Connect with us

ದಿನದ ಸುದ್ದಿ

ಮೈ ಟಿಪ್ಪು ಸುಲ್ತಾನ್ ಭೋಲ್ ರಹಾ ಹೂಂ..!

Published

on

  • ವಿವೇಕಾನಂದ. ಹೆಚ್.ಕೆ.

ರೆ ಇಸ್ಕಿ, ರೀ ಸಾಮಿ,
ಇದು 2019,
ನಮ್ದುಕೆ ಸತ್ತಿದ್ದು 1799.

ಈಗ ನೀವು ನಂದು ಹೆಸರು ಹಿಡ್ಕೊಂಡು ಜಗಳ ಆಡ್ತಿದೀರೀ. ನಿಮ್ದುಕೆ ನಾಚ್ಕೆ ಆಗೋದಿಲ್ಲ. ಆವತ್ತು ನಾನು ನಮ್ನಪ್ಪ ಹೆಂಗೋ ನಮ್ಗೆ ಬೇಕಾದಂಗೆ ನಮ್ಗೆ ತಿಳ್ದಂಗೆ ಬದುಕುದ್ವೀ. ನಿಮ್ಮನ್ನ ಕೇಳಿ ಬದ್ಕೋಕೆ ಆಗುತ್ತೇ….

ನಾನು ಮುಸಲ್ಮಾನ್,
ಎಲ್ಲದೂ ಅಲ್ಲಾದು ಕೃಪೆ.ನಿಮ್ಗೆ ಇದ್ದಂಗೆ ನಂಗೂನು ಆಸೆ ಇರೋದಿಲ್ಲೇ. ನಂಗೂ ರಾಜ ಆಗ್ಬೇಕು ಅಂತ ಆಸೆ ಇತ್ತು. ಅದ್ಕೆ ನಾನು ನಮ್ಮಪ್ಪ ಪೈಟ್ ಮಾಡಿದ್ವಿ. ಅರೆ ಆವಾಗ ತಾಖತ್ ಇದ್ದವ್ರು ಎಲ್ರೂ ಹಂಗೆ ಮಾಡ್ತಿದ್ರು. ನಾವು ಮಾಡುದ್ವಿ.

ಅರೆ ಇಸ್ಕಿ, ಕ್ಯಾರೇ ಹೋ,
ಪ್ರಜಾಭುತ್ವಕೀ, ಡೆಮಾಕ್ರಸೀಕೀ, ಸಂಧಾನಾಕಿ ಸಂವಿಧಾನಾಕೀ ಅದೂ ಇರೋವಾಗ್ಲೇ ನಿಮ್ದು ಎಂಎಲ್ಏಗಳು ನಮಕ್ ಹರಾಮ್ ಕೆಲ್ಸ ಮಾಡ್ತಿಲ್ವೇ, ದುಡ್ಡು ಕೊಟ್ಟು ಹೆಂಡಾಕೆ ಕೊಟ್ಟು, ಸೀರೆ ಪಂಚೆ ಕೊಟ್ಟು ಓಟ್ ತಗಂಡ್ತಿಲ್ಲೇ, ಆ ಕಡೆ ಈ ಕಡೆ ಕೋತಿ ತರಾ ಜಂಪ್ ಮಾಡ್ತಿಲ್ಲೇ, ಜನಕ್ಕೆ ಮೋಸ ಮಾಡಿ ದುಡ್ಡು ನುಂಗ್ತಿಲ್ಲೇ, ಆಗ್ದೇ ಇರೋರ್ಗೆ ಹೊಡಿಸ್ತಿಲ್ಲೇ, ದುಡ್ಗೆ ತಗಂಡು ಸರ್ಕಾರ ಬೀಳಿಸ್ತಿಲ್ಲೇ…..

ನಂಗೆ ಮಾತ್ರ ನಮಕ್ ಹರಾಮ್ ಅಂತಿರೀ.
ಅಲ್ರೀ, ನಿಮ್ದುಕೆ ದೇವೇಗೌಡ, ಯಡಿಯೂರಪ್ಪ, ಸಿದ್ದರಾಮಯ್ಯ ಅವರ ಮಕ್ಕಳ್ಗೆ ರಾಜಕೀಯದಲ್ಲಿ ಮುಂದೆ ತಂದಿಲ್ಲೇ. ಕರ್ನಾಟಕದಲ್ಲಿ ಬೇರೆ ಯಾರೂ ಇಲ್ವಾ, ಎಲ್ಲಾ ಸತ್ತು ಹೋಗಿದಾರಾ…

ಅಪ್ಪ ಮಕ್ಕಳು ಅಳಿಯ ಸೊಸೆ ಮಾತ್ರ ರಾಜಕೀಯಕ್ಕೆ ಬರ್ಬೇಕು. ಇದೇನು ನಮ್ದು ಕಾಲ್ದಂಗೆ ತಾಖತ್ ಇರೋ ರಾಜರ್ದು ಆಡಳಿತಾ. ಮಾತ್ಗೆ ಹೇಳ್ದೆ ನೀವೇ ಯೋಚ್ನೆ ಮಾಡಿ.

ಅಲ್ರೀ ನಾನು ನಿಮ್ಮ ದೇವಸ್ಥಾನಕ್ಕೆ ಹೊಡ್ದೆ ನಿಜ, ಹಂಗೆ ಹೆಲ್ಪೂನು ಮಾಡಿದ್ದೀನಿ. ನೋಡ್ರಿ ನಮ್ದು ಇಸ್ಲಾಂ ಧರ್ಮ. ಅದಕ್ಕೆ ನಾನು ಸಪೋರ್ಟ್ ಮಾಡ್ದೆ. ಯಾಕೆ ಆ ಬಿಳಿ ಚರ್ಮದವರು ನಿಮ್ದು ಕಿತ್ತೂರು ಚೆನ್ನಮ್ಮ, ಲಕ್ಷೀಬಾಯಿ, ಆಜಾದ್, ಭಗತ್ ಸಿಂಗ್ ಎಲ್ರೂಗೂ ಸಾಯಿಸಿಲ್ವೇ, ಎಲ್ಲಿಂದಲೋ ಬಂದ ಆ ಕಳ್ನನ್ಮಮಕ್ಳು ನನ್ನೂ ಸಾಯಿಸಿದ್ರು, ನನ್ನ ಮಕ್ಕಳ್ಗೂ ಜೈಲಿಗೆ ಹಾಕಿದ್ರು.
ನೀವೂನು ನಮ್ದು ಮಸೀದಿಗೆ ಒಡ್ದಾಕ್ಜಿದ್ರಿ ಜ್ಞಾಪಕಕ್ಜೆ ಐತೆ, ಅಯೋದ್ಯಾದಾಗ. ಅಲ್ವಾ. ಹಂಗೆ ನಾನು ನನ್ಗೆ ಆಪೋಸ್ ಮಾಡ್ದೋರ್ಗೆ ಸಾಯುಸ್ದೆ. ಅದು ತಪ್ಪಾ….

ಇಂದ್ರಾಗಾಂಧಿ ಸತ್ತಾಗ ಸಿಖ್ಖರನ್ನ ಸಾಯಿಸಿಲ್ವ, ಗುಜರಾತಲ್ಲಿ ಸಾಬರನ್ನ ಸಾಯಿಸಿಲ್ವ, ಇಂಗ್ಲೀಷೋರು ಜಲಿಯನ್ ವಾಲಾಬಾಗ್ ನಲ್ಲಿ ಎಷ್ಟೊಂದು ಜನ್ರನ್ನ ಸಾಯಿಸಿಲ್ವಾ, ಹಂಗೇ ನೋಡ್ರಿ ಅವರವರ ಕಾಲದಲ್ಲಿ ಏನೇನೂ ಆಗಿರುತ್ತೆ. ಒಳ್ಳೇದು ಕೆಟ್ಟದ್ದು. ಅದೇ ಇತ್ಯಾಸ. ಅದನ್ನ ಹೆಂಗಿದೆಯೋ ಹಂಗೇ ಓದ್ಸಿ…

ನಾನು ತುಂಬಾ ಒಳ್ಳೆಯವನು ಅಂತಾ ಹೇಳ್ತಾ ಇಲ್ಲ. ನೀವೆಲ್ಲಾ ನಂಗೆ ನೆನಪ್ಸಕಳ್ಳಿ ಅಂತಾನೂ ಕೇಳ್ತಾ ಇಲ್ಲ. ಇವಾಗ ನನ್ದು ಹುಟ್ದಾಬ್ವಾನೋ ಸತ್ತಾಬ್ಬಾನೋ ಮಾಡಿದ್ರೆ ಏನ್ ಪ್ರಯೋಜನ. ಸಾಮಿ ನಾನು ನನ್ ಮಕ್ಳು ಮೊಮ್ಮಕ್ಳು ಎಲ್ಲಾ ಸತ್ತೋಗಿದೀವಿ.
ಈವಾಗ ನೀವು ಬದ್ಕಿರೋರು. ಏನೋ ಈವಾಗ ಇರೋರು ಭಾಳ ಬುದ್ದಿವಂತ್ರಂತೆ.
ಚೆನ್ನಾಗಿ ಬದ್ಕಿ.

ನೋಡಿ, ನೀವೇ ನಮ್ದುಕೆ ಹೆಸ್ರು ಹೇಳಿ ಕಿತ್ತಾಡ್ ಬ್ಯಾಡ್ರಿ. ಇಷ್ಟ ಇರೋರು ನೆನಪಿಸ್ಕಳ್ರಿ, ಇಲ್ದೇ ಇರೋರು ಬಿಟ್ಟಾಕಿ.
ಇತ್ಯಾಸ್ದಾಗ ಒಳ್ಳೇದು ಕೆಟ್ಟದ್ದು ಇನ್ನೂ ಏನೇನೋ ನೆಡ್ದೈತೆ. ಒಳ್ಳೇದು ಮಾತ್ರ ತಗಳ್ಳಿ. ನಿಮ್ಗೆ ಗೊತ್ತಿಲ್ದೆ ಮಣ್ಣಾಗಿ ಹೋಗಿರೋ ಎಷ್ಟೋ ಇಷ್ಯಾ ಐತೆ.
ಆ ಇಷ್ಯಾ ಯಾವೊತ್ತೋ ಆಚೆ ಬರೊಲ್ಲಾ..

ಅಂದಂಗೆ, ನಮ್ ರಾಜರ್ರು ಅದೇ ಒಡೆಯರ್ ಅವರಿಗೆ ಕೇಳ್ದೆ ಅಂತೇಳಿ. ಏನೋ ಆವಾಗ ನೆಡಿದಿದ್ದು ನಡೆದೋಯ್ತು. ಕ್ಷಮ್ಸಿಬಿಡಿ. ಹಳೇ ಕಾಲಕ್ಕಿಂತ ಹೊಸ ಕಾಲ ಚೆನ್ನಾಗಿರ್ಬೇಕು. ನಮ್ ಕಾಲ್ದಾಗ ಲೈಪ್ ಎಂಜಾಯ್ ಮಾಡಾಕೆ ಆಗ್ತಾ ಇರ್ಲಿಲ್ಲ. ಬರೀ ಯುದ್ಧ ಯುದ್ಧ ಯುದ್ಧ. ಆದ್ರೆ ಈಗ ನಿಮ್ಗೆ ಎಲ್ಲಾ ಸೌಕರ್ಯ ಐತೆ. ಖುಷಿ ಖುಷಿಯಾಗಿರ್ರಿ.

ನಂಗೇ ಸತ್ ಮ್ಯಾಲೆ ಗೊತ್ತಾಯ್ತು. ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಎಲ್ಲಾ ಸುಳ್ಳು. ಬದ್ಕಿರೋವಾಗ ನಾವೇ ಗಾಂಚಾಲಿ ಮಾಡ್ಕೊಂದು ಇದೆಲ್ಲಾ ಸ್ಪಷ್ಟಿ ಮಾಡ್ಕೊಂಡ್ವಿ. ಸತ್ ಮ್ಯಾಲೆ ಎಲ್ಲಾ ಒಂದೇ. ಮಣ್ಣಾಗೋದು.

ಇರ್ಲಿ, ನಿಮ್ಗೆ ಕೈ ಮುಗ್ದು ಕೇಳ್ಜೋತೀನಿ. ನನ್ ಹೆಸ್ರು ಹೇಳ್ಕೊಂಡು ರಾಜಕೀಯ ಮಾಡಬ್ಯಾಡ್ರಿ. ಉತ್ತರ ಕರ್ನಾಟಕದಾಗ ನೆರೆ ಹಾವಳಿ ಬಂದು ಜನ ತುಂಬಾ ಕಷ್ಟ ಪಡ್ತಿದಾರಂತೆ. ದಯಮಾಡಿ. ಅವರ ಕಡೆ ಗಮನ ಕೊಡಿ. ಸತ್ ಇರೋ ನನ್ನನ್ನ ಹಿಡ್ಕೊಂಡು ಯಾಕ್ ನೇತಾಡ್ತೀರೀ..

ಎಲ್ರಿಗೂ ಒಳ್ಳೇದಾಗ್ಲಿ, ನಾನು ಹೋಗ್ ಬತ್ತೀನಿ…

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

Published

on

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.

ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.

ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

Published

on

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.

ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾ‌ನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾ‌ನ‌ ಪೀಠಿಕೆಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾ‌ನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.

ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

Published

on

  • ಪುರಂದರ್ ಲೋಕಿಕೆರೆ

ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.

ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.

100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.

ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.

ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.

ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.

ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending