ಅಂಕಣ
ಕವಿತೆ | ಅವ ಸುಡುತ್ತಾನೆ

~ ಶೃತಿ ಮಧುಸೂದನ (ರುದ್ರಾಗ್ನಿ)
ಅವ ಸುಡುತ್ತಾನೆ…
ಅವ ಸಂಪ್ರದಾದಯವ
ಸೆರಗ ನನಗುಡಿಸಿ
ನಗುತ್ತಾನೆ…
ಅವ ಅತ್ತಿಂದತ್ತ
ಅಲೆದಾಡುವ
ಮುಂಗುರುಳ
ಮುದ್ದಿಸಿ ಮಡಿ
ಮಡಿಕೆಯ ನಿವಾಳಿಸಿ
ನಿಟ್ಟುಸಿರ ಬಿಟ್ಟ
ಬಸವನಂತೆ…
ನೆತ್ತಿ ಮೇಲಣ
ಮದ್ದೇರಿ ಮೆರೆವ
ಮುದ್ದಣನ
ಕರಿಯಂತೆ…
ಕಣ್ಣು ಕುಕ್ಕುವ
ಕೊರತೆಗಳ
ಬದಿಗಿಟ್ಟು
ಬೈತಲೆಯ
ಬಿಂದಿಯ
ಬೆವರೊಳಗಣ
ಕಾವ್ಯ ಕುಂಕುಮದಂತೆ…
ಅವ… ಅವ ಕವಿ
ಎಂಬುವ ಕಾಡಿಗೆಗೆ
ತನ್ನ ಕಪ್ಪೆಂದುಕೊಂಡು
ನನ್ನಿಂದ ದೂರ ಸರಿದವ…
ಹಾಲ್ಬೆಳಕ
ಹಠವಾದಿ
ಹೆಣ್ಣಿನ ಮುಂದೆ
ಹಮ್ಮು ಬಿಟ್ಟು
ಹಿಂದಿರುಗುವ
ಇರಾದೆ ಇಲ್ಲದೇ
ನಡೆದು ಹೋದವ…
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಕವಿತೆ | ಮೌನಾಮೃತ

~ ತಾರಾ ಸಂತೋಷ್ ಮೇರವಾಡೆ (ಕಾವ್ಯಾಗ್ನಿ), ಗಂಗಾವತಿ
ಅದೆಷ್ಟೋ ಬಗೆಹರಿಯದ
ಸಮಸ್ಯೆಗಳಿಗೆ
ಮೌನಾಮೃತವ
ಸಿಂಪಡಿಸಿ ಸುಮ್ಮನಾಗಿಬಿಡು.
ಅರ್ಥವಿರದ
ವ್ಯರ್ಥ ವಾಗ್ವಾದಗಳಿಗೆ
ಮೌನದ ಪೂರ್ಣವಿರಾಮವನಿಟ್ಟು
ಹೊರಟುಬಿಡು.
ಮಾತಾಡಿ
ಕಿರುಚಾಡಿ
ರಮಟರಾಡಿ ಮಾಡುವ ಬದಲು
ಒಂದರೆಗಳಿಗೆ
ಮೌನದ ಮೊರೆಹೋಗಿ ನೋಡು.
ಅದೆಷ್ಟೋ ಮುಗಿಯದ
ಮನದ ತೊಳಲಾಟಗಳಿಗೆ
ಮೌನವೆಂಬ ಉತ್ತರವುಂಟು
ಅದನ್ನಪ್ಪಿ ಮನಕ್ಕೊಂದಿಷ್ಟು
ಶಾಂತಿಯ ನೀಡಿ ನಕ್ಕುಬಿಡು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಚಿತ್ರ ವಿಮರ್ಶೆ | ಸೂಲಗಿತ್ತಿ ತಾಯವ್ವ

~ಡಾ. ಪುಷ್ಪಲತ ಸಿ ಭದ್ರಾವತಿ
ಚಿತ್ರ – ತಾಯವ್ವ ,ನಿರ್ಮಾಣ – ಅಮರ ಫಿಲಂಸ್, ನಿರ್ದೇಶನ- ಸಾತ್ವಿಕ ಪವನ ಕುಮಾರ್,ತಾರಾಗಣ – ಗೀತಪ್ರಿಯ. ಬೇಬಿ ಯಶಿಕಾ, ಮತ್ತಿತರರು
ನಾವು ಎಷ್ಟೇ ಆಧುನಿಕತೆ, ಸಮಾನತೆ, ಸ್ವಾತಂತ್ರ್ಯ ಎಂದು ಹೆಣ್ಣು ಮಾತನಾಡಿದರೂ, ಈ ಸಮಾಜದ ಸಂಕೋಲೆಯಲ್ಲಿ ಇವತ್ತಿಗೂ ನಾವು ಕಂಡು ಕಾಣದಂತೆ ಬಂಧಿಯಾಗಿದ್ದೇವೆ. ಈ ಪುರುಷ ನಿರ್ಮಿತ ಸಮಾಜದಲ್ಲಿ ಹೆಣ್ಣನ್ನು ತನ್ನ ಸಂಕೂಲೆಯಲ್ಲಿಯೇ ಬಂಧಿಸಿಟ್ಟಿರುವನು. ಅದೊಂದು ಸ್ವೇಚ್ಛಾಚಾರದ, ಸಮಾನತೆಯ, ಹೆಸರಿನ ಮುಖವಾಡ ತೊಟ್ಟಿದೆ ಅಷ್ಟೇ. ಈ ಮುಖವಾಡಗಳ ನಡುವಿನ ಪುರುಷ ನಿಯಂತ್ರಿತ ಬದುಕಿನಲ್ಲಿ ಹೋರಾಟವೆಂಬುದು ಹೆಣ್ಣಿಗೆ ನಿತ್ಯವಾಗಿದೆ.
ಸ್ತ್ರೀ ಅವಳು ಪ್ರಕೃತಿ, ಪ್ರಕೃತಿ ಇಲ್ಲವಾದರೆ ಇನ್ನೂ ನಾವೆಲ್ಲ ತೃಣಮೂಲ. ಇಂತಹ ಸತ್ಯ ಅರಿವಿದ್ದರೂ ನಾವು ಪದೇ ಪದೇ ಈ ಪ್ರಕೃತಿಯನ್ನು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಹಾಗೆಯೇ ಪ್ರಕೃತಿಯ ಇನ್ನೊಂದು ರೂಪವಾದ ‘ಹೆಣ್ಣನ್ನು’ ನಾವು ವಿನಾಶದಂಚಿಗೆ ತೆಗೆದುಕೊಂಡು ಹೋಗುತ್ತಿದ್ದೇವೆ. ಇದರ ಪರಿಣಾಮವಾಗಿಯೇ ಹೆಣ್ಣಿನ ಸರಾಸರಿ ಗಂಡಿಗಿಂತ ಗಣನೀಯವಾಗಿ ಕಡಿಮೆಯಾಗುತ್ತಿರುವುದು. ” ಹೆಣ್ಣು ಭ್ರೂಣಹತ್ಯೆ” ಎಂಬುದು ಸಮಾಜದ ಅದು ಹಾಗೂ ವಿಶ್ವಕ್ಕೂ ಮಾರಕ. ಇಂತಹ ಒಂದು ವಿಷಯ ವಸ್ತುವನ್ನು ಕೇಂದ್ರಿಕರಿಸಿಕೊಂಡು ಸಮಾಜಕ್ಕೆ ಜಾಗೃತಿ ಮೂಡಿಸುವ ಸಲುವಾಗಿ, ಎಚ್ಚರಿಕೆಯ ಕರೆಘಂಟೆಯೆಂಬಂತೆ “ತಾಯವ್ವ” ಸಿನಿಮಾ ಕರ್ನಾಟಕದಾದ್ಯಂತ ಬಿಡುಗಡೆಗೊಂಡಿದೆ.
ಕಳೆದ ವರ್ಷಗಳಲ್ಲಿಯೇ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಹಿಂದೆ ಸುಮಾರು 500ಕ್ಕೂ ಹೆಚ್ಚಿನ ಭ್ರೂಣಗಳು ಸಿಕ್ಕವು. ವಿಚಾರ ಪ್ರಚಾರವೂ ಆಯಿತು. ಆದರೆ ಕೇವಲ ಸುದ್ದಿಯಾಗಿ ಕಣ್ಮರೆಯಾಗುತ್ತವೆ. ಇಂದಿನ ಸಮಾಜಕ್ಕೆ ಇಂತಹ ಸೂಕ್ಷ್ಮ ವಿಷಯಗಳನ್ನು ಮುನ್ನೆಲೆಗೆ ತಂದು ಯುವಕರಿಗೆ ಹಾಗೂ ಸಮಾಜಕ್ಕೆ ಜಾಗೃತಿಮೂಡಿಸಬೇಕಾಗಿದೆ. ಇಂತಹ ಕಾರ್ಯದಲ್ಲಿ
” ತಾಯವ್ವ” ಸಿನಿಮಾ ಗೆದ್ದಿದೆ ಎಂದರೆ ಅತಿಶಯೋಕ್ತಿಯೆನಲ್ಲಾ. ಈ ಗೆಲುವು ಚಿತ್ರದ ನಾಯಕಿ ” ಗೀತ ಪ್ರಿಯಾ” ಅವರ ಶ್ರಮ, ಹಾಗೂ ಅವರ ಪೂರ್ಣ ಪ್ರಮಾಣದ ಪಾತ್ರದ ತಲ್ಲೀನತೆಯು ಸಿನಿಮಾದುದ್ದಕ್ಕೂ ಕಾಣುತ್ತದೆ.
ಮೂಲತಃ ” ಗೀತ ಪ್ರಿಯಾ” ಅವರು ಕಳೆದ 35 ವರ್ಷಗಳ ಅಧಿಕವಾಗಿ ತಮ್ಮನ್ನು ತಾವು ಶೈಕ್ಷಣಿಕ ರಂಗದಲ್ಲಿ ತೊಡಗಿಸಿಕೊಂಡು ವಿಧ್ಯಾಸಂಸ್ಥೆಯೊಂದನ್ನು ಕಟ್ಟಿ ಬೆಳೆಸಿದ್ದಾರೆ. ಇವರ ತಾಯಿ ನೆರಳಲ್ಲಿ ಹುಟ್ಟಿದ ಮಗುವೇ ” ಕೃಪಾನಿಧಿ ಗ್ರೂಪ್ ಸಂಸ್ಥೆ”. ಸದಾ ಮಿಡಿವ ತಾಯಿ ಹೃದಯ ಇವರದ್ದಾಗಿದ್ದರಿಂದಲೇ ತಮ್ಮ ಪ್ರಥಮ ಚಿತ್ರದಲ್ಲಿಯೇ ಗಂಭೀರ ವಿಷಯ ವಸ್ತುವಿನ ಆಯ್ಕೆ, ಗಂಭೀರವಾದ ಅಭಿನಯ, ಸಮಾಜಮುಖಿ ಕಾಳಜಿಯಿರುವುದರಿಂದಲೇ ಇದರೆಲ್ಲರ ಫಲಿತಗಳೆಂಬಂತೆೇ “ತಾಯವ್ವ” ರೂಪುಗೊಂಡಿದೆ.
ಸಿನಿಮಾ ಕಲಾಪ್ರಿಯರಿಗೆ ಒಂದೊಳ್ಳೆ ಸುಗ್ಗಿ, ಕುಟುಂಬದ ಸಮೇತ ಸಿನಿಮಾ ವೀಕ್ಷಿಸಬಹುದು. ಗೀತ ಪ್ರಿಯಾ ಅವರು ಈ ಸಿನಿಮಾದಲ್ಲಿ ಅಭಿನಯಿಸಿ, ಹಾಗೂ ಸಂಗೀತಕ್ಕೆ ತಮ್ಮ ಧ್ವನಿಯನ್ನು ನೀಡಿರುವುದು ಇನ್ನೂ ವಿಶೇಷ. ಬೇಬಿ ಯಶೀಕಾ ಮುಂದಿನ ಭವಿಷ್ಯ ಇನ್ನಷ್ಟು ಸಿನಿಮಾರಂಗದಲ್ಲಿ ಉಜ್ವಲವಾಗಿರಲಿ. ನಿರ್ದೇಶಕರ ಪ್ರಯತ್ನ. ಚಿತ್ರಕಥೆಯ ಹಿಡಿತ ಹಾಗೂ ಎಲ್ಲೂ ಸಡಿಲವಿರದೇ ಸಾಗಿರುವುದು ನಮ್ಮ ಕನ್ನಡ ಚಿತ್ರರಂಗಕ್ಕೆ ಪ್ರಸ್ತುತ ಕೊಡುಗೆಯಾಗಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಅಂಕಣ
ಜಗತ್ತಿನ ಅಪಾಯಕಾರಿ ಜೀವಿ..!?

~ ಹೆಚ್.ಕೆ.ಕೃಷ್ಣ ಅರಕೆರೆ
ಭೂಮಿಮೇಲಿನ ಕೋಟ್ಯಾಂತರ ಜೀವರಾಶಿಗಳಲ್ಲಿ ಮನುಷ್ಯನು ಸಹ ಒಬ್ಬ ಜೀವಿ, ಮನುಷ್ಯನಂತೆಯೇ ಇಲ್ಲಿ ಹುಟ್ಟಿದ ಪ್ರತಿಯೊಂದು ಜೀವಿಗಳಿಗೂ ಭೂಮಿಯಮೇಲೆ ಬದುಕುವ ಸಮಾನ ಹಕ್ಕಿದೆ.
ಮನುಷ್ಯ ಸೃಷ್ಠಿಯ ಎಲ್ಲಾ ಜೀವಿಗಳಿಗಿಂತ ಅಂತ್ಯಂತ ಬುದ್ಧಿವಂತ , ಮನುಷ್ಯನಿಗೆ ಭೂಮಿಮೇಲಿನ ಯಾವ ಜೀವಿಗಳಿಗೂ ಇಲ್ಲದ ಬುದ್ಧಿವಂತಿಕೆ, ಮತ್ತು ಆಲೋಚನ ಶಕ್ತಿಯನ್ನ ಪ್ರಕೃತಿ ನೀಡಿದೆ , ಇದನ್ನ ಬಳಸಿಕೊಂಡ ಮನುಷ್ಯ ತನ್ನ ಜ್ಞಾನ ವಿಕಾಶಗೊಂಡಂತೆ ಪ್ರಕೃತಿಯ ವಿಷ್ಮಯಗಳನ್ನ ಬೇಧಿಸಲು ಹವಣಿಸುತ್ತಿದ್ದಾನೆ.
ಅವನ ಸಾಧನೆ ಕೃತಕ ಮಾನವನ ಸೃಷ್ಠಿಯಿಂದ ಹಿಡಿದು ಆಕಾಶಕ್ಕೆ ಚಿಮ್ಮಿ, ಸಮುದ್ರದ ಆಳಕ್ಕೆ ಇಳಿದು ಸಂಶೋಧನೆ ನಡೆಸುವುದರ ಜೊತೆಗೆ ಪ್ರಪಂಚದ ಎಲ್ಲಿ ಜೀವರಾಶಿಗಳನ್ನ ಪ್ರಕೃತಿ ಸಂಪತ್ತನ್ನ ಕ್ಷಣಮಾತ್ರದಲ್ಲಿ ನಾಶಮಾಡಬಲ್ಲ ಅಸ್ತ್ರಗಳಂತಹ ಅಪಾಯಕಾರಿ ಆಯುದಗಳನ್ನ ತಯಯಾರಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾನೆ.
ವಿಕಾಶಗೊಂಡ ಮಾನವ ಸೃಷ್ಠಿಯ ಸಕಲ ಜೀವರಾಶಿಗಳಲ್ಲೇ ಅತ್ಯಂತ ಶ್ರೇಷ್ಟ ಬದುಕನ್ನ ನಡೆಸಲು ಅವಕಾಶಮಾಡಿಕೊಟ್ಟಿರುವ ಪ್ರಕೃತಿಯನ್ನ ನಾಶಮಾಡುವ ಸಂಶೋಧನೆ ಅದು ಮನುಷ್ಯನ ವಿಕೃತಿ ಮತ್ತು ಅವನ ಅತ್ಯಂತ ಅಪಾಯಕಾರಿ ಕೆಟ್ಟತನಕ್ಕೆ ಸಾಕ್ಷಿಯಾಗಿದೆ . ಬದುಕುವುದಕ್ಕೆ ಮದ್ದುಗುಂಡುಗಳು ಬೇಕೆ..?
ಕೇವಲ ಕೆಲವು ಸಾವಿರ ವರ್ಷಗಳಲ್ಲಿಯೇ ಇಷ್ಟೆಲ್ಲ ಸಾಧಿಸಿರುವ ಮನುಷ್ಯ ಪ್ರಕೃತಿಯ ಮುಂದೆ ಅವನು ಕುಬ್ಜ ಎನ್ನುವ ಸತ್ಯವನ್ನ ಮರೆತಿದ್ದಾನೆ,ಅಥವ ಅದನ್ನ ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಅವನಿಲ್ಲ , ಅವನ ಮುಂದಿರುವ ಗುರಿ ಒಂದೇ, ಇಡೀ ಜಗತ್ತೆ ನಾಶವಾದರು ಸರಿ, ಅವನು ಗೆಲ್ಲಬೇಕು ಮುಂದೊಂದು ದಿನ ಅವನೇ ಉಳಿಯದಿದ್ದರು ಸರಿ ಅವನು ಗೆಲ್ಲಲೇ ಬೇಕು. ಹಾಗಾದರೆ ಪ್ರಪಂಚವನ್ನೆ ಗೆಲ್ಲಲು ಹೊರಟವನಿಗೆ ಒಂದು ನೊಣದಂತ ಸಣ್ಣ ಕೀಟಜೀವಿಯನ್ನ ಗೆಲ್ಲಲು ಸಾದ್ಯವೇ..?
ಒಂದು ದಿನ ಜಗತ್ತಿನ್ನೆ ಗೆಲ್ಲುವೆನೆಂದು ವಿಶ್ವನಾಶದ ಆಯುಧಗಳನ್ನ ಉಡಾವಣೆಗೆ ಸಿದ್ದಮಾಡಿಕೊಂಡು ಮನುಷ್ಯನೊಬ್ಬ ಇನ್ನು ಸ್ವಲ್ಪ ಕ್ಷಣದಲ್ಲೆ ಎಲ್ಲರನ್ನು, ಎಲ್ಲವನ್ನು ನಾನು ನಾಶಮಾಡಿಬಿಡುವೆ ಎಂದು ಕುಳಿತಿದ್ದಾನೆ, ಇಡೀ ಜಗತ್ತೇ ಈ ಕ್ಷಣ ನನ್ನ ಕೈ ಬೆರಳಿನಲ್ಲಿದೆ ಈ ಜಗತ್ತಿನ ಅಳಿವು ಉಳಿವು ನಾನೇ ಎನ್ನುವ ಜಂಬ, ಅಹಂಕಾರ, ಗರ್ವ ಏನೇಲ್ಲ ಹೇಳಬಹುದೋ ಅದೆಲ್ಲವು ಅವನಲ್ಲಿದೆ, ಹಾಗಲೇ ಒಂದು ಚಿಕ್ಕ ನೊಣವೂಂದು ಅವನ ಕಿವಿಯ ಬಳಿ ಬಂದು ಗುಯ್ ಗುಟ್ಟುತ್ತಿದೆ, ಒಮ್ಮೆ ಮತ್ತೊಮ್ಮೆ ಓಡಿಸುತ್ತಾನೆ, ಅದು ಹಠಕ್ಕೆ ಬಿದ್ದಂತೆ ಮತ್ತೆ ಮತ್ತೆ ಬಂದು ಗುಯ್ ಗುಟ್ಟಲು ಪ್ರಾರಂಬಿಸುತ್ತದೆ ಅದನ್ನ ಎದುರಿಸಲು, ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅವನಿಗೆ ಅದೆಷ್ಟು ಸಿಟ್ಟು, ಕೋಪ , ಅಸಹನೆ ಬಂದು ಬಿಡುತ್ತದೆಂದರೆ ಜಗತ್ತನ್ನೆ ಗೆಲ್ಲಬಲ್ಲೆ ಅಂದುಕೊಂಡವನಿಗೆ ನೊಣವನ್ನು ಗೆಲ್ಲಲಾಗದಿರುವ ಸ್ಥಿತಿ, ಇಂತಹ ಅನುಬವಗಳು ಒಂದಲ್ಲ ಒಮ್ಮೆ ಪ್ರತಿಯೊಬ್ಬರಿಗೂ ಆಗಿರುತ್ತೆ , ಒಂದು ನೊಣ ನಮ್ಮನ್ನ ಅಷ್ಟೊಂದು ಘಾಸಿಗೊಳಿಸುತ್ತೆ ಎಂದರೆ ಆ ಜಾಗದಲ್ಲಿ , ಹತ್ತು, ನೂರು ಹೀಗೆ ಕಲ್ಪನೆ ಮಾಡಿಕೊಳ್ಳಿ ಸೃಷ್ಠಿ ಮುಂದೆ ನಾವು ಏನು ಅಲ್ಲ ಅನ್ನಿಸಿಬಿಡುತ್ತೆ .
ಮನುಷ್ಯ ಏನೆಲ್ಲಾ ಸಾಧಿಸಿರಬಹುದು ಪ್ರಕೃತಿಯ ಮುಂದೆ ಅವನು ನೊಣಕಿಂತಲೂ ಕಡಿಮೆ, ಇದೇ ವಾಸ್ತವ, ಪ್ರಕೃತಿ ನಮಗೆ ಸೌಂದರ್ಯವನ್ನ ಕೊಟ್ಟಿದೆ, ಅನೇಕ ವಿಸ್ಮಯಗಳನ್ನ ಸೃಷ್ಠಿಸಿದೆ ಅದೆಲ್ಲವನ್ನು, ಸವಿಯುವ ಆನಂದಿಸು ಹಕ್ಕು ಮಾತ್ರ ನಮ್ಮದು. ಆದರೆ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಪರಿಸರ, ಪ್ರಾಣಿ ಸಂಕುಲ ಎಲ್ಲವನ್ನೂ ನಾಶಮಾಡುತ್ತಿದ್ದಾನೆ , ಮುಂದೊಂದು ದಿನ ಪ್ರಕೃತಿ ನಾಶದಿಂದ ಮಾನವ ಸಂಕುಲವೂ ನಾಶವಾಗುತ್ತದೆ ಎನ್ನುವ ಸಾಮಾನ್ಯ ಜ್ಞಾನವೂ ಇಲ್ಲವಾಗಿದೆ, ಜಗತ್ತನ್ನೇ ನಾಶಮಾಡಬಲ್ಲ ಅಣ್ವಸ್ತ್ರ ಕಂಡುಹಿಡಿದವನು ,ಚಂದ್ರನ ಮೇಲೆ ನಡೆದವನು ಯಾರು ಸಹ ಇಂದು ಭೂಮಿಯಮೇಲೆ ಶಾಸ್ವತವಾಗಿ ಬದುಕಲು ಸಾಧ್ಯವಾಗಿಲ್ಲ.
ಅದಕ್ಕಾಗಿ ಜೀವಜಗತ್ತನ್ನೆ ನಾಶಮಾಡಬಲ್ಲ ಅಸ್ತ್ರಗಳು, ಅಂತಹ ಆಲೋಚನೆಗಳು ನಾಶವಾಗಿ ಪ್ರೇಮಜಗತ್ತು ನಿರ್ಮಾಣವಾಗಬೇಕು , ಯಾರನ್ನೂ ಸಹ ಮದ್ದುಗುಂಡುಗಳಿಂದ ಗೆಲ್ಲಲು ಸಾದ್ಯವಿಲ್ಲ, ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿ ನಿಂತಿದೆ ಮದ್ದುಗುಂಡುಗಳಿಂದ ಜಗತ್ತನ್ನ ಗೆಲ್ಲುವ ಭ್ರಮೆಯಲ್ಲಿದ್ದ ಹಿಟ್ಲರ್ ನಾಶವಾಗಿಹೋದ, ಶಸ್ತ್ರವನ್ನ ತ್ಯಜಿಸಿದ ಅಶೋಕ ವಿಶ್ವಕ್ಕೆ ಕರುಣೆ , ಪ್ರೀತಿಯನ್ನ ಸಾರಿ ಸಾಮ್ರಾಟನಾದ.
ಸನಾತನವನ್ನ ತ್ಯಜಿಸಿದ ಬುದ್ಧ,ಬಸವ, ಯೇಸು, ಪೈಗಂಬರ್, ತೀರ್ಥಾಕರ, ಗುರುನಾನಕ್ ಎಲ್ಲಾ ದಾರ್ಶನಿಕರು ಜೀವ ಮತ್ತು ಜೀವನ ಪ್ರೀತಿಯನ್ನ ಸಾರಿದರು ಇದೆಲ್ಲ ಕಣ್ಣೆದುರಿಗೆ ಇದ್ದರು ಮನುಷ್ಯ ಬದಲಾಗಲು ಮನಸ್ಸುಮಾಡುತ್ತಿಲ್ಲ , ಬದಲಾಗದಿದ್ದರೆ ಮುಂದೊಂದು ದಿನ ಪ್ರಕೃತಿ ಅವನನ್ನೆ ಬದಲಿಸುತ್ತದೆ .
ಸುದ್ದಿದಿನ.ಕಾಂ|ವಾಟ್ಸಾಪ್|9980346243
