ದಿನದ ಸುದ್ದಿ
ಜನವರಿ 1 ರಂದು ಸುಕೋ ಬ್ಯಾಂಕ್ ‘ರಜತ ಸಂಭ್ರಮ’ : ಮೋಹಿತ್ ಮಸ್ಕಿ
ಸುದ್ದಿದಿನ,ಬಳ್ಳಾರಿ: ಸುಕೋ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಮೋಹಿತ್ ಮಸ್ಕಿ ಅವರು ಸುಕೋ ಬ್ಯಾಂಕ ಕ್ಕೇಂದ್ರ ಕಚೇರಿ ಬಳ್ಳಾರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸುಕೋ ಬ್ಯಾಂಕ್’ ತನ್ನ ಇಪ್ಪತ್ತೈದು ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿ ಬೆಳ್ಳಿಹಬ್ಬವನ್ನು ಆಚರಿಸುತ್ತಿರುವ ಹಿನ್ನಲೆಯಲ್ಲಿ ಜನವರಿ 1, 2019 ರಿಂದ ವರ್ಷಪೂರ್ತಿ ತನ್ನ ಎಲ್ಲಾ ಶಾಖೆಗಳಲ್ಲಿ `ರಜತ ಸಂಭ್ರಮ’ವನ್ನು ಆಚರಿಸಲಿದೆ.
ಜನವರಿ 5ರ ಶನಿವಾರ ಬೆಳಗ್ಗೆ 6 ಗಂಟೆಗೆ `ರಜತ ಸಂಭ್ರಮ’ ಪ್ರಾರಂಭವಾಗಲಿದೆ. ರಜತ ಸಂಭ್ರಮ ಆಚರಣೆಯ ಅಂಗವಾಗಿ `ಸುಸ್ಥಿರ ಕೃಷಿ’ಗಾಗಿ ಮ್ಯಾರಥಾನ್ ಓಟ ಬೆಳಗ್ಗೆ 6 ಗಂಟೆಗೆ. ಮಧ್ಯಾಹ್ನ 12 ಗಂಟೆಗೆ ಬರಗೆದ್ದ ಕೃಷಿಕರ ಜೊತೆ ಜಿಲ್ಲಾ ಪಂಚಾಯಿತಿಯ `ನಜೀರ್ಸಾಬ್’ ಸಭಾಂಗಣದಲ್ಲಿ ಸಂವಾದ. `ಫುಡ್ ಟ್ಯಾಲೆಂಟ್ ಹಂಟ್ ಫಾರ್ ಸ್ಟಾರ್ಟ್ಅಪ್’ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದ ಮರೆಯಾದ ಖಾದ್ಯಗಳು ಮತ್ತು ಸಿರಿಧಾನ್ಯ ಖಾದ್ಯಗಳ ತಯಾರಿಕೆ, ಪ್ರದರ್ಶನ ಮತ್ತು ಕಡ್ಢಾಯ ಮಾರಾಟವನ್ನು ಬಸವಭವನದಲ್ಲಿ ಸಂಜೆ 6 ಗಂಟೆಗೆ. ಸಭಾಂಗಣದಲ್ಲಿ `ಸುಕೃತ ಕೃಷಿ’ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು `ಸುಕೋ ಸಂಗೀತ ಸಂಭ್ರಮ’ ಜಿûೀ ಟಿ.ವಿ ಯ ಸರೆಗಮಪದಲ್ಲಿ ವಿಜೇತರಾದ ಖ್ಯಾತ ಬಾಲ ಕಲಾವಿದರಿಂದ ನಡೆಯಲಿದೆ.
ಸುಸ್ಥಿರ ಕೃಷಿಗಾಗಿ ಸಾವಿರದ ಓಟ:-`ಸುಸ್ಥಿರ ಕೃಷಿ’ಗಾಗಿ ಧ್ಯೇಯವಾಕ್ಯದ ಅಡಿ ನಡೆಯುವ ಮ್ಯಾರಥಾನ್, ಜನವರಿ 5ರ ಶನಿವಾರ, ಬೆಳಗ್ಗೆ 6:15 ಗಂಟೆಗೆ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಿಂದ ಪ್ರಾರಂಭ. ಗಡಿಗಿ ಚೆನ್ನಪ್ಪ ವೃತ್ತ, ರೈಲ್ವೆ ನಿಲ್ದಾಣ, ಎಚ್ಆರ್ ಗವಿಯಪ್ಪ ವೃತ್ತದಲ್ಲಿಯ ಶ್ರೀಬಸವೇಶ್ವರ ಪ್ರತಿಮೆ ಮೂಲಕ ಡಾ. ಬಿ.ಆರ್. ಅಂಬೇಡ್ಕರ್ ವೃತ್ತ (ಓವರ್ಬ್ರಿಡ್ಜ್), ಬಸವನಕುಂಟೆ ಸರ್ಕಲ್, ವಾಲ್ಮೀಕಿ ವೃತ್ತ (ಎಸ್.ಪಿ. ಸರ್ಕಲ್) ಮೂಲಕ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ವಿರಾಮಗೊಳ್ಳಲಿದೆ.
ಕರ್ನಾಟಕದ ಕೃಷಿಸಾಧಕರು, ರೈತರು, ಸುಕೃತ ಕೃಷಿ ಪ್ರಶಸ್ತಿ ಪುರಸ್ಕøತರು, ಪ್ರಗತಿಪರರು, ಕೃಷಿ ತಜ್ಞರು, ವಿದ್ಯಾರ್ಥಿಗಳು ಮತ್ತು ನಗರವಾಸಿಗಳು ಸೇರಿ ಓಟದಲ್ಲಿ 1000ಕ್ಕೂ ಹೆಚ್ಚು ಜನ ಓಟಗಾರರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ. 14 ವರ್ಷ ಮೇಲ್ಪಟ್ಟವರು ಓಟದಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ. ಸ್ಪರ್ಧೆಯಲ್ಲಿ ವಿಜೇತರಿಗೆ ಪ್ರಥಮ ರೂಪಾಯಿ 25,000, ದ್ವಿತೀಯ ರೂಪಾಯಿ 15,000 ಮತ್ತು ತೃತೀಯ ರೂಪಾಯಿ 10000 ಬಹುಮಾನ ನೀಡಲಾಗುತ್ತದೆ.
ಬರಗೆದ್ದ’ ಕೃಷಿಕರೊಂದಿಗೆ ಕೃಷಿ ಸಚಿವರ ಸಂವಾದ : ನಜೀರ್ಸಾಬ್ ಸಭಾಂಗಣ, ಜಿಲ್ಲಾ ಪಂಚಾಯಿತಿ, ಬಳ್ಳಾರಿ. ಸಮಯ : ಮಧ್ಯಾಹ್ನ 12 ಗಂಟೆಗೆ. ಬಳ್ಳಾರಿ ಜಿಲ್ಲಾ ಪಂಚಾಯಿತಿಯ ನಜೀರ್ಸಾಬ್ ಸಭಾಂಗಣದಲ್ಲಿ ಶನಿವಾರ ಮಧ್ಯಾಹ್ನ 12 ಗಂಟೆಯಿಂದ `ಬರಗೆದ್ದ ಕೃಷಿಕರ ಜೊತೆ ಸಂವಾದ’. ಸುಕೋ ಬ್ಯಾಂಕ್ ಪ್ರಾಯೋಜಿತ `ಸುಕೃತ ಕೃಷಿ’ ಪ್ರಶಸ್ತಿ ಸಂಚಾಲನ ಸ್ವತಂತ್ರ ಸಮಿತಿಯು ಕರ್ನಾಟಕ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಸರ್ಕಾರದ ಯಾವುದೇ ಸೌಲಭ್ಯಗಳನ್ನು ಪಡೆಯದೇ, ಸ್ವಯಂ ಶ್ರಮ.ಹಾಗೂ ಛಲದಿಂದ ಕೃಷಿಯಲ್ಲಿ ಯಶಸ್ವನ್ನು ಸಾಧಿಸಿ, ನಾಡಿನ ಕೃಷಿಕರಿಗೆ ಮಾದರಿಯಾಗಿ, ಅನೇಕರಿಗೆ ಮಾರ್ಗದರ್ಶನ ನೀಡುತ್ತಿರುವ ಬರಗೆದ್ದ ಅನೇಕ ರೈತರನ್ನು ಭೇಟಿ ಮಾಡಿ, 45 ಸಾಧಕರನ್ನು ಗುರುತಿಸಿ, ಸಂವಾದಕ್ಕೆ ಆಯ್ಕೆ ಮಾಡಿದೆ.
ಈ ಸಾಧಕರು ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದರ ಹಿನ್ನಲೆ, ಶ್ರಮ, ಗುರಿ ತಲುಪಿದ ಯೋಜನೆ (ಪ್ಲಾನಿಂಗ್), ಯಶಸ್ಸು, ಎದುರಿಸಿದ ಸವಾಲುಗಳು, ಗುರಿ ತಲುಪಿದಾಗ ಸಿಕ್ಕ ಸಮಾಧಾನ ಇನ್ನಿತರೆಗಳ ಬಗ್ಗೆ ಮನದಾಳದ ಮಾತುಗಳ ಮೂಲಕ ತಮ್ಮ ಅನುಭವವನ್ನು ಸಂವಾದದಲ್ಲಿ ಹಂಚಿಕೊಳ್ಳಲಿದ್ದಾರೆ. ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ. ಈ ಸಾಧಕರ ಶ್ರಮ ಮತ್ತು ಸಾಧನೆಯನ್ನು ನಾಡಿಗೆ ಪರಿಚಯಿಸುವ ಜವಾಬ್ದಾರಿಯನ್ನು ನಿರ್ವಹಿಸುವ ಮೂಲಕ `ಸುಕೋ ಬ್ಯಾಂಕ್’ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಪರೋಕ್ಷವಾಗಿ ಸೇವೆ ಸಲ್ಲಿಸುತ್ತಿರುವುದು ಸಂತೋಷದ ವಿಷಯ. `ಫುಡ್ ಟ್ಯಾಲೆಂಟ್ ಹಂಟ್ ಫಾರ್ ಸ್ಟಾರ್ಟ್ಅಪ್’
(ಆಹಾರ ಪ್ರತಿಭಾನ್ವೇಷಣೆಯಿಂದ ಉದ್ದಿಮೆಯತ್ತ)
ಅಡುಗೆ ಮನೆಗೆ ಸೀಮಿತವಾಗಿದ್ದ ಆಹಾರ ತಯಾರಿಸುವ ಪ್ರತಿಭೆಗಳನ್ನು ಉದ್ಯಮಿಗಳನ್ನಾಗಿ ರೂಪಾಂತರ ಮಾಡುವಲ್ಲಿ `ಸುಕೋ ಬ್ಯಾಂಕ್’ ಉತ್ತರ ಕರ್ನಾಟಕದ ಮರೆತುಹೋದ ತಿಂಡಿಗಳು ಮತ್ತು `ಸಿರಿಧಾನ್ಯ’ ಖಾದ್ಯಗಳ ತಯಾರಿಕೆಯ ಸ್ಪರ್ಧೆ – ಪ್ರದರ್ಶನ ಮತ್ತು ಕಡ್ಢಾಯ ಮಾರಾಟ ಮೇಳವನ್ನು, ಬಸವಭವನದಲ್ಲಿ ಸಂಜೆ 6 ಗಂಟೆಗೆ ಏರ್ಪಡಿಸಿದೆ ಎಂದರು.
ಸುಕೋ ಬ್ಯಾಂಕ್ ಕಾರ್ಯನಿರ್ವಹಿಸುವ 11 ಜಿಲ್ಲೆಗಳಲ್ಲಿ ಎರೆಡು ವಿಭಾಗಗಳಲ್ಲಿ (ಉತ್ತರ ಕರ್ನಾಟಕದ ಮರೆತುಹೋದ ಖಾದ್ಯಗಳು ಮತ್ತು ಸಿರಿಧಾನ್ಯ ಖಾದ್ಯಗಳು) ಸ್ಪರ್ಧೆ ನಡೆಯಲಿದೆ. ಸ್ಪರ್ಧಾಳುಗಳು ಎರೆಡೂ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಸ್ಪರ್ಧೆಯು ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ನಡೆದು, ಕೊನೆಯ ಸುತ್ತಿನಲ್ಲಿ ಮೆಗಾ ಫೈನಲ್ (ಬಳ್ಳಾರಿಯಲ್ಲಿ) ನಡೆಯಲಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನ ಪಡದವರು, ಮೆಗಾ ಫೈನಲ್ಗೆ ಆಯ್ಕೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ರೂಪಾಯಿ 10,000, ದ್ವಿತೀಯ ರೂಪಾಯಿ 7500 ಮತ್ತು ತೃತೀಯ ಬಹುಮಾನವಾಗಿ ರೂಪಾಯಿ 5000 ನೀಡಲಾಗುತ್ತದೆ. ಮೆಗಾ ಫೈನಲ್ನಲ್ಲಿ ಪ್ರಥಮ ಬಹುಮಾನ ರೂಪಾಯಿ 25,000, ದ್ವಿತೀಯ ಬಹುಮಾನ ರೂಪಾಯಿ 15,000 ಮತ್ತು ತೃತೀಯ ಬಹುಮಾನವಾಗಿ ರೂಪಾಯಿ 10,000. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ಹತ್ತಿರದ ಸುಕೋ ಬ್ಯಾಂಕ್ ಶಾಖೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಬಹುದಾಗಿದೆ.
ಈ ಮೂಲಕ ಪ್ರತಿಭಾನ್ವಿತ ಅಡುಗೆ ತಯಾರಿಕರನ್ನು ಪ್ರೋತ್ಸಾಹಿಸಿ, ಉದ್ಯಮ ಕ್ಷೇತ್ರಕ್ಕೆ ಪರಿಚಯ ಮಾಡಿ, ಆಹಾರ ಉದ್ಯಮದಲ್ಲಿ ಭದ್ರವಾಗಿ ನೆಲೆಯೂರಲು ಅಗತ್ಯ ತಾಂತ್ರಿಕ ಮತ್ತು ಆಡಳಿತಾತ್ಮಕ ನೆರವು ನೀಡುವ ಜವಾಬ್ದಾರಿ `ಸುಕೋ ಬ್ಯಾಂಕ್’ನದ್ದು. ಒಂದರ್ಥದಲ್ಲಿ ಪ್ರತಿಭಾನ್ವೇಷಣೆಯ ಜೊತೆ ಜೊತೆಯಲ್ಲಿ ಉದ್ಯಮಿಗಳಾಗುವ ಹೊಸ ಕನಸನ್ನು ಮೂಡಿಸುವ ಜವಾಬ್ದಾರಿಯುತ ಪ್ರಯತ್ನ ಸುಕೋ ಬ್ಯಾಂಕ್ನದ್ದಾಗಿದೆ.
ಜಿಲ್ಲಾವಾರು ಮತ್ತು ಮೆಗಾ ಫೈನಲ್ನ ಎಲ್ಲಾ ಸ್ಪರ್ಧೆಗಳಲ್ಲೂ ಜನಪ್ರಿಯ ನಟ, ಸಿಹಿಕಹಿ ಚಂದ್ರು ಪ್ರಮುಖ ತೀರ್ಪುಗಾರರು. ಮತ್ತು ಸಮನ್ವಯ ತೀರ್ಪುಗಾರರಾಗಿ ಮರ್ಚೇಡು ಮಲ್ಲಿಕಾಜುನಗೌಡ ಅವರು ಕಾರ್ಯನಿರ್ವಹಿಸಲಿದ್ದಾರೆ.
`ಸುಕೃತ ಕೃಷಿ’ ಪ್ರಶಸ್ತಿ ಮತ್ತು ಸುಕೋ ಸಂಗೀತ
ಸಂಭ್ರಮ:- ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿ ಆಯ್ಕೆ ಮಾಡಿರುವ, ನಾಡಿನ ದಿಕ್ಸೂಚಿ ಆಗಿರುವ ಓರ್ವ ಕೃಷಿಕರು ಮತ್ತು ಓರ್ವ ಕೃಷಿ ತಂತ್ರಜ್ಞಾನ ಸಾಧಕರಿಗೆ ಬಸವಭವನದ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ. ಪ್ರಶಸ್ತಿಯು ಒಂದು ಲಕ್ಷ ರೂಪಾಯಿ, ಪಾರಿತೋಷಕ ಮತ್ತು ಅಭಿನಂದನೆಯ ಪ್ರಶಂಸಾ ಪತ್ರವನ್ನು ಒಳಗೊಂಡಿರುತ್ತದೆ. ಈಬಾರಿಯ `ಸುಕೃತ ಕೃಷಿ’ ಪ್ರಶಸ್ತಿ ಪುರಸ್ಕøತರ ಹೆಸರುಗಳನ್ನು ಸುಕೃತ ಪ್ರಶಸ್ತಿ ಸಂಚಾಲನಾ ಸಮಿತಿ ಶೀಘ್ರದಲ್ಲೇ ಪ್ರಕಟಿಸಲಿದೆ. ಕೃಷಿ ಸಾಧಕರ ಕುರಿತು ಸಾಕ್ಷ್ಯಚಿತ್ರ ಮತ್ತು ಪುಸ್ತಕವನ್ನು ಪ್ರಕಟಿಸಲಾಗುತ್ತದೆ. ಕಳೆದ ಬಾರಿ ಸುಕೃತ ಕೃಷಿ ಪ್ರಶಸ್ತಿ ಸಂಚಾಲನಾ ಸಮಿತಿಯು ‘ಉತ್ತಮ ಕೃಷಿಕ’ ಪ್ರಶಸ್ತಿಯನ್ನು ಸಾಗರದ ಶ್ರೀ ಮುತ್ತಣ್ಣ ಪೂಜಾರ್ ಅವರಿಗೆ ‘ಉತ್ತಮ ಕೃಷಿ ತಂತ್ರಜ್ಞಾನ’ ಪ್ರಶಸ್ತಿಯನ್ನು ಶಿರಸಿಯ ಶ್ರೀ ಲಕ್ಷ್ಮೀ ನಾರಾಯಣ ಹೆಗಡೆ ಅವರಿಗೆ ಪ್ರದಾನ ಮಾಡಲಾಗಿತ್ತು. ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆ ಅವರು ಪ್ರಶಸ್ತಿ ಪ್ರದಾನ ಮಾಡಿದ್ದರು. ಪ್ರತೀ ಸಲ ಪ್ರಶಸ್ತಿ ಪ್ರದಾನ ಮಾಡುವ ದಿನಾಂಕವನ್ನು ಮಾತ್ರ ಸುಕೋ ಬ್ಯಾಂಕ್ ನಿರ್ಧರಿಸಲಿದ್ದು, ವಿಜೇತರನ್ನು ನಿರ್ಧರಿಸುವುದು ಹಾಗೂ ಅವರ ಬಗ್ಗೆ ಸಾಕ್ಷ್ಯ ಚಿತ್ರ, ಪುಸ್ತಕಗಳನ್ನು ಪ್ರಕಟಿಸುವುದು ಕೃಷಿ ಪ್ರಶಸ್ತಿ ಸಂಚಾಲನಾ ಸ್ವತಂತ್ರ ಸಮಿತಿಯ ಜವಾಬ್ದಾರಿಯಾಗಿರುತ್ತದೆ. ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ಜಿ. ಟಿ.ವಿ.ಯ ಸರಿಗಮಪ ಸರಣಿಯಲ್ಲಿ ವಿಜೇತರಾದ ಬಾಲ ಕಲಾವಿದರಾದ ಶ್ರೀ ಜ್ಞಾನೇಶ್, ಕು. ಪ್ರಕೃತಿ ರೆಡ್ಡಿ ಹಾಗೂ ಶ್ರೀ ವಿಶ್ವ ಪ್ರಸಾದ್ ಅವರು ಸುಕೋ ಸಂಗೀತ ಸಂಜೆಯನ್ನು ನಡೆಸಿಕೊಡಲಿದ್ದಾರೆ ಎಂದು ಹೇಳಿದರು. ಮ್ಯಾನೇಜಿಂಗ್ ಡೈರೆಕ್ಟರ್ ಪರಿಮಾಳಚಾರ್ ಅಗ್ನಿಹೋತ್ರಿ, ಬೋರ್ಡ್ ಸೆಕ್ರೆಟರಿ ವೆಂಕಟೇಶ ರಾವ್ ಇದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401
![](https://suddidina.com/wp-content/uploads/2022/04/20210226_111406.jpg)
ಕ್ರೀಡೆ
Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು
![](https://suddidina.com/wp-content/uploads/2024/07/suddidina_paris_Olympic.jpg)
ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.
ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ
![](https://suddidina.com/wp-content/uploads/2024/06/judges_suddidina.jpg)
ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.
ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್ಗಳನ್ನು ಒಳಗೊಂಡಿದೆ.
ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
ದಿನದ ಸುದ್ದಿ
KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ
![](https://suddidina.com/wp-content/uploads/2024/05/application_invitation_arji_suddidina.jpg)
ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
![](https://suddidina.com/wp-content/uploads/2022/04/20210226_111406.jpg)
-
ದಿನದ ಸುದ್ದಿ6 days ago
ಆತ್ಮಕತೆ | ಹೊಸದಾಗಿ ಬಂದ ಹಳೆಯ ಗುರುಗಳು
-
ದಿನದ ಸುದ್ದಿ3 days ago
K-SET| ಕೆಸೆಟ್ ಪರೀಕ್ಷೆ ; ಅರ್ಜಿ ಸಲ್ಲಿಕೆ ದಿನಾಂಕ ಮುಂದೂಡಿಕೆ
-
ದಿನದ ಸುದ್ದಿ6 days ago
ಶಿರೂರು ಗುಡ್ಡಕುಸಿತ ಪ್ರದೇಶಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
-
ದಿನದ ಸುದ್ದಿ5 days ago
ಅತಿಥಿ ಉಪನ್ಯಾಸಕ ಹುದ್ದೆ ; ಅರ್ಜಿ ಆಹ್ವಾನ
-
ದಿನದ ಸುದ್ದಿ6 days ago
ದಾವಣಗೆರೆ ಭಾರೀ ಮಳೆ | ಬೆಳೆ ನಷ್ಟವಾಗಿದ್ದೆಷ್ಟು..?
-
ದಿನದ ಸುದ್ದಿ6 days ago
ಕೃಷಿ ಪಂಡಿತ್, ಆತ್ಮಶ್ರೇಷ್ಠ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ನಾಳೆಯಿಂದ ಸಂಸತ್ತಿನ ಬಜೆಟ್ ಅಧಿವೇಶನ
-
ದಿನದ ಸುದ್ದಿ4 days ago
ಬಲ್ಲಿರೇನು ಕೊಬ್ಬರಿ ಎಣ್ಣೆ ಮಹಿಮೆ..!