Connect with us

ದಿನದ ಸುದ್ದಿ

ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ 18 ನೇ ವರ್ಷಾಚರಣೆ | ಪುಸ್ತಕ ಲೋಕಾರ್ಪಣೆ, ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಮತ್ತು ರಾಜ್ಯಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

Published

on

ಸುದ್ದಿದಿನ,ರಾಣೆಬೆನ್ನೂರು : ರಾಣೆಬೇನ್ನೂರಿನ ರಂಗ ಕುಸುಮ ಪ್ರಕಾಶನ ಮತ್ತು ಕಲಾಕೇಂದ್ರದ (ರಿ)18 ನೇ ವರ್ಷಾಚರಣೆ ನಿಮಿತ್ತ 16 ಅಕ್ಟೋಬರ್ 2022ರ ಭಾನುವಾರದಂದು ‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಶೀರ್ಷಿಕೆಯಡಿ ರಾಣೆಬೇನ್ನೂರಿನ ವಾಗೀಶ ನಗರದಲ್ಲಿರುವ ಕಸಾಪ ಭವನದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರಿಗೆ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ,ಕಿರು ನಾಟಕ ಸ್ಪರ್ಧೆಯಲ್ಲಿ ವಿಜೇತರುಗೆ ಬಹುಮಾನ ವಿತರರಣೆ ಮತ್ತು ಕವಿಗೋಷ್ಠಿ ಆಯೋಜನೆ ಮಾಡಲಾಗಿದೆ ಎಂದು ಸಂಸ್ಥಾಪಕ ಅಧ್ಯಕ್ಷರಾದ ರಂಗ ಕರ್ಮಿ ಶಿಕ್ಷಕ ವೆಂಕಟೇಶ ಈಡಿಗರ ಹೇಳಿದ್ದಾರೆ.

‘ಸಾಹಿತ್ಯ ಸಂಗಮ – ರಂಗ ಸಂಭ್ರಮ’ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿರುವ ‘ಶಿವಲೀಲಾಮೃತ’ ಮತ್ತು ‘ಸಂಕ್ರಾಂತಿ ಸಂಪ್ರೀತಿ’ ಕೃತಿಗಳನ್ನು ಶಿವಾನಂದ ಸೊಂಡುರು ಹಾಗೂ ದೇವರಾಜ ಹುಣಸಿಕಟ್ಟೆಯವರು ಪರಿಚಯ ಮಾಡಲಿದ್ದಾರೆ.ಅಧ್ಯಕ್ಷತೆಯನ್ನು ಪ್ರಾಧ್ಯಾಪಕರಾದ ಡಾ. ಶಿವಕುಮಾರ ಎಂ.ಇ.ವಹಿಸಲಿದ್ದು; ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಕೆ.ರವೀಂದ್ರನಾಥ ಇವರು ಮುಖ್ಯ ಅತಿಥಿಗಳಾಗಿ ಆಹ್ವಾನಿತರಾಗಿರುವ ಸಮಾರಂಭದಲ್ಲಿ ಕಾರ್ಯಕ್ರಮ ಸಂಘಟಕ ವೆಂಕಟೇಶ ಈಡಿಗರ ಪ್ರಾಸ್ತಾವಿಕ ಮಾತುಗಳಿಗೆ ಧ್ವನಿಯಾಗಲಿದ್ದಾರೆ.’ಕನ್ನಡ ರಂಗಭೂಮಿ ಅಂದು -ಇಂದು’ ವಿಷಯದ ಕುರಿತು ಉಡುಪಿಯ ಗಣೇಶರಾವ್ ಎಲ್ಲೂರು ಉಪನ್ಯಾಸ ನಿಡಲಿದ್ದು; ‘ಕನ್ನಡ ಸಾಹಿತ್ಯದ ಮಹತ್ವ’ ವಿಷದ ಬಗ್ಗೆ ವೆಂಕಟೇಶ ಕುಲಕರ್ಣಿ ಉಪನ್ಯಾಸ ನೀಡುವರು.

ಮೈಸೂರಿನ ರಂಗಕರ್ಮಿ ನಾಗಚಂದ್ರ, ಬೆಂಗಳೂರಿನ ರಾಮಕೃಷ್ಣ ಬೆಳತೂಕ,ಗದಗಿನ ದತ್ತ ಪ್ರಸನ್ನ ಪಾಟೀಲ,ಬಸವ ಟಿ. ವಿ ಮುಖ್ಯ ಕಾರ್ಯನಿರ್ವಾಹಕ ಮಹೇಶ ಬೆಂಗಳೂರು ಇವರು ‘ಕರ್ನಾಟಕ ಕಲಾನಿಧಿ’ ಪ್ರಶಸ್ತಿಗೆ ಭಾಜನರಾದರೆ ಮಂಜುನಾಥ ಮಣಿಕಂಠ, ರಾಘವೇಂದ್ರ ಹಳಿ ಪೇಟ, ಸುಖದೇವ ಕಾಂಬ್ಳೆ, ಶ್ರೀಶೈಲ ಗುತ್ತೇದಾರ ಹಾಗೂ ಸುರೇಶ ಮಲ್ಲಾಡದ ಇವರು ‘ರಂಗ ಕುಸುಮ ಕಲಾನಿಧಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದು; ಸುನಿತ ಪ್ರಕಾಶ, ಪಾರ್ವತಿಬಾಯಿ ಕಾಶಿಕರ, ಮಹೇಶ ಕೆರೂರ, ಹಾಲ್ಯಾ ನಾಯ್ಕ, ಚನ್ನಬಸಪ್ಪ ಮಲ್ಲೂರ, ವೈಚಾರಿಕ ಸಾಹಿತಿ ಸುಭಾಷ್ ಹೇಮಣ್ಣಾ ಚವ್ಹಾಣ ಈ ಮಹನೀಯರಿಗೆ ‘ರಂಗಕಾವ್ಯ ಸಾಹಿತ್ಯ ಸಿರಿ’ ರಾಜ್ಯ ಮಟ್ಟದ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಕಿರುನಾಟಕ ರಚನಾ ಸ್ಪರ್ಧೆಯಲ್ಲಿ ವಿಜೇತರಾದ ಲೇಖಕರಿಗೆ ಇದೇ ವೇದಿಕೆಯಲ್ಲಿ ಬಹುಮಾನ ವಿತರಣೆ ಮಾಡಲಾಗುವುದು.

ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹೆಸರು ನೊಂದಾಯಿಸಿಕೊಂಡಿರುವ ಸುಮಾರು ೪೫ ಕವಿ ಕವಯತ್ರಿಯವರು ಸ್ಪರ್ಧಾ ಸ್ವರೂಪದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಲಿರುವ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಿಜಯಕಾಂತ ಪಾಟೀಲರು ವಹಿಸಿದ್ದು; ಮಖ್ಯ ಅತಿಥಿಗಳಾಗಿ ಉಮಾದೇವಿ ಐರಣಿಯವರು ಆಗಮಿಸುವರು.

ಕವಿ ಚಂದ್ರಪ್ಪ ಬಾರಂಗಿ, ಆನಂದ ಹಕ್ಕೆನ್ನವರ ನಿರೂಪಿಸಲಿದ್ದು; ಶಕುಂತಲಾ ಅರ್ಕಾಚಾರಿ ಪ್ರಾರ್ಥಿಸಿದರೆ, ದಾವಲ ಮಲಿಕ ಸ್ವಾಗತಿಸುವರು. ಕವಯತ್ರಿ ದ್ರಾಕ್ಷಾಯಣಿ ಉದಗಟ್ಟಿ, ಲಕ್ಷ್ಮಿ ಅಡಕೆ,ಚನ್ನಬಸಪ್ಪ ನಾಡರ, ಪುಷ್ಷಾ ಮಂಜುನಾಥ ನಿರ್ವಹಿಸುವರು. ಬಸಮ್ಮ ಏಗಿನಗೌಡ್ರ,ಕಾವ್ಯಶ್ರೀ ಅಂಗಡಿ ವಂದಿಸುವರು.ಸಾಹಿತ್ಯ ಮತ್ತು ರಂಗಭೂಮಿ ಆಸಕ್ತ ಸಹೃದಯ ಶೋತೃ ಬಂಧು-ಮಿತ್ರರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಶಿಕ್ಷಕರಾದ ಸಿ.ಎಚ್.ನಾಗೇಂದ್ರಪ್ಪ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending