Connect with us

ದಿನದ ಸುದ್ದಿ

ಕಲ್ಕಿ ಭಗವಾನ್ ಮತ್ತು ದೇವ ಮಾನವರು..!

Published

on

ವಿವೇಕಾನಂದ. ಹೆಚ್.ಕೆ

ಸುಮಾರು 12 ವರ್ಷಗಳ ಹಿಂದೆ ವಿಜಯಕುಮಾರ್ ಎಂಬ ಕಲ್ಕಿ ಭಗವಾನ್ ಅವರನ್ನು ಐದಾರು ಬಾರಿ ಭೇಟಿಯಾಗುವ ಅವಕಾಶ ದೊರೆತಿತ್ತು. ಒಬ್ಬ ಭಕ್ತನಾಗಿಯಲ್ಲ. ಆಗ ನನ್ನ ವೃತ್ತಿಯಾಗಿದ್ದ ಸಾಕ್ಷ್ಯಚಿತ್ರದ ರಚನೆ ನಿರ್ಮಾಣ ನಿರ್ದೇಶನದ ಭಾಗವಾಗಿ ತಿರುಪತಿ ಬಳಿಯ ಬಂಗಾರು ಪಾಳ್ಯಂ ಆಶ್ರಮದಲ್ಲಿ ಸುಮಾರು 3 ದಿನಗಳ ಕಾಲ ಮತ್ತು ಚರ್ಚೆಯ ಭಾಗವಾಗಿ ಇನ್ನೂ ಕೆಲವು ದಿನ ಅವರ ಬಳಿ ಮಾತನಾಡುತ್ತಿದ್ದೆ.

ಇದೀಗ ಆತನ ಮೇಲೆ ತೆರಿಗೆ ದಾಳಿಯಾಗಿ ಅಪಾರ ಪ್ರಮಾಣದ ಹಣ ಆಸ್ತಿ ವಶಪಡಿಸಿಕೊಂಡರುವ ಸಂದರ್ಭದಲ್ಲಿ ಒಂದಷ್ಟು ನೆನಪುಗಳು.

ಆಶ್ರಮದ ಸಿಬ್ಬಂದಿ ಮತ್ತು ಭಕ್ತರು ಆತ ಮತ್ತು ಆತನ ಪತ್ನಿಯನ್ನು ಸಾಕ್ಷಾತ್ ದೇವರೆಂದೇ ಪರಿಗಣಿಸಿದ್ದರು. ಸದಾ ಹೊಳೆಯುವ ರೇಷ್ಮೆಯ ವಸ್ತ್ರವನ್ನು ಧರಿಸಿಕೊಂಡಿರುತ್ತಿದ್ದರು. ಉತ್ತಮ ಮೇಕಪ್ ಕಾರಣದಿಂದ ಮುಖ ಒಂದಷ್ಟು ಕಾಂತಿಯುತವಾಗಿ ಹೊಳೆಯುತ್ತಿತ್ತು. ಇದು ಮುಗ್ದ ಜನರಿಗೆ ಅವರ ಮೇಲೆ ಮತ್ತಷ್ಟು ನಂಬಿಕೆ ಹೆಚ್ಚಾಗಲು ಕಾರಣವಾಗಿತ್ತು.
ಎಂದಿನಂತೆ ಭಾಷೆ ಧ್ವನಿ ಆಕರ್ಷಕವಾಗಿತ್ತು.

ಆಗಾಗ ಹುಣ್ಣಿಮೆಯ ಸಮಯದಲ್ಲಿ ಸಂಜೆ ಕಾರ್ಯಕ್ರಮ ಏರ್ಪಡಿಸಿ ಜನರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದರು. ಕಾಡಿನ ವಾತಾವರಣದ ವಿಶಾಲ ಜಾಗದಲ್ಲಿ ಹೂವು ಹಣ್ಣಿನ ಗಿಡಗಳು ಯಥೇಚ್ಛವಾಗಿ ಇದ್ದವು. ಭಕ್ತ ಭಕ್ತೆಯರ ದಂಡು ಸದಾ ಚಟುವಟಿಕೆಯಿಂದ ಓಡಾಡುತ್ತಾ ಅಲ್ಲಿಯೇ ವಾಸವಾಗಿದ್ದರು.

ಎಲ್ಲಾ ದೇವ ಮಾನವರಂತೆ ಆತ ಒಂದು ವಿಚಾರಧಾರೆಯ ಮೇಲೆ ತನ್ನ ಹಿಂಬಾಲಕರನ್ನು ಮೆಚ್ಚಿಸಲು – ಸೆಳೆಯಲು ಪ್ರಯತ್ನಿಸುತ್ತಿದ್ದ. ಅದೇನೆಂದರೆ,
ನೀವು ನಿಮಗಿರುವ ಕಷ್ಟಗಳಿಂದ ದೂರ ಹೋಗಲು ಪ್ರಯತ್ನಿಸಬೇಡಿ. ಉದ್ದೇಶಪೂರ್ವಕವಾಗಿ ‌ಆ ಸಮಸ್ಯೆಯನ್ನೇ ಕುರಿತು ಯೋಚಿಸಿ. ಆ ಸಮಸ್ಯೆ ಒಳಗೆ ಹೋಗಿ. ಅದು ಆಳಕ್ಕೆ ಹೋದಂತೆ ಅದೇ ಸಮಸ್ಯೆ ಸಹಜವಾಗಿ ರೂಪಾಂತರ ಹೊಂದಿ ನೋವೇ ನಲಿವಾಗಿ ಬದಲಾಗುತ್ತದೆ. ನಂತರ ಅದು ಒಳ್ಳೆಯ ಪರಿಣಾಮ ಬೀರಿ ಸಂತಸವಾಗಿ ಮಾರ್ಪಡುತ್ತದೆ. ಆಗ ನಿಮ್ಮ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಗುತ್ತದೆ.

ಆತನ ನಿಜವಾದ ಒಳನೋಟ ಏನಿತ್ತೋ ಗೊತ್ತಿಲ್ಲ. ಆದರೆ ಆ ವಿಚಾರಧಾರೆಯ ಸಾರಾಂಶವನ್ನು ನಾನು ಗ್ರಹಿಸಿದ್ದು ಹೀಗೆ.ಒಮ್ಮೆ ಆತನೊಂದಿಗೆ ಖಾಸಗಿ ಮಾತುಕತೆಯ ಸಮಯದಲ್ಲಿ ಆತನ ಪವಾಡದ ಬಗ್ಗೆ ಪ್ರಶ್ನಿಸಿದೆ.
ಆತನ ಅಂಗೈಯಲ್ಲಿ ಜೇನುತುಪ್ಪ ಮತ್ತು ವಿಭೂತಿ ಬರುತ್ತದೆ ಎಂಬ ನಂಬಿಕೆ ಆತನ ಭಕ್ತರಲ್ಲಿ ಇತ್ತು ಮತ್ತು ಅದು ಬರುತ್ತಲೂ ಇತ್ತು.

ಆದರೆ ನನಗೆ ಆಗಲೂ ಆ ರೀತಿಯ ಕ್ರಿಯೆ ನಡೆಯಲು ಸಾಧ್ಯವಿಲ್ಲ. ಅದು ಜಾದು ಅಥವಾ ಕಣ್ಕಟ್ಟು ಆಗಿರಬೇಕೆ ಹೊರತು ನಿಜವಲ್ಲ. ಅದು ಇಡೀ ಸೃಷ್ಟಿಗೇ ವಿರೋಧ ಮತ್ತು ಹಾಗಾಗಿದ್ದೇ ಆದಲ್ಲಿ ಸೃಷ್ಟಿಯ ಒಟ್ಟು ವಿಶ್ವಾಸವೇ ಕಳಚಿ ಬೀಳುತ್ತದೆ ಎಂಬ ಅರಿವಿತ್ರು. ಅದನ್ನು ಆತನ ಬಳಿ ಕೇಳಿದೆ.

ನಿಮಗೆ ಆಶ್ಚರ್ಯವಾಗಬಹುದು. ಆತ ಅದನ್ನು ಒಪ್ಪಿಕೊಂಡ. ಹೌದು ಹಾಗೆ ನಡೆಯಲು ಸಾಧ್ಯವಿಲ್ಲ. ಆದರೆ ನಾನು ನನ್ನ ವಿಚಾರಗಳನ್ನು ಜನರಿಗೆ ತಲುಪಿಸಿ ಈ ಸಮಾಜವನ್ನು ಒಳ್ಳೆಯ ರೀತಿಯಲ್ಲಿ ಮುನ್ನಡೆಸಬೇಕಾದರೆ ಈ ಸಾಮಾನ್ಯ ಜನರಿಗೆ ಅಸಾಮಾನ್ಯವಾದದ್ದನ್ನು ಮಾಡಿ ತೋರಿಸಲೇ ಬೇಕಿದೆ. ನನ್ನೊಳಗೆ ಒಂದು ದೈವತ್ವದ ಅಗಾಧ ಶಕ್ತಿ ಇದೆ ಎಂದು ಜನರಿಗೆ ಮನವರಿಕೆ ಮಾಡಿದರೆ ಮಾತ್ರ ಜನ ನನ್ನನ್ನು ನಂಬುತ್ತಾರೆ, ಗೌರವಿಸುತ್ತಾರೆ, ಆರಾಧಿಸುತ್ತಾರೆ. ಕೇವಲ ಒಳ್ಳೆಯ ವಿಚಾರಗಳು ಜನರನ್ನು ಆಕರ್ಷಿಸುವುದಿಲ್ಲ. ಪವಾಡಗಳು ಮಾತ್ರ ದೇವ ಮಾನವ ಎಂದು ಕರೆಯಲ್ಪಡುವ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ನಾನು ಜೇನು ತುಪ್ಪದ ಪವಾಡ ಮಾಡುತ್ತೇನೆ. ಇದೊಂದು ವಿಶೇಷ ಶಕ್ತಿ ಎಂದು ಜನ ನಂಬುತ್ತಾರೆ. ಇಲ್ಲಿ ನಾನು ಯಾವುದೇ ಮೋಸ ಮಾಡುತ್ತಿಲ್ಲ. ಈ ಸಮಾಜದ ಸೇವೆಗಾಗಿ ನಾನು ಕಲ್ಕಿ ಅವತಾರ ತಾಳಿದ್ದೇನೆ. ಇಲ್ಲಿನ ಮೋಸ ವಂಚನೆ ಅನ್ಯಾಯಗಳನ್ನು ಸರಿ ಮಾಡಿ ಶಾಂತಿ ಸಹಕಾರದ ನೆಮ್ಮದಿಯ ಬದುಕನ್ನು ರೂಪಿಸುವ ಗುರಿ ಹೊಂದಿದ್ದೇನೆ. ಕೆಲವೇ ವರ್ಷಗಳಲ್ಲಿ ಇದು ಸಾಧ್ಯವಾಗುತ್ತದೆ ಎಂದು ಆತ ಭರವಸೆಯಿಂದ ಹೇಳಿದ.

ಇದು ಖಾಸಗಿ ಮಾತುಕತೆ. ಅಲ್ಲಿಂದ ನಾನು ಆತನನ್ನು ಮತ್ತೆಂದೂ ಭೇಟಿಯಾಗಲಿಲ್ಲ. ಬಹುಶಃ ಆತನಿಗೆ ಈಗ ನನ್ನ ಗುರುತು ಸಿಗದಿರಬಹುದು.ಈ ಕಳೆದ ವರ್ಷಗಳಲ್ಲಿ ನನ್ನ ಅನುಭವದಿಂದ ನನ್ನೊಳಗೆ ಬಹಳಷ್ಟು ವಿಚಾರಗಳು ಅಭಿಪ್ರಾಯಗಳು ಬದಲಾಗಿವೆ. ಆದರೆ ಈ ನೆನಪುಗಳನ್ನು ಅಂದಿನ ನನ್ನ ಮನೋಭಾವಕ್ಕೆ ತಕ್ಕಂತೆ ನಿರೂಪಿಸಿದ್ದೇನೆ.

ಯಾವುದೇ ಧರ್ಮದ ಯಾವುದೇ ದೇವಮಾನವರನ್ನು ಕಳ್ಳರು ಸುಳ್ಳರು ವಂಚಕರು ಕ್ರಿಮಿನಲ್ ಗಳು ಎಂದು ಒಂದು ವಾಕ್ಯದಲ್ಲಿ ವಿವರಿಸಬಾರದು ಅಥವಾ ನಿಜವಾಗಲೂ ಪವಾಡ ಪುರುಷರೆಂದು ಕುರುಡಾಗಿ ನಂಬಬಾರದು. ಹೇಗೆ ರಾಜಕಾರಣಿಗಳು, ನಟರು, ಧರ್ಮಾಧಿಕಾರಿಗಳು, ವ್ಯಾಪಾರಿಗಳು ಭವಿಷ್ಯಕಾರರು ಮುಂತಾದವರು ಈ ಸಮಾಜದ ಭಾಗವಾಗಿ ನಮ್ಮೊಳಗೇ ಇದ್ದು ನಮ್ಮನ್ನು ಭ್ರಮಾಲೋಕಕ್ಕೆ ಸೆಳೆದು ಅವರು ಪ್ರಖ್ಯಾತರು, ಕುಖ್ಯಾತರು, ಹಣವಂತರು, ಜನಪ್ರಿಯರು, ಅಧಿಕಾರಸ್ತರು ಆಗುತ್ತಾರೋ ಅದೇ ಪರೋಕ್ಷ ವಿಧಾನದಲ್ಲಿ ಈ ದೇವ ಮಾನವರು ಸಹ ನಮ್ಮ ಅಜ್ಞಾನದಿಂದ ಸೃಷ್ಠಿಯಾಗುತ್ತಾರೆ.

ಇವರನ್ನು ನೇರವಾಗಿ ಕಳ್ಳರು ಎನ್ನಲಾಗದು. ಒಂದೋ ತಮ್ಮೊಳಗಿರುವ ಯಾವುದೋ ಸಾಮರ್ಥ್ಯವನ್ನು ಸದುಪಯೋಗ ಪಡಿಸಿಕೊಳ್ಳುತ್ತಾರೆ ಅಥವಾ ಜನರ ಭಾವನೆ ನಂಬಿಕೆಗಳನ್ನು ಗುರುತಿಸಿ ಅದನ್ನು ಅವರಿಗೆ ತಕ್ಕಂತೆ ದುರುಪಯೋಗ ಪಡಿಸಿಕೊಳ್ಳುತ್ತಾರೆ.ಅದರಲ್ಲಿ ಕೆಲವರು ಅತಿ ಬುದ್ಧಿವಂತಿಕೆಯಿಂದ ದೇಶ ವಿದೇಶಗಳಲ್ಲಿ ತಮ್ಮ ಆಶ್ರಮವನ್ನು ಸ್ಥಾಪಿಸಿ ಹಣದ – ಭಕ್ತರ ಸಾಮ್ರಾಜ್ಯವನ್ನೇ ಕಟ್ಟುತ್ತಾರೆ. ಆ ಮುಖಾಂತರ ಮತ್ತಷ್ಟು ಬೆಳೆಯುತ್ತಾ ಹೋಗುತ್ತಾರೆ.

ಇಲ್ಲಿ ಯೋಚಿಸಬೇಕಾದ ಜವಾಬ್ದಾರಿ ನಮ್ಮದು. ಒಂದು ನಾಗರಿಕ ಸಮಾಜ ವೈಚಾರಿಕ ಚಿಂತನಾ ವಿಧಾನದ ಮೂಲಕ ನಿರ್ಮಾಣವಾದರೆ ಅದರ ಜ್ಞಾನ ಅಭಿವೃದ್ಧಿ ಕಡೆಗಿರುತ್ತದೆ ಮತ್ತು ಶಾಶ್ವತವಾಗಿರುತ್ತದೆ.
ಅದೇ ಸಮಾಜ ಭ್ರಮೆಗಳ ಭಯ ಭಕ್ತಿಯ ಮುಖಾಂತರ ರೂಪಗೊಂಡರೆ ಅದು ತಾತ್ಕಾಲಿಕ. ಯಾವುದೇ ಕ್ಷಣದಲ್ಲಿ ಕುಸಿಯಬಹುದು. ದೇವ ಮಾನವ ಕಲ್ಪನೆ ಒಂದು ಭ್ರಮೆ. ನಾವೆಲ್ಲರೂ ಕೇವಲ ಸಹಜ ಮಾನವರು ಮಾತ್ರ.

ಸುದ್ದಿದಿನ.ಕಾಂ|ವಾಟ್ಸಪ್|9980346243

ದಿನದ ಸುದ್ದಿ

ಮಹಿಳೆಗೆ ಮೀಸಲಾತಿ ಬೇಡ, ಸಮಾನ ಪ್ರಾತಿನಿಧ್ಯ ಕೊಡಿ : ಡಾ.ಜ್ಯೋತಿ ಟಿ.ಬಿ

Published

on

ಸುದ್ದಿದಿನ, ಚನ್ನಗಿರಿ (ಬಸವಾಪಟ್ಟಣ) : ಭಾರತೀಯ ಸಮಾಜದಲ್ಲಿ ಮೀಸಲಾತಿಯಿಂದ ಮಾತ್ರ ಮಹಿಳಾ ಪ್ರಗತಿ ಸಾಧ್ಯವಿಲ್ಲ. ಅವಳಿಗೆ ಪುರುಷನಂತೆ ಸಮಾನವಾದ ಪ್ರಾತಿನಿಧ್ಯ ನೀಡಿದಲ್ಲಿ‌ ಮಾತ್ರವೇ ಮಹಿಳಾ ಪ್ರಗತಿ ಸಾಧ್ಯ. ಆಗ ಮಾತ್ರವೇ ಸದೃಢವಾದ ಭಾರತ ನಿರ್ಮಾಣವಾಗಲು ಸಾಧ್ಯ ಎಂದು ಸಂತೆಬೆನ್ನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಜ್ಯೋತಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ‌ಲ್ಲಿ ಶನಿವಾರ ಆಯೋಜಿಸಿದ್ದ ರಾಷ್ಟ್ರೀಯ ಐಕ್ಯತ ಸಪ್ತಾಹದ ಅಡಿಯಲ್ಲಿ ‘ಭಾರತೀಯ ಸಮಾಜ ಹಾಗೂ ರಾಷ್ಟ್ರದ ಪ್ರಗತಿಯಲ್ಲಿ ಮಹಿಳೆಯರ ಪ್ರಾಮುಖ್ಯತೆ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಮಹಿಳೆಗೆ ಎಲ್ಲಿಯವರೆಗೆ ಮುಕ್ತವಾದ ಪ್ರಾತಿನಿಧ್ಯ ಲಭಿಸುವುದಿಲ್ಲವೋ ಅಲ್ಲಿಯವರೆಗೆ ಎಷ್ಟೇ ಕಾಯ್ದೆ, ಕಾನೂನುಗಳು ಜಾರಿಯಾದರೂ ಮಹಿಳೆಯರ ಬದುಕಿನಲ್ಲಿ ಸಮಗ್ರ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಪ್ರಾಂಶುಪಾಲರಾದ ಡಾ.ಎಂ.ಆರ್. ಲೋಕೇಶ್ ಅವರು ಮಾತನಾಡಿ ಭಾರತೀಯ ಸಮಾಜದಲ್ಲಿ ಹೆಣ್ಣು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವುದು ಕೇವಲ ಆರ್ಥಿಕತೆಯಿಂದ ಸಾಧ್ಯವಿಲ್ಲ ಎಂದರು.

ನೈತಿಕತೆ, ಸಂಸ್ಕಾರವು ಕೂಡ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿಯೇ ಶರಣರು ಗಂಡು-ಹೆಣ್ಣು ಎಂಬ ಬೇಧವನ್ನು ಮೆಟ್ಟಿ ನಿಂತು ‘ಒಳಗೆ ಸುಳಿವ ಆತ್ಮ ಹೆಣ್ಣು ಅಲ್ಲ, ಗಂಡು ಅಲ್ಲ’ ಎಂಬ ತಾತ್ವಿಕತೆಯ ಮೂಲಕ ಸರ್ವರನ್ನು ಸಮಾನವಾಗಿ ಕಾಣುವಂತಹ ಸಮಾಜಕ್ಕಾಗಿ ಶ್ರಮಿಸಿದರು. ಭಾರತದ ನೆಲದಲ್ಲಿ ಶರಣರು, ದಾರ್ಶನಿಕರು ರೂಪಿಸಿಕೊಟ್ಟ ಮಾರ್ಗದಲ್ಲಿ ನಡೆದು ಇಂದಿನ ಮಹಿಳೆಯರು ಸಬಲರಾಗಬೇಕು ಎಂಬುದಾಗಿ ತಿಳಿಸಿದರು.

ಸಮಾಜಶಾಸ್ತ್ರದ ಮುಖ್ಯಸ್ಥರಾದ ಡಾ.ಎ.ಡಿ.ಬಸವರಾಜ್ ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಬೋಧಕರಾದ ಹನುಮಂತಪ್ಪ, ಪ್ರಕಾಶ್, ಮಧುಸೂಧನ್, ರೆಹಮತ್ಬಿ, ಸಂದೀಪ್ ಮುಂತಾದವರು ಹಾಜರಿದ್ದರು. ಕಾರ್ಯಕ್ರಮವನ್ನು ಗೋವಿಂದರೆಡ್ಡಿ ಅವರು ನಿರೂಪಿಸಿದರು. ವಿದ್ಯಾರ್ಥಿನಿ ಸೌಂದರ್ಯ ಸ್ವಾಗತಿಸಿದರು, ಯಶೋಧ, ಸಹನಾ ಪ್ರಾರ್ಥಿಸಿದರು, ರಕ್ಷಿತ ವಂದಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಭಾರತೀಯರೆಲ್ಲರ ಪವಿತ್ರಗ್ರಂಥ ಭಾರತದ ಸಂವಿಧಾನ : ಡಾ.ಕೆ.ಎ.ಓಬಳೇಶ್

Published

on

ಸುದ್ದಿದಿನ,ದಾವಣಗೆರೆ : ಸಂವಿಧಾನ ಪೂರ್ವದ ಭಾರತದ ಸ್ಥಿತಿಗತಿ ಹಾಗೂ ಸಂವಿಧಾನದ ನಂತರ ಭಾರತದಲ್ಲಾದ ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಬದಲಾವಣೆಗ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಹಾಗೆಯೇ ಸಂವಿಧಾನ ರಚನೆ ಮಾಡುವ ಸಮಯದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಮುಂದಿದ್ದ ಬಿಕ್ಕಟ್ಟುಗಳನ್ನು ಏಕಾಂತಗಿರಿ ಟ್ರಸ್ಟ್ ನ ಕಾರ್ಯದರ್ಶಿ ಡಾ.ಕೆ.ಎ.ಓಬಳೇಶ್ ಅವರು ತಿಳಿಸಿಕೊಟ್ಟರು.

ನಗರದ ಪ್ರೇರಣ ಮಕ್ಕಳ ಆರೈಕೆ ಕೇಂದ್ರದಲ್ಲಿ ವಿ.ಬಿ.ಪಿ ಫೌಂಡೇಷನ್ ಹಾಗೂ ಏಕಾಂತಗಿರಿ ಟ್ರಸ್ಟ್ ಇವರ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಭಾನುವಾರ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದೇವನಗರಿ ಸುದ್ಧಿದಿನ ಪತ್ರಿಕೆಯ ಸಂಪಾದಕರಾದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳಿಗೆ ಭಾರತದ ಸಂವಿಧಾನದ ಕಳಶದಂತಿರುವ ಸಂವಿಧಾ‌ನ ಪೀಠಿಕೆಯ ಮಹತ್ವವನ್ನು ಪರಿಚಯಿಸುವ ಮೂಲಕ ಸಂವಿಧಾ‌ನ‌ ಪೀಠಿಕೆಯನ್ನು ಬೋಧಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಕೈ ಲೈನ್ ಸಂಸ್ಥೆಯ ಸಂಸ್ಥಾಪಕರಾದ ಬಾಲಚಂದ್ರ ಅವರು ಸಂವಿಧಾನ ಇರುವ ಕಾಲದಲ್ಲಿಯೇ ದಲಿತರು, ದಮನಿತರು ಹಾಗೂ ಮಹಿಳೆಯರ ಸ್ಥಿತಿಯು ಅತ್ಯಂತ ಶೋಚನೀಯವಾಗಿದೆ. ಆದರೆ ಸಂವಿಧಾ‌ನವಿಲ್ಲದ ಭಾರತವನ್ನು ನಾವು ಊಹಿಸಿಕೊಳ್ಳುವುದು ಕಷ್ಟ ಸಾಧ್ಯ ಎಂಬುದಾಗಿ ತಿಳಿಸಿದರು.

ಪ್ರೇರಣ ಆರೈಕೆ ಕೇಂದ್ರದ ಶಿಕ್ಷಕರಾದ ಕುಮಾರ್ ಅವರು ಮಾತನಾಡಿ, ಸರ್ವರನ್ನು ಸಮಾನವಾಗಿ ಕಾಣುವ ಸಂವಿಧಾನವು ನಮ್ಮೆಲ್ಲರ ಪವಿತ್ರ ಗ್ರಂಥ ಎಂಬುದಾಗಿ ತಿಳಿಸಿದರು. ಕುಮಾರಿ ಪೂಜಾ ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಪ್ರೇರಣ ಸಂಸ್ಥೆಯ ಮಕ್ಕಳು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಸರ್ಕಾರಕ್ಕೆ ಸೆಡ್ಡು ಹೊಡೆದ ದಾವಣಗೆರೆ ರೈತರು

Published

on

  • ಪುರಂದರ್ ಲೋಕಿಕೆರೆ

ಸುದ್ದಿದಿನ, ದಾವಣಗೆರೆ : ಸರ್ಕಾರದ ಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಇಲಾಖೆಯ ಚಿತಾವಣೆಗೆ ಸೆಡ್ಡು ಹೊಡೆದು ಕೇವಲ 110-120 ದಿನಗಳ ಒಳಗಾಗಿಅಲ್ಪಾವಧಿ ತಳಿ ನಾಟಿ ಮಾಡಿ ಯಶಸ್ವಿಯಾಗಿ ಕಾಲುವೆ ನೀರು ಬಳಸಿಕೊಂಡು ಭತ್ತ ಬೆಳೆಯುವ ಮೂಲಕ ಮಾದರಿಯಾಗಿದ್ದಾರೆ ದಾವಣಗೆರೆ ಭಾಗದ ರೈತರು.

ಬೇಸಿಗೆ ಕಾಲದಲ್ಲಿ ನಮಗೆ ತೋಟಗಳಿಗೆ ನೀರು ಹರಿಸಲು ಆನ್ ಆಪ್ ಪದ್ದತಿ ಮಾಡಿ ಎಂದು ಒತ್ತಡ ಹಾಕಿದ ಶಿವಮೊಗ್ಗ ಜಿಲ್ಲೆಯ ಅಡಿಕೆ ದಣಿಗಳಿಗೇ ಮುಖಕ್ಕೆ ಹೊಡೆದಂತೆ ಭತ್ತ ಬೆಳೆದು ತೋರಿಸಿರುವುದು ಶ್ಲಾಘನೀಯ.

100 ದಿನಗಳು ನೀರು ಹರಿಸಲು ಆದೇಶ ಹೊರಡಿಸಿ ರೈತರೆಲ್ಲ ನಾಟಿ ಮಾಡಿದ ಮೇಲೆ ಎಂದೂ ಗದ್ದೆ ನೀರು ಕಟ್ಟದ ಐಷಾರಾಮೀ ರಾಜಕಾರಣಿ ಪುತ್ರ ರತ್ನ ಸಚಿವ ಮಧು ಬಂಗಾರಪ್ಪ ಅಡಿಕೆ ತೋಟದ ರೈತರಿಗೆ ಮನ ಸೋತವರು.

ಕಲ್ಲು ಬಂಡೆ ಹೊಡೆದು ಭರ್ಜರಿ ಜೀವನ ಸಾಗಿಸುವ ಸಂಪನ್ಮೂಲ ಸಚಿವ, ಉಸ್ತುವಾರಿ ಸಚಿವರ ನಿರ್ಲಕ್ಷ್ಯ ಬೇಸತ್ತ ರೈತ ರಸ್ತೆ ತಡೆದು ನೀರು ಕೊಡಿ ಎಂದು ಹೋರಾಟ ಮಾಡಿದರೂ ಕಿವಿ ಕೇಳೋಲ್ಲ ಎಂಬಂತೆ ವರ್ತಿಸಿದೆ ಆಡಳಿತ ಯಂತ್ರ.

ಆದರೆ ಈ ನಡುವೆ ಎರಡು ಭಾರಿ ಪ್ರಕೃತಿ ವರದಾನ ದಿಂದ ಭತ್ತ ಬೆಳೆಯುವ ಮೂಲಕ ಅನ್ನನೀಡುವ ರೈತ ಭತ್ತ ಬೆಳೆದು ಬಿಟ್ಟ. ಈ ಮೂರು ತಿಂಗಳ ಭತ್ತಕ್ಕೆ ನೀರು ಬಿಡುವುದು ಎಷ್ಟು ತ್ರಾಸದಾಯಕ. ಸರ್ಕಾರಗಳು ಯಾರು ಪರ ಎಂದು ಬೆತ್ತಲೆ ತೋರಿಸಿಕೊಂಡಿವೆ.

ಈಗಲಾದರೂ ಕಾಲ ಮಿಂಚಿಲ್ಲ ಕಟಾವು ಮಾಡಿದ ಭತ್ತ ಒಳ್ಳೆಯ ಗುಣಮಟ್ಟದ್ದು ಆಗಿದೆ.3000-3500 ರೂಂ ದರ ನಿಗದಿ ಮಾಡಿದರೆ ರೈತ ಸಾಲಶೂಲದಿಂದಮುಕ್ತಿ ಆಗಬಹುದು. ಭದ್ರಾ ನೀರು ಬೇಸಿಗೆ ಕಾಲದಲ್ಲಿ ಕೊಡುವುದೇ ಇಲ್ಲ ಎಂದು ಹೇಳಿರುವುದು ರೈತ ವಿರೋಧಿ ನೀತಿ.

ಗುಂಡುರಾವ್ ಕಾಲಾವಧಿಯಲ್ಲಿ 158ಅಡಿ ನೀರಿದ್ದರೂ ಭದ್ರಾ ನೀರು ಹರಿಸಲಾಗಿರುವ ದಾಖಲೆ ಇದೆ. ಕಡೆ ಪಕ್ಷ ಈ ಭಾರಿಯ ಭತ್ಖಕ್ಕೆ ವೈಜ್ಞಾನಿಕ ಬೆಲೆ ನಿಗದಿ ಮಾಡಿ, ಇಲ್ಲವೇ ಯಾವ ರೈತರ ಬಳಿ ಭತ್ತ ಖರೀದಿ ನಿಲ್ಲಿಸಿ. ರೈತರೇ ಸ್ವಂತ ಮಾರುಕಟ್ಟೆ ಹುಡುಕಿಕೊಳ್ಳುವ ಪ್ರಯತ್ನ ಮಾಡಲಿ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending