Connect with us

ಸಿನಿ ಸುದ್ದಿ

ಕೆಜಿಎಫ್ ಸಿನಿಮಾ ವಿಮರ್ಶೆ, ಸ್ವೀಕೃತಿ, ನಿರಾಕರಣೆಗಳ ಸುತ್ತ..!

Published

on

ಸಂಜ್ಯೋತಿ ವಿ.ಕೆ
  • ಸಂಜ್ಯೋತಿ ವಿ.ಕೆ, ಸಿನೆಮಾ ನಿರ್ದೇಶಕಿ,ಬೆಂಗಳೂರು

Otherwise ಜೀವಪರ’ವಾಗಿರುವಂತವರಿಗೂ ಒಂದು ಸಿನಿಮಾದ ಮನುಷ್ಯವಿರೋಧಿ ಧೋರಣೆಗಳು ಏನೂ ಅಳುಕಿಲ್ಲದೆ ಮನಸನ್ನು ರಂಜಿಸುತ್ತೆ (entertainment!!) ಅನ್ನೋದಾದ್ರೆ This is high time to ask ourselves ‘ಏನಾಗಿದೆ ನಮಗೆ?’ ಅಂತ..

ಸಿನಿಮಾ ನಮ್ಮನ್ನು ನಗಿಸಲಿ, ಅಳಿಸಲಿ, ವಿಷಲ್ ಹೊಡಸಲಿ.. but not for wrong reasons..! ಹುಡುಗೀನ ಎತ್ತಾಕೊಂಡು ಬಂದು ಸರಕಿನ ಹಾಗೆ treat ಮಾಡೋದು ಒಬ್ಬ ಹುಡುಗನಿಗೆ ಥ್ರಿಲ್ ಕೊಡುತ್ತೆ ಅಂದ್ರೆ ಅದು ಆತನ ಒಳಗಿನ misogynyಯನ್ನ ಉದ್ದೀಪಿಸ್ತಾ ಇದೆ ಅಂತಲೇ. N the authentication of such misogyny in the cinema by his favorite ‘star’ will surely make him more misogynist.

ಒಬ್ಬ ಬಡ ಹುಡುಗ ಕಷ್ಟ ಪಟ್ಟು ಉನ್ನತಿಗೆ ಏರುವ ಬದಲು, ಸಮಾಜಕಂಟಕ ಮಾಫಿಯಾ ದೊರೆಯಾಗಿ ಬೆಳೆಯುವುದನ್ನು authenticate ಮಾಡುವ ಸಿನಿಮಾ ಪ್ರೇಕ್ಷಕನೊಬ್ಬನನ್ನು entertain ಮಾಡ್ತಿದೆ ಎಂದರೆ ಅದು ಆತನ ಬಡತನ ಅಸಹಾಯಕತೆಯ ಮೂಲದಿಂದ ಹೊರಟಿರಬಹುದು, ಆದರೆ ಆತನನ್ನು ಯಾವ ದಿಕ್ಕಿನಲ್ಲಿ ಯೋಚಿಸಲು ಉದ್ದೀಪಿಸಬಹುದೆಂಬುದನ್ನು ಅರಿಯಲು psychology professor ಆಗಬೇಕಾದ ಅಗತ್ಯ ಖಂಡಿತ ಇಲ್ಲ.

ಹೆಚ್ಚು ಹೆಚ್ಚು ಜನರು ಇಂತದನ್ನು ಮೆಚ್ಚುತ್ತಿದ್ದಾರೆಂಬುದು (ಗಳಿಕೆ?) ನಮಗೆ ಆತಂಕ ತರಬೇಕೇ ಹೊರತು ಖುಷಿಯನ್ನಲ್ಲ. This alone can never be the criterion for success and specially when economic success comes with such wrong means, we have all the more reasons to doubt it and reject to call it as success.

And, This is not a debate about commercial film Vs Art film (Keeping aside my own reservations about such classification for time being)

The major questions are;

1. Huge fan following ಇರುವ ಒಬ್ಬ ‘ಹೀರೋ’ ತೆರೆ ಮೇಲೆ ಏನನ್ನು authenticate ಮಾಡಬಹುದು/ಬಾರದು ಎಂಬುದು ಯಾವುದೇ ಮಾಧ್ಯಮದಲ್ಲಿ ಇರಬೇಕಾದ ಕನಿಷ್ಟ ಸಾಮಾಜಿಕ ಜವಾಬ್ದಾರಿ. ಅದನ್ನು ತಪ್ಪಿ ನಡೆದಾಗ ಅದರ ಬಗ್ಗೆ ಚರ್ಚಿಸುವುದು, ವಿಮರ್ಶಿಸುವುದು, ಖಂಡಿಸುವುದು ಇವೆಲ್ಲವೂ ಆ ಕಲೆಯ ಬಗೆಗೆ ಆಸಕ್ತಿ ಹೊಂದಿರುವವರ ಹಕ್ಕು ಮತ್ತು ಕರ್ತವ್ಯ. ಅಷ್ಟೇ ಏಕೆ ಸಿನಿಮಾದ ಬಗೆಗೆ ಆಸಕ್ತಿ ಇಲ್ಲವಾದರೂ ಸಮಾಜದ ಆಗುಹೋಗಿನ ಬಗೆಗೆ ಕಾಳಜಿಯುಳ್ಳ ಯಾರಾದರೂ ಮಾಡಬಹುದಾದ (infact ಮಾಡಬೇಕಾದ) ಕೆಲಸವಿದು.

‘ಕಬೀರ್ ಸಿಂಗ್’ನ ನಾಯಕ ಪಾತ್ರದ ಬಗೆಗೆ, ‘ಪದ್ಮಾವತ್’ನ ನಿರ್ದೇಶಕನ ಧೋರಣೆಯ ಬಗೆಗೆ ಮತ್ತು ಆ ಸಿನಿಮಾದ ಬಗೆಗೆ, ತನ್ನ ಸಿನಿಮಾ ಒಂದರಲ್ಲಿ ಮಹಿಳಾ ಇನ್ಸ್ಪೆಕ್ಟರ್ ಗೆ ‘ಝಾಡಿಸಿ ಒದ್ದರೆ ಮುಟ್ಟಿನ ರಕ್ತ ಚೆಲ್ಲಬೇಕು’ ಅನ್ನೋ ಸಂಭಾಷಣೆಯನ್ನ ಯಾವುದೇ ಅಳುಕಿಲ್ಲದೆ ಹೇಳಿದ ‘ಮೇರು ನಟ’ ಮುಮ್ಮುಟ್ಟಿಯ ಬಗೆಗೆ, SRK ‘ಮೈ ಹೂ ನಾ’ ದಲ್ಲಿ ಸಂಜನಾ ಎಂಬ ಪಾತ್ರ ಮತ್ತು ‘ಕುಚ್ ಕುಚ್ ಹೋತಾ ಹೈ’ನ ಕಜೋಲ್ ಪಾತ್ರ ಚಿತ್ರಗಳಲ್ಲಿನ ಹೆಣ್ಣು ಪಾತ್ರಧಾರಿಗಳ patriarchal ಸಿದ್ಧಮಾದರಿಗೆ ಒಪ್ಪಿತವಾಗುವ ಮೇಕ್ ಓವರ್’ ಬಗೆಗೆ, ‘ಕಲ್ ಹೋ ನ ಹೋ’ ನಲ್ಲಿ ಪ್ರೀತಿ ಝಿಂತಾಳ ಪಾತ್ರವನ್ನು ‘ಚಶ್ಮಿಶ್’ ಎಂದು ಕರೆಯುವುದರ ಬಗೆಗೆ … ಇಂತವುಗಳ ಬಗೆಗೆಗೆಲ್ಲ ನಡೆದ ವಿಮರ್ಶೆಗಳು ನಡೆಯಲೇ ಬಾರದಿತ್ತೇ? (in btw I love Sharukh!)
ಅದರಿಂದ ಆ ನಟ/ನಿರ್ದೇಶಕರು ನಾಶವಾಗಿ ಹೋದರೇ? ಇಲ್ಲ. ಬದಲಿಗೆ ಇಂತ ಚರ್ಚೆ ವಿಮರ್ಶೆಗಳು ಒಟ್ಟಾರೆ ಬಾಲಿವುಡ್’ನ ಮತ್ತು ಇತರ ಸಿನಿಮಾರಂಗಗಳ ಧೋರಣೆಯ ಮೇಲೆ ಸಕಾರಾತ್ಮಕ ಪರಿಣಾಮವನ್ನೇ ಬೀರಿದೆ. ಸುಮಾರು ಜನರಿಗೂ ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯದ ಅರಿವುಂಟಾಗಿದೆ. (ಎಲ್ಲವೂ ಸಂಪೂರ್ಣ ಬದಲಾಗಿಹೋಗಿದೆಯೆಂದಲ್ಲ, ಬದಲಾವಣೆಯ ಸಾಧ್ಯತೆಗಳು ತೆರೆದುಕೊಳ್ಳುತ್ತಿವೆ ಎಂಬುದು ಮುಖ್ಯ)
ಆದರೆ ಇಲ್ಲಿ ನಮ್ಮಲ್ಲಿ, ‘ಖರಾಬು…’ ಹಾಡಿನ ಬಗೆಗೆ, ಅದರಲ್ಲಿನ misogyny ಬಗೆಗೆ ನಡೆದ ವಿಮರ್ಶೆಯನ್ನು ಯಾವ ರೀತಿ ಸ್ವೀಕರಿಸಲಾಯಿತು? ನೆನಪಿದೆಯೇ??

2. ಮೇಕಿಂಗು (?!), ಮಣ್ಣು ಮಸಿ ಅನ್ನೋ ಹೆಸರಲ್ಲಿ ಒಂದು ಸಿನಿಮಾ ಜಾತೀಯತೆ, misogyny, ಫ್ಯಾಸಿಸಂ, ರೌಡಿಸಂ ಇತ್ಯಾದಿಗಳನ್ನ authenticate ಮಾಡೋದನ್ನ ಒಪ್ಪುತೀವಿ ಅಂದ್ರೆ there is something seriously wrong with our senses. (By the way I like Yash. )

3. ಹಾಗಾದರೆ ನಟ/ನಟಿಯರು ‘negative shade’ ಇರುವ ಪಾತ್ರಗಳನ್ನು ಮಾಡಲೇ ಬಾರದೇ? ಎಂದರೆ ಅದು ಹಾಗಲ್ಲ. ಆ negative ಅನ್ನು ನಿರ್ದೇಶಕ ಮತ್ತು ನಟ/ಟಿ negative ಎಂದು ತೋರಿಸುತ್ತಾ ಅದರ ಬಗೆಗೆ ಒಂದು ನಿರಾಕರಣೆಯನ್ನು ನೋಡುಗರ ಮನಸಿನಲ್ಲಿ ಹುಟ್ಟಿಸುತ್ತಿದ್ದಾರೆಯೇ ಅಥವಾ ಆ negative ನ ಬಗೆಗೆ ಒಂದು ಮೃದು ಧೋರಣೆಯನ್ನೋ, ರಮ್ಯತೆಯನ್ನೋ ಹುಟ್ಟುಹಾಕುತ್ತಾ ಅದನ್ನು ವೈಭವೀಕರಿಸುತ್ತಾ ನೋಡುಗರಲ್ಲಿ ಅದಕ್ಕೊಂದು ಮಾನ್ಯತೆ ತಂದು ಕೊಡುತ್ತಿದ್ದಾರೆಯೇ ಎಂಬುದು ಮುಖ್ಯವಾಗುತ್ತದೆ. (ಕಬೀರ್ ಸಿಂಗ್, ಪದ್ಮಾವತ್…)

3. ಸಿನಿಮಾ ಮಾಧ್ಯಮದ ಅಗಾಧ influenceನ ಅರಿವಿಲ್ಲದ (?) ಹುಂಬರು ಮಾತ್ರವೇ ‘ಸಿನಿಮಾ ಸಿನಿಮಾ ಅಷ್ಟೆ’ ಅಂತ ಉಡಾಫೆ ಮಾತಾಡಬಹುದು.

4. ಕನ್ನಡ ಸಿನಿಮಾ ರಂಗದ ಮೇರು ನಟ ಡಾ.ರಾಜ್’ಕುಮಾರ್ ಅವರು ಪಾತ್ರಗಳ ಆಯ್ಕೆಯ ಬಗೆಗೆ ಹೊಂದಿದ್ದ ಧೋರಣೆ ಒಂದು ಮಾದರಿಯಾಗಬೇಕು. (ಅವರ ಅರಿವಿಗೆ ದಕ್ಕಿದಷ್ಟನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದರು. ಅದರಾಚೆಗೂ ಅವರ ಕೆಲವು ಸಿನಿಮಾಗಳಲ್ಲಿ misogyny, patriarchy ಗಳು ಢಾಳಾಗಿ ಇರುವುದು ನಿಜವೇ. ಆದರೆ ಅವುಗಳ ಸಂಪೂರ್ಣ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಲು ಬರುವುದಿಲ್ಲ. ಒಂದು ಒಟ್ಟಾರೆ ಸಮಾಜ ಬದಲಾವಣೆಯ ಯಾವ ಹಂತದಲ್ಲಿದೆ ಎಂಬುದರ influence ಸಹಾ ಅಲ್ಲಿ ಕೆಲಸ ಮಾಡುತ್ತಿರುತ್ತದೆ.)

5. ಬಹಳಷ್ಟು ಜನ ಮೆಚ್ಚಿರುವ/ ಇಷ್ಟಪಟ್ಟಿರುವ ಸಿನಿಮಾದ ಬಗೆಗೆ ಮಾತಾಡಬೇಡಿ ಎನ್ನುವುದು (ಕೆಲವು ಉಗ್ರ ಅಭಿಮಾನಿಗಳಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಎಲ್ಲರೂ ಇಷ್ಟ ಪಟ್ಟಿರುವ’ ಎಂದೇ announce ಮಾಡಿದ್ದಾರೆ! ಇಲ್ಲಿ ಈ ಸಿನಿಮಾದ ಬಗೆಗೆ ವಿಮರ್ಶಾತ್ಮಕವಾಗಿ ಮಾತಾಡುತ್ತಿರುವವರೂ ಸೇರಿದಂತೆ ಇನ್ನೂ ಅನೇಕರು ಅವರ ಆ ‘ಎಲ್ಲರೂ’ ಒಳಗೆ ಬರುತ್ತಿಲ್ಲವೆಂಬುದನ್ನೂ ಕಣೆಗಣಿಸಿ.. ಇರಲಿ, ಒದೊಂದು ಜೋಶ್.) ಈಗ ಭಾರತವನ್ನು ಮುಸುಕಿರುವ ‘ಬಹುಸಂಖ್ಯಾತವಾದದ reflection ಆಗಿ ಕಾಣುವುದಿಲ್ಲವೇ?

6. ಹೀಗೆ ವಿಮರ್ಶಿಸುತ್ತಿರುವವರು ಇಂತಹ ಜೀವವಿರೋಧಿ ಧೋರಣೆಗಳನ್ನು ಪ್ರತಿಪಾದಿಸುತ್ತಿರುವ ಸಿನಿಮಾವನ್ನು ಬಹುದೊಡ್ಡ ಮಟ್ಟದಲ್ಲಿ ಜನರು ಮೆಚ್ಚುವುದನ್ನು ಆತಂಕದಿಂದ ನೋಡುವುದು ಸಹಜ.‌ ‘ಸಿನಿಮಾವನ್ನು ಮೆಚ್ಚುವವರ ಬಗೆಗೇಕೆ ಬರೆಯುತ್ತೀರಿ?’ ಎಂದು ಕೇಳುವುದರಲ್ಲಿಯೇ ಸಮಸ್ಯೆಯಿದೆ. (Until it is too personal!)

7. ಕೊನೆಯದಾಗಿ ನನ್ನ ಒಂದು ವೈಯಕ್ತಿಕ ಅಭಿಪ್ರಾಯ.
ಹೀಗೆ ಈ ಸಿನಿಮಾದ ಬಗೆಗೆ ವಿಮರ್ಶಾತ್ಮಕವಾಗಿ ಪ್ರಮುಖವಾಗಿ ಬರೆಯುತ್ತಿರುವ ಕೆಲವರು ಕೆಲ ಬೇರೆ ಸಂದರ್ಭಗಳಲ್ಲಿ ಅವರ ಕೆಲವು ನಿಲುವುಗಳನ್ನು ಬಹಳ forcefull ಆಗಿ ಪ್ರತಿಪಾದಿಸಲು ಪ್ರಯತ್ನಿಸಿದ್ದು (it’s not the correctness or otherwise of the subject itself but the way they tried to do it) ಮತ್ತು ಆಗ ಅಂತಹ ನಿಲುವುಗಳನ್ನು ಒಪ್ಪದವರಿರಲಿ, ಅನುಮಾನವುಳ್ಳವರನ್ನೂ ಕಿಚಾಯಿಸುವ ವ್ಯಂಗ್ಯ ಅಥವಾ ಒಂದು ತೆರನಾದ judgemental classificationಗೆ ದೂಡುವಂತೆ ನಡೆದುಕೊಂಡದ್ದರ ಬಗೆಗೆ ನನಗೂ objectionಗಳಿವೆ. ಅಂತಹ ಸಂದರ್ಭಗಳಲ್ಲಿ ಆದ ಅನುಭವದ ಕಹಿಯಿಂದ ಕೆಲವರು ಇವರ ಈ ಸಿನಿಮಾ ಕುರಿತ ವಿಮರ್ಶೆಯನ್ನು ನಿರಾಕರಿಸುವಂತೆಯೂ ನನಗೆ ಕಂಡಿತು. (That’s my opinion..) ಅದು ನನ್ನೊಬ್ಬ ಬಹಳ sensible ಆದ ಗೆಳತಿಯ ಪ್ರತಿಕ್ರಿಯೆ ನೋಡಿ ಅನಿಸಿದ್ದು.. ಇರಲಿ.

8. ಈ ವಿಮರ್ಶೆಗಳು ನಿಮಗೆ ಒಪ್ಪಿತವಾಗಲೇ ಬೇಕಂತಿಲ್ಲ. ಆದರೆ ಹಾಗೆ ವಿಮರ್ಶಿಸುತ್ತಿರುವವರ credibility ಬಹುತೇಕ ಗೊತ್ತಿರುವುದರಿಂದ (ನಮ್ಮ ನಮ್ಮಲ್ಲೇ) ಅದನ್ನು ಕೇಳಿಸಿಕೊಳ್ಳುವ, ಒಮ್ಮೆ ಅದರ ಬಗೆಗೆ ಯೋಚಿಸಿ ನೋಡುವ, ಸಾಧ್ಯವಾದರೆ ಆರೋಗ್ಯಕರವಾಗಿ ಚರ್ಚಿಸುವಷ್ಟು ಸಹನೆ ಇರಲಿ. ಅದರಾಚೆಗೂ ಅವರ ವಿಚಾರ ಒಪ್ಪಿತವಾಗದಿದ್ದಲ್ಲಿ ನಿರಾಕರಿಸುವ ಆಯ್ಕೆ , ಹಕ್ಕೂ ಎರಡೂ ಇದ್ದೇ ಇರುತ್ತದೆ. ಆದರೆ ಇಂತಹ ಸಾಮಾನ್ಯ ವಿಷಯಗಳೂ ನಮ್ಮನ್ನು ಗುಂಪುಗಳಾಗಿ ಒಡೆಯದಿರಲಿ. Sorry if the last paragraph is sounding too preachy. If so you can please ignore it.

(ಸಂಜ್ಯೋತಿ ವಿ.ಕೆ. ಅವರ ಫೇಸ್‌ಬುಕ್‌ ಬರಹ)


ಬೆಂಗಳೂರಿನ ಸಂಜ್ಯೋತಿ ವಿ.ಕೆ., ಎಂಬಿಎ ಮತ್ತು ಅರ್ಥಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರೆ. ಸದ್ಯ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಹಲೇಖಕಿಯಾಗಿ ರಚಿಸಿದ ‘ನಕ್ಷತ್ರದ ಧೂಳು’ ಏಕವ್ಯಕ್ತಿ ನಾಟಕ ರಾಜ್ಯದ ಹಲವೆಡೆ ಪ್ರದರ್ಶನ ಕಂಡಿದೆ. ಕೆಲಕಾಲ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧಕರಾಗಿಯೂ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಸಿನೆಮಾ ಮಾಧ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ನಿರ್ದೇಶನದ ‘ಅನಲ‘ ಕಿರುಚಿತ್ರವು ರಾಜ್ಯ ಸರಕಾರ ನೀಡುವ 2016ನೇ ಸಾಲಿನ ‘ಅತ್ಯುತ್ತಮ ಕಿರುಚಿತ್ರ ರಾಜ್ಯಪ್ರಶಸ್ತಿ‘ ಪಡೆದಿದೆ.


ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ

ಗೆಳೆತನದ ಮಹತ್ವ ಸಾರುವ ಕುಚುಕು ಇಂದಿನಿಂದ ಅಮೋಘ ಪ್ರಾರಂಭ ; ದಾವಣಗೆರೆ ಹುಡುಗ ಅರ್ಜುನ್ ಚೌಹಾಣ್ ಅವರ ಮೂರನೇ ಚಿತ್ರ ತೆರೆಗೆ

Published

on

ವಿದ್ಯಾನಾಯ್ಕ್ ಅರೇಹಳ್ಳಿ

ಸುದ್ದಿದಿನ,ದಾವಣಗೆರೆ:ಬಂಜಾರ ಸಮುದಾಯದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕರಾದ ಅರ್ಜುನ್ ಚೌಹಾಣ್ ನಟನೆಯ ಕುಚುಕು ಚಿತ್ರ ದಾವಣಗೆರೆ ನಗರದ ತ್ರಿಶುಲ್ ಚಿತ್ರಮಂದಿರದಲ್ಲಿ ಇಂದಿನಿಂದ ಪ್ರದರ್ಶನ ಕಾಣಲಿದೆ.

ಮುಖ್ಯ ಪಾತ್ರದಲ್ಲಿ ಅರ್ಜುನ್ ಚೌಹಾಣ್, ಬಸವರಾಜ್ ಕುಮಾರ್, ಪ್ರಿಯದರ್ಶಿನಿ, ಶಂಕರ್ ಅಶ್ವತ್ಥ್ ಮತ್ತು ಇತರರು ಕಾಣಿಸಿಕೊಂಡಿದ್ದು, ಮೈಸೂರು ರಾಜು ಅವರು ಕಥೆ, ಚಿತ್ರಕಥೆ, ನೃತ್ಯ, ನಿರ್ದೇಶನದಲ್ಲಿ ಚಿತ್ರ ಅಚ್ಚುಕಟ್ಟಾಗಿ ಮೂಡಿಬಂದಿದೆ.
ನಾಗರತ್ನಮ್ಮ ಚಿತ್ರದ ನಿರ್ಮಾಪಕರು ಆಗಿದ್ದು, ಲಕ್ಷ್ಮಿ ಅವರು ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಇನ್ನು ಎ. ಟಿ. ರವೀಶ್ ಸಂಗೀತ ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳಲಿದೆ, ಅರವಿಂದ್ ರಾಜ್ ಅವರ ಸಂಕಲನ, ರಾಮನಾಥ್ ರಾಜ್ ಛಾಯಾಗ್ರಹಣಾವಿದೆ ಎನ್ನುತ್ತಾರೆ ಚಿತ್ರದ ನಾಯಕ ಅರ್ಜುನ್ ಚೌಹಾಣ್.

ಅರ್ಜುನ್ ಚೌಹಾಣ್ ಕೇವಲ ಸಿನಿಮಾಗಳಲ್ಲದೆ, ಬಂಜಾರ ಸಮುದಾಯದ ಸಂಸ್ಕೃತಿಯನ್ನು ಬಿಂಬಿಸುವ ಮತ್ತು ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಬಂಜಾರ ಹವೇಲಿ ಎಂಬ ರಿಯಾಲಿಟಿ ಶೋ ಅನ್ನು ಕೂಡ ಯಶಸ್ವಿಯಾಗಿ ನಡೆಸಿ, ನಿರ್ದೇಶಿಸಿದ್ದಾರೆ. ಅದಲ್ಲದೆ ಈ ಹಿಂದೆ ರುದ್ರಾಕ್ಷಿಪುರ, ಸ್ವಚ್ಛ ಕರ್ನಾಟಕ, ಉತ್ತರ, ನಾಕುತಂತಿ, ಇತ್ಯಾದಿ ಚಿತ್ರಗಳಲ್ಲಿ ನಟಿಸಿದ್ದು, ಉತ್ತರ ಮತ್ತು ನಾಕುತಂತಿ ರಿಲೀಸ್ ಆಗಬೇಕಿದೆ.

ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಗುರುತಿಸಿಕೊಳ್ಳುತ್ತಿರುವ ಅರ್ಜುನ್ ಚೌಹಾಣ್ ಚಿಕ್ಕ ವಯಸ್ಸಿನಿಂದಲೇ ಬೆಳ್ಳಿಪರದೆಯ ಮೇಲೆ ಹೀರೊ ಆಗಬೇಕೆಂಬ ದೊಡ್ಡ ಕನಸನ್ನು ಹೊತ್ತು ಸಿನಿರಂಗಕ್ಕೆ ಬಂದ ಬಂಜಾರ ಸಮುದಾಯದ ಪ್ರತಿಭೆ. ತಾವೊಬ್ಬ ನಟನಾಗಬೇಕು ಎಂಬ ಹಂಬಲದಿಂದ ಚಿತ್ರರಂಗ ಪ್ರವೇಶಿಸಿದ ಇವರು ತಮ್ಮದೇ ಆದ ಶೈಲಿಯಲ್ಲಿ ಹೆಜ್ಜೆ ಇಡುತ್ತಿದ್ದಾರೆ.

ನಾಯಕ ನಟನಾಗಿ ​ರುದ್ರಾಕ್ಷಿಪುರ ಚಿತ್ರದ ಮೂಲಕ ಬೆಳ್ಳಿಪರದೆಗೆ ಕಾಲಿಟ್ಟ ಇವರು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಮೂಲಕ ಅವರು ಪ್ರೇಕ್ಷಕರ ಗಮನ ಸೆಳೆದಿದ್ದರು.

ಇನ್ನು 2022ರಲ್ಲಿ ​ಸ್ವಚ್ಛ ಕರ್ನಾಟಕ ಎಂಬ ಸಾಮಾಜಿಕ ಸಂದೇಶವುಳ್ಳ ಸಿನಿಮಾದಲ್ಲಿ ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡ ಅವರಂತಹ ಗಣ್ಯರೊಂದಿಗೆ ಕೆಲಸ ಮಾಡುವ ಅವಕಾಶ ಪಡೆದದ್ದು ಇವರ ಪ್ರತಿಭೆಗೆ ರಹದಾರಿ ಸೃಷ್ಟಿಸಿದಂತಾಗಿತ್ತು. ಇದೀಗ ​ಕುಚುಕು ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಪರಿಶ್ರಮ ಮತ್ತು ಫಿಟ್ನೆಸ್

ಪರಿಶ್ರಮ ಮತ್ತು ಫಿಟ್ನೆಸ್ ಗೆ ಮಹತ್ವ ಕೊಡುವ ಅರ್ಜುನ್ ಸಿನಿಮಾಗಳಲ್ಲಿ ಹೀರೊ ಆಗಲು ಬೇಕಾದ ದೈಹಿಕ ಕಸರತ್ತು, ಸಿಕ್ಸ್ ಪ್ಯಾಕ್ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮತ್ತು ನಟನಾ ಕೌಶಲಗಳಿಗಾಗಿ ಇವರು ಸಾಕಷ್ಟು ಶ್ರಮವಹಿಸಿದ್ದಾರೆ.

ಆಲ್ಬಮ್ ಸಾಂಗ್ಸ್ ಮತ್ತು ಶಾರ್ಟ್ ಫಿಲ್ಮ್ಸ್

ಕುಚುಕು ನಾಯಕ ನಟ ಚೌಹಾಣ್

ಕೇವಲ ಬೆಳ್ಳಿಪರದೆ ಮಾತ್ರವಲ್ಲದೆ, ಇನ್ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಮೂಲಕ ‘ಸೇ ನೋ ಟು ಗಾಂಜಾ’ದಂತಹ ಜಾಗೃತಿ ಮೂಡಿಸುವ ಆಲ್ಬಮ್ ಹಾಡುಗಳು ಮತ್ತು ಕಿರುಚಿತ್ರಗಳಲ್ಲೂ ಭಾಗಿಯಾಗಿದ್ದಾರೆ.
​ಕನ್ನಡ ಚಿತ್ರರಂಗದಲ್ಲಿ ಹೊಸಬರಾಗಿ ಬಂದು, ತಮ್ಮ ಕನಸನ್ನು ನನಸು ಮಾಡಿಕೊಳ್ಳಲು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ.

ಸಿದ್ದಗಂಗಾ ಶಾಲೆಯಲ್ಲಿ ಅರಳಿದ ಪ್ರತಿಭೆ

ಸಿದ್ದಗಂಗಾ ಶಾಲೆಯಲ್ಲಿ ತಮ್ಮ ನಟನೆಯ ಅಡಿಪಾಯವನ್ನು ಗಟ್ಟಿಗೊಳಿಸಿಕೊಂಡ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ ಅರ್ಜುನ್ ಚೌಹಾಣ್. ಶಾಲೆಯಲ್ಲಿ ಓದುತ್ತಿರುವ ಶನಿವಾರ ಮತ್ತು ಭಾನುವಾರ ರಜಾ ದಿನಗಳಲ್ಲಿ ಕಥೆ, ಕವನ ನಾಟಕ ಇತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹ ನೀಡಲಾಗುತ್ತಿತ್ತು. ಇದು ನಮಗೆ ವರದಾನವಾಗಿ ನಮ್ಮ ಸ್ನೇಹಿತರೆಲ್ಲ ಸೇರಿ ನಾವೇ ನಾಟಕ, ಕಥೆ ಕವನ ರಚಿಸಿ ಪ್ರದರ್ಶನ ಮಾಡುತ್ತಿದ್ದೆವು ಎಂದು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.

ಬಂಜಾರ ಹವೇಲಿಯ ಹರಿಕಾರ

ಬಂಜಾರ ಹವೇಲಿ ಅನ್ನೋದು ಬಂಜಾರ (ಲಂಬಾಣಿ) ಸಮುದಾಯದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಮತ್ತು ಮೊದಲ ರಿಯಾಲಿಟಿ ಶೋ. ಇದು ಬಿಗ್ ಬಾಸ್ ಮಾದರಿಯ ರಿಯಾಲಿಟಿ ಶೋ ಆಗಿದ್ದು, ವಿವಿಧ ಕ್ಷೇತ್ರಗಳ (ಸಿನಿಮಾ, ಟಿವಿ ಮತ್ತು ಸಾಮಾನ್ಯ ಜೀವನ) ಸ್ಪರ್ಧಿಗಳು ಒಂದೇ ಸೂರಿನಡಿ ವಾಸಿಸುತ್ತಾ ವಿವಿಧ ಆಟಗಳು ಮತ್ತು ಸವಾಲುಗಳಲ್ಲಿ ಸ್ಪರ್ಧಿಸುತ್ತಾರೆ.

​ಬಂಜಾರ ಸಂಸ್ಕೃತಿ, ಆಚಾರ-ವಿಚಾರಗಳು ಮತ್ತು ಪ್ರತಿಭೆಗಳನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಶೋನ ಮುಖ್ಯ ಉದ್ದೇಶವಾಗಿದೆ.

ಒಟ್ಟಾರೆಯಾಗಿ ಹಲವು ಅಡೆತಡೆಗಳನ್ನು ತಮ್ಮ ಜೀವನದಲ್ಲಿ ಎದುರಿಸಿ ತಾನು ಕಂಡ ಕನಸನ್ನು ನನಸು ಮಾಡಿಕೊಂಡು ತನ್ನೊಟ್ಟಿಗೆ ಇತರರನ್ನು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿರುವ ಬಂಜಾರ ಸಮುದಾಯದ ಅರ್ಜುನ್ ಚೌಹಾಣ್ ಅವರಿಗೆ ಪ್ರೇಕ್ಷಕರ ಬೆಂಬಲ ಮತ್ತು ಆಶೀರ್ವಾದ ಸಿಗಲಿ ಎನ್ನುವುದು ಸುದ್ದಿದಿನ ಪತ್ರಿಕೆಯ ಹಾರೈಕೆ ಆಗಿದೆ. ಕುಟುಂಬ ಪರಿಹಾರ ಸಮೇತ ಚಿತ್ರಮಂದಿರಕ್ಕೆ ಬಂದು ಹಾರೈಸಿ ಎಂದು ವಿನಂತಿದ್ದಾರೆ ಕುಚುಕು ಚಿತ್ರದ ನಾಯಕ ನಟ ಅರ್ಜುನ್ ಚೌಹಾಣ್.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

‘ಹಿಟ್ಲರ್ ಕಲ್ಯಾಣ’ದ ನಾಯಕನ ಬದುಕಿನ ಪಯಣ ಹೀಗಿತ್ತು

Published

on

ಸುದ್ದಿದಿನ ಡೆಸ್ಕ್:ಆರಂಭಿಕ ಜೀವನ – 1978ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ದಿಲೀಪ್ ರಾಜ್ ಅವರು ಕಾಲೇಜು ದಿನಗಳಿಂದಲೇ ಕಲೆಯತ್ತ ಒಲವು ಹೊಂದಿದ್ದರು.

ಚಲನಚಿತ್ರ ರಂಗ – 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಎಂಟ್ರಿ ಕೊಟ್ಟ ಅವರು, 2007ರಲ್ಲಿ ಪುನೀತ್ ರಾಜ್‌ಕುಮಾರ್ ಅವರ ‘ಮಿಲನ’ ಚಿತ್ರದಲ್ಲಿ ಹೇಮಂತ್ ಎಂಬ ವಿಲನ್ ಪಾತ್ರದ ಮೂಲಕ ಎಲ್ಲರ ಗಮನ ಸೆಳೆದರು.

ಇತ್ತೀಚಿನ ಜನಪ್ರಿಯತೆ – ‘ಲವ್ ಮಾಕ್ಟೇಲ್’ ಸಿನಿಮಾ ಮತ್ತು ಕಿರುತೆರೆಯಲ್ಲಿ ನಟ-ನಿರ್ಮಾಪಕರಾಗಿ ದೊಡ್ಡ ಹೆಸರು ಮಾಡಿದ್ದರು.

ದಿಲೀಪ್ ರಾಜ್ ಅವರ ಸಾವು ಕೇವಲ ಒಂದು ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಚಿತ್ರರಂಗಕ್ಕೆ ದೊಡ್ಡ ನಷ್ಟ. ಇವರ ಈ ಹಠಾತ್ ನಿಧನವು ಒತ್ತಡದ ಜೀವನಶೈಲಿ ಮತ್ತು ಆರೋಗ್ಯದ ಕಡೆಗೆ ನಾವು ನೀಡಬೇಕಾದ ಹೆಚ್ಚಿನ ಗಮನದ ಬಗ್ಗೆ ಎಚ್ಚರಿಕೆ ನೀಡುವಂತಿದೆ.

Continue Reading

ದಿನದ ಸುದ್ದಿ

ನಟ ದಿಲೀಪ್ ರಾಜ್ ಆ ಒಂದು ತಪ್ಪು ಪ್ರಾಣಕ್ಕೆ ಮುಳುವಾಯ್ತು

Published

on

ಸುದ್ದಿದಿನಡೆಸ್ಕ್:ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (47) ಅವರ ಅಕಾಲಿಕ ನಿಧನವು ಇಡೀ ಸ್ಯಾಂಡಲ್‌ವುಡ್ ಅನ್ನು ದಿಗ್ಭ್ರಮೆಗೊಳಿಸಿದೆ. ಕೇವಲ 47 ವರ್ಷ ವಯಸ್ಸಿನ ಈ ಪ್ರತಿಭಾನ್ವಿತ ಕಲಾವಿದ ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಆದರೆ ಅವರ ಈ ಸಾವಿನ ಹಿಂದೆ ಒಂದು ಬೇಸರದ ಸಂಗತಿಯೂ ಅಡಗಿದೆ, ಅದೇನೆಂದರೆ ಅವರ ಆರೋಗ್ಯದ ಕುರಿತು ತೋರಿದ ಒಂದು ನಿರ್ಲಕ್ಷ್ಯ!

ನಟ ನಿರ್ಮಾಪಕ ದಿಲೀಪ್ ರಾಜ್ ಅವರು ಇಂದು ಹೃದಯಾಘಾತದಿಂದ ನಿಧನರಾಗಿದ್ದು, ಇಡೀ ಸ್ಯಾಂಡಲ್‌ವುಡ್ ದಿಗ್ಭ್ರಮೆಗೊಂಡಿದೆ. ಕೆಲವು ದಿನಗಳ ಹಿಂದೆ ಗೋವಾ ಪ್ರವಾಸದಲ್ಲಿದ್ದಾಗಲೇ ಅವರಿಗೆ ಆಗಾಗ ಎದೆನೋವು ಕಾಣಿಸಿಕೊಂಡಿತ್ತು, ಆದರೆ ಪ್ರವಾಸದ ಖುಷಿಯಲ್ಲಿದ್ದ ಅವರು ಅದನ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ.. ಬೆಂಗಳೂರಿಗೆ ಮರಳಿದ ನಂತರ ಇಂದು ವೈದ್ಯಕೀಯ ತಪಾಸಣೆಗೆ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು;

ತಪಾಸಣೆಗೆ ಹೋಗುವ ಮುನ್ನವೇ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಕುಮಾರಸ್ವಾಮಿ ಲೇಔಟ್‌ನ ಅಪೋಲೋ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.ನೋವು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ದಾಖಲಾಗಿದ್ದರೆ ಇಂದು ಪರಿಸ್ಥಿತಿ ಬೇರೆಯೇ ಇರುತ್ತಿತ್ತು ಎಂದು ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳು ಕಣ್ಣೀರು ಹಾಕುತ್ತಿದ್ದಾರೆ.
ನಟ ದಿಲೀಪ್ ರಾಜ್ ಅವರು ಕೆಲವೇ ದಿನಗಳ ಹಿಂದೆ ಗೋವಾಗೆ ಪ್ರವಾಸ ತೆರಳಿದ್ದರು.

ಅಲ್ಲಿ ಗೆಳೆಯರೊಂದಿಗೆ ಕಾಲ ಕಳೆಯುವಾಗಲೇ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು ಎನ್ನಲಾಗುತ್ತಿದೆ. ಅಂದೇ ಹೃದಯವು ಅಪಾಯದ ಮುನ್ಸೂಚನೆ ನೀಡಿದ್ದರೂ, ದಿಲೀಪ್ ಅವರು ಅದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷ್ಯ ತೋರಿದ್ದರು. ಗೋವಾ ಟ್ರಿಪ್‌ನಲ್ಲಿದ್ದಾಗಲೇ ಆಗಾಗ ನೋವು ಕಾಣಿಸಿಕೊಂಡರೂ, ಅವರು ಅದನ್ನು ಕೇರ್ ಮಾಡಿರಲಿಲ್ಲ.

ಬೆಂಗಳೂರಿಗೆ ಮರಳಿದ ನಂತರ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ವಿಪರ್ಯಾಸವೆಂದರೆ, ಇಂದು ಅವರು ಆಸ್ಪತ್ರೆಗೆ ತೆರಳಿ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕಿತ್ತು ಮತ್ತು ಅದಕ್ಕಾಗಿ ವೈದ್ಯರ ಅಪಾಯಿಂಟ್‌ಮೆಂಟ್ ಕೂಡ ಫಿಕ್ಸ್ ಆಗಿತ್ತು. ಆದರೆ ವಿಧಿ ಆಟವೇ ಬೇರೆಯಾಗಿತ್ತು. ನಿನ್ನೆ ರಾತ್ರಿ ಕೂಡ ಧಾರಾವಾಹಿ ಕಲಾವಿದರ ಜೊತೆ ಫೋನ್‌ನಲ್ಲಿ ಆತ್ಮೀಯವಾಗಿ ಮಾತನಾಡಿದ್ದ ನಟನಿಗೆ, ಮಧ್ಯರಾತ್ರಿ ತೀವ್ರವಾದ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ತೆರಳುವ ಮುನ್ನವೇ ಅವರು ಏಕಾಏಕಿ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending