Connect with us

ದಿನದ ಸುದ್ದಿ

ಪ್ರಬುದ್ಧರೆನ್ನುವ ಪ್ರಭುಗಳಿಗೆ ಅತೀವ ನಮನ..!

Published

on

ಹರ್ಷಿತಾ ಕೆರೆಹಳ್ಳಿ
  • ಹರ್ಷಿತಾ ಕೆರೆಹಳ್ಳಿ

ಅದೆಷ್ಟೇ ತಪ್ಪಿಸಿದರೂ ಬೆಂಬಿಡದೆ ಬೆನ್ನೆತ್ತಿದೆ ಈ ವಿಚಾರ. ಸ್ವಚ್ಛಂದ ಆಕಾಶ, ನಿರ್ಮಲ ಗಾಳಿ, ಶುದ್ಧ ಜಲ, ಇರಲೊಂದು ಗೂಡು, ಬಂಧು ಮಿತ್ರರ ಒಡನಾಟ, ನಮ್ಮವರು , ತಮ್ಮವರು ಎಂಬ ವಿಶ್ವಾಸ ಎಲ್ಲವು ಸುಗಮವಾಗಿ ಸಾಗುತ್ತಲೇ ಇತ್ತು. ಅದೆಲ್ಲಿಂದ ಬಂದಿತೋ? ಮಹಾಮಾರಿ. ತಂಬೆಲರು ತುಳುಕುವ ಜಾಗದಲ್ಲೆಲ್ಲಾ ನೋವ ಹನಿ, ಜೀವ ಹಾನಿ. ಬೇಡೆಂದರು ಬಿಡುತ್ತಿಲ್ಲ ಸಾಕೆಂದರು ನಿಲ್ಲುತ್ತಿಲ್ಲ ಆಕ್ರಂದನ.

ಹಳ್ಳಿಯ ಜೀವನ ನೆಮ್ಮದಿಯ ಜೀವನ, ಅದೊಂದು ಸ್ವರ್ಗವೇ ಸರಿ ಎಂಬಂತಿದ್ದ ದಿನ ಈಗ ಮರುಭೂಮಿಯಂತಾಗಿದೆ. ಇಲ್ಲಿನ ಹಾಡು , ಹರಟೆ ,ಮೋಜು ಎಲ್ಲವು ಮುಸುಕು ಹಾಕಿಕೊಂಡು ತಮ್ಮ ತಮಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿಕೊಂಡಿರುವಂತೆ ಭಾಸವಾಗುತ್ತಿದೆ.

ಚಂದದೊಂದು ಸಂಸಾರ ಹೆಂಡತಿ, ಗಂಡ, ಇಬ್ಬರು ಮಕ್ಕಳು. ದಿಢೀರನೆ ಕರೋನ ಎಂಬ ಬರಸಿಡಿಲು ಆ ಸಂಸಾರಕ್ಕೆ ಬಡಿದಾಗ ಮನಸ್ಸೇ ಅಯೋಮಯವಾದಂತಾಯಿತು. ಮೊದಲು ಅಷ್ಟೇನು ಸ್ಥಿತಿ ಗಂಭೀರವಾಗಿರಲಿಲ್ಲ ಏಕೆಂದರೆ ಆ ವ್ಯಕ್ತಿಗೆ ಯಾವುದೇ ಬೇರೆ ರೀತಿಯ ಖಾಯಿಲೆಯಾಗಲಿ, ತೊಂದರೆಯಾಗಲಿ ಇರಲಿಲ್ಲ. ಮೂರು ದಿನ ಚಿಕಿತ್ಸೆ ಪಡೆದು ಮೊದಲಿನಂತೆ ಹಿಂತಿರುಗಿ ಬಂದರು.

ಧಡಕ್ಕನೆ ಅದೇ ರಾತ್ರಿ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲತೊಡಗಿದರು ತಕ್ಷಣವೇ ಅವರನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದರು. ಆ ವ್ಯಕ್ತಿಗೆ ಅದೇನು ನೋವೋ ಏನೋ? ತಿಳಿಯದು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗುತ್ತಿರಲಿಲ್ಲವೆಂದು ನನ್ನ ಭಾವನೆ. ಕೃತಕ ಉಸಿರಾಟದ ವ್ಯವಸ್ಥೆಯಿದ್ದರೂ ಅವರ ಸ್ಥಿತಿ ಗಂಭೀರವಾಗಿಯೇ ಇದೆ. ಅದೆಷ್ಟೋ ದಿನಗಳು ಆಸ್ಪತ್ರೆಯಲ್ಲಿ ಕಳೆಯಿತು. ದಿಢೀರನೆ ಆಸ್ಪತ್ರೆಯಿಂದ ಕರೆ ಬಂದಿತು.

ನಿಮ್ಮ ಮನೆಯವರಿಗೆ ಚಿಕಿತ್ಸೆ ಫಲಿಸುತ್ತಿಲ್ಲ , ಸ್ಥಿತಿ ಚಿಂತಾಜನಕವಾಗಿದೆ ತಕ್ಷಣವೇ ಪ್ಲಾಸ್ಮ ಬೇಕಾಗಿದೆ ಶೀಘ್ರವಾಗಿ ವ್ಯವಸ್ಥೆ ಮಾಡಿಕೊಳ್ಳಿ ಎಂದು ಹೇಳಿದರು.
ಪಾಪ! ಆ ವ್ಯಕ್ತಿಯ ಹೆಂಡತಿಗೆ ದಿಕ್ಕೇ ತೋಚದಂತಾಗಿ ಗೋಳಾಡಲಾರಂಭಿಸಿದರು. ನಿಜಕ್ಕೂ ಆ ಸ್ಥಿತಿ ಯಾರಿಗೂ ಬರಬಾರದೆಂದಷ್ಟೇ ಕೇಳಿಕೊಳ್ಳಲು ಸಾಧ್ಯವಾಗಿದ್ದು, ಏಕೆಂದರೆ ಎಷ್ಟೇ ಸಮಾಧಾನದ ಮಾತು ಅವರ ಜೀವ ಉಳಿಸಲು ಸಾಧ್ಯವಾಗದು. ಪರಿಸ್ಥಿತಿ ಬಿಗುಡಾಯಿಸುತ್ತಲೇ ಇದೆ ಆದರೆ ಪ್ಲಾಸ್ಮಾದ ವ್ಯವಸ್ಥೆ ಆಗುತ್ತಿಲ್ಲ .

ನಾನು ಎಲ್ಲರನ್ನು ಸಂಪರ್ಕಿಸಿದೆ ಆದರೆ ಎಲ್ಲರಿಂದಲೂ ಬಂದ ಉತ್ತರ ಒಂದೇ. ಇಲ್ಲ ಮೇಡಂ ನಮ್ಮ ಮನೆಯವರಿಗೆ ಬೇಕು, ನಮ್ಮ ಸ್ನೇಹಿತರಿಗೆ ಬೇಕು ಕೊಡಲಾಗುವುದಿಲ್ಲವೆಂದು. ಆ ತಾಯಿಯ ರೋಧನೆ ನೋಡಲಾಗುತ್ತಿಲ್ಲ . ಅವರ ಮಕ್ಕಳಿಗಂತೂ ಇದರ ಪರಿವೇ ಇಲ್ಲ . ಆಟವಾಡುವ ವಯಸ್ಸು ಅವಕ್ಕೆ. ಆಗ ನನಗನಿಸಿದ್ದು ಇಷ್ಟೇ . ಎಲ್ಲಿಯ ಜೀವನ? ಎಲ್ಲಿಯ ಹಣ? ಎಲ್ಲಿಯ ಸೌಂದರ್ಯ? ಎಲ್ಲವು ಶೂನ್ಯ. ಜೀವ ಉಳಿಸಲಾಗದ ನಿಧಿ ಇದ್ದರೇನು? ಜೀವಕ್ಕೆ ಬೆಲೆಯೆ ಇಲ್ಲ.

ಹೇಗೋ ದೇವರ ನಿಮಿತ್ತವೋ ಏನೋ ಅವರ ತೊಳಲಾಟಕ್ಕೆ ಮರುಗಿಯೋ ಏನೋ ಪ್ಲಾಸ್ಮ ದೊರಕಿತು. ಚಿಕಿತ್ಸೆ ಕೊಂಚ ಫಲಕಾರಿಯಾದಂತಾಗಿ ಅವರ ಮನೆಯವರೆಲ್ಲಾ ನಿಟ್ಟುಸಿರು ಬಿಟ್ಟರು. ಆದರೂ ಅವರಿನ್ನು ಸುಧಾರಿಸಿಲ್ಲ . ಆ ತಾಯಿಗೆ ಅಷ್ಟಾಗಿ ಪ್ರಪಂಚದ ಬಗ್ಗೆ ಅರಿವಿರಲಿಲ್ಲ ನಮಗೆ ಕರೆ ಮಾಡಿ ಏನದರೂ ಗೊತ್ತಾಯಿತ? ಡಿಸ್ಚಾರ್ಜ್ ಯಾವಾಗ? ಹೇಗಿದ್ದಾರೆ? ಎಂದು ಕೇಳಿದರೆ ಮನ ಕಲಕುವಂತಿರುತ್ತದೆ. ಆ ವ್ಯಕ್ತಿಯನ್ನು ಸಂಪರ್ಕಿಸಲು ಯಾವುದೇ ಮಾರ್ಗವಿಲ್ಲ . ನೋಡಿ ಎಂತಹ ಸ್ಥಿತಿ ತಮ್ಮವರಿಂದ ಸಾಂತ್ವಾನ ಕೇಳುವ ಭಾಗ್ಯ ಆ ವ್ಯಕ್ತಿಗಿಲ್ಲ. ಇಲ್ಲಿ ಹೆಂಡತಿಯ ತೊಳಲಾಟ ತಪ್ಪುತ್ತಿಲ್ಲ.

ಎಲ್ಲಿ ನೋಡಿದರೂ ಪಾಸಿಟಿವ್ ಕೇಸ್ಗಳು , ಸೀಲ್ಡೌನ್, ಕಂಟೈನ್ಮೆಂಟ್ ಜೋನ್ಗಳು . ಒಂದು ಕ್ಷಣ ಜೀವನವನ್ನೇ ತಬ್ಬಿಬ್ಬಾಗಿಸಿ ಬಿಡುತ್ತದೆ. ಇನ್ನೂ ಆ ಹೆಂಡತಿ ತನ್ನ ಗಂಡನ ದಾರಿಯನ್ನೇ ಎದುರು ನೋಡುತ್ತ ತನ್ನ ಆರೋಗ್ಯವನ್ನು ಹದಗೆಡಿಸಿಕೊಂಡಿದ್ದಾರೆ. ಇಂತಹ ಸ್ಥಿತಿ ನಿಮಗು ಎದುರಾಗಬಹುದು ನೀವು ನಿರ್ಲಕ್ಷ್ಯ ತೋರಿದರೆ. ಒಂದು ಕ್ಷಣ ಯೋಚಿಸಿ ಆ ಸ್ಥಿತಿ ನಿಮ್ಮದಾಗಿದ್ದರೇ? ನಿಮ್ಮ ಜೊತೆಗೆ ನಿಮ್ಮ ಮನೆಯವರ ಜೀವನವು ಹಾಳಾಗುತ್ತದೆ. ಒಮ್ಮೆಯಾದರೂ ನಿಮ್ಮವರ ಖುಷಿಗಾಗಿ ಒಳಿತು ಮಾರ್ಗದಲ್ಲಿ ನಡೆಯಿರಿ.

ಈ ಚಿಂತಾಜನಕ ಸ್ಥಿತಿಯಲ್ಲಿ ನಮ್ಮವರೆ ನಮ್ಮ ಬಳಿ ಬರಲು ಹಿಂಜರಿಯುತ್ತಾರೆ ಅಂತಹುದರಲ್ಲಿ ಯಾವುದೇ ರಕ್ತ ಸಂಬಂಧವಿಲ್ಲ , ಮಿತ್ರರಲ್ಲ. ತಮ್ಮ ಜೀವನವನ್ನು ಲೆಕ್ಕಿಸದೆ ತಮ್ಮವರಿಂದ ದೂರ ಸರಿದು ಹಗಲಿರುಳೆನ್ನದೆ ಅದೆಷ್ಟೋ ಸರ್ಕಾರಿ ನೌಕರರು ಹೊತ್ತೊತ್ತಿಗೆ ಊಟ, ತಿಂಡಿ, ನೀರು , ನಿದಿರೆ ಇಲ್ಲದೆ ಆಸ್ಪತ್ರೆ ಸಿಬ್ಬಂದಿಗಳು, ಆರಕ್ಷಕರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತೆಯರು, ಗ್ರಾಮ ಲೆಕ್ಕಿಗರು ಹೀಗೆ ಹಲವಾರು ಮಂದಿ ತಮ್ಮ ಜೀವದ ಹಂಗು ತೊರೆದು ನಮ್ಮಗಳ ಹಿತಕ್ಕಾಗಿ ಪರಿಶ್ರಮಿಸುತ್ತಿದ್ದಾರೆ.

ಅದೆಲ್ಲ ಒಂದೆಡೆಯಾದರೆ ದೇಶಕ್ಕಾಗಿ ನೆತ್ತರನ್ನು ಲೆಕ್ಕಿಸದೆ ಮಳೆ , ಬಿಸಿಲು, ಚಳಿ ಯೆನ್ನದೆ ದೇಶ ಕಾಯುವ ವೀರ ಯೋಧರಿಗೆಲ್ಲರಿಗು ಅನಂತ ಕೋಟಿ ನಮನ. ಅವರೆನಾದರೂ ನನ್ನಿಂದ ಆಗದು ದೇಶ ಕಾಯಲು ಎಂದು ಕೈ ಚೆಲ್ಲಿ ಕುಳಿತ್ತಿದ್ದರೆ ಈ ದಿನ ನಾವ್ಯಾರು ದಿನ ಉದಯಿಸೋ ಸೂರ್ಯನನ್ನ ನೋಡುವಂತಾಗುತ್ತಿರಲಿಲ್ಲ. ಅವರೆಲ್ಲರು ತಮ್ಮ ಮನೆಯವರಿಂದ ದೂರವಿದ್ದೂ, ಹೆಂಡತಿ , ಗಂಡ, ಮಕ್ಕಳು, ಅಪ್ಪ, ಅಮ್ಮ , ಬಂಧು ಬಳಗ, ಮಿತ್ರರೊಡನೆ ಕಾಲ ಕಳೆಯಲು ಸಮಯವಿಲ್ಲ.

ಆದರೆ ರಾಜ್ಯದ ಜನತೆಗೆಲ್ಲ ಜನತಾ ಕರ್ಫ್ಯೂ ಆದೇಶಿಸಿ ಎಲ್ಲರನ್ನೂ ಮನೆಯಲ್ಲಿಯೇ ಇದ್ದೂ ಕೊರೋನ ಸರಪಳಿಯನ್ನು ಮುರಿಯಲು ಸಹಕರಿಸೆಂದು ಬೇಡಿಕೊಳ್ಳುತ್ತಿದ್ದರು ಸಹ, ಈ ಜನತೆ ನನಗಲ್ಲ ಹೇಳುತ್ತಿರುವುದು ನನಗೂ ಅದಕ್ಕೂ ಸಂಬಂಧವೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾರೆ. ನಿಜಕ್ಕೂ ಈ ಘಟನೆಯನ್ನೂ ನೋಡಿದ ಬಳಿಕ ಕರುನಾಡ ಜನರ ಮೇಲಿದ್ದ ಪೂಜ್ಯ ಭಾವನೆ ಬೇಸರ ತರಿಸಿದೆ.

ನೀರು ಕೇಳಿದರೆ ಅಮೃತವನ್ನೇ ಕೊಡುತ್ತೇವೆಂದು ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಪಿಸುವ ಬದಲು ದಯಮಾಡಿ ದೇಶಕ್ಕಾಗಲಿ, ನಾಡಿಗಾಗಲಿ ಏನನ್ನು ಕೊಡದಿದ್ದರು ಸರಿಯೇ . ನಿಮ್ಮ ನಿಮ್ಮ ಮನೆಯಲ್ಲಿರಿ, ನಿಮ್ಮವರೊಂದಿಗೆ ಕಾಲ ಕಳೆಯಿರಿ. ಯಾರೊಬ್ಬರು ಕೊರೋನ ಪಾಸಿಟಿವ್ ರಿಪೋರ್ಟ್ ಕೊಡದಂತೆ ಸಹಕರಿಸಿ. ಇದು ನಿಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಂದು ಜೀವಕ್ಕೂ ಅಮೂಲ್ಯವಾದ ಬೆಲೆಯಿದೆ. ದಯಮಾಡಿ ನಿಮ್ಮ ಜೀವದ ಜೊತೆ ನಿಮ್ಮವರ ಜೀವವನ್ನು ಕಾಪಾಡಿ.

ಈ ಮುಂದಿನ ೧೫ ದಿನಗಳಲ್ಲಿ ಕಟ್ಟು ನಿಟ್ಟಾಗಿ ನಿಯಮ ಪಾಲನೆ ಮಾಡಿದ್ದೇ ಆಗಿದ್ದಲ್ಲಿ ಕೋರೋನ ಸರಪಳಿಯನ್ನೂ ಖಂಡಿತವಾಗಿಯೂ ಮುರಿಯುವಲ್ಲಿ ಯಶಸ್ವಿಯಾಗುತ್ತೇವೆ .
ನನ್ನ ಮಾತಿಗಾದರೂ ಬೇಡ ಕನಿಷ್ಠ ದೇಶಕಾಯುವ ಯೋಧರಿಗಾಗಿ, ಕೊರೋನ ವಾರಿಯರ್ಸ್ ಗಳ ಪರಿಶ್ರಮಕ್ಕಾದರು ಬೆಲೆ ಕೊಟ್ಟು ಪ್ರಜ್ಞಾಪೂರಕವಾಗಿ, ವಿವೇಚನೆಯಿಂದ ನಡೆದುಕೊಳ್ಳಿ. ಭಾರತೀಯರಾದ ನಾವು ಪ್ರಬುದ್ಥರಾಗಿ ಆಲೋಚನೆಯಿಂದ ನಡೆಯಬೇಕಾಗಿದೆ.

ಅಷ್ಟೇನೂ ಸುಸಜ್ಜಿತ ವ್ಯವಸ್ಥೆಯಿಲ್ಲ , ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ , ವೆಂಟಿಲೇಟರ್ಗಳ ಕೊರತೆ, ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ , ನೀಡಿದ ಚಿಕಿತ್ಸೆ ಫಲಿಸುತ್ತಿಲ್ಲ. ಬೆಡ್ಗಳು ಸಿಗದೆ ಆಸ್ಪತ್ರೆಯ ಮುಂಬಾಗಿಲಲ್ಲೇ ಚಿಕಿತ್ಸೆಗಾಗಿ ಹಾತೊರೆತು ನಿಂತ ಅದೆಷ್ಟೋ ಜೀವಗಳು. ಯಾರ್ಯಾರ ಕೈ ಕಾಲಿಡಿದು ಚಿಕಿತ್ಸೆಗಾಗಿ ಹೋರಾಡುತ್ತಿರು ಜೀವಗಳು. ಅದೆಂಥಾ ಕ್ರೂರ ವಿಧಿಯಿರಬೇಕು. ಸಾಯುವಾಗ ನಮ್ಮವರ ಅಪ್ಪುಗೆ ಇಲ್ಲ , ಒಂದು ತೊಟ್ಟು ನೀರು ಕೊಡುವವರಿಲ್ಲ, ವಿಧಿ ವಿಧಾನಗಳ ಸಮಾಧಿಯಿಲ್ಲ, ಬಂಧು ಮಿತ್ರರ ಕಂಬನಿಯಿಲ್ಲ, ನಮ್ಮವರಿಂದ ಮಣ್ಣು ಮಾಡಿಸಿಕೊಳ್ಳುವಂತ ಪುಣ್ಯವೂ ಇಲ್ಲ.

ಯಾರ ಕೈಯಿಂದಲೋ ತೂದೆಸೆದು ಹಿಂತಿರುಗಿಯು ನೋಡದೆ ಬರುವವರಿಂದ ಅಂತಿಮ ಕಾರ್ಯವೂ ಇಲ್ಲದೆ ಪರಲೋಕ ಯಾನ ಮಾಡುವ ಜೀವ ಅದೇನು ಪಾಪ ಮಾಡಿತ್ತು? ಮೂಟೆಯ ಹಾಗೆ ಬಿಸಾಡಿ ಬೆಂಕಿ ಹೊತ್ತಿಸಿ ಕೈ ತೊಳೆದುಕೊಳುವರು. ಈ ಜನ ಇದಕ್ಕಾದರು ಎಚ್ಚೆತ್ತುಕೊಳ್ಳಬೇಕು.

ಮಾಧ್ಯಮಗಳಲ್ಲಿ ಇಂತಹ ನೈಜ್ಯ ಘಟನೆಗಳ ಅನಾವರಣ ಮಾಡುವುದಿಲ್ಲ. ಕೆಲಸಕ್ಕೆ ಬಾರದ ಮಾಹಿತಿಯನ್ನು ಪದೇ ಪದೇ ಹೇಳಿ ಹುಚ್ಚೆಬ್ಬಿಸುತ್ತಾರಷ್ಟೇ. ತಕ್ಷಣದ ವದಂತಿಯೆಂದರೆ ಆಮ್ಲಜನಕದ ಕೊರತೆಯಿಂದಾಗಿ 24 ಮಂದಿಯ ದುರ್ಮರಣ ಎಂದು ಒಂದೊಂದು ಚಾನಲ್ ನವರು ಒಂದೊಂದು ರೀತಿ ಚಿತ್ರಿಸುತ್ತಿದಾದರೆಯೆ ವಿನಃ ಪರಿಹಾರ ಮಾರ್ಗೋಪಾಯ ತೋರಿಸುತ್ತಿಲ್ಲ.

ಅವರಿಗೇನು ಬೇಕಾಗಿದ್ದು ವದಂತಿಯಷ್ಟೇ ಸಿಕ್ಕಿದ್ದನ್ನು 4 ದಿನವಾದರೂ ಬಿಡದೆ ಅದದೇ ವಿಚಾರವನ್ನು ಬೇರೆಯೇ ರೀತಿ ಚಿತ್ರಿಸುವುದನ್ನು ಬಿಟ್ಟು ಯಾವ ಆಸ್ಪತ್ರೆಯಲ್ಲಿ ಏನು ಕೊರತೆಯಿದೆ ? ಎಷ್ಟು ಬೆಡ್ ಖಾಲಿಯಿದೆ? ಎಲ್ಲೆಲ್ಲಿ ಪ್ಲಾಸ್ಮ ದೊರಕುತ್ತದೆ? ಈತರಹದ ಮಾಹಿತಿ ಬಿಟ್ಟು ಜನರ ಮಧ್ಯೆ ಬೆಂಕಿಯಿಲ್ಲದಿದ್ದರೂ ಇವರೇ ಕಿಡಿ ಹೊತ್ತಿಸಿ ಪರಿಸ್ಥಿತಿ ಬಿಗಡಾಯಿಸುವಂತೆ ಮಾಡುತ್ತಾರಷ್ಟೇ. ನಿಮ್ಮ ನೆರವಿಗೆ ಯಾರು ಬರುವುದಿಲ್ಲ . ನಿಮ್ಮ ಹಿತ ನಿಮ್ಮ ಕೈಯಲ್ಲೇಯಿದೆ.

ನಿಮ್ಮವರ ಜೀವ ಹೋದ ಮೇಲೆ ಎಲ್ಲರನ್ನೂ ದೂರುವ ಬದಲು ಅರಿತು ನಡೆಯಿರಿ. ಅದೆಲ್ಲವೂ ಅಧಿಕಾರಿಗಳ ನಿರ್ಲಕ್ಷವೋ? ಆಸ್ಪತ್ರೆಗಳವರ ನಿರ್ಲಕ್ಷವೋ? ಅಥವಾ ರೋಗಿಗಳ ನಿರ್ಲಕ್ಷವೋ? ತಿಳಿಯದು. ನನ್ನ ಪ್ರಕಾರ ಇದಕ್ಕೆ ಯಾವ ರಾಜ್ಯ ಸರ್ಕಾರವಾಗಲಿ , ಮಂತ್ರಿಗಳಾಗಲಿ , ಅಧಿಕಾರಿಗಳಾಗಲಿ ಹೊಣೆಯಾಗುವುದಿಲ್ಲ. ಏಕೆಂದರೆ
ಅವರು ನಮ್ಮ ಒಳಿತಿಗಾಗೇ ಲಾಕ್ಡೌನ್ ಮಂತ್ರ ಪಠಿಸುತ್ತಿರುವುದು.

ಅವರ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸಿದ್ದರೆ ಇಂದು ಇಷ್ಟೆಲ್ಲಾ ಸಾವು ನೋವು ಜೀವ ಹಾನಿಯಾಗುತ್ತಿರಲಿಲ್ಲ. ಪ್ರಜ್ಞಾವಂತರಾಗಿ ನಡೆದಿದ್ದರೆ ಅದೆಂದೋ ಈ ಮಹಾಮಾರಿಗೆ ವಿದಾಯ ಹೇಳಬಹುದಿತ್ತು, ದುರದೃಷ್ಠ ವಶಾ ಕೋರೊನವೆ ನಮ್ಮೆಲ್ಲರಿಗು ವಿದಾಯ ಹೇಳುತ್ತಿದೆ. ಇದೆಲ್ಲದ್ದಕ್ಕೂ ನೇರವಾಗಿ ನಾವೇ ಹೊಣೆಯಾಗುತ್ತೇವೆ. ಸತ್ತ ನಂತರ ಅವರಿವರಿಗೆ ಶಪಿಸಿ ನೋವನುಭವಿಸುವ ಬದಲು ರೋಗಕ್ಕೆ ತುತ್ತಾದದಂತೆ ಎಚ್ಚರದಿಂದಿರೋಣ.

ದಯಮಾಡಿ ಈಗಲಾದರೂ ಅರಿತು ನಡೆಯಿರಿ. ಸತ್ತ ಮೇಲೆ ಯಾವುದು ಮರಳಿ ಬರುವುದಿಲ್ಲ. ಮನುಕುಲ ಉಳಿಸಿ , ಗಿಡ ಬೆಳೆಸಿ . ಸುಂದರ ಪರಿಸರ ನಿರ್ಮಾಣ ಮಾಡೋಣ . ಇಲ್ಲವಾದಲ್ಲಿ ನಿಮ್ಮವರ ಜೀವ ಕಳೆದುಕೊಳ್ಳುವ ಸ್ಥಿತಿ ಬರುವ ಸಮಯ ದೂರವೇನು ಇಲ್ಲ. ಎಲ್ಲರಿಗೂ ಸಮಸ್ಯೆ ಇದ್ದೇ ಇದೆ ಹಾಗಂತ ಅದನ್ನೇ ದೊಡ್ಡದಾಗಿ ಮಾಡಿ ವರ್ತಿಸುವುದಲ್ಲ. ಮೊದಲು ಜವಬ್ದಾರಿಯುತ ನಾಗರೀಕರಾಗಿ ನಡೆಯಿರಿ. ಕೊರೊನಾದ ಬಗ್ಗೆ ಭಯಬೇಡ ಎಚ್ಚರಿಕೆಯಿರಲಿ.
ಮಾಸ್ಕ್ ಧರಿಸಿ , ತೀರ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರ ಬನ್ನಿ , ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ಅಗತ್ಯ ಸುರಕ್ಷಾ ಕ್ರಮ ಪಾಲಿಸಿ.

“ಸ್ವರ್ಗ ನರಕ ಎಲ್ಲ ಮೇಲಿಲ್ಲ ಕೇಳು ಎಲ್ಲವೂ ಇಲ್ಲಿಯೆ ನಾವು ಮಾಡಿದ್ದನ್ನು ನಾವೆ ಅನುಭವಿಸಿ ತೀರಬೇಕು. ನಾನು ಎಂಬ ಅಹಃ ಮಣ್ಣು ಕೇಳು.”

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಸಚಿವರಾಗಿ ಆಯ್ಕೆ: ದಾವಣಗೆರೆಯಲ್ಲಿ ಸಂಭ್ರಮ ಆಚರಣೆ

Published

on

ಸುದ್ದಿದಿನ,ದಾವಣಗೆರೆ: ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಎಸ್. ಬಸವಂತಪ್ಪ ಅವರಿಗೆ ಸಚಿವ ಸ್ಥಾನ ದೊರೆತಿರುವುದು ದಾವಣಗೆರೆ ಜಿಲ್ಲೆಯ ರಾಜಕೀಯ ಇತಿಹಾಸದಲ್ಲಿ ಮಹತ್ವದ ಬೆಳವಣಿಗೆಯಾಗಿ ಪರಿಣಮಿಸಿದೆ. ಹಲವು ವರ್ಷಗಳಿಂದ ಪಕ್ಷದ ಸಂಘಟನೆಗೆ ಸಲ್ಲಿಸಿರುವ ಸೇವೆ, ಕ್ಷೇತ್ರದ ಅಭಿವೃದ್ಧಿಗೆ ನೀಡಿರುವ ಆದ್ಯತೆ ಹಾಗೂ ಜನಸಾಮಾನ್ಯರೊಂದಿಗೆ ಹೊಂದಿರುವ ನಿಕಟ ಸಂಪರ್ಕವನ್ನು ಪರಿಗಣಿಸಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಚಿವರಾಗಿ ಆಯ್ಕೆಯಾದ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಮಾಯಕೊಂಡ ಕ್ಷೇತ್ರ ಸೇರಿದಂತೆ ದಾವಣಗೆರೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭ್ರಮ ಮನೆಮಾಡಿತು. ಪಕ್ಷದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂತಸ ವ್ಯಕ್ತಪಡಿಸಿದರು. ಬಸವಂತಪ್ಪ ಅವರ ನಿವಾಸದ ಎದುರು ಬೆಳಗ್ಗಿನಿಂದಲೇ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಜಮಾಯಿಸಿ ಅಭಿನಂದನೆ ಸಲ್ಲಿಸಿದರು. ಮಹಿಳೆಯರು ಆರತಿ ಬೆಳಗಿ ಸ್ವಾಗತ ಕೋರಿದರೆ, ಯುವಕರು ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ನಡೆಸಿದರು.

ಕೆ.ಎಸ್. ಬಸವಂತಪ್ಪ ಅವರು ಹಲವು ವರ್ಷಗಳಿಂದ ಸಾರ್ವಜನಿಕ ಜೀವನದಲ್ಲಿ ಸಕ್ರಿಯರಾಗಿದ್ದು, ರೈತರ ಸಮಸ್ಯೆಗಳು, ಕುಡಿಯುವ ನೀರಿನ ಯೋಜನೆಗಳು, ಗ್ರಾಮೀಣ ರಸ್ತೆ ಅಭಿವೃದ್ಧಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿರುವ ಕಾರಣದಿಂದಲೇ ಅವರಿಗೆ ಸಚಿವ ಸ್ಥಾನ ದೊರೆತಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಮಾಯಕೊಂಡ ಕ್ಷೇತ್ರವು ಕೃಷಿ ಪ್ರಧಾನ ಪ್ರದೇಶವಾಗಿದ್ದು, ಇಲ್ಲಿ ನೀರಾವರಿ, ರಸ್ತೆ, ಶಿಕ್ಷಣ, ಕೈಗಾರಿಕಾ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯಂತಹ ಹಲವು ಸವಾಲುಗಳಿವೆ. ಸಚಿವ ಸ್ಥಾನ ದೊರೆತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆಗಳ ಪರಿಹಾರಕ್ಕೆ ಹೆಚ್ಚಿನ ವೇಗ ಸಿಗಲಿದೆ ಎಂಬ ನಿರೀಕ್ಷೆ ಜನರಲ್ಲಿ ಮೂಡಿದೆ. ವಿಶೇಷವಾಗಿ ರೈತರು, ಯುವಕರು ಹಾಗೂ ಮಹಿಳಾ ಸಂಘಟನೆಗಳು ಹೊಸ ಸಚಿವರಿಂದ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ನಿರೀಕ್ಷಿಸುತ್ತಿವೆ.

ಸಚಿವ ಸ್ಥಾನ ಘೋಷಣೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೆ.ಎಸ್. ಬಸವಂತಪ್ಪ ಅವರು, “ಈ ಜವಾಬ್ದಾರಿ ನನಗೆ ದೊರೆತಿರುವುದು ವೈಯಕ್ತಿಕ ಗೌರವ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಪ್ರತಿಯೊಬ್ಬ ಮತದಾರನಿಗೂ ಸಂದ ಗೌರವವಾಗಿದೆ. ಮುಖ್ಯಮಂತ್ರಿ ಹಾಗೂ ಪಕ್ಷದ ಹಿರಿಯ ನಾಯಕರು ನನ್ನ ಮೇಲೆ ಇಟ್ಟಿರುವ ವಿಶ್ವಾಸವನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಜನರ ನಿರೀಕ್ಷೆಗಳನ್ನು ಈಡೇರಿಸುವುದು ನನ್ನ ಮೊದಲ ಆದ್ಯತೆಯಾಗಿರುತ್ತದೆ” ಎಂದು ಹೇಳಿದರು.

ರಾಜ್ಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದರ ಜೊತೆಗೆ, ದಾವಣಗೆರೆ ಜಿಲ್ಲೆಗೆ ಹೆಚ್ಚಿನ ಅಭಿವೃದ್ಧಿ ಯೋಜನೆಗಳನ್ನು ತರಲು ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ, ಶಾಲೆಗಳು ಮತ್ತು ಆಸ್ಪತ್ರೆಗಳ ಸೌಲಭ್ಯಗಳ ಸುಧಾರಣೆ, ಯುವಕರಿಗೆ ಉದ್ಯೋಗಾವಕಾಶಗಳ ಸೃಷ್ಟಿ ಹಾಗೂ ಮಹಿಳಾ ಸಬಲೀಕರಣ ಕಾರ್ಯಕ್ರಮಗಳಿಗೆ ವಿಶೇಷ ಗಮನ ಹರಿಸಲಾಗುವುದು ಎಂದು ತಿಳಿಸಿದರು.

ಪಕ್ಷದ ಜಿಲ್ಲಾ ಮುಖಂಡರು ಮಾತನಾಡಿ, ಬಸವಂತಪ್ಪ ಅವರ ಸಚಿವ ಸ್ಥಾನದಿಂದ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಅಭಿವೃದ್ಧಿ ಯೋಜನೆಗಳು ಹರಿದು ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಆಡಳಿತಾತ್ಮಕ ಮಟ್ಟದಲ್ಲಿ ಜಿಲ್ಲೆಯ ವಿವಿಧ ಯೋಜನೆಗಳಿಗೆ ವೇಗ ಸಿಗಲಿದ್ದು, ಬಾಕಿ ಉಳಿದಿರುವ ಹಲವು ಕಾಮಗಾರಿಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.

ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸಹ ಸಚಿವರಿಗೆ ಅಭಿನಂದನೆ ಸಲ್ಲಿಸಿ, ಜಿಲ್ಲೆಯ ಬಹುಕಾಲದ ಬೇಡಿಕೆಗಳಾದ ನೀರಾವರಿ ಯೋಜನೆಗಳ ವಿಸ್ತರಣೆ, ಕೈಗಾರಿಕಾ ಹೂಡಿಕೆ, ಸರ್ಕಾರಿ ಆಸ್ಪತ್ರೆಗಳ ಉನ್ನತೀಕರಣ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಹಾಗೂ ಗ್ರಾಮೀಣ ರಸ್ತೆ ಸುಧಾರಣೆಗೆ ಆದ್ಯತೆ ನೀಡುವಂತೆ ಮನವಿ ಮಾಡಿದರು.

ಸಾಮಾಜಿಕ ಜಾಲತಾಣಗಳಲ್ಲಿಯೂ ಬಸವಂತಪ್ಪ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ವಿವಿಧ ಸಂಘಟನೆಗಳು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿ, ಸಚಿವರ ಹೊಸ ಜವಾಬ್ದಾರಿ ಯಶಸ್ವಿಯಾಗಲಿ ಎಂದು ಹಾರೈಸಿದರು.

ರಾಜಕೀಯ ವಿಶ್ಲೇಷಕರ ಅಭಿಪ್ರಾಯದಂತೆ, ರಾಜ್ಯ ಸಚಿವ ಸಂಪುಟದಲ್ಲಿ ಮಾಯಕೊಂಡ ಕ್ಷೇತ್ರಕ್ಕೆ ದೊರೆತಿರುವ ಈ ಪ್ರತಿನಿಧಿತ್ವವು ದಾವಣಗೆರೆ ಜಿಲ್ಲೆಯ ರಾಜಕೀಯ ಮಹತ್ವವನ್ನು ಮತ್ತಷ್ಟು ಹೆಚ್ಚಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ವೇಗ ನೀಡುವ ಜೊತೆಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಸಚಿವರ ಪಾತ್ರ ಮಹತ್ವದ್ದಾಗಿರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮಾಯಕೊಂಡ ಕ್ಷೇತ್ರದ ಜನರು ಸಚಿವ ಸ್ಥಾನವನ್ನು ಕೇವಲ ರಾಜಕೀಯ ಸಾಧನೆಯಾಗಿ ನೋಡದೇ, ಅಭಿವೃದ್ಧಿಯ ಹೊಸ ಅಧ್ಯಾಯದ ಆರಂಭವಾಗಿ ಪರಿಗಣಿಸುತ್ತಿದ್ದಾರೆ. ಕುಡಿಯುವ ನೀರು, ರಸ್ತೆ, ಕೃಷಿ, ಶಿಕ್ಷಣ, ಆರೋಗ್ಯ ಹಾಗೂ ಕೈಗಾರಿಕಾ ಕ್ಷೇತ್ರಗಳಲ್ಲಿ ಗಮನಾರ್ಹ ಬದಲಾವಣೆಗಳು ಆಗಲಿವೆ ಎಂಬ ಆಶಾಭಾವನೆ ವ್ಯಕ್ತವಾಗಿದೆ.

ಕೆ.ಎಸ್. ಬಸವಂತಪ್ಪ ಅವರ ಸಚಿವ ಸ್ಥಾನವು ಮಾಯಕೊಂಡ ಕ್ಷೇತ್ರ ಹಾಗೂ ದಾವಣಗೆರೆ ಜಿಲ್ಲೆಗೆ ಹೊಸ ಅವಕಾಶಗಳನ್ನು ತೆರೆದಿದೆ. ಜನರ ವಿಶ್ವಾಸಕ್ಕೆ ತಕ್ಕಂತೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸೇತುವೆಯಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಎಲ್ಲ ವಲಯಗಳಲ್ಲೂ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಅವರ ಆಡಳಿತಾತ್ಮಕ ನಿರ್ಧಾರಗಳು ಹಾಗೂ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಜಿಲ್ಲೆಯ ಭವಿಷ್ಯದ ದಿಕ್ಕನ್ನು ನಿರ್ಧರಿಸಲಿವೆ ಎಂಬ ಅಭಿಪ್ರಾಯ ರಾಜಕೀಯ ಹಾಗೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಡಾ. ಪ್ರೀತಿ ಅವರಿಗೆ ‘ಪರಮ್ ಭೂಷಣ್ ನ್ಯಾಷನಲ್ ಎಕ್ಸಲೆನ್ಸ್ ಅವಾರ್ಡ್

Published

on

ಸುದ್ದಿದಿನ,ದಾವಣಗೆರೆ: ದಾವಣಗೆರೆಯ ಹೆಮ್ಮೆಯ ಶಿಕ್ಷಣ ತಜ್ಞೆ, ಉದ್ಯಮಿ ಹಾಗೂ Parvatha Global Ventures LLP ಸಂಸ್ಥೆಯ ಸಂಸ್ಥಾಪಕಿ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (Founder & CEO) ಡಾ. ಪ್ರೀತಿ ಅವರು ರಾಷ್ಟ್ರ ಮಟ್ಟದ ಪ್ರತಿಷ್ಠಿತ “Param Bhushan National Excellence Award – 2026” ಪ್ರಶಸ್ತಿಯನ್ನು ಪಡೆದಿದ್ದಾರೆ.

ಶಿಕ್ಷಣ, ಆಡಳಿತ, ಮಾನವ ಸಂಪನ್ಮೂಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಸಮಾಜಸೇವೆಯಲ್ಲಿ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ Jivran Foundation ವತಿಯಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

ಡಾ. ಪ್ರೀತಿ ಅವರು ವಿದೇಶಿ ವೈದ್ಯಕೀಯ ಶಿಕ್ಷಣ (MBBS Abroad), ಉದ್ಯೋಗ ಮಾರ್ಗದರ್ಶನ, ಶಿಕ್ಷಣ ಸಲಹಾ ಸೇವೆಗಳು, ಕೌಶಲ್ಯಾಭಿವೃದ್ಧಿ ಹಾಗೂ ಯುವಜನರ ಸಬಲೀಕರಣ ಕ್ಷೇತ್ರಗಳಲ್ಲಿ ಗಮನಾರ್ಹ ಸೇವೆ ಸಲ್ಲಿಸುತ್ತಿದ್ದು, ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ಈ ಪ್ರಶಸ್ತಿ ಅವರ ಸಾಧನೆಗೆ ಮಾತ್ರವಲ್ಲದೆ, ಕರ್ನಾಟಕದ ಶಿಕ್ಷಣ ಮತ್ತು ಉದ್ಯಮ ಕ್ಷೇತ್ರಕ್ಕೂ ರಾಷ್ಟ್ರೀಯ ಮಟ್ಟದಲ್ಲಿ ದೊರೆತ ಗೌರವವಾಗಿದೆ.

ಈ ಸಂದರ್ಭದಲ್ಲಿ ವಿವಿಧ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು, ಸಮಾಜದ ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಡಾ. ಪ್ರೀತಿ ಅವರಿಗೆ ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲೆಂದು ಶುಭ ಹಾರೈಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸುಶೋಭನ್ ಸೋನು ರಾಯ್ ಬೆಳ್ಳಿತೆರೆಗೆ

Published

on

ಸುದ್ದಿದಿನ ಡೆಸ್ಕ್:ಹಲವಾರು ವರ್ಷಗಳ ಕಾಲ ಬಂಗಾಳಿ ಟೆಲಿವಿಷನ್ನಲ್ಲಿ ಕೆಲಸ ಮಾಡಿದ ನಂತರ ಮತ್ತು ನಂತರ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ವಿಸ್ತರಿಸಿದ ನಂತರ, ಅಭಿನೇತಾ ಸುಶೋಭನ್ ಸೋನು ರಾಯ್ ಅವರು ‘ಟೇಕ್ ಕೇರ್ ಭಾಲೋಬಾಸ’ ಚಿತ್ರದ ಮೂಲಕ ಬಂಗಾಳಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ಅವರು ‘ಜಾಯ್’ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ, ಇದು ಸ್ನೇಹ, ಸಂಬಂಧಗಳು ಮತ್ತು ಕಾಲಾನುಕ್ರಮದಲ್ಲಿ ವಿಕಸನಗೊಳ್ಳುವ ಭಾವನೆಗಳ ಸುತ್ತ ಕೇಂದ್ರೀಕೃತವಾಗಿರುವ ಕಥೆಯಲ್ಲಿನ ಒಬ್ಬ ಸ್ನೇಹಿತ.

ನಿರ್ದೇಶಕ ಪಿಜೂಷ್ ಸಾಹಾ ಅವರ ಮಾರ್ಗದರ್ಶನದಲ್ಲಿ ಸುಶೋಭನ್ ಅವರ ಅಭಿನಯ ಪ್ರಯಾಣವು ಪ್ರಾರಂಭವಾಯಿತು, ಅಲ್ಲಿ ಅವರು ಸುಮಾರು ಎರಡು ವರ್ಷಗಳ ಕಾಲ ಅಭಿನಯ ಕಾರ್ಯಾಗಾರಗಳಲ್ಲಿ ಭಾಗವಹಿಸಿದರು. ನಿಯಮಿತ ಆಡಿಷನ್ಗಳ ನಂತರ, 2019 ರಲ್ಲಿ ಅವರು ಆಕಾಶ್ ಆಠ್ ಚಾನೆಲ್ನ ‘ಆನಂದಮಯೀ ಮಾ’ ಧಾರಾವಾಹಿಯ ಮೂಲಕ ತಮ್ಮ ಟೆಲಿವಿಷನ್ ಚೊಚ್ಚಲ ಪ್ರವೇಶವನ್ನು ಮಾಡಿದರು, ಇದನ್ನು ಮರಣೋತ್ತರ ನಿರ್ದೇಶಕ ದೇವಿದಾಸ್ ಭಟ್ಟಾಚಾರ್ಯ ನಿರ್ದೇಶಿಸಿದ್ದರು, ಅದರಲ್ಲಿ ಅವರು ವೈಷ್ಣವ ಭಕ್ತನ ಪಾತ್ರವನ್ನು ನಿರ್ವಹಿಸಿದರು. ನಂತರ ಅವರು ಸ್ಟಾರ್ ಜಲ್ಸಾದ ‘ಮೋಹರ್’, ‘ಕೋರಾಪಾಖಿ’, ‘ತಿತ್ಲಿ’ ಮತ್ತು ‘ಖೇಲಾಘರ್’, ಜೊತೆಗೆ ಜೀ ಬಂಗ್ಲಾದ ‘ಜಮುನಾ ಢಾಕಿ’ ಧಾರಾವಾಹಿಗಳಲ್ಲಿ ಕಾಣಿಸಿಕೊಂಡರು, ಹೀಗೆ ಬಂಗಾಳಿ ಟೆಲಿವಿಷನ್ನಲ್ಲಿ ತಮ್ಮ ಕೆಲಸವನ್ನು ಮುಂದುವರೆಸಿದರು.

COVID-19 ಸಾಂಕ್ರಾಮಿಕ ಸಮಯದಲ್ಲಿ, ಅಭಿನಯದ ಕೆಲಸಗಳು ಸೀಮಿತವಾದಾಗ, ಸುಶೋಭನ್ ಮಾಡೆಲಿಂಗ್ಗೆ ತಿರುಗಿದರು. 2023 ರಿಂದ ಪ್ರಾರಂಭಿಸಿ, ಅವರು ಹಾಲಿಡೇ ಇನ್ ಹೋಟೆಲ್, ಡಾಬರ್, ಟೈಟಾನ್ ಐ+, ವೆಲಾಸಿಟಿ ಐವೇರ್, ಅಮೆಜಾನ್, ಸ್ಪೆನ್ಸರ್ಸ್, ಕ್ಯಾಂಪಸ್ ಶೂಸ್, ಬಿಗ್ ಬಜಾರ್, ಬಯೋಟಿಕ್ ಮತ್ತು ಫಿಯಾಮಾ ಡಿ ವಿಲ್ಸ್ ಸೇರಿದಂತೆ ಹಲವಾರು ಬ್ರಾಂಡ್ಗಳೊಂದಿಗೆ ಕೆಲಸ ಮಾಡಿದರು. 2025 ರಲ್ಲಿ, ಕೋಲ್ಕತ್ತಾದಲ್ಲಿ ನಡೆದ ‘ಎತ್ನಿಕ್ ಎಲಿಗನ್ಸ್ 2025’ ಸೌಂದರ್ಯ ಸ್ಪರ್ಧೆಯಲ್ಲಿ ಅವರು ಪ್ರಥಮ ರನ್ನರ್-ಅಪ್ ಆಗಿ ಆಯ್ಕೆಯಾದರು.

ಹೌರಾದಲ್ಲಿ ಜನಿಸಿ ಕೋಲ್ಕತ್ತಾದಲ್ಲಿ ಬೆಳೆದ ಸುಶೋಭನ್, ಸುಮಾರು ಮೂರೂವರೆ ವರ್ಷದ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ನಂತರ ತಾಯಿಯಿಂದ ಬೆಳೆಸಲ್ಪಟ್ಟರು. ಅವರು ಕೋಲ್ಕತ್ತಾದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು ಮತ್ತು 2016 ರಲ್ಲಿ ದಮ್ ದಮ್ ಮೋತಿಜೀಲ್ ರವೀಂದ್ರ ಮಹಾವಿದ್ಯಾಲಯದಿಂದ ವಾಣಿಜ್ಯದಲ್ಲಿ ಬಿ.ಕಾಮ್ ಪದವಿಯನ್ನು ಪಡೆದರು. ಅಭಿನಯವನ್ನು ಮುಂದುವರಿಸುವ ಮೊದಲು, ಅವರು ಸುಮಾರು ಎರಡು ವರ್ಷಗಳ ಕಾಲ ಪಾಶ್ಚಾತ್ಯ ನೃತ್ಯದಲ್ಲಿ ತರಬೇತಿ ಪಡೆದರು ಮತ್ತು ರಂಗ ಪ್ರದರ್ಶನಗಳಲ್ಲಿ ಭಾಗವಹಿಸಿದರು.

‘ಟೇಕ್ ಕೇರ್ ಭಾಲೋಬಾಸ’ ಸುಶೋಭನ್ ಅವರ ಮೊದಲ ಬಂಗಾಳಿ ಫೀಚರ್ ಫಿಲ್ಮ್ನಲ್ಲಿ ಕಾಣಿಸಿಕೊಳ್ಳುವುದನ್ನು ಸೂಚಿಸುತ್ತದೆ. ಈ ಚಿತ್ರದಲ್ಲಿ, ಜಾಯ್ ಅವರು ಕೆಲವೊಮ್ಮೆ ಸಂಯಮದಿಂದಿರುವ, ಆದರೆ ಉಷ್ಣತೆ, ಸ್ನೇಹಪರತೆ ಮತ್ತು ಸಹಜತೆಯನ್ನು ಪ್ರದರ್ಶಿಸುವ ಪಾತ್ರವಾಗಿ ಚಿತ್ರಿಸಲಾಗಿದೆ, ಇದು ಸಂಬಂಧಗಳು ಮತ್ತು ದೈನಂದಿನ ಭಾವನೆಗಳ ಅನ್ವೇಷಣೆಗೆ ಕೊಡುಗೆ ನೀಡುತ್ತದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending