Connect with us

ನಿತ್ಯ ಭವಿಷ್ಯ

ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ ನಿತ್ಯ ಬದುಕಿನ ಜ್ಯೋತಿಷ್ಯ ಮಾರ್ಗದರ್ಶನ: 15/07/2019 ಸೋಮವಾರ

Published

on

ಕತ್ತಲೆಯಿಂದ ಬೆಳಕಿನ ಕಡೆಗೆ ಸಾಗುವ   ಜ್ಯೋತಿಷ್ಯ ಮಾರ್ಗದರ್ಶನ. ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್ 9900494333

ಮೇಷ ರಾಶಿ

ವಿದ್ಯಾಭ್ಯಾಸ ಮಾಡುವವರು  ಹೆಚ್ಚಿನ ಪ್ರಯತ್ನದಿಂದ ಯಶಸ್ಸು ಗಳಿಸಬಲ್ಲರು. ಏಕಾಗ್ರತೆಯಿಂದ ಪ್ರಯತ್ನಿಸಿ ನಿಮ್ಮಲ್ಲಿರುವ ಬುದ್ಧಿವಂತಿಗೆಯ ಪೂರ್ಣ ಪ್ರಯೋಜನ ಪಡೆಯಿರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ  ಆತ್ಮವಿಶ್ವಾಸದ ಕೊರತೆಯಿಂದ ಹಿನ್ನೆಡೆ ಅನುಭಸುವ ಸಾಧ್ಯತೆ ಇದೆ.

ಪೂರ್ವ ತಯಾರಿ ನಡೆಸಿ ಆತ್ಮವಿಶ್ವಾಸ ದಿಂದ ಪ್ರಯತ್ನಿಸಿದರೆ ಕೆಲವು  ಯಶಸ್ಸು ಸಾಧ್ಯವಾಗುವುದು.  ಹೂಡಿಕೆಗೆ ಇದು ಕಾಲವಲ್ಲ. ವಿವಾಹದಲ್ಲಿ ಉತ್ತಮ ಸಂಬಂಧಗಳು ಬಂದರೂ ಅದನ್ನು ಶುಭ ಸಮಾರಂಭದಲ್ಲಿ ಕೊನೆಗೊಳಿಸುವಲ್ಲಿ ವಿಫಲ ರಾಗುವರು. ತಾಳ್ಮೆ ಇರಲಿ. ವೃದ್ಧರು ಆರೋಗ್ಯದ ಕಿರಿಕಿರಿ ಅನುಭವಿಸುವರು. ಮಕ್ಕಳ ಅಸಹಕಾರ ಚಿಂತೆ ತರುವುದು.

ವೃಷಭ ರಾಶಿ

ವಿದ್ಯಾಭ್ಯಾಸದಲ್ಲಿ   ಸತತ ಪರಿಶ್ರಮದಿಂದ ಹೆಚ್ಚಿನ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆಗಾಗ ಕಾಡುವ ಸಣ್ಣ ಪುಟ್ಟ ಅನಾರೋಗ್ಯಕ್ಕೆ ಮನಸು ಕೆಡಿಸಿಕೊಳ್ಳಬೇಡಿ.

ಉದ್ಯೋಗಿಗಳಿಗೆ ಉತ್ತಮ ಯಶಸ್ಸು ಗಳಿಸಲು ಸಾಧ್ಯವಾಗುವುದು. ಆದರೆ ಅಷ್ಟೇ ಅಡೆತಡೆಗಳನ್ನೂ ಖರ್ಚು ವೆಚ್ಚಗಳನ್ನೂ ಎದುರಿಸಬೇಕಾಗುವುದು. ಮುನ್ನುಗ್ಗಿ ಮುಂದಿನ ದಿನಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗುವುದು.

ವಿವಾಹದಲ್ಲಿ  ಸರಿಯಾದ ಸಂಬಂಧಗಳು ಬರದೇ, ಕೌಟುಂಬಿಕ ಸಮಸ್ಯೆಯಿಂದ ಚಿಂತಿತ ರಾಗುವರು. ಧೈರ್ಯದಿಂದ ಪ್ರಯತ್ನ ಮುಂದುವರಿಸಿ.

ವೃದ್ಧರು  ಹೃದಯ  ಸಂಬಂಧಿಸಿರುವ ಕಾಯಿಲೆಯಿಂದ ನರಳುವ ಸಾಧ್ಯತೆ ಇದೆ. ವೃಥಾ ಮಾನಸಿಕ ಚಿಂತೆ ಕಾಡುವುದು. ಮಕ್ಕಳ ಸಹಾಯ, ಸಹಕಾರ ನೆಮ್ಮದಿ ತರುವ ವಿಚಾರ.

ಮಿಥುನ ರಾಶಿ

ವಿದ್ಯಾಭ್ಯಾಸ  ಉತ್ತಮ ಪ್ರಯತ್ನ ಮಾಡುವರಾದರೂ ನೆನಪಿನ ಶಕ್ತಿಯ ಕೊರತೆಯಿಂದ ಅಧೀರರಾಗುವರು. ಚಿಂತಿಸಬೇಡಿ  ಗುರು,ಹಿರಿಯರು ನಿಮ್ಮ ಬೆನ್ನಿಗಿದ್ದಾರೆ. ಹೆಚ್ಚಿನ ಪ್ರಯತ್ನ ಅತ್ಮವಿಶ್ವಾಸ ದಿಂದ ಸಾಕಷ್ಟು ಉತ್ತಮ ಯಶಸ್ಸು ಗಳಿಸಬಲ್ಲಿರಿ.

ಉದ್ಯೋಗದಲ್ಲಿ  ದುಡುಕು ನಿರ್ಧಾರದಿಂದ ಉತ್ತಮ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ. ವಿವೇಚನೆಯಿಂದ ಅನುಭವಿಗಳ ಸಲಹೆ ಸಹಕಾರ ಪಡೆದು ಪ್ರಯತ್ನಿಸಿದರೆ ಯಶಸ್ಸು ಗಳಿಸಬಲ್ಲಿರಿ. ಪ್ರಗತಿ ಸಾಧ್ಯವಾಗುವುದು. ವಿವಾಹಾರ್ಥಿಗಳು ಮನಕ್ಕೊಪ್ಪುವ ಸಂಬಂಧ ಸಿಗದೇ ಚಿಂತಿತರಾಗುವರು.

ತಾಳ್ಮೆ ಯಿಂದ ಪ್ರಯತ್ನ ಮುಂದುವರಿಸಿ. ವೃದ್ಧರು ಅಜೀರ್ಣ ಸಮಸ್ಯೆಯಿಂದ ಬಳಲುವರು. ಮಕ್ಕಳ ಸಹಾಯ ಸಹಕಾರ ಉತ್ತಮ ವಿರುವುದು.

ಕರ್ಕಟಕ  ರಾಶಿ

ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಯತ್ನ ಶೀಲರಾಗಿ ಹೆಚ್ಚಿನ ಯಶಸ್ಸು ಗಳಿಸುವರು. ಚಂಚಲತೆಯನ್ನು ನಿಯಂತ್ರಿಸಿ ಏಕಾಗ್ರತೆಯಿಂದ ಪ್ರಯತ್ನಿಸಿ.

ಉದ್ಯೋಗಿಗಳಿಗೆ ಅಡೆತಡೆ ಗಳ ಮಧ್ಯೆಯೂ ಉತ್ತಮ ಯಶಸ್ಸು ಗಳಿಸಬಲ್ಲರು. ನಿಮ್ಮ ಪೂರ್ವ ತಯಾರಿ ಸರಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳಿ. ಅತಿಯಾದ ಅತ್ಮವಿಶ್ವಾಸ ಯಶಸ್ಸು ತರದು.

ವಿವಾಹಾರ್ಥಿಗಳು ಸರಿಯಾದ ಸಂಬಂಧ ಸಿಗದೇ ಚಿಂತಿತರಾಗುವರು. ಆದರೆ ಪ್ರೇಮ ವಿವಾಹಗಳು ಕೌಟುಂಬಿಕ ವಿರೋಧದ ನಡುವೆಯೂ ಯಶಸ್ಸು ಕಾಣುವವು.

ವೃದ್ಧರು ಬೆನ್ನು ನೋವು, ಅತಿಸಾರದಂತಹ ತೊಂದರೆ ಅನುಭವಿಸುವರು. ಮಕ್ಕಳ ಸಹಕಾರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಚಿಂತಿತರಾಗುವಿರಿ.

ಸಿಂಹ ರಾಶಿ

ವಿದ್ಯಾಭ್ಯಾಸದಲ್ಲಿ ಹಲವು ಬಾಹ್ಯ ಆಕರ್ಷಣೆಗಳಿಂದ ಏಕಾಗ್ರತೆ ಸಾಧಿಸಲು ವಿಫಲ ರಾಗುವರು. ಆತ್ಮವಿಶ್ವಾಸದ ಕೊರತೆಯೂ ಉಂಟಾಗುವುದು.  ವಿವಾಹದಲ್ಲಿ  ಉತ್ತಮ ಸಂಬಂಧ ಪಡೆದು ಶುಭ ಕಾರ್ಯ ಮಾಡಲು ಶಕ್ತ ರಾಗುವರು.

ಚಿಕ್ಕ ಪುಟ್ಟ ಕೌಟುಂಬಿಕ ವಿರಸಗಳಿಂದ ವಿಚಲಿತರಾಗದಿರಿ. ವೃದ್ಧರು ಅಪಘಾತ ಭಯ ಎದುರಿಸುವರು. ಹೊಟ್ಟೆ ಸಂಬಂಧಿ ಸಮಸ್ಯೆ ಎದುರಾಗುವುದು. ಆಹಾರ ವಿಹಾರದಲ್ಲಿ ಎಚ್ಚರ ಅವಶ್ಯಕ. ಮಕ್ಕಳ ಸಹಕಾರ ಇದ್ದರೂ ನಿಧಾನ ವಾಗುವುದು. 

ಕನ್ಯಾ ರಾಶಿ

ವಿದ್ಯಾಭ್ಯಾಸದಲ್ಲಿ, ಉತ್ತಮ ಯಶಸ್ಸು ಸಾಧ್ಯವಾಗುವುದು. ಆದರೆ ನೆನಪಿನ ಶಕ್ತಿಯ ಕೊರತೆಯಿಂದ ಅದೀರರಾಗದೆ ಹೆಚ್ಚಿನ ಪ್ರಯತ್ನಮಾಡಿ ಯಶಸ್ಸು ಗಳಿಸಿ.

ಉದ್ಯೋಗಿಗಳಿಗೆ ಉತ್ತಮ ಪ್ರಯತ್ನದಿಂದ ಯಶಸ್ಸು ಗಳಿಸಬಲ್ಲರು. ಆದರೆ ಪ್ರತಿಸ್ಪರ್ಧಿಗಳ ಮಾತಿಗೆ ಮರುಳಾಗಿ ವೃಥಾ ಖರ್ಚು, ಮೋಸಹೋಗುವ ಸಾಧ್ಯತೆ ಇದೆ. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಶುಭಕಾರ್ಯ ನೆರವೇರುವುದು. ಕೌಟುಂಬಿಕ ಅಡೆತಡೆಗಳನ್ನು ವಿವೇಚನೆಯಿಂದ ನಿಭಾಯಿಸಿ.

ವೃದ್ಧರು ಮೂಲವ್ಯಾಧಿ ಇತ್ಯಾದಿಗಳಿಂದ ಬಳಲುವ ಸಾಧ್ಯತೆ ಇದೆ. ಆಹಾರ ವಿಹಾರದಲ್ಲಿ ಎಚ್ಚರ ಅಗತ್ಯ. ಮಕ್ಕಳ ಸಹಕಾರ ಉತ್ತಮವಿದ್ದರೂ ಸಾಕಷ್ಟು ಖರ್ಚು ವೆಚ್ಚ ಎದುರಾಗ ಬಹುದು. 

ತುಲಾ ರಾಶಿ

ವಿದ್ಯಾಭ್ಯಾಸದಲ್ಲಿ ಚಂಚಲ ಮನಸ್ಸು, ಮಾನಸಿಕ ಆಲಸ್ಯ, ಪ್ರಯತ್ನ ಶೀಲತೆಯ ಕೊರತೆ ಯಿಂದ ಹಿನ್ನೆಡೆ ಅನುಭವಿಸ ಬೇಕಾಗ ಬಹುದು. ಧೈರ್ಯದಿಂದ, ಆತ್ಮ ವಿಶ್ವಾಸದಿಂದ ಹೆಚ್ಚಿನ ಪ್ರಯತ್ನ ಮಾಡಿದರೆ ಮಾತ್ರ ಯಶಸ್ಸು ಸಾಧ್ಯವಾಗುವುದು.

ಉದ್ಯೋಗಿಗಳು ಬ್ರಮಾಧೀನರಾಗಿ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವಾಹಾರ್ಥಿಗಳು ಸರಿಯಾದ ಸಂಬಂಧಗಳು ಸಿಗದೇ ನಿರಾಶರಾಗುವರು. ಒಳ್ಳೇ ದಿನಕ್ಕಾಗಿ ಕಾಯದೇ ಬೇರೆ ಮಾರ್ಗವಿಲ್ಲ.

ವೃದ್ಧರು ಚರ್ಮ ಸಂಬಂಧಿರೋಗಗಳಿಂದ, ಅಲರ್ಜಿಯಿಂದ ಬಳಲುವ ಸಾಧ್ಯತೆ. ಸರಿಯಾದ ಆಯುರ್ವೇದ ಚಿಕಿತ್ಸೆ ಪಡೆಯಿರಿ. ಮಕ್ಕಳ ಸಹಕಾರ ನೆಮ್ಮದಿ ತರುವುದು.

ವೃಶ್ಚಿಕ ರಾಶಿ

ವಿದ್ಯಾಭ್ಯಾಸದಲ್ಲಿ  ಉತ್ತಮ ಯಶಸ್ಸು ಪಡೆಯುವರು. ಆಗಾಗ ಕಾಡುವ ಆತ್ಮವಿಶ್ವಾಸದ ಕೊರತೆಯನ್ನು ಧೈರ್ಯದಿಂದ ವಿವೇಚನೆ ಯಿಂದ ಎದುರಿಸಿ.

ಉದ್ಯೋಗಿಗಳು ಅಸಡ್ಡೆ ಯಿಂದ ಸರಿಯಾದ ತಯಾರಿ ನಡೆಸದೇ ತೊಂದರೆಯಲ್ಲಿ ಸಿಲುಕುವ ಸಾಧ್ಯತೆ ಇದೆ. ಅನುಭವಿಗಳ ಸಹಾಯ ಪಡೆದು ಆತ್ಮವಿಶ್ವಾಸ ದಿಂದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು.

ವಿವಾಹಾಕಾಂಕ್ಷಿಗಳು ಉತ್ತಮ ಸಂಬಂಧ ಪಡೆಯುವಲ್ಲಿ ಯಶಸ್ವಿ ಆಗುವರು. ಆದರೆ ಹಲವು ಅಡೆತಡೆಗಳು ಕೌಟುಂಬಿಕ ಸಮಸ್ಯೆಗಳು ಚಿಂತೆಗೆ ಕಾರಣ ವಾಗುವವು. ವೃದ್ಧರು ಹೊಟ್ಟೆ ಸಂಬಂಧಿ ಸಮಸ್ಯೆಯಿಂದ ಬಳಲುವ ಸಾಧ್ಯತೆ ಇದೆ. ಮಕ್ಕಳ ಸಹಕಾರ ಉತ್ತಮ ವಾಗಿರುವುದು.

ಧನಸ್ಸು ರಾಶಿ

ವಿದ್ಯಾಭ್ಯಾಸದಲ್ಲಿ ನಿಮಗೆ ಹಲವು ವಿಘ್ನಗಳನ್ನು ಎದುರಿಸಬೇಕಾಗುತ್ತದೆ.  ಚಂಚಲತೆಯಿಂದ ದೂರ ಇದ್ದು ನಿಮ್ಮ ಧ್ಯೇಯದ ಕಡೆ ಏಕಾಗ್ರತೆಯಿಂದ ಪ್ರಯತ್ನಿಸಿದರೆ ಯಶಸ್ಸು ಸಾಧ್ಯವಾಗುವುದು.

ಉದ್ಯೋಗಿಗಳು ಹಿಂಜರಿಕೆಯಿಂದ ಸರಿಯಾದ ಪ್ರಯತ್ನ ಮಾಡುವಲ್ಲಿ ವಿಫಲರಾಗುವರು. ವಿವೇಚನೆಯಿಂದ ಉತ್ತಮ ಪ್ರಯತ್ನದಿಂದ ಯಶಸ್ಸು ಸಾಧ್ಯವಾಗುವುದು.  ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಹಿತಶತ್ರುಗಳ ಕಾಟದಿಂದ ಅವು ಕೈತಪ್ಪುವ ಸಾಧ್ಯತೆ. ತಾಳ್ಮೆ ಇರಲಿ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆದರೆ ಯಶಸ್ಸು ಸಾಧ್ಯ.

ವೃದ್ಧರು ಮೂತ್ರ ಕೋಶ ಸಂಬಂಧಿ ರೋಗಗಳಿಂದ ಅಥವ ಚರ್ಮರೋಗ, ಅಲರ್ಜಿಗಳಿಂದ ಬಳಲುವ ಸಾಧ್ಯತೆ ಇದೆ. ಉತ್ತಮ ಅಲೋಪಥಿ ವೈದ್ಯರ ಉಪಚಾರ ಪಡೆಯಿರಿ. ಮಕ್ಕಳ ಸಹಕಾರ ಸಿಗದೇ ಚಿಂತಿತರಾಗುವಿರಿ.

ಮಕರ ರಾಶಿ

ವಿದ್ಯಾಭ್ಯಾಸ ತಮ್ಮ ಚಂಚಲತೆ ಮತ್ತು ದಾಷ್ಟ್ಯ ದಿಂದ ಪ್ರಯತ್ನಶೀಲರಾಗದೇ ಹಿನ್ನೆಡೆ ಅನುಭವಿಸುವರು. ಗುರುಗಳ ಮಾರ್ಗದರ್ಶನದಂತೆ ನಡೆದು ಯಶಸ್ಸು ಗಳಿಸಿ. ಉದ್ಯೋಗಿಗಳು ಸರಿಯಾದ ರೆಸ್ಯೂಮೆ ಯೊಂದಿಗೆ ವಿವೇಚನೆಯಿಂದ ಆಲಸ್ಯ ತೊರೆದು ಪ್ರಯತ್ನಿಸಿದರೆ, ಹಲವು ವಿಘ್ನಗಳನಡುವೆಯೂ ಯಶಸ್ಸು ಗಳಿಸಬಲ್ಲರು.

ವಿವಾಹದಲ್ಲಿ  ಸರಿಯಾದ ಸಂಬಂಧಗಳು ಬರದೇ ಚಿಂತಿತರಾಗವರು. ತಾಳ್ಮೆಯಿಂದ ಪ್ರಯತ್ನ ಮುಂದುವರಿಸಿ. ವೃದ್ಧರು ರಕ್ತದೊತ್ತಡ ದಂತಹ ಸಮಸ್ಯೆಗಳ ಬಗ್ಗೆ ಜಾಗರೂಕ ರಾಗಿವುದು ಒಳಿತು. ಮಕ್ಕಳ ಸಹಕಾರ ಉತ್ತಮ ವಾಗಿರುವದಾದರೂ ನಿಮ್ಮ ನಿರೀಕ್ಷೆಯಂತೆ ಇಲ್ಲವಾಗಿ ವೃಥಾ ಚಿಂತಿತ ರಾಗುವಿರಿ.

ಕುಂಭ ರಾಶಿ

ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಯತ್ನಶೀಲರಾದರೆ ಯಶಸ್ಸು ಗಳಿಸುವರು. ಅತಿ ಮಹತ್ವಾಕಾಂಕ್ಷೆ, ಕೈಮೀರಿದ ಕನಸು ನಿಮ್ಮ ಹಾದಿ ತಪ್ಪಿಸಬಹುದು.  ಉದ್ಯೋಗಿಗಳು  ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗಬಹುದು.

ವಿವೇಚನೆ ಅಗತ್ಯ. ವಿವಾಹದಲ್ಲಿ ಉತ್ತಮ ಸಂಬಂಧ ಪಡೆದು ಯಶಸ್ವಿಯಾಗುವರು. ಆದರೆ ವಿವೇಚನೆ ಅಗತ್ಯ ದುಡುಕು ನಿರ್ಧಾರ ನಿಮ್ಮನ್ನು ಆಮೇಲೆ ಸಂಕಷ್ಟಕ್ಕೆ ನೂಕಬಹುದು. ವೃದ್ಧರು ಅಪಘಾತ ಭಯವಿರುವುದರಿಂದ ಎಚ್ಚರ ಅವಶ್ಯಕ.

ಹೃದಯ ಸಂಬಂಧಿ ರೋಗದಿಂದ ಬಳಲುವರೂ ಎಚ್ಚರಿಕೆ ಯಿಂದ ಇರುವುದು ಅವಶ್ಯಕ. ಮಕ್ಕಳ ಸಹಕಾರ ಅಷ್ಟಕಷ್ಟೆ.

ಮೀನಾ ರಾಶಿ

ವಿದ್ಯಾಭ್ಯಾಸದಲ್ಲಿ ಅತಿ ಭೋಗದಾಸೆ ಹಿನ್ನೆಡೆ ತರುವುದು. ವಿವೇಚನೆಯಿಂದ ಹಿರಿಯರ ಮಾರ್ಗದರ್ಶನದಲ್ಲಿ ಮುನ್ನೆಡೆಯಿರಿ. ಯಶಸ್ಸು ನಿಮ್ಮದಾಗುವುದು. ಉದ್ಯೋಗಿಗಳು ಉತ್ತಮ ಯಶಸ್ಸು ಗಳಿಸುವರು. ದೂರದೂರಿನ ಅವಕಾಶ ಲಭ್ಯವಾಗುವುದು. ಸಧ್ಯ ಬಂದದ್ದನ್ನು ಸ್ವೀಕರಿಸುವು ಜಾಣತನ.

ಪ್ರಗತಿ ಸಾಧ್ಯವಾಗುವುದು. ವಿವಾಹದಲ್ಲಿ ಉತ್ತಮ ಸಂಬಂಧ ಬಂದರೂ ಅದನ್ನು ಶುಭ ಕಾರ್ಯದಲ್ಲಿ ಕೊನೆಗೊಳಿಸುವುದು ಕಷ್ಟ ಸಾಧ್ಯ.

ವೃದ್ಧರು ಅಪಘಾತ ಭಯ, ರಕ್ತ ಹೀನತೆ ಯಂತಹ ಸಮಸ್ಯೆಗಳಿಂದ ಬಳಲುವರು. ಎಚ್ಚರ ಅವಶ್ಯಕ. ಉತ್ತಮ ಆಯುರ್ವೇದ ವೈದ್ಯರ ಸಲಹೆ ಪಡೆಯಿರಿ. ಮಕ್ಕಳ ಸಹಕಾರ ಉತ್ತಮ ವಿರುವುದು. ವೃಥಾ ಚಿಂತೆ ಬೇಡ.

ಪ್ರಸಿದ್ಧ ಜ್ಯೋತಿಷ್ಯರು ಶ್ರೀ ಸೂರ್ಯ ನಾರಾಯಣಭಟ್  9900494333.

ನಿತ್ಯ ಭವಿಷ್ಯ

ಇಂದಿನ ರಾಶಿಫಲ: 12 ರಾಶಿಗಳ ಭವಿಷ್ಯ ಹೇಗಿದೆ? ಉದ್ಯೋಗ, ಹಣಕಾಸು, ಪ್ರೀತಿ–ಆರೋಗ್ಯದ ಸಂಪೂರ್ಣ ಫಲ

Published

on

august-29-2026-daily-horoscope-kannada-rashi-bhavishya
ಇಂದು ಯಾರಿಗೆ ಶುಭ? ಯಾವ ರಾಶಿಯವರು ಎಚ್ಚರಿಕೆ ವಹಿಸಬೇಕು? ಇಲ್ಲಿದೆ ಆ.29ರ ದಿನ ಭವಿಷ್ಯ

ಸುದ್ದಿದಿನ,ರಾಶಿಫಲ: ಶನಿವಾರ, ಆಗಸ್ಟ್ 29, 2026. ಇಂದಿನ ದಿನವು 12 ರಾಶಿಗಳಿಗೂ ವಿಭಿನ್ನ ಅನುಭವಗಳನ್ನು ತರಲಿದೆ. ಕೆಲವರಿಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆ ಇದ್ದರೆ, ಇನ್ನೂ ಕೆಲವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಾಗುತ್ತದೆ. ಕುಟುಂಬದ ವಿಚಾರಗಳು, ಸಂಬಂಧಗಳು, ಆರೋಗ್ಯ ಮತ್ತು ವೈಯಕ್ತಿಕ ನಿರ್ಧಾರಗಳಲ್ಲಿಯೂ ದಿನದ ಗ್ರಹಗತಿಗಳ ಪ್ರಭಾವ ಕಂಡುಬರಬಹುದು. ನಿಮ್ಮ ರಾಶಿಗೆ ಇಂದು ಏನು ಫಲ? ಇಲ್ಲಿದೆ ಮೇಷದಿಂದ ಮೀನದವರೆಗೆ ಇಂದಿನ ಕನ್ನಡ ರಾಶಿಫಲ.

http://Visit : www.suddidina.com

ಮೇಷ ರಾಶಿ

ಇಂದು ಆತ್ಮವಿಶ್ವಾಸ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಬೆಳವಣಿಗೆ ಕಂಡುಬರುವ ಸಾಧ್ಯತೆ ಇದೆ. ಕುಟುಂಬದವರೊಂದಿಗೆ ಸಂತಸದ ಸಮಯ ಕಳೆಯುವಿರಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ವೃಷಭ ರಾಶಿ

ಕೆಲಸದ ಒತ್ತಡ ಹೆಚ್ಚಾಗಬಹುದು. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯುವುದು ಉತ್ತಮ. ಅನಿರೀಕ್ಷಿತ ಖರ್ಚು ಎದುರಾಗುವ ಸಾಧ್ಯತೆ ಇದೆ. ಸಂಗಾತಿ ಅಥವಾ ಆಪ್ತರೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಸಂಬಂಧ ಮತ್ತಷ್ಟು ಗಟ್ಟಿಯಾಗಲಿದೆ.

ಮಿಥುನ ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಲಿವೆ. ಉದ್ಯೋಗ ಅಥವಾ ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಬಹುದಿನಗಳಿಂದ ಬಾಕಿ ಉಳಿದಿದ್ದ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಪ್ರಯಾಣ ಮಾಡುವವರಿಗೆ ಅನುಕೂಲಕರ ದಿನ.

ಕಟಕ ರಾಶಿ

ಕುಟುಂಬದ ವಿಚಾರಗಳು ಇಂದು ಪ್ರಮುಖವಾಗಬಹುದು. ಕೆಲಸದಲ್ಲಿ ತಾಳ್ಮೆಯಿಂದ ಮುಂದುವರಿಯಿರಿ. ಹಣಕಾಸಿನ ವ್ಯವಹಾರಗಳಲ್ಲಿ ದಾಖಲೆಗಳನ್ನು ಪರಿಶೀಲಿಸಿ. ಪ್ರೀತಿಪಾತ್ರರೊಂದಿಗೆ ಉತ್ತಮ ಸಮಯ ಕಳೆಯುವಿರಿ.

ಸಿಂಹ ರಾಶಿ

ನಿಮ್ಮ ನಾಯಕತ್ವ ಗುಣ ಇಂದು ಗಮನ ಸೆಳೆಯಲಿದೆ. ವೃತ್ತಿಯಲ್ಲಿ ಹೊಸ ಜವಾಬ್ದಾರಿ ದೊರೆಯಬಹುದು. ಮೇಲಧಿಕಾರಿಗಳಿಂದ ಮೆಚ್ಚುಗೆ ಸಿಗುವ ಸಾಧ್ಯತೆ ಇದೆ. ಆತುರದ ನಿರ್ಧಾರಗಳನ್ನು ತಪ್ಪಿಸಿ.

ಕನ್ಯಾ ರಾಶಿ

ಇಂದು ಯೋಜಿತ ಕಾರ್ಯಗಳು ಯಶಸ್ಸಿನತ್ತ ಸಾಗಲಿವೆ. ಹಣದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಕೆಲಸದ ನಡುವೆ ವಿಶ್ರಾಂತಿಗೂ ಸಮಯ ನೀಡಿ. ಸ್ನೇಹಿತರೊಂದಿಗೆ ನಡೆಯುವ ಚರ್ಚೆ ಹೊಸ ಆಲೋಚನೆಗೆ ಕಾರಣವಾಗಬಹುದು.

ತುಲಾ ರಾಶಿ

ಸಂಬಂಧಗಳಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಲಿದೆ. ಉದ್ಯೋಗದಲ್ಲಿ ಉತ್ತಮ ಅವಕಾಶ ಎದುರಾಗಬಹುದು. ವ್ಯವಹಾರಸ್ಥರಿಗೆ ಲಾಭದಾಯಕ ದಿನವಾಗುವ ಸಾಧ್ಯತೆ ಇದೆ. ಅನಗತ್ಯ ಖರ್ಚುಗಳನ್ನು ನಿಯಂತ್ರಿಸುವುದು ಉತ್ತಮ.

ವೃಶ್ಚಿಕ ರಾಶಿ

ಇಂದು ಕೆಲವು ಸವಾಲುಗಳು ಎದುರಾಗಬಹುದು. ಆದರೆ ನಿಮ್ಮ ಪರಿಶ್ರಮದಿಂದ ಅವುಗಳನ್ನು ಎದುರಿಸಲು ಸಾಧ್ಯವಾಗಲಿದೆ. ಹಣಕಾಸಿನ ವಿಚಾರದಲ್ಲಿ ಯಾರಿಗೂ ಆತುರವಾಗಿ ಭರವಸೆ ನೀಡಬೇಡಿ. ಆರೋಗ್ಯದ ಕಡೆ ಗಮನ ಹರಿಸಿ.

ಧನು ರಾಶಿ

ಹೊಸ ಯೋಜನೆಗಳನ್ನು ಆರಂಭಿಸಲು ಅನುಕೂಲಕರ ದಿನ. ಉದ್ಯೋಗದಲ್ಲಿ ಪ್ರಗತಿಯ ಸೂಚನೆಗಳಿವೆ. ದೂರದ ಪ್ರಯಾಣದ ಯೋಗವಿದೆ. ಕುಟುಂಬದವರ ಬೆಂಬಲ ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಮಕರ ರಾಶಿ

ಕೆಲಸದಲ್ಲಿ ಹೆಚ್ಚಿನ ಜವಾಬ್ದಾರಿ ಬರಬಹುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ದೊರೆಯುವ ಸಾಧ್ಯತೆ ಇದೆ. ಹಣಕಾಸಿನ ಸ್ಥಿತಿ ಸುಧಾರಿಸಬಹುದು. ಹಿರಿಯರ ಸಲಹೆ ಉಪಯುಕ್ತವಾಗಲಿದೆ.

ಕುಂಭ ರಾಶಿ

ಇಂದು ಹೊಸ ಸಂಪರ್ಕಗಳು ಭವಿಷ್ಯದಲ್ಲಿ ಸಹಕಾರಿಯಾಗಬಹುದು. ಉದ್ಯೋಗದಲ್ಲಿ ಬದಲಾವಣೆ ಕುರಿತು ಯೋಚಿಸುತ್ತಿದ್ದರೆ ಎಚ್ಚರಿಕೆಯಿಂದ ನಿರ್ಧರಿಸಿ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರಲಿದೆ.

ಮೀನ ರಾಶಿ

ಮನಸ್ಸಿನಲ್ಲಿ ಹೊಸ ಉತ್ಸಾಹ ಮೂಡಲಿದೆ. ಸೃಜನಶೀಲ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ. ಪ್ರೀತಿ ಮತ್ತು ಕುಟುಂಬದ ವಿಚಾರಗಳಲ್ಲಿ ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ.

Continue Reading

ನಿತ್ಯ ಭವಿಷ್ಯ

ಆಗಸ್ಟ್ 27ರ ರಾಶಿಭವಿಷ್ಯ: ವೃತ್ತಿಯಿಂದ ಪ್ರೇಮದವರೆಗೆ ಇಂದು ನಿಮ್ಮ ದಿನ ಹೇಗಿರಲಿದೆ?

Published

on

august-29-2026-daily-horoscope-kannada-rashi-bhavishya

ಮೇಷದಿಂದ ಮೀನದವರೆಗೆ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿದೆ. ಉದ್ಯೋಗ, ವ್ಯವಹಾರ, ಶಿಕ್ಷಣ, ಕುಟುಂಬ, ಆರೋಗ್ಯ ಮತ್ತು ಪ್ರೇಮ ಜೀವನದಲ್ಲಿ ಇಂದು ಯಾವ ರಾಶಿಗೆ ಶುಭ? ಯಾರು ಎಚ್ಚರಿಕೆ ವಹಿಸಬೇಕು?

ಸುದ್ದಿದಿನ, ರಾಶಿಭವಿಷ್ಯ: 2026ರ ಆಗಸ್ಟ್ 27, ಗುರುವಾರದಂದು ಶ್ರಾವಣ ಮಾಸದ ಶುಕ್ಲ ಪಕ್ಷದ ದಶಮಿ ತಿಥಿ, ಜ್ಯೇಷ್ಠಾ ನಕ್ಷತ್ರದ ಪ್ರಭಾವವಿರುವ ಇಂದು ಚಂದ್ರನ ಸ್ಥಾನ ಮತ್ತು ಗ್ರಹಗಳ ಚಲನೆ ಹಲವು ರಾಶಿಗಳ ದಿನಚರಿಯಲ್ಲಿ ಬದಲಾವಣೆ ತರಬಹುದು. ಕೆಲವರಿಗೆ ವೃತ್ತಿ ಮತ್ತು ಹಣಕಾಸಿನ ವಿಚಾರದಲ್ಲಿ ಹೊಸ ಅವಕಾಶಗಳು ಎದುರಾಗುವ ಸಾಧ್ಯತೆಯಿದ್ದರೆ, ಇನ್ನು ಕೆಲವರು ಮಾತುಕತೆ ಹಾಗೂ ನಿರ್ಧಾರಗಳಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸುವುದು ಒಳಿತು.

ಪಂಚಾಂಗ: ಶ್ರೀ ಪರಾಭವ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ಗುರುವಾರ, ಶುಕ್ಲ ದಶಮಿ, ಜ್ಯೇಷ್ಠಾ ನಕ್ಷತ್ರ. ರಾಹುಕಾಲ ಮಧ್ಯಾಹ್ನ 1.58ರಿಂದ 3.31ರವರೆಗೆ, ಗುಳಿಕಕಾಲ ಬೆಳಿಗ್ಗೆ 9.15ರಿಂದ 10.48ರವರೆಗೆ ಹಾಗೂ ಯಮಗಂಡಕಾಲ ಬೆಳಿಗ್ಗೆ 6.08ರಿಂದ 7.41ರವರೆಗೆ.

http://Visit : www.suddidina.com

ಮೇಷ ರಾಶಿ

ಇಂದು ಕೆಲಸದಲ್ಲಿ ಚುರುಕು ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಜವಾಬ್ದಾರಿ ಸಿಗಬಹುದು. ವ್ಯವಹಾರದಲ್ಲಿ ನಿರ್ಧಾರ ಕೈಗೊಳ್ಳುವಾಗ ಆತುರ ಬೇಡ. ಕುಟುಂಬದಲ್ಲಿ ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ ಉಂಟಾಗಬಹುದು. ಪ್ರೇಮ ಜೀವನದಲ್ಲಿ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ. ಆರೋಗ್ಯದಲ್ಲಿ ದಣಿವು ಕಾಣಿಸಿಕೊಳ್ಳಬಹುದು.

ವೃಷಭ ರಾಶಿ

ಹಣಕಾಸಿನ ವಿಚಾರದಲ್ಲಿ ಇಂದು ಅನುಕೂಲಕರ ದಿನ. ಬಾಕಿ ಹಣ ಮರಳಿ ಬರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ ದೊರೆಯಬಹುದು. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಲಿದೆ. ಕುಟುಂಬದ ಹಿರಿಯರಿಂದ ಉತ್ತಮ ಸಲಹೆ ಸಿಗಲಿದೆ. ಅನಗತ್ಯ ಖರ್ಚಿಗೆ ಕಡಿವಾಣ ಹಾಕುವುದು ಒಳಿತು.

ಮಿಥುನ ರಾಶಿ

ಹೊಸ ಯೋಜನೆ ಆರಂಭಿಸಲು ದಿನ ಉತ್ತಮ. ವೃತ್ತಿಯಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ಅವಕಾಶ ದೊರೆಯಬಹುದು. ವ್ಯಾಪಾರಿಗಳಿಗೆ ಹೊಸ ಸಂಪರ್ಕಗಳು ಲಾಭ ತರಬಹುದು. ಪ್ರೇಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಉಂಟಾಗದಂತೆ ಎಚ್ಚರಿಕೆ ವಹಿಸಿ. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ.

ಕಟಕ ರಾಶಿ

ಕುಟುಂಬಕ್ಕೆ ಇಂದು ಹೆಚ್ಚಿನ ಸಮಯ ನೀಡುವಿರಿ. ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಹಣಕಾಸಿನಲ್ಲಿ ಸ್ಥಿರತೆ ಕಂಡುಬರಲಿದೆ. ವಿದ್ಯಾರ್ಥಿಗಳು ಪರಿಶ್ರಮದಿಂದ ಉತ್ತಮ ಫಲ ಪಡೆಯಬಹುದು. ಪ್ರೇಮ ಜೀವನದಲ್ಲಿ ಸಂತಸದ ಕ್ಷಣಗಳು ಸಿಗಲಿವೆ. ಆಹಾರ ಪದ್ಧತಿಯ ಬಗ್ಗೆ ಗಮನ ಕೊಡಿ.

ಸಿಂಹ ರಾಶಿ

ವೃತ್ತಿಜೀವನದಲ್ಲಿ ಮಹತ್ವದ ಬೆಳವಣಿಗೆ ಸಾಧ್ಯ. ನಿಮ್ಮ ಮಾತಿಗೆ ಗೌರವ ಸಿಗಲಿದೆ. ವ್ಯವಹಾರದಲ್ಲಿ ಹೊಸ ಅವಕಾಶ ಎದುರಾಗಬಹುದು. ಹಣದ ವಿಚಾರದಲ್ಲಿ ಲಾಭದ ಸೂಚನೆಗಳಿವೆ. ಕುಟುಂಬದಲ್ಲಿ ಶುಭ ಸುದ್ದಿ ಕೇಳಿಬರಬಹುದು. ಪ್ರೇಮ ಸಂಬಂಧದಲ್ಲಿ ಆತ್ಮೀಯತೆ ಹೆಚ್ಚಾಗಲಿದೆ.

ಕನ್ಯಾ ರಾಶಿ

ಕೆಲಸದ ವಿಚಾರದಲ್ಲಿ ಇಂದು ಯೋಜನೆ ರೂಪಿಸಿಕೊಂಡು ಮುಂದುವರಿಯಿರಿ. ಸಣ್ಣ ತಪ್ಪುಗಳು ಗೊಂದಲಕ್ಕೆ ಕಾರಣವಾಗಬಹುದು. ವಿದ್ಯಾರ್ಥಿಗಳಿಗೆ ಉತ್ತಮ ದಿನ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದವರೊಂದಿಗೆ ಮನಸ್ತಾಪವಾದರೆ ಮಾತಿನ ಮೂಲಕ ಪರಿಹರಿಸಿಕೊಳ್ಳಿ. ಆರೋಗ್ಯದಲ್ಲಿ ವಿಶ್ರಾಂತಿಗೆ ಆದ್ಯತೆ ನೀಡಿ.

ತುಲಾ ರಾಶಿ

ಇಂದು ಅದೃಷ್ಟ ನಿಮ್ಮ ಪರವಾಗಿರುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರಬಹುದು. ವ್ಯವಹಾರದಲ್ಲಿ ಹೊಸ ಒಪ್ಪಂದದ ಅವಕಾಶ ಸಿಗಬಹುದು. ಹಣಕಾಸಿನ ಸ್ಥಿತಿ ಸುಧಾರಿಸಲಿದೆ. ಪ್ರೇಮ ಜೀವನದಲ್ಲಿ ಸಂತೋಷ ಹೆಚ್ಚಾಗಲಿದೆ. ಕುಟುಂಬದವರಿಂದ ಬೆಂಬಲ ದೊರೆಯಲಿದೆ.

ವೃಶ್ಚಿಕ ರಾಶಿ

ಭಾವನಾತ್ಮಕ ನಿರ್ಧಾರಗಳನ್ನು ತಪ್ಪಿಸುವುದು ಉತ್ತಮ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ ಬರಬಹುದು. ಹಣಕಾಸಿನಲ್ಲಿ ಅನಿರೀಕ್ಷಿತ ಖರ್ಚು ಎದುರಾಗಬಹುದು. ವ್ಯವಹಾರಿಗಳು ದಾಖಲೆಗಳನ್ನು ಪರಿಶೀಲಿಸಿ ಮುಂದುವರಿಯಿರಿ. ಸಂಬಂಧಗಳಲ್ಲಿ ಅನುಮಾನಕ್ಕೆ ಅವಕಾಶ ಕೊಡಬೇಡಿ. ಆರೋಗ್ಯದಲ್ಲಿ ಒತ್ತಡ ಕಡಿಮೆ ಮಾಡಿಕೊಳ್ಳಿ.

ಧನು ರಾಶಿ

ಹೊಸ ಅವಕಾಶಗಳು ನಿಮ್ಮ ಗಮನ ಸೆಳೆಯಲಿವೆ. ಉದ್ಯೋಗ ಬದಲಾವಣೆಯ ಬಗ್ಗೆ ಯೋಚಿಸುತ್ತಿದ್ದರೆ ವಿಚಾರಿಸಿ ಮುಂದುವರಿಯಿರಿ. ವ್ಯಾಪಾರದಲ್ಲಿ ಪ್ರಗತಿ ಸಾಧ್ಯ. ವಿದ್ಯಾರ್ಥಿಗಳಿಗೆ ಶುಭ ಫಲಿತಾಂಶ ಸಿಗಬಹುದು. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಪ್ರೇಮ ಜೀವನದಲ್ಲಿ ಉತ್ತಮ ಸಂವಹನ ಮೂಡಲಿದೆ.

ಮಕರ ರಾಶಿ

ಕೆಲಸದಲ್ಲಿ ನಿಧಾನಗತಿಯ ಅನುಭವವಾಗಬಹುದು, ಆದರೆ ಪರಿಶ್ರಮ ವ್ಯರ್ಥವಾಗುವುದಿಲ್ಲ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಹೊಸ ಹೂಡಿಕೆ ಮಾಡುವ ಮೊದಲು ಪರಿಶೀಲಿಸಿ. ಕುಟುಂಬದವರ ಸಲಹೆ ಉಪಯುಕ್ತವಾಗಲಿದೆ. ಪ್ರೇಮ ವಿಚಾರದಲ್ಲಿ ತಾಳ್ಮೆ ಮುಖ್ಯ. ಆರೋಗ್ಯಕ್ಕೆ ವಿಶ್ರಾಂತಿ ನೀಡಿ.

ಕುಂಭ ರಾಶಿ

ಇಂದು ಸೃಜನಶೀಲತೆ ಹೆಚ್ಚಾಗಲಿದೆ. ಉದ್ಯೋಗದಲ್ಲಿ ಹೊಸ ಆಲೋಚನೆಗಳನ್ನು ಮೆಚ್ಚುವ ಸಾಧ್ಯತೆ ಇದೆ. ವ್ಯವಹಾರದಲ್ಲಿ ಸಂಪರ್ಕಗಳು ಲಾಭ ತರಬಹುದು. ಹಣಕಾಸಿನಲ್ಲಿ ಉತ್ತಮ ಬೆಳವಣಿಗೆ ಕಂಡುಬರಬಹುದು. ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ. ಸಂಗಾತಿಯೊಂದಿಗೆ ಸಂತಸದ ಸಮಯ ಕಳೆಯುವಿರಿ.

ಮೀನ ರಾಶಿ

ಇಂದು ಮನಸ್ಸಿನಲ್ಲಿ ಗೊಂದಲವಿದ್ದರೂ ದಿನ ಮುಂದುವರಿದಂತೆ ಪರಿಸ್ಥಿತಿ ಸುಧಾರಿಸಲಿದೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಹಣದ ವಿಚಾರದಲ್ಲಿ ಎಚ್ಚರಿಕೆ ವಹಿಸಿ. ಕುಟುಂಬದಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗಲಿದೆ. ಪ್ರೇಮ ಜೀವನದಲ್ಲಿ ಹಳೆಯ ಸಮಸ್ಯೆ ಪರಿಹಾರವಾಗಬಹುದು. ಆರೋಗ್ಯದ ಕಡೆ ಗಮನ ಅಗತ್ಯ.

ಒಟ್ಟಾರೆಯಾಗಿ ಇಂದು ಕೆಲವು ರಾಶಿಗಳಿಗೆ ವೃತ್ತಿ ಮತ್ತು ಹಣಕಾಸಿನಲ್ಲಿ ಪ್ರಗತಿಯ ಸೂಚನೆಗಳಿದ್ದರೆ, ಇನ್ನೂ ಕೆಲವು ರಾಶಿಗಳಿಗೆ ತಾಳ್ಮೆ ಮತ್ತು ಎಚ್ಚರಿಕೆ ಮುಖ್ಯವಾಗಲಿದೆ. ಜ್ಯೋತಿಷ್ಯ ಫಲಗಳು ಸಾಮಾನ್ಯ ನಂಬಿಕೆಗಳ ಆಧಾರಿತವಾಗಿದ್ದು, ವೈಯಕ್ತಿಕ ಜಾತಕದ ಆಧಾರದ ಮೇಲೆ ಫಲಿತಾಂಶಗಳು ಬದಲಾಗಬಹುದು.

Continue Reading

ಅಂಕಣ

ದೀಪಾವಳಿ ವಿಶೇಷಾಂಕ | ದೇವನಗರಿ ಸುದ್ದಿದಿನ ಪತ್ರಿಕೆಯಿಂದ ಕತೆ- ಕವಿತೆ- ಲೇಖನ- ರೂಪದರ್ಶಿ ಫೋಟೋ ಗಳಿಗೆ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ: ಪ್ರಿಯ ಓದುಗರೆ, ಬೆಳಕಿನ ಹಬ್ಬ ದೀಪಾವಳಿಯ ಪ್ರಯುಕ್ತ ದೇವನಗರಿ ಸುದ್ದಿದಿನ – ಕನ್ನಡ ದಿನ ಪತ್ರಿಕೆ ಹಾಗೂ ಶ್ಯಾಮ್ ಪ್ರಕಾಶನದವತಿಯಿಂದ ‘ ದೀಪಾವಳಿ ವಿಶೇಷಾಂಕ’-2026ನ್ನು ತರಲಾಗುತ್ತಿದೆ.

ಈ‌ ಹಿನ್ನೆಲೆಯಲ್ಲಿ ದೀಪಾವಳಿ ವಿಷೇಶಾಂಕ 2026ರ ವಿಭಾಗಕ್ಕೆ ಕತೆ, ಕವಿತೆ ಹಾಗೂ ಲೇಖನ ಹಾಗೂ ರೂಪದರ್ಶಿಗಳ ಛಾಯಾಚಿತ್ರಗಳನ್ನು ಆಹ್ವಾನಿಸಿದ್ದೇವೆ.

ಕತೆ – ಕವಿತೆಗಳನ್ನು ಕಳುಹಿಸಲು ಇರುವ ನಿಯಮಗಳು

ಕತೆ/ಕವಿತೆ ಸ್ವತಂತ್ರ ರಚನೆಯಾಗಿರಬೇಕು. ಈ ಮೊದಲು ಯಾವ ಮಾಧ್ಯಮಗಳಲ್ಲಿಯೂ ಪ್ರಕಟ ಅಥವಾ ಪ್ರಸಾರ ಆಗಿರಬಾರದು.

ಕತೆ 1500 ಸಾವಿರ ಪದಗಳ ಮಿತಿಯಲ್ಲಿರಲಿ. ಕವಿತೆಗೆ 40 ಸಾಲಿನ ಮಿತಿಯಿರಲಿ, ನುಡಿ ಅಥವಾ ಬರಹ ತಂತ್ರಾಂಶದಲ್ಲಿ ಇಲ್ಲವೆ ಯೂನಿಕೋಡ್‌ನಲ್ಲಿ ಇರಬೇಕು. ವಯಸ್ಸಿನ ಮಿತಿ ಇರುವುದಿಲ್ಲ.

ಕತೆ/ಕವಿತೆ ಇರುವ ಪುಟದಲ್ಲಿ ಹೆಸರು, ವಿವರ ಬರೆಯುವಂತಿಲ್ಲ. ಪ್ರತ್ಯೇಕ ಪುಟದಲ್ಲಿ ಹೆಸರು, ಅಂಚೆ ವಿಳಾಸ, ಮೊಬೈಲ್ ನಂಬರ್, ಇ-ಮೇಲ್ ವಿಳಾಸ ಒದಗಿಸಬೇಕು.

ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ವರ್ಣಮಯ ಭಾವಚಿತ್ರದೊಂದಿಗೆ 100 ಪದಗಳ ಒಳಗೆ ಕಿರು ಪರಿಚಯ ಕಳುಹಿಸಬೇಕು.

ಸ್ಪರ್ಧೆಗೆ ಕಳುಹಿಸಿರುವ ಬರಹಗಳನ್ನು ಹಿಂದಿರುಗಿಸುವುದಿಲ್ಲ. ಬರಹಗಳು ಕಡ್ಡಾಯವಾಗಿ ಎಂಎಸ್ ವರ್ಡ್ ಫೈಲ್ (MS word File) ನಲ್ಲಿರಲಿ.

ಬರಹ ಮತ್ತು ಫೋಟೋಗಳನ್ನು ಇ-ಮೇಲ್ ಮೂಲಕವಷ್ಟೇ ಕಳಿಸಿ.

ತೀರ್ಪುಗಾರರ ತೀರ್ಮಾನವೇ ಅಂತಿಮ.

ಲೇಖನಗಳಿಗೆ ಆಹ್ವಾನ : ವೈಚಾರಿಕತೆ, ವಿಮರ್ಶೆ, ಕಾನೂನು, ಸಾಹಿತ್ಯ, ತಂತ್ರಜ್ಞಾನ, ವಿಜ್ಞಾನ, ಡಿಜಿಟಲ್ ಮಾಧ್ಯಮ, ಸಿನೆಮಾ, ಪ್ರೇಮಪತ್ರ, ಕೃಷಿ, ರಾಜಕೀಯ, ಕಲೆ, ಆರೋಗ್ಯ, ಪ್ರವಾಸ, ಅಡುಗೆ, ಫೋಟೋಗ್ರಫಿ, ವೈಲ್ಡ್ ಲೈಫ್, ಹಾಸ್ಯ ಕುರಿತಾದ ಲೇಖನಗಳನ್ನು 450 ಪದಗಳನ್ನು ಮೀರದಂತೆ ಬರೆದು ಕಳುಹಿಸಿ.

ಹಾಗೆಯೇ, ವಿಶೇಷಾಂಕದ ಮುಖಪುಟದ ರೂಪದರ್ಶಿಯಾಗಲು ಅವಕಾಶವನ್ನು ಕಲ್ಪಸಿಲಾಗಿದೆ. ಆಸಕ್ತ ರೂಪದರ್ಶಿಗಳು ಸ್ಟುಡಿಯೋ ಅಥವಾ ಫೋಟೋಗ್ರಾಫರ್ ಮೂಲಕ ತೆಗೆದ ‘6*4 ಅಳತೆಯ ಮುದ್ರಿತ ಫೋಟೋ ಮತ್ತು ಇ-ಮೇಲ್ ಮೂಲಕವೂ ಕಳಿಸಬಹುದು. 80 ಪದಗಳಮಿತಿಯೊಳಗೆ ನಿಮ್ಮ ಪರಿಚಯದೊಂದಿಗೆ, ಒಬ್ಬರು 4 ಫೋಟೋ ಕಳುಹಿಸಬೇಕು. ವಯಸ್ಸಿನ ಮಿತಿಯಿಲ್ಲ ಇರುವುದಿಲ್ಲ.

ಕತೆಯ ವಿಜೇತರಿಗೆ ಪ್ರಥಮ ಬಹುಮಾನ : 10000, ದ್ವಿತೀಯ ಬಹುಮಾನ : 5000, ತೃತೀಯ ಬಹುಮಾನ : 3000 ಹಾಗೂ ಕವಿತೆ ಬಹುಮಾನ ವಿಜೇತರಿಗೆ ಪ್ರಥಮ ಬಹುಮಾನ : 5000 ದ್ವಿತೀಯ ಬಹುಮಾನ : 3000 ಹಾಗೂ ತೃತೀಯ ಬಹುಮಾನ : ₹2000 ಸಿಗಲಿದೆ.

ಆಗಸ್ಟ್‌ 30ರೊಳಗೆ ಬರಹಗಳನ್ನು ಇ-ಮೇಲ್‌: deepasuddidina@gmail.com ಗೆ ಕಳುಹಿಸಲು ತಿಳಿಸಿದೆ. ಈ ಕುರಿತು ಹೆಚ್ಚಿನ ಮಾಹಿತಿಗಾಗಿ :9980346243 ಹಾಗೂ visit: www.suddidina.com ಅನ್ನು ವೀಕ್ಷಿಸಬಹುದಾಗಿದೆ.

ಕಚೇರಿ ವಿಳಾಸ 

ದೇವನಗರಿ ಸುದ್ದಿದಿನ- ಕನ್ನಡ ದಿನ ಪತ್ರಿಕೆ
ದೀಪಾವಳಿ ವಿಶೇಷಾಂಕ ವಿಭಾಗ
#3231/1, ಸಂಜೀವ ಸದನ, 11ನೇ ಮುಖ್ಯರಸ್ತೆ, 4 ನೇ ಅಡ್ಡರಸ್ತೆ, ಎಂಸಿಸಿ ಬಿ ಬ್ಲಾಕ್, ದಾವಣಗೆರೆ, 577004

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ದಿನದ ಸುದ್ದಿ12 hours ago

ಬೆಂಗಳೂರು ಜಲಸಂಚಾರಕ್ಕೆ ಹೊಸ ವೇಗ: ಬಿನ್ನಿಗಾನಹಳ್ಳಿ-ಬೈಯಪ್ಪನಹಳ್ಳಿ ನಡುವೆ 65 ಕಿ.ಮೀ. ನೀರು ಮಾರ್ಗ!

ಸುದ್ದಿದಿನ,ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆ ಬಂದಾಗಲೆಲ್ಲಾ ಎದುರಾಗುವ ನೀರು ನಿಲ್ಲುವಿಕೆ ಹಾಗೂ ಪ್ರವಾಹದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾಂತ್ರಿಕ ಕ್ರಮಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಭಾಗವಾಗಿ...

bengaluru-koodlugate-snn-raj-eternia-18-floor-building-demolition bengaluru-koodlugate-snn-raj-eternia-18-floor-building-demolition
ದಿನದ ಸುದ್ದಿ12 hours ago

ಬೆಂಗಳೂರು ಕಟ್ಟಡ ತೆರವು ಕಾರ್ಯಾಚರಣೆ: 18 ಅಂತಸ್ತಿನ ಅಪಾರ್ಟ್‌ಮೆಂಟ್‌ಗೆ ‘ಡೆಮಾಲಿಷನ್’ ಶುರು!

ಕೂಡ್ಲುಗೇಟ್‌ನ ಎಸ್‌ಎನ್‌ಎನ್‌ ರಾಜ್‌ ಎಟರ್ನಿಯಾ ಸಂಕೀರ್ಣದ 49 ಫ್ಲ್ಯಾಟ್‌ಗಳ ತೆರವು; ₹200 ಕೋಟಿ ವೆಚ್ಚದ ಕಟ್ಟಡಕ್ಕೆ ಹೊಸ ರೂಪ ಸುದ್ದಿದಿನ,ಬೆಂಗಳೂರು: ನಗರದ ಪ್ರಮುಖ ವಸತಿ ಯೋಜನೆಗಳಲ್ಲಿ ಒಂದಾಗಿರುವ...

kalaburagi-municipal-corporation-mayor-deputy-mayor-election-congress-win kalaburagi-municipal-corporation-mayor-deputy-mayor-election-congress-win
ದಿನದ ಸುದ್ದಿ12 hours ago

ಕಲಬುರಗಿ ಪಾಲಿಕೆಯಲ್ಲಿ ಮತ್ತೆ ಕಾಂಗ್ರೆಸ್ ಮೇಲುಗೈ: ಮೇಯರ್‌-ಉಪ ಮೇಯರ್ ಸ್ಥಾನವೂ ‘ಕೈ’ ತೆಕ್ಕೆಗೆ!

ಸುದ್ದಿದಿನ,ಕಲಬುರಗಿ: ಇಲ್ಲಿನ ಮಹಾನಗರ ಪಾಲಿಕೆಯ 24ನೇ ಅವಧಿಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆ. ತೀವ್ರ ಕುತೂಹಲ ಕೆರಳಿಸಿದ್ದ ಚುನಾವಣೆಯಲ್ಲಿ ಕಾಂಗ್ರೆಸ್...

ravichandran-political-entry-dk-shivakumar-mlc-nomination ravichandran-political-entry-dk-shivakumar-mlc-nomination
ದಿನದ ಸುದ್ದಿ12 hours ago

ರಾಜಕೀಯಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಎಂಟ್ರಿ? ಡಿಕೆಶಿ ಭೇಟಿಯ ಹಿಂದೆ ಇದೆ ‘ಕೈ’ ಲೆಕ್ಕ!

ಸಿಎಂ ಡಿಕೆ ಶಿವಕುಮಾರ್ ಭೇಟಿ ಬಳಿಕ ಹೆಚ್ಚಿದ ಕುತೂಹಲ; ವಿಧಾನ ಪರಿಷತ್‌ಗೆ ನಾಮನಿರ್ದೇಶನದ ಚರ್ಚೆ ಸುದ್ದಿದಿನ,ಬೆಂಗಳೂರು: ಸ್ಯಾಂಡಲ್‌ವುಡ್‌ನ ಹಿರಿಯ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಕ್ರೇಜಿಸ್ಟಾರ್ ರವಿಚಂದ್ರನ್...

ದಿನದ ಸುದ್ದಿ12 hours ago

ರಸ್ತೆ ನಿಯಮ ಉಲ್ಲಂಘನೆಗೆ ಬ್ರೇಕ್ ಯಾವಾಗ? 4 ವರ್ಷದಲ್ಲಿ 5.67 ಕೋಟಿ ಪ್ರಕರಣ, ₹2,361 ಕೋಟಿ ದಂಡ ಸಂಗ್ರಹ!

ಸುದ್ದಿದಿನ,ಬೆಂಗಳೂರು: ರಾಜ್ಯದಲ್ಲಿ ವಾಹನ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಆತಂಕಕಾರಿ ಪ್ರಮಾಣದಲ್ಲಿ ದಾಖಲಾಗುತ್ತಿವೆ. ರಸ್ತೆ ಸುರಕ್ಷತೆ ಕುರಿತು ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೂ, ನಿಯಮ ಉಲ್ಲಂಘನೆಗೆ...

janardhana-reddy-attacks-b-nagendra-valmiki-scam-ballari-political-war janardhana-reddy-attacks-b-nagendra-valmiki-scam-ballari-political-war
ದಿನದ ಸುದ್ದಿ12 hours ago

ವಾಲ್ಮೀಕಿ ಹಗರಣದ ಕಿಡಿ ಮತ್ತೆ ಬಳ್ಳಾರಿಯಲ್ಲಿ: ನಾಗೇಂದ್ರ ವಿರುದ್ಧ ಜನಾರ್ಧನ ರೆಡ್ಡಿ ವಾಗ್ದಾಳಿ, ಕಾಂಗ್ರೆಸ್‌ಗೆ ರಾಜೀನಾಮೆ ಸವಾಲು!

ಸುದ್ದಿದಿನ, ಬಳ್ಳಾರಿ: ಬಳ್ಳಾರಿಯಲ್ಲಿ ರಾಜಕೀಯ ವಾಕ್ಸಮರ ಮತ್ತೊಮ್ಮೆ ತೀವ್ರಗೊಂಡಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣವನ್ನು ಮುಂದಿಟ್ಟುಕೊಂಡು ಮಾಜಿ ಸಚಿವ ಬಿ. ನಾಗೇಂದ್ರ ವಿರುದ್ಧ ಮಾಜಿ...

bengaluru-strr-ring-road-traffic-relief-40-percent-reduction bengaluru-strr-ring-road-traffic-relief-40-percent-reduction
ದಿನದ ಸುದ್ದಿ16 hours ago

ಬೆಂಗಳೂರಿನ ಟ್ರಾಫಿಕ್‌ಗೆ ಬಿಗ್ ರಿಲೀಫ್‌! ವರ್ಷಾಂತ್ಯಕ್ಕೆ STRR ಸಂಚಾರ ಮುಕ್ತ: ನಗರ ದಟ್ಟಣೆ ಶೇ.40ರಷ್ಟು ಇಳಿಕೆ ನಿರೀಕ್ಷೆ

ಸುದ್ದಿದಿನ,ಬೆಂಗಳೂರು: ಬೆಂಗಳೂರು ನಗರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವಂತೆ ವಾಹನ ದಟ್ಟಣೆಯ ಸಮಸ್ಯೆಯೂ ಹೆಚ್ಚುತ್ತಿದೆ. ಅದರಲ್ಲೂ ಹೊರರಾಜ್ಯಗಳಿಂದ ನಗರವನ್ನು ದಾಟಿ ಸಾಗುವ ಭಾರಿ ವಾಹನಗಳು ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರದ...

toxic-movie-kichcha-sudeepa-supports-yash-negative-reviews toxic-movie-kichcha-sudeepa-supports-yash-negative-reviews
ದಿನದ ಸುದ್ದಿ16 hours ago

ವಿಭಿನ್ನ ಪ್ರಯೋಗಕ್ಕೆ ಸುದೀಪ್‌ ಫಿದಾ; ‘ಟಾಕ್ಸಿಕ್’ ವಿರುದ್ಧದ ಟೀಕೆಗಳ ನಡುವೆ ಯಶ್‌ಗೆ ಭರ್ಜರಿ ಬೆಂಬಲ

ಸುದ್ದಿದಿನ,ಸಿನಿಮಾ: ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ ಬಿಡುಗಡೆಯಾದ ಬಳಿಕ ನಿರೀಕ್ಷೆಗಿಂತ ಹೆಚ್ಚಾಗಿ ಚರ್ಚೆ ಮತ್ತು ಟೀಕೆಗೆ ಕಾರಣವಾಗಿದೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಹಾಗೂ ಗೀತು...

ದಿನದ ಸುದ್ದಿ16 hours ago

ಶನಿವಾರ ಕಲಬುರಗಿ ಪಾಲಿಕೆಯ ಹೊಸ ಮೇಯರ್‌, ಉಪ ಮೇಯರ್‌ ಆಯ್ಕೆ: ಯಾರಿಗೆ ಒಲಿಯಲಿದೆ ಅಧಿಕಾರದ ಪಟ್ಟ?

ಸುದ್ದಿದಿನ, ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪ ಮೇಯರ್‌ ಚುನಾವಣೆಗೆ ಕೊನೆಗೂ ಮುಹೂರ್ತ ಫಿಕ್ಸ್‌ ಆಗಿದೆ. ಶನಿವಾರ ನಡೆಯಲಿರುವ ಚುನಾವಣೆಯಲ್ಲಿ ಮೇಯರ್‌ ಸ್ಥಾನವನ್ನು ಬಿಸಿಎ ವರ್ಗಕ್ಕೆ...

ದಿನದ ಸುದ್ದಿ17 hours ago

ಹೆದ್ದಾರಿಯಲ್ಲಿ ಹಾಲಿನ ಹೊಳೆ! ಪಲ್ಟಿಯಾದ ನಂದಿನಿ ಟ್ಯಾಂಕರ್‌ನಿಂದ 21 ಸಾವಿರ ಲೀಟರ್ ಹಾಲು ರಸ್ತೆಗೆ

ತುಮಕೂರು: ಸಾಮಾನ್ಯವಾಗಿ ಮಳೆ ಬಂದಾಗ ರಸ್ತೆಯಲ್ಲಿ ನೀರು ಹರಿಯುವುದನ್ನು ನೋಡುತ್ತೇವೆ. ಆದರೆ ತುಮಕೂರಿನ ಶಿರಾ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ನಡೆದ ಘಟನೆ ಮಾತ್ರ ವಿಭಿನ್ನ. ಇಲ್ಲಿ ನೀರಿನ ಬದಲು...

Trending