Connect with us

ರಾಜಕೀಯ

“ನನ್ನ ರಾಜೀವ್ ನನಗೆ ಮರಳಿ ನೀಡಿ, ನಾನು ಹಿಂತಿರುಗಿ ಹೋಗುತ್ತೇನೆ” ಸೋನಿಯಾ ಗಾಂಧಿ ಮನ‌ಮಿಡಿವ ಪತ್ರ : ಮಿಸ್ ಮಾಡ್ದೆ ಓದಿ..!

Published

on

  • ಮೂಲ : ಸೋನಿಯಾ ಗಾಂಧಿ |ಅನುವಾದ : ರಾಮಚಂದ್ರ ಹುದುಗೂರು

” ನನ್ನ ರಾಜೀವ್ ನನಗೆ ಮರಳಿ ನೀಡಿ
ನಾನು ಹಿಂತಿರುಗಿ ಹೋಗುತ್ತೇನೆ
ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ “

ಸೋನಿಯಾ ಗಾಂಧಿ


ನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ ವರ್ಚಸ್ಸು. ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ಅವರನ್ನು ಎಷ್ಟು ಸಮಯ ನೋಡಿದೆ ಎಂದು ನನಗೆ ತಿಳಿಯಲಿಲ್ಲ.

ನಾನು ನನ್ನ ಸ್ನೇಹಿತನೊಬ್ಬನನ್ನು ಕೇಳಿದೆ ಅವರು ಯಾರು ಎಂದು. ಅವರು ಒಬ್ಬ ಭಾರತೀಯ, ಪಂಡಿತ್ ನೆಹರೂ ಅವರ ಕುಟುಂಬದ ಕುಡಿ ಎಂದಷ್ಟೇ ಉತ್ತರಿಸಿದನು.ನಾನು ನೋಡುತ್ತಲೇ ಇದ್ದೆ. ಮರುದಿನ ಊಟಕ್ಕೆ ಹೊರಟಾಗ ಅವರು ಕೂಡ ಅಲ್ಲಿದ್ದರು, ಆ ದಿನಗಳು ಎಷ್ಟು ಸಂತೋಷವಾಗಿತ್ತೆಂದರೆ ಅದು ಸ್ವರ್ಗವಾಗಿತ್ತು.

ನಾವು ನದಿಗಳ ಉದ್ದಕ್ಕೂ ಸವಾರಿ ಮಾಡುತ್ತಿದ್ದೆವು, ಕಾರಿನಲ್ಲಿ ಓಡುತ್ತಿದ್ದೆವು, ಕೈ ಕೈ ಹಿಡಿದು ಬೀದಿಗಳಲ್ಲಿ ನಡೆದಾಡುತ್ತಿದ್ದೆವು, ಇಬ್ಬರು ಸಿನಿಮಾಗಳನ್ನು ನೋಡುತ್ತಿದ್ದೆವು. ನಾವು ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಿದ್ದು ನನಗೆ ನೆನಪಿಲ್ಲ, ಅದರ ಅಗತ್ಯವೂ ಇರಲಿಲ್ಲ, ಎಲ್ಲವೂ ಸಹಜವಾಗಿತ್ತು, ನಾವು ಇಬ್ಬರು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ನಾವು ಒಟ್ಟಿಗೆ ಬದುಕುವ ಸಮಯ ಎಂದು ಆಗಲೇ ನಿರ್ಧರಿಸಿದೆವು.

ಇಂದಿರಾ ಗಾಂಧಿ ಆಗ ಪ್ರಧಾನಿಯಾಗಿದ್ದರು.
ಅವರು ಇಂಗ್ಲೆಂಡ್ ಬಂದಾಗ ರಾಜೀವ್‌ ಭಯ ದಿಂದಲೆ ನಾವು ಮದುವೆಯಾಗಲು ನಿಮ್ಮ ಅನುಮತಿ ಬೇಕೆಂದು ಇಂದಿರಾಜಿ ಗೆ ಕೇಳಿದ್ದರು ಇಂದಿರಾ ನಮ್ಮನ್ನು ಭಾರತಕ್ಕೆ ಬರಲು ಹೇಳಿದರು.

ಭಾರತದ ಯಾವುದೇ ಮೂಲೆಯಲ್ಲಿ ರಾಜೀವ್ ಅವರೊಂದಿಗೆ ಇರಲು ನನಗೆ ಧೈರ್ಯವಿದೆ. ಇಂದಿರಾ ಜಿ ಮದುವೆಗೆ ನೆಹರು ಜಿ ಉಡುಗೊರೆ ಕೊಟ್ಟಿದ್ದ ಆ ಗುಲಾಬಿ ಬಣ್ಣದ ಸೀರೆಯನ್ನು ನಾನು ಧರಿಸಿದ್ದೆ. ರಾಜೀವ್ ನಾನು ಒಂದಾದೆವು ನನ್ನ ಕನಸು ನನಸಾದ ಸಮಯ ಅದು,ನಾನು ಮತ್ತು ರಾಜೀವ್ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿ ನಾನು ಇಲ್ಲಿಯೇ ನೆಲೆಸಿದೆ.

ದಿನಗಳು ಹೇಗೆ ಗತಿಸಿ ಹೋದವು ಎಂಬುದು ನನಗೆ ನೆನಪಿಲ್ಲ. ರಾಜೀವ್ ಸಹೋದರ ವಿಮಾನ ಅಪಘಾತದಲ್ಲಿ ಮೃತಪಟ್ಟಾಗ ಇಂದಿರಾ ಜಿ ಅವರಿಗೆ ರಾಜಕೀಯ ವಾರಸುದಾರರಾಗಿ ಬೆಂಬಲಕ್ಕೆ ನಿಂತೆವು. ರಾಜೀವ್ ರಾಜಕೀಯಕ್ಕೆ ಬರಲು ಪ್ರಾರಂಭಿಸಿದರು. ನನಗೆ ಅದು ಇಷ್ಟವಿಲ್ಲ, ಆದರೆ ನನ್ನ ಪ್ರಯತ್ನ ವಿಫಲ ವಾಯಿತು. ಭಾರತೀಯರಾದ ನೀವು ಹೆಂಡತಿಯ ಮಾತನ್ನು ತಾಯಿಯ ಮುಂದೆ ಕೇಳುವುದಿಲ್ಲ ಎಂಬ ಸತ್ಯ ಅರಿವಾಯಿತು. ಕುಟುಂಬಕ್ಕಾಗಿ ಸಮಯ ನೀಡದ
ಅವರು ರಾಜಕಾರಣಕ್ಕೆ ಬಂದರು, ಸಂಪೂರ್ಣ ವಾಗಿ ಅವರ ಸಮಯವನ್ನು ದೇಶ ಸೇವೆಗಾಗಿ ಕಾಯ್ದಿರಿಸಿದರು.

ಅವರು ದೇಶ ಸೇವೆಗಾಗಿ ಪರಿತಪಿಸುತ್ತದ್ದರು, ಬಡವ ಬಲ್ಲಿದರಿಗಾಗಿ ಸೇವೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತಿದ್ದೆ. ಸುಖ ಸಂತೋಷವಾಗಿದ್ದೇವೆ ಎಂದು ಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ಒಂದು ದಿನ ಮುಂಜಾನೆ ಇಂದಿರಾಜಿ ಮನೆಯಿಂದ ಹೊರಬಂದಾಗ ಗುಂಡಿನ ಸದ್ದು ಕೇಳಿತು, ಹೊರಗೆ ಬಂದು ನೋಡಿದೆ ಇಂದಿರಾಜಿಯ ದೇಹ ರಕ್ತ ಸಿಕ್ತವಾಗಿತ್ತು . ಇಂದಿರಾಜಿ ಜೊತೆ ನನ್ನ ಕೈಗಳು ರಕ್ತದಲ್ಲಿ ತೇವವಾಗಿದ್ದವು, ಅವರ ಜೊತೆಯಲ್ಲಿಯೇ‌ ನಾನೂ ಸಹ ಆಸ್ಪತ್ರೆಗೆ ಹೊರಟೆ ಕೊನೆಗೆ
ನನ್ನ ಕೈ ಗಳಲ್ಲಿಯೇ ಅವರ ಆತ್ಮ ಜಾರಿ ಹೋಯಿತು. ನೀವು ಎಂದಾದರೂ ಸಾವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?

ರಾಜೀವ್ ಸಂಪೂರ್ಣವಾಗಿ ನಮ್ಮ (ಭಾರತ) ದೇಶಕ್ಕೆ‌ ಸಮರ್ಪಿಸಿ ಕೊಂಡಿದ್ದರು. ನಾನು ಅವರೊಂದಿಗೆ ಪ್ರತಿ ಹಂತದಲ್ಲೂ ಸೇವಕಿಯಾಗಿದ್ದೆ. ಒಂದು ದಿನ ಅವರನ್ನೂ ಬಲಿಪಡೆದರು. ಇರಿತಕ್ಕೊಳಗಾದರು ಅದೃಷ್ಟವಶಾತ್ ಜೀವಹಾನಿಯಿಂದ ಪಾರಾದರು.ಮತ್ತೊಂದು ದಿನ ಅವರ ದೇಹ ಚೂರುಚೂರಾಯಿತು, ಆ ಚೂರಾದ ದೇಹವೂ ಮನೆಯ ಆವರಣಕ್ಕೆ ಬಂತು. ಅವರ ಮುಖವು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು. ಹೊರ ಹೋಗುವಾಗ ನಗುತ್ತಿರುವ ಗುಲಾಬಿ ಹೂವಿನಂತಿದ್ದ ಮುಖ ಇನ್ನಿಲ್ಲದಾಗಿತ್ತು. ನನ್ನ ಮನೆಯಲ್ಲಿ ಒಬ್ಬರಲ್ಲ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡೆ.

ಈ ದೇಶ ನನ್ನದು, ಈ ಪ್ರೀತಿಯನ್ನು ನನ್ನ ದೇಶದೊಂದಿಗೆ ಮಾತ್ರ ಹಂಚಿಕೊಳ್ಳ ಬಯಸಯತ್ತೇನೆ. ಕೊನೆಯ ಬಾರಿ ನಾನು ಅವರು ನೋಡಿದ ಮುಖವನ್ನು ಮರೆಯಲು ಬಯಸುತ್ತೇನೆ. ಆದರೆ ಮೊದಲು ನಾವು ಬೇಟಿಯಾದ ರೆಸ್ಟೋರೆಂಟ್, ಆ ಸಂಜೆ, ಆ ಮುಗುಳ್ನಗೆ ಮಾತ್ರ ನಾನು ನೆನಪಿಟ್ಟುಕೊಳ್ಳಲು ಬಯಸಿದ್ದೆ. ನಾನು ಈ ದೇಶದಲ್ಲಿ ರಾಜೀವ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ ರಾಜೀವ್ ಇಲ್ಲದೆ ಇನ್ನೂ ಹೆಚ್ಚು.

ಜವಾಬ್ದಾರಿಯನ್ನು ನಿರ್ವವಹಿಸಿದ್ದೇನೆ ಅಧಿಕಾರ ಇರುವವರೆಗೂ ಅವರ ಪರಂಪರೆಯನ್ನು ಮುರಿಯದಂತೆ ನಡೆದುಕೊಂಡು ಬಂದಿದ್ದೇನೆ.ಅದು ಈ ದೇಶದ ಸಮೃದ್ಧಿಯ ಅದ್ಭುತ ಕ್ಷಣಗಳನ್ನು ನನಗೆ ನೀಡಿದೆ. ನಾನು ಮನೆ ಮತ್ತು ಅವರ ಕುಟುಂಬವನ್ನು ಪರಿಪೂರ್ಣ ವಾಗಿ ನಿರ್ವಹಿಸಿದ್ದೇನೆ.ಪರಿಪೂರ್ಣ ಜೀವನವನ್ನು ನಡೆಸಿದ್ದೇನೆ. ನಾನು ನನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ.ರಾಜೀವ್‌ ನೀಡಿದ ಭರವಸೆಗಳನ್ನೂ ನಾನು ಬಗೆಹರಿಸಿದ್ದೇನೆ.

ಸರ್ಕಾರಗಳು ಸುಂಟರಗಾಳಿ ಯಂತೆ ಬರುತ್ತವೆ ಹೋಗುತ್ತವೆ. ಈ ಸೋಲುಗಳು ಈಗ ನನಗೆ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದು ನೀವು ಭಾವಿಸುತ್ತೀರಾ? ನೀವು ಮಾಡುವ ನಿಂದನೆಗಳು ಪರದೇಶಿ, ಬಾರ್ ಬಾಲೆ, ಜರ್ಸಿ ಹಸು, ವಿಧವೆ, ಕಳ್ಳಸಾಗಣೆದಾರಳು, ಪತ್ತೇದಾರಿ…ಇವು ನೀವು ನೀಡಿದ ಕೊಡುಗೆಗಳು. ನನ್ನ ಬಗ್ಗೆ ಒಂದು ಟಿವಿ ಮಾಧ್ಯಮ ಕೆಟ್ಟದಾಗಿ ಪ್ರಚಾರ ಮಾಡುತ್ತಿದೆ. ಅದು ಅನಿಯಂತ್ರಿತವಾಗಿ ತನ್ನ ಪ್ರವೃತ್ತಿಗಳೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿನಿತ್ಯ ನಿಂದನೆ ಮಾಡುತ್ತಾರೆ.ಅವು ನನ್ನನ್ನು ಕಾಡುತ್ತಿವೆಯೇ? ಇಲ್ಲ ಆ ನಿಂದಕರ ಮೇಲೆ ನನಗೆ ಖಂಡಿತವಾಗಿಯೂ ದ್ವೇಷವಿಲ್ಲ ಅನುಕಂಪವಿದೆ.

ನೆನಪಿಡಿ ಕಣ್ಣು ಮುಂದೆಯೇ ಪ್ರೀತಿಪಾತ್ರರ ಶವವನ್ನು ನೋಡುವುದು ಎಷ್ಟು ದುಃಖಕರವಾದದ್ದು. ತುಂಬಾ ದುಃಖ ಅನುಭವಿಸಿದ ನಂತರ ನನ್ನ ಮನಸ್ಸು ಕಲ್ಲು ಬಂಡೆಯಾಯಿತು. ಆದರೂ ನೀವು ನನ್ನನ್ನು ದ್ವೇಷಿಸುತ್ತಿದ್ದೀರಿ. ನಾನು ಇಂದು ಹಿಂತಿರುಗಿ ಹೋಗುತ್ತೇನೆ ಆದರೆ ನನಗೆ ನನ್ನ ರಾಜೀವ್‌ ರನ್ನು ಹಿಂದಿರುಗಿಸಿ. ನೀವು ನನ್ನ ರಾಜೀವ್ ರನ್ನು ಹಿಂತಿರುಗಿಸದಿದ್ದರೆ ನೀವು ಶಾಂತಿಯುತವಾಗಿ ನನ್ನ ರಾಜೀವ್ ರ ಸುತ್ತಲಿರುವ ಮಣ್ಣಿನಲ್ಲಿ ಮಣ್ಣಾಗಲು ಬಿಡಿ.

(ಸೋನಿಯಾ ಗಾಂಧಿಯವರ ಪತ್ರದಿಂದ ಆಯ್ದ ಭಾಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

Published

on

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ ವೀರ ಯೋಧರಿಗೆ ಪ್ರಧಾನಿ ಗೌರವ ಸಮರ್ಪಣೆ ಮಾಡಲಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಂಕುನ್ ಲಾ ಸುರಂಗ ಮಾರ್ಗ ಯೋಜನೆಗೆ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ.

ಈ ಯೋಜನೆಯಡಿ ನಿಮು-ಪದುಮ್-ಡಾರ್ಚಾ ರಸ್ತೆಯಿಂದ ಲೇಹ್‌ಗೆ ಎಲ್ಲಾ ಹವಾಮಾನಗಳಲ್ಲೂ ಸಂಪರ್ಕ ಕಲ್ಪಿಸಲು ಸುಮಾರು 15 ಸಾವಿರದ 800 ಅಡಿ ಎತ್ತರದಲ್ಲಿ 4.1 ಕಿಲೋಮೀಟರ್ ಉದ್ದದ ಜೋಡಿ ಸುರಂಗ ಮಾರ್ಗವನ್ನು ನಿರ್ಮಿಸಲಾಗುವುದು. ಈ ಕಾರ್ಯ ಪೂರ್ಣಗೊಂಡ ನಂತರ ವಿಶ್ವದಲ್ಲೇ ಇದು ಅತಿ ಎತ್ತರದ ಸುರಂಗ ಮಾರ್ಗವಾಗಲಿದೆ. ಸಶಸ್ತ್ರ ಪಡೆಗಳ ಸುಗಮ ಪ್ರಯಾಣಕ್ಕಷ್ಟೇ ಅಲ್ಲದೇ ಲಡಾಕ್‌ನಲ್ಲಿ ಆರ್ಥಿಕ ಹಾಗೂ ಸಾಮಾಜಿಕ ಅಭಿವೃದ್ಧಿಗೂ ಈ ಸುರಂಗ ಮಾರ್ಗವು ಸಹಕಾರಿಯಾಗಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕೇಂದ್ರ ಬಜೆಟ್ : ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ

Published

on

ಸುದ್ದಿದಿನಡೆಸ್ಕ್:ಕೇಂದ್ರದ ಮುಂಗಡ ಪತ್ರ ದೇಶದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೆಲುಗು ದೇಶಂ ನಾಯಕ ಕೇಂದ್ರ ಸಚಿವ ಕಿಂಜರಪು ರಾಮಮೋಹನ ನಾಯ್ಡು ಹೇಳಿದ್ದಾರೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ಬಜೆಟ್ ಎಲ್ಲರ ಕನಸಾಗಿದೆ ಎಂದು ಹೇಳಿದ್ದಾರೆ. ಈಶಾನ್ಯ ರಾಜ್ಯಗಳ ಬೆಳವಣಿಗೆಗೆ ಆಯ-ವ್ಯಯ ಪೂರಕವಾಗಿದೆ ಎಂದು ಹೇಳಿದರು.

ಬಿಜೆಪಿ ಹಿರಿಯ ನಾಯಕ ರವಿಶಂಕರ್ ಪ್ರಸಾದ್, ಉದ್ಯೋಗ ಹೆಚ್ಚಿಸುವ ಕಾರ್ಯಕ್ರಮವನ್ನು ಹಣಕಾಸು ಸಚಿವರು ಪ್ರಕಟಿಸಿರುವುದಾಗಿ ಹೇಳಿದ್ದಾರೆ. ಜೆಡಿಯು ಮುಖಂಡ ರಾಜೀವ್ ರಂಜನ್ ಸಿಂಗ್, ಆಯ-ವ್ಯಯ ಬಿಹಾರ ಜನತೆಗೆ ಹಾಗೂ ಪ್ರವಾಸೋದ್ಯಮಕ್ಕೆ ಒತ್ತು ನೀಡಿದೆ ಎಂದರು.

ಕಾಂಗ್ರೆಸ್ ಮುಖಂಡ ಶಶಿತರೂರ್ ಪ್ರತಿಕ್ರಿಯೆಸಿ, ಉದ್ಯೋಗ ಖಾತರಿ ಯೋಜನೆಯ ರಾಜ್ಯಗಳ ತಾರತಮ್ಯವನ್ನು ನಿಭಾಯಿಸಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಶಿವಸೇನಾ ನಾಯಕ ಪ್ರಿಯಾಂಕ ಚತುರ್ವೇದಿ, ಮಹಾರಾಷ್ಟ್ರ ರಾಜ್ಯಕ್ಕೆ ನಿರ್ಧಿಷ್ಟವಾದ ಯೋಜನೆಗಳನ್ನು ಪ್ರಕಟಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಡಿಎಂಕೆ ನಾಯಕ ಟಿ.ಆರ್.ಬಾಲು, ಟಿಎಂಸಿ ನಾಯಕಿ ಕಲ್ಯಾಣ ಬ್ಯಾನರ್ಜಿ ಅವರು, ಆಯ-ವ್ಯಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕದ ಸಂಸದರಾದ ಬಸವರಾಜ ಬೊಮ್ಮಾಯಿ, ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಜಗದೀಶ್ ಶೆಟ್ಟರ್, ಜನಪರ ಸಾಮಾನ್ಯವರ್ಗದವರ ಆಯ-ವ್ಯಯವಾಗಿದೆ ಎಂದರು. ಕೇಂದ್ರ ಸಚಿವರಾದ ಎಚ್.ಡಿ.ಕುಮಾರ್‌ಸ್ವಾಮಿ, ವಿ.ಸೋಮಣ್ಣ ಹಾಗೂ ಶೋಭಾ ಕರಂದ್ಲಾಜೆ ಅವರುಗಳು ಆಯ-ವ್ಯಯವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ. ಭಾರತೀಯ ಕೈಗಾರಿಕಾ ಒಕ್ಕೂಟದ ಅಧ್ಯಕ್ಷ ಅನಿಶ್ ಶಹಾ ಪ್ರತಿಕ್ರಿಯಿಸಿ, ದೇಶದ ಬೆಳವಣಿಗೆಗೆ ಪೂರಕ ಆಯ-ವ್ಯಯ ರೈತರು, ಯುವಕರು, ಮಹಿಳೆಯರಿಗೆ ಸಹಕಾರಿ ಎಂದು ಹೇಳಿದ್ದಾರೆ.

ಶಿಕ್ಷಣ, ಆರೋಗ್ಯ, ರಕ್ಷಣಾ ಕ್ಷೇತ್ರಗಳಿಗೆ ಅನುದಾನವನ್ನು ಗಣನೀಯವಾಗಿ ಖಡಿತ ಮಾಡಿದ್ದಾರೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸರ್ಕಾರಕ್ಕೆ ಹಲವು ಯೋಜನೆಗಳ ಅನುಷ್ಠಾನಕ್ಕೆ ನೆರವು ಕೋರಿದ್ದೆವು. ಮಾಹಿತಿ ತಂತ್ರಜ್ಞಾನಕ್ಕೆ ನೀಡಿದ್ದ ಅನುದಾನವನ್ನು ಕಡಿಮೆ ಮಾಡಿರುವ ಕೇಂದ್ರ ಸರ್ಕಾರ, ಪರಿಶಿಷ್ಟ ಸಮುದಾಯ ಮತ್ತು ಅಲ್ಪ ಸಂಖ್ಯಾತರ ಅಭಿವೃದ್ಧಿಗೆ ಅನುದಾನವನ್ನು ಖಡಿತ ಮಾಡಿ, ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲ ಸೌಕರ್ಯ ಅನ್ವೇಷಣೆ ಹಾಗೂ ಅಭಿವೃದ್ಧಿಗೆ ಆಯ-ವ್ಯಯ ಪೂರಕವಾಗಿದೆ ಎಂದು ರಾಷ್ಟ್ರೀಯ ಹೆದ್ದಾರಿ ಹಾಗೂ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆಯ-ವ್ಯಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ದೇಶದ ಉತ್ಪಾದನೆ ಹಾಗೂ ಬೆಳವಣಿಗೆಯ ಪ್ರಮಾಣದಲ್ಲಿ ಕೃಷಿ, ಉದ್ಯೋಗ, ಕೌಶಲ್ಯಾಭಿವೃದ್ಧಿ ಜೊತೆಗೆ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಲಾಗಿದೆ ಎಂದು ಅವರು ತಿಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending