Connect with us

ರಾಜಕೀಯ

“ನನ್ನ ರಾಜೀವ್ ನನಗೆ ಮರಳಿ ನೀಡಿ, ನಾನು ಹಿಂತಿರುಗಿ ಹೋಗುತ್ತೇನೆ” ಸೋನಿಯಾ ಗಾಂಧಿ ಮನ‌ಮಿಡಿವ ಪತ್ರ : ಮಿಸ್ ಮಾಡ್ದೆ ಓದಿ..!

Published

on

  • ಮೂಲ : ಸೋನಿಯಾ ಗಾಂಧಿ |ಅನುವಾದ : ರಾಮಚಂದ್ರ ಹುದುಗೂರು

” ನನ್ನ ರಾಜೀವ್ ನನಗೆ ಮರಳಿ ನೀಡಿ
ನಾನು ಹಿಂತಿರುಗಿ ಹೋಗುತ್ತೇನೆ
ನೀವು ಅವರನ್ನು ನನಗೆ ಹಿಂತಿರುಗಿಸದಿದ್ದರೆ ನಾನು ಇಲ್ಲಿಯೇ ಈ ಮಣ್ಣಿನಲ್ಲಿ ಮಣ್ಣಾಗಿ ಹೋಗುತ್ತೇನೆ “

ಸೋನಿಯಾ ಗಾಂಧಿ


ನಾಯಿತೆಂದು ನಿಮಗೆ ತಿಳಿದಿಲ್ಲ, ನಾನು ಹೇಗೆ ಭೇಟಿಮಾಡಿದೆ ಎಂದು ನಿಮಗೆ ತಿಳಿದಿಲ್ಲ. ಅವರ ಆ ಮುಗುಳ್ನಗೆ, ಎತ್ತರ ಅವರ ಆಕರ್ಷಣೆಯ ಕಣ್ಣುಗಳು, ಆ ವರ್ಚಸ್ಸು. ನಾನು ಅವರನ್ನು ಮೊದಲ ಬಾರಿಗೆ ನೋಡಿದಾಗ ನಾನು ಅವರನ್ನು ಎಷ್ಟು ಸಮಯ ನೋಡಿದೆ ಎಂದು ನನಗೆ ತಿಳಿಯಲಿಲ್ಲ.

ನಾನು ನನ್ನ ಸ್ನೇಹಿತನೊಬ್ಬನನ್ನು ಕೇಳಿದೆ ಅವರು ಯಾರು ಎಂದು. ಅವರು ಒಬ್ಬ ಭಾರತೀಯ, ಪಂಡಿತ್ ನೆಹರೂ ಅವರ ಕುಟುಂಬದ ಕುಡಿ ಎಂದಷ್ಟೇ ಉತ್ತರಿಸಿದನು.ನಾನು ನೋಡುತ್ತಲೇ ಇದ್ದೆ. ಮರುದಿನ ಊಟಕ್ಕೆ ಹೊರಟಾಗ ಅವರು ಕೂಡ ಅಲ್ಲಿದ್ದರು, ಆ ದಿನಗಳು ಎಷ್ಟು ಸಂತೋಷವಾಗಿತ್ತೆಂದರೆ ಅದು ಸ್ವರ್ಗವಾಗಿತ್ತು.

ನಾವು ನದಿಗಳ ಉದ್ದಕ್ಕೂ ಸವಾರಿ ಮಾಡುತ್ತಿದ್ದೆವು, ಕಾರಿನಲ್ಲಿ ಓಡುತ್ತಿದ್ದೆವು, ಕೈ ಕೈ ಹಿಡಿದು ಬೀದಿಗಳಲ್ಲಿ ನಡೆದಾಡುತ್ತಿದ್ದೆವು, ಇಬ್ಬರು ಸಿನಿಮಾಗಳನ್ನು ನೋಡುತ್ತಿದ್ದೆವು. ನಾವು ಒಬ್ಬರಿಗೊಬ್ಬರು ಪ್ರೀತಿಯನ್ನು ವ್ಯಕ್ತಪಡಿಸಿದ್ದು ನನಗೆ ನೆನಪಿಲ್ಲ, ಅದರ ಅಗತ್ಯವೂ ಇರಲಿಲ್ಲ, ಎಲ್ಲವೂ ಸಹಜವಾಗಿತ್ತು, ನಾವು ಇಬ್ಬರು ಒಬ್ಬರಿಗೊಬ್ಬರು ಹುಟ್ಟಿದ್ದೇವೆ ನಾವು ಒಟ್ಟಿಗೆ ಬದುಕುವ ಸಮಯ ಎಂದು ಆಗಲೇ ನಿರ್ಧರಿಸಿದೆವು.

ಇಂದಿರಾ ಗಾಂಧಿ ಆಗ ಪ್ರಧಾನಿಯಾಗಿದ್ದರು.
ಅವರು ಇಂಗ್ಲೆಂಡ್ ಬಂದಾಗ ರಾಜೀವ್‌ ಭಯ ದಿಂದಲೆ ನಾವು ಮದುವೆಯಾಗಲು ನಿಮ್ಮ ಅನುಮತಿ ಬೇಕೆಂದು ಇಂದಿರಾಜಿ ಗೆ ಕೇಳಿದ್ದರು ಇಂದಿರಾ ನಮ್ಮನ್ನು ಭಾರತಕ್ಕೆ ಬರಲು ಹೇಳಿದರು.

ಭಾರತದ ಯಾವುದೇ ಮೂಲೆಯಲ್ಲಿ ರಾಜೀವ್ ಅವರೊಂದಿಗೆ ಇರಲು ನನಗೆ ಧೈರ್ಯವಿದೆ. ಇಂದಿರಾ ಜಿ ಮದುವೆಗೆ ನೆಹರು ಜಿ ಉಡುಗೊರೆ ಕೊಟ್ಟಿದ್ದ ಆ ಗುಲಾಬಿ ಬಣ್ಣದ ಸೀರೆಯನ್ನು ನಾನು ಧರಿಸಿದ್ದೆ. ರಾಜೀವ್ ನಾನು ಒಂದಾದೆವು ನನ್ನ ಕನಸು ನನಸಾದ ಸಮಯ ಅದು,ನಾನು ಮತ್ತು ರಾಜೀವ್ ಒಟ್ಟಿಗೆ ಹೊಸ ಜೀವನವನ್ನು ಪ್ರಾರಂಭಿಸಿ ನಾನು ಇಲ್ಲಿಯೇ ನೆಲೆಸಿದೆ.

ದಿನಗಳು ಹೇಗೆ ಗತಿಸಿ ಹೋದವು ಎಂಬುದು ನನಗೆ ನೆನಪಿಲ್ಲ. ರಾಜೀವ್ ಸಹೋದರ ವಿಮಾನ ಅಪಘಾತದಲ್ಲಿ ಮೃತಪಟ್ಟಾಗ ಇಂದಿರಾ ಜಿ ಅವರಿಗೆ ರಾಜಕೀಯ ವಾರಸುದಾರರಾಗಿ ಬೆಂಬಲಕ್ಕೆ ನಿಂತೆವು. ರಾಜೀವ್ ರಾಜಕೀಯಕ್ಕೆ ಬರಲು ಪ್ರಾರಂಭಿಸಿದರು. ನನಗೆ ಅದು ಇಷ್ಟವಿಲ್ಲ, ಆದರೆ ನನ್ನ ಪ್ರಯತ್ನ ವಿಫಲ ವಾಯಿತು. ಭಾರತೀಯರಾದ ನೀವು ಹೆಂಡತಿಯ ಮಾತನ್ನು ತಾಯಿಯ ಮುಂದೆ ಕೇಳುವುದಿಲ್ಲ ಎಂಬ ಸತ್ಯ ಅರಿವಾಯಿತು. ಕುಟುಂಬಕ್ಕಾಗಿ ಸಮಯ ನೀಡದ
ಅವರು ರಾಜಕಾರಣಕ್ಕೆ ಬಂದರು, ಸಂಪೂರ್ಣ ವಾಗಿ ಅವರ ಸಮಯವನ್ನು ದೇಶ ಸೇವೆಗಾಗಿ ಕಾಯ್ದಿರಿಸಿದರು.

ಅವರು ದೇಶ ಸೇವೆಗಾಗಿ ಪರಿತಪಿಸುತ್ತದ್ದರು, ಬಡವ ಬಲ್ಲಿದರಿಗಾಗಿ ಸೇವೆ ಮಾಡುತ್ತಿದ್ದಾರೆ ಎಂದು ನಾನು ಭಾವಿಸುತ್ತಿದ್ದೆ. ಸುಖ ಸಂತೋಷವಾಗಿದ್ದೇವೆ ಎಂದು ಕೊಳ್ಳುತ್ತಿದ್ದಾಗ ಅನಿರೀಕ್ಷಿತವಾಗಿ ಒಂದು ದಿನ ಮುಂಜಾನೆ ಇಂದಿರಾಜಿ ಮನೆಯಿಂದ ಹೊರಬಂದಾಗ ಗುಂಡಿನ ಸದ್ದು ಕೇಳಿತು, ಹೊರಗೆ ಬಂದು ನೋಡಿದೆ ಇಂದಿರಾಜಿಯ ದೇಹ ರಕ್ತ ಸಿಕ್ತವಾಗಿತ್ತು . ಇಂದಿರಾಜಿ ಜೊತೆ ನನ್ನ ಕೈಗಳು ರಕ್ತದಲ್ಲಿ ತೇವವಾಗಿದ್ದವು, ಅವರ ಜೊತೆಯಲ್ಲಿಯೇ‌ ನಾನೂ ಸಹ ಆಸ್ಪತ್ರೆಗೆ ಹೊರಟೆ ಕೊನೆಗೆ
ನನ್ನ ಕೈ ಗಳಲ್ಲಿಯೇ ಅವರ ಆತ್ಮ ಜಾರಿ ಹೋಯಿತು. ನೀವು ಎಂದಾದರೂ ಸಾವನ್ನು ಇಷ್ಟು ಹತ್ತಿರದಿಂದ ನೋಡಿದ್ದೀರಾ?

ರಾಜೀವ್ ಸಂಪೂರ್ಣವಾಗಿ ನಮ್ಮ (ಭಾರತ) ದೇಶಕ್ಕೆ‌ ಸಮರ್ಪಿಸಿ ಕೊಂಡಿದ್ದರು. ನಾನು ಅವರೊಂದಿಗೆ ಪ್ರತಿ ಹಂತದಲ್ಲೂ ಸೇವಕಿಯಾಗಿದ್ದೆ. ಒಂದು ದಿನ ಅವರನ್ನೂ ಬಲಿಪಡೆದರು. ಇರಿತಕ್ಕೊಳಗಾದರು ಅದೃಷ್ಟವಶಾತ್ ಜೀವಹಾನಿಯಿಂದ ಪಾರಾದರು.ಮತ್ತೊಂದು ದಿನ ಅವರ ದೇಹ ಚೂರುಚೂರಾಯಿತು, ಆ ಚೂರಾದ ದೇಹವೂ ಮನೆಯ ಆವರಣಕ್ಕೆ ಬಂತು. ಅವರ ಮುಖವು ಬಟ್ಟೆಯಿಂದ ಮುಚ್ಚಲ್ಪಟ್ಟಿತ್ತು. ಹೊರ ಹೋಗುವಾಗ ನಗುತ್ತಿರುವ ಗುಲಾಬಿ ಹೂವಿನಂತಿದ್ದ ಮುಖ ಇನ್ನಿಲ್ಲದಾಗಿತ್ತು. ನನ್ನ ಮನೆಯಲ್ಲಿ ಒಬ್ಬರಲ್ಲ ಇಬ್ಬರು ಕುಟುಂಬ ಸದಸ್ಯರನ್ನು ಕಳೆದುಕೊಂಡೆ.

ಈ ದೇಶ ನನ್ನದು, ಈ ಪ್ರೀತಿಯನ್ನು ನನ್ನ ದೇಶದೊಂದಿಗೆ ಮಾತ್ರ ಹಂಚಿಕೊಳ್ಳ ಬಯಸಯತ್ತೇನೆ. ಕೊನೆಯ ಬಾರಿ ನಾನು ಅವರು ನೋಡಿದ ಮುಖವನ್ನು ಮರೆಯಲು ಬಯಸುತ್ತೇನೆ. ಆದರೆ ಮೊದಲು ನಾವು ಬೇಟಿಯಾದ ರೆಸ್ಟೋರೆಂಟ್, ಆ ಸಂಜೆ, ಆ ಮುಗುಳ್ನಗೆ ಮಾತ್ರ ನಾನು ನೆನಪಿಟ್ಟುಕೊಳ್ಳಲು ಬಯಸಿದ್ದೆ. ನಾನು ಈ ದೇಶದಲ್ಲಿ ರಾಜೀವ್ ಅವರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ ರಾಜೀವ್ ಇಲ್ಲದೆ ಇನ್ನೂ ಹೆಚ್ಚು.

ಜವಾಬ್ದಾರಿಯನ್ನು ನಿರ್ವವಹಿಸಿದ್ದೇನೆ ಅಧಿಕಾರ ಇರುವವರೆಗೂ ಅವರ ಪರಂಪರೆಯನ್ನು ಮುರಿಯದಂತೆ ನಡೆದುಕೊಂಡು ಬಂದಿದ್ದೇನೆ.ಅದು ಈ ದೇಶದ ಸಮೃದ್ಧಿಯ ಅದ್ಭುತ ಕ್ಷಣಗಳನ್ನು ನನಗೆ ನೀಡಿದೆ. ನಾನು ಮನೆ ಮತ್ತು ಅವರ ಕುಟುಂಬವನ್ನು ಪರಿಪೂರ್ಣ ವಾಗಿ ನಿರ್ವಹಿಸಿದ್ದೇನೆ.ಪರಿಪೂರ್ಣ ಜೀವನವನ್ನು ನಡೆಸಿದ್ದೇನೆ. ನಾನು ನನ್ನ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಿದ್ದೇನೆ.ರಾಜೀವ್‌ ನೀಡಿದ ಭರವಸೆಗಳನ್ನೂ ನಾನು ಬಗೆಹರಿಸಿದ್ದೇನೆ.

ಸರ್ಕಾರಗಳು ಸುಂಟರಗಾಳಿ ಯಂತೆ ಬರುತ್ತವೆ ಹೋಗುತ್ತವೆ. ಈ ಸೋಲುಗಳು ಈಗ ನನಗೆ ವ್ಯತ್ಯಾಸವನ್ನುಂಟುಮಾಡುತ್ತವೆ ಎಂದು ನೀವು ಭಾವಿಸುತ್ತೀರಾ? ನೀವು ಮಾಡುವ ನಿಂದನೆಗಳು ಪರದೇಶಿ, ಬಾರ್ ಬಾಲೆ, ಜರ್ಸಿ ಹಸು, ವಿಧವೆ, ಕಳ್ಳಸಾಗಣೆದಾರಳು, ಪತ್ತೇದಾರಿ…ಇವು ನೀವು ನೀಡಿದ ಕೊಡುಗೆಗಳು. ನನ್ನ ಬಗ್ಗೆ ಒಂದು ಟಿವಿ ಮಾಧ್ಯಮ ಕೆಟ್ಟದಾಗಿ ಪ್ರಚಾರ ಮಾಡುತ್ತಿದೆ. ಅದು ಅನಿಯಂತ್ರಿತವಾಗಿ ತನ್ನ ಪ್ರವೃತ್ತಿಗಳೊಂದಿಗೆ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಪ್ರತಿನಿತ್ಯ ನಿಂದನೆ ಮಾಡುತ್ತಾರೆ.ಅವು ನನ್ನನ್ನು ಕಾಡುತ್ತಿವೆಯೇ? ಇಲ್ಲ ಆ ನಿಂದಕರ ಮೇಲೆ ನನಗೆ ಖಂಡಿತವಾಗಿಯೂ ದ್ವೇಷವಿಲ್ಲ ಅನುಕಂಪವಿದೆ.

ನೆನಪಿಡಿ ಕಣ್ಣು ಮುಂದೆಯೇ ಪ್ರೀತಿಪಾತ್ರರ ಶವವನ್ನು ನೋಡುವುದು ಎಷ್ಟು ದುಃಖಕರವಾದದ್ದು. ತುಂಬಾ ದುಃಖ ಅನುಭವಿಸಿದ ನಂತರ ನನ್ನ ಮನಸ್ಸು ಕಲ್ಲು ಬಂಡೆಯಾಯಿತು. ಆದರೂ ನೀವು ನನ್ನನ್ನು ದ್ವೇಷಿಸುತ್ತಿದ್ದೀರಿ. ನಾನು ಇಂದು ಹಿಂತಿರುಗಿ ಹೋಗುತ್ತೇನೆ ಆದರೆ ನನಗೆ ನನ್ನ ರಾಜೀವ್‌ ರನ್ನು ಹಿಂದಿರುಗಿಸಿ. ನೀವು ನನ್ನ ರಾಜೀವ್ ರನ್ನು ಹಿಂತಿರುಗಿಸದಿದ್ದರೆ ನೀವು ಶಾಂತಿಯುತವಾಗಿ ನನ್ನ ರಾಜೀವ್ ರ ಸುತ್ತಲಿರುವ ಮಣ್ಣಿನಲ್ಲಿ ಮಣ್ಣಾಗಲು ಬಿಡಿ.

(ಸೋನಿಯಾ ಗಾಂಧಿಯವರ ಪತ್ರದಿಂದ ಆಯ್ದ ಭಾಗ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನ, ಶ್ವೇತಪತ್ರ ಹೊರಡಿಸಲು ಎಚ್.ಡಿ. ಕುಮಾರಸ್ವಾಮಿ ಆಗ್ರಹ

Published

on

ಸುದ್ದಿದಿನ, ಬೆಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಯೋಜನೆಯ ಫಲ ಎಷ್ಟು ಜನರಿಗೆ ಲಭ್ಯವಾಗಿದೆ, ಆರ್ಥಿಕವಾಗಿ ಎಷ್ಟು ಹೊರೆಬಿದ್ದಿದೆ, ಇದುವರೆಗೆ ಫಲಾನುಭವಿಗಳ ಖಾತೆಗೆ ಎಷ್ಟು ಹಣ ಜಮೆಯಾಗಿದೆ ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಿದ್ದಾರೆ.

ಸರ್ಕಾರದ ಗ್ಯಾರಂಟಿ ಯೋಜನೆಗಳು ವಿಫಲವಾಗಿದೆ, ಸಮರ್ಪಕವಾಗಿ ಜಾರಿಯಾಗುತ್ತಿಲ್ಲ, ಈ ಬಗ್ಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಪಂಚಾಯತ್ ರಾಜ್ ಇಲಾಖೆ ಜತೆ ಕೆಲಸ ಮಾಡಲು ಬಂಧುತ್ವ ಫೌಂಡೇಷನ್ ಸಿದ್ಧ : ಅಧ್ಯಕ್ಷ ರಾಘು ದೊಡ್ಡಮನಿ

Published

on

ಸುದ್ದಿದಿನ, ದಾವಣಗೆರೆ : ಮಕ್ಕಳ ವಿಷೇಶ ಗ್ರಾಮ ಸಭೆಯ ಮೂಲಕ ಜಿಲ್ಲೆಯ ಮಕ್ಕಳ ಶಿಕ್ಷಣ, ರಕ್ಷಣೆ ಹಾಗೂ ಅವರ ಹಕ್ಕು ಬಾಧ್ಯತೆಗಳಿಗಾಗಿ ಪಂಚಾಯತ್ ರಾಜ್ ಇಲಾಖೆಯ ಜತೆ ಕೆಲಸ ಮಾಡಲು ನಮ್ಮ ಬಂಧುತ್ವ ಫೌಂಡೇಷನ್ ಸಿದ್ಧವಿದೆ ಎಂದು ಫೌಂಡೇಶನ್ ನ ಅಧ್ಯಕ್ಷರಾದ ರಾಘು ದೊಡ್ಡಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ರೂಪಿಸಲು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಇದೇ ತಿಂಗಳ 14 ರಿಂದ ಜನವರಿ 24 ರವರೆಗೆ 10 ವಾರಗಳ ಮಕ್ಕಳ ಸ್ನೇಹಿ ಅಭಿಯಾನ ಹಾಗೂ ಮಕ್ಕಳ ಗ್ರಾಮ ಸಭೆ ನಡೆಸಲು ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೂ ಸೂಚನೆ ನೀಡಲಾಗಿದೆ.

ಈ ಅಭಿಯಾನವು ಗ್ರಾಮ ಪಂಚಾಯಿತಿಗಳನ್ನು ಮಕ್ಕಳ ಸ್ನೇಹಿಯಾಗಿಸಲು ಪಂಚಾಯತ್ ರಾಜ್ ಇಲಾಖೆ ಈ ಮೂಲಕ ದಾಪುಗಾಲಿಟ್ಟಿದೆ. ಸ್ಥಳೀಯ ಸಂಸ್ಥೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವ ಸರ್ಕಾರದ ಮಹಾತ್ವಕಾಂಕ್ಷೆಯ ಯೋಜನೆ ಇದಾಗಿದ್ದು, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಸಹಕಾರದೊಂದಿಗೆ ಗ್ರಾಮ ಪಂಚಾಯಿತಿಗಳು ತಮ್ಮ ಸದಸ್ಯರು ಹಾಗೂ ಸ್ಥಳೀಯ ಶಾಲೆಗಳು, ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಮ್ಮ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲೂ ಕಡ್ಡಾಯವಾಗಿ ಈ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಅಭಿಯಾನ ಹಾಗೂ ಮಕ್ಕಳ ವಿಷೇಶ ಗ್ರಾಮ ಸಭೆ ನಡೆಸಲು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದಿದ್ದಾರೆ.

ಮಕ್ಕಳ ವಿಷೇಶ ಗ್ರಾಮ ಸಭೆಯು ಸ್ಥಳೀಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಮಕ್ಕಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಮಕ್ಕಳ ಆರೋಗ್ಯ, ರಕ್ಷಣೆ, ಅಂಗನವಾಡಿಗಳು, ಶಾಲೆ, ಶಾಲಾ ಆವರಣ, ಸ್ವಚ್ಛತೆ, ಬಡ ಮಕ್ಕಳಿಗೆ ನೆರವು ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯಬೇಕು. ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರುಗಳ ಜೊತೆ ಅಧಿಕಾರಿಗಳು ಸಭೆಯಲ್ಲಿ ಖುದ್ದು ಹಾಜರಿರಬೇಕು. ಮಕ್ಕಳ ಸಭೆ ಅಲ್ಲವೇ ಎಂದು ಯಾರು ಸಹ ನಿರ್ಲಕ್ಷ್ಯ ತೋರುವಂತಿಲ್ಲ. ಸಾಮಾನ್ಯ ಗ್ರಾಮ ಸಭೆಗಳಿಗಿರುವಷ್ಟು ಪ್ರಾಮುಖ್ಯತೆ ಈ ಮಕ್ಕಳ ಸಭೆಗೂ ಇರುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

2024 ರ ಲೋಕಸಭಾ ಸಾರ್ವತ್ರಿಕ ಚುನಾವಣೆ; ರಾಜಕೀಯ ಪಕ್ಷಗಳೊಂದಿಗೆ ಜಾಹಿರಾತು ದರ ನಿಗದಿ ಸಭೆ

Published

on

ಸುದ್ದಿದಿನ,ದಾವಣಗೆರೆ : 2024 ರಲ್ಲಿ ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮುದ್ರಣ, ವಿದ್ಯುನ್ಮಾನ ಮಾಧ್ಯಮ, ಕೇಬಲ್ ಟಿ.ವಿ ಗಳಲ್ಲಿ ಪ್ರಚಾರ ಮಾಡಲು ನಿಗದಿ ಮಾಡಿರುವ ಜಾಹಿರಾತು ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನವೆಂಬರ್ 10 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಅಭ್ಯರ್ಥಿಗಳು ರಾಜ್ಯ ಮಟ್ಟದ ಪತ್ರಿಕೆಗಳು, ಸ್ಥಳೀಯ, ಪ್ರಾದೇಶಿಕ, ವಾರಪತ್ರಿಕೆ, ಕೇಬಲ್ ಟಿ.ವಿ.ಗಳಲ್ಲಿ ನೀಡುವ ಚುನಾವಣಾ ಜಾಹಿರಾತುಗಳಿಗೆ ಅನ್ವಯಿಸುವ ದರದ ಬಗ್ಗೆ ರಾಜಕೀಯ ಪಕ್ಷಗಳ ಮುಖಂಡರಿಗೆ ತಿಳಿಸಲಾಯಿತು.

ಚುನಾವಣಾ ಸಂದರ್ಭದಲ್ಲಿ ಎಂಸಿಎಂಸಿ ಸಮಿತಿಯು ಕಾರ್ಯನಿರ್ವಹಿಸಲಿದ್ದು ಇದರ ಎಲ್ಲಾ ಮೇಲ್ವಿಚಾರಣೆ ನಡೆಸಲಿದೆ. ಅಭ್ಯರ್ಥಿಗಳು ನೀಡುವ ಜಾಹಿರಾತು ವೆಚ್ಚವು ಸಹ ಅಭ್ಯರ್ಥಿಗಳಿಗೆ ವೆಚ್ಚಕ್ಕೆ ನಿಗದಿಪಡಿಸಿರುವ ಮೊತ್ತದಲ್ಲಿ ಸೇರಲಿದೆ ಎಂದು ಪಕ್ಷಗಳ ಮುಖಂಡರಿಗೆ ಮನವರಿಕೆ ಮಾಡಿದರು.

ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಜಿ.ಸಿ.ರಾಘವೇಂದ್ರ ಪ್ರಸಾದ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಧನಂಜಯ, ಚುನಾವಣಾ ತಹಶೀಲ್ದಾರ್ ಅರುಣ್ ಎಸ್.ಕಾರ್ಗಿ ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending