Connect with us

ದಿನದ ಸುದ್ದಿ

ಕವಿತೆ | ಏಜಾಕ್ಸ್ ಸಿಂದೂ ನೆಲದಲಿ ಪ್ರವೇಶಿಸಿದ ಪ್ರೇತ..!

Published

on

  • ಟಿ.ಎಸ್. ರಾಜೇಂದ್ರ ಪ್ರಸಾದ್, ದಾವಣಗೆರೆ

ಏಜಾಕ್ಸ್
ಯಾರ ಕಲ್ಪನೆಯ ಕೂಸು ನೀನು
ಸಿಂದೂನೆಲ ಪ್ರವೇಶಿಸಿದ ಪ್ರೇತ ನರರಾಕ್ಷಸ
ಕೆಲವು ಗಂಡಸರ ಸಂವೇದನೆಯಲ್ಲೇಕೆ ನುಸುಳಿದ್ದೀಯಾ?
ಅಸಂಗತ ಬಂಧನ ಬೆಸೆಯುವ ಆಸೆಗಳಿಗೇಕೆ ಮುನ್ನುಡಿ ಬರೆದಿರುವೆ?

ಅಪ್ಪಮಗಳ, ತಾಯಿ ಮಗನ, ಅಕ್ಕ ಅಣ್ಣನ ತಮ್ಮತಂಗಿಯ
ಕರುಳುಬಳ್ಳಿಗಳನ್ನೇಕೆ ಚಿವುಟಿರುವೆ
ಮನೋವ್ಯಾಕುಲನೇ,
ವಿಕೃತಿಕಾಮಿಯೇ ಬಹುಕೃತ ದೋಷಿಯೇ
ಸಿಂದೂನೆಲ ಸಂಸ್ಕೃತಿಯನ್ನೇಕೆ ಸುಡುತಿರುವೆ?
ದುರುಳ ದುಶ್ಯಾಸನ, ದುರ್ಯೋಧನ, ಕೀಚಕ,
ರಾವಣ, ಕಂಸರ ಸಂತತಿ ಉಲ್ಬಣಿಸುತ್ತಲೇ
ಅಮಾಯಕ ಹೆಂಗಸರ ಕಣ್ಣಿರುಗಳಿಗೇಕೆ
ಮತ್ತೆ ನದಿಗಳನು ಕೂಡಿಸುತ್ತಿರುವೆ?

ಇನ್ನೆಷ್ಟು ನಿನ್ನ ವಿಕೃತ ಲೋಲು ಸುಟ್ಟುಕೊಳ್ಳಬೇಕು
ಕೆಟ್ಟ ನಿನ್ನ ಆಸೆಗಳ ಬೀಜಗಳನ್ನೇಕೆ ಇಲ್ಲಿ ನೆಟ್ಟಿರುವೆ.
ಎಷ್ಟೋ ದ್ರೌಪದಿ, ಸೀತೆಯರು
ಬಳಲಿದ್ದಾರೆ ಕಣ್ಣೀರುಗಳಿಂದ!
ಗAಡಸಿನ ಕುಲಕೆ ಅಪವಾದ
ಧರ್ಮಯೀನ ಕಟುಕನಾಗಿ
ವಿಕಟಕಾಮಿ
ಮತಿಗೆಟ್ಟ ಮೃಗವಾಗಿ
ಅಟ್ಟಹಾಸಗೈಯುತ್ತಿರುವ ಏಜಾಕ್ಸ್
ನಿನ್ನ ಪ್ರೇತವೇಕೆ ರುದ್ರನಾಟ್ಯವಾಡುತಿದೆಯಿಲ್ಲಿ!

ಎದೆಯೊಳಗೆ ಅವ್ಯಕ್ತ ಶೋಕ ಸಮುದ್ರ
ಎದುರಿಸಲಾರದ ಅಸಹಾಯಕತೆ ಕರುಳುಬಂಧ !
ಕುಂದಿಸಲಾರದ ಕುದಿ ಕೆನತವಿದೆ
ಎಷ್ಟೋ ರಾತ್ರಿ ಭೀಕರ ನರಳುತ್ತಿವೆ
ಕುತ್ತಿಗೆಯೊಳಗೆ ಕಟ್ಟಿಕೊಂಡ ಅಳುವಿನ ಬಣವೆಗಳಿವೆ !
ನಿನಗೆ ಗೊತ್ತಿಲ್ಲ
ಪ್ರತಿಕ್ಷಣ ಹತ್ತಿ ಉರಿಯುತಿವೆ ನಿನ್ನಂತಹ ಗಂಡರ ರಕ್ಕಸತನಕೆ!
ಎಷ್ಟೋ ಹೆಣ ನೇಣುಹಗ್ಗದಲಿ ನೇತಾಡುತಿವೆ
ಎಷ್ಟೋ ಹೆಣ ವಿಷಪ್ರಾಸನದಲಿ ಮಲಗಿವೆ
ಹೆಣ ಹೂಣಲು ನಿರ್ಲಕ್ಷಿಸುವ ನೆಲದಲಿ
ಏಜಾಕ್ಸ್ ತೊಲಗು ಮತ್ತೆ ನುಸುಳದಿರು ಹಸುಳೆಯರ ಜೀವನದಲಿ!

ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !
ಕ್ಷಮಿಸುಬಿಡು ಹುಡುಗಿ, ನಿನ್ನ ವ್ಯಥೆಯ ಆಳದಲಿ
ಕತ್ತಲ ಕಥೆ ಬೆಳೆಯುತಿದೆ!
ಓದಬಲ್ಲೆ ನಿನ್ನ ಕಣ್ಣು ತುಳುಕಿಸುವ ನೋವಿನ
ಅಕ್ಷರ ಮಾತ್ರ!

ಹೆಣೆಯಲಾರೆ ಕಣ್ಣೀರು ಹಿಮಗಡ್ಡೆಗಳಡಿಯಲಿ
ಭೀರಕ ಕ್ಷಣಗಳನು!
ತೇವವಿಲ್ಲದ ಪದಗಳ ಪೋಣಿಸಲಾರೆ!

ಕೌರ್ಯ ಆಮಿಷ ಹಾವುಗಳಿಗೆ
ಪ್ರನೋಟ್ ಬರೆಯಲಾರೆ ಮಸಣದಲಿ !
ನಿನ್ನ ಪರಿಣಯಕೆ ಜಗದ ಕನಿಕರಕೆ
ಸೊರಗಿವೆ ಭಾವಹಕ್ಕಿ!

ಪ್ರತಿ ಅಕ್ಷರ ಕರುಳನು ಹಿಂಡುವ
ನಿನ್ನೊಂದಿಗೆ ತಬ್ಬಿಕೊಂಡು ಮಲಗಿದ ಶೋಕಬೆಟ್ಟ!
ಭೀಕರ ಮೌನ ಕಾಡ್ಗಿಚ್ಚಿನಲಿ
ಭಿಕಾರಿ ಬದುಕೊಳಗೆ ಭೂಪಂಕನ,
ಕಂಬನಿ ನದಿ ವಿಜೃಂಬಿಸಿವೆ!
ಕರುಳು ಕತ್ತರಿಸುವ ಮನುಕುಲ ಕಥೆ ನಿರಂತರ ಮರುಹುಟ್ಟುತ್ತಲೇ ಇವೆ!

ಕವಿ ಟಿ.ಎಸ್. ರಾಜೇಂದ್ರ ಪ್ರಸಾದ್

ಎದೆಸುಡುವ ಸತ್ಯ, ದಿಕ್ಕೆಡಿಸುವ ಮಿಥ್ಯ
ಹಗಲ ಸತ್ಯಕೆ ಸೂರ್ಯ ಚಂದ್ರನಕ್ಷತ್ರಾಧಿ ಕುಸಿದಿದ್ದಾರೆ!

ಸುಡುವ ವರ್ತಮಾನ ತಲ್ಲಣಿಸುತಿರಲು,
ಬಂಧನ ಜೀವನ್ಮರಣ ಬೇಯುತಿರಲು!
ಮೃಗೀಯ ಏಜಾಕ್ಸ್ನ ಪ್ರೇತ ಕುಣಿಯುತಿದೆ!

ಬದುಕೇ ಮೃಗಜಲ! ಹಾಲಾಹಲ! ಅಲ್ಲೂಲಕಲ್ಲೋಲ!
ಮಬ್ಬು ಮುಸುಕಿದೆ ಬೊಬ್ಬೆಯಿಟ್ಟು !
ಕದ್ದಿಂಗಳ ಕತ್ತಲು ಎಲ್ಲಿಹುದೋ ದಾರಿ!
ಕಬ್ಬಿಣ ಕೋಳ ತೋಳವಾಗಿ ನುಂಗುತಿರಲು
ಖೆಡ್ಡದಲಿ ಕೆಂಡ ನಿಗಿನಿಗಿಸಿ
ಮಗುಚಿ ಕಾರ್ಮೋಡ
ಕಳಚಿ ಆಗಸ
ಯಮ ನಿಂತಿರಲು ನಿನ್ನ ಮುಂದೆ
ನನ್ನ ಪ್ರಾರ್ಥನೆ ಇಷ್ಟೇ…..!
ಬರಬೇಕು ಕೃಷ್ಣ, ಕಥೆಗೊಂದು ಕೊನೆ
ಅವನ ಶ್ರೀಚಕ್ರಕೆ ದುರಳರ ಬಲಿ ಕೊಡಬೇಕು!
ಅಷ್ಟೇ..
ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ

Olympic Games Paris 2024 | ಇಂದು ಪ್ಯಾರಿಸ್ ಒಲಿಂಪಿಕ್ಸ್ ಉದ್ಘಾಟನೆ ; ಭವ್ಯ ಸಮಾರಂಭಕ್ಕೆ ಸೀನ್ ನದಿ ಸಜ್ಜು

Published

on

ಸುದ್ದಿದಿನಡೆಸ್ಕ್:ಪ್ಯಾರಿಸ್ ಒಲಿಂಪಿಕ್ಸ್‌ನ ಉದ್ಘಾಟನಾ ಸಮಾರಂಭ ಇಂದು ನಡೆಯಲಿದೆ. ಸೀನ್ ನದಿಯ ಮೇಲೆ ಇಂದು ಭಾರತೀಯ ಕಾಲಮಾನ ರಾತ್ರಿ 11ಗಂಟೆಗೆ ಉದ್ಘಾಟನಾ ಸಮಾರಂಭ ಜರುಗಲಿದೆ. ಪರೇಡ್‌ನಲ್ಲಿ ಭಾರತದ ಧ್ವಜಧಾರಿಗಳಾದ ಶರತ್ ಕಮಲ್ ಮತ್ತು ಪಿ.ವಿ.ಸಿಂಧು ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಉದ್ಘಾಟನಾ ಸಮಾರಂಭಕ್ಕೂ ಮುನ್ನ ಕೆಲ ಪಂದ್ಯಗಳಿಗೆ ಚಾಲನೆ ನೀಡಲಾಗಿದೆ. ಅದರಂತೆ ಜುಲೈ 24 ರಿಂದ ಫುಟ್‌ಬಾಲ್ ಮತ್ತು ರಗ್ಬಿ ಪಂದ್ಯಗಳು ಶುರುವಾಗಿದ್ದು, ನಿನ್ನೆ ಬಿಲ್ಲುಗಾರಿಕೆ ಸ್ಪರ್ಧೆ ಆರಂಭವಾಗಿದೆ. ಈ ಸ್ಪರ್ಧೆಯೊಂದಿಗೆ ಭಾರತ ಒಲಿಂಪಿಕ್ಸ್ ಅಭಿಯಾನ ಆರಂಭಿಸುತ್ತಿರುವುದು ವಿಶೇಷವಾಗಿದೆ.

ಬಿಲ್ಲುಗಾರಿಕೆಯ ಶ್ರೇಯಾಂಕದ ಸುತ್ತಿನಲ್ಲಿ ಅಂಕಿತ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ ಅವರನ್ನೊಳಗೊಂಡ ಭಾರತೀಯ ಮಹಿಳಾ ತಂಡ, 1 ಸಾವಿರದ 983 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಗಳಿಸಿ, ಕ್ವಾರ್ಟರ್ ಫೈನಲ್ಸ್ ಪ್ರವೇಶಿಸಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

JUDGE | ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ ಏರಿಕೆ

Published

on

ಸುದ್ದಿದಿನಡೆಸ್ಕ್:ಕಳೆದ 10 ವರ್ಷಗಳಲ್ಲಿ ಹೈಕೋರ್ಟ್ಗಳ ನ್ಯಾಯಾಧೀಶರ ಸಂಖ್ಯೆ 906 ರಿಂದ 1114 ಕ್ಕೆ ಏರಿದೆ. ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ಗಳ ನ್ಯಾಯಾಧೀಶರನ್ನು ಭಾರತದ ಸಂವಿಧಾನದ ಅಡಿಯಲ್ಲಿ ನೇಮಕ ಮಾಡಲಾಗಿದೆ ಎಂದು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ರಾಜ್ಯಸಭೆಯಲ್ಲಿ ನಿನ್ನೆ ಲಿಖಿತ ಉತ್ತರ ನೀಡಿದ್ದಾರೆ.

ದೇಶದಲ್ಲಿ ಒಟ್ಟು 15 ಸಾವಿರದ 300 ಮೆಗಾ ವ್ಯಾಟ್, ಸಾಮರ್ಥ್ಯದ 21 ಪರಮಾಣು ರಿಯಾಕ್ಟರ್‌ಗಳು ಅನುಷ್ಠಾನದ ವಿವಿಧ ಹಂತಗಳಲ್ಲಿವೆ ಎಂದು ಕೇಂದ್ರ ಭೂವಿಜ್ಞಾನ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.
ದೇಶದಲ್ಲಿ ಪ್ರಸ್ತುತ ಸ್ಥಾಪಿಸಲಾದ ಪರಮಾಣು ಶಕ್ತಿ ಸಾಮರ್ಥ್ಯವು 8 ಸಾವಿರ 180 ಮೆಗಾವ್ಯಾಟ್ ಆಗಿದ್ದು, 24 ಪರಮಾಣು ಶಕ್ತಿ ರಿಯಾಕ್ಟರ್‌ಗಳನ್ನು ಒಳಗೊಂಡಿದೆ.

ಪ್ರಸ್ತುತ ಸ್ಥಾಪಿಸಲಾದ ಪರಮಾಣು ವಿದ್ಯುತ್ ಸಾಮರ್ಥ್ಯವನ್ನು 2031-32ರ ವೇಳೆಗೆ 22 ಸಾವಿರದ 480 ಮೆಗಾವ್ಯಾಟ್‌ಗೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ
ಪರಮಾಣು ವಿದ್ಯುತ್ ಸ್ಥಾವರಗಳಿಂದ ವಾರ್ಷಿಕ ವಿದ್ಯುತ್ ಉತ್ಪಾದನೆಯು 2013-14 ರಲ್ಲಿ 34 ಸಾವಿರದ 228 ಮಿಲಿಯನ್ ಯುನಿಟ್‌ಗಳಿಂದ 2023-24 ರಲ್ಲಿ 47 ಸಾವಿರದ 971 ಮಿಲಿಯನ್ ಯುನಿಟ್‌ಗಳಿಗೆ ಏರಿಕೆಯಾಗಿದೆ ಎಂದು ಡಾ. ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

KSOU | ಪ್ರವೇಶಾತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನಡೆಸ್ಕ್:2024-25 ನೇ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಗೆ ಯುಜಿಸಿ ಅನುಮೋದಿತ ಶಿಕ್ಷಣ ಕ್ರಮಗಳ ಪ್ರವೇಶಾತಿಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ವೈಬ್ ಸೈಟ್ www.ksoumysuru.ac.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending