ದಿನದ ಸುದ್ದಿ
ಗದುಗಿನ ತೋಂಟದಾರ್ಯ ಮಠದ ನೂತನ ಉತ್ತರಾಧಿಕಾರಿ ‘ಬಸವನುಯಾಯಿ ಡಾ ಸಿದ್ದರಾಮ ಶ್ರೀ’ಗಳಿಗೆ ಶರಣರ ಆಶೀರ್ವಾದವಿರಲಿ
ಶ್ರೀ ಸಾಮಾನ್ಯರ ಶ್ರೀಗಳಾಗಿ,ಕಂದಾಚಾರ ಮೂಢನಂಬಿಕೆಯ ವಿರುದ್ಧ ಗುಡುಗಿ ತ್ರಿವಿಧ ದಾಸೋಹಿಗಳಾಗಿ,ಗೋಕಾಕ್ ಚಳವಳಿಗೆ ನಾಂದಿ ಹಾಡಿ , ಜನ ಮೆಚ್ಚಿದ ಗುರುವಾದ ಗದುಗಿನ ತೋಂಟದಾರ್ಯ ಶ್ರೀ ಮಠದ ಡಾ.ಸಿದ್ದಲಿಂಗ ಸ್ವಾಮೀಜಿಯವರು ಲಿಂಗೈಕ್ಯರಾದ ಸುದ್ದಿ ಪೀಠಾಭಿಮಾನಿಗಳಿಗೆ ಬರ ಸಿಡಿಲಿನಂತೆ ಎರಗಿದ್ದು ಎಲ್ಲರನ್ನೂ ದುಃಖದ ಮಡುವಿನಲ್ಲಿ ಮಲಗಿಸಿದೆ. ಪೂಜ್ಯರು 2008 ರಲ್ಲಿಯೇ ತಮ್ಮ ಉತ್ತರಾಧಿಕಾರಿಗಳನ್ನಾಗಿ ನಾಗನೂರು ರುದ್ರಾಕ್ಷಿ ಮಠದ ಶ್ರೀಗಳ ಹೆಸರನ್ನು ಉಯಿಲಿನಲ್ಲಿ ನಮೂದಿಸಿರುವುದು ತಮ್ಮ ನಂತರವೂ ಸಮಾಜ ಮುಖಿ ಚಿಂತನೆಯ ಯೋಗ್ಯ ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿರುವುದು ಲೋಕ ಮೆಚ್ಚುಗೆಗೆ ಪಾತ್ರವಾಗಿದೆ.
ಗದುಗಿನ ತೋಂಟದಾರ್ಯ ಶ್ರೀ ಮಠದ ಉತ್ತರಾಧಿಕಾರಾಯಾಗಿ ನೇಮಕಗೊಂಡ ನಾಗನೂರೂ ರುದ್ರಾಕ್ಷಿ ಮಠದ ಪೂಜನೀಯ ಡಾ. ಶ್ರೀ ಸಿದ್ದರಾಮ ಸ್ವಾಮೀಜಿಯವರು ಅಪ್ಪಟ ಬಸವಣ್ಣನವರ ಅನುಯಾಯಿಗಳು. ಧಾರ್ಮಿಕ ದಬ್ಬಾಳಿಕೆಯ ವಿರುದ್ಧ ಹೋರಾಡುತ್ತಿರುವ ನಿತ್ಯ ಕ್ರಾಂತಿ ಯೋಗಿಗಳು.ಸಮತೆಯ ಹಾಗೂ ಸಮಾಜ ಕಲ್ಯಾಣದ ಕನಸು ಹೊತ್ತವರು,ಸ್ವತಂತ್ರ
ಲಿಂಗಾಯತ ಧರ್ಮದ ಸಾಧಕ ಬಾಧಕಗಳನ್ನು ಅರಿತು ಪ್ರಚುರ ಪಡಿಸಿದವರು.ಸಾಂಸ್ಕೃತಿಕ ಮತ್ತು ವಚನ ಸಾಹಿತ್ಯ ಕೃಷಿಗೆ ಪ್ರೋತ್ಸಾಹ ನೀಡುತ್ತಾ ಬಂದಿರುವವರು.
ನಾನೇ ಶ್ರೇಷ್ಠ ಎಂದು ಬೊಗಳೇ ಬಿಡುವ ಪೂಜಾರಿ ಪುರೋಹಿತ ಕಪಟ ಕಾವಿಧಾರಿಗಳ ನಿದ್ದೆ ಕೆಡಿಸಿದವರು.ಕಾಯಕವೇ ಪೂಜೆ, ಜನತೆಯೇ ಜಂಗಮವೆಂಬ ತತ್ವವನ್ನು ನಿತ್ಯಾನುಷ್ಟಾನ ಕೈಂಕರ್ಯದ ತರಳಬಾಳು ಶ್ರೀ ಜಗದ್ಗುರುವರ್ಯರೊಡನೆ ಉತ್ತಮ ಬಾಂಧವ್ಯ ಹೊಂದಿದವರು.ತರಳಬಾಳು ಶ್ರೀ ಜಗದ್ಗುರುವರ್ಯರ ವಿದ್ವತ್ ಪ್ರಭೆಗೆ ಮಾರು ಹೋಗಿ ಮಾರ್ಗದರ್ಶನದ ಆಶೀರ್ವಾದ ಬೇಡುವ ನಿಜ ಸಂತರು. ಪೂಜ್ಯರು ಇತ್ತೀಚೆಗೆ ಜಗಳೂರಿನಲ್ಲಿ ಜರುಗಿದ ತರಳಬಾಳು ಹುಣ್ಣಿಮೆ ಮಹೋತ್ಸವದ ಮೊದಲನೇ ದಿನದ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಕರುಣಿಸಿದ ಆಶೀರ್ವಚನ ಶ್ರೀ ಮಠದ ಮೇಲೆ ಅವರು ಹೊಂದಿರುವ ಗೌರವ ವಿಶ್ವಾಸಗಳಿಗೆ ಸಾಕ್ಷಿಯಂತಿದೆ.
ಪೂಜ್ಯರು ಕನ್ನಡದ ಜಗದ್ಗುರುವಿನ ಆಶೀರ್ವಾದದ ಆಣತಿಯಂತೆ.ಗದಗಿನ ಡಂಬಳದ ತೋಂಟದಾರ್ಯ ಮಠದ ಗುರುತರ ಜವಾಬ್ದಾರಿ ಹೊರಲಿರುವುದು ಬಸವಾನುಯಾಯಿಗಳಿಗೆ ಸಂತಸ ತಂದಿದೆ.
ನಡೆ ಮತ್ತು ನುಡಿಯಲಿ ಅಣ್ಣನವರ ಆಜ್ಞಾದಾರಿಗಳಾದ ಶ್ರೀಗಳಿಗೆ ವಿಶ್ವಬಂಧು ಮರುಳಸಿದ್ದರ ತರಳಬಾಳು ಜಗದ್ಗುರುವರ್ಯರ ಆಶೀರ್ವಾದ ಪೂರ್ವಕ ಮಾರ್ಗದರ್ಶನ ಸದಾ ಇರಲೆಂಬ ಆಶಯ ನಮ್ಮದು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
ದಿನದ ಸುದ್ದಿ
ಶಿವಮೊಗ್ಗಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ
ಸುದ್ದಿದಿನ, ಶಿವಮೊಗ್ಗ : ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಮಧ್ಯಾಹ್ನ 2 ಗಂಟೆಗೆ ಶಿವಮೊಗ್ಗದಲ್ಲಿ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿ ಮಾತನಾಡಲಿದ್ದಾರೆ.
ಯುವಜನರು, ಮಹಿಳೆಯರು, ರೈತರು ಸೇರಿ ಸುಮಾರು ಎರಡೂವರೆ ಲಕ್ಷಕ್ಕೂ ಹೆಚ್ಚು ಜನರು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚುನಾವಣಾ ಬಾಂಡ್ ಕುರಿತ ದತ್ತಾಂಶ ಬಿಡುಗಡೆ
ಸುದ್ದಿದಿನ,ನವದೆಹಲಿ : ಚುನಾವಣಾ ಬಾಂಡ್ ಕುರಿತಂತೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ ಇಂದ ಲಭ್ಯವಾದ ಅಂಕಿಕೃತ ದತ್ತಾಂಶ ಮಾದರಿಯನ್ನು ಚುನಾವಣಾ ಆಯೋಗ ಭಾನುವಾರ ತನ್ನ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದೆ. www.eci.gov.in/candidate-politicalparty ವೆಬ್ಸೈಟ್ನಲ್ಲಿ ಈ ದತ್ತಾಂಶ ಲಭ್ಯವಿರುತ್ತದೆ.
ಸುಪ್ರೀಂಕೋರ್ಟ್ ನಿರ್ದೇಶಿಸಿದಂತೆ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್ ಕುರಿತ ದತ್ತಾಂಶಗಳನ್ನು ಮೊಹರು ಹಾಕಿದ ಲಕೋಟೆಯಲ್ಲಿ ಸಲ್ಲಿಸಿದ್ದವು ಎಂದು ಚುನಾವಣಾ ಆಯೋಗದ ಹೇಳಿಕೆ ತಿಳಿಸಿದೆ. ರಾಜಕೀಯ ಪಕ್ಷಗಳಿಂದ ಸ್ವೀಕರಿಸಿದ ಮೊಹರು ಹಾಕಿದ ಲಕೋಟೆಗಳನ್ನು ತೆರೆಯದೇ ಸುಪ್ರೀಂಕೋರ್ಟ್ಗೆ ಸಲ್ಲಿಸಲಾಗಿತ್ತು.
ಇದೇ 15ರಂದು ಸುಪ್ರೀಂಕೋರ್ಟ್ ನೀಡಿದ ಆದೇಶದ ಮೇರೆಗೆ ಸುಪ್ರೀಂಕೋರ್ಟ್ನ ರಿಜಿಸ್ಟ್ರಿ, ಭೌತಿಕ ಪ್ರತಿ ಹಾಗೂ ಅದರ ಡಿಜಿಟಲ್ ದಾಖಲೆಯಿರುವ ಪೆನ್ಡ್ರೈವ್ ಒಳಗೊಂಡ ಮೊಹರು ಹಾಕಿದ ಲಕೋಟೆಯನ್ನು ಹಿಂತಿರುಗಿಸಿತ್ತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ರಶ್ಮಿ ಚಂದ್ರಗಿರಿ ಅವರಿಗೆ ಪಿಎಚ್.ಡಿ ಪದವಿ
ಸುದ್ದಿದಿನ,ಹಾವೇರಿ : ನಗರದ ರಶ್ಮಿ ಚಂದ್ರಗಿರಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಂಡಿಸಿದ “ದಲಿತ ಬಂಡಾಯ ಕಾದಂಬರಿಗಳಲ್ಲಿ ಸಾಂಸ್ಕೃತಿಕ ನೆಲೆಗಳು” ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿ ಪ್ರಧಾನ ಮಾಡಿದೆ.
ಇವರಿಗೆ ಡಾ.ಬಿಎಸ್.ಭಜಂತ್ರಿ , ಸಹಾಯಕ ಪ್ರಧ್ಯಾಪಕರು ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ ಇವರು ಮಾರ್ಗದರ್ಶನ ಮಾಡಿದ್ದರು.
ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ರಶ್ಮಿ ಚಂದ್ರಗಿರಿಯವರ ಹಲವು ಲೇಖನಗಳು ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿವೆ. ಪ್ರಸ್ತುತ ಇವರು ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿತ್ತಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243