ದಿನದ ಸುದ್ದಿ
ಇಸ್ರೊ ನನ್ನ ಉಸಿರೆಂದು ನಂಬಿದ್ದ ವಿಜ್ಞಾನಿಗೆ ಪೊಲೀಸರು ಕೊಟ್ಟ ಟಾರ್ಚರ್ ಹೇಗಿತ್ತು ಗೊತ್ತಾ?
ಭಾರತವು ಸ್ವದೇಶಿ ನಿರ್ಮಿತ ರಾಕೆಟ್ ಎಂಜಿನ್ ಅಭಿವೃದ್ಧಿಪಡಿಸುತ್ತಿತ್ತು. ಹೊಟ್ಟೆ ಕಿಚ್ಚು ತಾಳಲಾರದೆ ಅಮೆರಿಕ ನಡೆಸಿದ ಗೂಢಚರ್ಯೆ ಕಥಾ ಪ್ರಸಂಗದಲ್ಲಿ ಸಿಕ್ಕಿಬಿದ್ದವರು ಇಸ್ರೊದ ಖ್ಯಾತ ವಿಜ್ಞಾನಿ ನಂಬಿ ನಾರಾಯಣನ್.
ಬಹಳ ತಡವಾಗಿಯಾದರೂ ನಂಬಿ ಅವರಿಗೆ ನ್ಯಾಯ ಸಿಕ್ಕಿದೆ. 50 ಲಕ್ಷ ರೂ. ಪರಿಹಾರ ನೀಡಬೇಕಂದೂ ಸುಪ್ರೀಂ ಕೋರ್ಟ್ ಹೇಳಿದೆ. ನಂಬಿ ಅವರನ್ನು ಈ ಪ್ರಕರಣದಲ್ಲಿ ತಳಕುಹಾಕಿದ್ದಾದರೂ ಹೇಗೆ? ನಂಬಿ ಅವರೇ ಬರೆದಿರುವ ರೆಡಿ ಟು ಫೈರ್ ಪುಸ್ತಕದಲ್ಲಿ ತಮಗಾದ ಅನ್ಯಾಯ ಹಾಗೂ ಪೊಲೀಸರು ಕೊಟ್ಟ ಮಾನಸಿಕ ಮತ್ತು ದೈಹಿಕ ಹಿಂಸೆಯನ್ನು ಖುದ್ದು ವಿವರಿಸಿದ್ದಾರೆ. ಈ ಕುರಿತು ಸ್ಕ್ರಾಲ್ ಪ್ರಕಟಿಸಿರವ ವರದಿಯ ಕನ್ನಡ ಅವತರಣಿಕೆ ಇಲ್ಲಿದೆ.
ಸತ್ಯ ಮತ್ತು ಧರ್ಮ ಎಂದು ಹೇಳಿಕೊಂಡು ಬಂದ ಇಬ್ಬರು ನನ್ನ ಹಿಂದೆ ನಿಂತುಕೊಂಡರು. ಅವರಿಬ್ಬರು ನನ್ನ ಕುತ್ತಿಗೆ ಹಿಡಿದು ಅದುಮಿ ಕೆಳಗೆ ಕೂರಿಸಲಿದ್ದಾರೆ ಎಂಬುದನ್ನು ತಿಳಿಯಲು ನನಗೆ ಹೆಚ್ಚು ಕಾಲ ಹಿಡಿಯಲಿಲ್ಲ.
ಅವರಲ್ಲಿ ಹಿರಿಯ ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ನನ್ನನ್ನು ಹೀಗೆ ಕೇಳಿದ. “ನೀನೊಬ್ಬ ಹಿರಿಯ ವಿಜ್ಞಾನಿ. ಒಬ್ಬ ಬುದ್ದಿವಂತ ವ್ಯವಸ್ಥಾಪಕ. ದೇಶದ ಆಸ್ತಿ. ನೀನ್ಯಾಕೆ ಹೀಗೆ ಮಾಡಿದೆ?
ನಂಬಿ: ನಾನು ಏನು ಮಾಡಿದೆ?
ಅಧಿಕಾರಿ: ಗೂಢಚರ್ಯೆ.
ನಂಬಿ: ಯಾವ ಗೂಢಚರ್ಯೆ?
ಅಧಿಕಾರಿ: ಗಂಟಲು ಸರಿ ಮಾಡಿಕೊಂಡು ಹೇಳಿದ ಮಿಸ್ಟರ್ ನಂಬಿ, ಸಾರಿ ಡಾಕ್ಟರ್ ನಂಬಿ.
ನಂಬಿಎ: ನಾನು ಡಾಕ್ಟರ್ ಅಲ್ಲ ಮಿಸ್ಟರ್ ಸರಿ ಹೊಂದುತ್ತದೆ.
ಅಧಿಕಾರಿ: ಸರಿ ನನಗ್ಯಾಕೊ ಡಾಕ್ಟರ್ ಅನ್ನುವುದೇ ಸೂಕ್ತ ಎನಿಸುತ್ತದೆ. ಮತ್ತೊಮ್ಮೆ ಗಂಟಲು ಸರಿಮಾಡಿಕೊಂಡು ಕೇಳಿದ. ಹೇಳು ಯಾಕೆ ಹೀಗೆ ಮಆಡಿದೆ.
ನಂಬಿ: ದಯವಿಟ್ಟು ಅರ್ಥ ಮಾಡಿಕೊಳ್ಳಿ ನಾನು ಯಾವುದೇ ಅಪರಾಧ ಮಾಡಿಲ್ಲ. ನಿಮಗೆ ನಿಜವಾಗಿ ಏನು ಬೇಕು ಹೇಳಿ?
ಅಧಿಕಾರಿ: ನಿಜ ಬೊಗಳು.. ನೀನು ಒಪ್ಪಿಕೊಂಡ್ಯೋ ಸರಿ. ಇಲ್ದಿದ್ರೆ ನಿನ್ನನ್ನು ಒಪ್ಪಿಸೋದು ಹೇಗೆಂದು ನನಗೆ ಗೊತ್ತು.
ನಂಬಿ: ಅದು ಬೆದರಿಕೆಯ ಮೊದಲ ಹೆಜ್ಜೆಯಾಗಿತ್ತು (ಸ್ವಗತ)
ನಂಬಿ: ನನ್ನ ಅಪರಾಧವಾದರೂ ಏನು?
“ನಿಂಗೆ ಗೊತ್ತಿಲ್ಲವಾ? ಎದ್ದುನಿಂತು ಹೇಳಿದ. ನೀನು ದೇಶದ ರಕ್ಷಣೆಗೆ ಸಂಬಂಧಿಸಿದ ದಾಖಲೆಗಳನ್ನು ಪಾಕಿಸ್ತಾನಕ್ಕೆ ಮಾರಿದ್ದೀಯ. ಈಗ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಿದ್ದೀಯಾ? ಬೊಗಳು ಇದೆಲ್ಲ ಹೇಗೆ ಮಾಡಿದೆ ಅಂತ. ಇದಕ್ಕಾಗಿ ಅವರು ಕೊಟ್ಟ ಇನಾಮು ಎಷ್ಟು ಹೇಳು?
ಅದೇ ಸಮಯಕ್ಕೆ ಮತ್ತೆ ಮೂವರು ಅಧಿಕಾರಿಗಳು ರೂಂನೊಳಗೆ ಬಂದರು. ಅದರಲ್ಲಿ ಒಬ್ಬ ಬೂದಿ ಬಣ್ಣದ ಸಫಾರಿ ಸೂಟ್ ಹಾಕಿದ್ದ. ಅವರು ಇಂಟೆಲಿಜನ್ಸ್ ಬ್ಯೂರೋದ ಮುಖ್ಯಸ್ಥರು ಸಣ್ಣಗೆ ಕುಳ್ಳಗಿದ್ದ ಒಬ್ಬ ಅಧಿಕಾರಿಯು ನನಗೆ ಪರಿಚಯ ಮಾಡಿಸಿದ.
ಸಣ್ಣಗಿದ್ದ ಅಧಿಕಾರಿಯು ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ತಿವಿದು. ಹೇಳು ಸೂಳೆ ಮಗನೆ? ನಿನಗೆ ಗೊತ್ತಿಲ್ವಾ ನೀನು ಮಾಡಿದ ಅಪರಾಧ ಏನಂತ? ಇಲ್ಲ ನಂಗೆ ಗೊತ್ತಿಲ್ಲ ಎಂದೆ. ಕೆಲವು ಪೇಪರ್ಗಳನ್ನು ನನ್ನ ಮುಖಕ್ಕೆ ಎಸೆದು ಬೋಳಿಮಗನೆ ನೋಡು ನೀನು ಮಾಡಿರುವ ಅನಾಚಾರ ಯಾರ್ಗೂ ಗೊತ್ತಾಗಲ್ಲ ಅಂದುಕೊಂಡಿದ್ದೀಯಾ? ಭಾರತದ ರಾಕೆಟ್ ತಂತ್ರಜ್ಞಾನವನ್ನು ಪಾಕಿಸ್ತಾನಕ್ಕೆ ಮಾರಿದ್ದೀಯಾ? ನಿಂಗೆ ಗೊತ್ತಾ ಇದು ಎಷ್ಟು ದೊಡ್ಡ ಅಪರಾಧ ಹದಿನಾಲ್ಕು ವರ್ಷ ಕಂಬಿ ಎಣಿಸಬೇಕಾಗುತ್ತೆ ಹುಷಾರ್ ಅಂದ.
ಐಬಿಯ ದೊಡ್ಡ ವ್ಯಕ್ತಿ ಎಂದು ಪರಿಚಯಿಸಿದ್ದ ವ್ಯಕ್ತಿ ಕಡೆಗೆ ಬೊಟ್ಟುಮಾಡಿ. ನೋಡು ಅವರು ಈಗಿಂದೀಗಲೇ ದಿಲ್ಲಿಗೆ ಹೊರಡಬೇಕು. ಅವರ ವಿಮಾನಕ್ಕೆ ತಡವಾಗುತ್ತಿದೆ. ಬೇಗ ಒಪ್ಪಿಕೊ. ನಡೆದದ್ದು ಏನೆಂತ ಹೇಳಿಬಿಡು ಎಂದು ಪಿಸುಗುಟ್ಟಿದ.
ಕೆಲವೇ ಹೊತ್ತಿನ ನಂತರ ಗೊತ್ತಾಯಿತು. ಐಬಿಯ ದೊಡ್ಡ ವ್ಯಕ್ತಿ ಎಂದು ಹೇಳಿದ್ದ ವ್ಯಕ್ತಿ ವಾಸ್ತವದಲ್ಲಿ ಇಂಟೆಲಿಜೆನ್ಸ್ ಬ್ಯೂರೊದ ಜಂಟಿ ನಿರ್ದೇಶಕ ಎಂ ಕೆ. ಧರ್.
ನಾನೊಬ್ಬ ನಿರಪರಾಧಿ. ಯಾವ ತಪ್ಪ ಮಾಡಿಲ್ಲ. ನೀವು ನನ್ನನ್ನು ತಪ್ಪು ತಿಳಿದುಕೊಂಡಿದ್ದೀರ ಎಂದು ನಾನು ಮೆಲ್ಲ ಧ್ವನಿಯಲ್ಲೇ ಹೇಳಿದೆ.
ಇಲ್ಲ ಎಂದು ಜೋರಾಗಿ ಅರುಚಿದ ಅಧಿಕಾರಿ, ಬೋಳಿಮಗನೆ ಹೇಳು ಮಾರಿಯಂ ರಶೀದಾಳನ್ನು ಎಲ್ಲಿ ಭೇಟಿಯಾಗಿದ್ದೆ?
ನಂಬಿ: ನಾನು ಯಾವಾಗಲೂ ಭೇಟಿಯಾಗಿಲ್ಲ
ಅಧಿಕಾರಿ: ಬಡವ ರಾಸ್ಕಲ್ ಎಷ್ಟು ಧೈರ್ಯವಿದ್ದರೆ ನನ್ನ ಹತ್ತಿರನೇ ಸುಳ್ಳು ಹೇಳುತ್ತಿದ್ದೀಯಾ? ನೀವಿಬ್ಬರು ಭೇಟಿಯಾಗಿದ್ದಾಗೆ ಮೇರಿಯಂ ಖುದ್ದು ಒಪ್ಪಿಕೊಂಡಿದ್ದಾಳೆ. ನಿಜ ಬೊಗಳು.
ನಂಬಿ: ನೀವು ಹೇಳುತ್ತಿರುವ ಮಾಲ್ಡೀವಿಯಾ ಪ್ರಜೆಯನ್ನು ನಾನು ಎಂದಿಗೂ ಭೇಟಿಯಾಗಿಲ್ಲ. ದಯವಿಟ್ಟು ನನ್ನನ್ನು ನಂಬಿ. ನನಗೆ ಗೊತ್ತೇ ಇಲ್ಲದ ವ್ಯಕ್ತಿಯನ್ನು ನಾನು ಹೇಗೆ ಭೇಟಿಯಾಗಲಿ?
ಅಧಿಕಾರಿ: ನೀನು ನಿಜ ಬೊಗಳಲಿಲ್ಲ ಅಂಧ್ರೆ ಫೌಜಿಯಾಳನ್ನು ಇಲ್ಲಿಗೆ ಕರೆಸುತ್ತೇನೆ. ನೀವಿಬ್ಬರು ಜತೆಯಲ್ಲಿರುವ ಫೋಟೊಗಳು ನಾಳೆ ಪೇಪರ್ನಲ್ಲಿ ಬರುತ್ತವೆ ಸರಿನಾ?
ಮಾರಿಯಂಳನ್ನು ನಾನು ಯಾವಾಗ ಭೇಟಿ ಮಾಡಿದ್ದೆ? ಪೊಲೀಸರು ಯಾಗಿ ಸುಳ್ಳು ಕತೆ ಹೆಣೆಯುತ್ತಿದ್ದಾರೆ ಎಂದು ನನ್ನ ಮನಸ್ಸು ಮಂಥನವಾಗುತ್ತಾಹೋಯಿತು. ಅಷ್ಟರಲ್ಲಿ ಐಬಿಯ ದೊಡ್ಡ ಅಧಿಕಾರಿ ಹಾಗೂ ಆತನ ಸಹಾಯಕ ಅಲ್ಲಿಂದ ಹೊರಟರು. ಮುಖ್ಯ ವಿಚಾರಣಾಧಿಕಾರಿ ಮುಂದುವರಿಸಿದ.
ಅಧಿಕಾರಿ: ನಾವು ಹೇಳುತ್ತಿರುವ ಇಬ್ಬರು ಮಹಿಳೆಯರಷ್ಟೆ ಅಲ್ಲ. ನಿನ್ನ ಸಹೋದ್ಯೋಗಿ ಸಸಿಕುಮಾರನ್ ಕೂಡ ನಿಜ ಒಪ್ಪಿಕೊಂಡಿದ್ದಾನೆ. ನೀನು ನಮ್ಮ ಬಳಿ ಏನೂ ಮುಚ್ಚಿಡಲು ಸಾಧ್ಯವಿಲ್ಲ.
ವಿಷಯ ಕೇಳಿ ನಾನು ಚೇರ್ನಿಂದ ಕುಸಿದುಬಿದ್ದೆ. ಸಸಿಕುಮಾರ್ ಎಲ್ಲ ಒಪ್ಪಿಕೊಂಡಿಬಿಟ್ಟನಾ?
ಅಧಿಕಾರಿ: ನೀನ್ಯಾಕೆ ಇಷ್ಟು ಗಾಬರಿಯಾಗಿದ್ದೀಯಾ? ಮದ್ರಾಸ್, ತಿರುವನಂತಪುರಂನಲ್ಲಿ ನಡೆದ ಎರಡು ಭೇಟಿಯಲ್ಲಿ ಪಾಕಿಸ್ತಾನದ ಅಧಿಕಾರಿಗಳಿಗೆ ನೀನು ಕ್ರಯೋಜನಿಕ್ ಎಂಜಿನ್ನ ಸ್ಕೆಚ್ಗಳನ್ನು ಮಾರಾಟ ಮಾಡಿದ್ದೀಯ ಎಂದು ಸಸಿಕುಮಾರ್ ಒಪ್ಪಿಕೊಂಡಿದ್ದಾನೆ. ಇದಕ್ಕೆ ಸಸಿಕುಮಾರ್ ಮಧ್ಯವರ್ತಿಯಾಗಿದ್ದ ಎಂದೂ ಬಾಯ್ಬಿಟ್ಟಿದ್ದಾನೆ. ಹೇಳು ಪಾಕಿಸ್ತಾನದಿಂದ ಎಷ್ಟು ಹಣ ತೆಗೆದುಕೊಂಡೆ?
ನಂಬಿ: ಸಸಿ ನಿಮ್ಮ ಬಳಿ ಏನು ಹೇಳಿದ್ದಾನೋ ಗೊತ್ತಿಲ್ಲ. ನಾನು ಯಾವ ತಪ್ಪೂ ಮಾಡಿಲ್ಲ ಯಾರನ್ನೂ ಭೇಟಿಯಾಗಿಲ್ಲ.
ಈ ಮಧ್ಯೆ ಒಬ್ಬ ಹುಡುಗ ಅನ್ನ ಸಾಂಬರ್ ತಂದ. ವಿಚಾರಣೆ ನಡೆಸಿದ ವ್ಯಕ್ತಿ ಅಲ್ಲಿಂದ ಹೋದ ಮತ್ತಿಬ್ಬರು ಹೊಸ ವ್ಯಕ್ತಿಗಳು ಬಂದರು.
ಮತ್ತೆ ಅದೇ ಪ್ರಶ್ನೆ ಕೇಳಿದರು. ಹೇಳು ಯಾಕೆ ಹೀಗೆ ಮಾಡಿದೆ? ವಿಚಾರಣೆ ನಡೆಸುವವರು ಹೊಸಬರೇ ಆದರೂ, ಅವರು ಕೇಳಿದ್ದ ಪ್ರಶ್ನೆಗಳೆಲ್ಲಾ ಹಳೆಯವು.
ಅಧಿಕಾರಿ: ವಿಕಾಸ್ ಎಂಜಿನ್ ಹಾಗೂ ಕ್ರಯೋಜನಿಕ್ ಎಂಜಿನ್ ಡ್ರಾಯಿಂಗ್ಗಳನ್ನು ಪಆಕಿಸ್ತಾನಕ್ಕೆ ಏಕೆ ಮಾರಾಟ ಮಾಡಿದೆ?
ನಂಬಿ: ನಿಮಗೆ ರಾಕೆಟ್ ವಿಜ್ಞಾನದ ಬಗ್ಗೆ ಅರಿವಿದೆಯಾ? ಯಾವುದೇ ಡ್ರಾಯಿಂಗ್ಗಳು ಇಸ್ರೊದ ಹೊರಗೆ ಹೋಗಲು ಸಾಧ್ಯವೇ ಇಲ್ಲ. ಬರೀ ಡ್ರಾಯಿಂಗ್ ಇಟ್ಟುಕೊಂಡು ಯಾವುದೇ ಎಂಜಿನ್ಗಳನ್ನು ತಯಾರಿಸಲು ಸಾಧ್ಯವೇ ಇಲ್ಲ. ಅದನ್ನು ತಯಾರಿಸಿದ ವಿಜ್ಞಾನಿಗಳು ಇದ್ದರೆ ಮಾತ್ರ ಅದು ಸಾಧ್ಯವಾಗುತ್ತೆ.
ಅಧಿಕಾರಿ: ಹಾಗಾದ್ರೆ ನೀನು ಡ್ರಾಯಿಂಗ್ಗಳನ್ನು ಪಾಕಿಸ್ತಾನಕ್ಕೆ ಕೊಟ್ಟಿದ್ದೀಯಾ?
ನಂಬಿ: ಡ್ರಾಯಿಂಗ್ಗಳು, ದಾಖಲೆಗಳಿಗೆ ಯಾರೂ ಕಾಸು ಕೊಡಲ್ಲ. ನೀವು ಹೇಳುತ್ತಿರುವ ವಿಕಾಸ್ ಎಂಜಿನ್ ತಯಾರಿಸಲು ಫ್ರಾನ್ಸ್ನ ವೆರ್ನಾನ್ ಎಂಬಲ್ಲಿರುವ ಬಾಹ್ಯಾಕಾಶ ಕೇಂದ್ರದಲ್ಲಿ ಫ್ರಾನ್ಸ್ ವಿಜ್ಞಾನಿಗಳೊಂದಿಗೆ ನಾವು 150 ಮಂದಿ ತಂಡ ಒಂದು ಅಧಿಕೃತ ಗುತ್ತಿಗೆ ಮೇರೆಗೆ ಕೆಲಸ ಮಾಡಿದ್ದೇವೆ. ನಿತ್ಯವೂ ಪ್ರಯೋಗಗಳು, ಬದಲಾವಣೆಗಳು ನಡೆಯುತ್ತಲೇ ಇದ್ದವು. ಅಷ್ಟೆಲ್ಲ ಇದ್ದರೂ ಆ ಎಂಜಿನ್ ತಯಾರಿಸಲು ನಮಗೆ ಹದಿನಾರು ವರ್ಷ ಹಿಡಿಯಿತು.
ಈಗ ವಿಚಾರಣೆ ನಡೆಸಿದ ಅಧಿಕಾರಿಗಳು ನನ್ನ ಹೇಳಿಕೆಯನ್ನು ಸ್ವಲ್ಪ ಇಂಪ್ರೂ ಮಾಡಿಕೊಂಡು ತಮ್ಮದೇ ಧಾಟಿಯಲ್ಲಿ ಪ್ರಶ್ನೆ ಕೇಳಲು ಮುಂದಾದರು. ಪಾಕಿಸ್ತಾನದವರು ವಿಕಾಸ್ ಎಂಜಿನ್ಅನ್ನು ನಕಲು ಮಾಡಬೇಕಾದರೆ ನೀನು ನೀಡಿರುವ ಡ್ರಾಯಿಂಗ್ಗಳು ಅವರಿಗೆ ಉಪಯೋಗಕ್ಕೆ ಬರುತ್ತವೆ ಅಲ್ಲವೇ?
ನಂಬಿ: ನನ್ನನ್ನು ನಂಬಿ ಎಂದು ಎಷ್ಟೇ ಬೇಡಿಕೊಂಡರೂ ಅವರು ಕೇಳಲಿಲ್ಲ. ತರ್ಕವಿಲ್ಲದ ಪ್ರಶ್ನೆಗಳು. ತಂತ್ರಜ್ಞಾನ ವೈಜ್ಞಾನಿಕ ಅರಿವಿಲ್ಲದವರ ಬಳಿ ನಾನು ಎಷ್ಟೇ ಬಾಯಿ ಬಡಿದುಕೊಂಡರೂ ಅರ್ಥ ಮಾಡಿಕೊಳ್ಳಲಿಲ್ಲ. ನೀನು ಹೇಳುತ್ತಿರುವುದು ಡ್ರಾಯಿಂಗ್ಗಳೂ ನಿಷ್ಪ್ರಯೋಜಕ. ಹಾಗಾದ್ರೆ ನೀವ್ಯಾಕೆ ಇಟ್ಟುಕೊಡಿದ್ದೀರಾ?
ನಂಬಿ: ರಾಕೆಟ್ ಎಂಜಿನ್ ತಯಾರಿಕೆಯಲ್ಲಿ ಡ್ರಾಯಿಂಗ್ಗಳು ಒಂದು ಚಿಕ್ಕ ಪಾತ್ರವಷ್ಟೆ. ಅವಕ್ಕೆ ಯಾರೂ ಕಾಸು ಕೊಡುವುದಿಲ್ಲ. ಪಠ್ಯ ಪುಸ್ತಕದಲ್ಲಿರುವ ರಾಕೆಟ್ ಡ್ರಾಯಿಂಗ್ ನೋಡಿ ರಾಕೆಟ್ ಮಾಡಲು ಸಾಧ್ಯವೇ? ಅದಕ್ಕೆ ಯಾರಾದರೂ ಕಾಸು ಕೊಡುತ್ತಾರಾ?
ಆಗ ಹೊಸ ಅಧಿಕಾರಿಗಳ ತಂಡವೊಂದು ಬಂತು. ಅದರಲ್ಲೊಬ್ಬ ಜೋರು ಧ್ವನಿಯಲ್ಲಿ ಎದ್ದೇಳು ಸೂಳೇಮಗನೆ. ನೀನು ಕೂರಲು ಯೋಗ್ಯ ವ್ಯಕ್ತಿಯಲ್ಲ. ನಿಂತುಕೊಂಡೇ ಮಾತಾಡು ಅಂದ. ನಾನು ನೀರಿಗಾಗಿ ಬೆಳಗ್ಗೆ ಇಂದ ಪರಿಪರಿಯಾಗಿ ಬೇಡಿಕೊಂಡೆ ಆದರೆ ಯಾರೂ ಕೊಡಲಿಲ್ಲ. ನಿನ್ನನ್ನು ಪಠಾಣ್ಕೋಟ್ ಅಥವ ಕಾಶ್ಮೀರದ ಬ್ಲಾಕ್ ಸೆಲ್ನಲ್ಲಿ ಹಾಕಿ ಕೊಂದು ಹಿಮದ ರಾಶಿಯಲ್ಲಲಿ ಹಾಕುವುದಾಗಿ ಅವರು ಬೆದರಿಸಿದರು. ನನ್ನ ದೇಹ ಹಿಮದ ರಾಶಿಯಲ್ಲಿ ಬಿದ್ದಿರುವಂತೆ ಚಿತ್ರವು ಮನಸ್ಸಿನಲ್ಲಿ ಮೂಡಿತು.
ಆ ರಾತ್ರಿ ನನ್ನನ್ನು ಮಲಗಲು ಬಿಡಲಿಲ್ಲ 30 ಗಂಟೆಗಳ ಕಾಲ ಅದೇ ಪ್ರಶ್ನೆ. ಅನ್ನ, ನೀರು ಏನೂ ಎಲ್ಲದೆ ನಿತ್ರಾಣನಾಗಿದ್ದೆ. ಸಿಮೆಂಟ್ ನೆಲವಾಗಿದ್ದರಿಂದ ದೇಹವು ತಣ್ಣಗಾಗಿಹೋಯಿತು.
ಹೀಗೇ ಇದ್ದರೆ ಅಧಿಕಾರಿಗಳು ನನ್ನನ್ನು ಮುಗಿಸಿಬಿಡುತ್ತಾರೆ ನಾನು ಈಗ ಹೋರಾಟ ನಡೆಸಲೇಬೇಕೆಂದು ತೀರ್ಮಾನಿಸಿ ಜೋರಾಗಿ ಉಸಿರೆಳೆದುಕೊಂಡು ಎದ್ದು ನಿಂತೆ.
ನಂಬಿ: ನೀವು ಒಂದು ದೊಡ್ಡ ಅಪರಾಧ ಮಾಡುತ್ತಿದ್ದೀರ. ಇದಕ್ಕಾಗಿ ನೀವು ಬಹಳ ದೊಡ್ಡ ಶಿಕ್ಷೆ ಅನುಭವಿಸುತ್ತೀರ. ನಾನು ನಿಮ್ಮನ್ನು ಬಿಡಲ್ಲ ನೆನಪಿಟ್ಟುಕೊಳ್ಳಿ ನಿಮಗೂ ಕುಟುಂಬ ಇದೆ. ಇದನ್ನ ಕೇಳಿಸಿಕೊಂಡ ಅಧಿಕಾರಿ ನೀನು ಇಲ್ಲಿಂದ ಜೀವ ಸಮೇತ ಹೋದರೆ ತಾನೆ ಎಂದು ನಕ್ಕ.
ನಿಮ್ಮನ್ನೆಲ್ಲ ನೆನಪಿಟ್ಟುಕೊಂಡಿದ್ದೇನೆ. ಒಬ್ಬೊಬ್ಬರನ್ನಾಗಿ ಕೊಂದುಬಿಡುತ್ತೇನೆ ಎಂದೆ.
ಅಧಿಕಾರಿಯೊಬ್ಬ ತಣ್ಣನೆ ಧ್ವನಿಯಲ್ಲಿ ಹೇಳಿದ. ಸರ್ ನಾವು ನಮ್ಮ ಡ್ಯೂಟಿ ಮಾಡ್ತಿದ್ದೀವಿ. ತಪ್ಪಿದ್ದರೆ ನಿಮ್ಮ ಚಪ್ಪಲಿಯಲ್ಲಿ ಹೊಡೆಯಿರಿ.
22 ವರ್ಷಗಳಾಗಿವೆ ನನ್ನ ಚಪ್ಪಲಿಯನ್ನು ಹಾಗೇ ಇಟ್ಟಿದ್ದೇನೆ.
ಮತ್ತೆ ಅಧಿಕಾರಿ ನನ್ನನ್ನ ಪ್ರಶ್ನಿಸಿದ. ಹೇಳು ಮಹಮದ್ ಅಸ್ಲಮ್ ಯಾರು?
ನಂಬಿ: ಯಾವ ಅಸ್ಲಂ ನನಗೆ ಗೊತ್ತಿಲ್ಲ.
ಅಧಿಕಾರಿ: ಸರಿ ನಾನು ನೆನಪಿಸುತ್ತೇನೆ. ಮೊಹಮದ್ ಅಸ್ಲಾಂ ಪಾಕಿಸ್ತಾನದ ಅಣು ವಿಜ್ಞಾನಿ. 1985ರಲ್ಲಿ ಆತ ನಿನ್ನನ್ನು ಭೇಟಿಯಾಗಿ ರಾಕೆಟ್ ತಂತ್ರಜ್ಞಾನದ ಬಗ್ಗೆ ಮಾತನಾಡಿದ್ದ.
ನಾನು ತಲೆ ಚಚ್ಚಿಕೊಂಡೆ.
ನಂಬಿ: ನನಗೆ ಯಾವ ಅಸ್ಲಂ ಕೂಡ ಗೊತ್ತಿಲ್ಲ. ಆದರೆ, ರಾಕೆಟ್ ಟೆಕ್ನಾಲಜಿ ತಿಳಿಯಲು ಪಾಕಿಸ್ತಾನ ಏಕೆ ಅಣು ವಿಜ್ಞಾನಿ ಕಳಿಸುತ್ತೆ? ಅಬ್ದುಲ್ ಕಲಾಂ ಅವರ ಹತ್ತಿರಾನೋ ಅಥವಾ ಯು ಆರ್ ರಾವ್ ಅವರನ್ನೋ ಸಂಪರ್ಕಿಸಬೇಕಲ್ವಾ? ನಿಮ್ಮ ಕತೆ ನಿಮಗೇ ಒಪ್ಪಿಗೆಯಾಗುತ್ತಾ?
ಆ ಇಬ್ಬರೂ ವ್ಯಕ್ತಿಗಳೂ ತಾವು ಹೇಳಿದ್ದ ಹೇಳಿಕೆ ಎಷ್ಟು ತಮಾಷೆಯಾಗಿತ್ತು ಎಂದುಕೊಂಡರು. ಒಬ್ಬರ ಮುಖ ಒಬ್ರು ನೋಡಿಕೊಂಡು ನಮಗೆ ಅದು ಗೊತ್ತು. ನೀನು ಈ ಪ್ರಶ್ನೆಗೆ ಹೇಗೆ ಪ್ರತಿಕ್ರಿಯೆ ನೀಡುತ್ತೀಯಾ ಎಂಬುದು ನಮಗೆ ಗೊತ್ತಾಗಬೇಕು ಎಂದ.
ಇವರು ಮುಂಚೆಯೇ ಹೆಣೆದಿರುವ ಕತೆಯಲ್ಲಿ ನನ್ನನ್ನು ಸೇರಿಸಿದ್ದಾರೆ. ಇವರೇ ಸೃಷ್ಟಿಸಿದ ಪಾತ್ರಗಳಿಗೆ ನಾನು ಹೆಸರಿಡಬೇಕು ಎಂದು ಆಗ ನನಗೆ ಅರ್ಥವಾಯಿತು. ನನಗೆ ಗೊತ್ತಿಲ್ಲದ ವ್ಯಕ್ತಗಳ ಹೆಸರನ್ನು ಕೇಳುವ ತಂತ್ರ ಮುಂದುವರಿಯುತ್ತಲೇ ಹೋಯಿತು.
ಅಧಿಕಾರಿ: ಮಿಸ್ಟರ್ ನಂಬಿ. ನಮ್ಮನ್ನು ಮೂರ್ಖರೆಂದು ತಿಳಿದಿದ್ದೀಯಾ? ನಮಗೆ 25 ವರ್ಷದ ಅನುಭವ ಇದೆ. ನಿನ್ನಿಂದ ನಿಜ ಕಕ್ಕಿಸುವುದು ಹೇಗೆಂದುನನಗೆ ಗೊತ್ತು. ನಿನ್ನ ನಟ್ಟು ಬೋಲ್ಟು ಬಿಚ್ಚುತ್ತೀವಿ. ರೊಟ್ಟಿಗಾಗಿ ಅಂಗಲಾಚುವಂತೆ ಮಾಡುತ್ತೀವೆ. ಸೂಳೆ ಮಕ್ಕಳಾ ದೇಶದ ಆಸ್ತಿನ ಮಾರ್ಕೊತೀರಾ? ಎಂದು ಕೇಳಿದ.
ಮತ್ತೊಬ್ಬ ಅಧಿಕಾರಿ ಇದ್ದಕ್ಕಿದ್ದಂತೆ ಬಂದ. ಏನೂ ಕೇಳದೆ ದಿಢೀರನೆ ಮುಖದ ಮೇಲೆ ಹೊಡೆದ. ನಮ್ಮಪ್ಪ ಕೂಡ ನನಗೆ ಒಂದೇಟೂ ಹೊಡೆದಿರಲಿಲ್ಲ. ಈತ ಹೊಡೆದದ್ದು ನನಗೆ ದೈಹಿಕ ಹಿಂಸೆಗಿಂತ ಮಾನಸಿಕವಾಗಿ ಘಾಸಿಗೊಳಿಸಿತು.
ನಾನು ಯಾರಿಗೂ ಹೆದರುವುದಿಲ್ಲ. ನಿಜ ಒಪ್ಪಿಕೊಂಡರೆ ಸರಿ ಎಂದು ಅರುಚುತ್ತಿದ್ದ.
ಇನ್ನೊಬ್ಬ ಅಧಿಕಾರಿ ನನ್ನ ಕಿವಿ ಹತ್ತಿರ ಬಂದು ಹೌದು ಎಂದು ಒಪ್ಪಿಕೊ ಎಂದ. ನಾನು ಧೈರ್ಯವಾಗಿ ಇಲ್ಲ ಎಂದು ಹೇಳಿದೆ.
ಕನ್ನಡಕ ಹಾಕಿದ್ದ ಆ ವ್ಯಕ್ತಿ ಒಮ್ಮೆ ನನ್ನನ್ನು ಗುರಾಯಿಸಿ ತನ್ನ ಸಹಾಯಕನೊಂದಿಗೆ ಹೊರಗೆ ನಡೆದ.
ಚುಟ್ಟಾ ಸೇದುತ್ತಿದ್ದ ವ್ಯಕ್ತಿ ನನ್ನ ಹತ್ತಿರ ಬಂದು ನೀನ್ಯಾಕೆ ನಿಜ ಒಪ್ಪಿಕೊಳ್ಳಬಾರದು? ನನಗೆ ನಿಜಕ್ಕೂ ನೀವು ಹೇಳುತ್ತಿರವ ವ್ಯಕ್ತಿ ಯಾರೆಂದು ನನಗೆ ಗೊತ್ತಿಲ್ಲ ಎಂದೆ.
ಅಧಿಕಾರಿ ಹೇಳಿದ ನೋಡು. ನಾವು ಹೇಳಿದ ಹೆಸರಿನವರು ಗೊತ್ತಿಲ್ಲ ಎಂದರೆ ಬಿಟ್ಟುಬಿಡು. ನಿನಗೆ ಗೊತ್ತಿರುವ ಯಾರಾದರೂ ಮುಸ್ಲಿಮರ ಹೆಸರು ಹೇಳು ಎಂದ.
ನನಗೆ ಗೊತ್ತಿದ್ದದ್ದು ನನ್ನ ಬಾಲ್ಯದ ಗೆಳೆಯ ಒಬ್ಬ ಮುಸ್ಲಿಂ. ಆತ ಈಚೆಗೆ ಸಿಕ್ಕಿ ಇಸ್ರೊದಲ್ಲಿ ತನ್ನ ಮಗನಿಗೆ ಕೆಲಸ ಕೊಡಿಸು ಎಂದಿದ್ದ. ಎಕ್ಸಾಂ ಬರೆದು ಪಾಸಾದ್ರೆ ನೋಡುವಾ ಎಂದಿದ್ದೆ. ಆತ ಎಕ್ಸಾನಲ್ಲಿ ಫೇಲ್ ಆಗಿದ್ದ.
ಮತ್ತೆ ನೀರಿಗಾಗಿ ಬೇಡಿಕೊಂಡೆ. ಆಗ ಅಧಿಕಾರಿಯೊಬ್ಬ ಹೇಳಿದ. ನೀನು ನಾವು ಹೇಳಿದ ಹೇಳಿಕೆಯನ್ನೇ ಒಪ್ಪಿಕೊಳ್ಳಬೇಕು. ಇಲ್ಲದಿದ್ದರೆ ನೀರು ಸಿಗಲ್ಲ ಎಂದ. ನನಗೆ ನೀಡುತ್ತಿದ್ದ ಟ್ರೀಟ್ಮೆಂಟ್ ಥರ್ಡ್ ಡಿಗ್ರಿಯವು ಎಂದು ಗೊತ್ತಾಯಿತು. ನಾನು ಧೈರ್ಯವಾಗಿ ಮತ್ತೊಮ್ಮೆಎದ್ದು ನಿಂತು ಹೇಳಿದೆ.
ನನಗೆ ನೀರು ಬೇಡ. ನಾನು ಹೆಚ್ಚು ಹೊತ್ತು ಕೂರುವುದೂ ಇಲ್ಲ. ನಾನೊಬ್ಬ ನಿರಪರಾಧಿ ಎಂದು ನೀವು ಒಪ್ಪುವ ವರೆಗೆ ನಾನು ಅನ್ನಾಹಾರ ಇಲ್ಲದೆ ಇಲ್ಲೇ ನಿಲ್ಲುತ್ತೇನೆ ಎಂದೆ.
ಪೊಲೀಸರು ಕತೆಯನ್ನು ಮುಂಚೆಯೇ ಹೆಣೆದಿದ್ದರು. ನಾನೊಬ್ಬ ಹರಕೆಯ ಕುರಿಯಾಗಿದ್ದೆ. ಅವರು ಬಿಟ್ಟಿದ್ದ ಸ್ಥಳಗಳಲ್ಲಿ ನನು ಹೆಸರು ಸೇರಿಸಬೇಕಿತ್ತು ಅಷ್ಟೆ. 22 ವರ್ಷ ನರಕದಲ್ಲಿ ಕಳೆದೆ.
ಕೃಪೆ: ಸ್ಕ್ರಾಲ್ ಡಾಟ್ ಇನ್

ದಿನದ ಸುದ್ದಿ
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಇಂಗ್ಲೀಶ್ ಪಠ್ಯಕ್ರಮ ಕಾರ್ಯಗಾರ
ಸುದ್ದಿದಿನ,ದಾವಣಗೆರೆ:ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರ ವೇದಿಕೆಯ (FODCET) ಸಂಯುಕ್ತ ಆಶ್ರಯದಲ್ಲಿ “ರಾಜ್ಯ ಶಿಕ್ಷಣ ನೀತಿ (S.E.P) ಇಂಗ್ಲೀಷ್ ಪಠ್ಯಕ್ರಮ” ಕುರಿತ ಒಂದು ದಿನದ ಕಾರ್ಯಗಾರವನ್ನು ದಿನಾಂಕ 02-03-2026 ರಂದು ಉದ್ಘಾಟಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಕರಿಬಸಪ್ಪ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಾವಣಗೆರೆ ವಿಶ್ವವಿದ್ಯಾಲಯದ ಕಲಾ ನಿಕಾಯದ ಡೀನ್ ಡಾ. ಲೋಕೇಶ್ ಎಂ.ಯು. ಭಾಗವಹಿಸಿ, ಎಸ್.ಇ.ಪಿ ಪಠ್ಯಕ್ರಮದ ಉದ್ದೇಶ, ವಿನ್ಯಾಸ ಮತ್ತು ಪರಿಣಾಮಕಾರಿತ್ವದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಇಂಗ್ಲೀಷ್ ವಿಭಾಗದ ಸಂಯೋಜಕರಾದ ಡಾ. ಫಕ್ಕೀರೇಶ ಹಳ್ಳಳ್ಳಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು.
ಈ ಕಾರ್ಯಗಾರದಲ್ಲಿ ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಹಾಗೂ ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇಂಗ್ಲೀಷ್ ಭಾಷೆ ಮತ್ತು ಸಾಹಿತ್ಯ ಬೋಧಿಸುವ ಪ್ರಾಧ್ಯಾಪಕರು ಭಾಗವಹಿಸಿ, ಪಠ್ಯಕ್ರಮದ ಅನುಷ್ಠಾನ, ಬೋಧನಾ ವಿಧಾನಗಳು ಹಾಗೂ ಮೌಲ್ಯಮಾಪನ ಕ್ರಮಗಳ ಕುರಿತು ವಿಚಾರ ವಿನಿಮಯ ನಡೆಸಿದರು.ಸ.ಪ್ರ.ದ. ಮಹಿಳಾ ಕಾಲೇಜಿನಲ್ಲಿ ಇಂಗ್ಲೀಷ್ ಪಠ್ಯಕ್ರಮ ಕುರಿತ ಮಹತ್ವದ ಕಾರ್ಯಗಾರ ಯಶಸ್ವಿ.
ವೇದಿಕೆಯಲ್ಲಿ ಪ್ರಾಧ್ಯಾಪಕರಾದ ಡಾ. ಜಯಪ್ಪ, ಡಾ. ಭೀಮಪ್ಪ, ಡಾ. ಮಹೇಶ್ ನಾಯ್ಕ್, ಡಾ.ಮಧುಸೂದನ್, ಡಾ. ವಿಜಯಕುಮಾರ್, ಡಾ. ನಾಗನಗೌಡ ಹಾಗೂ ಡಾ. ಶಿವರಾಜ್, ಡಾ. ತ್ರಿವೇಣಿ, ಡಾ. ಶಶಿಕಲಾ ಉಪಸ್ಥಿತರಿದ್ದರು.
ಐ ಕ್ಯೂ ಏ ಸಿ ಸಂಯೋಜಕರು ಮತ್ತು ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಭೀಮಪ್ಪ ಎಂ ಪಿ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಿ ಮತ್ತು ಸ್ವಾಗತಿಸಿದರು, ಇತಿಹಾಸ ವಿಭಾಗದ ಮುಖ್ಯಸ್ಥರು ವಂದಿಸಿದರು ಮತ್ತು ಪ್ರೂ. ಮಂಜುನಾಥ ಜಿ ಕಾರ್ಯಕ್ರಮವನ್ನು ನಿರೂಪಿಸಿದರು.
ಇಂಗ್ಲೀಷ್ ಮೇಜರ್ ನಲ್ಲಿ ರ್ಯಾಂಕ್ ಪಡೆದವಿದ್ಯಾರ್ಥಿನಿಯರನ್ನು ಇಂಗ್ಲಿಷ್ ವಿಭಾಗದಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಮೆಗಾ ಉದ್ಯೋಗ ಮೇಳ ವಿದ್ಯಾಭ್ಯಾಸದೊಂದಿಗೆ ಕೌಶಲ್ಯತೆಗೂ ಆದ್ಯತೆ ನೀಡಿ : ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್
ಸುದ್ದಿದಿನ,ದಾವಣಗೆರೆ:ಮಕ್ಕಳಿಗೆ ಸರಿಯಾದ ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ ಶಿಕ್ಷಣಕ ಕಲಿಸಬೇಕು. ಯುವ ಜನತೆ ವಿದ್ಯಾರ್ಥಿ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಎಂದು ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಸೋಮವಾರ(ಫೆ.23) ರಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟಿçÃಯ ಗ್ರಾಮೀಣ ಜೀವನೋಪಾಯ ಅಭಿಯಾನ, ಮಹಾನಗರಪಾಲಿಕೆ, ಜಿಲ್ಲಾ ಕೌಶಲ್ಯಾ ಮಿಷನ್, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು
ಯುವನಿಧಿ ಯೋಜನೆಯಡಿ ರಾಜ್ಯದಲ್ಲಿ 3,62,000 ಅಭ್ಯರ್ಥಿಗಳು ನೋಂದಾಯಿಸಿಕೊAಡಿದ್ದು, ಜಿಲ್ಲೆಯಲ್ಲಿ 10,404 ಪದವಿಧರರು, 226 ಡಿಪ್ಲೋಮ ಆದವರು ಯುವನಿಧಿಯ ಸೌಲಭ್ಯ ಪಡೆಯುತ್ತಿದ್ದಾರೆ. ಇದರಲ್ಲಿ 2326 ಯುವಕ, ಯುವತಿಯರಿಗೆ ಬೇರೆ ಬೇರೆ ಉದ್ಯೋಗ ಮೇಳದಲ್ಲಿ ಉದ್ಯೋಗ ದೊರತಿದೆ. 2024-25ನೇ ಸಾಲಿನಲ್ಲಿ ಸುಮಾರು 33 ಕೋಟಿ, 22 ಲಕ್ಷ ಹಣ ಸಂದಾಯವಾಗಿದೆ. ರಾಜ್ಯದಲ್ಲಿ ಕೌಶಲ್ಯಾಭಿವೃದ್ದಿ ಯೋಜನೆಯಡಿ 17,715 ಅಭ್ಯರ್ಥಿಗಳಿಗೆ ತರಬೇತಿ ನೀಡಿದ್ದು, 2376 ಅಭ್ಯರ್ಥಿಗಳಿಗೆ ಉದ್ಯೋಗ ದೊರತಿದೆ.
ಜೊತೆಗೆ ಪದವಿ ಉತ್ತೀರ್ಣ ವಿದ್ಯಾರ್ಥಿಗಳು ಸಿವಿಲ್ ಸರ್ವಿಸಸ್ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ ನೀಡಲಾಗುತ್ತಿದೆ. ಒಟ್ಟಾರೆ ಯುವಜನತೆಗೆ ಐಎಎಸ್, ಕೆಎಎಸ್ ಈ ರೀತಿಯ ಉದ್ಯೋಗಾವಕಾಶಗಳು ಸಿಗುವಂತಾಗಲು ಎಸ್ಎಸ್ ಕೇರ್ ಟ್ರಸ್ಟ್ ನಿಂದ ತರಬೇತಿ ನೀಡಲಾಗುತ್ತಿದೆ.
ಯುವಕರು ಸ್ಕೂಲ್, ಕಾಲೇಜ್ಗೆ ಬಂದಾಗ ಅಲ್ಲಿರುವಂತಹ ವಿದ್ಯಾರ್ಥಿಗಳು ಸ್ಪೋರ್ಟ್ಸ್, ಕಲ್ಚರಲ್ ಆಕ್ಟಿವಿಟೀಸ್, ಜೊತೆಗೆ ಆನ್ಲೈನ್ ಕೋರ್ಸ್ಗಳಲ್ಲಿ ಭಾಗವಹಿಸಬೇಕು.
ಯಾವುದೇ ಕಂಪನಿಯ ಲಿಖಿತ ಪರೀಕ್ಷೆಗೆ ಹಾಜರಾದಾಗ ನಿಮ್ಮಲ್ಲಿ ಏನು ಲೋಪದೋಷ ಹೇಳಿದ್ರು, ಯಾವ ರೀತಿ ನೀವು ಮತ್ತೊಮ್ಮೆ ನಿಮ್ಮ ತಪ್ಪನ್ನು ಸರಿ ಮಾಡಿಕೊಳ್ಳಬಹುದು ಎನ್ನುವುದನ್ನು ಅರಿತು ಸಂದರ್ಶನ ಎದುರಿಸಬೇಕೆಂದರು.
ಉದ್ಯೋಗ ಮೇಳದಲ್ಲಿ ನೀಡಿದ ಪ್ರಮಾಣ ಪತ್ರ ಪಡೆದು ಆಯ್ಕೆಯಾದ ಕಂಪನಿಗೆ ವರದಿ ಮಾಡಿಕೊಳ್ಳಲು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ ಮಾತನಾಡಿ ಎಲ್ಲರಿಗೂ ಸರ್ಕಾರವೇ ಉದ್ಯೋಗ ನೀಡಲು ಆಗುವುದಿಲ್ಲ. ಜನರು ಸ್ವಯಂ ಬದುಕು ಕಟ್ಟಿಕೊಂಡು, ಉದ್ಯೋಗದಾತರಾಗಿ ಹೊರಹೊಮ್ಮಬೇಕು. ಶಿಕ್ಷಣ, ಜ್ಞಾನದ ಜೊತೆ ಕೌಶಲ್ಯತೆ ರೂಢಿಸಿಕೊಳ್ಳಬೇಕು. ಒಂದು ದೇಶದ ಪ್ರಗತಿ ಹಾಗೂ ಅಭಿವದ್ಧಿಗೆ ಯುವ ಶಕ್ತಿ ಪ್ರಮುಖವಾಗಿದ್ದು, ಉದ್ಯೋಗ ಮೇಳದಿಂದ ಯುವಕರಿಗೆ ಹೆಚ್ಚು ಲಾಭ ದೊರೆಯಲಿದೆ. ಇದರಿಂದ ಬದುಕು ಕಟ್ಟಿಕೊಂಡು ಯಶಸ್ಸು ಗಳಿಸಲು ಶ್ರಮಿಸಬೇಕು ಎಂದರು. ಯುವಕರು ದೇಶದ ಸಂಪತ್ತು. ಪ್ರತಿಯೊಬ್ಬರೂ ಯಾವುದಾದರೂ ಒಂದು ವೃತ್ತಿ ಮಾಡಬೇಕು. ಇದರಿಂದ ನಿಮ್ಮ ಭವಿಷ್ಯ ಉತ್ತಮವಾಗುತ್ತದೆ ಎಂದರು.
ಉದ್ಯೋಗದಾತ ಕಂಪನಿಗಳು ಕಾಲೇಜು ಆವರಣದಲ್ಲೇ ಮೇಳ ಆಯೋಜಿಸಿ, ಅಭ್ಯರ್ಥಿಗಳ ಸಂದರ್ಶನ ನಡೆಸಿ, ಅರ್ಹರಿಗೆ ಉದ್ಯೋಗ ನೀಡುತ್ತಿವೆ. ಇದು ವಿದ್ಯಾವಂತ ಬಡ ನಿರುದ್ಯೋಗಿಗಳಿಗೆ ಅನುಕೂಲವಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯುವಕರು ಕೇವಲ ಪದವಿ ಪಡೆದರೆ ಸಾಲದು, ತಾಂತ್ರಿಕ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಬದ್ಧತೆ, ಸಮಯಪ್ರಜ್ಞೆ ಮತ್ತು ಆತ್ಮವಿಶ್ವಾಸವಿದ್ದರೆ ಯಾವುದೇ ಉದ್ಯೋಗವನ್ನು ಪಡೆಯಬಹುದು ಎಂದು ಯುವಜನತೆಗೆ ಕರೆ ನೀಡಿದರು. ತರಬೇತಿಯು ಹೆಚ್ಚು ಅಭ್ಯರ್ಥಿಗಳಿಗೆ ಮಾರ್ಗದರ್ಶನ ನೀಡುವಲ್ಲಿ ಯಶಸ್ವಿಯಾಗಿವೆ ಎಂದು ಅವರು ತಿಳಿಸಿದರು.
ಮೋನಿಕಾ, ಚಂದನಾ, ಸಿಂಚನಾ, ಸುಶೀಲಾ, ವಿನೂತ, ಸಾನಿಯಾ, ಶರತ್, ಅಶ್ವಿನಿ ಇನ್ನೂ ಕೆಲವು ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಆದೇಶ ಪ್ರತಿಯನ್ನು ನೀಡಿದರು.
ಮೇಳದ ಪ್ರಮುಖ ಅಂಕಿ-ಅAಶಗಳು: ಭಾಗವಹಿಸಿದ ಕಂಪನಿಗಳು: 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು, 61 ವಿಶೇಷ ಚೇತನ ಅಭ್ಯರ್ಥಿಗಳು ಒಳಗೊಂಡು 1944 ಉದ್ಯೋಗಾಕಾಂಕ್ಷಿಗಳು, ಆಯ್ಕೆ ಹಂತ ತಲುಪಿದವರು: 421 ಅಭ್ಯರ್ಥಿಗಳು, ಸ್ಥಳದಲ್ಲೇ ನೇಮಕಾತಿ: 421 ಅಭ್ಯರ್ಥಿಗಳಿಗೆ ಅಂತಿಮ ನೇಮಕಾತಿ ಆದೇಶ ಪಡೆದಿರುತ್ತಾರೆ. ಹಾಗೂ 555 ಅಭ್ಯರ್ಥಿಗಳು ಶಾರ್ಟ್ ಲಿಸ್ಟ್ ಆಗಿ 2ನೇ ಹಂತದ ಸಂದರ್ಶನ ಅರ್ಹತೆ ಪಡೆದಿರುತ್ತಾರೆ.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ರಾವ್ ಪ್ರಾಸ್ತವಿಕ ನುಡಿಗಳಾನ್ನಾಡಿದರು.
ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಕೌಸರ್ ರೇಷ್ಮಾ, ಜಿಲ್ಲಾ ಗ್ಯಾರಂಟಿ ಯೋಜನೆಯ ಅಧ್ಯಕ್ಷರಾದ ಬಸವರಾಜ.ಟಿ.ಶಾಮನೂರು, ಉಪಾಧ್ಯಕ್ಷರಾದ ಮಂಜಣ್ಣ, ಪ್ರಾಂಶುಪಾಲರಾದ ಬಸವರಾಜ ತಹಶೀಲ್ದಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ಜಿ.ಪಂ ಮುಖ್ಯ ಯೋಜನಾಧಿಕಾರಿ ಮಲ್ಲನಾಯ್ಕ ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಫೆಬ್ರವರಿ ಮಾಹೆಗೆ ಪಡಿತರ ಹಂಚಿಕೆ
ಸುದ್ದಿದಿನ,ದಾವಣಗೆರೆ:ಫೆಬ್ರವರಿ-26ರ ಮಾಹೆಗೆ ಅನ್ವಯವಾಗುವಂತೆ ವಿವಿಧ ವರ್ಗದ ಪಡಿತರ ಚೀಟಿದಾರರಿಗೆ ಪಡಿತರ ಹಂಚಿಕೆ ಮಾಡಲಾಗಿದೆ.
ಅಂತ್ಯೋದಯ ಕಾರ್ಡದಾರರಿಗೆ 1 ರಿಂದ 3 ಸದಸ್ಯರಿರುವ ಕಾರ್ಡಿಗೆ 35 ಕೆ.ಜಿ ಅಕ್ಕಿ, 4 ಸದಸ್ಯರಿರುವ ಪ್ರತಿ ಕಾರ್ಡಿಗೆ 40 ಕೆ.ಜಿ ಅಕ್ಕಿ, 5 ಸದಸ್ಯರಿರುವ ಪ್ರತಿ ಕಾರ್ಡಿಗೆ 50 ಕೆ.ಜಿ ಅಕ್ಕಿ, 6 ಸದಸ್ಯರಿರುವ ಪ್ರತಿ ಕಾರ್ಡಿಗೆ 60 ಕೆ.ಜಿ ಅಕ್ಕಿ, 7 ಸದಸ್ಯರಿರುವ ಪ್ರತಿ ಕಾರ್ಡಿಗೆ 70 ಕೆ.ಜಿ ಅಕ್ಕಿ, 8 ಸದಸ್ಯರಿರುವ ಪ್ರತಿ ಕಾರ್ಡಿಗೆ 80 ಕೆ.ಜಿ ಅಕ್ಕಿ, 9 ಸದಸ್ಯರಿರುವ ಪ್ರತಿ ಕಾರ್ಡಿಗೆ 90 ಕೆ.ಜಿ, 10 ಸದಸ್ಯರಿರುವ ಪ್ರತಿ ಕಾರ್ಡಿಗೆ 100 ಕೆ.ಜಿ ಅಕ್ಕಿಯನ್ನು ನೀಡಲಾಗುವುದು.
ಪೋರ್ಟಬಿಲಿಟಿ ಜಾರಿಯಲ್ಲಿರುವುದರಿಂದ ಯಾವುದೇ ಅಂತರ್ ರಾಜ್ಯ ಅಥವಾ ಜಿಲ್ಲೆಯ ಪಡಿತರ ಚೀಟಿಗಳಿಗೆ ಯಾವುದೇ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಲು ಅವಕಾಶವಿರುತ್ತದೆ ಎಂದು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


