಯಿರಿ. ಬಿಸಿನೆಸ್ ಮೀಟಿಂಗ್ಗಳಲ್ಲಿ ನೇರ ಮಾತನಾಡಬೇಡಿ. ಮಕ್ಕಳ ಸಂತಾನ ಸಮಸ್ಯೆ ನಿಮಗೆ ಕಾಡಲಿದೆ. ಅಳಿಯನ ಒರಟುತನ ನಿಮಗೆ ಬೇಸರ.ಅದೃಷ್ಟ ಸಂಖ್ಯೆ: 5ಶುಭ ಸಮಯ ಮಧ್ಯಾಹ್ನ
ಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಕುಂಭ
ಅಧಿಕಾರಿ ವರ್ಗದವರಿಗೆ ಪ್ರಭಾವಶಾಲಿ ವ್ಯಕ್ತಿಯ ಒತ್ತಡ ಹೆಚ್ಚಾಗಲಿದೆ,ಹೊಸದಾಗಿ ಪ್ರಾರಂಭಿಸಿರುವ ಉದ್ಯಮ ಹಣಕಾಸು ಪರಿಸ್ಥಿತಿಗಳು ಸುಧಾರಿಸುತ್ತವೆ. ನಿಮಗೆ ಹತ್ತಿರವಿರುವ ಸ್ನೇಹಿತರ ಭೇಟಿ. ಇಂದು ನೀವು ನಿಮ್ಮ ಕನಸಿನ ಹುಡುಗಿಯನ್ನು ಭೇಟಿ ಮಾಡುವಿರಿ. ನಿಮ್ಮ ಮಾತಾಪಿತೃ ಕಣ್ಣುಗಳ ಶಸ್ತ್ರಚಿಕಿತ್ಸೆ ಸಂಭವ. ನಿಮ್ಮ ಹೃದಯ ಸಮಸ್ಯೆ ಕಾಡಲಿದೆ. ನಿಮ್ಮ ಬಾಸ್ ನಿಂದ ಶಹಭಾಸ್ಗಿರಿ.
ಸರ್ಕಾರಿ ಉದ್ಯೋಗಿಗಳು ಬಾಕಿಯಿರುವ ಕೆಲಸಗಳನ್ನು ಪೂರ್ಣಗೊಳಿಸಿ ಇಲ್ಲಾಂದ್ರೆ ಮೇಲಾಧಿಕಾರಿ ಇಂದ ತೊಂದರೆ ಅನುಭವಿಸುವಿರಿ. ನಿಮ್ಮ ಖ್ಯಾತಿಗೆ ಧಕ್ಕೆ ತರುವ ಸ್ನೇಹಿತರೊಂದಿಗೆ ಸಂಬಂಧ ಹೊಂದಬೇಡಿ. ನೀವು ಇಂದು ನಿಮ್ಮ ವೈವಾಹಿಕ ಜೀವನದ ನೆನಪು. ವಿಚ್ಛೇದನ ಪಡೆದ ಮಕ್ಕಳ ಮರು ಮದುವೆ ವಿಚಾರದಿಂದ ಸಂತೋಷ ಅನುಭವಿಸುತ್ತೀರಿ.ಅದೃಷ್ಟ ಸಂಖ್ಯೆ: 8ಶುಭ ಸಮಯ ಸಂಜೆ
ಶ್ರೀ ಸೋಮಶೇಖರ್ ಗುರೂಜಿB.Scಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.
Mob. 9353488403
ಮೀನ
ಮದುವೆಗಾಗಿ ನಿಶ್ಚಿತಾರ್ಥ ದಿನಾಂಕ ನಿಗದಿ ಮಾಡುವಿರಿ,ನಿಮ್ಮ ಹೆಂಡತಿಯ ಜೊತೆ ದೇವದರ್ಶನ ಪಡೆಯಿರಿ. ಪತ್ನಿಯ ಜೊತೆ ಕುಟುಂಬದ ಸಮಸ್ಯೆಗಳನ್ನು ಹಂಚಿಕೊಳ್ಳಿ. ನಿಮ್ಮ ಮಕ್ಕಳೂ ಕೂಡ ಮನೆಯಲ್ಲಿನ ಶಾಂತಿ ಸಾಮರಸ್ಯದ ವಾತಾವರಣ ಮೂಡಲಿದೆ. ಮಕ್ಕಳ ಮದುವೆ ಚಿಂತನೆ . ಶಿಕ್ಷಕರಿಗೆ ವರ್ಗಾವಣೆ ಚಿಂತನೆ ಕಾಡಲಿದೆ. ವೃತ್ತಿ ಜೀವನದಲ್ಲಿ ನಿಮ್ಮ ಮಾತುಕತೆಗೆ ನಿಮಗೆ ಹೆಚ್ಚಿನ ಸ್ವಾಭಾವಿಕತೆ ಮತ್ತು ಸ್ವಾತಂತ್ರ್ಯ ನೀಡುತ್ತದೆ. ಕೆಲವು ಪ್ರಮುಖ ಯೋಜನೆ ಮನೆ ಕಟ್ಟುವ ವಿಚಾರ ಯಶಸ್ಸು. ಕೃಷಿ ಭೂಮಿಯಲ್ಲಿ ಹೊಸ ತಂತ್ರಜ್ಞಾನ ಕಾರ್ಯಗತಗೊಳಿಸಲಾಗುತ್ತದೆ ರಿಯಲ್ ಎಸ್ಟೇಟ್ ದಂಧೆ ಮಾಡುವವರು ಆರ್ಥಿಕ ಲಾಭವಾಗಲಿದೆ.
ಹಳಸಿಹೋದ ಸಂಬಂಧಗಳೊಂದಿಗಿನ ಸಂಬಂಧಗಳು ಹಾಗೂ ಬಂಧಗಳ ನವೀಕರಣದ ಒಂದು ದಿನ. ಪ್ರೇಮಿಗಳು ಕುಟುಂಬದ ಹಿರಿಯರ ಮಾರ್ಗದರ್ಶನದಲ್ಲಿ ಮದುವೆ ಚಿಂತನೆ. ರಾಜಕಾರಣಿಗಳು ಹಾಗೂ ಸಮಾಜ ಸೇವಕರು ಭಾವನೆಗಳ ಬಗ್ಗೆ ತುಂಬ ಕಾಳಜಿ ಹೊಂದಿರುತ್ತೀರಿ. ನಿಮ್ಮ ಕೆಲಸದಲ್ಲಿನ ತಪ್ಪನ್ನು ಒಪ್ಪಿಕೊಳ್ಳುವುದು ಅನಿವಾರ್ಯವಾಗಿದೆ. ನಿಮ್ಮ ಪರವಾಗಿ ಕೆಲಸ ಮಾಡುತ್ತಿದ್ದ ಹಿತೈಷಿಗಳಿಂದ ತೊಂದರೆ ಕಾಡಲಿದೆ.
ನೀವು ನಿಮ್ಮ ವ್ಯಾಪಾರದ ಪ್ರಗತಿಯ ಬಗ್ಗೆ ಅದನ್ನು ಹೇಗೆ ಸುಧಾರಿಸಬಹುದೆಂದು ವಿಶ್ಲೇಷಿಸಬೇಕು. ನಿಮ್ಮ ತಪ್ಪಿನಿಂದ ಹಾನಿ ಉಂಟು ಮಾಡಿದ್ದು ನೀವು ಕ್ಷಮೆಯಾಚಿಸಬೇಕು. ಹಣಕಾಸು ವ್ಯವಹಾರ ಜನರೊಡನೆ ವ್ಯವಹರಿಸುವಾಗ ಜಾಮೀನು ನೀಡಬಾರದು. ಇಂದು, ನೀವು ಮತ್ತು ನಿಮ್ಮ ಸಂಗಾತಿಯೊಡನೆ ಮನಸ್ತಾಪ.ಶುಭ ಸಂಖ್ಯೆ 6
ಶುಭ ಸಮಯ ಬೆಳಗ್ಗೆಶ್ರೀ ಸೋಮಶೇಖರ್ ಗುರೂಜಿB.Sc
ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ ಸಂಖ್ಯಾಶಾಸ್ತ್ರ ಹಾಗೂ ನಾಡಿಶಾಸ್ತ್ರ ಪರಿಣಿತರು.Mob. 9353488403

ಅಂಕಣ
ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ
ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.
ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು
ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.
ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.
ಇತ್ತೀಚಿನ ಪಾಸ್ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.
ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.
ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.
ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.
ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.
ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.
ಆಗಸ್ಟ್ 30ರೊಳಗೆ ಬರಹಗಳನ್ನು ಇ-ಮೇಲ್: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.
ಕಚೇರಿ ವಿಳಾಸ
ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಈರುಳ್ಳಿ ಕೇವಲ ತರಕಾರಿಯಲ್ಲ ; ಅದ್ಭುತ ಔಷಧ
ನಾವು ನಿತ್ಯವೂ ತಯಾರಿಸುವ ಅಡುಗೆ ಪದಾರ್ಥಗಳಿಗೆ ಈರುಳ್ಳಿಯನ್ನು ಹಾಕದಿದ್ದಾಗ ಒಂದು ರುಚಿಯಾದರೆ ಅದನ್ನು ಹಾಕಿದಾಗ ಆ ಪದಾರ್ಥದ ರುಚಿಯೇ ಬೇರೆಯಾಗುತ್ತದೆ. ನಾವು ಈರುಳ್ಳಿಯ ಗುಣಗಳು, ಅದರ ಉಪಯೋಗಗಳು ಮತ್ತು ಮನೆ ಮದ್ದುಗಳ ಬಗ್ಗೆ ತಿಳಿದುಕೊಳ್ಳೋಣ.
ಆಯುರ್ವೇದದಲ್ಲಿ ಈರುಳ್ಳಿಯ ಬಗ್ಗೆ ವಿಸ್ತೃತ ವಿವರಣೆ ಇದೆ. ಆಯುರ್ವೇದ ಗ್ರಂಥಗಳ ಪ್ರಕಾರ ಈರುಳ್ಳಿಗೆ ಬೆಳ್ಳುಳ್ಳಿಯ ಗುಣಗಳಿವೆ. ಆದರೆ ಬೆಳ್ಳುಳ್ಳಿಯಂತೆ ಇದು ಉಷ್ಣವಲ್ಲ. ಹಾಗಾಗಿ ಬೆಳ್ಳುಳ್ಳಿಯ ಅದ್ಭುತ ಗುಣಗಳನ್ನು ಪಡೆಯಬೇಕು ಎಂದಾದರೆ ಮತ್ತು ಬೆಳ್ಳುಳ್ಳಿಯನ್ನು ಸೇವಿಸಿದರೆ ಉಷ್ಣವಾಗುತ್ತದೆ ಎಂಬ ಯೋಚನೆ ಇದ್ದರೆ ಬದಲಿಗೆ ಈರುಳ್ಳಿಯನ್ನು ಬಳಸಬಹುದು.
ಭಾವ ಪ್ರಕಾಶ ನಿಘಂಟು ಎಂಬ ಗ್ರಂಥದಲ್ಲಿ “ಬಲವೀರ್ಯ ಕೈರೋ ಗುರುಃ” ಎಂದಿದ್ದಾರೆ. ಅಂದರೆ ಈರುಳ್ಳಿಯು ದೇಹದ ಬಲವನ್ನು, ವೀರ್ಯದ ಗುಣಮಟ್ಟವನ್ನು, ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದರ್ಥ. ಬಹುತೇಕ ಎಲ್ಲಾ ಆಯುರ್ವೇದ ಗ್ರಂಥಗಳಲ್ಲಿಯೂ ಈರುಳ್ಳಿಯಿಂದ ಲೈಂಗಿಕ ಶಕ್ತಿ ವೃದ್ಧಿಯಾಗುತ್ತದೆ ಎಂಬುದನ್ನು ಹೇಳಲಾಗಿದೆ. ಇದು ಚರ್ಮಕ್ಕೆ ಕೂಡ ಅತ್ಯಂತ ಅನುಕೂಲಕರವಾದದ್ದು. ಚರ್ಮವನ್ನು ಸ್ನಿಗ್ಧಗೊಳಿಸಿ ಒರಟುತನವನ್ನು ಹೋಗಲಾಡಿಸುತ್ತದೆ; ಚರ್ಮಕ್ಕೆ ಕಾಂತಿಯನ್ನು ಕೊಡುತ್ತದೆ; ಜೊತೆಗೆ ಚರ್ಮದ ಶುದ್ಧಿಯನ್ನೂ ಮಾಡುತ್ತದೆ ಎಂದು ವಿವರಿಸಲಾಗಿದೆ. ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದ ಬಾಹ್ಯ ಮತ್ತು ಆಂತರಿಕ ಕಾಂತಿ ಹೆಚ್ಚುತ್ತದೆ.
ಅಂದರೆ ಕೇವಲ ಸೌಂದರ್ಯವೃದ್ಧಿಯಷ್ಟೇ ಅಲ್ಲ ದೇಹದೊಳಗಿನ ರೋಗನಿರೋಧಕ ಶಕ್ತಿ ತುಂಬಾ ಚೆನ್ನಾಗಿ ಹೆಚ್ಚುತ್ತದೆ. ಈರುಳ್ಳಿಯು ಧ್ವನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಿ ಒಳ್ಳೆಯ ಧ್ವನಿಯನ್ನು ನೀಡುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಹಾಡುಗಾರರು, ಅಧ್ಯಾಪಕರಂಥವರಿಗೆ ನಿಯಮಿತ ಈರುಳ್ಳಿ ಸೇವನೆ ಅನುಕೂಲಕರ. ಇದು ಕಣ್ಣಿನ ಆರೋಗ್ಯವನ್ನು ಹೆಚ್ಚಿಸುವುದರಿಂದ ಹತ್ತರಿಂದ ಹದಿನೈದು ಮಿಲೀ ಈರುಳ್ಳಿ ರಸವನ್ನು ಸುಮಾರು ಒಂದು ತಿಂಗಳು ದಿನಕ್ಕೊಮ್ಮೆ ಸೇವಿಸುವುದರಿಂದ ಚಿಕ್ಕಪುಟ್ಟ ಕಣ್ಣಿನ ತೊಂದರೆಗಳು ನಿವಾರಣೆಯಾಗುತ್ತವೆ. ಸ್ವಲ್ಪ ಸಿಹಿ ಇರುವ ಅಂದರೆ ಖಾರ ಕಡಿಮೆ ಇರುವ ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ತುಪ್ಪದಲ್ಲಿ ಹುರಿದು ನಿಯಮಿತವಾಗಿ ಸೇವಿಸಿದರೆ ಲೈಂಗಿಕ ಶಕ್ತಿಯ ವೃದ್ಧಿಯಾಗುತ್ತದೆ.
ಕೂದಲು ಉದುರುವುದನ್ನು ಕಡಿಮೆ ಮಾಡಲು ಈರುಳ್ಳಿಯು ಸಹಕಾರಿ. ಈರುಳ್ಳಿಯ ರಸ ತೆಗೆದು ತಲೆ ಸ್ನಾನ ಮಾಡುವ ಹತ್ತು ನಿಮಿಷ ಮೊದಲು ಕೂದಲಿನ ಬುಡಕ್ಕೆ ಹಚ್ಚಬೇಕು. ಇದರಿಂದ ಕೂದಲಿನ ಬೆಳವಣಿಗೆ ಚೆನ್ನಾಗಿ ಆಗಲು ಮತ್ತು ಕೂದಲು ಉದುರುವುದು ನಿಲ್ಲಲು ಸಹಾಯವಾಗುತ್ತದೆ. ಬೊಜ್ಜನ್ನು ಕಡಿಮೆ ಮಾಡಲು ಕೂಡ ಈರುಳ್ಳಿಯು ಸಹಕಾರಿ. ಬೆಳ್ಳುಳ್ಳಿಯ ಇನ್ನೊಂದು ಅದ್ಭುತ ಗುಣವೆಂದರೆ ಅದು ನರದ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಯಾಟಿಕಾದಂತಹ ಸಮಸ್ಯೆಗಳನ್ನು ಅನುಭವಿಸುತ್ತಿರುವವರಿಗೆ ಈರುಳ್ಳಿ ತುಂಬಾ ಲಾಭದಾಯಕ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದು ಕಫ ಹೊರಗೆ ಬರುತ್ತಿಲ್ಲದಿದ್ದರೆ ಎರಡು ಚಮಚದಷ್ಟು ಈರುಳ್ಳಿ ರಸ, ಅರ್ಧ ಚಮಚದಷ್ಟು ಶುಂಠಿ ರಸ, ಅರ್ಧ ಚಮಚದಷ್ಟು ತುಳಸಿ ಎಲೆಗಳ ರಸ ಮತ್ತು ಒಂದು ಚಮಚ ಜೇನುತುಪ್ಪವನ್ನು ಸೇರಿಸಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಸೇವಿಸಿದರೆ ಕಫ ಹೊರಗೆ ಬಂದು ಸಮಸ್ಯೆ ನಿವಾರಣೆಯಾಗುತ್ತದೆ.
ಈರುಳ್ಳಿ ಒಳ್ಳೆಯ ಜೀರ್ಣಕಾರಿಯೂ ಹೌದು ಹಾಗಾಗಿ ಅಜೀರ್ಣ ಇರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿಯನ್ನು ಹಾಕಿ ಹೆಸರುಬೇಳೆಯ ತಿಳಿಸಾರು ಮಾಡಿ ಊಟಕ್ಕೆ ನೀಡಿದರೆ ಅಜೀರ್ಣದ ಸಮಸ್ಯೆ ತುಂಬಾ ಚೆನ್ನಾಗಿ ಹತೋಟಿಗೆ ಬರುತ್ತದೆ. ಜೊತೆಗೆ ಶಕ್ತಿ ವೃದ್ಧಿಯೂ ಆಗುತ್ತದೆ. ಒಟ್ಟಿನಲ್ಲಿ ಈರುಳ್ಳಿಯನ್ನು ಸರಿಯಾಗಿ ಬಳಸಿಕೊಂಡರೆ ಅದು ಕೇವಲ ತರಕಾರಿಯಲ್ಲ ಅದ್ಭುತ ಔಷಧ.(ಬರಹ-ಡಾ|| ವೆಂಕಟ್ರಮಣ ಹೆಗಡೆ
ವೇದ ವೆಲ್ನೆಸ್ ಸೆಂಟರ್, ನಿಸರ್ಗಮನೆ, ಶಿರಸಿ, ಉ.ಕನ್ನಡ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ3 days agoಅನುದಾನ ದುರುಪಯೋಗ | ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಡಾ. ಅಶೋಕ್ ಡಿ.ಆರ್ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ3 days agoತುರ್ತು ಕುಡಿಯುವ ನೀರಿನ ಯೋಜನೆ ; 7 ಕೋಟಿ ಅನುದಾನದಲ್ಲಿ ಅವ್ಯವಹಾರ : ತನಿಖೆಗೆ ಆದೇಶಿಸಿ ವಕೀಲ ಡಾ.ಕೆ.ಎ.ಓಬಳಪ್ಪ ಲೋಕಾಗೆ ದೂರು
-
ದಿನದ ಸುದ್ದಿ2 days agoಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ
-
ದಿನದ ಸುದ್ದಿ14 hours agoಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್


