ಲೈಫ್ ಸ್ಟೈಲ್
ವಿಟಮಿನ್ ಎ ನಲ್ಲಿ ಇಷ್ಟೆಲ್ಲಾ ಇದೆ!
ವಿಟಮಿನ್ ಎ ಕೊರತೆಯಿಂದ ಕಣ್ಣು ದೃಷ್ಟಿಗೆ ಆಪತ್ತು ಉಂಟಾಗುತ್ತದೆ ಎಂದು ಕಿ. ಪೂ. 1500 ಕಾಲದಲ್ಲೇ ಅರಿವುಂಟಾಗಿತ್ತು. 1930ರಲ್ಲಿ ವಿಜ್ಞಾನಿಗಳು ಇಲಿಗಳ ಮೇಲೆ ಪ್ರಯೋಗ ಮಾಡಿ ಸಸ್ಯಾಹಾರದಲ್ಲಿ ವಿಟಮಿನ್ ಎ ಲಭಿಸುತ್ತದೆ ಎಂದು ಕಂಡುಹಿಡಿದರು. ವಿಟಮಿನ್ ಎ ಅಥವಾ ರೆಟಿನಾಲ್ ಪ್ರಾಣಿಜನ್ಯ ಆಹಾರಗಳಲ್ಲೂ ಇರುತ್ತದೆ. ಇದೇ ಕೆರೊಟಿನ್ ಶರೀರದಲ್ಲಿ ವಿಟಮಿನ್ ಎ ಆಗಿ ಬದಲಾಗುತ್ತದೆ. ಮಾನವ ಶರೀರ 80% ವಿಟಮಿನ್ ಎ ಯನ್ನು ಹೀರಿಕೊಳ್ಳುತ್ತದೆ. ಸುಮಾರು 1500 ಮಿ. ಗ್ರಾಂ ತೂಕದ ಲಿವರ್ನಲ್ಲಿ 1,50,000 ಮೈಕ್ರೋ ಗ್ರಾಂ ವಿಟಮಿನ್ ಎ ಇರುತ್ತದೆ.
20% ವಿಟಮಿನ್ ಎ ಮಲದ ಮೂಲಕ ಹೊರಬೀಳುತ್ತದೆ. ಉಳಿದಿದ್ದರಲ್ಲಿ 20-50%ಇತರ ವಸ್ತುಗಳು ಸೇರಿ ಬದಲಾವಣೆ ಹೊಂದುತ್ತದೆ. 30-60% ಮಾತ್ರ ಶರೀರದಲ್ಲಿ ಸಂಗ್ರಹಿತವಾಗುತ್ತದೆ.
ವಿಟಮಿನ್ ಎ ನ ಮಹತ್ವ
ಅವಯವಗಳಲ್ಲೆಲ್ಲಾ ಅತ್ಯಂತ ಪ್ರಧಾನವಾದಕಣ್ಣುಗಳಿಗೆ ವಿಟಮಿನ್ ಎ ಶ್ರೀರಕ್ಷೆಯಾಗಿದೆ. ರೆಟಿನಾದೊಳಗಿನ ದೃಷ್ಟಿಯನ್ನು ನಿಶಿತವಾಗಿರುವುದರಲ್ಲಿ ಎ ಪಾತ್ರ ಮಹತ್ವದ್ದು. ಕಣ್ಣುಬೇನೆಗಳನ್ನು ತಡೆಗಟ್ಟುವಲ್ಲಿ ವಿಟಮಿನ್ ಎ ಉತ್ತಮ ಹೋರಾಟಗಾರನಾಗಿ ನಿಲ್ಲುತ್ತದೆ. ಇತರೇ ಅವಯವಗಳ ಬೆಳವಣಿಗೆ, ರಕ್ಷಣೆಗಳಿಗೂ ವಿಟಮಿನ್ ಎ ಬೇಕೇ ಬೇಕು.
ಶ್ವಾಸಕೋಶಗಳಿಗೆ ತಗಲುವ ಸೋಂಕುಗಳನ್ನು ಹೋಗಲಾಡಿಸುವುದು, ಜಠರ ರಸಗಳ ಉತ್ಪಾದನೆಯನ್ನು ಹೆಚ್ಚಿಸುವುದು. ಕರುಳುಗಳ ಕಾರ್ಯಕ್ಷಮತೆಯನ್ನು ವೃದ್ಧಿಸುವುದು ಅಷ್ಟೇ ಅಲ್ಲ. ಕೂದಲುಗಳು ಸಮೃದ್ಧವಾಗಿ ಬೆಳೆಯಲು ವಿಟಮಿನ್ ಎ ಬೇಕು. ಹಲ್ಲುಗಳು, ವಸಡುಗಳು ಗಟ್ಟಿಯಾಗಿರುವುದಕ್ಕೂ ವಿಟಮಿನ್ ಎ ಬೇಕು. ಇದು ರಕ್ತ ಪ್ರಸರಣ ಸರಾಗವಾಗಿ ಆಗುವಂತೆ ಮಾಡುತ್ತದೆ.
ಇನ್ನಷ್ಟು ವಿವರವಾಗಿ ಹೇಳುವುದಾದರೆ ಇರುಳುಗುರುಡು ಹಾಗೂ ಹೊರ ಪೊರೆಯ ಸೋಂಕುಗಳಿದ್ದಲ್ಲಿ ದಿನಕ್ಕೆ 9000 ಮೈಕ್ರೋ ಗ್ರಾಂನಷ್ಟು ವಿಟಮಿನ್ ಎ ಶರೀರವನ್ನು ಸೇರ ಬೇಕಾಗುತ್ತದೆ. ಕಾರ್ನಿಯಾದಲ್ಲಿ ತೊಂದರೆಗಳಿದ್ದಲ್ಲಿ ತೂಕವನ್ನಾಧರಿಸಿ ಪ್ರತಿ ಕೆ.ಜಿ. ದೇಹ ತೂಕಕ್ಕೆ 6000 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ ತೆಗೆದುಕೊಳ್ಳಬೇಕು. ಮಕ್ಕಳ ಎಳೆಕಣ್ಣುಗಳು ಸಮೀಪದೃಷ್ಟಿ ದೋಷಕ್ಕೆ ಗುರಿಯಾಗದೇ ಇರಬೇಕಾದಲ್ಲಿ ವಿಟಮಿನ್ ಎ ಅಗತ್ಯವಿದ್ದಷ್ಟು ಪೂರೈಕೆಯಾಗಬೇಕು.
ಕಣ್ಣುಗಳ ರೆಪ್ಪೆ ಮಿಟುಕಿಸದೇ ತದೇಕಚಿತ್ರವಾಗಿ ಕಂಪ್ಯೂಟರ್, ಟಿ.ವಿ. ಸ್ಕ್ರೀನ್ಗಳನ್ನು ದಿಟ್ಟಿಸುತ್ತಿದ್ದರೆ ಒಣಗಣ್ಣು ಉಂಟಾಗುತ್ತದೆ. ವಿಟಮಿನ್ ಎ ಹೇರಳವಾಗಿರುವ ಆಹಾರಗಳನ್ನು ಸೇವಿಸುತ್ತಾ, ಓದು, ಬ್ರೌಸಿಂಗ್ ಇತ್ಯಾದಿ ಮಾಡುವಾಗ ನಡುನಡುವೆ ಕಣ್ಣುಗಳನ್ನು ಮುಚ್ಚಿಕೊಂಡು ವಿಶ್ರಾಂತಿ ನೀಡುತ್ತದ್ದಲ್ಲಿ ಕಣ್ಣು ಬೇನೆಗಳು ನಿವಾರಣೆಯಾಗುವುವು.
ಮೊಡವೆಗಳಿಂದ ಹಿಡಿದು ಕುರು, ಕಜ್ಜಿಗಳವರೆಗೆ ಚರ್ಮಕ್ಕೆ ಅಂಟಿಕೊಳ್ಳುವ ಹಲವಾರು ಹುಣ್ಣುಗಳು, ಗಾಯಗಳು ಮಾಯಲು ವಿಟಮಿನ್ ಎ ಸೇವನೆ ಸೂಕ್ತ ಪ್ರಮಾಣದಲ್ಲಿದ್ದರೆ ಮಾತ್ರ ಸಾಧ್ಯ. ಚರ್ಮದ ಸ್ಥಿತಿಯನ್ನು ಆಧರಿಸಿ 7,500 ರಿಂದ ಮಾತ್ರ 15,000 ಮೈಕ್ರೋ ಗ್ರಾಂವರೆಗೆ ನಿಯಮಿತವಾಗಿ ವಿಟಮಿನ್ ಎ ತೆಗೆದುಕೊಳ್ಳಬೇಕು.
ವಿಟಮಿನ್ ಎ ಯಾರಿಗೆ ಎಷ್ಟು ಬೇಕು?
ವಿಟಮಿನ್ ಅಗತ್ಯಕ್ಕಿಂತ ಅತಿಯಾಗಿ ಸೇವಿಸಲ್ಪಟ್ಟಲ್ಲಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ಮಕ್ಕಳಲ್ಲಿ ದಿನವೊಂದಕ್ಕೆ 5,500 ಮೈಕ್ರೋಗ್ರಾಂಗಳಷ್ಟು ವಿಟಮಿನ್ ಎ, ದೊಡ್ಡವರಲ್ಲಿ ದಿನಕ್ಕೆ 12,000 ಮೈಕ್ರೋ ಗ್ರಾಂಗಳಷ್ಟು ವಿಟಮಿನ್ ಎ ಬಳಸಲ್ಪಟ್ಟಲ್ಲಿ ಹೊಟ್ಟೆನುಲಿತ, ವಾಂತಿ, ಭೇದಿಯಂಥವು ತತ್ಕ್ಷಣಕ್ಕೆ ಕಂಡು ಬರುತ್ತವೆ. ಕ್ರಮೇಣವಾಗಿ ದೃಷ್ಟಿ ಮಂಜಾಗುವುದು, ಕೀಲುನೋವು, ಅಧಿಕ ಋತುಸ್ರಾವ, ತಲೆನೋವು, ಲಿವರ್ ದೊಡ್ಡದಾಗುವುದು ಮೊದಲಾದ ಪ್ರಮಾದಕರ ಬೆಳವಣಿಗೆಗಳು ಸಂಭವಿಸುತ್ತವೆ. ವಿಟಮಿನ್ ಎ ಯಾರಿಗೆ ಎಷ್ಟು ಬೇಕು ಎಂಬುದರ ಅರಿವಿನೊಂದಿಗೆ ಅದನ್ನು ಸೇವಿಸಬೇಕು. ದಿನದ ಲೆಕ್ಕದಲ್ಲಿ ತಜ್ಞರ ಪ್ರಕಾರ ಹೇಳುವುದಾದರೆ..
- ಐದು ವರ್ಷದೊಳಗಿನ ಹಸುಳೆಗಳು-350 ಮೈಕ್ರೋಗ್ರಾಂ
- ಮಕ್ಕಳು- 600 ಮೈಕ್ರೋಗ್ರಾಂ
- ಪುರುಷರು- 600 ಮೈಕ್ರೋಗ್ರಾಂ
- ಮಹಿಎಯರು – 600 ಮೈಕ್ರೋಗ್ರಾಂ
- ಬಾಣಂತಿಯರು – 900 ಮೈಕ್ರೋ ಗ್ರಾಂ
ವಿಟಮಿನ್ ಎ ಭರಿತ ಆಹಾರಗಳು – ಗ್ರಾಂಗಳಲ್ಲಿ ( ಕೆರೋಟಿನ್ ರೂಪದಲ್ಲಿ)
- ಪಾಲಕ್ ಸೊಪ್ಪು – 5,580 ಮೈಕ್ರೋಗ್ರಾಂ
- ಕ್ಯಾರೆಟ್ – 1,890 ಮೈಕ್ರೋಗ್ರಾಂ
- ಮೊಟ್ಟೆ – 420 ಮೈಕ್ರೋಗ್ರಾಂ
- ಮಾವಿನ ಹಣ್ಣು – 2,743 ಮೈಕ್ರೋಗ್ರಾಂ
- ಟೊಮೋಟೊ – 351 ಮೈಕ್ರೋಗ್ರಾಂ
- ಬೀಟ್ರೂಟ್ ಸೊಪ್ಪು – 5,862 ಮೈಕ್ರೋಗ್ರಾಂ
- ನುಗ್ಗೇ ಸೊಪ್ಪು – 6,780 ಮೈಕ್ರೋಗ್ರಾಂ
- ಬೆಣ್ಣೆ – 960 ಮೈಕ್ರೋಗ್ರಾಂ
- ತುಪ್ಪ – 600 ಮೈಕ್ರೋಗ್ರಾಂ
- ಸೋಯಾಬೀನ್ – 426 ಮೈಕ್ರೋಗ್ರಾಂ


ದಿನದ ಸುದ್ದಿ
Photo Gallery | ಚನ್ನಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಜಾನಪದ ಉತ್ಸವ-2025
ದಿನದ ಸುದ್ದಿ
ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಅಗತ್ಯ : ಪ್ರಾಚಾರ್ಯ ಎಂ.ನಾಸಿರುದ್ದೀನ್

ಸುದ್ದಿದಿನ,ಚಿತ್ರದುರ್ಗ: ಜಗತ್ತಿನಲ್ಲಿ ಭೂಮಿಯ ಮೇಲೆ ಸಕಲ ಜೀವರಾಶಿಗಳು ಬದುಕಲು ಅವಕಾಶವಿದ್ದು ಪರಿಸರ ಸಂರಕ್ಷಣೆ ಮಾಡುವುದರ ಮೂಲಕ ಪಕ್ಷಿ ಸಂಕುಲ ಸಂರಕ್ಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಡಯಟ್ ಪ್ರಾಚಾರ್ಯ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿ ಮಾತನಾಡಿದ ಅವರು ಪ್ರಸ್ತುತ ಸಂದರ್ಭದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು ಪಕ್ಷಿಗಳಿಗೆ ನೀರು ಮತ್ತು ಆಹಾರವನ್ನು ಪೂರೈಕೆ ಮಾಡುವ ಮೂಲಕ ಪಕ್ಷಿಗಳ ಬಗ್ಗೆ ಕಾಳಜಿಯೊಂದಿಗೆ ಸಂರಕ್ಷಿಸುವ ಭಾವನೆ ಬೆಳೆಸಿಕೊಳ್ಳಬೇಕು ಎಂದರು. ನಮ್ಮ ಮನೆಗಳ ಮೇಲ್ಚಾವಣಿಯಲ್ಲಿ ನೀರು, ಆಹಾರ ವ್ಯವಸ್ಥೆ ಮಾಡುವುದರಿಂದ ಪಕ್ಷಿಗಳನ್ನು ಸಂರಕ್ಷಿಸಲು ಅನುಕೂಲವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕ ಆರ್.ನಾಗರಾಜು ಕಚೇರಿ ಸಿಬ್ಬಂದಿ ವರ್ಗದವರು ಇದ್ದರು.
ಫೋಟೋ: ನಗರದ ಡಯಟ್ ಆವರಣದಲ್ಲಿರುವ 50 ಕ್ಕೂ ಹೆಚ್ಚು ಮರಗಳಲ್ಲಿ ಪ್ರಾಚಾರ್ಯ ಎಂ.ನಾಸಿರುದ್ದೀನ್ ಪಕ್ಷಿಗಳಿಗೆ ಆಹಾರ, ನೀರು ಪೂರೈಕೆ ವ್ಯವಸ್ಥೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಕವಿತೆ | ಮತ್ತಿನ ಕುಣಿಕೆ

- ಗುರು ಸುಳ್ಯ
ನಿದೆರೆಗೆ ದೂಡದ ಮದಿರೆಯ
ಅನುಭವ
ಸದಾ ಸಂಕಟಗಳ ಹೆರುವ
ಮತ್ತಿನ ಕುಣಿಕೆ
ನನ್ನ ಮಡಿಲ ಮೇಲೆ ನನ್ನದೇ
ಒಡಲು ಮಲಗಿರಲು
ಮಲಗಲು ಹಂಬಲಿಸುವ
ಮಗುವಿನ ಮನದೊಳಗೆ
ಚಾದರವಿಲ್ಲದೆ ಅಳುವ ರಸ್ತೆಯ
ಬದಿಗಳು ಚಲಿಸುತ್ತಿದೆ
ಅಪ್ಪನ ಕೈ ಹಿಡಿದು
ಅಮ್ಮನ ಕೆನ್ನೆಯ ಮೇಲೆ
ನಡೆದ ನೆನಪುಗಳು
ಆದ ಅಪಘಾತಗಳ ಆಳ
ಅಳೆಯುತ್ತಿವೆ…
ಶತ ಪ್ರಯತ್ನ ಪಟ್ಟರೂ
ತಪ್ಪದ ದಾರಿಗೆ
ಡಾಂಬರು ಹಾಕಿಸಿದವರ
ರಾಜಕೀಯವನ್ನು ಎದುರಿಸುತ್ತಲೇ
ಹಡೆಯಬೇಕಿದೆ ಮುಂದಿನ ದಾರಿಯ
ತಿರುವುಗಳಲ್ಲಿ ಕೈ ಹಿಡಿದು
ಮೆಲ್ಲನೆ ಕರೆದೊಯ್ಯುವ
ಕವಿತೆಗಳನ್ನು
ಎಲ್ಲೆಂದರಲ್ಲಿ ಬಿಟ್ಟು ಬಿಡಲು
ಸಾಧ್ಯವಾಗುತ್ತಿಲ್ಲ
ಉಸಿರ ನಾದದಲ್ಲಿ
ತೇಯ್ದ ಗಂಧ,
ಆಟ ನಿಲ್ಲಲು ಬಿಡದೆ
ಗಮಗಮಿಸುತ್ತಿದೆ..
ಪ್ರವಾಹದಲ್ಲಿ ಕೊಚ್ಚಿಹೋಗುವ
ಮುನ್ಸೂಚನೆಯಿಲ್ಲದೇ
ಮೊದಲ ಮಳೆಯಲ್ಲಿ ನೆನೆದು
ಚಪ್ಪಲಿಗೆ ಅಂಟಿದ ಮಣ್ಣಿನ ಘಮದಂತೆ.
(ಕವಿತೆ – ಗುರು ಸುಳ್ಯ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ6 days ago
ಸುದ್ದಿದಿನ.ಕಾಂ ಫಲಶೃತಿ | ಕಬ್ಬಿಣ ಬಿಸಾಡಿ ಓಡಿ ಹೋದ ಶಾಸಕರ ಆಪ್ತರು ; ಗೇಟ್ ಗೆ ಡಿಕ್ಕಿ, ಕ್ಯಾಮರಾಗಳಲ್ಲಿ ಸೆರೆ
-
ದಿನದ ಸುದ್ದಿ6 days ago
ವಕ್ಫ್ ತಿದ್ದುಪಡಿ ಕಾಯ್ದೆ- 2025 | ಇಂದು ಸುಪ್ರೀಂ ವಿಚಾರಣೆ
-
ರಾಜಕೀಯ4 days ago
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ 6ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಿ : ಡಿವೈಎಸ್ಪಿ ಸ್ಯಾಮ್ ವರ್ಗೀಸ್ ಎಚ್ಚರಿಕೆ
-
ದಿನದ ಸುದ್ದಿ5 days ago
ಅಂಬೇಡ್ಕರ್ ಸ್ಮರಣೆಯಿಂದ ದೇಶ ಪ್ರಗತಿಪರವಾಗಲು ಸಾಧ್ಯ : ಸಹಾಯಕ ಪ್ರಾಧ್ಯಾಪಕ ಷಣ್ಮುಖಪ್ಪ ಕೆ.ಎಚ್
-
ದಿನದ ಸುದ್ದಿ6 days ago
ಚನ್ನಗಿರಿ | ಮುಸ್ಲಿಂ ಮಹಿಳೆ ಮೇಲೆ ಹಲ್ಲೆ ; ಆರು ಮಂದಿ ಬಂಧನ
-
ದಿನದ ಸುದ್ದಿ4 days ago
ದಾವಣಗೆರೆ | ಮೊಬೈಲ್ ಕ್ಯಾಟೀನ್ ; ಸಹಾಯಧನಕ್ಕಾಗಿ ಅರ್ಜಿ ಆಹ್ವಾನ
-
ದಿನದ ಸುದ್ದಿ4 days ago
ದಾವಣಗೆರೆ | ಪ್ರಾಂಶುಪಾಲರ ಹುದ್ದೆಗೆ ಅರ್ಜಿ ಆಹ್ವಾನ