Connect with us

ದಿನದ ಸುದ್ದಿ

ಕೆಲವು ಕೆ.ಎಸ್.ಆರ್.ಟಿ.ಸಿ ಬಸ್ ಗಳಲ್ಲಿ ‘ವಿದ್ಯಾರ್ಥಿ ಪಾಸ್’ ಗಳಿಗೆ ಮಾನ್ಯತೆ ಇಲ್ಲವೆ..?

Published

on

ಸುದ್ದಿದಿನ, ವಿಜಯಪುರ: ಇಂಡಿ ತಾ‌ಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದದ ವಿದ್ಯಾರ್ಥಿಗಳು, ಜೀಲ್ಲಾ ಮಟ್ಟದಲ್ಲಿ ಉನ್ನತ ಗುಣಮಟ್ಟದ ವಿದ್ಯಾಭ್ಯಾಸ ಮಾಡಬೇಕೆಂದು ಬಯಸುವವರು ಪ್ರತಿದಿನದ ರೊದನೆ ಅನುಭವಿಸುವಂತಾಗಿದೆ.

ನಮ್ಮ ಘನ ಸರ್ಕಾರ ವಿದ್ಯಾರ್ಥಿಗಳಿಗಾಗಿಯೆ ವಿಶೇಷ ಕ್ರಮಗಳನ್ನು ಜಾರಿಗೆಗೊಳ್ಳಿಸುತ್ತಿದೆ. ವಿದ್ಯಾರ್ಥಿಗಳು ದೂರದ ಶಾಲಾ-ಕಾಲೇಜಿಗೆ ಹೋಗಿ ತಮ್ಮ ಶಿಕ್ಷಣವನ್ನು ಮುಂದುವರಿಬೇಕೆಂದು ಕಡಿಮೆ ದರದಲ್ಲಿ ವಿದ್ಯಾರ್ಥಿಪಾಸ್ ಗಳನ್ನು ಕಲ್ಪಿಸ ಬೇಕೆಂದು ಆದೇಶ ನೀಡಿದೆ, ವಿದ್ಯಾರ್ಥಿ ಪಾಸ್ ಎಲ್ಲ ಬಸ್ ಗಳಲ್ಲಿ ಅನುಮತಿ ಇದೆ ಎಂದು ಹೇಳಿದೆ. ಆದರೆ ಇಂಡಿ ವಿಜಯಪುರ ಮಾರ್ಗವಾಗಿ ಸಂಚರಿಸುವ ಏಷ್ಟೊ ಬಸ್ಗಳಲ್ಲಿ ವಿದ್ಯಾರ್ಥಿ ಪಾಸ್ ಗಳಿಗೆ ಅನುಮತಿ ಇಲ್ಲ.

ಯಾಕೆಂದರೆ ಬಸ್ ಗಳಲ್ಲಿ ಭೀಮಾ ಸಾರಿಗೆ (ವಿದ್ಯಾರ್ಥಿಗಳ ಪಾಸಿಗೆ ಅನುಮತಿ ಇಲ್ಲ) ಎನ್ನುವ ನಾಮಫಲಕಗಳೆ ರಾರಾಜಿಸುತ್ತಿವೆ. ಇದರ ವಿಷಯವಾಗಿ ಬಸ್ ನಿರ್ವಾಹರನ್ನು ವಿಚಾರಿಸಿದರೆ ಕೇಲವರು ಎಲ್ಲಾ ಬಸ್ ಗಳಲ್ಲಿವು ವಿದ್ಯಾರ್ಥಿಪಾಸ್ ಗ‍ಳಿಗೆ ಅನುಮತಿ ಇವೆ ಅಂದರೆ, ಇನ್ನೂ ಕೇಲವರು ವ್ಯಂಗ್ಯವಾಗಿ ಮಾತನಾಡಿ, ಅಸಭ್ಯವಾಗಿ ವರ್ತಿಸುತ್ತಾರೆ, ಸ್ವತಃ ಚಕರ್ ಹೇಳಿರುವ ಹೇಳಿಕೆ ಇದು. ತೆರಿಗೆ ಕಟ್ಟಬೇಕು ಆದ ಕಾರಣ ಭೀಮಾ ಸಾರಿಗೆ ನಾಮ‍ಫಲಕಗಳನ್ನು ಹಾಕಿದ್ದೇವೆ ಅಂದರು.

ಅದಕ್ಕೆ ವಿದ್ಯಾರ್ಥಿಗಳು 103,ಮತ್ತು105 ಎರಡೆ ಬಸ್ ಗಳಿಗೆ ಮಾತ್ರ ಪಾಸ್ ಅನುಮತಿ ಇಲ್ಲ ಅಂತ ಗೋತ್ತು, ಆದರು ಬೇರೆ ಬಸ್ ಗಳಿಗೆ ಭೀಮಾ ಸಾರಿಗೆ ಎಂಬ ನಾಮಫಲಕಗಳು ಯಾಕೆ ಅಂತ ವಿದ್ಯಾರ್ಥಿಗಳು ಪ್ರಶ್ನೇ ಮಾಡಿದರೆ, ಅದಕ್ಕೆ ನೀವು ವಿದ್ಯಾರ್ಥಿಗಳು ಓದುವದನ್ನು ಮೋದಲು ಮಾಡಿ ಅದನ್ನು ಬಿಟ್ಟು ಬೇರೆ ಕೆಲಸ ಮಾಡ ಬೇಡಿ, ನಮ್ಮ ಕೆಲಸ ನಮಗೆ ತಿಳಿದಿದೆ ನೀವು ಹೇಳುವ ಅವಶ್ಯಕತೆ ಇಲ್ಲ ಎಂದು ವ್ಯಂಗ್ಯವಾಗಿ ಚಕರ್ ಮಾತನಾಡಿದರು.

ಚಕರ್ ಹೀಗೆ ಮಾತನಾಡಿದರು ಅಂತ ಕೇಂದ್ರ ಬಸ್ ನಿಲ್ದಾಣದ ಅಧೀಕಾರಿಯಾದ ಬಿಸ್ನಾಳರಿಗೆ ತಿಳಿಸಿದರೆ, ವಿದ್ಯಾರ್ಥಿ ಪಾಸ್ ಗಳು ಎಲ್ಲ ಬಸ್ ಗ‍ಳಿಗು ಅನುಮತಿ ಇದೆ, ಯಾರು ಅನುಮತಿ ಇಲ್ಲ ಅನ್ನುವರೋ ಅವರನ್ನು ಬಸ್ ನ ಜೋತೆಗೆ ಕರೆದುಕೊಂಡು ಹೋಗಿ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿರಿ ಎಂದು ಅವರು ಹೇಳುತ್ತಾರೆ. ದೂರು ದಾಖಲಿಸುವುದು ದೊಡ್ಡಸ್ಥೀಕೆ ಅಲ್ಲ. ಅದರಲ್ಲು ಹಳ್ಳಿಯ ಜನರು ಕೇಸು, ಕೋರ್ಟುಗಳಿಗೆಲ್ಲ ಭಯಪಡುತ್ತಾರೆ. ಆದ ಕಾರಣ ಯಾರು ಏನು ಹೇಳುತ್ತಿಲ್ಲ. ವಿದ್ಯಾರ್ಥಿಗಳು ಕೇಳಿದರೆ ವ್ಯಂಗ್ಯವಾಗಿ, ಅಸಬ್ಯವಾಗಿ ವರ್ತಿಸುತ್ತಾರೆ. ಇದರಿಂದಾಗಿ ವಿದ್ಯಾರ್ಥಿಗಳು ಬೇಸತ್ತಿದ್ದಾರೆ.

ಪ್ರತಿ ದಿನವು 9ಗಂಟೆಗೆಲ್ಲ ಶಾಲಾ-ಕಾಲೇಜಿನಲ್ಲಿ ಇ‍ರಬೇಕು, ಇಲ್ಲವಾದರೆ ಶಾಲೆ-ಕಾಲೇಜುಗಳಲ್ಲಿ ಗುರುಗಳ ಕಡೆಯಿಂದ ಬೈಯಿಸಿಕೊಳ್ಳ ಬೇಕು, ಅವರು ಕೋಡುವ ಶಿಕ್ಷೆನಾ ಅನುಭವಿಸ ಬೇಕು.ಕೇಲವೊಂದು ದಿನ ಪರೀಕ್ಷೆಗಳು, ಶಾಲಾ-ಕಾಲೇಜುಗಳಲ್ಲಿ ಪ್ರಮುಖವಾದ ಕಾರ್ಯಕ್ರಮಗಳು, ಹಾಗೂ ವಿಶೇಷವಾದ ತರಗತಿಗಳು ಇರುತ್ತವೆ. ತಡವಾಗಿ ಹೋಗಬೇಕಾಗುತ್ತದೆ. ಹೀಗೆ ಮಾಡಿದರೆ ಅವುಗಳಿಂದ ಹಿಂದೆ ಉಳಿಯ ಬೇಕಾಗುತ್ತದೆ.

ಆದ ಕಾರಣ ನಮ್ಮ ವಿಜಯಪುರ ಜಿಲ್ಲೆಯ ಮಾನ್ಯ ಜೀಲ್ಲಾಧೀಕಾರಿಗಳು ವಿದ್ಯಾರ್ಥಿಗಳ ಮೇಲೆ ಪ್ರೀತಿ, ಕಾಳಜಿ, ಧಯೆ, ಕರುಣೆ ಇಟ್ಟು, ವಿದ್ಯಾರ್ಥಿಗಳಿಗೆ ತೋಂದರೆ, ಮೋಸ ಆಗದಂತೆ ಸರಿಯಾದ ರೀತಿಯಲ್ಲಿ ಸೂಕ್ತ ಕ್ರಮವನ್ನು ತೆಗೆದುಕೊಳ್ಳ ಬೇಕಾಗಿ ಕಳಕಳಿಯಿಂದ ಇಂಡಿ ತಾಲ್ಲೂಕು ಹಾಗೂ ಇಂಡಿ ತಾಲ್ಲೂಕಿನ ಹೀರೆರೂಗಿ, ಬೊಳೆಗಾವಂ, ತಡವ್ಲಗಾ, ಗುಂಡುತಾಂಡಾ, ಅಥರ್ಗಾ, ನಾಗಠಾಣ, ಹಾಗೂ ಅಲೀಯಾಬಾದ ಗ್ರಾಮದ ಮಾರ್ವಗವಾಗಿ ಸಂಚರಿಸುವ ಎಲ್ಲಾ ವಿದ್ಯಾರ್ಥಿಗಳು ಕೇಳಿಕೊಳ್ಳುತ್ತಿದ್ದಾರೆ.

ಹೇಳಿಕೆಗಳು

“ನಾನು ಅಥರ್ಗಾ ಗ್ರಾಮದ ವಿದ್ಯಾರ್ಥಿನಿ ನಾನು ಪಿ.ಯು.ಸಿಯಿಂದನು ಅಂದರೆ ಸತತವಾಗಿ 4ವರ್ಷಗಳಿಂದಾನು ಅಥರ್ಗಾ ವಿಜಯಪುರದ ಮಾರ್ಗವಾಗಿ ಸಂಚರಿಸುತ್ತಿದ್ದೆನೆ ಪ್ರತಿ ದಿನವು ಇದೆ ರೀತಿಯ ಗೋಳ್ಳಾಟ ನಡೆದಿದೆ. ಪ್ರತಿ ದಿನ ಬೆಳ್ಳಗೆ 6ರಿಂದ 7:30 ರ ವರೆಗೆ ಮಾತ್ರ ಬಿಡುವಿಲ್ಲದ ಹಾಗೆ ಭೀಮಾಸಾರಿಗೆ ನಾಮಫಲಕಗಳು ರಹಿತ ಬಸ್ ಗಳು ಸಂಚರಿಸುತ್ತವೆ. ಕೇಲವು ಬಾರಿ ಸ್ವಲ್ಪ ತಡಮಾಡಿದರೆ 7:30ರ ಬಸ್ ಹೋರಟು ಹೋಗಿರುತ್ತದೆ. ನಂತರ 7:30 ರಿಂ‍ದ 8:15 ವರೆಗೆ ಬಸ್ ಗಳಿಲ್ಲ. ಇದ್ದರು ಸತತವಾಗಿ 3 ಬಸ್ ಗಳು ಭೀಮಾ ಸಾರಿಗೆ ನಾಮಫಲಕಗಳೊಂದಿಗೆ ಬರುತ್ತವೆ. ಆದ್ದ ಕಾರಣ ಇದಕ್ಕೆ ಸಂಭಂದ ಪಟ್ಟ ಅಧೀಕಾರಿಗಳು ಅಥವಾ ಮಾನ್ಯ ಜೀಲ್ಲಾಧೀಕಾರಿಗಳು ಈ ಸಮಸ್ಯೆಯನ್ನು ಬಗೆ ಹರಿಸುತ್ತಾರೆ ಎಂದು ನಂಬಿದ್ದೇವೆ.

|ಅಥರ್ಗಾ ಗ್ರಾಮದ ನೊಂದ ವಿದ್ಯಾರ್ಥಿನಿ

“ನಮ್ಮ ಮಗಳು ಶಿಕ್ಷಣಕ್ಕಾಗಿ ಇಂಡಿಗೆ ಹೋಗುತ್ತಾಳೆ. ಕೇಲವು ದಿನಗಳ ಹಿಂದೆ ಶಾಲೆಯಿಂದ ಮರಳಿ ಬರುವಾಗ ಗೋತ್ತಿಲ್ಲದೆ ಭೀಮಾ ಸಾರಿಗೆ ಎರಿದ್ದಳು, ಎರುವಾಗ ಸುಮ್ಮನಿದ್ದ ನಿರ್ವಾಹಕ ರಸ್ತೆಯ ಮಧ್ಯದಲ್ಲಿ ಇಳಿಸಿದರು. ಆ ದಿನ ರಸ್ತೆ ಮಧ್ಯದಲ್ಲಿ ಇಳಿಸಿದಕ್ಕಾಗಿ ಮತ್ತೆ ನಡೆದು ಕೊಂ‍ಡು ಇಂಡಿಗೆ ಹೋಗಿ ಬೇರೆ ಬಸ್ ಹಿಡಿದು ಬರಬೇಕಾದರೆ ರಾತ್ರೆ 8:30 –ಕ್ಕೂ ಅಧಿಕ ಸಮಸವಾಗಿತ್ತು. ನಂತರ ಮರುದಿನ ಇಂಡಿ ಡೀಪುಗೆ ಹೋಗಿ ವಿಚಾರಣೆ ಮಾಡಿದೆವು. ಅಂದಿನಿಂದ ನಮ್ಮ ಮಗಳು ವಿದ್ಯಾರ್ಥಿಗಳ ನಿಲಯದಲ್ಲಿ ಉಳಿದು ವಿದ್ಯಾಭ್ಯಾಸ ಮಾಡುತ್ತಿದ್ದಾಳೆ.

  |ಅಥರ್ಗಾ ಗ್ರಾಮದ ಪೋಷಕರು

ಕಾಂಚನಾ. ಬಸವರಾಜ. ಪೂಜಾರಿ
ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೊಧ್ಯಮ ಮತ್ತು ಸಮೂಹ ಸಂವಹನ ವಿಭಾಗ
ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ತೊರವಿ, ವಿಜಯಪುರ

ಸುದ್ದಿದಿನ.ಕಾಂ|ವಾಟ್ಸಾಪ್|9986715401

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading
Advertisement

Title

ಕ್ರೀಡೆ15 hours ago

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ...

ದಿನದ ಸುದ್ದಿ15 hours ago

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ...

ದಿನದ ಸುದ್ದಿ16 hours ago

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ....

ದಿನದ ಸುದ್ದಿ16 hours ago

HEAVY RAIN | ಮೂರು ದಿನ ಭಾರೀ ಮಳೆ ; ಆರೆಂಜ್ ಅಲರ್ಟ್ ಘೋಷಣೆ

ಸುದ್ದಿದಿನಡೆಸ್ಕ್:ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಇಂದಿನಿಂದ ಮೂರು ದಿನ ವ್ಯಾಪಕ ಮಳೆಯಾಗಲಿದೆ ಎಂದು ಆರೆಂಜ್ ಅಲರ್ಟ್ ಹವಾಮಾನ ಇಲಾಖೆ ಘೋಷಿಸಿದೆ. ಇಂದು ಮತ್ತು ನಾಳೆ ಒಳನಾಡಿನ ಜಿಲ್ಲೆಗಳಾದ ಬೆಳಗಾವಿ,...

ದಿನದ ಸುದ್ದಿ16 hours ago

ಇಂದು – ನಾಳೆ ಹಾವೇರಿ ಶಾಲಾ – ಕಾಲೇಜುಗಳಿಗೆ ರಜೆ ಘೋಷಣೆ

ಸುದ್ದಿದಿನಡೆಸ್ಕ್:ಇಂದು ಮತ್ತು ನಾಳೆ, ಹಾವೇರಿ ಜಿಲ್ಲೆಯಾದ್ಯಂತ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉತ್ತರಕಡ ಜಿಲ್ಲೆಯ ಶಾಲೆ ಹಾಗೂ ಪದವಿ ಪೂರ್ವ, ಐಟಿಐ ಮತ್ತು...

ದಿನದ ಸುದ್ದಿ18 hours ago

ಯುವಕರಿಗೆ ಶಿಕ್ಷಣ, ಕೌಶಲ್ಯ ಹೆಚ್ಚಿಸುವ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ

ಸುದ್ದಿದಿನಡೆಸ್ಕ್:ಕೇಂದ್ರ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಜಯಂತ್ ಚೌಧರಿ ನವದೆಹಲಿಯಲ್ಲಿ ನಿನ್ನೆ ‘ಮಾದರಿ ಕೌಶಲ್ಯ ಸಾಲ ಯೋಜನೆ’ಗೆ ಚಾಲನೆ ನೀಡಿದರು. ಸಮಾರಂಭ ಉದ್ದೇಶಿಸಿ ಮಾತನಾಡಿದ...

ದಿನದ ಸುದ್ದಿ18 hours ago

ಇಂದು ಕಾರ್ಗಿಲ್ ವಿಜಯ ದಿವಸ್ ; ಯೋಧರ ಸ್ಮರಣೆ

ಸುದ್ದಿದಿನಡೆಸ್ಕ್:ಇಂದು ಕಾರ್ಗಿಲ್ ವಿಜಯ್ ದಿವಸ್. ಇದರ ಅಂಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಲಿದ್ದಾರೆ. ಪಾಕಿಸ್ತಾನ ವಿರುದ್ಧದ ಕಾರ್ಗಿಲ್ ಯುದ್ಧದಲ್ಲಿ ಬಲಿದಾನಗೈದ...

ದಿನದ ಸುದ್ದಿ1 day ago

ದಾವಣಗೆರೆ | ನಾಳೆ ಎಲ್ಲೆಲ್ಲಿ ಕರೆಂಟ್ ಕಟ್..

ಸುದ್ದಿದಿನ,ದಾವಣಗೆರೆ:ಜಲಸಿರಿ ಕಾಮಗಾರಿ ಪ್ರಯುಕ್ತ ಜುಲೈ 26 ರಂದು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಎಎಫ್.15 ರಂಗನಾಥ ಫೀಡರ್ ವ್ಯಾಪ್ತಿಯ ವಿದ್ಯಾನಗರ ಕೊನೆ ಬಸ್ ನಿಲ್ದಾಣದಿಂದ...

ದಿನದ ಸುದ್ದಿ1 day ago

ದಾವಣಗೆರೆ | ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್

ಸುದ್ದಿದಿನ,ದಾವಣಗೆರೆ: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದ ಮೇರೆಗೆ ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ್...

ದಿನದ ಸುದ್ದಿ1 day ago

ದಾವಣಗೆರೆ ಜಿಲ್ಲೆಯಲ್ಲಿ ವಾಡಿಕೆಗಿಂತ ಈ ಬಾರಿ ಹೆಚ್ಚು ಮಳೆ

ಸುದ್ದಿದಿನ,ದಾವಣಗೆರೆ:ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಪೂರ್ವ ಮುಂಗಾರು ಹಾಗೂ ಮುಂಗಾರಿನಲ್ಲಿ ವಾಡಿಕೆಗಿಂತ 41 ಮಿ.ಮೀ ಹೆಚ್ಚು ಮಳೆಯಾಗಿದೆ. 2024 ರ ಜನವರಿಯಿಂದ ಜುಲೈ 23 ರ ವರೆಗಿನ...

Trending