Connect with us

ಭಾವ ಭೈರಾಗಿ

ಕವಿತೆ | ಪಿಟೀಲು ಬಿಟ್ಟು ಏಳುತ್ತಿಲ್ಲ

Published

on

  • ಸಂತೋಷ್ ಉಂಡಾಡಿ

ರೋಮ್ ಹೊತ್ತಿ ಉರಿಯುತ್ತಿರುವಾಗ
ನೀರೊ ಪಿಟೀಲು ನುಡಿಸುತ್ತಿದ್ದನಂತೆ
ಪ್ರಜೆಗಳು ಸಂಭ್ರಮಿಸುತಿದ್ದರಂತೆ
ಇಲ್ಲಿಯೂ ಹಾಗೆ..!!
ಹೊತ್ತಿ ಉರಿಯುತಿದೆ ರಾಜ್ಯ
ದ್ವೇಷ ಕಾರುತಿವೆ ಮನಸುಗಳು
ಆದರೆ ನಮ್ಮ ನೀರೊ..!!!

ದಾಡಿ ನೀವಿಕೊಳ್ಳುತ್ತಿದ್ದಾನೆ, ವೇಷ ಬದಲಿಸುತ್ತಿದ್ದಾನೆ ನವಿಲಿಗೆ ಅಕ್ಕಿ ತಿನ್ನಿಸುತ್ತಾ ಹಾಯಾಗಿ ಕುಳಿತಿದ್ದಾನೆ..!!

ಮುಂದಿನ ಚುನಾವಣೆಗಾಗಿ ತಯಾರಿ ನಡೆಸಿದ್ದಾನೆ
ಸಮರ ಸೇನಾನಿ, ಹುಡುಕುತ್ತಿದ್ದಾನೆ ಹೊಸ ಕತೆಯ
ಹಾವಭಾವಕ್ಕೆನೂ ಕಮ್ಮಿಯಿಲ್ಲ, ಆವೇಶಕ್ಕೂ ಕೊರತೆ ಇಲ್ಲ..!!!

ಹೊಗಳು ಭಟರು, ವಂದಿಮಾಗಧರು
ಪುಂಖಾನುಪುಂಖವಾಗಿ, ಜಯಕಾರ ಹಾಕುತ್ತಿದ್ದಾರೆ
ಅಗ್ನಿ ಜ್ವಾಲೆಗಳು ಮಾತ್ರ ನಿಲ್ಲುತ್ತಿಲ್ಲ..!!!

ಕರುಣೆ ಒಲವುಗಳ ಮಾತೇ ಇಲ್ಲ.
ಸತ್ಯದ ದಹನ ಮಾತ್ರ ನಿತ್ಯ ನಿರಂತರ
ಆದರೂ ನಮ್ಮ ನೀರೊ ಪಿಟೀಲು ಬಿಟ್ಟು ಏಳುತ್ತಿಲ್ಲ, ನವಿಲು ನರ್ತಿಸುತ್ತಿಲ್ಲ…!!!

ಸುದ್ದಿದಿನ.ಕಾಂ|ವಾಟ್ಸಾಪ್|9980346243

 

ದಿನದ ಸುದ್ದಿ

ಕವಿ ಆನಂದ ಲಕ್ಕೂರು ನಿಧನ ; ಉದಯ ಇಟಗಿ ನುಡಿನಮನ

Published

on

ಕವಿ ಆನಂದ ಲಕ್ಕೂರು
  • ಉದಯ ಇಟಗಿ, ಪ್ರಾಂಶಯಪಾಲರು, ಡಿವಿಎಸ್ ಪದವಿ ಪೂರ್ವ ಕಾಲೇಜು, ಭರಮಸಾಗರ, ಚಿತ್ರದುರ್ಗ

ಆನಂದ ಲಕ್ಕೂರು ಇನ್ನಿಲ್ಲವೆಂಬ ಸುದ್ದಿ ಬಂದಿದೆ. ಈ ಸುದ್ದಿ ಸುಳ್ಳಾಗಲಿ ಎಂದು ಆಶಿಸುತ್ತಲೇ ನಾನಿದನ್ನು ಬೇರೆಯವರ ಹತ್ತಿರ ಇದು ನಿಜವೇ ಎಂದು ಖಾತ್ರಿಪಡಿಸಿಕೊಂಡ ಮೇಲೆ ಇದನ್ನು ವಿಷಾದದಿಂದ ಬರೆಯುತ್ತಿದ್ದೇನೆ.

ನಿಜ ಹೇಳಬೇಕೆಂದರೆ ನನಗೆ ಆನಂದ ಯಾರೂ ಎಂದು ಸರಿಯಾಗಿ ಗೊತ್ತಿರಲಿಲ್ಲ. ಒಂದು ಸಾರಿ ಅವರ “ಒಂದು ಕಪ್ ಕಾಫಿ” ಕವನವನ್ನು ಯಾರೋ ಫೇಸ್ಬ್ಕುಕ್‍ನಲ್ಲಿ ಹಾಕಿದ್ದರು. ನಾನಾಗ ಲಿಬಿಯಾದಲ್ಲಿದ್ದೆ. ನನಗೆ ಆ ಕವನವನ್ನು ಓದಿದ ತಕ್ಷಣ ತುಂಬಾ ಇಷ್ಟವಾಗಿ ಇಂಗ್ಲೀಷಿಗೆ ಅನುವಾದಿಸಿದ್ದೆ. ಆಮೇಲೆ ನಾನದನ್ನು ಮರೆತೂಬಿಟ್ಟಿದ್ದೆ. ಇಬ್ಬರು ಪ್ರೇಮಿಗಳು ಇಷ್ಟು ಚನ್ನಾಗಿ ವಿದಾಯ ಹೇಳಬಹುದೆ? ಎಂದು ಬೆರಗು ಮೂಡಿಸಿದ ಕವನವದು. ಹಾಗಾಗಿ ನಾನದನ್ನು ಇಂಗ್ಲಿಶಷಿಗೆ ತಕ್ಷಣ ಅನುವಾದಿಸಿದ್ದೆ.

ನಾನು ಮರಳಿ ಇಂಡಿಯಾಗೆ ಬಂದ ಮೇಲೆ ಗೊರವರ ಅವರ ಸಂಗಾತದ ಒಂದು ಸಂಚಿಕೆಗೆ ನಾನು ಒಂದಿಷ್ಟು ಅಸ್ಸಾಮಿ ಕವನಗಳನ್ನುಅನುವಾದಿಸಿಕೊಟ್ಟಿದ್ದೆ. ಅದು ಪ್ರಿಂಟಾಗಿ ಹೆಚ್ಚುಕಮ್ಮಿ ಎಂಟು ತಿಂಗಳ ನಂತರ ಅಲ್ಲಿ ನನ್ನ ಫೋನ್ ನಂಬರ್ ತೆಗೆದುಕೊಂಡು ತಮ್ಮ ಪರಿಚಯ ಮಾಡಿಕೊಂಡು ದಿನವೂ ಮಾತನಾಡಲು ಶುರುಮಾಡಿದರು. ನನಗೆ ಬರುಬರುತ್ತಾ ದಿನವೂ ಮಾತನಾಡುವಂಥದ್ದು ಏನಿದೆ ಎಂದು ರೇಜಿಗೆ ಎನಿಸಿದರೂ ಅವಾಯ್ಡ್ ಮಾಡಲಿಲ್ಲ.

ಅವರು ನನ್ನೊಂದಿಗೆ ಮಾತ್ರವಲ್ಲ ಅನೇಕ ಬರಹಗಾರರ ಜೊತೆ ಹೀಗೆ ಮಾತನಾಡುತ್ತಿದ್ದರು ಎಂದು ಆಮೇಲೆ ಗೊತ್ತಾಯಿತು. ಮುಂದೆ ಅವರು ಕುವೆಂಪು ಭಾಷಾ ಭಾರತಿಯಿಂದ ನನ್ನ ಅಸ್ಸಾಮಿ ಅನುವಾದಿತ ಕವನಗಳು ಹೊರಬರಲು ಪರೋಕ್ಷವಾಗಿ ಕಾರಣರಾದರು. ಮುಂದೆ ಅವರು ಒಂದು ಇಂಗ್ಲೀಷ್ ಕಾದಂಬರಿಯನ್ನು ಅನುವಾದಿಸಿದಾಗ ಅವರ ಕೋರಿಕೆಯ ಮೇರೆಗೆ ಮುನ್ನುಡಿ ಬರೆದುಕೊಟ್ಟಿದ್ದೆ.

ಆನಂದ ಬಗ್ಗೆ ಸಾಹಿತ್ಯ ವಲಯದಲ್ಲಿ ಗುಸುಗುಸು ಸುದ್ದಿಗಳು ಹರಿದಾಡುತ್ತಲೇ ಇದ್ದರೂ ಸಾಕ್ಷಿ ಸಮೇತ ಅವರು ನನ್ನ ಕೈಲಿ ಸಿಕ್ಕಿಹಾಕಿಕೊಂಡಿರಲಿಲ್ಲ. ಹಾಗಾಗಿ ನಾನು ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಜೊತೆಗೆ ಸಾಹಿತ್ಯ ವಲಯದಲ್ಲಿ ಆನಂದ ಲಕ್ಕೂರು ಅವರ ಒಡನಾಟದಲ್ಲಿದ್ದವರೆಲ್ಲಾ ಕೃತಿಚೌರ್ಯ ಮಾಡುವವರು ಎನ್ನುವ ಅಲಿಖಿತ ನಿಯಮವೊಂದು ಜಾರಿಯಲ್ಲಿದ್ದಿದುರಿಂದ ಬಹಳಷ್ಟು ಜನ ಅವರ ಒಡನಾಟವನ್ನು ಇಷ್ಟಪಡುತ್ತಿರಲಿಲ್ಲ. ಆನಂದ ಒಬ್ಬ ಭಾವನಾ ಜೀವಿ. ಆದರೆ ಅಶಿಸ್ತಿನ ಮನುಷ್ಯ. ಬಹಳಷ್ಟು ಜನ ಹುಶಾರಾಗಿರಿ. ಅವರು ಯಾವಾಗ ಬೇಕಾದರೂ ದುಡ್ದು ಕೇಳಬಹುದು ಎಂದಿದ್ದರು. ಆದರೆ ಆನಂದ ಯಾವತ್ತೂ ನನ್ನನ್ನು ಒಂದು ಪೈಸೆಯೂ ಕೇಳದೆ ಪ್ರಾಮಾಣಿಕತೆಯನ್ನು ಮೆರೆದ ಮನುಷ್ಯ.

ಆದರೆ ತೀರಾ ಇತ್ತೀಚಿಗೆ ಅವರು ಒಂದು ಸ್ಥಿರವಾದ ಉದ್ಯೋಗವನ್ನು ಹೊಂದಿಲ್ಲದ ಮನುಷ್ಯ ಎನ್ನುವದು ಗೊತ್ತಾಯ್ತು. ಕುಡಿತದಿಂದ ಅವರ ಆರೋಗ್ಯ ಹದೆಗೆಟ್ಟಿದೆ ಎನ್ನುವದು ಕೂಡಾ ಗೊತ್ತಾಯಿತು. ಈಗ್ಗೆ ಒಂದು ತಿಂಗಳ ಹಿಂದೆ ನನಗೆ ಫೋನ್ ಮಾಡಿ ನಾನೀಗ ಗುಲ್ಬರ್ಗಾದಲ್ಲಿ ಪಿ.ಎಚ್ಡಿ. ಮಾಡುತ್ತಿರುವೆ ನನಗೆ ಸ್ಟೈಫಂಡ್ ಬರುತ್ತಿದೆ ಖುಷಿಯಾಗಿದ್ದೇನೆ ಎಂದು ಹೇಳಿದರು. ನಾನು ಹಾಗೆ ಖುಷಿಯಾಗಿ ಇರಿ ಎಂದು ಹರಿಸಿದ್ದೆ. ಈಗ ನೋಡಿದರೆ ಅವರು ಬಾರದ ಲೋಕಕ್ಕೆ ಹೊರಟುಹೋಗಿದ್ದಾರೆ. ಹೋಗಿ ಬಾ ಗೆಳೆಯ. ನಿನ್ನ ಕವನಗಳು ನಮ್ಮ ಮನದಲ್ಲಿ ಸದಾ ಹಸಿರಾಗಿರುತ್ತವೆ.

ನಾನು ಹಿಂದೆ ಇಂಗ್ಲೀಷಿಗೆ ಅನುವಾದಿಸಿದ ಅವರ ಒಂದು ಕವನವನ್ನು ಇಲ್ಲಿ ಹಾಕುವದರ ಮೂಲಕ ಅವರಿಗೆ ನುಡಿನಮನವನ್ನು ಸಲ್ಲಿಸುತ್ತಿದ್ದೇನೆ. ನಾನು ದೆಹಲಿಯಿಂದ ವಾಪಾಸಾಗುತ್ತಿರುವದರಿಂದ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎನ್ನುವ ದುಃಖವಿದೆ.

ಒಂದು ಕಪ್ ಕಾಫಿ

ಕೊನೆಯ ಸಾರಿ
ನನ್ನ ಜೊತೆ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ನಾನು ತಪ್ಪು ಮಾಡಿದೆನೊ,
ನೀನು ತಪ್ಪು ಮಾಡಿದೆಯೊ,
ಬಿಟ್ಟು ಬಿಡೋಣ:

ಕೊನೆಯ ಸಾರಿ
ನನ್ನ ಜೊತೆ ಒಂದೇ ಒಂದು ಕಪ್ ಕಾಫಿ ಕುಡಿಯುತ್ತೀಯಾ?
ಈ ಗಳಿಗೆಯನ್ನು ಚಿರಸ್ಮರಣೀಯ ಮಾಡುತ್ತೇನೆ

ಯಾರಿಗೆ ಗೊತ್ತು?
ಅದು ಇಲ್ಲೇ ತಿರುವು ಪಡೆಯಬಹುದು !
ಇಲ್ಲ ನಾವಿಬ್ಬರು ಬೇರೆಯಾಗಬಹುದು!
ಯಾರು ಊಹಿಸಿರುತ್ತಾರೆ?
ನಾನೊಂದು ಹೇಳುವುದು
ನೀನೊಂದು ಹೇಳುವುದು
ಮಾತುಗಳೆಂಬ ಟಗರುಗಳು ಗುದ್ದಾಡುತ್ತಿವೆ
ನಮಗಿರುವ ಎಲ್ಲಾ ಮಾತಿನ ದಾರಿಗಳಲ್ಲೂ
ದುಃಖ ಹೆಪ್ಪುಗಟ್ಟಿ ಕುಳಿತುಬಿಟ್ಟಿದೆ
ಯಾರಿಗೆ ಗೊತ್ತು
ನಮ್ಮೆದುರಿಗೆ ವಿಶಾಲ ವನಗಳಿರಬಹುದು,
ದ್ರಾಕ್ಷಿ ಹಣ್ಣುಗಳು ಭಾರ ತಡೆಯಲಾರದೆ,
ನೆಲಕ್ಕೆ ಬಾಗಿದ ಮೋಡಗಳಾಗಬಹುದು.
ಅಪರೂಪದ ನದಿಗಳೂ ಕೂಡ ನಮ್ಮ ಸುತ್ತ ಪರಿಭ್ರಮಿಸಬಹುದು,
ಆದರೆ ಏನು ಲಾಭ?
ನಮ್ಮಿಬ್ಬರಿಗೂ ದಾಹವಾಗುತ್ತಿಲ್ಲಾ…

ಇಬ್ಬರ ಗುಂಡಿಗೆಯ ಮೂಲೆಯಲ್ಲೂ
ಸಣ್ಣ ಕೊಂಬೆಯೊಂದು ಮುರಿದು ಬೀಳುವ ಶಬ್ದ
ದುಃಖದ ಹನಿಗಳು ಸುರಿಯುತ್ತಿರುವ ಶಬ್ದ
ಅವರವರದು ಅವರವರಿಗೆ ಹೊರಲಾರದ ಭಾರವಾಗುತ್ತಿದೆ
ದ್ವೇಷವಿಲ್ಲ,
ಅಸೂಯೆಯಿಲ್ಲ, ಕೋಪವಿಲ್ಲ;
ಅಲ್ಲಿರುವುದು ಬರೀ ಪ್ರೀತಿಯೇ
ಆದರೂ ಕರುಣೆಯೆಂಬುದು ಇಷ್ಟೊಂದು ಕ್ರೂರವಾಗಿರುತ್ತಾ?
ಈಗಲೂ ಕೂಡಾ
ನಿನ್ನ ಕಣ್ಣಲ್ಲೊಂದು ದಯೆ ಕದಲಾಡುತ್ತಿದೆ
ಅದು ನಿನಗೂ ನನಗೂ ಕೂಡಾ ಅರ್ಥವಾಗುತ್ತಿಲ್ಲ
ಹತಾಶೆಯ ಪೊರೆ ಕಣ್ಣಿಂದ ಕಳಚುವವರೆಗೆ
ನಾವಿಬ್ಬರೂ ಕಾಯಬೇಕಷ್ಟೆ!

ನನ್ನ ಕಣ್ಣಿಗೀಗ ನೀನು ಎಟುಕುತ್ತಿಲ್ಲ
ನಿನ್ನ ಕಣ್ಣಿಗೀಗ ನಾನೂ ಎಟುಕುತ್ತಿಲ್ಲ.
ಈ ಹಿಂದಿನ ಕನಸುಗಳೆಲ್ಲಾ ಇಬ್ಬರಲ್ಲೂ
ಕರಗಿಹೋಗಿವೆ
ರೆಕ್ಕೆಮುರಿದ ಹಕ್ಕಿಗಳೆರೆಡು
ತಲಾ ಒಬೊಬ್ಬರ ತಲೆಯ ಮೇಲೆ ಬಂದು ಕೂತು ಬಿಟ್ಟಿವೆ.
ಬಹುಶಃ ಇದು ಕೊನೆಯ ಸಾರಿಯ ಭೇಟಿಯಾಗಬಹುದು!
ನಾವಿಬ್ಬರು ಇಷ್ಟು ಹತ್ತಿರದಲ್ಲಿ ಕಾಫಿ ಕುಡಿಯುವುದು?
ನೆನ್ನೆಗಳೆಲ್ಲಾ ಇಂದು ದೀರ್ಘ ನಿಟ್ಟುಸಿರುಗಳಾಗುತ್ತಿವೆ
ನಿನ್ನೊಳಗೆ ಕದಲಾಡುತ್ತಿರುವ ಗೊಂದಲವೊಂದು
ಮೆತ್ತಗೆ ನನ್ನನ್ನು ತಾಕುತ್ತಿದೆ
ನಾವಿಬ್ಬರು ಇಷ್ಟು ನಿಶಬ್ದವಾಗಿ ಕಾಫಿ ಕುಡಿಯಬೇಕಾ?

ಶವಯಾತ್ರೆಯೂ ಕೂಡಾ
ಇಷ್ಟು ನಿಶಬ್ದವಾಗಿರುವುದಿಲ್ಲ!
ಇದು ನಮ್ಮಿಬ್ಬರ ಕೊನೆಯ ಭೇಟಿ
ಕೊನೆಯ ಸಾರಿಯ ನೆನಪಿಗೆ ತಲಾ ಒಂದೊಂದು ಕಾಫಿ ಕಫ್,
ಈ ಹಿಂದೆ ಇವೇ ಒನ್ ಬೈ ಟೂಗಳು,
ಅವೇ ಈಗ ಎರಡು ಅನಾಮಿಕ ಕಾಫೀ ಕಪ್‌ಗಳು
ಈ ಕಾಫಿ ಕಪ್‌ನೊಳಗೆ ಇಣುಕಿ ನೋಡಿದರೆ
ನೆನ್ನೆಯೆಂಬ ಚೂರು,
ನಮ್ಮಿಬ್ಬರ ಪರಿಚಯಗಳು
ಎರಡು ಬೇರೆ ಬೇರೆ ಬೊಂಬೆಗಳಂತೆ ಕಚ್ಚಾಡುತ್ತಿವೆ

~ಲಕ್ಕೂರು ಆನಂದ್

A Cup of Coffee

For the last time
Would you drink a cup of coffee with me?
No matter
Whether I erred
Or you erred,
Let’s forget it:

For the last time
Would you drink only one cup of coffee with me?
I will make this moment memorable
Who knows
It can take turn here itself!
Or we can split up!
Who could guess that?
I say something
And you something else
The speech rams are fighting with each other
The grief is frozen
On all the speech ways down to us

Who knows
We may have vast forests in front of us,
The grapes,
Being unable to bear the weight
May turn into clouds
By hanging down to the ground
Even the rare rivers can orbit around us,
But what is the benefit?
We both are not feeling thirsty ….
In the corner of our heart
There lies a breaking sound of a small branch
And also the falling sound of heartbreak tears
Each one’s grief
Is becoming
Unbearable burden for each other
There is no hatred
No jealousy and no anger at all
It’s just love
Will really kindness be this much cruel?

Even now
A layer of kindness is seen
In your eyes
But unfortunately
It doesn’t mean to both of us
We both have to wait
Until the sheath of despair dissipates
You are not be seen to my eyes
And I am not to be seen to your eyes
The dreams of past
Have dissolved in both of us
The two birds
With their wings broken
Have sat on each other’s heads.
Probably, this may be our last meeting!
Why should we drink coffee by sitting so closely?
All yesterdays are turning out to be as the long sighs of today
An oscillating confusion within you
Is softly touching me

Why should we drink coffee so quietly?
Even the funeral ceremony also
Won’t be this much silent!
This is our last visit
Come on, let’s have a cup of coffee at least
For the memory of our last visit
Earlier, these were just one by two cups
And now are two anonymous coffee cups
If you peep inside this coffee cup
You will find the pieces of yesterday
And also the introductions of ours
That are fighting like two very different dolls

From Kannada: Anand Lakkuru
To English: Uday Itagi

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ಏಜಾಕ್ಸ್ ಸಿಂದೂ ನೆಲದಲಿ ಪ್ರವೇಶಿಸಿದ ಪ್ರೇತ..!

Published

on

  • ಟಿ.ಎಸ್. ರಾಜೇಂದ್ರ ಪ್ರಸಾದ್, ದಾವಣಗೆರೆ

ಏಜಾಕ್ಸ್
ಯಾರ ಕಲ್ಪನೆಯ ಕೂಸು ನೀನು
ಸಿಂದೂನೆಲ ಪ್ರವೇಶಿಸಿದ ಪ್ರೇತ ನರರಾಕ್ಷಸ
ಕೆಲವು ಗಂಡಸರ ಸಂವೇದನೆಯಲ್ಲೇಕೆ ನುಸುಳಿದ್ದೀಯಾ?
ಅಸಂಗತ ಬಂಧನ ಬೆಸೆಯುವ ಆಸೆಗಳಿಗೇಕೆ ಮುನ್ನುಡಿ ಬರೆದಿರುವೆ?

ಅಪ್ಪಮಗಳ, ತಾಯಿ ಮಗನ, ಅಕ್ಕ ಅಣ್ಣನ ತಮ್ಮತಂಗಿಯ
ಕರುಳುಬಳ್ಳಿಗಳನ್ನೇಕೆ ಚಿವುಟಿರುವೆ
ಮನೋವ್ಯಾಕುಲನೇ,
ವಿಕೃತಿಕಾಮಿಯೇ ಬಹುಕೃತ ದೋಷಿಯೇ
ಸಿಂದೂನೆಲ ಸಂಸ್ಕೃತಿಯನ್ನೇಕೆ ಸುಡುತಿರುವೆ?
ದುರುಳ ದುಶ್ಯಾಸನ, ದುರ್ಯೋಧನ, ಕೀಚಕ,
ರಾವಣ, ಕಂಸರ ಸಂತತಿ ಉಲ್ಬಣಿಸುತ್ತಲೇ
ಅಮಾಯಕ ಹೆಂಗಸರ ಕಣ್ಣಿರುಗಳಿಗೇಕೆ
ಮತ್ತೆ ನದಿಗಳನು ಕೂಡಿಸುತ್ತಿರುವೆ?

ಇನ್ನೆಷ್ಟು ನಿನ್ನ ವಿಕೃತ ಲೋಲು ಸುಟ್ಟುಕೊಳ್ಳಬೇಕು
ಕೆಟ್ಟ ನಿನ್ನ ಆಸೆಗಳ ಬೀಜಗಳನ್ನೇಕೆ ಇಲ್ಲಿ ನೆಟ್ಟಿರುವೆ.
ಎಷ್ಟೋ ದ್ರೌಪದಿ, ಸೀತೆಯರು
ಬಳಲಿದ್ದಾರೆ ಕಣ್ಣೀರುಗಳಿಂದ!
ಗAಡಸಿನ ಕುಲಕೆ ಅಪವಾದ
ಧರ್ಮಯೀನ ಕಟುಕನಾಗಿ
ವಿಕಟಕಾಮಿ
ಮತಿಗೆಟ್ಟ ಮೃಗವಾಗಿ
ಅಟ್ಟಹಾಸಗೈಯುತ್ತಿರುವ ಏಜಾಕ್ಸ್
ನಿನ್ನ ಪ್ರೇತವೇಕೆ ರುದ್ರನಾಟ್ಯವಾಡುತಿದೆಯಿಲ್ಲಿ!

ಎದೆಯೊಳಗೆ ಅವ್ಯಕ್ತ ಶೋಕ ಸಮುದ್ರ
ಎದುರಿಸಲಾರದ ಅಸಹಾಯಕತೆ ಕರುಳುಬಂಧ !
ಕುಂದಿಸಲಾರದ ಕುದಿ ಕೆನತವಿದೆ
ಎಷ್ಟೋ ರಾತ್ರಿ ಭೀಕರ ನರಳುತ್ತಿವೆ
ಕುತ್ತಿಗೆಯೊಳಗೆ ಕಟ್ಟಿಕೊಂಡ ಅಳುವಿನ ಬಣವೆಗಳಿವೆ !
ನಿನಗೆ ಗೊತ್ತಿಲ್ಲ
ಪ್ರತಿಕ್ಷಣ ಹತ್ತಿ ಉರಿಯುತಿವೆ ನಿನ್ನಂತಹ ಗಂಡರ ರಕ್ಕಸತನಕೆ!
ಎಷ್ಟೋ ಹೆಣ ನೇಣುಹಗ್ಗದಲಿ ನೇತಾಡುತಿವೆ
ಎಷ್ಟೋ ಹೆಣ ವಿಷಪ್ರಾಸನದಲಿ ಮಲಗಿವೆ
ಹೆಣ ಹೂಣಲು ನಿರ್ಲಕ್ಷಿಸುವ ನೆಲದಲಿ
ಏಜಾಕ್ಸ್ ತೊಲಗು ಮತ್ತೆ ನುಸುಳದಿರು ಹಸುಳೆಯರ ಜೀವನದಲಿ!

ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !
ಕ್ಷಮಿಸುಬಿಡು ಹುಡುಗಿ, ನಿನ್ನ ವ್ಯಥೆಯ ಆಳದಲಿ
ಕತ್ತಲ ಕಥೆ ಬೆಳೆಯುತಿದೆ!
ಓದಬಲ್ಲೆ ನಿನ್ನ ಕಣ್ಣು ತುಳುಕಿಸುವ ನೋವಿನ
ಅಕ್ಷರ ಮಾತ್ರ!

ಹೆಣೆಯಲಾರೆ ಕಣ್ಣೀರು ಹಿಮಗಡ್ಡೆಗಳಡಿಯಲಿ
ಭೀರಕ ಕ್ಷಣಗಳನು!
ತೇವವಿಲ್ಲದ ಪದಗಳ ಪೋಣಿಸಲಾರೆ!

ಕೌರ್ಯ ಆಮಿಷ ಹಾವುಗಳಿಗೆ
ಪ್ರನೋಟ್ ಬರೆಯಲಾರೆ ಮಸಣದಲಿ !
ನಿನ್ನ ಪರಿಣಯಕೆ ಜಗದ ಕನಿಕರಕೆ
ಸೊರಗಿವೆ ಭಾವಹಕ್ಕಿ!

ಪ್ರತಿ ಅಕ್ಷರ ಕರುಳನು ಹಿಂಡುವ
ನಿನ್ನೊಂದಿಗೆ ತಬ್ಬಿಕೊಂಡು ಮಲಗಿದ ಶೋಕಬೆಟ್ಟ!
ಭೀಕರ ಮೌನ ಕಾಡ್ಗಿಚ್ಚಿನಲಿ
ಭಿಕಾರಿ ಬದುಕೊಳಗೆ ಭೂಪಂಕನ,
ಕಂಬನಿ ನದಿ ವಿಜೃಂಬಿಸಿವೆ!
ಕರುಳು ಕತ್ತರಿಸುವ ಮನುಕುಲ ಕಥೆ ನಿರಂತರ ಮರುಹುಟ್ಟುತ್ತಲೇ ಇವೆ!

ಕವಿ ಟಿ.ಎಸ್. ರಾಜೇಂದ್ರ ಪ್ರಸಾದ್

ಎದೆಸುಡುವ ಸತ್ಯ, ದಿಕ್ಕೆಡಿಸುವ ಮಿಥ್ಯ
ಹಗಲ ಸತ್ಯಕೆ ಸೂರ್ಯ ಚಂದ್ರನಕ್ಷತ್ರಾಧಿ ಕುಸಿದಿದ್ದಾರೆ!

ಸುಡುವ ವರ್ತಮಾನ ತಲ್ಲಣಿಸುತಿರಲು,
ಬಂಧನ ಜೀವನ್ಮರಣ ಬೇಯುತಿರಲು!
ಮೃಗೀಯ ಏಜಾಕ್ಸ್ನ ಪ್ರೇತ ಕುಣಿಯುತಿದೆ!

ಬದುಕೇ ಮೃಗಜಲ! ಹಾಲಾಹಲ! ಅಲ್ಲೂಲಕಲ್ಲೋಲ!
ಮಬ್ಬು ಮುಸುಕಿದೆ ಬೊಬ್ಬೆಯಿಟ್ಟು !
ಕದ್ದಿಂಗಳ ಕತ್ತಲು ಎಲ್ಲಿಹುದೋ ದಾರಿ!
ಕಬ್ಬಿಣ ಕೋಳ ತೋಳವಾಗಿ ನುಂಗುತಿರಲು
ಖೆಡ್ಡದಲಿ ಕೆಂಡ ನಿಗಿನಿಗಿಸಿ
ಮಗುಚಿ ಕಾರ್ಮೋಡ
ಕಳಚಿ ಆಗಸ
ಯಮ ನಿಂತಿರಲು ನಿನ್ನ ಮುಂದೆ
ನನ್ನ ಪ್ರಾರ್ಥನೆ ಇಷ್ಟೇ…..!
ಬರಬೇಕು ಕೃಷ್ಣ, ಕಥೆಗೊಂದು ಕೊನೆ
ಅವನ ಶ್ರೀಚಕ್ರಕೆ ದುರಳರ ಬಲಿ ಕೊಡಬೇಕು!
ಅಷ್ಟೇ..
ನಿನ್ನ ಪರಿಣಯಕೆ ನನ್ನ ಕಣ್ಣ ಹನಿ !

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ಕವಿತೆ | ನೆನಪು

Published

on

ಕವಿ | ರುದ್ರಪ್ಪ ಹನಗವಾಡಿ
  • ರುದ್ರಪ್ಪ ಹನಗವಾಡಿ

ಅಪ್ಪನನ್ನು ಒಪ್ಪ ಮಾಡಿ
ವರ್ಷಗಳೇ ಕಳೆದವು ಮುವ್ವತ್ತೇಳು
ಇಂದಿರಾಗಾಂಧಿಯ ತುರ್ತು ಪರಿಸ್ಥಿತಿ
ಅರಸರ ಮೀಸಲಾತಿ
ಬಸವಲಿಂಗಪ್ಪನವರ ಬೂಸಾ ಖ್ಯಾತಿ
ಮಲ ಹೊತ್ತು
ಮಲಗಿದ್ದ ಕಾಲಕ್ಕೆ
ಚುರುಕು ಮುಟ್ಟಿಸಿದ ಕಾಲ

ಹರೆಯದ ನನಗೆ
ಕಾಲೇಜ ಮೇಷ್ಟರ ಕೆಲಸ
ಸೂಟು ಬೂಟಿನ ವೇಷ
ಆ ಮೇಲೆ ಅಮಲದಾರಿಕೆ
ಎಲ್ಲ ನಡೆದಾಗಲೇ ಅವ್ವನನ್ನು
ಆಸ್ಪತ್ರೆಗೆ ಸೇರಿಸಿದ್ದು
ಕಾಲ ಕಳೆದು ಕೊಂಡು
ಕೋಲ ಹಿಡಿದದ್ದು
ನಿನ್ನೆ ಮೊನ್ನೆಯಂತೆ
ಬಾಲ್ಯವಿನ್ನು ಉಂಟೆಂಬಂತೆ
ಭಾವಿಸುವಾಗಲೇ ಅವ್ವನ ಸಾವು

ಅದರೊಟ್ಟಿಗೆ ಕಾಯದಾಯಾಸ ತೀರಿಸಲು
ಬಂದರೆ ಬೆಂಗಳೂರಿಗೆ
ರೌಡಿಗಳ ಕಾಟ
ಅಂಬೇಡ್ಕರ್ ಪಟದ ಕೆಳಗೆ
ದೌರ್ಜನ್ಯದ ದಂಡು

ಅಮಾಯಕರಿಗೆ ಗುಂಡು
ಕಂಡುಂಡ ಹಾದಿಯ ಗುಡಿಸಲುಗಳಲ್ಲೀಗ
ಮುಗಿಲು ಮುಟ್ಟೋ ಮಹಲುಗಳು
ಅಂತಲ್ಲಿ
ದೇಶ ವಿದೇಶಗಳ
ಅಹವಾಲುಗಳು
ಅವಿವೇಕಗಳು
ನೋಡ ನೋಡುತ್ತಿದ್ದಂತೆ
ಉಸಿರು ಬಿಗಿಹಿಡಿದ ಜನರ ಒಳಗೆ
ಒಳಪದರಗಳೊಳಗೆ ಕನಸ ಬಿತ್ತಿ
ಹಸಿರ ಹೊನ್ನು ಬಾಚಲು ಹವಣಿಸಿದ
ಬಿಳಿ ಜನರ ಆಟ
ಅರ್ಥವಾಗುವುದೇ ಎಲ್ಲ
ಗೋಣ ನೀಡುವರೆ
ಹೂತಿಟ್ಟ ಗೂಟಕ್ಕೆ ?

( ಚಿಂತಕ ರುದ್ರಪ್ಪ ಹನಗವಾಡಿ ಅವರ ‘ಊರು – ಬಳಗ’ ಕವನ ಸಂಕಲನದಿಂದ ‘ ನೆನಪು ‘ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಕೃತಿಯನ್ನು ಫ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ 2013 ರಲ್ಲಿ ಪ್ರಕಿಸಿದೆ.)

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending