Connect with us

ದಿನದ ಸುದ್ದಿ

ರಾಜ್ಯ ಬಜೆಟ್-2021 ವಿಶ್ಲೇಷಣೆ | ಯಡ್ಡಿ ಬಜೆಟ್ – ಉತ್ಪ್ರೇಕ್ಷೆ, ತಾರತಮ್ಯ ಮತ್ತು ಸುಳ್ಳು ಅಂಕಿಅಂಶಗಳ ಕಣ್ಕಟ್ಟು..!

Published

on

ಫೋಟೋ ಕೃಪೆ : ಡಿಡಿ ಚಂದನ ಸ್ಕ್ರೀನ್ ಶಾಟ್
  • ಶಿವಸುಂದರ್

ಆತ್ಮೀಯರೇ ,
ಬಜೆಟ್ಟಿನ ಬಗ್ಗೆ ಈಗಾಗಲೇ ಸಾಕಷ್ಟು ಅಭಿಪ್ರಾಯಗಳು ಬಂದಾಗಿವೆ. ಇತರ ಎಲ್ಲಾ ಕ್ಷೇತ್ರಗಳಿಗೂ ತೋರಿಕೆಯಲ್ಲಾದರೂ ಬಜೆಟ್ ಹೆಚ್ಚಳ ಮಾಡಿರುವ ಯಡ್ಡಿ ಸರ್ಕಾರ SCSP-STP ಯೋಜನೆಗಳಿಗೆ ಮಾತ್ರ ಕೋವಿಡ್ ಕಾರಣ ತೋರಿಸಿ ಈ ಬಾರಿ ಹೆಚ್ಚಳ ಮಾಡಲಾಗುವುದಿಲ್ಲವೆಂದು ಸ್ಪಷ್ಟವಾಗಿ ಘೋಷಿಸಿದೆ.

ಆದರೆ ಅದೇ ಸಮಯದಲ್ಲಿ ದಲಿತ-ಹಿಂದುಳಿದ ಸಮುದಾಯಗಳ ಎಲ್ಲಾ ಅಭಿವೃದ್ಧಿ ಮಂಡಳಿಗಳಿಗೆ ಒಟ್ಟಾರೆಯಾಗಿ 500 ಕೋಟಿಗಳನ್ನು ಮಾತ್ರ ನೀಡಿದ್ದರೆ, ಲಿಂಗಾಯತ ಹಾಗು ಒಕ್ಕಲಿಗ ಮಂಡಳಿಗಳಿಗೆ ತಲಾ 500 ಕೋಟಿ ಘೋಷಿಸಲಾಗಿದೆ.ಮಾತ್ರವಲ್ಲದೆ ಬಸವಕಲ್ಯಾಣದಲ್ಲಿಯೇ ಆಧುನಿಕ ಅನುಭವ ಮಂಟಪಕ್ಕೆ 500ಕೋಟಿ ನೀಡಲಾಗಿದೆ.

ಈ ಸರ್ಕಾರ ಯಾರದ್ದು ಎಂಬುದನ್ನು ಅರ್ಥಮಾಡಿಕೊಳ್ಳಲು ಬಜೆಟ್ ವೆಚ್ಚದಲ್ಲಿರುವ ಈ ಆದ್ಯತೆಗಳು ಮತ್ತು ತಾರತಮ್ಯಗಳು ಸಾಕು. ಆದರೆ ನಾನು ಈಗ ಹೇಳಲು ಹೊರಟಿರುವುದು ಅದಲ್ಲ. ಇಡೀ ಬಜೆಟ್ಟಿನಲ್ಲಿ ಘೋಷಿಸಲಾಗಿರುವ ಆದಾಯ ಮತ್ತು ಹಾಗು ಅದನ್ನು ಆಧರಿಸಿದ ವೆಚ್ಚಗಳ ಬುನಾದಿಯಲ್ಲೆ ಉತ್ಪ್ರೇಕ್ಷೆ ಮತ್ತು ಕಣ್ಣುಕಟ್ಟಿದೆ. ಇದೆ ಸುಳ್ಳಾದರೆ ಉಳಿದವು ಸುಳ್ಳೇ ಆಗಿರುತ್ತಲ್ಲವೇ?

ಉದಾಹರಣೆಗೆ: ರಾಜ್ಯದ 2021-22 ಸಾಲಿನ ವೆಚ್ಚವನ್ನು ರೂ. 2,46,207 ಕೋಟಿಯೆಂದು ನಿಗದಿ ಪಡಿಸಲಾಗಿದೆ. ಹಾಗು ರಾಜ್ಯದ ಸ್ವಂತ ಆದಾಯ 1,72,271 ಕೋಟಿ ಗಳಾಗಲಿದೆಎಂದು ಅಂದಾಜಿಸಲಾಗಿದೆ.

ಈ ಅಂದಾಜುಗಳನ್ನು ರಾಜ್ಯದ ಒಟ್ಟಾರೆ ರಾಜ್ಯ ಉತ್ಪನ್ನದ ಅಭಿವೃದ್ಧಿ ದರದ ಅಂದಾಜನ್ನು (Gross State Domestic Produce- GSDP) ಆಧರಿಸಿ ಮಾಡಲಾಗುತ್ತದೆ. GSDP ಯ ಅಂದಾಜು ಶೇ. 7ರಷ್ಟು ತೆರಿಗೆ ಸಂಗ್ರಹವಾಗಲಿದೆ ಎಂದು ಅಂದಾಜು ಮಾಡಲಾಗುತ್ತದೆ. ಕೇಂದ್ರದಲ್ಲಿ ಅದು 12-14% ಇರುತ್ತದೆ.

ಇದನ್ನೂ ಓದಿ |ರಾಜ್ಯ ಬಜೆಟ್ | 60 ಸಾವಿರ ಮಹಿಳೆಯರಿಗೆ ಉದ್ಯೋಗ : ಸಿಎಂ ಯಡಿಯೂರಪ್ಪ

ಸರ್ಕಾರದ ಪ್ರಕಾರ ರಾಜ್ಯದ GSDP ಯು 2019-20 ಕ್ಕೆ ಹೋಲಿಸಿದಲ್ಲಿ 2020-21ನೇ ಸಾಲಿನಲ್ಲಿ ಕೋವಿಡ್ ಕಾರಣಕ್ಕೆ ಶೇ. 2.6ರಷ್ಟು ಕುಸಿತವನ್ನು ಕಂಡಿದೆ. 2019-20 ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ GSDP ಯು 16,98,685 ಕೋಟಿ ರೂಪಾಯಿಗಳು. ಇದು ಕೋವಿಡ್ ಕಾರಣಕ್ಕೆ 2020-21ನೇ ಸಾಲಿನಲ್ಲಿ ಶೇ. 2.6 ರಷ್ಟು ಕಡಿಮೆಯಾಗಿದೆ ಎಂದರೆ 16,65,320 ಕೋಟಿ ರೂಪಾಯಿಗಳಾಗಬೇಕು. ಹೀಗಾಗಿ ಎಲ್ಲಾ ತೆರಿಗೆ ಸಂಗ್ರಹ ಅಂದಾಜುಗಳನ್ನು ಇದರ ಆಧಾರದಲ್ಲಿ ಮಾಡಬೇಕು.

ಆದರೆ ಬಜೆಟ್ ದಸ್ತಾವೇಜಿನ ಜೊತೆ ಕಡ್ಡಾಯವಾಗಿ ಒದಗಿಸಬೇಕಿರುವ Mid Term Fiscal Plan-MTFP ದಸ್ತಾವೇಜಿನಲ್ಲಿ ಸರ್ಕಾರವು :

Government of India had communicated a figure of Rs.18,03,609 Crore as State’s GSDP for FY 2020-21 and it has also directed that the same amount be used for evaluation of states fiscal parameters”

ಅಂದರೆ ” ಭಾರತ ಸರ್ಕಾರವು ಕರ್ನಾಟಕದ 2020-21 ನೆ ಸಾಲಿಗೆ ರಾಜ್ಯದ GSDP ಯು 18,03,609 ಕೋಟಿ ಎಂದು ತಿಳಿಸಿದ್ದು ಎಲ್ಲಾ ವಿತ್ತೀಯ ಲೆಕ್ಕಾಚಾರಗಳಿಗೂ ಅದೇ ಅಂಕಿಅಂಶವನ್ನೇ ಬಳಸಬೇಕೆಂದು ಎಂದು ನಿರ್ದೇಶಿಸಿದೆ ” ಎಂದು ಹೇಳಿಕೊಂಡಿದೆ.

ಆದರೆ ಅವೆರಡರ ನಡುವಿನ ವ್ಯತ್ಯಾಸವನ್ನೇನು ಕೇಂದ್ರ ಸರ್ಕಾರ ಭರಿಸುತ್ತಿಲ್ಲ. ಅಷ್ಟೇ ಅಲ್ಲ. ಕೇಂದ್ರದಿಂದ ಸಿಗುವ GST ಪರಿಹಾರ, ಅನುದಾನ ಮತ್ತು ತೆರಿಗೆ ಪಾಲು ಎಲ್ಲವನ್ನು ಕರ್ನಾಟಕಕ್ಕೇ ಕಡಿಮೆ ಮಾಡಲಾಗಿದೆ. ಆದರೂ ಲೆಕ್ಕಾಚಾರವನ್ನು ಮಾತ್ರ ಇರುವುದಕ್ಕಿಂತ ಒಂದು ಲಕ್ಷ ಕೋಟಿ ಹೆಚ್ಚಿಗೆಸೇರಿಸಿ ಮಾಡಬೇಕೆಂದು ಆದೇಶಿಸಿದೆ!! ಹೀಗಾಗಿ ಬಜೆಟ್ಟಿನಲ್ಲಿ ಹೇಳಲಾಗಿರುವ ಪರಿಷ್ಕೃತ ಅಂದಾಜುಗಳಲ್ಲೇ ದೋಷವಿದೆ. ದೊಡ್ಡ ಸುಳ್ಳಿದೆ.

ಎರಡನೆಯದಾಗಿ, ಬಜೆಟ್ಟಿನ ಜೊತೆಗೆ ಒದಗಿಸಲಾಗಿರುವ MTFP – Mid Term Fiscal Plan -ಪ್ರಕಾರ ಹಾಗು 15ನೇ ಹಣಕಾಸು ಆಯೋಗದ ಅಂದಾಜಿನ ಪ್ರಕಾರ ೨೦೨೧-೨೨ ರ ಸಾಲಿನಲ್ಲಿ ಕರ್ನಾಟದ GSDP ಯು 17,02,227 ಕೋಟಿ ರೂ. ಗಳಿಗೆ ಇಳಿಯಲಿದೆ.

ಅಂದರೆ 2020-21 ನೇ ಸಾಲಿಗಿಂತ ಒಂದು ಲಕ್ಷ ಕೋಟಿ ಕಡಿಮೆಯಾಗಲಿದೆ. ಹಾಗಿದ್ದಲ್ಲಿ ಅದೇ ಪ್ರಮಾಣದಲ್ಲಿ ರಾಜ್ಯದ ಸ್ವಂತ ತೆರಿಗೆ ಸಂಗ್ರಹ ಮತ್ತು ಆದಾಯಗಳು ಕಡಿಮೆಯಾಗಬೇಕಲ್ಲವೇ? ಆದರೆ ಬಜೆಟ್ಟಿನ ಲೆಕ್ಕಾಚಾರದ ಪ್ರಕಾರ 2021-22 ನೇ ಸಾಲಿನಲ್ಲಿ ಸ್ವಂತ ತೆರಿಗೆ ರಾಜಸ್ವವು 1,24,202 ಕೋಟಿ ರು.ಗಳಾಗಲಿದೆಯಂತೆ!

ಆದರೆ ಹೆಚ್ಚು ಕಡಿಮೆ ಇಷ್ಟೇ GSDP ಇದ್ದ 2019-20ನೇ ಸಾಲಿನಲ್ಲಿ ಸ್ವಂತ ರಾಜಸ್ವವು 1,16, 860 ಕೋಟಿ ರೂಪಾಯಿಗಳು ಮಾತ್ರ…ಆದರೆ 2021-22ನೇ ಸಾಲಿನಲ್ಲಿ, ಇನ್ನು ಕೋವಿಡ್ ದಾಳಿಯಿಂದಾಗಿ ಭಾರತವು 2019ರ ಅಭಿವೃದ್ಧಿ ದರವನ್ನು ಸಾಧಿಸಲಾಗದು ಎಂಬುದು ಸ್ಪಷವಾಗಿರುವಾಗಲೂ, ಯಡ್ಡಿ ಸರ್ಕಾರ ಮಾತ್ರ ಅಂದಾಜು 8000 ಕೋಟಿ ರೂಪಾಯಿಗಳನ್ನು ಹೆಚ್ಚಿಗೆ ಸಂಗ್ರಹಿಸಲಿದೆಯೆಂದು ಅಂದಾಜಿಸಲಾಗಿದೆ!

ಇದಲ್ಲದೆ, 15ನೇ ಹಣಕಾಸು ಆಯೋಗದ ವರದಿ 2021-22ರಿಂದ ಜಾರಿಗೆ ಬರಲಿದ್ದು ಕರ್ನಾಟಕದ ಪಾಲು 30,000 ಕೋಟಿ ಕಡಿಮೆಯಾಗಲಿದೆ. ಅದನ್ನು ಈ ಬಜೆಟ್ ಲೆಕ್ಕಾಚಾರಗಳಲ್ಲಿ ಸಂಪೂರ್ಣವಾಗಿ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.

ಜೊತೆಗೆ 2018 ರಿಂದಾಚೆಗೆ ಒಂದು ವರ್ಷವೂ ಕರ್ನಾಟಕಕ್ಕೇ ಸಂಪೂರ್ಣ GST ಪರಿಹಾರ ದೊರೆತಿಲ್ಲ. ಕಳೆದ ವರ್ಷವಂತೂ ಕೇವಲ ಶೇ. 53 ರಷ್ಟು ಪಾಲು ಮಾತ್ರ ಕರ್ನಾಟಕಕ್ಕೇ ಸಂದಿದೆ. ಈ ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ನೋಡಿದಾಗ ಬಜೆಟ್ಟಿನಲ್ಲಿ ಸರ್ಕಾರ ಘೋಷಿರುವ ಸ್ವೀಕೃತಿಗಿಂತ ವಾಸ್ತವದಲ್ಲಿ ಶೇ. 20ರಷ್ಟು ಅಂದರೆ 40-50 ಸಾವಿರ ಕೋಟಿ ಹಣ ಕೊರತೆ ಬೀಳಲಿದೆ.

ಇದು ಬಜೆಟ್ಟಿನಲ್ಲಿ ತೋರಿಸಿರುವ ಕೊರತೆಯ ಜೊತೆ ಹೆಚ್ಚುವರಿಯಾಗಿ ಆಗಲಿರುವ ಕೊರತೆಯಾಗಿದೆ. ಹೀಗಾಗಿ ವೆಚ್ಚದಲ್ಲೂ ಅದೇ ಪ್ರಮಾಣದಲ್ಲೂ ಕೊರತೆ ಬೀಳಲಿದೆ. ಆಗ ಸರ್ಕಾರದ ಆದ್ಯತೆಗಳೇನಾಗಲಿದೆ ಎಂಬುದನ್ನು ಯಡ್ಡಿ ಸರ್ಕಾರ ಈಗಾಗಲೇ ಬಜೆಟ್ ಭಾಷಣದಲ್ಲಿ ಘೋಷಿಸಲಾದ ತಾರತಮ್ಯ ಮತ್ತು ಆದ್ಯತೆಗಳಲ್ಲಿ ಸ್ಪಷ್ಟಪಡಿಸಿದೆ. ಅಲ್ಲವೇ?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ

Published

on

ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.

ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.

ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ

Published

on

ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್‍ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.

ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.

ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್‍ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.

ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.

ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.

ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್‍ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.

ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್‍ಗೆ ರೂ.10 ಪಡೆದ ಶಾಪಿಂಗ್ ಮಾಲ್‍ಗೆ ದಂಡ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್‍ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್‍ಗೆ ಪಡೆಯಲಾಯಿತು.

ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.

ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್‍ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್‍ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending