ದಿನದ ಸುದ್ದಿ
ಲಾಕ್ ಡೌನ್ ತೀರದ ಸಂಕಷ್ಟ ; ಮಂಗಳಮುಖಿಯರ ಸಮಸ್ಯೆಗೆ ಜಿ.ಪಂ ಸದಸ್ಯ ಬಸವಂತಪ್ಪ ಸ್ಪಂದನೆ
ಸುದ್ದಿದಿನ,ದಾವಣಗೆರೆ : “ನನಗೆ ವಯಸ್ಸಾಗಿದೆ, ಶುಗರ್ ಇದೆ, ಕೈ,ಕಾಲು ನೋವು ಹೊರಹೋಗಲು ಆಗುತ್ತಿಲ್ಲ, ಅಂಗಡಿಗಳು ಲಾಕ್ಡೌನ್ ಆಗಿರುವುದರಿಂದ ಕಲೆಕ್ಷನ್ ಕೂಡ ಇಲ್ಲ. ಶುಭ ಕಾರ್ಯಗಳಲ್ಲಿ ಚೂರು-ಪಾರು ಹಣ ಸಿಗುತ್ತಿತ್ತು. ಆ ದುಡಿಮೆಯೋ ಇಲ್ಲ. ಹೇಗೋ ಹಸಿವು ನೀಗಿಸಿಕೊಳ್ಳುತ್ತೇವೆ. ಆದರೆ ಮಾತ್ರೆ ತೆಗೆದುಕೊಳ್ಳಲು ಹಣವೂ ನಮ್ಮಲ್ಲಿ ಇಲ್ಲದ ಕಾರಣ ಪರದಾಡಬೇಕಾದ ಸ್ಥಿತಿ ಇದೆ“. ಹೌದು, ಇಂತಹ ಮಾತುಗಳನ್ನು ನಗರದಿಂದ ಆರೇಳು-ಕಿಲೋ ಮೀಟರ್ ದೂರದಲ್ಲಿನ ಮಲ್ಲಶೆಟ್ಟಿಹಳ್ಳಿ ಹೋಗುವ ದಾರಿಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವ ಮಂಗಳಮುಖಿ ನಂದನಮ್ಮ ನೋವಿನಿಂದ ನುಡಿಯುತ್ತಾರೆ.
ಲಾಕ್ ಡೌನ್ ಒಂದು ಕಡೆ ಕೂಲಿ ಕಾರ್ಮಿಕರು, ಅಸಂಘಟಿತರ ವಲಯದ ಆರ್ಥಿಕತೆಯನ್ನು ಮಕಾಡೆ ಮಲಗಿಸಿದೆ. ಆದರೆ ಈ ವಲಯವನ್ನೇ ನಂಬಿಕೊಂಡು ಬದುಕುತ್ತಿದ್ದ ಮಂಗಳಮುಖಿಯರ ಪಾಡು ಹೇಳತೀರದ್ದಾಗಿದೆ. ಕೆಲವರಿಗೆ ಬಿಪಿ ಇದ್ದರೆ, ಇನ್ನೂ ಕೆಲವರಿಗೆ ಶುಗರ್ ಸೇರಿದಂತೆ ದೇಹಕ್ಕೆ ಸಂಬಂಧಿಸಿದ ಕಾಯಿಲೆಗಳು ಇದೆ. ಆದರೆ ಅವುಗಳನ್ನು ಗುಣಪಡಿಸಿಕೊಳ್ಳಲು ಅವರ ಬಳಿ ಹಣ ಇಲ್ಲ.
ನಮಗೆ ಅಂಗಡಿ ಮಾಲೀಕರೇ ಧಣಿಗಳು. ಆ ಧಣಿಗಳೇ ಈಗ ಅಂಗಡಿ ಬಾಗಿಲು ಹಾಕಿದ್ದಾರೆ.ಅವರೇ ಈಗ ಕಷ್ಟದಲ್ಲಿದ್ದಾರೆ. ಇಂತದ್ದರಲ್ಲಿ ನಮ್ಮ ಕಷ್ಟ ಯಾವ ಲೆಕ್ಕ. ಅವರು ಚೆನ್ನಾಗಿ ಇದ್ದರೇ, ನಾವು ಚೆನ್ನಾಗಿ ಇರುತ್ತೇವೆ.
ಆದರೀಗ ಅವರೂ ಚೆನ್ನಾಗಿಲ್ಲ, ನಾವೂ ಚೆನ್ನಾಗಿಲ್ಲ. ನಾವು ಕೂಡ ಮನುಷ್ಯರು, ಹೊಟ್ಟೆಪಾಡಿಗಾಗಿ ಜನರ ಬಳಿ ಭಿಕ್ಷೆ ಬೇಡುತ್ತೇವೆ. ಆದರೀಗ ಅದು ಇಲ್ಲ. ನ್ಯಾಯದ ಮೂಲಕ ದುಡಿಯುತ್ತಿದ್ದೇವೆ. ಕೆಲವರು ನಮ್ಮನ್ನು ಕೆಟ್ಟದಾಗಿ ನೋಡುತ್ತಾರೆ. ಆದ್ದರಿಂದ ಸರಕಾರ ನಮ್ಮ ಧ್ವನಿ ಕೇಳಿಸಿಕೊಂಡು ನಮಗೆ ಸೂರು, ಪಡಿತರ, ಆರೋಗ್ಯ ಕಾರ್ಡ್ ನೀಡಬೇಕು ಎಂದು ಮಂಗಳಮುಖಿಯರು ಒತ್ತಾಯಿಸುತ್ತಾರೆ.
ಜಿಲ್ಲೆಯಲ್ಲಿ ಅಂದಾಜು 200ಕ್ಕೂ ಹೆಚ್ಚು ಮಂಗಳಮುಖಿಯರು ಇದ್ದು, ಹಲವರು ಉಚ್ಚಂಗಿ ದುರ್ಗ, ಬಾಡಾಕ್ರಾಸ್, ಮಂಡಿಪೇಟೆ,ಹಳೆಪೇಟೆ, ಜಯದೇವಸರ್ಕಲ್, ಜನದಟ್ಟಣೆ ಪ್ರದೇಶದಲ್ಲಿ ಹೋಗಿ ಜನರು ಕೊಟ್ಟ ಹಣವನ್ನು ತೆಗೆದುಕೊಳ್ಳುತ್ತಿದ್ದರು. ಆದರೀಗ ಕೊರೊನಾ ಸೊಂಕು ಹಿನ್ನೆಲೆಯಲ್ಲಿ ಯಾರು ಕೂಡ ಹೊರಗೆ ಬರುತ್ತಿಲ್ಲದ ಕಾರಣ ಅವರ ಬಳಿ ಹಣವೇ ಇಲ್ಲವಾಗಿದೆ.
ಅಂಗಡಿಗಳು ಬಾಗಿಲು ತೆಗೆದಿದ್ದ ವೇಳೆ ಪ್ರತಿ ದಿನ 200 ರೂ. ನಿಂದ 300 ರೂ. ಸಂಪಾದಿಸುತ್ತಿದ್ದರು. ಅಲ್ಲದೇ ಶುಭಸಮಾರಂಭಗಳಲ್ಲಿಯೂ ಅವರಿಗೆ ಹೆಚ್ಚು ಹಣ ಬರುತ್ತಿತ್ತು. ಎಲ್ಲರೂ ಒಟ್ಟುಗೂಡಿ ಜೀವನ ನಡೆಸುತ್ತಿದ್ದರು. ಆದರೀಗ ಕೈಯಲ್ಲಿ ಹಣವಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಅವರ ರೋಧನೆ ಹೇಳತೀರದ್ದಾಗಿದೆ.
ಗೋಡೌನ್ ರೀತಿಯಲ್ಲಿ ಇರುವ ಮನೆಯಲ್ಲಿ ಏಳರಿಂದ-ಎಂಟು ಜನ ಒಟ್ಟಿಗೆ ಇದ್ದಾರೆ. ಶೌಚಾಲಯ ಒಂದೇ ಇದೆ. ಓಡಾಡುವುದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ. ಬಿಪಿಎಲ್ ಕಾರ್ಡ್ ಸೌಲಭ್ಯವು ಇಲ್ಲದ ಕಾರಣ ಪಡಿತರ ಸಿಗುವುದು ಕಷ್ಟವಾಗಿದೆ. ಜಿಲ್ಲಾಡಳಿತ, ಸಂಘ ಸಂಸ್ಥೆಗಳು ಕೊಡುವ ಆಹಾರವನ್ನೇ ಸದ್ಯ ಉಪಯೋಗಿಸುತ್ತಿದ್ದಾರೆ. ಇದು ಕೂಡ ಕೆಲವೇ ದಿನಗಳಲ್ಲಿ ಖಾಲಿಯಾಗಲಿದ್ದು, ಮುಂದೇನೂ ಎಂಬ ಪ್ರಶ್ನೆ ಸದ್ಯ ಉಳಿದಿದೆ.
- ನಾವು ಮಂಗಳಮುಖಿಯರು, ಭಿಕ್ಷೆ ಬೇಡುತ್ತಿದ್ದ ನಮಗೆ ಈಗ ಕೆಲಸವಿಲ್ಲ. ನನಗೆ ಶುಗರ್ ಇದೆ. ಶುಗರ್ ಮಾತ್ರೆ ತರೋದಕ್ಕೆ ಸಾರಿಗೆ ಸೌಲಭ್ಯವೂ ಇಲ್ಲ, ಹಣವೂ ಇಲ್ಲ. ಜಿಲ್ಲಾ ಪಂಚಾಯಿತಿ ಸದಸ್ಯ ಬಸವಂತಪ್ಪ ತಂದುಕೊಟ್ಟಿದ್ದಾರೆ. ಆದರೆ ನನ್ನಂತೆಯೇ ಅನೇಕರು ಕಾಯಿಲೆಯಿಂದ ಬಳಲುತ್ತಿದ್ದು, ಅವರ ನೆರವಿಗೆ ಸರಕಾರ ಬರಲಿ.
| ನಂದನಮ್ಮ, ಮಂಗಳಮುಖಿ
- ಮಂಗಳಮುಖಿಯರು ಹಸಿವಿನಿಂದ ಬಳಲುತ್ತಿದ್ದ ಕಾರಣ ಅವರಿಗೆ ಆಹಾರದ ಕಿಟ್ ನೀಡಲಾಗಿದೆ. ಮಂಗಳಮುಖಿಯೊಬ್ಬರು ಶುಗರ್ದಿಂದ ಬಳಲುತ್ತಿದ್ದು , ಅವರಿಗೆ ಸಿಟಿಯಿಂದ ತಂದು ಕೊಡಲಾಗಿದೆ.
| ಬಸವಂತಪ್ಪ, ಜಿಲ್ಲಾ ಪಂಚಾಯತ್ ಸದಸ್ಯ
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
‘ಕಣ್ಣಪ್ಪ’ ಚಿತ್ರದ ವಿಶೇಷ ಪಾತ್ರದಲ್ಲಿ ಪ್ರಭಾಸ್ ನಟನೆ
ಸುದ್ದಿದಿನ ಡೆಸ್ಕ್ : ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ‘ಕಣ್ಣಪ್ಪ’ ಚಿತ್ರಕ್ಕೆ ಇನ್ನೊಬ್ಬ ಸ್ಟಾರ್ ನಟನ ಎಂಟ್ರಿಯಾಗಿದೆ. ಅದು ಬೇರಾರು ಅಲ್ಲ, ಪ್ರಭಾಸ್.
ಈಗಾಗಲೇ ಅಕ್ಷಯ್ ಕುಮಾರ್, ಮೋಹನ್ ಬಾಬು, ಮೋಹನ್ ಲಾಲ್, ಶರತ್ಕುಮಾರ್ ಮುಂತಾದವರು ‘ಕಣ್ಣಪ್ಪ’ ಚಿತ್ರದ ತಾರಾಬಳಗದಲ್ಲಿದ್ದಾರೆ. ಈಗ ಈ ಸ್ಟಾರ್ ತಾರಾಬಳಗಕ್ಕೆ ಪ್ರಭಾಸ್ ಅವರ ಎಂಟ್ರಿಯೂ ಆಗಿದೆ.
ಈ ವಿಚಾರವನ್ನು ಸ್ವತಃ ಚಿತ್ರತಂಡವೇ ಅಧಿಕೃತವಾಗಿ ಘೋಷಣೆ ಮಾಡಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಣ್ಣಪ್ಪ’ ಚಿತ್ರದಲ್ಲಿ ಶಿವನ ಪರಮ ಭಕ್ತ ಕಣ್ಣಪ್ಪನಾಗಿ ವಿಷ್ಣು ಮಂಚು ನಟಿಸಲಿದ್ದಾರೆ. ಹಾಲಿವುಡ್ನ ಶೆಲ್ಡೋನ್ ಚಾವ್ ಅವರ ಛಾಯಾಗ್ರಹಣ, ಕೇಚ ಖಂಫಕದೀ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಇದೇ 12 ರಂದು ದಾವಣಗೆರೆಯಲ್ಲಿ ಪಾರಂಪರಿಕ ಬೀಜೋತ್ಸವ; ಒಂದು ಸಾವಿರಕ್ಕೂ ಹೆಚ್ಚು ದೇಸಿ ಧಾನ್ಯಗಳ ಪ್ರದರ್ಶನ
ಸುದ್ದಿದಿನ, ದಾವಣಗೆರೆ : ದೇಸಿಯ ಬಿತ್ತನೆ ಬೀಜಗಳ ವೈವಿಧ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಇದೇ 12ರಂದು ದಾವಣಗೆರೆ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ‘ಪಾರಂಪರಿಕ ಬೀಜೋತ್ಸವ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ದೇವರಾಜ್ ಹೇಳಿದ್ದಾರೆ.
ಒಂದು ದಿನದ ಈ ಉತ್ಸವದಲ್ಲಿ ದೇಶದ ವಿವಿಧ ಭಾಗಗಳಿಂದ 30ಕ್ಕೂ ಹೆಚ್ಚಿನ ಬೀಜ ಸಂರಕ್ಷಕರ ತಂಡಗಳು ಪಾಲ್ಗೊಳ್ಳಲಿವೆ. ವಿವಿಧ ದೇಸಿ ತಳಿಗಳನ್ನು ಪ್ರದರ್ಶಿಸಲಾಗುತ್ತಿದ್ದು, ಒಂದು ಸಾವಿರಕ್ಕೂ ಹೆಚ್ಚಿನ ದೇಸಿ ಧಾನ್ಯ, ತರಕಾರಿ, ಕಾಳು, ಗೆಡ್ಡೆ ಗೆಣಸು, ಸೊಪ್ಪು ಮತ್ತು ಹಣ್ಣಿನ ತಳಿಗಳು ಪ್ರದರ್ಶನಗೊಳ್ಳಲಿವೆ.
ಗುಣಮಟ್ಟದ ಭತ್ತ, ಸಿರಿಧಾನ್ಯ ಮತ್ತು ತರಕಾರಿ ಬೀಜಗಳು ಮಾರಾಟಕ್ಕೆ ಸಿಗಲಿವೆ. ಕೆಂಪು ಬಣ್ಣದ ’ಸಿದ್ಧ ಹಲಸು’ ಮತ್ತು ಇತರೆ ಹಣ್ಣಿನ ಗಿಡಗಳು ಮಾರಾಟಕ್ಕೆ ಲಭ್ಯವಿರುತ್ತವೆ. ರೈತ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಭತ್ತದ ತಳಿಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಅಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆವರೆಗೆ ನಡೆಯುವ ಕಾರ್ಯಕ್ರಮವನ್ನು ರಾಜ್ಯೋತ್ಸವ ಪ್ರಶಸ್ತಿ ವಿಜೇತೆ ಕೋಲಾರದ ಬೀಜಮಾತೆ ಪಾಪಮ್ಮ ಮತ್ತು ಮೈಸೂರಿನ ಬೀಜಮಾತೆ ಪದ್ಮಾವತಮ್ಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
ದಿನದ ಸುದ್ದಿ
ಚನ್ನಗಿರಿ ಡಿಗ್ರಿ ಕಾಲೇಜಿನಲ್ಲಿ ಬಸವ ಜಯಂತಿ ಆಚರಣೆ
ಸುದ್ದಿದಿನ, ಚನ್ನಗಿರಿ : ಶ್ರೀ ಶಿವಲಿಂಗೇಶ್ವರ ಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ಭಾವಚಿತ್ರ ಅನಾವರಣ ಮಾಡುವುದರ ಮೂಲಕ ಬಸವ ಜಯಂತಿಯನ್ನು ಇಂದು ಬೆಳಗ್ಗೆ ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲರಾದ ಡಾ. ಬಿಜಿ ಅಮೃತೇಶ್ವರ ಬಸವೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಅಧ್ಯಾಪಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243
-
ದಿನದ ಸುದ್ದಿ6 days ago
ಆತ್ಮಕತೆ | ಹಿಂದಿರುಗಿ ನೋಡುತ್ತಾಽ……
-
ದಿನದ ಸುದ್ದಿ4 days ago
ಸಂಸತ್ತಿನ ಕಡೆಗೆ ಪ್ರಭಾ ನಡಿಗೆ
-
ದಿನದ ಸುದ್ದಿ4 days ago
ಹೊನ್ನಾಳಿಯಲ್ಲಿ ವಿಶೇಷಚೇತನರಿಂದ ಶೇ 100 ರಷ್ಟು ಮತದಾನ
-
ದಿನದ ಸುದ್ದಿ4 days ago
ದಾವಣಗೆರೆ | ಲೋಕಸಭಾ ಚುನಾವಣೆ ; ಶೇ 70.94 ಮತದಾನ
-
ದಿನದ ಸುದ್ದಿ5 days ago
ಲೋಕಸಭಾ ಚುನಾವಣೆ | ದಾವಣಗೆರೆ ಜಿಲ್ಲೆಯಲ್ಲಿ 63 ವಿಶೇಷ ಮತಗಟ್ಟೆಗಳ ಸ್ಥಾಪನೆ, ವಿಭಿನ್ನವಾಗಿ ಸಿದ್ದವಾಗಿರುವ ಮತಗಟ್ಟೆಗಳು
-
ದಿನದ ಸುದ್ದಿ4 days ago
ದಾವಣಗೆರೆ | ಲೋಕಸಭಾ ಚುನಾವಣೆ ; ಶೇ 23.79 ಮತದಾನ
-
ದಿನದ ಸುದ್ದಿ6 days ago
2ನೇ ಹಂತದ ಮತದಾನ ; ಮತದಾರರೆಷ್ಟು ಗೊತ್ತಾ..?
-
ದಿನದ ಸುದ್ದಿ4 days ago
ಸೆಲ್ಫಿಯಲ್ಲಿ ಸೆರೆಯಾದ ಒಂದೇ ಕುಟುಂಬದ 38 ಮತದಾರರು