Connect with us

ದಿನದ ಸುದ್ದಿ

ಸಾವಿರ ಮಕ್ಕಳ ತಂದೆ ಈ ವೈದ್ಯ..!

Published

on

ಇದು ವಿಶ್ವ ಅಪ್ಪಂದಿರ ದಿನದ ವಿಶೇಷ

ಜೂನ್ 17 ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಯಾಕಾಗಿ ಆಚರಿಸುತ್ತಾರೆ ತಿಳಿಯದು. ಆದರೆ, ಎಲ್ಲರೂ ತಮ್ಮ ಬದುಕಿನ ಹೀರೋ ಆದ ಅಪ್ಪ ನೆನೆಯುತ್ತಾರೆ, ಅವರೊಂದಿಗೆ ಸಂಭ್ರಮಿಸುತ್ತಾರೆ. ಆದರೆ, ಜೀವನದಲ್ಲಿ ಮಕ್ಕಳ ಪಡೆಯದ ಈ ವೈದ್ಯ ಸಾವಿರಾರು ಮಕ್ಕಳಿಗೆ ತಂದೆಯಾಗಿ ಸೇವೆ ಮಾಡುತ್ತಿದ್ದಾರೆ.

ಅವರ್ಯಾರು ಬೇರೆಯವರಲ್ಲ, ಡಾ. ಸುರೇಶ್ ಹನಗವಾಡಿ. ಡಾ. ಸುರೇಶ್ ಅವರು ಹಿಮೋಫಿಲಿಯಾ ನ್ಯೂನತೆಗೆ ಒಳಗಾದವರು. ಚಿಕ್ಕ ವಯಸ್ಸಿನಲ್ಲಿ ತಮ್ಮ ಸೋದರ ಮಾವನ ಇದೇ ನ್ಯೂನತೆಯಿಂದ ಮೃತಪಟ್ಟರು. ಅವರು ಮರಣ ಹೊಂದುವ ಮೊದಲು ಒಂದು ಮಾತು ಹೇಳಿದರು. “ಸುರೇಶ್ ನೀನು ವೈದ್ಯನಾಗಬೇಕು, ನನ್ನಂತೆ ಬೇರೆಯವರು ಚಿಕಿತ್ಸೆ ಇಲ್ಲದೇ ನರಳುವಂತಾಗ ಬಾರದು, ದಾವಣಗೆರೆಯಲ್ಲಿ ಚಿಕಿತ್ಸೆ ಸಿಗುವಂತೆ ನೀನು ಕೆಲಸ ಮಾಡಬೇಕು” ಎಂದು ಹೇಳಿದ ನುಡಿಯೇ ಅವರನ್ನು ಉನ್ನತ ಸ್ಥಾನಕ್ಕೆ ಇಂದು ಕರೆತಂದಿದೆ.

ದಾವಣಗೆರೆಯ ಎಸ್‌ ನಿಜಲಿಂಗಪ್ಪ ಬಡಾವಣೆಯಲ್ಲಿನ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ

ಸ್ವತಃ ಡಾ. ಸುರೇಶ್ ಅವರು ವೈದ್ಯ ಪದವಿ ವ್ಯಾಸಂಗದ ವೇಳೆ ಬಾಧೆಯಿಂದಾಗಿ ಸಾಕಷ್ಟು ಬಾರಿ ಕಾಲೇಜಿಗೆ ಗೈರಾಗಿದ್ದಾರೆ. ತಮ್ಮ ನೋವನ್ನು ಇತರರೊಂದಿಗೆ ಹೇಳಿಕೊಳ್ಳಲು ಹಿಂಜರುತ್ತಿದ್ದ ಅವರು ಇಂದು ಸಾವಿರಾರು ಮಕ್ಕಳಿಗೆ ಮನೋಸ್ಥೈರ್ಯ ತುಂಬುತ್ತಿದ್ದಾರೆ. ತಮ್ಮ ಬಳಿಗೆ ಬಂದಂಥ ಹಿಮೋಫಿಲಿಯಾ ಬಾಧಿತ ಮಕ್ಕಳನ್ನು ತಮ್ಮ ಹೊಟ್ಟೆಯಲ್ಲೇ ಹುಟ್ಟಿದ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ.

ಹಿಮೋಫಿಲಿಯಾ ಬಾಧಿತರಿಗೆ ಸುಲಭ, ಸರಳವಾಗಿ ಚಿಕಿತ್ಸೆ ತೊಂದರೆ ಬೇಕೆಂಬ ಹಂಬಲದಿಂದ ತಮ್ಮ ನೋವನ್ನು ಮರೆತು ದೇಶ- ವಿದೇಶದ ದೊಡ್ಡ ಆಸ್ಪತ್ರೆಗಳಿಗೆ ಹೋಗಿ ಆಧುನಿಕ ಚಿಕಿತ್ಸಾ ವಿಧಾನಗಳನ್ನು ಕಲಿತು ಮಕ್ಕಳ ನೋವಿನಿಂದ ಗುಣಮುಖರಾಗುವಂತೆ ಮಾಡಲು ಶ್ರಮಿಸುತ್ತಿದ್ದಾರೆ.

ಆರಂಭದಲ್ಲಿ ಕೆಲವು ಮಂದಿ ಮಾತ್ರ ಸಂಪರ್ಕಕ್ಕೆ ಬಂದಿದ್ದರು. ಕ್ರಮೇಣ ನೂರು, ನೂರಿಂದ ಸಾವಿರ ಸಂಖ್ಯೆಯ ಹಿಮೋಫಿಲಿಯಾ ಬಾಧಿತರು ತಮ್ಮ ಬಳಿಗೆ ಬಂದಿದ್ದಾರೆ. ಅವರಿಗಾಗಿಯೇ ದಾವಣಗೆರೆಯ ಎಸ್‌ ನಿಜಲಿಂಗಪ್ಪ ಬಡಾವಣೆಯಲ್ಲಿ ಕರ್ನಾಟಕ ಹಿಮೋಫಿಲಿಯಾ ಸೊಸೈಟಿ ಆರಂಭಿಸಿದ್ದಾರೆ. ಅನೇಕ ದಾನಿಗಳು, ಸಮಾನ ಮನಸ್ಕರರು ಅವರ ಬೆಂಬಲವಾಗಿ ನಿಂತಿದ್ದಾರೆ. ಅವರ ಧರ್ಮಪತ್ನಿ ಮೀರಾ ಹನಗವಾಡಿ ಅವರೂ ಸಹ ಸಾಥ್ ನೀಡುತ್ತಿದ್ದಾರೆ. ಸಾವಿರಾರು ಮಕ್ಕಳ ಆರೋಗ್ಯಕ್ಕಾಗಿ ತಮ್ಮ ಬದುಕನ್ನು ಮೀಸಲಿಟ್ಟ ಈ ವೈದ್ಯನಿಗೆ ತಂದೆಯ ಸ್ಥಾನ ಕೂಡುವುದೇ ಹೆಮ್ಮೆಯ ಸಂಗತಿ.

 ವಿ ಲವ್ ಯೂ ಸರ್…

ಸುದ್ದಿದಿನ|ವಾಟ್ಸಾಪ್|9986715401

ದಿನದ ಸುದ್ದಿ

ಎಸ್.ಆರ್.ಶೀತಲ್‌ಗೆ ಮೂರು ಚಿನ್ನದ ಪದಕಗಳು

Published

on

ಸುದ್ದಿದಿನ,ದಾವಣಗೆರೆ:ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತರಾಷ್ಟ್ರೀಯ ಕನ್ವೆಷನ್ ಸೆಂಟರ್‌ನಲ್ಲಿ ಮೇ 15ರಂದು ನಡೆದ 59ನೇ ಘಟಿಕೋತ್ಸವದಲ್ಲಿ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಬಿದರಕೆರೆ ಗ್ರಾಮದ ಎಸ್.ಬಿ.ರುದ್ರಕುಮಾರ್ ಇವರ ಪುತ್ರಿಯಾದ ಎಸ್.ಆರ್. ಶೀತಲ್ ಮೂರು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

2023-24ನೇ ಸಾಲಿನಲ್ಲಿ 10,000 ಅಂಕಗಳಿಗೆ ಸರಾಸರಿ 9.104 ಅಂಕಗಳನ್ನು ಗಳಿಸಿ ಪ್ರಥಮ ಶ್ರೇಯಾಂಕಿತರಾಗಿರುವ ಎಸ್.ಆರ್. ಶೀತಲ್ ಅವರು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದಿಂದ ಕೊಡ ಮಾಡುವ ಕೃಷಿ ವಿಶ್ವವಿದ್ಯಾನಿಲಯದ ಚಿನ್ನದ ಪದಕ, ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ ಚಿನ್ನದ ಪದಕ ಹಾಗೂ ಡಾ.ಆರ್.ರಾಮಯ್ಯ ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಅಂಕಣ

ಆರೋಗ್ಯಕರ ಡಯಟ್ ಮಾಡಲು ಈ‌ ಟಿಪ್ಸ್ ಗಳನ್ನು ಅನುಸರಿಸಿ

Published

on

ಆರೋಗ್ಯಕರ ಡಯಟ್ ಮಾಡಲು ಈ‌ ಟಿಪ್ಸ್ ಗಳನ್ನು ಅನುಸರಿಸಿ

1.ಪೌಷ್ಟಿಕತೆಯ ಸಮತೋಲನ

ಆರೋಗ್ಯಕರ ಡಯಟ್‌ನಲ್ಲಿ ಮ್ಯಾಕ್ರೋನ್ಯೂಟ್ರಿಯೆಂಟ್‌ಗಳು (ಕಾರ್ಬೋಹೈಡ್ರೇಟ್‌ಗಳು, ಪ್ರೋಟೀನ್‌ಗಳು, ಕೊಬ್ಬು) ಮತ್ತು ಮೈಕ್ರೋನ್ಯೂಟ್ರಿಯೆಂಟ್‌ಗಳು (ವಿಟಮಿನ್‌ಗಳು, ಖನಿಜಗಳು) ಸಮತೋಲನವಿರಬೇಕು. ಉದಾಹರಣೆಗೆ, ಭಾರತೀಯ ಆಹಾರದಲ್ಲಿ ರಾಗಿ, ಜೋಳ, ಕ್ವಿನೋವಾ, ದ್ವಿದಳ ಧಾನ್ಯಗಳು, ಮತ್ತು ಸೊಪ್ಪುಗಳು ಸಮತೋಲಿತ ಆಹಾರವನ್ನು ಒದಗಿಸುತ್ತವೆ.

ಗ್ಲೈಸೆಮಿಕ್ ಇಂಡೆಕ್ಸ್ (GI) : ಕಡಿಮೆ GI ಆಹಾರಗಳಾದ ಓಟ್ಸ್, ಕಂದು ಅಕ್ಕಿ, ಮತ್ತು ಕಾಳುಗಳು ರಕ್ತದ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತವೆ, ಇದು ಡಯಾಬಿಟೀಸ್ ನಿರ್ವಹಣೆಗೆ ಸಹಾಯಕವಾಗಿದೆ.

2. ಸ್ಥಳೀಯ ಮತ್ತು ಋತುಮಾನದ ಆಹಾರಗಳ ಆಯ್ಕೆ

ಕರ್ನಾಟಕದಂತಹ ಪ್ರದೇಶಗಳಲ್ಲಿ, ರಾಗಿ ರೊಟ್ಟಿ, ತರಕಾರಿ ಸಾಂಬಾರ್, ಕೋಸಂಬರಿ, ಮತ್ತು ಒಣಗಿದ ಹಣ್ಣುಗಳು (ಬಾದಾಮಿ, ಗೋಡಂಬಿ) ಸ್ಥಳೀಯವಾಗಿ ಲಭ್ಯವಿರುವ ಆರೋಗ್ಯಕರ ಆಯ್ಕೆಗಳಾಗಿವೆ. ಇವು ಪರಿಸರ ಸ್ನೇಹಿಯಾಗಿರುತ್ತವೆ ಮತ್ತು ತಾಜಾತನವನ್ನು ಖಾತ್ರಿಪಡಿಸುತ್ತವೆ.

ಋತುಮಾನದ ಹಣ್ಣುಗಳು : ಮಾವಿನಹಣ್ಣು, ಜಾಮೂನ್, ದಾಳಿಂಬೆ ಇತ್ಯಾದಿಗಳು ವಿಟಮಿನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ.

3. ಗಟ್ ಹೆಲ್ತ್ (ಕರುಳಿನ ಆರೋಗ್ಯ)

ಆರೋಗ್ಯಕರ ಕರುಳು ಒಟ್ಟಾರೆ ಆರೋಗ್ಯಕ್ಕೆ ಮುಖ್ಯವಾಗಿದೆ. ಮೊಸರು, ಮಜ್ಜಿಗೆ, ಒಣಗಿದ ಹಣ್ಣುಗಳು, ಮತ್ತು ಫೈಬರ್ ಶ್ರೀಮಂತ ಆಹಾರಗಳಾದ ತರಕಾರಿಗಳು ಮತ್ತು ಧಾನ್ಯಗಳು ಪ್ರೋಬಯಾಟಿಕ್‌ಗಳು ಮತ್ತು ಪ್ರಿಬಯಾಟಿಕ್‌ಗಳನ್ನು ಒದಗಿಸುತ್ತವೆ. ಉದಾಹರಣೆ: ರಾಗಿ ಮತ್ತು ತರಕಾರಿಗಳಿಂದ ತಯಾರಿಸಿದ ಖಿಚಡಿ ಕರುಳಿನ ಆರೋಗ್ಯಕ್ಕೆ ಒಳ್ಳೆಯದು.

4. ಸಂಸ್ಕರಿತ ಆಹಾರದಿಂದ ದೂರ

ಸಂಸ್ಕರಿತ ಆಹಾರಗಳು (ಚಿಪ್ಸ್, ಸಕ್ಕರೆಯಿಂದ ಕೂಡಿದ ಪಾನೀಯಗಳು, ಫಾಸ್ಟ್ ಫುಡ್) ದೀರ್ಘಕಾಲೀನವಾಗಿ ಒಬೇಸಿಟಿ, ಡಯಾಬಿಟೀಸ್, ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗಬಹುದು. ಇವುಗಳ ಬದಲಿಗೆ ತಾಜಾ, ಗೃಹ ತಯಾರಿಕೆಯ ಆಹಾರವನ್ನು ಆದ್ಯತೆ ನೀಡಿ.

5. ವೈಯಕ್ತಿಕಗೊಳಿಸಿದ ಡಯಟ್ 

ವಯಸ್ಸು, ಲಿಂಗ, ದೈಹಿಕ ಚಟುವಟಿಕೆ, ಮತ್ತು ಆರೋಗ್ಯ ಸ್ಥಿತಿಗೆ ತಕ್ಕಂತೆ ಡಯಟ್ ರೂಪಿಸಿ. ಉದಾಹರಣೆಗೆ, ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳು ಬೇಕಾಗುತ್ತವೆ, ಆದರೆ ವಯಸ್ಸಾದವರಿಗೆ ಕಡಿಮೆ ಕ್ಯಾಲೋರಿ ಆದರೆ ವಿಟಮಿನ್‌ಗಳ ಶ್ರೀಮಂತ ಆಹಾರ ಸೂಕ್ತವಾಗಿರುತ್ತದೆ.

6. ಹೈಡ್ರೇಷನ್ ಮತ್ತು ಜೀವನಶೈಲಿ

ದಿನಕ್ಕೆ 2-3 ಲೀಟರ್ ನೀರು ಕುಡಿಯಿರಿ. ತೆಂಗಿನೀರು, ಮಜ್ಜಿಗೆ, ಅಥವಾ ಗಿಡಮೂಲಿಕೆ ಚಹಾವನ್ನು ಸೇವಿಸಿ. ಆರೋಗ್ಯಕರ ಡಯಟ್‌ನ ಜೊತೆಗೆ, 30 ನಿಮಿಷಗಳ ದೈಹಿಕ ಚಟುವಟಿಕೆ (ಯೋಗ, ವಾಕಿಂಗ್, ಅಥವಾ ಜಿಮ್) ಮತ್ತು 7-8 ಗಂಟೆಗಳ ನಿದ್ರೆಯನ್ನು ಸಂಯೋಜಿಸಿ.

ನಿರ್ದಿಷ್ಟ ಆರೋಗ್ಯಕರ ಡಯಟ್ ಯೋಜನೆ

ಬೆಳಗಿನ ಉಪಾಹಾರ:ರಾಗಿ ದೋಸೆ + ಚಟ್ನಿ, ಅಥವಾ ಓಟ್ಸ್ ಉಪ್ಮಾ + ತರಕಾರಿಗಳು. ಮಧ್ಯಾಹ್ನದ ತಿಂಡಿ: ತೆಂಗಿನೀರು ಅಥವಾ ಮೊಸರು + ಒಂದು ಹಣ್ಣು (ಸೀಬೆ, ಬಾಳೆಹಣ್ಣು).
ಮಧ್ಯಾಹ್ನದ ಊಟ: ಕಂದು ಅಕ್ಕಿ, ಸಾಂಬಾರ್, ಪಾಲಕ್ ಸೊಪ್ಪಿನ ಪಲ್ಯ, ಮತ್ತು ಕೋಸಂಬರಿ. ಸಂಜೆಯ ತಿಂಡಿ: ಬೇಯಿಸಿದ ಕಾಳುಗಳು (ಕಡಲೆಕಾಯಿ, ಕಡಲೆ) ಅಥವಾ ಒಣಗಿದ ಹಣ್ಣುಗಳು.ರಾತ್ರಿಯ ಊಟ: ರಾಗಿ ರೊಟ್ಟಿ + ತರಕಾರಿ ಕೂಟು, ಅಥವಾ ಜೋಳದ ರೊಟ್ಟಿ + ಮೊಸರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಮೇ 22 | ಇಂದಿನ ಅಡಿಕೆ ದರ

Published

on

ಇಂದು, ಮೇ 22, 2025 ರಂದು ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ದರಗಳು ಹೀಗಿವೆ (ಪ್ರತಿ ಕ್ವಿಂಟಾಲ್‌ಗೆ ರೂಪಾಯಿಗಳಲ್ಲಿ):

ಶಿವಮೊಗ್ಗ ಮಾರುಕಟ್ಟೆ:

ರಾಶಿ: ₹48,169 (ಕನಿಷ್ಠ) – ₹58,099 (ಗರಿಷ್ಠ), ಮೋಡಲ್ ಬೆಲೆ: ₹55,869
ಸರಕು: ₹60,399 (ಕನಿಷ್ಠ) – ₹92,510 (ಗರಿಷ್ಠ), ಮೋಡಲ್ ಬೆಲೆ: ₹77,009
ಬೆಟ್ಟೆ: ₹51,319 (ಕನಿಷ್ಠ) – ₹58,219 (ಗರಿಷ್ಠ), ಮೋಡಲ್ ಬೆಲೆ: ₹57,989
ಗೊರಬಲು: ₹15,499 (ಕನಿಷ್ಠ) – ₹30,699 (ಗರಿಷ್ಠ), ಮೋಡಲ್ ಬೆಲೆ: ₹28,429

ಚನ್ನಗಿರಿ ಮಾರುಕಟ್ಟೆ (ದಾವಣಗೆರೆ):

ರಾಶಿ: ₹41,199 (ಕನಿಷ್ಠ) – ₹59,312 (ಗರಿಷ್ಠ), ಮೋಡಲ್ ಬೆಲೆ: ₹57,767

ಸಾಗರ ಮಾರುಕಟ್ಟೆ (ಶಿವಮೊಗ್ಗ):

ಚಾಲಿ: ₹35,699 (ಕನಿಷ್ಠ) – ₹37,141 (ಗರಿಷ್ಠ), ಮೋಡಲ್ ಬೆಲೆ: ₹36,699
ಬಿಳೆಗೋಟು: ₹21,611 (ಕನಿಷ್ಠ) – ₹25,587 (ಗರಿಷ್ಠ), ಮೋಡಲ್ ಬೆಲೆ: ₹24,111
ಕೆಂಪುಗೋಟು: ₹17,599 (ಕನಿಷ್ಠ) – ₹27,499 (ಗರಿಷ್ಠ), ಮೋಡಲ್ ಬೆಲೆ: ₹24,919
ರಾಶಿ: ₹22,899 (ಕನಿಷ್ಠ) – ₹57,470 (ಗರಿಷ್ಠ), ಮೋಡಲ್ ಬೆಲೆ: ₹56,621

ಕುಮಟಾ ಮಾರುಕಟ್ಟೆ (ಉತ್ತರ ಕನ್ನಡ):

ಚಿಪ್ಪು: ₹11,199 (ಕನಿಷ್ಠ) – ₹26,919 (ಗರಿಷ್ಠ), ಮೋಡಲ್ ಬೆಲೆ: ₹24,549
ಕೋಕಾ: ₹6,899 (ಕನಿಷ್ಠ) – ₹22,189 (ಗರಿಷ್ಠ), ಮೋಡಲ್ ಬೆಲೆ: ₹20,429
ಹಣ್ಣು: ₹32,589 (ಕನಿಷ್ಠ) – ₹42,500 (ಗರಿಷ್ಠ), ಮೋಡಲ್ ಬೆಲೆ: ₹39,729

ಚಿತ್ರದುರ್ಗ ಮಾರುಕಟ್ಟೆ:

ರಾಶಿ: ₹52,449 (ಕನಿಷ್ಠ) – ₹52,899 (ಗರಿಷ್ಠ), ಮೋಡಲ್ ಬೆಲೆ: ₹52,679

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending