ದಿನದ ಸುದ್ದಿ
ಅಮೆರಿಕಾಕ್ಕೆ ‘ಹುವಾವೇ’ ಬಗ್ಗೆ ಯಾಕಿಷ್ಟು ಭಯ..?
ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ.
ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ. ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ
ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ “ಹುವಾವೇ” ಎಂಬ ಟೆಲಿಕಾಂ ಕಂಪನಿಯು 5ಜಿ ನೆಟ್ವರ್ಕ್ ಕ್ಷೇತ್ರದಲ್ಲಿ ಪ್ರಮುಖ ಕಂಫನಿಯಾಗಿ ಹೊಮ್ಮಿದೆ. ಹುವಾವೇಯ 5ಜಿ ನೆಟ್ವರ್ಕ್ ಉಪಕರಣಗಳ ಜಾಗತಿಕ ಮಾರುಕಟ್ಟೆಗೆ ವಿಸ್ತರಣೆಯನ್ನು ನಿಬರ್ಂಧಿಸಲು ಅಮೆರಿಕಾವು ಅನೇಕ ಉಗ್ರ ಕ್ರಮಗಳನ್ನು ಇತ್ತೀಚೆಗೆ ಕೈಗೊಂಡಿದೆ. 5ಜಿ ನೆಟ್ವರ್ಕ್ ಉಪಕರಣಗಳ ತಯಾರಿಗೆ ಅಗತ್ಯವಾದ ಪ್ರಮುಖವಾದ ಬಿಡಿಭಾಗಗಳು ಮತ್ತು ಸಾಪ್ಟ್ವೇರ್ ಗಳನ್ನು ನಿರಾಕರಿಸುವ ಪ್ರಯತ್ನಗಳನ್ನು ಮಾಡುವ ಮೂಲಕ ಹುವಾವೇಯ ಮುಖ್ಯ ವ್ಯವಹಾರವನ್ನು ಪರಿಣಾಮಕಾರಿಯಾಗಿ ದುರ್ಬಲಗೊಳಿಸಲು ಅಮೆರಿಕಾ ಕಾರ್ಯ ಪ್ರವೃತ್ತವಾಗಿದೆ. ಹಿಂದೆನೂ ಹುವಾವೇ ವಿರುದ್ಧ ಹಲವು ಕ್ರಮಗಳನ್ನು ಕೈಗೊಂಡಿತ್ತು. ಅವು ಪ್ರಮುಖವಾಗಿ ವಿವಿಧ ದೇಶಗಳಲ್ಲಿ ಹುವಾವೇ ಪ್ರವೇಶವನ್ನು ನಿಬರ್ಂಧಿಸುವ ಗುರಿಯನ್ನು ಹೊಂದಿದ್ದವು. ಹುವಾವೇ ಕಂಪನಿಯ ವಿರುದ್ದ ಅಮೆರಿಕದ ಕ್ರಮಗಳಿಂದ ಚೀನಾದ ಮೇಲೆ ಅದು ತಾಂತ್ರಿಕ ಸಮರವನ್ನೇ ಸಾರಿದಂತಾಗಿದೆ.
ಹುವಾವೇ ವಿಶ್ವದಲ್ಲೇ ಅತಿ ದೊಡ್ಡ (ನಂಬರ್ 1) ಟೆಲಿಕಾಂ ಉಪಕರಣಗಳ ತಯಾರಕ ಮತ್ತು ಮೊಬೈಲ್ ಎರಡನೆಯ ಅತಿ ದೊಡ್ಡ ಮೊಬೈಲ್ ಪೋನ್ ಗಳ ತಯಾರಕ ಸಂಸ್ಥೆಯಾಗಿದೆ. ಇದು 5ಜಿ ತಂತ್ರಜ್ಞಾನದಲ್ಲಿ ಜಾಗತಿಕ ನಾಯಕ ಮತ್ತು ಟೆಕ್ ವಲಯದಲ್ಲಿ ಅಮೆರಿಕಾದ ಅಧಿಪತ್ಯಕ್ಕೆ ಗಮನಾರ್ಹ ಸವಾಲನ್ನು ಒಡ್ಡುವ ಸಂಸ್ಥೆಯಾಗಿ ಬೆಳೆದಿದೆ. ಆದ್ದರಿಂದಲೇ, ಇದನ್ನು ಅಮೆರಿಕಾಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಏಕೆಂದರೆ, 5 ಜಿ ನೆಟ್ವರ್ಕ್ ಜಗತ್ತಿನ ಜನಜೀವನದ ಪ್ರತಿಯೊಂದು ವಿಚಾರ ಮತ್ತು ಅಂಶಗಳ ಮೇಲೂ ತನ್ನ ಅಪಾರ ಪ್ರಭಾವ ಬೀರಲಿದೆ. ಆದ್ದರಿಂದ ಈ ಕ್ಷೇತ್ರದಲ್ಲಿ ತನ್ನ ಪಾರಮ್ಯವನ್ನು ಸ್ಫಾಪಿಸುವುದು ಅದರ ಸಾಮ್ರಾಜ್ಯಶಾಹಿ ಕಾರ್ಯಸೂಚಿಯ ಅಗತ್ಯದ ಭಾಗವಾಗಿದೆ. ಅದಕ್ಕೆ ಹುವಾವೇ ಸಂಸ್ಥೆಯು ಈ ಕ್ಷೇತ್ರದಲ್ಲಿ ಅಡ್ಡವಾಗಿ ನಿಲ್ಲುತ್ತದೆ. ಹೀಗಾಗಿ ಚೀನಾದ ಈ ಹುವಾವೇ ಟೆಕ್ ದೈತ್ಯ ಸಂಸ್ಥೆಯ ಅಭಿವೃದ್ಧಿಯನ್ನು ಅಮೆರಿಕಾ ಎಂದಿಗೂ ಸಹಿಸುವುದಿಲ್ಲ. ಇದನ್ನು ನೆಲ ಸಮ ಮಾಡಲೇ ಬೇಕೆಂದು ಎಲ್ಲಾ ತರದ ಒಳಸಂಚುಗಳ ಸಮರವನ್ನು ನಡೆಸಲು ಆರಂಭಿಸಿದೆ.
ಪ್ರಮುಖ ವಾಗಿ ಹುವಾವೇ ವಿರುದ್ದ ಎರಡು ರೀತಿಯಲ್ಲಿ ತನ್ನ ಆಕ್ರಮಣವನ್ನು ನಡೆಸಲು ಸಜ್ಜಾಗಿದೆ. ಇತ್ತೀಚೆಗೆ, ಅಮೆರಿಕಾದ ವಾಣಿಜ್ಯ ಇಲಾಖೆಯು ಎರಡು ಬಗೆಯ ಉಗ್ರವಾದ ನಿಬರ್ಂಧ ಕ್ರಮಗಳನ್ನು ಹುವಾವೇ ವಿರುದ್ದ ಘೋಷಿಸಿದೆ.
ಅದರಲ್ಲಿ, ಮೊದಲನೆಯದು, ಹುವಾವೇ ತಯಾರು ಮಾಡುವ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳಿಗೆ, ಯುಎಸ್ ನ ಟೆಕ್ ಸಂಸ್ಥೆ ಗಳು ಸರಬರಾಜು ಮಾಡುವ ಎಲ್ಲಾ ಬಗೆಯ ಬಿಡಿ ಭಾಗಗಳನ್ನು (ಮೂಲ ‘ಚಿಪ್ ಸೆಟ್’ ಗಳು ಮತ್ತಿತರ ಹಾರ್ಡ್ವೇರ್, ಸಾಫ್ಟ್ ವೇರ್) ತಡೆಗಟ್ಟುವುದು. ಎರಡನೆಯದು, ಕೆಲವು ದಿನಗಳ ಹಿಂದೆಯಷ್ಟೇ, ಆಂಡ್ರಾಯ್ಡ್ ಸಾಫ್ಟ್ವೇರ್ ಮತ್ತು ಇದಕ್ಕೆ ಸಂಬಂಧಿಸಿದ ಮತ್ತಿತರ ಗೂಗಲ್ ಸೇವೆಗಳನ್ನು ಹುವಾವೇ ಮೊಬೈಲುಗಳಲ್ಲಿ ಬಳಸಲು ನಿಬರ್ಂಧಗಳನ್ನು ಹೇರುವ ಘೋಷಣೆಯನ್ನು ಗೂಗಲ್ ಮೂಲಕ ಮಾಡಿರುವುದು. ಇದರಿಂದಾಗಿ, ಆಂಡ್ರಾಯ್ಡ್ ಮತ್ತು ಇತರ ಗೂಗಲ್ ಸೇವೆಗಳಿಗೆ ಪರ್ಯಾಯ ಪರಿಸರ ವ್ಯವಸ್ಥೆಯನ್ನು ಹುವಾವೇ ಮಾಡಿಕೊಳ್ಳಬೇಕಾಗಿದೆ. ಈ ಎರಡೂ ಕ್ರಮಗಳು ಹುವಾವೇ ಮೊಬೈಲ್ ಗಳು ಮತ್ತು 5ಜಿ ನೆಟ್ ವರ್ಕ್ ಉಪಕರಣಗಳ ಉತ್ಪಾದನೆ, ಪೂರೈಕೆ ಮತ್ತು ಮಾರುಕಟ್ಟೆ ವಿಸ್ತರಣೆಗೆ ತೀವ್ರ ಸವಾಲೊಡ್ಡಲಿವೆ.
ಕಳೆದ ಡಿಸೆಂಬರ್ ನಲ್ಲಿ ಹುವಾವೇ ಸಿ.ಎಫ್.ಒ. ಮೆಂಗ್ ವನ್ಝೌ ರನ್ನು ಯುಎಸ್ ಅಧಿಕಾರಿಗಳ ಆಜ್ಞೆಯ ಮೇರೆಗೆ ಕೆನಡಾದಲ್ಲಿ ಬಂಧಿಸಲಾಗಿತ್ತು. ಇರಾನ್ ಮೇಲೆ ಇತ್ತೀಚೆಗೆ ಯು.ಎಸ್. ತೆಗೆದು ಕೊಂಡ ನಿಬರ್ಂಧಗಳನ್ನು ಪಾಲಿಸದಿರುವ ಹಿನ್ನೆಲೆಯಲ್ಲಿ ಚೀನಾದ ಮೇಲೆ ಒತ್ತಡ ಹೇರಲು ಅಮೆರಿಕಾ ಕೈಗೊಂಡಿರುವ ಕ್ರಮ ಇದಾಗಿರಬಹುದೆಂದು ಅನೇಕ ವಿಶ್ಲೇಷಕರ ಅಭಿಪ್ರಾಯವಾಗಿತ್ತು.
ಆದಾಗ್ಯೂ, ಹುವಾವೇ ಮತ್ತು ಚೀನಾದ ಇನ್ನಿತರೆ ಟೆಲಿಕಾಂ ಕಂಪನಿಗಳ ವಿರುದ್ದ ಯುಎಸ್ ನ ನಿಬರ್ಂಧಗಳು, ಡೊನಾಲ್ಡ್ ಟ್ರಂಪ್ ನ ಇರಾನ್ ಮೇಲಿನ ನ್ಯೂಕ್ಲಿಯರ್ ಒಪ್ಪಂದ ದಿಂದ ಹೊರ ಬರುವ ನಿರ್ಧಾರದ ಬಹಳ ಮೊದಲೇ ಆರಂಭವಾಗಿವೆ. ಅನೇಕ ವರ್ಷಗಳಿಂದ, ಟೆಲಿಕಾಂ ಕ್ಷೇತ್ರದಲ್ಲಿ, ವಿಶೇಷವಾಗಿ 5ಜಿ ನೆಟ್ವರ್ಕ್ ತಂತ್ರಜ್ಞಾನದಲ್ಲಿ, ಹುವಾವೇ ಯುಎಸ್ ಕಂಪನಿಗಳಿಗಿಂತ ಮುಂದೆ ಇದ್ದವು. ಈ ಹಿಂದೆ, ಅಮೆರಿಕದ ಒತ್ತಡಕ್ಕೆ ಮಣಿದು, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಹುವಾವೇ ಯನ್ನು 5ಜಿ ನೆಟ್ವರ್ಕ್ ಉಪಕರಣಗಳ ಪ್ರವೇಶವನ್ನು ನಿಬರ್ಂಧಿಸಲಾಗಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬೇಕು. ಆದಾಗ್ಯೂ, ಇದೀಗ ಚೀನಾದ ಈ ದೈತ್ಯ ಹುವಾವೇ ಯ ತಂತ್ರಜ್ಞಾನ ಜಗತ್ತಿನಲ್ಲಿ ಹರಡುತ್ತಿರುವುದು ಅಮೆರಿಕಾದ ಆಂತಕಕ್ಕೆ ಮೂಲ ಕಾರಣವಾಗಿದೆ.
ಹುವಾವೇ ತಂತ್ರಜ್ಞಾನವು “ಭದ್ರತಾ ದೃಷ್ಟಿಯಿಂದ ಅಪಾಯಕಾರಿ” ಎಂದು ಯುಎಸ್ ವಾದಿಸುತ್ತದೆ.. ಆದರೆ ಸಿಸ್ಕೊ ನಂತಹ ಯು.ಎಸ್. ಕಂಪನಿಗಳು ತಯಾರಿಸಿದ ನೆಟ್ವರ್ಕ್ ಉಪಕರಣಗಳ ಹಿಂಬಾಗಿಲಿನಿಂದ, ನಿರಂತರವಾಗಿ ಅಮೆರಿಕ ಗುಪ್ತ ಮಾಹಿತಿಗಳನ್ನು ಪಡೆಯುತ್ತಿತ್ತು ಎಂದು ಎಡ್ವರ್ಡ್ ಸ್ನೋಡೆನ್ನ್ ಬಯಲು ಮಾಡಿದ್ದು ಇಲ್ಲಿ ನೆನಪಿಸಿಕೊಂಡರೆ, ಅಮೆರಿಕ ಈ ಬಗ್ಗೆ ದೂರುವುದು ಜೋಕ್ ಎನ್ನಬಹುದು.
ಹುವಾವೇ ಪ್ರಾಬಲ್ಯವನ್ನು ತಡೆಹಿಡಿಯುವ ಯುಎಸ್ ಯೋಜಿಸಿರುವ ನಿಬರ್ಂಧಗಳಿಂದ, ಅದರ ಚಿಪ್ ತಯಾರಿಕಾ ಮತ್ತು ಇತರ ಕಂಪನಿಗಳಿಗೆ ವಾರ್ಷಿಕವಾಗಿ ರಫ್ತು ಆದಾಯದಲ್ಲಿ 11 ಬಿಲಿಯನ್ ಡಾಲರ್ ನಷ್ಟು ನಷ್ಟ ಉಂಟಾಗುತ್ತದೆ ಎಂದು ಅಂದಾಜಿಸಲಾಗಿದೆ.
ಇದು ಪ್ರಪಂಚದಾದ್ಯಂತ 5 ಜಿ ನೆಟ್ ವರ್ಕ್ ನ ತಂತ್ರಜ್ಞಾ£ದ ಒಟ್ಟಾರೆ ಅಭಿವೃದ್ಧಿಯ ಮೇಲೆ ಅಗಾಧವಾದ ದುಷ್ಪರಿಣಾಮ ಬೀರುತ್ತದೆ. ಆದಾಗ್ಯೂ, ತನ್ನ ಮಿತ್ರ ರಾಷ್ಟಗಳ ಮಾರುಕಟ್ಟೆಗಳಲ್ಲಿ, ಪ್ರಮುಖವಾಗಿ ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳಲ್ಲಿ, ಹುವಾವೇಯ ಉತ್ಕøಷ್ಟ 5ಜಿ ತಂತ್ರಜ್ಞಾನದ ಬೇರೂರುವ ಸಾದ್ಯತೆಯ ಬಗ್ಗೆ ಯುಎಸ್ ಹೆಚ್ಚು ಚಿಂತಿತ ಗೊಂಡಿದೆ. ಪಶ್ಚಿಮ ರಾಷ್ಟ್ರಗಳು ತಮ್ಮತಮ್ಮ ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳಲು, ಬಡ ರಾಷ್ಟಗಳಿಗೆ ಮಾತ್ರ ಬೋಧಿಸುವ ತಮ್ಮ ಮುಕ್ತ ವ್ಯಾಪಾರ ನಿಯಮಗಳನ್ನು ಉಲ್ಲಂಘನೆ ಮಾಡಲು ಹಿಂಜರಿಯುವುದಿಲ್ಲ ಎಂಬುದನ್ನು ಮತ್ತೆ ಇಲ್ಲಿ ಯುಎಸ್ ಸಾಬೀತು ಪಡಿಸುತ್ತಿದೆ.
ಆದರೆ, ಇತ್ತೀಚಿನ ಗೂಗಲ್ ಕ್ರಮಗಳಿಗೂ “ರಾಷ್ಟ್ರೀಯ ಭದ್ರತಾ” ಅಂಶಗಳಿಗೂ ಯಾವುದೇ ಸಂಬಂಧವಿರುವುದಿಲ್ಲ. ಆದರೆ, ಹುವಾವೇ ಸಂಸ್ಥೆಯಲ್ಲಿ ತಯಾರಿಸಿದ ಮೊಬೈಲ್ ಪೋನ್ಗಳನ್ನು ಇನ್ನಿತರೆ ದೇಶಗಳಲ್ಲಿ ದುರ್ಬಲಗೊಳಿಸುವ ಸಲುವಾಗಿಯೇ, ಗೂಗಲ್ ಕ್ರಮಗಳ ಮೂಲಕ ಯುಎಸ್ ಪ್ರಯತ್ನ ಮಾಡುತ್ತಿದೆ.
ಗೂಗಲ್ ಕ್ರಮಗಳು ಎಂದರೆ, ಹುವಾವೇ ಪೋನ್ ಗಳನ್ನು ಖರೀದಿಸುವ ವರು ಮತ್ತು ಪ್ರಸ್ತುತ ಮಾಲೀಕರು ಸಹಾ, ಗೂಗಲ್ ನ ಉತ್ಪನ್ನಗಳು ಮತ್ತು ಭದ್ರತಾ ನವೀಕರಣಗಳಿಗೆ ಪ್ರವೇಶವನ್ನು ನಿರಾಕರಿಸಲು ಅಮೆರಿಕಾ ಒತ್ತಾಯ ಹೇರುತ್ತಿದೆ. ಇದರಿಂದಾಗಿ ಆಂಡ್ರಾಯ್ಡ್ ಓಎಸ್, ಜಿ-ಮೇಲ್ ಮತ್ತು ಗೂಗಲ್ ಸ್ಟೋರ್ ನಂತಹ ಉತ್ಪನ್ನ ಗಳ ಮೂಲಕ, ಪ್ರಪಂಚದಾದ್ಯಂತ ಇರುವ ಗೂಗಲ್ ನ ಲಕ್ಷಾಂತರ ಬಳಕೆದಾರ ಹೊಂದಿರುವ ವ್ಯಾಪ್ತಿ ಮತ್ತು ಈ ಹಂತದ ಬೆಳವಣಿಗೆಯಲ್ಲಿ ಹುವಾವೇ ಮೊಬೈಲ್ ಪೋನ್ ವ್ಯವಹಾರಕ್ಕೆ ಭಾರಿ ಹಿನ್ನಡೆಯಾಗುವಂತೆ ಮಾಡುವುದು ಅದರ ಉದ್ದೇಶ.
ಹುವಾವೇ ಸವಾಲುಗಳನ್ನು ಎದುರಿಸಲು ಸಿದ್ದವಾಗಿದೆ. ಕಂಪನಿಯ ಸಂಸ್ಥಾಪಕ ರೆನ್ ಝೆಂಗ್ಛೀ ಯವರು ನಿಬರ್ಂಧಗಳು ಕಂಪನಿಯ ಮುಖ್ಯ ವ್ಯವಹಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂಬ ವಿಶ್ವಾಸ ಹೊಂದಿದ್ದಾರೆ. ನಮ್ಮ ಉತ್ಪನ್ನಗಳನ್ನು ಮತ್ತು ಸೇವೆಗಳನ್ನು ಮುಂದುವರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚಿಪ್ ಸೆಟ್ ಗಳನ್ಜು ಈಗಾಗಲೇ ಸಾಕಷ್ಟು ಸಂಗ್ರಹಿಸಲಾಗಿದೆ. ಹಾಗೆಯೇ, ಗೂಗಲ್ ಪರಿಸರ ವ್ಯವಸ್ಥೆಗೆ ಪರ್ಯಾಯ ಉತ್ಪನ್ನ ಗಳನ್ನು ಅಭಿವೃದ್ಧಿಪಡಿಸುವ ಯೋಜನೆಯಲ್ಲಿ ಹೊಸ ಹೂಡಿಕೆಗಳನ್ನು ಮಾಡಲಾಗುತ್ತಿದೆ. ಆದಾಗ್ಯೂ, ಈಗಿರುವ ಬಳಕೆದಾರರ ಮೂಲವನ್ನು ಉಳಿಸಿಕೊಳ್ಳಲು ಹುವಾವೇ ಕಾರ್ಯತಂತ್ರಗಳನ್ನು ನಿಯೋಜಿಸಲು ಪ್ರಯತ್ನಗಳನ್ನು ಕೈಗೊಂಡಿದೆ. ಇದು ಹುವಾವೇ
ವಾಣಿಜ್ಯದ ಮೇಲೆ ಯು.ಎಸ್ ಮತ್ತು ಚೀನಾ ಒಪ್ಪಂದದ ಭಾಗವಾಗಿ, ಹುವಾವೇ ವಿರುದ್ದದ ನಿಬರ್ಂಧ ಕ್ರಮಗಳನ್ನು ಅಮೆರಿಕಾ ಹಿಂಪಡೆಯಬಹುದು ಅಥವಾ ಮುಂದೂಡಬಹುದು ಎಂಬ ಸಾಧ್ಯತೆಗಳು ಇವೆಯಾದಾರೂ ಖಂಡಿತವಾಗಿಯೂ ಇವೆರಡೂ ರಾಷ್ಟಗಳ ನಡುವಿನ ವಾಣಿಜ್ಯ ಸಮರವಂತೂ ನಿಲ್ಲುವುದಿಲ್ಲ ಎನ್ನಲಾಗಿದೆ.
ಪ್ರಸ್ತುತ ಮುಖಾಮುಖಿ ಯಲ್ಲಿ ಇಬ್ಬರು ಹಲವಾರು ಪಾಠಗಳನ್ನು ಕಲಿಯ ಬೇಕಾಗಿದೆಯಾದರೂ,. ಮೊದಲಿಗೆ, ಅಮೆರಿಕಾದ ಆರ್ಥಿಕತೆಯ ಮೇಲೆ ಹಾನಿ ಉಂಟಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಏಕೆಂದರೆ, ಚೀನಾವು ಹುವಾವೇ ಟೆಲಿಕಾಂ ತಂತ್ರಜ್ಞಾನದಲ್ಲಿ ಅಮೆರಿಕಾಕ್ಕೆ ಬೆದರಿಕೆಯನ್ನು ಒಡ್ಡಿದೆ ಎಂಬುದು ಸ್ಪಷ್ಟಗೊಂಡಿದೆ. 5ಜಿ ತಂತ್ರಜ್ಞಾನದ ಜೊತೆಗೆ ಆರ್ಟಿಫಿಶಿಲ್ ಇಂಟಲಿಜೆನ್ಸ್ ನಂತಹ ಕ್ಷೇತ್ರಗಳಲ್ಲೂ ಚೀನಾವು ಅಮೆರಿಕಾಕ್ಕಿಂತ ಹೆಚ್ಚಿನ ಮುನ್ನಡೆ ಸಾಧಿಸುವ ಸಾಧ್ಯತೆಯಿದೆ. ಇದು ಅಮೆರಿಕಾದ ಆತಂಕವನ್ನು ಹೆಚ್ಚಿಸಿದೆ. ಚೀನಾ ಈ ತಂರ್ರಜ್ಞಾನದ ಮುನ್ನಡೆ ಹಾಗೂ ಬೆಲ್ಟ್ ಮತ್ತು ರೋಡ್ ಪೋರಂ ಬಳಸಿ ವ್ಯಾಪಾರ ಪಾಲುದಾರಿಕೆಯನ್ನು ಹೆಚ್ಚಿಸುತ್ತಿರುವುದು ಅಮೆರಿಕಾಕ್ಕೆ ಮತ್ತೊಂದು ಆತಂಕ..
ಚೀನಾವು ತನ್ನ ದೇಶಿಯ ಮಾರುಕಟ್ಟೆಯನ್ನು ರಕ್ಷಿಸಲು ಮತ್ತು ಹುವಾವೇ ಯಂತಹ ತನ್ನ ‘ಚಾಂಪಿಯನ್ ಕಂಪನಿ’ ಗಳ ಬೆಳವಣಿಗೆಯನ್ನು ಪ್ರೋತ್ಸಾಹಿಸಲು, ಯುಎಸ್ ನ ಮತ್ತು ಅದರ ಮಿತ್ರರ ಆಕ್ರಮಣಗಳನ್ನು ಪ್ರತಿರೋಧಿಸಲು, ಶಕ್ತವಾಗುವ ತಾಂತ್ರಿಕ ಸಾರ್ವಭೌಮತ್ವವನ್ನು ಅಭಿವೃದ್ಧಿ ಪಡಿಸಿಕೊಂಡಿದೆ. ಯುಎಸ್ ನ ಯಾವುದೇ ತಾಂತ್ರಿಕ ಸಮರವನ್ನು ಎದುರಿಸಲು, ಸಾಮ್ರಾಜ್ಯಶಾಹಿ ಅಜೆಂಡಾ ಹಾಗೂ ಯುಎಸ್ ನ ತಂತ್ರಜ್ಞಾನ ಅಧಿಪತ್ಯವನ್ನು ಹಿಮ್ಮೆಟ್ಟಿಸಲು ಚೀನಾವು ಸಜ್ಜಾಗುತ್ತಿದೆ.
ಇದೇ ಯು.ಎಸ್. ಸರಕಾರ ಹುವಾವೇ ಬಗ್ಗೆ ಇಷ್ಟು ಆತಂಕಕ್ಕೆ ಕಾರಣ. ಅಮೆರಿಕದ ಜಾಗತಿಕ ಅಧಿಪತ್ಯದೊಂದಿಗೆ ಬಂಡವಾಳಶಾಹಿ ಮತ್ತು ಸಾಮ್ರಾಜ್ಯಶಾಹಿಯ ಅಧಿಪತ್ಯವೂ ತಳುಕು ಹಾಕಿಕೊಂಡಿದೆ. ಗೂಗಲ್, ಆಪಲ್, ಫೇಸ್ ಬುಕ್ ನಂತಹ ಕಂಪನಿಗಳ ಮೂಲಕ ಇಂಟರ್ನೆಟ್ ಮತ್ತು ಆ ಮೂಲಕ ಇಡೀ ಜಗತ್ತಿನ ಮಾಹಿತಿ ಮತ್ತು ಆರ್ಥಿಕದ ಜಾಲವನ್ನು ನಿಯಂತ್ರಣದಲ್ಲಿಟ್ಟಿರುವ ಅದರ ಯೋಜನೆಗೂ ಚೀನಾದಿಂದ ಸವಾಲು ಬರಬಹುದು ಎಂಬ ಆತಂಕದಿಂದಾಗಿಯೇ ಗೂಗಲ್ ಸಹ ಯು.ಎಸ್. ಸರಕಾರದ ಈ ನಿರ್ಧಾರದೊಂದಿಗೆ ಇಷ್ಟು ಆಸಕ್ತಿಯಿಂದ ತೊಡಗಿಸಿಕೊಂಡಿದೆ.
ಚೀನಾದ ತಂತ್ರಜ್ಞಾನದ ಸಾರ್ವಭೌಮತೆಯ ಸ್ವಾವಲಂಬನೆಯ ಪರಿಕಲ್ಪನೆ ಭಾರತಕ್ಕೂ ಮಾದರಿಯಾಗಬೇಕು.
(ಈ ವಾರದ ಜನಶಕ್ತಿ ವಾರಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
– ನಾಗರಾಜ ನಂಜುಂಡಯ್ಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಸಂವಿಧಾನಕ್ಕೆ ಅಪಾಯವಾದರೆ, ಬಡವರ, ಶ್ರಮಿಕರ ಭವಿಷ್ಯಕ್ಕೆ ಅಪಾಯವಾದಂತೆ : ಸಿಎಂ ಸಿದ್ದರಾಮಯ್ಯ
ಸುದ್ದಿದಿನ,ಮಡಿಕೇರಿ : ದೇಶದ ಸಂವಿಧಾನಕ್ಕೆ ಅಪಾಯವಾದರೆ ಈ ದೇಶದ ಮಹಿಳೆಯರ, ಬಡವರ, ಮಧ್ಯಮ ವರ್ಗದವರ, ಶ್ರಮಿಕರ, ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಈ ಲೋಕಸಭಾ ಚುನಾವಣೆ ನಮಗೊಂದು ಅವಕಾಶ. ಈ ಬಾರಿ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಗೆಲ್ಲಿಸುವ ಮೂಲಕ ಪ್ರಜಾತಂತ್ರ ಉಳಿಸಬೇಕು ಎಂದು ಕರೆ ನೀಡಿದರು.
ಬಳಿಕ ತುಮಕೂರಿನಲ್ಲಿ ಮಾತನಾಡಿದ ಅವರು, ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದ ಬಿಜೆಪಿ ಸಂಸದರು ವಿಫಲರಾಗಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದರು.
ಮಹಿಳೆಯರ ಅಭ್ಯುದಯಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ನುಡಿದಂತೆ ಜಾರಿಗೆ ತಂದಿದ್ದೇವೆ. ಇದರಿಂದಾಗಿ ಮಹಿಳೆಯರ ಜೀವನದಲ್ಲಿ ಸುಧಾರಣೆ ಕಂಡಿದೆ, ಈ ಯೋಜನೆಯ ಫಲಾನುಭವಿಗಳ ಬಗ್ಗೆ ಟೀಕಿಸುವುದು ಸರಿಯಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಡಿಕೇರಿಯಲ್ಲಿ ನಡೆದ ಜನಧ್ವನಿ-2 ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದೆ.
ಸಂವಿಧಾನಕ್ಕೆ ಅಪಾಯ ಎಂದರೆ ದೇಶದ ಮಹಿಳೆಯರು, ಬಡವರು, ಮಧ್ಯಮ ವರ್ಗದವರು, ಶೂದ್ರರು, ಶ್ರಮಿಕರ ಬದುಕು-ಭವಿಷ್ಯಕ್ಕೆ ಅಪಾಯ ಎಂದರ್ಥ.
ಭಾರತದಲ್ಲಿ ಪ್ರಜಾತಂತ್ರ ಅಪಾಯದಲ್ಲಿದೆ. ಇದನ್ನು ಉಳಿಸುವ ಅನಿವಾರ್ಯತೆ ನಮ್ಮೆಲ್ಲರ ಮುಂದಿದೆ. ಈ ಲೋಕಸಭಾ ಚುನಾವಣೆ ನಮಗೊಂದು… pic.twitter.com/UapeRxBcZP
— Siddaramaiah (@siddaramaiah) April 14, 2024
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ದಾವಣಗೆರೆ | ದ್ವಿತೀಯ ಪಿ.ಯು.ಸಿ ಪರೀಕ್ಷೆ; ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ
ಸುದ್ದಿದಿನ,ದಾವಣಗೆರೆ : 2024 ರ ಮಾರ್ಚ್ನಲ್ಲಿ ನಡೆದ ದ್ವಿತೀಯ ಪಿ.ಯು.ಸಿ. ಫಲಿತಾಂಶ ಪ್ರಕಟವಾಗಿದ್ದು ಜಿಲ್ಲೆಗೆ ಶೇ 80.96 ರಷ್ಟು ಫಲಿತಾಂಶ ಬಂದಿದ್ದು ಶೇ 74.27 ಗಂಡು, ಶೇ 82.01 ರಷ್ಟು ಹೆಣ್ಣು ಮಕ್ಕಳು ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ; ವೆಂಕಟೇಶ್ ಎಂ.ವಿ ತಿಳಿಸಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಚುನಾವಣಾ ಸಂಬಂಧ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಏಪ್ರಿಲ್ 10 ರಂದು ಫಲಿತಾಂಶ ಪ್ರಕಟವಾಗಿದ್ದು ಹೆಚ್ಚಿನ ವಿವರಗಳು ಬರಬೇಕಾಗಿದೆ. ಈ ವರ್ಷ ಜಿಲ್ಲೆಯಲ್ಲಿ ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು 19644 ರೆಗ್ಯುಲರ್, 422 ಖಾಸಗಿ ಸೇರಿ 20066 ವಿದ್ಯಾರ್ಥಿಗಳು ತೆಗೆದುಕೊಂಡಿದ್ದರು. ಇದರಲ್ಲಿ 15904 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ 80.96 ರಷ್ಟು ಫಲಿತಾಂಶ ಪಡೆದಿದ್ದಾರೆ.
ಕಳೆದ ವರ್ಷ ಶೇ 75.72 ರಷ್ಟು ಫಲಿತಾಂಶ ಬಂದಿತ್ತು, ಈ ವರ್ಷ ಶೇ 5.24 ರಷ್ಟು ಫಲಿತಾಂಶ ಹೆಚ್ಚಳವಾಗಿದೆ. ಜಿಲ್ಲೆಗೆ ಟಾಪ್ ಬಂದವರಲ್ಲಿ ಕಲಾ ವಿಭಾಗದಲ್ಲಿ ಹರಿಹರದ ಶ್ರೀಮತಿ ಗಿರಿಯಮ್ಮ ಕಾಂತಪ್ಪ ಮಹಿಳಾ ಪದವಿ ಪೂರ್ವ ಕಾಲೇಜಿನ ಹೀನಬಾನು ಪಿ.ಕೆ. 591 ಅಂಕ ಪಡೆದು ಶೇ 98.5, ವಾಣಿಜ್ಯ; ದಾವಣಗೆರೆ ತಾ; ಗೋಪನಾಳು ಸರ್ಕಾರಿ ಪದವಿ ಪೂರ್ವ ಕಾಲೇಜಿನ ರೇಷ್ಮಾ ಬಾನು 589 ಅಂಕ ಪಡೆದು ಶೇ 98.16 ರಷ್ಟು ಫಲಿತಾಂಶ ಪಡೆದು ಜಿಲ್ಲೆಗೆ ಮೊದಲಿಗರಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಲೋಕಿಕೆರೆ ರಸ್ತೆಯಲ್ಲಿನ ಸರ್ಎಂವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೊಹಮ್ಮದ್ ಸುಹೇಲ್, ಅಮೃತ ದೊಡ್ಡ ಬಸಪ್ಪನವರ್, ಅನನ್ಯ ಹೆಚ್.ಎಸ್, ಆಕಾಶ್ ಸಿ.ಪಾಟೀಲ್ ಇವರು 593 ಅಂಕ ಶೇ 98.83 ರಷ್ಟು ಸಮನಾದ ಫಲಿತಾಂಶ ಹಂಚಿಕೊಂಡಿದ್ದಾರೆ ಎಂದರು.
ವಿಭಾಗವಾರು ಫಲಿತಾಂಶ; ಕಲಾ ವಿಭಾಗದಲ್ಲಿ ಶೇ 57.83 ರಷ್ಟು ಫಲಿತಾಂಶ ಬಂದಿದ್ದು ಇದರಲ್ಲಿ ಗಂಡು ಶೇ 45, ಹೆಣ್ಣು ಶೇ 66.46 ರಷ್ಟು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಶೇ 76.22 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 65.5, ಹೆಣ್ಣು ಶೇ 80.8, ವಿಜ್ಞಾನ ವಿಭಾಗದಲ್ಲಿ ಶೇ 91.13 ರಷ್ಟು ಫಲಿತಾಂಶ ಬಂದಿದ್ದು ಗಂಡು ಶೇ 91.39 ಹಾಗೂ ಹೆಣ್ಣು ಶೇ 88.69 ರಷ್ಟು ಫಲಿತಾಂಶ ಬಂದಿದೆ.
ನಗರಕ್ಕಿಂತ ಗ್ರಾಮೀಣರ ಮೇಲುಗೈ; ಫಲಿತಾಂಶದಲ್ಲಿ ನಗರ ಪ್ರದೇಶಕ್ಕಿಂತ ಗ್ರಾಮೀಣ ವಿದ್ಯಾರ್ಥಿಗಳು ಶೇ 1.1 ರಷ್ಟು ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಶೇ 73.65 ಗಂಡು, ಶೇ 84.6 ಹೆಣ್ಣು ಉತ್ತೀರ್ಣರಾದರೆ ನಗರ ಪ್ರದೇಶದ ಒಟ್ಟು ಫಲಿತಾಂಶ ಶೇ 80.75 ರಲ್ಲಿ ಗಂಡು ಶೇ 74.41, ಹೆಣ್ಣು ಶೇ 81.37 ರಷ್ಟು ಫಲಿತಾಂಶ ಪಡೆದಿದ್ದಾರೆ.
ಶೇ 100 ರಷ್ಟು ಫಲಿತಾಂಶ ಪಡೆದ ಶಾಲೆಗಳು; ದಾವಣಗೆರೆ ಅಂಜುಂ ಪದವಿ ಪೂರ್ವ ಕಾಲೇಜು, ಲೇಬರ್ ಕಾಲೋನಿ, ಜೈನ್ ಟ್ರಿನಿಟಿ ಪದವಿ ಪೂರ್ವ ಕಾಲೇಜು, ಅನ್ಮೋಲ್ ಪದವಿ ಪೂರ್ವ ಕಾಲೇಜು, ಶ್ರೀ ಗೀತಂ ಪದವಿ ಪೂರ್ವ ಕಾಲೇಜು, ದಾವಣಗೆರೆ ಇವು ಶೇ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳಾಗಿವೆ.
ಈ ವೇಳೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ರಕ್ಷಣಾಧಿಕಾರಿ ಉಮಾ ಪ್ರಶಾಂರ್, ಶಾಲಾ ಶಿಕ್ಷಣ, ಪದವಿ ಪೂರ್ವ ಇಲಾಖೆ ಉಪನಿರ್ದೇಶಕ ಕರಿಸಿದ್ದಪ್ಪ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಗ್ರಾಹಕರಿಂದ ಹೆಚ್ಚುವರಿಯಾಗಿ ಪೇಪರ್ ಬ್ಯಾಗ್ಗೆ ರೂ.10 ಪಡೆದ ಶಾಪಿಂಗ್ ಮಾಲ್ಗೆ ದಂಡ
ಸುದ್ದಿದಿನ ,ದಾವಣಗೆರೆ : ವಕೀಲ ವೃತ್ತಿಯಲ್ಲಿ ತೊಡಗಿಕೊಂಡಿರುವ ಆರ್. ಬಸವರಾಜ್ ಎಂಬುವವರು ದಾವಣಗೆರೆ ನಗರದ ಮ್ಯಾಕ್ಸ್ ರೀಟೈಲ್ ಅಂಗಡಿಯಲ್ಲಿ 2023 ರ ಅಕ್ಟೋಬರ್ 29 ರಂದು ರೂ.1,499 ಪಾವತಿಸಿ, ಡೆನಿವಾ ಪ್ಯಾಂಟ್ ಖರೀದಿಸಿದರು. ಈ ವೇಳೆಯಲ್ಲಿ ಇಲ್ಲಿಯೇ ಲೈಫ್ ಸ್ಟೈಲ್ ಇಂಟರ್ನ್ಯಾಷನಲ್ ವಾಣಿಜ್ಯ ಸಂಸ್ಥೆ ಪ್ಯಾಂಟ್ ಮಾರಾಟದ ವೇಳೆ ಹೆಚ್ಚುವರಿಯಾಗಿ ರೂ.10/- ಪೇಪರ್ ಬ್ಯಾಗ್ಗೆ ಪಡೆಯಲಾಯಿತು.
ಗ್ರಾಹಕರಾದ ಆರ್. ಬಸವರಾಜ್ ಇವರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ದಾಖಲಿಸಿ ವಾಣಿಜ್ಯ ಸಂಸ್ಥೆ ವಿರುದ್ದ ರೂ.50,000 ಮಾನಸಿಕ ಕಿರುಕುಳ ಹಾಗೂ ದೂರು ದಾಖಲಿಸಲು ಖರ್ಚು ಮಾಡಿದ ಮೊ ರೂ.10,000 ಗಳನ್ನು ಪಾವತಿಸುವಂತೆ ದೂರನ್ನು ದಾಖಲಿಸಿದರು.
ವಾಣಿಜ್ಯ ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದು ಈ ಸಂಸ್ಥೆ ವಕೀಲರ ಮುಖಾಂತರ ಹಾಜರಾಗಿ ಬ್ಯಾಗ್ಗೆ ಹೆಚ್ಚುವರಿಯಾಗಿ ಪಡೆದ ಹಣಕ್ಕೆ ಸಮರ್ಥಿಸಿಕೊಂಡಿತ್ತು. ಆದರೆ ಗ್ರಾಹಕರ ಆಯೋಗ ಈ ಮೊದಲು ರಾಷ್ಟ್ರೀಯ ಗ್ರಾಹಕರ ಆಯೋಗ ಬಿಗ್ ಬಜಾರ್ ವಿರುದ್ಧ ಸಾಯಲ್ ದಾವ ಪ್ರಕರಣದ ನ್ಯಾಯ ನಿರ್ಣಯದ ತೀರ್ಪಿನ ಅನುಗುಣವಾಗಿ ವಾಣಿಜ್ಯ ಸಂಸ್ಥೆಗಳು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚಿನ ಹಣವನ್ನು ಪಡೆಯುವಂತಿಲ್ಲ ಎಂಬ ತೀರ್ಪನ್ನು ಉಲ್ಲೇಖಿಸಿ ಹೆಚ್ಚುವರಿಯಾಗಿ ರೂ.10 ಪಡೆದ ಸಂಸ್ಥೆಯ ಕ್ರಮವು ಗ್ರಾಹಕರ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಅನುಚಿತ ವ್ಯಾಪಾರ ಪದ್ದತಿಯೆಂದು ಪರಿಗಣಿಸಿ ದಾವಣಗೆರೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಮಹಂತೇಶ ಈರಪ್ಪ ಶಿಗ್ಲಿ, ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಶ್ರೀಮತಿ ಬಿ.ಯು. ಗೀತಾ ಇವರು ವಾಣಿಜ್ಯ ಸಂಸ್ಥೆಗೆ ರೂ.7000 ದಂಡವಿದಿಸಿ ಆದೇಶಿಸಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243