ದಿನದ ಸುದ್ದಿ
ಬಸವಕಂಪು ಪಸರಿಸಿದ ವಿ.ಸಿದ್ಧರಾಮಣ್ಣ ಶರಣರು
- ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ
ಕರ್ನಾಟಕದ ಇತಿಹಾಸದ ಪುಟಗಳಲ್ಲಿ 12ನೇ ಶತಮಾನ ಸುವರ್ಣಾಕ್ಷರಗಳಲ್ಲಿ ಬರೆಯಲ್ಪಟ್ಟಿರುವಂತಹದ್ದು, ಸಮಾಜದಲ್ಲಿನ ಅಂಧಕಾರವನ್ನು ಕಿತ್ತೆಸೆಯಲು ಜನ್ಮತಾಳಿದ ಶರಣರು ಬಹು ದೊಡ್ಡದೊಂದು ಕ್ರಾಂತಿಯನ್ನು ಮಾಡಿದರು.
ಈ ಕ್ರಾಂತಿ ಕೇವಲ ಕರ್ನಾಟಕಕ್ಕೆ ಅಷ್ಟೆ ಮೀಸಲಾಗದೆ ಇಡೀ ವಿಶ್ವಕ್ಕೆ ಕಣ್ಣುಕೊಟ್ಟಿತು ಎಂದರೆ, ಅತಿಶಯೋಕ್ತಿಯಾಗಲಾರದು. ವಿಶ್ವಗುರು ಬಸವಣ್ಣನವರು ವಿಶ್ವಕಲ್ಯಾಣದ ಮಹಾಸಾಧನೆಯನ್ನು ನಿರ್ಮಿಸಿ ಇವನಾರವ ಇವನಾರವ ಎಂದೆನಿಸದೆ ಸಕಲರನ್ನು ಒಗ್ಗೂಡಿಸಿದ ವಿಭೂತಿ ಪುರುಷರು. ಸಕಲ ಜೀವರಾಶಿಗೆ ಒಳಿತಾಗುವ ಅನುಭವ ಮಂಟಪವನ್ನು ಕಟ್ಟಿ ಸಮಾಜದಲ್ಲಿದ್ದ ಜಾಡ್ಯವನ್ನು ದೂರಮಾಡಿ ಸಮಸಮಾಜವನ್ನು ನಿರ್ಮಿಸಿದರು.
900 ವರ್ಷಗಳ ಹಿಂದೆ ನಡೆದ ಈ ಕ್ರಾಂತಿಯ ಪರಿಣಾಮ 21ನೇ ಶತಮಾನದಲ್ಲಿಯೂ ಅಚ್ಚ ಹಸಿರಾಗಿ ಉಳಿದಿರುವುದು ವಿಶೇಷ. ಬಸವತತ್ವವನ್ನೇ ಹಾಸಿ ಬಸವತತ್ವವನ್ನೇ ಹೊದ್ದು ಬಸವತತ್ವವನ್ನೇ ಉಸಿರಾಗಿಸಿಕೊಂಡು, ಬಸವತತ್ವವನ್ನು ಮಂತ್ರವಾಗಿಸಿಕೊಂಡು ನಡೆದಾಡುವ ವಚನ ಭಂಡಾರವಾಗಿ ಕಂಗೊಳಿಸುತ್ತಿರುವವರು ಪೂಜ್ಯರಾದ ವಿ.ಸಿದ್ದರಾಮಣ್ಣ ಶರಣರು.
ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿ ಗ್ರಾಮದಲ್ಲಿ 1922ಜನವರಿ 14 ರಂದು ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿಯಂದು ಜನಿಸಿದ ಶಿವರಾಮಣ್ಣನವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ತಂದೆಯವರಿಂದ ಕರ್ನಾಟಕ ಸಂಗೀತದ ಆಸಕ್ತಿ ಮೂಡಿಸಿಕೊಂಡರು. ಬಾಲ್ಯದಿಂದಲೇ ಉತ್ತಮ ವಿಚಾರಗಳನ್ನು ಒಳಗೊಂಡು ಒಳ್ಳೆಯ ನಡೆ-ನುಡಿಗಳನ್ನು ಅಳವಡಿಸಿಕೊಂಡು ಉತ್ತಮರ ಸಂಗದಲ್ಲಿಯೇ ಬೆಳೆದು ಮೆಟ್ಟಿಲು ಮೆಟ್ಟಿಲಾಗಿ ಮೇಲೇರಿ ಬಂದವರು.
ತಂದೆಯವರಿಂದ ಸಂಗೀತ, ನಾಟಕ ಕಲೆಯನ್ನು ಕಲಿತು ತಮ್ಮ ಪ್ರತಿಭೆಯಿಂದ ನಟರಾಗಿ, ನಾಟಕ ನಿರ್ದೇಶಕರಾಗಿ, ರಚನೆಕಾರರಾಗಿ, ಸಂಗೀತಗಾರರಾಗಿ ಬೆಳೆದು ಬಂದ ಇವರು ಪ್ರವಚನ ಪಿತಾಮಹರೆಂದೇ ಹೆಸರಾದ ಪೂಜ್ಯ ಲಿಂಗಾನಂದ ಸ್ವಾಮೀಜಿಯವರ ಪ್ರವಚನ ಧಾರೆಗೆ ಆಕರ್ಷಿತರಾಗಿ ಅವರಿಂದ ಇಷ್ಟಲಿಂಗ ದೀಕ್ಷೆ ಪಡೆದು ಬಸವತತ್ವ ಪ್ರಸಾರಕ್ಕೆ ಅಣಿಯಾಗಿ ವಿಶ್ವಕಲ್ಯಾಣದ ಸಿದ್ಧರಾಮಣ್ಣ ಶರಣ ಎಂಬ ನೂತನ ಅಭಿದಾನವನ್ನು ಪಡೆದರು.
ಕೇವಲ ಐದನೇ ತರಗತಿ ಕಲಿತಿರುವ ವಿ.ಸಿದ್ಧರಾಮಣ್ಣನವರು ಬಸವ ಗ್ರಂಥಭಂಡಾರವೇ ಆಗಿದ್ದಾರೆ. ಪದವೀಧರರಾಗಬಹುದು ಆದರೆ ಪ್ರತಿಭಾವಂತರಾಗುವುದು ತುಂಬಾ ಕಷ್ಟ. ಕುರಿತೋದದೆಯಂ ಕಾವ್ಯಪ್ರಯೋಗ ಪರಿಣಿತರ ಸಾಲಿಗೆ ಪೂಜ್ಯ ಶರಣರು ಸೇರುತ್ತಾರೆ. ಸಾವಿರಾರು ವಚನಗಳು ಇವರಿಗೆ ಕಂಠಪಾಠವಾಗಿವೆ.
ತನುವಿನಲ್ಲಿ ನಿರ್ಮೋಹ, ಮನದಲ್ಲಿ ನಿರಹಂಕಾರ,
ಪ್ರಾಣದಲ್ಲಿ ನಿರ್ಭಯ, ಚಿತ್ತದಲ್ಲಿ ನಿರಪೇಕ್ಷೆ
ವಿಷಯಂಗಳಲ್ಲಿ ಉದಾಸೀನ, ಭಾವದಲ್ಲಿ ದಿಗಂಬರ,
ಜ್ಞಾನದಲ್ಲಿ ಪರಮಾನಂದ ನೆಲೆಗೊಂಡ ಬಳಿಕ
ಸೌರಾಷ್ಟ್ರ ಸೋಮೇಶ್ವರ ಲಿಂಗವು ಬೇರಿಲ್ಲ ಕಾಣಿರೋ
ಎಂಬ ಶರಣ ಆದಯ್ಯನವರ ವಚನದಂತೆ ಪರಿಶುದ್ಧ ಜೀವನವನ್ನು ನಡೆಸುತ್ತಿದ್ದಾರೆ. ಶುಭ್ರ ಶ್ವೇತಧಾರಿಯಾದ ಇವರ ಮುಖದಲ್ಲಿ ಬಸವ ಕಳೆಯಿದೆ. ಬಾಗಿದ ತಲೆ ಮುಗಿದ ಕೈಯ ಗುಣ ಪೂಜ್ಯರದ್ದು, 100ರ ತುಂಬು ಜೀವನದಲ್ಲಿ ಯುವಕರೇ ನಾಚುವಂತೆ ಕಂಚಿನ ಕಂಠದಲ್ಲಿ ವಚನ ಗಾಯನ ಮತ್ತು ವಚನ ವಿಶ್ಲೇಷಣೆಯನ್ನು ಪುಂಖಾನುಪುಂಖವಾಗಿ ಹೇಳುವ ಶೈಲಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.
ವಿಭೂತಿ ಪುರುಷರ ಮಧ್ಯೆ ದಿವ್ಯಜ್ಯೋತಿಯಂತೆ ಕಂಗೊಳಿಸುತ್ತಿರುವ ಪೂಜ್ಯರು ಬಸವ ಪ್ರಸಾದ ನಿಲಯದ ವಿದ್ಯಾರ್ಥಿನಿಯರ ಅಚ್ಚುಮೆಚ್ಚಿನ ತಾತನಾಗಿದ್ದಾರೆ. ಅಪರೂಪದಲ್ಲಿ ಅಪರೂಪದ ವ್ಯಕ್ತಿತ್ವ ಹೊಂದಿರುವ ಇವರು ದೈನಂದಿನ ಕಾರ್ಯಕ್ರಮಗಳನ್ನು ಚಾಚೂ ತಪ್ಪದೇ ನಡೆಸಿಕೊಂಡು ಬಂದಿದ್ದಾರೆ. ಸಮಯಕ್ಕೆ ಸರಿಯಾಗಿ ವಚನ ಪ್ರಾರ್ಥನೆ, ಶಿವಾನುಭವ ಚಿಂತನೆ, ಬಂದ ಭಕ್ತರಿಗೆ ಬಸವತತ್ವದ ಪರಿಕಲ್ಪನೆಯನ್ನು ವಿವರಿಸಿ ಮನ ಮುಟ್ಟುವಂತೆ ಹೇಳಿ ಅವರ ಹೃದಯವನ್ನು ಪರಿವರ್ತಿಸುವ ಹರಿಕಾರರಿವರು.
ಇವರು ಕೈ ಎತ್ತಿದರೆ ಕಾಯಕ, ಕಾಲಿಟ್ಟರೆ ಪಾವಿತ್ರ್ಯಂ ಸರಳ ಸಜ್ಜನಿಕೆಯ ಜೀವನಕ್ರಮವನ್ನು ಒಳಗೊಂಡು ಶಿವಶರಣರ ಜೀವನವನ್ನು ಆದರ್ಶವಾಗಿರಿಸಿಕೊಂಡು ನಿಂತ ನೀರಾಗಿ ನಿಲ್ಲದೆ ಚರಜಂಗಮರಾಗಿ ಸತ್ಯ ಶರಣರ ಪಥದಲ್ಲಿ ನಡೆ ನುಡಿಗಳನ್ನು ಒಗ್ಗೂಡಿಸಿಕೊಂಡು ಕರ್ನಾಟಕದಲ್ಲಷ್ಟೇ ಅಲ್ಲದೆ ಮಹಾರಾಷ್ಟç, ಆಂಧ್ರಪ್ರದೇಶ, ದೆಹಲಿ ಇಲ್ಲೆಲ್ಲ ಬಸವತತ್ವದ ಜ್ಞಾನಜ್ಯೋತಿಯ ಪ್ರಕಾಶದ ಬೆಳಗನ್ನು ಬಿಂಬಿಸಿದ್ದಾರೆ.
ಶರಣರ ಸಾಹಿತ್ಯ ಸೇವೆ
ಬಾಲ್ಯದಿಂದಲೆ ನಾಟಕ, ಕತೆ, ಕಾದಂಬರಿ, ಚರಿತ್ರೆ, ಕವಿತೆ, ಜಾನಪದ ಪದ್ಯಗಳನ್ನು ಓದುತ್ತಿದ್ದುದರಿಂದ ಅವರಲ್ಲಿ ಒಬ್ಬ ನಟ, ಸಂಗೀತ ಕಲಾವಿದ, ಸಾಹಿತಿ, ಕವಿ ಬೆಳೆದಿದ್ದನು. ಈ ಶರಣರು ಸುಮಾರು 20ಕ್ಕೂ ಹೆಚ್ಚು ನಾಟಕಗಳು, 11 ತಾತ್ವಿಕ ಗ್ರಂಥಗಳು, 2 ಕಾವ್ಯಗಳು, ಹಲವಾರು ಕವನಗಳು, ಹಾಗೂ ಆಧುನಿಕ ವಚನಗಳನ್ನು ಕನ್ನಡ ಸಾಹಿತ್ಯದ ಮಡಿಲಿಗೆ ನೀಡಿದ್ದಾರೆ.
ಅನುಭಾವ ದಾಸೋಹಕ್ಕಾಗಿ
ಅನ್ನದಾಸೋಹ ನಡೆಯಲಿ
ಅನ್ನ ದಾಸೋಹ ಹೊಟ್ಟೆಗಾದರೆ
ಅನುಭಾವ ದಾಸೋಹ ಆತ್ಮಕ್ಕೆ
ಕೇವಲ ಅನ್ನಕ್ಕಾಗಿ ಹಾತೊರೆಯುವುದು ಭವಿಯ ಲಕ್ಷಣ.
ಆತ್ಮದ ಹಸಿವಿಗಾಗಿ ಹಾತೊರೆಯುವುದು ಭಕ್ತನ ಲಕ್ಷಣ ನೋಡಾ ಲೋಕಗುರು ಬಸವ ಪ್ರಭುವೆ.
ಇಂತಹ ಸಾಕಷ್ಟು ಆಧುನಿಕ ವಚನಗಳನ್ನು ರಚಿಸಿದ್ದಾರೆ.
ಪೂಜ್ಯರಿಗೆ ಸಂದ ಪ್ರಶಸ್ತಿಗಳು
‘ಬಯಸಿ ಬಂದುದು ಅಂಗಭೋಗ, ಬಯಸದೆ ಬಂದುದು ಲಿಂಗ ಪ್ರಸಾದ’ ಎಂಬ ಗುರುಬಸವಣ್ಣನವರ ವಚನದಂತೆ ಪೂಜ್ಯರಿಗೆ ಶರಣ ಕಕ್ಕಯ್ಯ ಪ್ರಶಸ್ತಿ, ಬಸವಗುರು ಕಾರುಣ್ಯ ಪ್ರಶಸ್ತಿ, ಚೆನ್ನಬಸವ ಪ್ರಶಸ್ತಿ, ಬಸವತತ್ವ ಶ್ರೀ ಪ್ರಶಸ್ತಿ, ಬಸವಾನುಭಾವಿ ಗೌರವ ಪ್ರಶಸ್ತಿ, ಅನುಭವ ಮಂಟಪ ಪ್ರಶಸ್ತಿ ಗಣಾಚಾರ ಪ್ರಶಸ್ತಿಗಳು ದೊರಕಿವೆ.
ಅಲ್ಲದೆ ಇವರ ಜೀವನ ಸಾಧನೆ ಕುರಿತು ಸುಮಾರು 9 ಪುಸಕ್ತಗಳು, 70ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿರುವುದು. ಇವರ ವ್ಯಕ್ತಿತ್ವಕ್ಕಿಡಿದ ಕೈಗನ್ನಡಿಯಾಗಿದೆ.
ಕಲ್ಯಾಣ ನಾಡಿನ ಶರಣ ಸಮ್ಮೇಳನಗಳಲ್ಲೆಲ್ಲ ಪೂಜ್ಯ ವಿ ಸಿದ್ಧರಾಮಣ್ಣನವರ ರಚಿಸಿರುವ ಷಟ್ಸ್ಥಲ ಧ್ವಜಗೀತೆ, ಬಸವಗುರು ಮಂಗಲ ಪದಗಳು ಕೇಳಿ ಬರುತ್ತಿರುವುದು ವಿಶೇಷ. ಶರಣರದ್ದು ವೈಚಾರಿಕ ನಿಲುವು ಪ್ರಾಸಾದಿಕ ಗುಣ. ಅಷ್ಟಾವರಣ, ಪಂಚಾಚಾರಗಳ ತತ್ವ ನಿಷ್ಟರಾದ ಇವರು ಭಕ್ತರಿಗೆ ಶರಣಧರ್ಮದ ನಡವಳಿಕೆಗಳನ್ನು ಆಚಾರ ಸಹಿತ ತಿಳಿಸುತ್ತಾರೆ.
12ನೇ ಶತಮಾನದ ಬಸವೇಶ್ವರರ ತಾತ್ವಿಕಬದ್ಧತೆ ೨೧ನೇ ಶತಮಾನದ ಪೂಜ್ಯ ವಿ. ಸಿದ್ಧರಾಮಣ್ಣನವರ ಮುಖದಲ್ಲಿ ಕಂಗೊಳಿಸುತ್ತಿದೆ. ಅವರ ಮುಗ್ಧ ಮಗುವಿನ ಮಾತು ಮಾತೃಹೃದಯದ ಮಮತೆ ಶತೃಗಳನ್ನು ಮಿತ್ರರನ್ನಾಗಿಸುವ ಶಕ್ತಿಯುಳ್ಳದ್ದು.
ಅರಿವಿನ ವಚನಗಳ ಬೀಜವ ಬಿತ್ತಿ
ಆಚಾರದ ಭಕ್ತಿಜಲವನೆರೆದು
ಸಂಗೀತದ ಸುಳಿಗಾಳಿ ಬೀಸಿ
ಸಮತೆಯ ದವಸಧಾನ್ಯಂಗಳ ಬೆಳೆದು
ಬಸವತತ್ವದ ರಾಶಿಯ ಮಾಡಿ
ಲೋಕಕ್ಕೆ ಪ್ರಸಾದವನೆಡೆ ಮಾಡುತಿಹ
ವಿ.ಸಿದ್ಧರಾಮಣ್ಣಪ್ಪಗಳು ನಿಜರೈತರು ನೋಡಾ
ಎನ್ನಯ್ಯ ಬಚ್ಚಬರಿಯ ಬಸವನಲ್ಲಿ-
ಎಂಬ ಡಾ: ಕಲ್ಯಾಣಮ್ಮ ಲಂಗೋಟಿಯವರ ವಚನವು ಸಿದ್ಧರಾಮಣ್ಣ ಶರಣರ ಜೀವನಾದರ್ಶಗಳನ್ನು ತಿಳಿಸುತ್ತದೆ.
ಇಂತಹ ಪೂಜ್ಯರಿಗೆ ಇಂದು ನೂರು ವರ್ಷದ ಸಂಭ್ರಮ. ದಾವಣಗೆರೆ ಸರಸ್ವತಿ ನಗರದ ಬಸವಬಳಗದ ವತಿಯಿಂದ ಅವರಿಗೆ ಇಂದು ಗೌರವ ಸಮರ್ಪಣೆ ಸಲ್ಲಿಸಲಾಗುತ್ತದೆ.
ಹಣ್ಣು ಮಾಗಿ ಪಕ್ವವಾಗುವಂತೆ ಪೂಜ್ಯಶರಣರು ಜ್ಞಾನದಲ್ಲಿ ಮಾಗಿ ಸಮಾಜಕ್ಕೆ ವಚನದ ಸಿಹಿಯನ್ನು ಹಂಚುವ ಜ್ಞಾನವೃದ್ಧರಾಗಿ, ವಯೋವೃದ್ಧರಾಗಿ ಸಂತೃಪ್ತಿ, ಸತ್ಯನಿಷ್ಠೆ, ಸಮಾನತೆ ,ಸಮಚಿತ್ತತೆ ಕಾಯಕ-ದಾಸೋಹ ಮುಂತಾದವುಗಳನ್ನು ರೂಢಿಸಿಕೊಂಡಿರುವ ಪೂಜ್ಯರ ಬದುಕು ಇಂದಿನ ಯುವ ಸಮೂಹಕ್ಕೆ ದಾರಿದೀಪವಾಗಲಿ.
(ಲೇಖಕರು : ಡಾ.ಗೀತಾ ಬಸವರಾಜು, ಉಪನ್ಯಾಸಕರು,
ಎ.ವಿ.ಕೆ ಮಹಿಳಾ ಕಾಲೇಜು, ದಾವಣಗೆರೆ)
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು
ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.
ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.
ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.
ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

ದಿನದ ಸುದ್ದಿ
ಬ್ಯಾಕ್ಲಾಗ್ ನಿಯಮಾವಳಿ ಉಲ್ಲಂಘನೆ ; ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕ ಕರಿಚಣ್ಣನವರ್ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ದಾವಣಗೆರೆ ಜಿಲ್ಲಾ ಹರಿಹರ ನಗರದ ಮಾತೃಶ್ರೀ ರುದ್ರಮಾಂಬಾ ಬಸವಾರ್ಯ ಪ್ರೌಢಶಾಲೆಯ ಕನ್ನಡ ಶಿಕ್ಷಕರ ಬ್ಯಾಕ್ಲಾಗ್ (ಪರಿಶಿಷ್ಟ ಜಾತಿ) ನೇಮಕಾತಿಯಲ್ಲಿನ ಅಕ್ರಮಗಳನ್ನು ತನಿಖೆಗೆ ಒಳಪಡಿಸಿ ಆಡಳಿತ ಮಂಡಳಿ ಹಾಗೂ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ದೂರು ನೀಡಿ ವರ್ಷಗಳೇ ಕಳೆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀ ಕೃಷ್ಣಾಜಿ ಎಸ್. ಕರಿಚಣ್ಣನವರ್ ಇವರ ವಿರುದ್ಧ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಹರಿಹರ ನಗರದ ಮಾತೃಶ್ರೀ ರುದ್ರಮಾಂಬ ಬಸವಾರ್ಯ ಪ್ರೌಢಶಾಲೆಯಲ್ಲಿನ ಕನ್ನಡ ಶಿಕ್ಷಕರ ಬ್ಯಾಕ್ಲಾಗ್ (ಪರಿಶಿಷ್ಟ ಜಾತಿ) ನೇಮಕಾತಿಯು ನಿಯಮಬಾಹಿರವಾಗಿ ನಡೆದಿರುವ ಮಾಹಿತಿಯ ಆಧಾರದ ಮೇಲೆ ಆಯುಕ್ತರು ಹಾಗೂ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರ ಕಛೇರಿ, ಬೆಂಗಳೂರು ಇವರಿಗೆ ದೂರು ನೀಡಿ, ಬ್ಯಾಕ್ಲಾಗ್ ನಿಯಮಕ್ಕೆ ವಿರುದ್ಧವಾಗಿ ಸಂದರ್ಶನ ನಡೆಸಿ, ನೇಮಕಾತಿ ಪ್ರಕ್ರಿಯೆಗೆ ಮುಂದಾಗಿರುವ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಮೂಖ್ಯೋಪಧ್ಯಾಯರು, ವಿಷಯ ಪರಿವೀಕ್ಷಕರು, ವಿಷಯ ತಜ್ಞರು ಹಾಗೂ ಆಡಳಿತ ಮಂಡಳಿಯ ಸದಸ್ಯರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಕೈಗೊಂಡ ಕ್ರಮದ ವರದಿಯನ್ನು ದೂರು ಅರ್ಜಿ ತಲುಪಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ ವರ್ಷಗಳೇ ಕಳೆದರೂ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ.
ವಯಸ್ಸು ಮತ್ತು ಮೆರಿಟ್ ಆಧಾರದಲ್ಲಿ ನೇಮಕಾತಿ ನಡೆಸದೆ ಸಂದರ್ಶನ ನಡೆಸಿ ಬ್ಯಾಕ್ಲಾಗ್ ನಿಯಮವನ್ನು ಉಲ್ಲಂಘನೆ ಮಾಡಿರುವುದು ತನಿಖೆಯಲ್ಲಿ ಕಂಡುಬAದಿರುತ್ತದೆ. ಆದರೆ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷö್ಯ ತೋರಿದ ಕಾರಣ ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರಾದ ಕೃಷ್ಣಾಜಿ ಎಸ್. ಕರಿಚಣ್ಣನವರ್ ಕರ್ತವ್ಯ ಲೋಪದ ಅಡಿಯಲ್ಲಿ ಲೋಕಾಯುಕ್ತದಲ್ಲಿ ದೂರು ದಾಖಲಿಸಿ, ಬ್ಯಾಕ್ಲಾಗ್ ನಿಯಮಗಳನ್ನು ಉಲ್ಲಂಘಿಸಿ ಸಂದರ್ಶನ ನಡೆಸಲು ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ ಇವರಿಗೆ ದೂರು ನೀಡಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
ಸುದ್ದಿದಿನ,ದಾವಣಗೆರೆ: ನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿಗಳ ಅವ್ಯವಹಾರ ನಡೆಸಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ, ನ್ಯಾಮತಿ ತಾಲ್ಲೂಕು ಇಲ್ಲಿನ ಪ್ರಾಂಶುಪಾಲರಾದ ನಾಗರಾಜ ಜಿ.ಎಂ ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯುಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯಾದ್ಯಂತ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ವಸತಿ ಶಾಲೆಗಳಲ್ಲಿ ನಕಲಿ ಬಿಲ್ಲುಗಳ ಮೂಲಕ ಸರ್ಕಾರದ ಅನುದಾನವನ್ನು ವಂಚಿಸುತ್ತಿರುವ ವಿಷಯ ತಿಳಿದು ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ, ಕೊಡಚಗೊಂಡನಹಳ್ಳಿ, ನ್ಯಾಮತಿ ತಾಲ್ಲೂಕು ಇವರು ನೀಡಿರುವ 37 ಬಿಲ್ಲುಗಳನ್ನು ಪರಿಶೀಲನೆ ಮಾಡಿದಾಗ, ಇವುಗಳಲ್ಲಿನ ಬಹುತೇಕ ಜಿ.ಎಸ್.ಟಿ ಬಿಲ್ಲುಗಳಲ್ಲಿ ದಿನಾಂಕವೇ ಇರುವುದಿಲ್ಲ.
ಇನ್ನೂ ಕೆಲವು ಬಿಲ್ಲುಗಳನ್ನು ಹೊರ ರಾಜ್ಯದಿಂದ ಪಡೆಯಲಾಗಿರುತ್ತದೆ. ಆದ್ದರಿಂದ ಮರು ಲೆಕ್ಕಪರಿಶೋಧನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಲೋಕಾಯಕ್ತದಲ್ಲಿ ದೂರು ದಾಖಲಿಸಿರುವುದಾಗಿ ವಕೀಲ ಡಾ.ಕೆ.ಎ.ಓಬಳಪ್ಪ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ5 days ago2.5 ಕೋಟಿ ಖರೀದಿಯಲ್ಲಿ ಅವ್ಯವಹಾರ ; ಆಯುಕ್ತೆ ಮಂಜುಶ್ರೀ ಸೇರಿ 6 ಅಧಿಕಾರಿಗಳ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ18 hours agoನಕಲಿ ಬಿಲ್ಲುಗಳ ಮೂಲಕ ಲಕ್ಷಾಂತರ ರೂಪಾಯಿ ಅವ್ಯವಹಾರ | ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆ ಪ್ರಾಂಶುಪಾಲ ನಾಗರಾಜ ವಿರುದ್ಧ ಲೋಕಾಗೆ ದೂರು
-
ದಿನದ ಸುದ್ದಿ5 days agoದಾವಣಗೆರೆ | ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಸಮಾರೋಪ ಸಮಾರಂಭ
-
ಅಂಕಣ4 days agoಪ್ರಜಾಪ್ರಭುತ್ವ: ಸಮಾನತೆ, ಸಾಮಾಜಿಕ ನ್ಯಾಯ ಮತ್ತು ನೈತಿಕ ಹೊಣೆಗಾರಿಕೆ
-
ದಿನದ ಸುದ್ದಿ4 days agoದಾವಣಗೆರೆ| ಅಪರಿಚಿತರು ನೀಡಿದ ಟೆಲಿಗ್ರಾಮ್ ಲಿಂಕ್ ಕ್ಲಿಕ್ ಮಾಡಿ 14 ಲಕ್ಷ ಕಳೆದುಕೊಂಡ ಉಪನ್ಯಾಸಕ
-
ದಿನದ ಸುದ್ದಿ2 days agoನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು
-
ದಿನದ ಸುದ್ದಿ5 days agoಮಾನಸಿಕ ಆರೋಗ್ಯ ಅರಿವು ಅಗತ್ಯ : ಡಾ. ಪ್ರಭು ಎಂ. ಬಿಸ್ಲೇರಿ
-
ದಿನದ ಸುದ್ದಿ3 days agoಸಾವಿನಲ್ಲೂ ಒಂದಾದ ಪ್ರೇಮಿಗಳು: ಪ್ರೇಮಿಯ ಪಕ್ಕದಲ್ಲೇ ಪ್ರೇಯಸಿಯ ಅಂತ್ಯಸಂಸ್ಕಾರ!


