Connect with us

ದಿನದ ಸುದ್ದಿ

ಈ ಹತ್ತು ಸಂಶೋಧನೆಗಳ ಇತಿಹಾಸ ತಿಳಿದರೆ ಅಚ್ಚರಿ ಪಡುತ್ತೀರಿ ?

Published

on

ನಾವು ನಮ್ಮ ದಿನ ನಿತ್ಯದ ಜೀವನದಲ್ಲಿ ಬಳಸುವ ಈ 10 ಸಾಧನಗಳನ್ನು ಸಂಶೋಧಿಸಿದವರು ಮುಸ್ಲಿಮರು.
ಇಂದು ನಾವು ಜೀವಿಸುತ್ತಿರುವ ಪ್ರಪಂಚದಲ್ಲಿ ಅನೇಕ ಅನೇಕ ತಂತ್ರಜ್ಞಾನಗಳು ಬೆಳೆದು ನಿಂತಿದೆ. ತಂತ್ರಜ್ಞಾನ ಬೆಳೆದ ಹಾಗೆ ಮನುಷ್ಯನ ಜೀವನ ಕ್ರಮ ಬದಲಾಗ ತೊಡಗಿದೆ. ಈ ರೀತಿ ಬೆಳೆದು ನಿಂತ ತಂತ್ರಜ್ಞಾನದ ಹಿಂದೆ ಮುಸ್ಲಿಮರ ಕೊಡುಗೆ ಇದೆ ಎಂದ್ರೆ ನಂಬ್ತೀರಾ..? ಯಾಕೆ ನಂಬಲ್ವ…? ಹಾ… ನಂಬ್ಲೇ ಬೇಕು. ಯಾಕಂದ್ರೆ ಮುಸ್ಲಿಮರ ಸಂಶೋಧನೆ 1000 ವರ್ಷಗಳ ಇತಿಹಾಸವಿದೆ. ಮುಸ್ಲಿಮರು ಸಂಶೋಧಿಸಿದ ವಸ್ತುಗಳು ಇಂದು ಡೆವಲಪ್ ಆಗಿ ಕೆಲವೊಂದು ವಸ್ತುಗಳು ಇನ್ಯಾರೋ ಯುರೋಪಿಯನ್ ಸಂಶೋಧಕನ ಹೆಸರಿನೊಂದಿಗೆ ತಳಕು ಹಾಕಿಕೊಂಡಿದೆ. ಇವತ್ತು ನಾವು ನಿಮಗೆ ಮುಸ್ಲಿಮರು ಈ ಜಗತ್ತಿಗೆ ನೀಡಿದ ಇಂದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ಉಪಯೋಗಿಸುವ 10 ವಸ್ತುಗಳನ್ನು ಪರಿಚಯ ಮಾಡಿಕೊಡಲಿದ್ದೇವೆ.

1.ಕಾಫಿ:

ಈ ಸಂಶೋಧನೆಗೆ 1200 ವರ್ಷಗಳ ಇತಿಹಾಸವಿದೆ. ಖಾಲಿದ್ ಎನ್ನುವ ಅರಬ್ ಹುಡುಗನೊಬ್ಬ ಇಥಿಯೋಪಿಯನ್ ಇಳಿಜಾರು ಪ್ರದೇಶಗಳಲ್ಲಿ ಆಡು ಮೇಯಿಸುತ್ತಿರುವಾಗ ಬೆಟ್ಟದ ತಪ್ಪಲಿನಲ್ಲಿ ಒಂದು ಬೀಜವು ದೊರೆಯಿತು. ಅದನ್ನು ಜಗಿದು ನೋಡಿದ ಆತನಿಗೆ ರುಚಿಸಿತು. ಬೀಜವನ್ನು ಮನೆಗೆ ಕೊಂಡು ಹೋಗಿ ನೀರಿನಲ್ಲಿ ಬೇಯಿಸಿ ಪ್ರಯೋಗ ನಡೆಸಿದಾಗ ಅದರ ಬೇಯಿಸಿದ ನೀರಿನ ರುಚಿ ಬಹಳ ಸ್ವಾದಿಷ್ಟವಾಗಿತ್ತು. ಕೊನೆಗೆ ಬೀಜವನ್ನು ಒಣಗಿಸಿ ಪುಡಿ ಮಾಡಿ ಪ್ರಯೋಗ ಮಾಡಿದ ಹೀಗೆ ಸಂಶೋಧಿಸಲ್ಪಟ್ಟ ಬೀಜವು “ಅಲ್-ಖವಾಹ್” ಎಂದು ಹೆಸರಾಯಿತು. ಇದುವೇ ಯುರೋಪ್ಗೆ ಕಾಲಿಟ್ಟಾಗ “ಕಾಫಿ” ಎಂದು ಪ್ರಸಿದ್ಧಿ ಪಡೆಯಿತು.

2. ಗಡಿಯಾರ

ನಮ್ಮ ಜೀವನವನ್ನು ಸ್ವಸ್ಥವಾಗಿ ಮುನ್ನಡೆಸಲು ನಮಗೆ ಇಂದು ಸಮಯ ಅತ್ಯಗತ್ಯವಾಗಿದೆ. ಇದನ್ನೂ ಕೂಡ ಎಂಟು ನೂರು ನೂರು ವರ್ಷಗಳ ಹಿಂದೆ ಮುಸ್ಲಿಮರು ಮಾಡಿದ್ದರು. ಆಗ್ನೇಯದ ಟರ್ಕಿಯ ಡಯಾರ್‌ಬಕೀರ್ ಎಂಬಲ್ಲಿ ಅಲ್-ಜಝಾರಿ ಎಂಬ ವ್ಯಕ್ತಿಯೊಬ್ಬರು ತುಂಬಾ ಧಾರ್ಮಿಕ ವ್ಯಕ್ತಿಯಾಗಿದ್ದರು. ಮತ್ತು ಅತ್ಯಂತ ಪರಿಣತ ಎಂಜಿನಿಯರ್ ಕೂಡ ಆಗಿದ್ದು, ಇವರು ಗಡಿಯಾರ ಎಂಬ ಸ್ವಯಂಚಾಲಿತ ಯಂತ್ರದ ಪರಿಕಲ್ಪನೆಗೆ ಜನ್ಮ ನೀಡಿದರು. 1206 ರ ಹೊತ್ತಿಗೆ ಅಲ್-ಜಝಾರಿ ಎಲ್ಲಾ ಆಕಾರಗಳ ಮತ್ತು ಗಾತ್ರಗಳ ಹಲವಾರು ಗಡಿಯಾರಗಳನ್ನು ಮಾಡಿದ್ದರು.

ಅಲ್ ಜಝಾರಿಯವರ ಗಡಿಯಾರ ಸಂಶೋಧನೆಗೆ ಪ್ರೇರಣೆಯಾದದ್ದು ಪ್ರತಿದಿನ ಮುಸ್ಲಿಮರು ಕಡ್ಡಾಯವಾಗಿ ನಿರ್ವಹಿಸುವ ಐದು ಹೊತ್ತಿನ ಪ್ರಾರ್ಥನೆಯ ಸಮಯವನ್ನು ಅರಿಯುವುದಾಗಿತ್ತು. ಸುದೀರ್ಘ ಸಂಶೋಧನೆಯ ನಂತರ ಒಂದು ಉತ್ತಮ ಗಡಿಯಾರವನ್ನು ನಿರ್ಮಿಸುವಲ್ಲಿ ಜಝಾರಿ ಯಶಸ್ವಿಯಾಗಿದ್ದರು.

3.ಕ್ಯಾಮರಾ

ಇಬ್ನ್ ಅಲ್-ಹೈಥಮ್ ದೃಗ್ವಿಜ್ಞಾನವನ್ನು ಸಂಶೋಧಿಸಿದರು. ಕಣ್ಣಿನಿಂದ ಹೊರಸೂಸುವ ಅದೃಶ್ಯವಾದ ಬೆಳಕು ದೃಷ್ಟಿಗೆ ಕಾರಣವಾಗಿದೆಯೆಂಬ ಗ್ರೀಕ್ ಕಲ್ಪನೆಯನ್ನು ಅವರು ತಿರಸ್ಕರಿಸಿದರು. ಇದರ ಬದಲಾಗಿ ಬೆಳಕಿನಿಂದ ದೃಷ್ಟಿಯು ಉಂಟಾಗುತ್ತದೆ. ಬೆಳಕು ಒಂದು ವಸ್ತುವನ್ನು ಪ್ರತಿಫಲಿಸುತ್ತದೆ ಮತ್ತು ಕಣ್ಣಿನ ಅಕ್ಷಿ ಪಟಲವನ್ನು ಪ್ರವೇಶಿಸುತ್ತದೆ. ಅಕ್ಷಿ ಪಟಲದ ತೆರೆಯಲ್ಲಿ ವಸ್ತುವಿನ ಆಕಾರವು ಮೂಡುತ್ತದೆ ಎಂದು ದೃಷ್ಟಿಯನ್ನು ಸರಿಯಾಗಿ ವಿಶ್ಲೇಷಿಸಿದರು.ಒಂದು ಬದಿಯಲ್ಲಿ ಡಾರ್ಕ್ ರೂಮ್ ನಿಂದ ಒಂದು ಪಿನ್ ಹೋಲ್(ರಂಧ್ರ) ನ ಮೂಲಕ ಬೆಳಕನ್ನು ಇನ್ನೊಂದು ಬದಿಯಲ್ಲಿ ಬಿಳಿ ಹಾಳೆಯ ಮೇಲೆ ಹಾಯಿಸಿ ಅವರು ತನ್ನ ಸಿದ್ಧಾಂತಕ್ಕೆ ಪುರಾವೆಯನ್ನು ನೀಡಿದರು.
ಈ ಪ್ರಯೋಗದಲ್ಲಿ ಬೆಳಕು ರಂಧ್ರದ ಮೂಲಕ ಬಂದಿತು ಮತ್ತು ಬಿಳಿ ಹಾಳೆಯಲ್ಲಿ ಕೋಣೆಯ ಹೊರಗಡೆ ಇರುವ ವಸ್ತುಗಳ ವಿಲೋಮ ಚಿತ್ರವೊಂದನ್ನು ಯೋಜಿಸಿತು. ಅವರು ಇದನ್ನು “ಕಮರಾ” ಎಂದು ಕರೆದರು. ಇದು ವಿಶ್ವದ ಮೊದಲ ಬಿಂಬಗ್ರಾಹಿ ಕ್ಯಾಮರಾ ಆಗಿತ್ತು.

4.ಶುಚಿತ್ವ ಸಾಧನಗಳು

ಶುಚಿತ್ವವು ಮುಸ್ಲಿಮರ ವಿಶ್ವಾಸದ ಭಾಗವಾಗಿದೆ. 10 ನೆಯ ಶತಮಾನದ ಇಸ್ಲಾಮಿಕ್ ಜಗತ್ತಿನಲ್ಲಿ ಟಾಯ್ಲೆಟ್ ಬಾತ್ರೂಮ್ ಮತ್ತು ನೈರ್ಮಲ್ಯ ಅಭ್ಯಾಸಗಳು ಕಂಡುಬರುವ ಉತ್ಪನ್ನಗಳ ಸಂಶೋಧನೆ ನಡೆಯಿತು. 13 ನೇ ಶತಮಾನದಲ್ಲಿ, ಗಡಿಯಾರ ಸಂಶೋಧಿಸಿದ ಅದೇ ಇಂಜಿನಿಯರ್ ಅಲ್-ಜಝಾರಿ, “ವುದು”(ಅಂಗಶುದ್ಧಿ) ಯಂತ್ರಗಳನ್ನು ಒಳಗೊಂಡಂತೆ ಯಾಂತ್ರಿಕ ಸಾಧನಗಳನ್ನು ವಿವರಿಸುವ ಒಂದು ಎಂಜಿನಿಯರಿಂಗ್ ಸಂಸೋಧನೆಯ ಪುಸ್ತಕವನ್ನು ಬರೆದರು.
ಈ ವುದೂ ಯಂತ್ರವು ಒಂದು ಮೊಬೈಲ್ ಡಿವೈಸ್(ಸ್ಥಳಾಂತರಿಸ ಬಹುದಾದ ವಸ್ತು) ಆಗಿತ್ತು. ಅದನ್ನು ಯಾರಾದರೂ ಅತಿಥಿ ಇದ್ದರೆ ಅವರಿಗಾಗಿ ತೆಗೆದು ಕೊಂಡು ಹೋಗಲಾಗುತ್ತಿತ್ತು. ಅತಿಥಿ ಯಂತ್ರದ ತಲೆಯನ್ನು ಸ್ಪರ್ಶಿಸಿದಾಗ ಎಂಟು ಸಣ್ಣ ರಂಧ್ರಗಳಲ್ಲಿ ನೀರು ಬರುತ್ತಿತ್ತು. ಶುದ್ಧೀಕರಣಕ್ಕಾಗಿ ಸಾಕಷ್ಟು ನೀರು ನೀಡುವುದು. ಮತ್ತು ನೀರನ್ನು ಮಿತ ಬಳಕೆ ಮಾಡಿ ಸಂರಕ್ಷಿಸುವುದು ಇದರ ಉದ್ದೇಶವಾಗಿತ್ತು. ಮುಸ್ಲಿಮರು ನಿಜವಾಗಿಯೂ ಸ್ವಚ್ಛವಾಗಿರಲು ಬಯಸುತ್ತಾರೆ ಮತ್ತು ನೀರಿನಿಂದ ಮಾತ್ರ ತೊಳೆದರೆ ಶುದ್ಧಿಯಾಗಲಾರದು ಎಂಬುದನ್ನು ಅರಿತು, ಅವರು ಸಾಬೂನು ಕಂಡು ಹಿಡಿದರು. ಇದಕ್ಕಾಗಿ ಆಲಿವ್ ಎಣ್ಣೆಯನ್ನು “ಅಲ್-ಖಲಿ” ಎಂಬ ಉಪ್ಪು-ತರಹದ ಪದಾರ್ಥದೊಂದಿಗೆ ಮಿಶ್ರ ಮಾಡಿದರು. ನಂತರ ಅದನ್ನು ಸರಿಯಾದ ಮಿಶ್ರಣವನ್ನು ಸಾಧಿಸಲು ಬೇಯಿಸಿದರು. ಅದು ಗಟ್ಟಿಯಾದ ನಂತರ ಸ್ನಾನಗೃಹಗಳಲ್ಲಿ ಬಳಸಿದರು.

5.ಸುಗಂಧ ದ್ರವ್ಯ

ಅಲ್-ಕಿಂಡಿ ಅವರು ಸುಗಂಧ ದ್ಯವ್ಯದ ಬಗ್ಗೆ ಒಂದು ಪುಸ್ತವಕವನ್ನು ಬರೆದರು. ಇದು ಇಂಗ್ಲೀಷ್ ನಲ್ಲಿ, “ಕೆಮಿಸ್ಟ್ರಿ ಆಫ್ ಪರ್ಫ್ಯೂಮ್ ಅಂಡ್ ಡಿಸ್ಟೈಲೇಶನ್ಸ್” ಎಂಬ ಹೆಸರಿನಲ್ಲಿ ಲಭ್ಯವಿದೆ. ಸುಗಂಧ ತಯಾರಿಕೆಯ ಶತಮಾನಗಳ-ಹಳೆಯ ಸಂಪ್ರದಾಯವು ಮುಸ್ಲಿಂ ವಿಜ್ಞಾನಿಗಳು ಮತ್ತು ಅವರ ಶುದ್ಧೀಕರಣದ ವಿಧಾನಗಳಿಂದ ಸಾಧ್ಯವಾಯಿ. ಕಿಂಡಿಯವರ ಪುಸ್ತಕದಲ್ಲಿ ಸಸ್ಯಗಳು ಮತ್ತು ಹೂವುಗಳನ್ನು ಬಟ್ಟಿ ಇಳಿಸಿ ಸುಗಂಧದ್ರವ್ಯ ಮತ್ತು ಔಷಧಿಗಳನ್ನು ತಯಾರಿಸುವ ವಿಧಾನಗಳನ್ನು ವಿವರಿಸಲಾಗಿತ್ತು.

6.ವಿಶ್ವ ವಿದ್ಯಾನಿಲಯಗಳು

ಜ್ಞಾನದ ಅನ್ವೇಷಣೆ ಮುಸ್ಲಿಮರ ಹೃದಯಕ್ಕೆ ಹತ್ತಿರದಲ್ಲಿದೆ. ಕುರ್‌ಆನ್‍ನ ಜ್ಞಾನವನ್ನು ಸಂಪಾದಿಸುವುದು ಅತೀ ಅವಶ್ಯಕವೆಂದು ಮುಸ್ಲಿಮರಿಗೆ ಆಜ್ಞಾಪಿಸಲಾಗಿದೆ. ಆದ್ದರಿಂದ ಫಾತಿಮಾ ಅಲ್ ಫಿಹ್ರಿ ಎಂಬ ಮಹಿಳೆಯು ಮೊರಕ್ಕೋದ ಫೆಜ್ ಎಂಬಲ್ಲಿ ಮದರಸಾ ರೂಪದ ಒಂದು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದರು. ಈ ಸ್ಥಾಪನೆಯು ಅತೀ ಶೀಘ್ರದಲ್ಲೇ ಅತೀ ದೊಡ್ಡ ಧಾರ್ಮಿಕ ಶಿಕ್ಷಣ ಮತ್ತು ರಾಜಕೀಯ ಚರ್ಚೆಗಾಗಿ ಒಂದು ಸ್ಥಳವಾಗಿ ಅಭಿವೃದ್ಧಿ ಹೊಂದಿತು. ಕ್ರಮೇಣ ತನ್ನ ಶಿಕ್ಷಣವನ್ನು ಎಲ್ಲಾ ವಿಷಯಗಳಲ್ಲೂ, ವಿಶೇಷವಾಗಿ ನೈಸರ್ಗಿಕ ವಿಜ್ಞಾನಗಳಿಗೆ ವಿಸ್ತರಿಸಿತು. ಆದ್ದರಿಂದ ಇದು ಇತಿಹಾಸದಲ್ಲಿನ ಮೊದಲ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆಯಿತು. ಫೆಜ್ನಲ್ಲಿನ “ಅಲ್-ಖರವಾಯಿನ್” ವಿಶ್ವ ವಿದ್ಯಾನಿಲಯ ಇವತ್ತಿಗೂ ಕಾರ್ಯಾಚರಿಸುತ್ತಿದೆ.

7.ಹಾರುವ ಯಂತ್ರ (ವಿಮಾನ)

ಸ್ಪೇನ್ ನ ಅಬ್ಬಾಸ್ ಇಬ್ನ್ ಫಿರ್ನಾಸ್ ಹಾರುವ ಯಂತ್ರವನ್ನು ನಿರ್ಮಿಸಲು ಮತ್ತು ವಾಸ್ತವವಾಗಿ ಹಾರಲು ನಿಜವಾದ ಪ್ರಯತ್ನವನ್ನು ಮಾಡಿದ ಮೊದಲ ವ್ಯಕ್ತಿ. 9 ನೆಯ ಶತಮಾನದಲ್ಲಿ ಅವರು ಪಕ್ಷಿ ವೇಷಭೂಷಣವನ್ನು ಹೋಲುವ ರೆಕ್ಕೆಯ ಉಪಕರಣವನ್ನು ವಿನ್ಯಾಸಗೊಳಿಸಿದರು. ಸ್ಪೇನ್ನ ಕಾರ್ಡೊಬ ಬಳಿ ತನ್ನ ಅತ್ಯಂತ ಪ್ರಸಿದ್ಧವಾದ ಪ್ರಯೋಗದಲ್ಲಿ, ಫಿರ್ನಾಸ್ ಕೆಲವು ಕ್ಷಣಗಳಿಗಾಗಿ ಮೇಲ್ಮುಖವಾಗಿ ಹಾರಿಹೋದರು. ಆದರೆ ಪಕ್ಷಿಗಳು ತಮ್ಮ ಕೊಕ್ಕಿನ ಸಹಾಯದಿಂದ ಇಳಿಯುತ್ತದೆ ಎಂಬುದನ್ನು ಅಬ್ಬಾಸ್ ಇಬ್ನ್ ಫಿರ್ನಾಸ್ ಗೆ ತಿಳಿದಿರಲಿಲ್ಲ. ಇದರಿಂದಾಗಿ ಅವರು ಅವೈಜ್ಞಾನಿಕವಾಗಿ ಕೆಳಗಿಳಿದು ಬೆನ್ನು ಮೂಳೆ ಮುರಿದು ಕೊಂಡರು.

8.ಶಸ್ತ್ರಚಿಕಿತ್ಸಾ ಉಪಕರಣಗಳು

ನಾವು 10 ನೆಯ ಶತಮಾನದಲ್ಲಿ ಪ್ರಯಾಣಿಸಿದರೆ, ಪಾಶ್ಚಾತ್ಯರಿಂದ “ಅಬುಲ್ಕಾಸಿಸ್” ಎಂದು ಕರೆಯಲ್ಪಡುವ ವ್ಯಕ್ತಿ ಶಸ್ತ್ರಚಿಕಿತ್ಸಾ ಉಪಕರಣಗಳ ಪಿತಾಮಹ. ಇವರ ಪೂರ್ಣ ಹೆಸರು “ಅಬುಲ್ ಖಾಸಿಮ್ ಖಲಾಫ್ ಇಬ್ನ್ ಅಲ್-ಅಬಾದ್ ಅಲ್-ಝಹ್ರಾವಿ”. ಇವರು ಬರೆದ “ಅಲ್-ತದ್ರಿಫ್” ಗ್ರಂಥವನ್ನು ಆ ಕಾಲದಲ್ಲಿ ಯುರೋಪಿಯನ್ನರು “ಮೆಡಿಕಲ್ ಎನ್ಸೈಕ್ಲೋಪೀಡಿಯ” ಎಂದು ಕರೆದರು. ಇದು ಸುಮಾರು ಇನ್ನೂರಕ್ಕೂ ಹೆಚ್ಚಿನ ಶಸ್ತ್ರಚಿಕಿತ್ಸಾ ಉಪಕರಣಗಳನ್ನು ಪರಿಚಯಿಸಿದ ಒಂದು ದಿಗ್ಭ್ರಮೆಗೊಳಿಸುವ ಮಾಹಿತಿಗಳನ್ನು ಹೊಂದಿತ್ತು. ಆ ಕಾಲದಲ್ಲಿ ಶಸ್ತ್ರ ಚಿಕಿತ್ಸಾ ಪದ್ಧತಿ ಇತ್ತಾದರೂ ಅದಕ್ಕಾಗಿ ಉಪರಕರಣಗಳನ್ನು ಬಳಸುವ ಇವರ ಸಂಶೋಧನೆ ಪ್ರಸಿದ್ದಿಯಾಯಿತು.

9.ಭೂಪಟ ಮತ್ತು ದಿಕ್ಸೂಚಿ

ಇವತ್ತು ಗೂಗಲ್ ಮ್ಯಾಪ್ ಮುಂತಾದ ಟೆಕ್ನಾಲಜಿಗಳು ಅಭಿವೃದ್ಧಿ ಹೊಂದಿದೆಯಾದರೂ, ಹಿಂದಿನ ಕಾಲದಲ್ಲಿ ಮಣ್ಣಿನ ಫಲಕಗಳ ಮೇಲೆ ಭೂಪಟದ ಚಿತ್ರವನ್ನು ಬರೆದು ಅದನ್ನು ಮಾರ್ಗ ಸೂಚಿಯಾಗಿ ಬಳಸುತ್ತಿದ್ದರು. 3,500 ವರ್ಷಗಳ ಹಿಂದಿನಿಂದಲೂ ಇದನ್ನು ಬಳಸಲಾಗುತ್ತಿತ್ತು. ತದನಂತರ ಪೇಪರ್ ಟೆಕ್ನಾಲಜಿ ಅಭಿವೃದ್ಧಿಯಾದ ನಂತರ ಪೇಪರ್ ಹಾಳೆಗಳಲ್ಲಿ ಇದನ್ನು ಬಳಸಲಾಗುತ್ತಿತ್ತು. ಆದರೆ ಎಲ್ಲಾ ಕಾಲದಲ್ಲೂ ಭೂಪಟ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸಿದವರು ಮುಸ್ಲಿಮರು ಎಂಬುದು ಗಮನಾರ್ಹ.
ಮುಸ್ಲಿಮರು ವ್ಯಾಪಾರಕ್ಕಾಗಿ ಮತ್ತು ಅವರ ಧಾರ್ಮಿಕ ಕಾರಣಗಳಿಗಾಗಿ ತಮ್ಮ ಮನೆಗಳನ್ನು ಬಿಡಲು ಪ್ರಾರಂಭಿಸಿದರು. ಈ ಸಂದರ್ಭದಲ್ಲಿ ಅವರಿಗೆ ಜಗತ್ತಿನ ವಿವಿಧ ಪ್ರದೇಶಗಳ ಮಾರ್ಗವನ್ನು ಕಂಡುಹಿಡಿಯಲು ಪ್ರಾರಂಭಿಸಿದರು. ಇದಕ್ಕಾಗಿ ಭೂಪಟಗಳ ಬಳಕೆ ಮಾಡಿದರು ನಂತರ ಜಲಮಾರ್ಗಗಳ ಅನ್ವೇಷಣೆಗೆ ದಿಕ್ಸೂಚಿಯನ್ನು ಅಭಿವೃದ್ಧಿ ಪಡಿಸಿದರು.

10.ಅಲ್ಜೀಬ್ರಾ (ಬೀಜ ಗಣಿತ)

“ಅಲ್ಜೀಬ್ರಾ” ಎಂಬ ಪದವು ಪರ್ಷಿಯನ್ ಗಣಿತ ಶಾಸ್ತ್ರಜ್ಞ 9 ನೇ ಶತಮಾನದ ಪ್ರಸಿದ್ಧವಾದ “ಕಿಟಾಬ್ ಅಲ್-ಜಬ್ ವಾ ಲಾ-ಮುಗಾಬಲಾ” ಎಂಬ ಶೀರ್ಷಿಕೆಯಿಂದ ಬಂದಿದೆ, ಇದು ಸ್ಥೂಲವಾಗಿ “ದಿ ಬುಕ್ ಆಫ್ ರೀಸನಿಂಗ್ ಅಂಡ್ ಬ್ಯಾಲೆನ್ಸಿಂಗ್” ಎಂದು ಭಾಷಾಂತರಿಸುತ್ತದೆ. ಆಲ್-ಖ್ವಾರಿಜ್ಮಿ ಬೀಜಗಣಿತದ ಪ್ರಾರಂಭವನ್ನು ಪರಿಚಯಿಸುತ್ತಾನೆ. ಈ ಹೊಸ ಕಲ್ಪನೆಯು ಎಷ್ಟು ಮಹತ್ವದ್ದಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ವಾಸ್ತವವಾಗಿ, ಇದು ಗಣಿತಶಾಸ್ತ್ರದ ಗ್ರೀಕ್ ಪರಿಕಲ್ಪನೆಯಿಂದ ಒಂದು ಕ್ರಾಂತಿಕಾರಿ ಚಲನೆಯಾಗಿತ್ತು, ಇದು ಮೂಲಭೂತವಾಗಿ ಜ್ಯಾಮಿತಿಯನ್ನು ಆಧರಿಸಿದೆ. ಗಣಿತಜ್ಞ ಅಲ್-ಖ್ವಾರಿಜ್ಮಿಯು ಒಂದು ಸಂಖ್ಯೆಯನ್ನು ಅಧಿಕಾರಕ್ಕೆ ಏರಿಸುವ ಪರಿಕಲ್ಪನೆಯನ್ನು ಪರಿಚಯಿಸಿದ ಮೊದಲ ವ್ಯಕ್ತಿ.

ಸಂಗ್ರಹ

Suddidina.com Kannada online news portal. Its providing Kannada news, film news Kannada, sports news Kannada, political NeWS in Kannada and more.

ದಿನದ ಸುದ್ದಿ

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಬಿಡುಗಡೆ: ನದಿ ದಂಡೆಯ ಸಾರ್ವಜನಿಕರು, ರೈತರಿಗೆ ಎಚ್ಚರಿಕೆ

Published

on

ಸುದ್ದಿದಿನ,ದಾವಣಗೆರೆ: ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲು ನಿರ್ಧರಿಸಲಾಗಿದೆ.

ತುಂಗಭದ್ರಾ ನದಿಯನ್ನು ಅವಲಂಬಿಸಿರುವ ನಗರ ಮತ್ತು ಗ್ರಾಮೀಣ ಪ್ರದೇಶಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ, ಮೇ 18 ರಿಂದ 23 ರವರೆಗೆ ಪ್ರತಿದಿನ 2000 ಕ್ಯೂಸೆಕ್ಸ್ ನಂತೆ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರನ್ನು ಹರಿಸಲಾಗುವುದು .

ನದಿಗೆ ಗಣನೀಯ ಪ್ರಮಾಣದಲ್ಲಿ ನೀರು ಹರಿಸುತ್ತಿರುವುದರಿಂದ ನದಿಯ ದಂಡೆಯ ಕೆಳಮಟ್ಟದಲ್ಲಿ ಸಾರ್ವಜನಿಕರು ತಿರುಗಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ . ನದಿ ಪಾತ್ರದಲ್ಲಿ ದನಕರುಗಳನ್ನು ಮೇಯಿಸುವುದು, ತೋಟಗಾರಿಕೆ ಮಾಡುವುದು ಮುಂತಾದ ಚಟುವಟಿಕೆಗಳನ್ನು ಮಾಡಬಾರದೆಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ . ನೀರು ಹರಿಸುವ ಈ ಅವಧಿಯಲ್ಲಿ ನದಿ ದಂಡೆಯ ಇಕ್ಕೆಲಗಳಲ್ಲಿ ರೈತರು ಅಳವಡಿಸಿರುವ ಪಂಪ್‌ಸೆಟ್‌ಗಳ ಮೂಲಕ ನೀರೆತ್ತುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ .

ಸಾರ್ವಜನಿಕರು ಹಾಗೂ ರೈತರು ಈ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಭದ್ರಾ ಜಲಾಶಯ ಯೋಜನೆಯ ಕುಡಿಯುವ ನೀರಿನ ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ

Published

on

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಶಿಕ್ಷಕರು ಮತ್ತು ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಆನ್‌ಲೈನ್ ವಂಚನೆಗಳ ಕುರಿತು ವ್ಯಾಪಕ ಜಾಗೃತಿ ಮೂಡಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸರ್ಕಾರದ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಡಾ. ಶಮ್ಲಾ ಇಕ್ಬಾಲ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಶನಿವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ತಂತ್ರಜ್ಞಾನ ಆಧಾರಿತ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶೀಘ್ರದಲ್ಲೇ ‘ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್’ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಸಭೆಯಲ್ಲಿದ್ದ ಜಿಲ್ಲಾಧಿಕಾರಿಗಳಾದ ಗಂಗಾಧರಸ್ವಾಮಿ ಜಿ.ಎಂ ಅವರು ಮಾಹಿತಿ ನೀಡಿ, ಈ ಯೋಜನೆಗಾಗಿ ಸುಮಾರು 20 ಕೋಟಿ ರೂಪಾಯಿಗಳ ಅನುದಾನವನ್ನು ಕೋರಲಾಗಿದ್ದು, ಪ್ರಾಥಮಿಕ ಹಂತವಾಗಿ ಕನಿಷ್ಠ 10 ಕೋಟಿ ರೂಪಾಯಿ ಬಿಡುಗಡೆಯಾದರೂ ತಕ್ಷಣವೇ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಯೋಜನೆಗೆ ಸಂಬಂಧಿಸಿದಂತೆ ಸಚಿವರು ಹಾಗೂ ಐಟಿ ಇಲಾಖೆಯ ಉನ್ನತ ಅಧಿಕಾರಿಗಳು ಈಗಾಗಲೇ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.

ಪ್ರಸ್ತುತ ಶಾಲಾ-ಕಾಲೇಜುಗಳಿಗೆ ರಜೆ ಇರುವುದರಿಂದ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಲ್ಲದಿದ್ದರೂ, ಮುಂಬರುವ ಹೊಸ ಶೈಕ್ಷಣಿಕ ವರ್ಷಕ್ಕೆ ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನುಮುಂದೆ ಪ್ರತಿ ತಿಂಗಳು ವಸತಿ ನಿಲಯಗಳಲ್ಲಿ ಸಂಜೆ ವೇಳೆ ಅರ್ಧ ಗಂಟೆಗಳ ಕಾಲ ವಚನ ಸಾಹಿತ್ಯ, ದಲಿತ ಸಾಹಿತ್ಯ ಹಾಗೂ ಮಹಿಳಾ ಸಾಹಿತ್ಯದ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದ್ದು, ಮುಂದಿನ ತಿಂಗಳಿಂದ ಮಾನ್ಯ ಸಂಸದರ ನೇತೃತ್ವದಲ್ಲಿ ಇದಕ್ಕೆ ಚಾಲನೆ ನೀಡಲಾಗುವುದು. ಜಿಲ್ಲೆಯಲ್ಲಿ ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿದ್ದ ಸಮಾಜ ಕಲ್ಯಾಣ, ಬಿ.ಸಿ.ಎಂ, ಅಲ್ಪಸಂಖ್ಯಾತರ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳಿಗೆ ಸ್ವಂತ ನಿವೇಶನಗಳನ್ನು ಮಂಜೂರು ಮಾಡಲಾಗಿದ್ದು, ಅನುದಾನ ಬಂದ ತಕ್ಷಣ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಲಿದೆ ಎಂದು ತಿಳಿಸಿದರು.

ವಸತಿ ನಿಲಯದ ಮಕ್ಕಳಿಗೆ ‘ಹೆಲ್ತ್ ಕಾರ್ಡ್’ ವಿತರಿಸಲಾಗುತ್ತಿದ್ದು, ಪ್ರತಿ ತಿಂಗಳು ಕಡ್ಡಾಯ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆ ವಿಶೇಷ ಶ್ರಮವಹಿಸುತ್ತಿದ್ದು, ಫಲಿತಾಂಶದಲ್ಲಿ ಹಿಂದುಳಿದಿರುವ ಶಾಲೆಗಳನ್ನು ಅಧಿಕಾರಿಗಳು ದತ್ತು ಪಡೆದುಕೊಂಡು ನಿರಂತರ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಸಿಇಒ ಸ್ವತಃ ಸರ್ಕಾರಿ ಶಾಲೆಗಳಿಗೆ ಭೇಟಿ ನೀಡಿ ಗುಣಮಟ್ಟವನ್ನು ಪರಿಶೀಲಿಸುತ್ತಿದ್ದು, ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂಜಾನೆ ಮತ್ತು ಸಂಜೆ ವಿಶೇಷ ತರಗತಿಗಳನ್ನು ಆಯೋಜಿಸುತ್ತಿದ್ದಾರೆ ಎಂದರು.

ಕಳೆದ ವರ್ಷ ಜಿಲ್ಲೆಯಲ್ಲಿ ಯಾವುದೇ ಬಾಲ್ಯವಿವಾಹ ಪ್ರಕರಣಗಳು ದಾಖಲಾಗಿರಲಿಲ್ಲ. ಆದರೆ, ಕಳೆದ ತಿಂಗಳು ಶಾದಿಮಹಲ್‌ನಲ್ಲಿ ನಡೆಯುತ್ತಿದ್ದ ವಿವಾಹವೊಂದರ ಮೇಲೆ ದಾಳಿ ನಡೆಸಿ, ಅಪ್ರಾಪ್ತ ಬಾಲಕಿಯರ ಬಾಲ್ಯವಿವಾಹವನ್ನು ಯಶಸ್ವಿಯಾಗಿ ತಡೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು. ಇನ್ನು ಮುಖ್ಯ ಕಾರ್ಯದರ್ಶಿಗಳ ಆದೇಶದಂತೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಸಿ.ಇ.ಒ ಅವರು ಜಿಲ್ಲೆಯ ಆಸ್ಪತ್ರೆಗಳಿಗೆ ಆಕಸ್ಮಿಕ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಕೆಲವು ನರ್ಸಿಂಗ್ ಹೋಂಗಳಲ್ಲಿ ಶೇಕಡಾ 100 ರಷ್ಟು ಸಿಸೇರಿಯನ್ ಪ್ರಕರಣಗಳು ಕಂಡುಬಂದ ಹಿನ್ನೆಲೆಯಲ್ಲಿ, ವೈದ್ಯರ ಸಭೆ ಕರೆದು ಕಡ್ಡಾಯವಾಗಿ ನೈಸರ್ಗಿಕ ಹೆರಿಗೆಗೆ ಆದ್ಯತೆ ನೀಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ತಾಯಿ ಮರಣ ಪ್ರಮಾಣವನ್ನು ಯಶಸ್ವಿಯಾಗಿ ನಿಯಂತ್ರಿಸಲಾಗಿದ್ದು, ಪ್ರಸ್ತುತ ಇದು ರಾಜ್ಯದ ಸರಾಸರಿಗಿಂತ ಕಡಿಮೆ ಇರುವುದು ಜಿಲ್ಲೆಯ ದೊಡ್ಡ ಸಾಧನೆಯಾಗಿದೆ. ಜಿಲ್ಲೆಯಲ್ಲಿ ಸದ್ಯ ಚರ್ಮರೋಗ ತಜ್ಞರು, ಸ್ತ್ರೀರೋಗ ತಜ್ಞರು ಹಾಗೂ ಅರಿವಳಿಕೆ ತಜ್ಞರ ಹುದ್ದೆಗಳು ಖಾಲಿ ಇದ್ದು, ಲಭ್ಯವಿರುವ ಸಂಪನ್ಮೂಲಗಳಲ್ಲೇ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದರು.

ಕೃಷಿ, ನೀರಾವರಿ ಹಾಗೂ ನಾಗರಿಕ ಸೌಲಭ್ಯಗಳು

ಮುಂಬರುವ ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸಂಪೂರ್ಣ ಸಜ್ಜಾಗಿದ್ದು, ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಅಡಿಕೆ-ತೆಂಗಿನ ಜೊತೆಗೆ ಹಣ್ಣು ಮತ್ತು ತರಕಾರಿ ಬೆಳೆಗಳಿಗೂ ಉತ್ತೇಜನ ನೀಡಲಾಗುತ್ತಿದ್ದು, ಹನಿ ನೀರಾವರಿ ಯೋಜನೆ ಸಬ್ಸಿಡಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.

ಗ್ರಾಮೀಣ ಭಾಗದ ‘ಜಲಜೀವನ್ ಮಿಷನ್’ ಯೋಜನೆಯಡಿ ಪೈಪ್‌ಲೈನ್ ಮತ್ತು ನಲ್ಲಿ ಸಂಪರ್ಕ ಕಾರ್ಯಗಳು ಕೊನೆಯ ಹಂತದಲ್ಲಿದ್ದು, ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗದಂತೆ ಇಂಜಿನಿಯರ್‌ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ನಗರದ ಪ್ರಮುಖ ರಸ್ತೆಗಳ ನವೀಕರಣ, ಸ್ಮಾರ್ಟ್ ರಸ್ತೆಗಳ ನಿರ್ಮಾಣ ಹಾಗೂ ಒಳಚರಂಡಿ ಆಧುನೀಕರಣ ಪ್ರಗತಿಯಲ್ಲಿದೆ. ಘನತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ವ್ಯವಸ್ಥಿತಗೊಳಿಸಲು ಸೂಚಿಸಲಾಗಿದೆ.

ಸುಪ್ರೀಂ ಕೋರ್ಟ್ ಆದೇಶಕ್ಕೂ ಮುನ್ನವೇ ದಾವಣಗೆರೆಯಲ್ಲಿ ಬೀದಿನಾಯಿಗಳಿಗೆ ವ್ಯಾಕ್ಸಿನೇಷನ್ ಮತ್ತು ಸ್ಟೆರಿಲೈಸೇಶನ್ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದ್ದು, ಈಗಾಗಲೇ ಶೇಕಡಾ 80 ರಷ್ಟು ಯಶಸ್ಸು ಸಾಧಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಾದ ಡಾ. ಶೇಖರ್‌ ಹೆಚ್.ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕಾಧಿಕಾರಿಗಳಾದ ಗಿತ್ತೆ ಮಾಧವ ವಿಠ್ಠಲರಾವ್‌ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?

Published

on

ಡಾ. ಗಿರೀಶ್ ಕುಮಾರ್ ಗೌಡ ಬಳ್ಳಾರಿ

ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಪತ್ತೆ. ಲಾರಿಗಳ ಮಾಲೀಕರೊಂದಿಗೆ ಶ್ಯಾಮಿಲು. ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೇ, ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಸಾಗಾಣಿಕೆ, ಸರ್ಕಾರಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಕೇಳಿಬಂದಿದೆ.

ಬಳ್ಳಾರಿ ನಗರದ ಹೊರವಲಯದ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ದೃಶ್ಯ ಕಂಡುಬಂದಿದೆ.
ಇನ್ನು ಲಾರಿಯಲ್ಲಿ ಅಕ್ರಮವಾಗಿ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದು ಹೊನ್ನಳ್ಳಿ ತಾಂಡಾದ ತರುಣ್ ಎನ್ನುವ ಮಾಲೀಕರಿಗೆ ಸೇರಿದ ಲಾರಿಯಾಗಿದ್ದು. ಲಾರಿ ನಂಬರ್ ಕೆ.ಎ 35 ಸಿ 2813 ಆಗಿದೆ. ಸಂಜೆ 5 ಗಂಟೆ 30 ನಿಮಿಷಕ್ಕೆ ಕಪ್ಪಗಲ್ಲು ರಸ್ತೆಯಲ್ಲಿನ ಲೇಔಟ್ ಮನೆ ನಿರ್ಮಾಣಕ್ಕೆ ಅಕ್ರಮ ಕೆಂಪು ಮಣ್ಣು ಲಾರಿಯಲ್ಲಿ ಸಾಗಾಣಿಕೆ ಮಾಡಿದ್ದಾರೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ

ನಾವು ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಯಾವುದೇ ಟ್ರಿಪ್ ಚೀಟಿ ಇಲ್ಲದೆ ಕೆಂಪು ಮಣ್ಣು ಲಾರಿಗಳಲ್ಲಿ ಸಾಗಾಟ ಮಾಡುತ್ತೆವೆ ಎಂದರು.

ಇನ್ನು ಲಾರಿ ಚಾಲಕನಿಗೆ ಟ್ರಿಪ್ ಚೀಟಿ ಕೇಳಿದರೆ ಇಲ್ಲ ಸಾರ್ ನಾವು ಒಂದು ಟ್ರಿಪ್ ಚೀಟಿ ಪಡೆದು ಎರಡು ಮೂರು ಕೆಂಪು ಮಣ್ಣು, ಜಲ್ಲಿ, ಕಲ್ಲು ಹೊಡೆಯುತ್ತೆವೆ ಎಂದು ವ್ಯಕ್ತಿ ಮತ್ತೊಂದು ಬಾರಿ ಟ್ರಿಪ್ ಚೀಟಿ ತೋರಿಸಿ ನೋಡೋಣ ಎಂದರೆ ಲಾರಿ ಮಾಲೀಕ ತರುಣ್ ಗೆ ಪೋನ್ ಕೊಟ್ಟಿದ್ದಾನೆ. ಮಾಲೀಕ ತರುಣ್ ಇಲ್ಲ ಸಾರ್ ನಾವು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಸಾಗಾಣಿಕೆ ಮಾಡುತ್ತೇವೆ ಎಂದರು. ಯಾವುದೇ ಟ್ರಿಪ್ ಚೀಟಿ ಪಡೆಯಲ್ಲ ಎಂದರು.

ಇನ್ನು ಬಳ್ಳಾರಿ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಈ ರೀತಿಯಾಗಿ ಅಕ್ರಮ ಕೆಂಪು ಮಣ್ಣು, ಜಲ್ಲಿ, ಕಲ್ಲು ಬಿಂಚೆ ಸರ್ಕಾರಕ್ಕೆ ತೆರಿಗೆ ಪಾವತಿ ಮಾಡದೇ ನಷ್ಟ ಉಂಟು ಮಾಡುತ್ತಿದ್ದಾರೆ.

ಬಳ್ಳಾರಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮೂರಂ , ಕಲ್ಲು, ಬಿಂಚೆ, ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಲಾರಿಗಳನ್ನು ಹಿಡಿಯದೆ ತಿಂಗಳಿಗೆ ಲಕ್ಷಾಂತರ ರೂಪಾಯಿ ಲಂಚ ಪಡೆದ, ಲಾರಿ ಮಾಲೀಕರಿಗೆ ಸಹಕಾರಿ ನೀಡಿ, ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಮಾಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಕೇಳಿ ಬಂದಿದೆ.

ಫೀಲ್ಡ್ ವರ್ಕ್ ಮಾಡದೆ ಅಧಿಕಾರಿಗಳು ನಿದ್ದೆಗೆ ಜಾರಿದ್ದಾರೆ:
ಬಳ್ಳಾರಿ ಜಿಲ್ಲೆಯ ಬಳ್ಳಾರಿ ನಗರ, ಗ್ರಾಮಾಂತರ , ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಫೀಲ್ಡ್ ವರ್ಕ್ ಮಾಡದೆ ನಿದ್ದೆಗೆ ಜಾರಿದ್ದಾರೆ. ಅವರು ಸರ್ಕಾರಕ್ಕೆ ತೆರಿಗೆ ಪಾವತಿ ಮಾಡಿಸದೇ ನಷ್ಟ ಉಂಟು ಮಾಡುತ್ತಿದ್ದಾರೆ.

ಬಳ್ಳಾರಿ ನಗರದ ಬಂಡಿಹಟ್ಟಿ, ಹೊನ್ನಳ್ಳಿ, ಹೊನ್ನಳ್ಳಿ ತಾಂಡಾ, ಮೋಕಾ, ಸಂಗನಕಲ್ಲು, ಸಿರವಾರ, ಕಪ್ಪಗಲ್ಲು ಸಿಂದಾವಾಳ, ಕಂಪ್ಲಿ, ಸಿರುಗುಪ್ಪ, ಕಂಪ್ಲಿ, ಕುರುಗೋಡು ತಾಲೂಕಿನಲ್ಲಿ ಈ ಕಲ್ಲು, ಬಿಂಚೆ, ಕೆಂಪು ಮಣ್ಣು, ಮರಂ ಅಕ್ರಮವಾಗಿ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಸಾಗಾಣಿಕೆ ಮಾಡುತ್ತಿರುವ ದುರಂತವಾಗಿದೆ. ಇನ್ನು ಕಪ್ಪಗಲ್ಲು ಸಿರವಾರ ರಸ್ತೆಯಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿದ್ದಾರೆ. ಅಧಿಕಾರಿಗಳು ಮಾತ್ರ ನಾಪತ್ತೆ.

ಶಾಸಕರ, ಸಂಸದರ ಪ್ರೊತ್ಸಾಹ

ಇನ್ನು ಈ ಲಾರಿಗಳಲ್ಲಿ ಯಾವುದೇ ಟ್ರಿಪ್ ಚೀಟಿ ಇಲ್ಲದೇ ಅಕ್ರಮ ಗಣಿಗಾರಿಕೆಯ ಕಲ್ಲು ಬಿಂಚೆ ಕೆಂಪು ಮಣ್ಣು ಸಾಗಾಣಿಕೆ ಮಾಡುತ್ತಿರುವ ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕಿನ ಶಾಸಕರು ಹಾಗೂ ಸಂಸದರು ಮತ್ತು ಅವರ ಬೆಂಬಲಿಗರ ಪ್ರೊತ್ಸಾಹ ನೀಡುತ್ತಿದ್ದಾರೆ ಎನ್ನುವ ಬಹು ದೊಡ್ಡ ಆರೋಪ ಸಹ ಇದೆ.
ಒಟ್ಟಾರೆಯಾಗಿ ಜಿಲ್ಲಾಧಿಕಾರಿ ನಾಗೇಂದ್ರ ಅವರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಚಾರಣೆ ಮಾಡಿ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ15 minutes ago

ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ಕುಡಿಯುವ ನೀರು ಬಿಡುಗಡೆ: ನದಿ ದಂಡೆಯ ಸಾರ್ವಜನಿಕರು, ರೈತರಿಗೆ ಎಚ್ಚರಿಕೆ

ಸುದ್ದಿದಿನ,ದಾವಣಗೆರೆ: ಹಾವೇರಿ, ರಾಣೇಬೆನ್ನೂರ, ಬ್ಯಾಡಗಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಹಾಗೂ ನದಿ ಪಾತ್ರದ ಗ್ರಾಮಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರನ್ನು ಪೂರೈಸಲು ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ...

ದಿನದ ಸುದ್ದಿ40 minutes ago

ಶಿಕ್ಷಕರು, ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ ತರಬೇತಿ ನೀಡಿ

ಸುದ್ದಿದಿನ,ದಾವಣಗೆರೆ:ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ‘ಚೈಲ್ಡ್ ಹೆಲ್ಪ್‌ಲೈನ್’ ಸಂಖ್ಯೆಯನ್ನು ಪ್ರದರ್ಶಿಸಬೇಕು ಹಾಗೂ ಶಿಕ್ಷಕರು ಮತ್ತು ವಾರ್ಡನ್‌ಗಳಿಗೆ ಪೋಕ್ಸೊ ಕಾಯ್ದೆ, ಮಕ್ಕಳ ಹಕ್ಕುಗಳು ಹಾಗೂ ಆನ್‌ಲೈನ್ ವಂಚನೆಗಳ ಕುರಿತು...

ದಿನದ ಸುದ್ದಿ1 day ago

ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್ ಚೀಟಿ ಇಲ್ಲದೆ ಅಕ್ರಮ ಸಾಗಾಣಿಕೆ ; ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳೊಂದಿಗೆ ಶಾಮೀಲು..!?

ಡಾ. ಗಿರೀಶ್ ಕುಮಾರ್ ಗೌಡ ಬಳ್ಳಾರಿ ಸುದ್ದಿದಿನ,ಬಳ್ಳಾರಿ:ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನಾಪತ್ತೆ. ಲಾರಿಗಳ ಮಾಲೀಕರೊಂದಿಗೆ ಶ್ಯಾಮಿಲು. ಲಾರಿ, ಟ್ರಾಕ್ಟರ್ ಗಳಿಗೆ ಟ್ರಿಪ್...

ಅಂಕಣ1 day ago

ನೀಟ್ ಸೃಷ್ಟಿಸಿದ ಅವಾಂತರಗಳು ಮತ್ತು ಅದರ ಬಹುಮುಖಿ ಬಿಕ್ಕಟ್ಟುಗಳು: ಒಂದು ವಿಮರ್ಶಾತ್ಮಕ ನೋಟ

~ಡಾ.ಮೇಟಿ ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಭಾರತದ ವೈದ್ಯಕೀಯ ಶಿಕ್ಷಣ ರಂಗದಲ್ಲಿ ಏಕರೂಪತೆ ಮತ್ತು ಪಾರದರ್ಶಕತೆಯನ್ನು ತರುವ...

ದಿನದ ಸುದ್ದಿ1 day ago

ಕೆ. ಶಿವರಾಜಕುಮಾರ್ ಅವರಿಗೆ ಪಿಎಚ್ ಡಿ ಪದವಿ

ಸುದ್ದಿದಿನ,ದಾವಣಗೆರೆ:ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಸ್‌ಜೆಎಂ ಪ್ರಥಮ ದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಕೆ.ಶಿವರಾಜಕುಮಾರ್ ಮಂಡಿಸಿದ ‘ಪ್ರಧಾನ ಮಂತ್ರಿ ಜನಧನ ಯೋಜನಾ ಆಯ್ಯಂಡ್ ಫೈನಾನ್ಸಿಯಲ್...

ದಿನದ ಸುದ್ದಿ3 days ago

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು. ಚಲನಚಿತ್ರ ರಂಗ – 2005ರಲ್ಲಿ ‘ಬಾಯ್...

ದಿನದ ಸುದ್ದಿ3 days ago

ಬ್ಯಾಕ್‌ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹರಿಹರ ನಗರದ ಮಾತೃಶ್ರೀ ರುದ್ರಮಾಂಬಾ ಬಸವಾರ್ಯ ಪ್ರೌಢಶಾಲೆಯ ಕನ್ನಡ ಶಿಕ್ಷಕರ ಬ್ಯಾಕ್‌ಲಾಗ್ (ಪರಿಶಿಷ್ಟ ಜಾತಿ) ನೇಮಕಾತಿಯಲ್ಲಿನ ಅಕ್ರಮಗಳನ್ನು ತನಿಖೆಗೆ ಒಳಪಡಿಸಿ ಆಡಳಿತ ಮಂಡಳಿ...

ದಿನದ ಸುದ್ದಿ3 days ago

ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು

ಸುದ್ದಿದಿನ,ದಾವಣಗೆರೆ: ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ, ನ್ಯಾಮತಿ ತಾಲ್ಲೂಕು ಇಲ್ಲಿನ ಪ್ರಾಂಶುಪಾಲರಾದ ನಾಗರಾಜ ಜಿ.ಎಂ...

ದಿನದ ಸುದ್ದಿ4 days ago

ನಾಳೆ ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆ ಅಣುಕು ಅಭ್ಯಾಸ

ಸುದ್ದಿದಿನ, ಹರಿಹರ :ಇದೇ 14 ರಂದು ಗುರುವಾರ (ನಾಳೆ) ಹರಿಹರ ರೈಲು ನಿಲ್ದಾಣದಲ್ಲಿ ವಾರ್ಷಿಕ ವಿಪತ್ತು ನಿರ್ವಹಣೆಯ ಅಣುಕು ಅಭ್ಯಾಸವನ್ನು ಬೆಳಗ್ಗೆ 8:30 ಕ್ಕೆ ನಡೆಸಲಿದೆ ಎಂದು...

ದಿನದ ಸುದ್ದಿ4 days ago

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ...

Trending