Connect with us

ಕ್ರೀಡೆ

ಮಧ್ಯಾಹ್ನದ ಪ್ರಮುಖ ಸುದ್ದಿಗಳು

Published

on

ಮದ್ಯಾಹ್ನದ ಪ್ರಮುಖ ಸುದ್ದಿಗಳು

  1. ದೇಶಾದ್ಯಂತ 5 ಹಂತಗಳ ಚುನಾವಣೆ ಪೂರ್ಣಗೊಂಡಿದ್ದು, ಇನ್ನು ಎರಡು ಹಂತಗಳ ಚುನಾವಣೆ ಬಾಕಿ ಉಳಿದಿದೆ. 6ನೇ ಹಂತದಲ್ಲಿ ಚುನಾವಣೆ ನಡೆಯಲಿರುವ ಒಟ್ಟು 58 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ ಬೀಳಲಿದೆ.
  2. ಹರಿಯಾಣದಲ್ಲಿಂದು ವಿವಿಧ ಪಕ್ಷಗಳ ನಾಯಕರು ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ, ಮಹೇಂದ್ರಗರ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಹರಿಯಾಣದ ಸಿರ್‍ಸಾದಲ್ಲಿ ರೋಡ್ ಶೋ ನಡೆಸಿದರು.
  3. ಸಂತಾಲಿ ಲೇಖಕ ಪಂಡಿತ್ ರಘುನಾಥ್ ಮುರ್ಮು ಅವರ ಜನ್ಮದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗೌರವ ಸಲ್ಲಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್ ಮಾಡಿರುವ ಅವರು, ಓಲ್ ಚಿಕಿ ಲಿಪಿಯನ್ನು ಅಭಿವೃದ್ಧಿಪಡಿಸುವ ಮೂಲಕ ಸಂತಾಲಿ ಭಾಷೆಗೆ ಪಂಡಿತ್ ರಘುನಾಥ್ ಮುರ್ಮು ಹೊಸ ಗುರುತು ನೀಡಿದ್ದಾರೆ ಎಂದು ಹೇಳಿದರು.
  4. ಭಗವಾನ್ ಬುದ್ಧನ ಜನ್ಮದಿನದ ಅಂಗವಾಗಿ ಬುದ್ಧ ಪೂರ್ಣಿಮೆಯನ್ನು ಪ್ರಪಂಚದಾದ್ಯಂತ ವಿವಿಧ ಭಾಗಗಳಲ್ಲಿ ಇಂದು ಆಚರಿಸಲಾಗುತ್ತಿದೆ. ಭಾರತ, ನೇಪಾಳ, ಭೂತಾನ್, ಬರ್ಮಾ, ಥೈಲ್ಯಾಂಡ್, ಟಿಬೆಟ್, ಕೊರಿಯಾ, ಲಾವೋಸ್, ವಿಯೆಟ್ನಾಂ, ಮಂಗೋಲಿಯಾ, ಕಾಂಬೋಡಿಯಾ, ಸಿಂಗಾಪುರ್, ಇಂಡೋನೇಷ್ಯಾ ಮತ್ತು ಶ್ರೀಲಂಕಾದಂತಹ ದೇಶಗಳಲ್ಲಿ ಇದು ಪ್ರಮುಖ ಹಬ್ಬವಾಗಿದೆ.
  5. ಜುಲೈ 4 ರಂದು ಬ್ರಿಟನ್ ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಘೋಷಿಸಿದ್ದಾರೆ. ಚುನಾವಣೆ ಘೋಷಣೆಯಾಗುವ ಕುರಿತ ಊಹಾಪೋಹಗಳಿಗೆ ತೆರೆ ಎಳೆದಿರುವ ಅವರು, ನಿರೀಕ್ಷೆಗಿಂತ ಹಲವಾರು ತಿಂಗಳುಗಳ ಮುಂಚಿತವಾಗಿಯೇ ರಾಷ್ಟ್ರೀಯ ಚುನಾವಣೆಯನ್ನು ಕರೆದಿದ್ದಾರೆ.
  6. ಬೆಲ್ಜಿಯಂನ ಆಂಟ್‌ವರ್ಪ್‌ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.
  7. ಚೆನ್ನೈನ ಎಂ. ಚಿದಂಬರಂ ಕ್ರೀಡಾಂಗಣದಲ್ಲಿ ನಾಳೆ ನಡೆಯಲಿರುವ ಐಪಿಎಲ್ ಟಿ-20 ಟೂರ್ನಿಯ 2ನೇ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ತಂಡ ಮೊದಲನೇ ಕ್ವಾಲಿಫೈಯರ್ ಪಂದ್ಯ ಸೋತ ಹೈದರಾಬಾದ್ ತಂಡದೊಂದಿಗೆ ಫೈನಲ್ ಪ್ರವೇಶಿಸಲು ಸೆಣಸಾಟ ನಡೆಸಲಿದೆ.
  8. ಇಂದು ಬುದ್ಧ ಪೌರ್ಣಿಮೆಯನ್ನು, ರಾಜ್ಯಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿ, ಕರುಣೆ ಮತ್ತು ಶಾಂತಿಯ ಮಂತ್ರವನ್ನು ಸಾರಿದ ಮಹಾಪುರುಷ ಗೌತಮ ಬುದ್ಧನನ್ನು ನೆನೆಯುತ್ತಾ, ಎಲ್ಲರಿಗೂ ಬುದ್ಧ ಪೂರ್ಣಿಮೆಯ ಶುಭಾಶಯಗಳು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ.
  9. ರಾಜ್ಯದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಕ್ಕೆ ಯಾವುದೇ ಕೊರತೆ ಇಲ್ಲ. ಮುಂಗಾರು ಹಂಗಾಮಿಗೆ 5 ಲಕ್ಷ 35 ಸಾವಿರ ಕ್ವಿಂಟಾಲ್ ಬಿತ್ತನೆ ಬೀಜದ ಬೇಡಿಕೆ ಇದೆ. ಒಟ್ಟು 8 ಲಕ್ಷದ 98 ಸಾವಿರ ಕ್ವಿಂಟಾಲ್ ಬೀಜಗಳ ಪೂರೈಕೆಗೆ, ವ್ಯವಸ್ಥೆ ಮಾಡಲಾಗಿದೆ ಎಂದು, ಸಾಮಾಜಿಕ ಜಾಲತಾಣದಲ್ಲಿ, ಕೃಷಿ ಖಾತೆ ಸಚಿವ ಎನ್.ಚಲುವರಾಯ ಸ್ವಾಮಿ ತಿಳಿಸಿದ್ದಾರೆ.
  10. ಗದಗ ಹಾಗೂ ಹಾವೇರಿ ಜಿಲ್ಲೆಗಳ ವ್ಯಾಪ್ತಿಯ, ವಿವಿಧ ಗ್ರಾಮಗಳಿಗೆ, ಕುಡಿಯುವ ನೀರು ಪೂರೈಸಲು, ಭದ್ರಾ ಜಲಾಶಯದಿಂದ, ತುಂಗಭದ್ರಾ ನದಿಗೆ, ಇದೇ 28ರ ವರೆಗೆ ಪ್ರತಿ ದಿನ, 2 ಸಾವಿರ ಕ್ಯುಸೆಕ್‌ಗಳಂತೆ ಒಟ್ಟು, 11 ಸಾವಿರದ 574 ಕ್ಯೂಸೆಕ್ ನೀರು ಹರಿಸಲಾಗುವುದು ಎಂದು, ಭದ್ರಾ ಯೋಜನಾ ವೃತ್ತದ, ಅಧೀಕ್ಷಕ ಅಭಿಯಂತರರು ತಿಳಿಸಿದ್ದಾರೆ.
  11. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೊಡ್ಡ ಬಳ್ಳಾಪುರದ ಶ್ರೀ ಧರ್ಮರಾಯ ಸ್ವಾಮಿ ದೇವಾಲಯದಲ್ಲಿ, ದ್ರೌಪದಿದೇವಿ ಕರಗ ಮಹೋತ್ಸವ, ಇಂದು ರಾತ್ರಿ ಜರುಗಲಿದೆ.
  12. ಮುಂಬೈ ಷೇರು ಮಾರುಕಟ್ಟೆಯಲ್ಲಿಂದು ಆರಂಭಿಕ ವಹಿವಾಟಿನಲ್ಲಿ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ 42 ಅಂಕ ಏರಿಕೆಯೊಂದಿಗೆ 74 ಸಾವಿರದ 263 ರಲ್ಲಿ ವಹಿವಾಟು ನಡೆಸಿದೆ. ಅಂತೆಯೇ ನಿಫ್ಟಿ ಕೂಡ 20 ಅಂಕ ಏರಿಕೆಯ ನಂತರ 22 ಸಾವಿರದ 618 ರಲ್ಲಿ ವಹಿವಾಟು ನಡೆಸಿದೆ.
  13. ಬೆಲ್ಜಿಯಂನ ಆಂಟ್‌ವರ್ಪ್ನಲ್ಲಿ ನಡೆದ ಎಫ್‌ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಭಾರತೀಯ ಪುರುಷರ ಹಾಕಿ ತಂಡ ಅರ್ಜೆಂಟೀನಾ ತಂಡವನ್ನು ಶೂಟೌಟ್‌ನಲ್ಲಿ 5-4 ಗೋಲುಗಳಿಂದ ಸೋಲಿಸಿತು. ಶೂಟೌಟ್‌ನಲ್ಲಿ, ನಾಯಕ ಹರ್ಮನ್‌ಪ್ರೀತ್ ಸಿಂಗ್ ಮತ್ತು ಸುಖಜೀತ್ ಸಿಂಗ್ ತಲಾ ಎರಡು ಗೋಲು ಗಳಿಸಿದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

ಕುಂದುವಾಡ ಪ್ರೀಮಿಯರ್ ಲೀಗ್ -6 ; ಡಿ ರಾಕ್ಸ್ ತಂಡಕ್ಕೆ ರೋಚಕ ಜಯ

Published

on

ಸುದ್ದಿದಿನ,ದಾವಣಗೆರೆ: ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್ ಹಾಗೂ ಜನತಾ ರಕ್ಷಣಾ ವೇದಿಕೆಯಿಂದ ಚಿಲ್ಡ್ರನ್ ಕುಂದುವಾಡ ಪ್ರೀಮಿಯರ್ ನಡೆದಿದ್ದು, ಈ ಪಂದ್ಯಾವಳಿಯಲ್ಲಿ ಡಿ ರಾಕ್ಸ್ ತಂಡ ರೋಚಕವಾಗಿ ಒಂದು ರನ್ ನಿಂದ ಗೆದ್ದು ಬೀಗಿದೆ.

ಪ್ರತಿ ವರ್ಷದಂತೆ ಈ ವರ್ಷವು ಕುಂದುವಾಡ ಪ್ರೀಮಿಯರ್ ಲೀಗ್ -6 ಆಯೋಜನೆ ಮಾಡಲಾಗಿತ್ತು, ಈ ಭಾರೀ ವಿಶೇಷವಾಗಿ ಗೋಲ್ಡನ್ ಕೆಪಿಎಲ್(ಬಂಗಾರದ ಕಪ್) ನ್ನು ಇಡಲಾಗಿತ್ತು, ಮಳೆ ನಿರಂತರ ಆಗಮಿಸಿದ ಹಿನ್ನಲೆ ಗೋಲ್ಡನ್ ಕಪ್ ಮುಂದೂಡಲಾಯಿತು. ಈ ಮಧ್ಯೆ ಮಳೆ ಬಿಡುವು ನೀಡಿದ ಹಿನ್ನಲೆ ಭಾನುವಾರ ಚಿಲ್ಡ್ರನ್ ಕೆಪಿಎಲ್ ಪಂದ್ಯ ನಡೆಸಲಾಯಿತು, ಐದನೇ ತರಗತಿಯಿಂದ 8ನೇ ತರಗತಿ ಒಳಗಿನ ಮಕ್ಕಳು ಮಾತ್ರ ಈ ಟೂರ್ನಿಯಲ್ಲಿ ಭಾಗವಹಿಸಿದ್ದರು.

ನಾಲ್ಕು ತಂಡಗಳನ್ನ ರಚಿಸಲಾಗಿತ್ತು, ಡೆವಿಲ್ಸ್ ಕ್ರಿಕೇಟರ್ಸ್, ಡಿ ರಾಕ್ಸ್, ಶ್ರೀ ವಿನಾಯಕ ಕ್ರಿಕೇಟರ್ಸ್, ಜೂನಿಯರ್ಸ್ ಸ್ನೇಹ ಬಳಗ ತಂಡಗಳು ಭಾಗವಹಿಸಿದ್ದವು, ಗ್ರಾಮದ ಹಿಡಿಯ ಮುಖಂಡರು ಪಂದ್ಯಾವಳಿ ಉದ್ಘಾಟಿಸಿದರು, ಡೆವಿಲ್ಸ್ ಹಾಗೂ ಡಿ ರಾಕ್ಸ್ ತಂಡ ಫೈನಲ್ ಪ್ರವೇಶ ಪಡೆದಿದ್ದವು, ಮೊದಲ ಬ್ಯಾಟ್ ಮಾಡಿದ ಸಂಜಯ್ ಲೋಕಿಕೆರೆ ನಾಯಕತ್ವದ ಡಿ ರಾಕ್ಸ್ ತಂಡ ನಿಗಧಿತ 4 ಓವರ್ ಗಳಲ್ಲಿ 28ರನ್ ಗಳಿಸಿತು, ಗುರಿ ಬೆನ್ನಟ್ಟಿದ ಗೌಡ್ರು ಪುನೀತ್ ನಾಯಕತ್ಸ ಡೆವಿಲ್ಸ್ ತಂಡ ರೋಚಕ ಹಣಾಹಣಿಯಲ್ಲಿ ಕೇವಲ 1 ರನ್ ನಿಂದ ಸೋತು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡೆಯಬೇಕಾಯಿತು.

ಕೊನೆಯ ಎಸೆತದಲ್ಲಿ ಗೆಲ್ಲಲು ಮೂರು ರನ್ ಗಳ ಅವಶ್ಯಕತೆ ಇತ್ತು, ಕೊನೆಯ ಎಸೆತ ಬಿಗಿ ಬೌಲಿಂಗ್ ದಾಳಿ ನಡೆಸಿದ ಬೌಲರ್ ಕೇವಲ ಒಂದು ರನ್ ಬಿಟ್ಟುಕೊಟ್ಟರು ಇದರೊಂದಿಗೆ ಕೇವಲ ಒಂದು ರನ್ ನಿಂದ ಡಿ ರಾಕ್ಸ್ ತಂಡ ವಿಜಯಶಾಲಿಯಾಯಿತು, ಇನ್ನೂ ಮೂರನೇ ಸ್ಥಾನಕ್ಕಾಗಿ ಶ್ರೀ ವಿನಾಯಕ ಕ್ರಿಕೇಟರ್ಸ್ ಹಾಗೂ ಜೂನಿಯರ್ಸ್ ಸ್ನೇಹಬಳಗ ತಂಡ ಸೆಣಸಾಟ ನಡೆಸಿದವು.

ಈ ಪಂದ್ಯದಲ್ಲಿ ಶ್ರೀ ವಿನಾಯಕ ತಂಡ ಸುಲಭವಾಗಿ ಗೆಲುವು ಪಡೆಯುದರೊಂದಿಗೆ ಮೂರನೇ ಬಹುಮಾನ ಪಡೆಯಿತು, ಜೂನಿಯರ್ಸ್ ಸ್ನೇಹ ಬಳಗ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನೂ ಎಲ್ಲಾ ಪಂದ್ಯಗಳು ರೋಚಕವಾಗಿದ್ದವು, ಮಕ್ಕಳಿಗಷ್ಟೆ ಈ ಪಂದ್ಯಾವಳಿಯಲ್ಲಿ ಅವಕಾಶ ಇದ್ದಿದ್ದರಿಂದ ಆಟಕ್ಕೆ ಎಲ್ಲರಿಗೂ ಅವಕಾಶ ಸಿಕ್ಕಿತ್ತು, ಅಷ್ಟೆ ಉತ್ಸಾಹಕರಾಗಿ ಮಕ್ಕಳು ಪಾಲ್ಗೊಂಡಿದ್ದು ಚಿಲ್ಡ್ರನ್ ಕೆಪಿಎಲ್ ಯಶಸ್ವಿಯಾಗಿ ಮುಗಿದಿದೆ, ಇನ್ನೂ ಗೋಲ್ಡನ್ ಕೆಪಿಎಲ್ ಟೂರ್ನಿಯನ್ನೂ ಮುಂದೂಡಲಾಗಿದ್ದು, ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಮಾಧ್ಯಮ ಲೋಕದ ದಿಗ್ಗಜ ರಾಮೋಜಿ ರಾವ್‌ ನಿಧನ

Published

on

ಸುದ್ದಿದಿನಡೆಸ್ಕ್ :ಮಾಧ್ಯಮ ಲೋಕದ ದಿಗ್ಗಜ, ಉದ್ಯಮಿ ಹಾಗೂ ರಾಮೋಜಿ ಸಮೂಹ ಸಂಸ್ಥೆಗಳ ಅಧ್ಯಕ್ಷ ರಾಮೋಜಿ ರಾವ್‌ (87) ನಿಧನರಾಗಿದ್ದಾರೆ.

ಕೆಲ ದಿನಗಳಿಂದ ಆರೋಗ್ಯ ಸಮಸ್ಯೆಯಿಂದ ಅವರು ಬಳಲುತ್ತಿದ್ದರು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಹೈದರಾಬಾದ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಮುಂಜಾನೆ 4:50ಕ್ಕೆ ಕೊನೆಯುಸಿರೆಳೆದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ಕ್ರೀಡೆ

ಅಮೆರಿಕಾ ಪರ ಆಡಿ ಪಾಕಿಸ್ತಾನ ಸೋಲಿಸಿದ ಆ ಬೌಲರ್ಸ್ ಮೂಲ ಚಿಕ್ಕಮಗಳೂರು, ಮುಂಬೈ !

Published

on

ನೋಸ್ತುಶ್ ಪ್ರದೀಪ್ ಕೆಂಜಿಗೆ | ಸೌರಭ್ ನೇತ್ರಾವಲ್ಕರ್
  • ಸಿದ್ದು ಸತ್ಯಣ್ಣನವರ್

ಸದ್ಯ ನಡೆದಿರುವ T-20 ಕ್ರಿಕೆಟ್ ವಿಶ್ವಕಪ್ ನಲ್ಲಿ ದಿಟ್ಟ ಆಟವಾಡಿದ ಅಮೆರಿಕಾ ತಂಡ ಬಲಿಷ್ಟ ಪಾಕಿಸ್ತಾನ ತಂಡವನ್ನು ಸೂಪರ್ ಓವರಿನಲ್ಲಿ 5 ರನ್ ಅಂತರದಿಂದ ಸೋಲಿಸಿತು. ವಿವಿಧ ರಾಷ್ಟ್ರಗಳ ಮೂಲದ ಆಟಗಾರರನ್ನೇ ಹೆಚ್ಚು ಹೊಂದಿರುವ ಅಮೆರಿಕಾ ತಂಡದ ಗೆಲುವಿನಲ್ಲಿ ಗಮನ ಸೆಳೆದ ಹೆಸರು ಕರ್ನಾಟಕದ ಚಿಕ್ಕಮಗಳೂರಿನ ನೋಸ್ತುಶ್ ಪ್ರದೀಪ್ ಕೆಂಜಿಗೆ ಹಾಗೂ ಮುಂಬೈ ಮೂಲದ ಸೌರಭ್ ನೇತ್ರಾವಲ್ಕರ್ ಅವರದು. ನೋಸ್ತುಶ್ ಅವರು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ಕೆಂಜಿಗೆ ಗ್ರಾಮದವರು. ಕನ್ನಡದ ಹೆಸರಾಂತ ಸಾಹಿತಿಗಳಾದ ಪೂರ್ಣಚಂದ್ರ ತೇಜಸ್ವಿಯವರೊಡನೆ ಮಿಲೇನಿಯಮ್ ಸರಣಿಯ ಪುಸ್ತಕಗಳನ್ನು ನೀಡಿದ ಸಾಹಿತಿ, ಕಾಫಿ ಬೆಳೆಗಾರರಾದ ಪ್ರದೀಪ್ ಕೆಂಜಿಗೆ ಅವರ ಪುತ್ರ ನೋಸ್ತುಶ್.

ಅಮೆರಿಕಾ ತಂಡ ತನ್ನ ಕೋಟಾದ 20 ಓವರ್ ಬೌಲಿಂಗ್ ಮುಗಿಸಿದಾಗ ಸ್ಕೋರ್ ಬೋರ್ಡ್ ಮೇಲೆ ನೋಸ್ತುಶ್ ಅವರ ಆಟದ ವೈಖರಿಯ ಅಂಕಿಸಂಖ್ಯೆ 4-0-30-3.
ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದದ್ದು ಪಂದ್ಯದ ತಿರುವುಗಳಲ್ಲೊಂದು. ಪಾಕ್ ನೀಡಿದ 160 ರನ್ ಲಕ್ಷ್ಯ ಬೆನ್ನಟ್ಟಿದ ಅಮೆರಿಕನ್ನರು 159 ರನ್ ಗಳಿಸಿದ್ದರಿಂದ ಪಂದ್ಯ ಟೈಗೊಂಡ ಕಾರಣಕೆ ಸೂಪರ್ ಓವರಿನಲ್ಲಿ ಪಾಕಿಸ್ತಾನಕ್ಕೆ ಗೆಲ್ಲಲು ಅಮೆರಿಕ ನೀಡಿದ ಗುರಿ 19 ರನ್. ಆಗ ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಅಮೆರಿಕಾ ತಂಡದ ನಾಯಕ ಚೆಂಡಿತ್ತದ್ದು ಎಡಗೈ ವೇಗಿ ಸೌರಭ್ ನೇತ್ರಾವಲ್ಕರ್ ಅವರ ಕೈಗೆ. ಆರು ಎಸೆತಗಳಲ್ಲಿ 13 ರನ್ ಅಷ್ಟೇ ನೀಡಿದ ನೇತ್ರಾವಲ್ಕರ್ ಅಮೆರಿಕ ತಂಡದ ಜಯಕ್ಕೆ ಕಾರಣರಾದರು. ಭಾರತದ ಪರ ಕೆ.ಎಲ್. ರಾಹುಲ್ ನಾಯಕತ್ವದಲ್ಲಿ U-19 ವಿಶ್ವಕಪ್ ಆಡಿದ್ದ ಹಾಗೂ ಮುಂಬೈ ಪರ ರಣಜಿ ಪಂದ್ಯಗಳಲ್ಲೂ ಮಿಂಚಿದ್ದ ನೇತ್ರಾವಲ್ಕರ್ ಸದ್ಯ ಅಮೆರಿಕಾದಲ್ಲಿ ಟೆಕ್ಕಿ. ಅಮೆರಿಕಾ ಪರ 40ಕ್ಕೂ ಹೆಚ್ಚು ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿ, ತಂಡದ ಪ್ರಮುಖ ಖಾಯಂ ಸದಸ್ಯರಾಗಿದ್ದಾರೆ.

ನೋಸ್ತುಶ್ ಕೆಂಜಿಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ, ಕ್ರಿಕೆಟ್ ತರಬೇತಿ ಪಡೆದರೂ, ಕ್ಲಬ್ ಕ್ರಿಕೆಟ್ ಆಡಿದರೂ ಭಾರತದಲ್ಲಿ ಸ್ಪರ್ಧೆ ಹೆಚ್ಚಾಗಿರುವ ಕಾರಣಕೆ ಅವಕಾಶ ಸಿಗುವ ಸಾಧ್ಯತೆ ಬಹಳ ಕಷ್ಟವಿತ್ತು. ಆ ಕಾರಣಕೆ ಉದ್ಯೋಗ ನಿಮಿತ್ತ ಅಮೆರಿಕಾ ತೆರಳಿದವರಿಗೆ ಅಲ್ಲಿಯ ರಾಷ್ಟ್ರೀಯ ತಂಡಕ್ಕೆ ಆಡುವ ಸುಯೋಗ ಒಲಿಯಿತು. 2017ರಲ್ಲಿ ನೋಸ್ತುಶ್ ಅವರು ಅಮೆರಿಕಾ ಪರ ಪಾದಾರ್ಪಣೆ ಮಾಡಿದಾಗ ಅವರ ಸಮಕಾಲೀನರಾದ ಈಗಾಗಲೇ ಭಾರತದ ಪರ ಜನಪ್ರಿಯರಾಗಿರುವ ಬ್ಯಾಟರ್ ಗಳಾದ ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಶ್ರೇಯಸ್ ಅಯ್ಯರ್ ಜೊತೆ ಆಡಿದವರು. ಎಡಗೈ ಸ್ಪಿನ್, ಬಲಗೈ ಬ್ಯಾಟಿಂಗ್ ಕೌಶಲ ಹೊಂದಿರುವ ನೋಸ್ತುಶ್ ಹಾಗೂ ಸೌರಭ್ ಅವರ ಪಾಕಿಸ್ತಾನದ ವಿರುದ್ಧದ ಆಟ ಅಮೆರಿಕಾ ತಂಡಕ್ಕೆ ಗೆಲುವು ಕೊಡಿಸಿತು. ಆ ಮೂಲಕ ಕ್ರಿಕೆಟ್ ಶಿಶು ಎಂದು ಕರೆಯಲ್ಪಟ್ಟರೂ ಬಲಿಷ್ಟ ಪಾಕಿಸ್ತಾನವನ್ನು ಸೋಲಿಸಲು ಕಾರಣವಾದ ಅಮೆರಿಕಾ ತಂಡದ ಸಂತಸಕೆ ಕನ್ನಡಿಗನ ಕೊಡುಗೆಯು ಸೇರಿ ಮುಂಬೈ ಮೂಲದ ಸೌರಭ್ ಅವರ ಪ್ರದರ್ಶನವು ಕಾರಣವಾಯಿತು.

ಅಮೆರಿಕ ತಂಡ ಪಾಕ್ ವಿರುದ್ಧ ಗೆಲ್ಲಲು ಮಾಡಿದ ಸಂಘಟಿತ ಹೋರಾಟ ಖಂಡಿತ ಕ್ರಿಕೆಟ್ ಪ್ರಿಯರ ಮನಸೆಳೆಯುವಂತಿತ್ತು. ಈ ಜಯ ಹಾಗೂ ವಿಶ್ವಕಪ್ ಆತಿಥ್ಯದಿಂದ ಅಮೆರಿಕದಲ್ಲಿ ಕ್ರಿಕೆಟ್ ಜನಪ್ರಿಯವಾಗಿ ಬೆಳೆಯಲು ಕಾರಣವಾಗಬಹುದು. (ಕೃಪೆ : ಸಿದ್ದು ಸತ್ಯಣ್ಣನವರ್ ಫೇಸ್ ಬುಕ್ ಪೇಜ್ ನಿಂದ)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending