ಸಿನಿ ಸುದ್ದಿ
‘ತ್ರೀ ಮಸ್ಕಟೀಯರ್ಸ್’ ಬಿ-ಟೌನ್ ಬ್ಯೂಟಿ ಗಳ ದೋಸ್ತಿ-ಮಸ್ತಿ ಗೆ ಸಾಕ್ಷಿ ಆಯ್ತು ಸಲ್ಲು ಮಿಯಾ ರ ದಬ್ಬಂಗ್ ರಿಲೋಡೆಡ್..!
ಬಾಲಿವುಡ್ ನಲ್ಲಿ ಈಗ ಸ್ನೇಹದ ಅಲೆ ಎದ್ದಿದೆ…!
ಬಿ-ಟೌನ್ ದುನಿಯಾದ ಸುಲ್ತಾನ್… ಸಲ್ಮಾನ್ ಖಾನ್ ರೊಂದಿಗೆ “ದಬ್ಬಂಗ್ ರಿಲೋಡೆಡ್” ನಲ್ಲಿ ಮಿಂಚುತ್ತಿದ್ದಾರೆ ಬಾಲಿವುಡ್ ತಾರೆಯರು.. ಕತ್ರಿನಾ ಕೈಫ್, ಜಕ್ವಿಲೀನ್ ಫರ್ನಾಂಡೀಸ್, ಸೊನಾಕ್ಷಿ ಸಿನ್ಹಾ, ಸೇರಿದಂತೆ ಹಲವು ಬಿಟೌನ್ ನಟ-ನಟಿಯರು ಸಲ್ಲು ಗೆ ಸಾಥ್ ನೀಡಿದ್ದಾರೆ.
ಸಲ್ಮಾನ್ ಖಾನ್ ರ ಡ್ಯಾನ್ಸ್-ಮ್ಯೂಸಿಕ್ ಕಾಂಸರ್ಟ್ ಗಾಗಿ, ಸಲ್ಲು ಆಂಡ್ ಗ್ಯಾಂಗ್ ಜೊತೆ ದೇಶ-ವಿದೇಶ ಸುತ್ತುತ್ತಿರುವ ಬಾಲಿವುಡ್ ಚೆಲುವೆ ಯರ ಕಾನ್ಸರ್ಟ್ ಫೋಟೋ ಗಳು ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿರುವ ಬೆನ್ನಲ್ಲೇ… ಬಿ-ಟೌನ್ ನ ಮೂರು ಟಾಪ್ ನಟಿಯರು ಲಾಸ್ ಏಂಜಲಿಸ್ ನಿಂದ ದಲ್ಲಾಸ್ ಗೆ ಹೊರಡುವ ಮುನ್ನ ಕ್ಲಿಕ್ಕಿಸಿದ ಫೋಟೋ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಕತ್ರೀನಾ ಕೈಫ್ , ಜಕ್ವಿಲೀನ್ ಫರ್ನಾಂಡೀಸ್ ಮತ್ತು ಸೊನಾಕ್ಷಿ ಸಿನ್ಹಾ ವಿಮಾನದಲ್ಲಿ ಮೆಟ್ಟಿಲ ಮೇಲೆ ನಿಂತು ಕ್ಲಿಕ್ಕಿಸಿ ಕೊಂಡಿರುವ ಫೋಟೋ, ಈ ಮೂರೂ ಸುಂದರಿಯರು ತಮ್ಮ ಇಂಸ್ಟಾ ಅಕೌಂಟ್ ನಲ್ಲಿ ಹಂಚಿಕೊಂಡಿದ್ದು.. ಬಾಲಿವುಡ್ ತಾರೆಯರು ಸ್ನೇಹ ಸಂಬಂಧ ಕ್ಕೆ ಸಾಕ್ಷ್ಯ ವೆಂಬಂತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ನಡುವೆ ಕತ್ರೀನಾ ಮತ್ತು ರೇಸ್3 ಬೆಡಗಿ ಜಕ್ವಿಲೀನ್ ಫರ್ನಾಂಡೀಸ್ ನಡುವಿನ ಕೋಳಿ ಜಗಳ ದ ಪುಕಾರಿಗೂ ಮುಕ್ತಾಯ ಹಾಡಿದ್ದಾರೆ.
ಸಲ್ಮಾನ್ ಖಾನ್ ರ ಮೂರು ಹೀರೂಯಿನ್ ಗಳು. ತಮ್ಮದೇ ವಿಶಿಷ್ಟ ವಾದ ಏರ್ಪೋಟ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಜಕ್ವಿಲೀನ್ ಫರ್ನಾಂಡೀಸ್ ರ ಡೆನಿಮ್ ಆನ್ ಡೆನಿಮ್ ಲುಕ್ ಹೊಸ ಫ್ಯಾಷನ್ ಸ್ಟೇಟ್ ಮೆಂಟ್ ನೀಡುತ್ತಿದೆ . ಲೋ ವೇಸ್ಟ್ ಪೆಂಸಿಲ್ ಕಟ್ ಟೋರ್ನ ಡೆನಿಮ್ ಪ್ಯಾಂಟ್ ಮತ್ತು ಪಫ್ಡ್ ಲಾಂಗ್ ಸ್ಲೀವ್ ನ ಡೆನಿಮ್ ಕ್ರಾಪ್ ಟಾಪ್ ಫ್ಯಾಷನ್ ಪ್ರಿಯರಿಗೆ ಹೊಸ ಸ್ಟೈಲ್ ಕೋಷಂಟ್ ನೀಡಿದೆ.
ಕತ್ರೀನಾ ರ ಬ್ಲಾಕ್ ಆನ್ ಬ್ಲಾಕ್ ಲುಕ್ ಸಖತ್ ಸಿಂಪಲ್ ಮತ್ತು ಸೆಕ್ಸಿ ಎನಿಸುತ್ತದೆ. ಇನ್ನು ಸೊನಾಕ್ಷಿ ಸಿನ್ಹಾ ರ ಬ್ಲಾಕ್ ಲಾಂಗ್ ಕೋಟ್ ಮತ್ತು ಲೋ ವೇಸ್ಟ್ ಗ್ರೀನ್ ಮಿಲಿಟರಿ ಪ್ಯಾಂಟ್ ಸೆಲಿಬ್ರಿಟಿ ಏರ್ಪೋಟ್ ಲುಕ್ ನ ಹೈಲೈಟಾಗಿದೆ.
– ಚಿತ್ರಶ್ರೀ ಹರ್ಷ
ಸುದ್ದಿದಿನ|ವಾಟ್ಸಾಪ್|9986715401
ದಿನದ ಸುದ್ದಿ
ಸಾಗರ | ಇಂದು ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಪುಸ್ತಕಗಳ ಬಿಡುಗಡೆ
ಸುದ್ದಿದಿನ,ಸಾಗರ : ಅ.ರಾ.ಶ್ರೀನಿವಾಸರು ಬರೆದ ‘ಆರು ಲಘು ನಾಟಕಗಳು’ ಮತ್ತು ‘ಗುಚ್ಛ’ ಈ ಎರಡು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ಇಂದು ಸಂಜೆ ಪಟ್ಟಣದ ಸಿಜಿಕೆ ಸಭಾಭವನದಲ್ಲಿ ಅಂತರಂಗ ಪ್ರಕಾಶನ ಹಮ್ಮಿಕೊಂಡಿದೆ.
ಪುಸ್ತಕಗಳ ಬಿಡುಗಡೆಯನ್ನು ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಎಂ.ವಿ ಮಾಡಲಿದ್ದು, ಅಧ್ಯಕ್ಷತೆಯನ್ನುನಿವೃತ್ತ ಪ್ರಾಂಶುಪಾಲರಾದ ಅ.ರಾ.ಲಂಬೋದರ ಅವರು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ‘ಆರು ಲಘು ನಾಟಕಗಳು’ ಕುರಿತು ನಿವೃತ್ತ ಪ್ರಾಂಶುಪಾಲರು ಡಾ. ಜಯಪ್ರಕಾಶ್ ಮಾವಿನಕುಳಿ ಹಾಗೂ ‘ಗುಚ್ಛ’ ಕುರಿತು ಸಹಕಾರ ಸಂಘಗಳ ನಿವೃತ್ತ ಉಪ ನಿಬಂಧಕರು ಜಯಪ್ರಕಾಶ್ ತಲವಾಟ ಅವರು ಮಾತನಾಡಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
ಸುದ್ದಿದಿನಡೆಸ್ಕ್: ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್(93) ಅವರು ಅನಾರೋಗ್ಯದಿಂದ ಮೈಸೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಕಳೆದ ತಿಂಗಳಲ್ಲಿ ಕುಸಿದು ಬಿದ್ದಿರುವುದರಿಂದ ಅವರ ತೊಡೆ ಮೂಳೆ ಮುರಿದಿತ್ತು. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಬೆಳಿಗ್ಗೆ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಶ್ರೇಷ್ಠ ಭಾರತೀಯ ಶಾಸ್ತ್ರೀಯ ಸಂಗೀತಗಾರ ಆಗಿರುವ ಅವರು ಸರೋದ್ ವಾದಕರೂ ಆಗಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
ಸುದ್ದಿದಿನಡೆಸ್ಕ್: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕನ್ನಡದ ಚಲನಚಿತ್ರ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ.
ಈ ಸಂಬಂಧ ನಾಳೆ ಚಿತ್ರದುರ್ಗದಲ್ಲಿನ ವಿವಿಧ ಸಂಘಟನೆಗಳು ದರ್ಶನ್ ವಿರುದ್ಧ ಪ್ರತಿಭಟಿಸಿ ತನಿಖೆ ಪಾರದರ್ಶಕವಾಗಿರ ಬೇಕು ಹಾಗೂ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕೆಂದು ಡಿಸಿಗೆ ಮನವಿಯನ್ನು ಸಲ್ಲಿಸಲಿದ್ದಾರೆ.
ಮೈಸೂರಿನ ದರ್ಶನ್ ಒಡೆತನದ ಫಾರ್ಮ್ ಹೌಸ್ನಲ್ಲಿ ೧೦ ಮಂದಿಯನ್ನು ಬಂಧಿಸಲಾಗಿದೆ ಎಂದು ಸುದ್ದಿಸಂಸ್ಥೆ ತಿಳಿಸಿವೆ. ಹೆಚ್ಚಿನ ವಿಚಾರಣೆಗಾಗಿ ದರ್ಶನ್ ಅವರನ್ನು ಬೆಂಗಳೂರಿಗೆ ಕರೆತರಲಾಗಿದ್ದು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.
ಬೆಂಗಳೂರಿನ ಸುಮನಹಳ್ಳಿ ಬಳಿಯ ವೃಷಭಾವತಿ ನಾಲೆಯಲ್ಲಿ ಅಪಾರ್ಟ್ಮೆಂಟ್ ಕಟ್ಟಡದ ಮುಂಭಾಗದಲ್ಲಿ ರೇಣುಕಾಸ್ವಾಮಿಯ ಶವ ಪತ್ತೆಯಾಗಿತ್ತು. ದರ್ಶನ್ ಚಿತ್ರದುರ್ಗ ಅಭಿಮಾನಿಗಳ ಸಂಘದ ಅಧ್ಯಕ್ಷರಿಗೆ ಕರೆ ಮಾಡಿ ರೇಣುಕಾಸ್ವಾಮಿ ಎಲ್ಲಿದ್ದಾರೆ ಎಂಬುದನ್ನು ಪತ್ತೆಮಾಡಿ ಬೆಂಗಳೂರಿಗೆ ಕರೆತರುವಂತೆ ಹೇಳಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ7 days ago
JOB NEWS | ಡಿ.ಇಡಿ ಮತ್ತು ಬಿ.ಇಡಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
-
ಅಂತರಂಗ7 days ago
ನಾಳೆ ಡಾ.ಅಂಬೇಡ್ಕರ್ ಬರಹಗಳು ಮತ್ತು ಅವರ ಪ್ರಭಾವಿತ ಸಾಧಕರ ಸಂದರ್ಶನ ಸರಣಿ ಕಾರ್ಯಕ್ರಮ
-
ದಿನದ ಸುದ್ದಿ6 days ago
ಕೊಲೆ ಕೇಸ್ ; ನಾಳೆ ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಪ್ರತಿಭಟನೆ
-
ದಿನದ ಸುದ್ದಿ7 days ago
ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ7 days ago
ಮಸ್ಕಿ | ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ
-
ದಿನದ ಸುದ್ದಿ6 days ago
ಖ್ಯಾತ ಸರೋದ್ ವಾದಕ ಪಂಡಿತ್ ರಾಜೀವ ತಾರಾನಾಥ್ ಇನ್ನಿಲ್ಲ
-
ದಿನದ ಸುದ್ದಿ6 days ago
ಭಾರೀ ಮಳೆ ; ಡ್ಯಾಂಗಳಿಗೆ ಹರಿದು ಬಂದ ನೀರೆಷ್ಟು..? ಇಲ್ಲಿದೆ ಸಂಪೂರ್ಣ ಮಾಹಿತಿ
-
ಅಂತರಂಗ5 days ago
ದಾವಣಗೆರೆ | ಪ್ರೊ. ಎಸ್.ಬಿ. ರಂಗನಾಥ್ ಅವರಿಗೆ ಕೇಂದ್ರ ಕ ಸಾ ಪ ದತ್ತಿ ಪ್ರಶಸ್ತಿ ಪ್ರದಾನ