ಲೈಫ್ ಸ್ಟೈಲ್
ಯೋಗದ ಅನ್ವೇಷಣೆ | ಮಿಸ್ ಮಾಡ್ದೆ ಈ ಲೇಖನ ಓದಿ..!

- ನಿತ್ಯತೃಪ್ತ
ಪುರಾತನರು, ನಾನು ಯರು? ಏಕೆ ಹುಟ್ಟಿದ್ದೇನೆ? ಯಾಕೆ ಸಾಯುತ್ತೇನೆ? ಯಾಕೆ ಬದುಕಿದ್ದೇನೆ? ನನ್ನ ಮುಂದಿರುವ ವೈವಿಧ್ಯಮಯ ಸೃಷ್ಟಿಗೆ ಕರ್ತ ಯಾರು? ಇದರ ಉದ್ದೇಶ ಏನು? ಈ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಮಾಡಿದ 6ಸಾವಿರ ವರ್ಷಗಳ ಪ್ರಯೋಗವೇ ನಾಲ್ಕು ವೇದಗಳು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ.
ಋಗ್ವೇದದ ಪ್ರಾಯೋಗಿಕ ಅಂತ್ಯ -ಪ್ರಙ್ಞನಂ ಬ್ರಹ್ಮ
ಯಜುರ್ವೇದದ ಪ್ರಾಯೋಗಿಕ ಅಂತ್ಯ – ಅಹಂ ಬ್ರಹ್ಮಾಸ್ಮಿ
ಸಾಮವೇದದ ಪ್ರಾಯೋಗಿಕ ಅಂತ್ಯ- ತತ್ವ ಮಸಿ
ಅಥರ್ವಣ ವೇದದ ಪ್ರಾಯೋಗಿಕ ಅಂತ್ಯ- ಅಯಂ ಆತ್ಮ ಬ್ರಹ್ಮ
ವೇದಾಂಗಗಳ ಅರಣ್ಯಕಗಳು ಸಂಹಿತೆಗಳು ಬ್ರಾಹ್ಮಣಕಗಳು ಕೊನೆಯದಾಗಿ ಉಪನಿಷತ್ತುಗಳಲ್ಲಿ ಹೇರಳವಾಗಿ ಯೋಗದ ಬಗೆ ವಿವರಿಸಲದಪಟ್ಟಿದೆ.
ನಾಲ್ಕು ವೇದಗಳಿಗೆ ಸೇರಿದ 108 ಉಪನಿಷತ್ತುಗಳಲ್ಲಿ ಕೆಳಕಂಡಂತೆ ಇವೆ.
- ಮುಖ್ಯವಾದ ಉಪನಿಷತ್ತುಗಳು (ಬೃಹತ್)-10
- ವೇದಾಂತಕ್ಕೆ ಸಂಬಂಧಪಟ್ಟ ಉಪಿಷತ್ತುಗಳು- 25
- ಶಾಕ್ತರಿಗೆ ಸಂಬಂಧಪಟ್ಟ ಉಪನಿಷತ್ತುಗಳು-08
- ವೈಷ್ಣವರಿಗೆ ಸಂಬಂಧಪಟ್ಟ ಉಪನಿಷತ್ತುಗಳು-14
- ಶೈವರಿಗೆ ಸಂಬಂಧಪಟ್ಟ ಉಪನಿಷತ್ತುಗಳು- 14
- ಸನ್ಯಾಸಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು- 17
- ಯೋಗಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು-20
ಈ ಮೇಲಿನ 108 ಉಪನಿಷತ್ತುಗಳು ಅರ್ಥವಾಗದಿದ್ದಕ್ಕೆ 6 ಶಾಸ್ತ್ರಗಳನ್ನು ಬರೆದರು. ಅವು ಸಾಂಖ್ಯ ಶಾಸ್ತ್ರ, ವೈಷೇಶಿಕ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ಉತ್ತರ ಮೀಮಾಂಸೆ ಮತ್ತು ಪೂರ್ವ ಮೀಮಾಂಸೆ.
ಇವುಗಳೂ ಕೂಡ ಅರ್ಥವಾಗದಿದ್ದಕ್ಕೆ 18 ಪುರಾಣಗಳನ್ನು ಬರೆದರು. ಅವು ಭಾಗವತ ಪುರಾಣ, ವಿಷ್ಣುಪುರಾಣ, ಮತ್ಸಯ ಪುರಾಣ, ಶಿವ ಪುರಾಣ, ಗರುಡ ಪುರಾಣ, ಬ್ರಹ್ಮ ಪುರಾಣ, ನಾರದೇಯ ಪುರಾಣ, ವಾಮನ ಪುರಾಣ, ಭವಿಷ್ಯ ಪುರಾಣ, ಬ್ರಹ್ಮ ಪುರಾಣ, ಲಿಂಗ ಪುರಾಣ, ವಿರಹ ಪುರಾಣ, ಅಗ್ನಿ ಪುರಾಣ, ಮಾರಖಂಡಯ್ಯ ಪುರಾಣ, ಕೂರ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ.
ಇವುಗಳ ಜೊತೆಗೆ ಎರಡು ಮಹಾ ಕಾವ್ಯಗಳನ್ನು ವ್ಯಾಸರು ಮತ್ತು ವಾಲ್ಮೀಕಿ ಬರೆದಿದ್ದಾರೆ. ಈ ಮಹಾನ್ ಕೃತಿಗಳೇ ರಾಮಾಯಣ ಮತ್ತು ಮಹಾಭಾರತ. ಇವುಗಳಲ್ಲಿ ರಾಜಯೋಗ, ಹಠಯೋಗ, ಙ್ನನಯೋ, ಭಕ್ತಿಯೋಗ, ಕರ್ಮಯೋಗ, ಕುಂಡಲಿನಿಯೋಗ, ಮಂತ್ರಯೋಗ, ಲಯ ಯೋಗ ಈ ರೀತಿ ಯೋಗದ ಬಗ್ಗೆ ಬರೆದ ಸವಿಸ್ತಾರವಾದ ಕೃತಿಗಳು.
ರಾಮಾಯಣದಲ್ಲಿ ವಾಲ್ಮೀಕಿಯು 32ಸಾವಿರ ಶ್ಲೋಕಗಳು ಬೃಹತ್ ಯೋಗ ವಾಷಿಷ್ಠ ಕೃತಿಯನ್ನು ರಚಿಸಿದ್ದಾರೆ. ಮಹ ಬಾರತದಲ್ಲಿ ವ್ಯಾರು 700 ಶ್ಲೋಕಗಳು ಭಗವದ್ಗೀತೆಯನ್ನು ಬರೆದು, 18 ರೀತಿ ಯೋಗಗಳನ್ನು ವಿವರಿಸಿದ್ದಾರೆ. ಕಾಲಗತಿಯಲ್ಲಿ ಇವುಗಳೆಲ್ಲ ಮಠ ಮತ್ತು ಗುಹೆಗಳಲ್ಲಿ ಸೇರಿಕೊಂಡು ಸಾಮಾನ್ಯ ಜನರಿಗರ ದೊರೆಯದೆ ಬರಿ ಕಂದಾಚರಗಳ ವೇದಾಂತವಾಗಿ ಮನೆ ಮನೆ ಹೊಕ್ಕಿವೆ.
ಪಾಶ್ಚಿಮಾತ್ಯ ವಿದ್ವಾಂಸರಾದ ಮ್ಯಾಕ್ಸ್ಮುಲ್ಲರ್ ಭಾರತಕ್ಕೆ ಬಂದು ಸಂಸ್ಕøತ ಕಲಿತು 4 ವೇದಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಮ್ಯಾಕ್ಸ್ಮುಲ್ಲರ್ ವಿಶ್ವವಿದ್ಯಾಲಯದಲ್ಲಿ ವೇದಗಳ ಅಧ್ಯಯನ ನಡೆಯುತ್ತಿದೆ. ಇದೇ ತರಹ Sarpent power ಎಂಬ ತತ್ವ ಙ್ಞನಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿ ಸಂಸ್ಕøತ ಕಲಿತು ಯೋಗದ 20 ಉಪನಿಷತ್ತುಗಳನ್ನು ಹಗೂ ಯಂತ್ರ, ತಂತ್ರ, ಮಂತ್ರ ಸ್ವರ ಮುಂತದ ಶಾಸ್ತ್ರಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಿ Sarpent power ಎಂಬಕೃತಿ ಬರೆದರು. ಈ ಕೃತಿಯ ಮೂಲಕ ಯೋಗವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮಹತ್ಮ.
ಹಾಗೆಯೇ ಸ್ವಾಮಿ ವಿವೇಕಾನಂದರು, ಯೋಗನಂದರು, ಋಷಿಕೇಷದ ಸ್ವಾಮಿ ಶಿವಾನಂದರ ಶಿಷ್ಯರಾದ ಸ್ವಾಮಿ ಸತ್ಯಾನಂದರು ಪ್ರಪಂಚದಾದ್ಯಂತ ಉಪದೇಶಿಸಿದ್ದಾರೆ. ಪ್ರಪಂಚದಾದ್ಯಂತ ಯೋಗದ ಬಗೆಗಿನ ಸಾಹಿತ್ಯ ಹೇರಳವಾಗಿ ದೊರೆಯುವಂತೆ ಮಾಡಿದ್ದಾರೆ. ಬುದ್ದ ಹುಟ್ಟಿದ್ದು, ಬೌದ್ಧಧರ್ಮ ಹುಟ್ಟಿದ್ದು ಭಾರತವಾದರೆ ಬೆಳೆದದ್ದು ಮಾತ್ರ ಪರರಾಷ್ಟ್ರಗಳಲ್ಲಿ, ಯೋಗವೂ ಸಹ ಹಾಗೆಯೇ.
ಯೋಗ ಒಂದು ಅಮೂಲ್ಯವಾದ ಸಂಸ್ಕøತಿ. ಮನುಷ್ಯನಿಂದ ಹುಟ್ಟಿ ಮನುಷ್ಯನಿಗೋಸ್ಕರ ಮನುಷ್ಯ ಇರುವ ತನಕ ಇರುವುದೋ ಅದೇ ಸಂಸ್ಕøತಿ. ಯೋಗವು ಒಂದು ವಿಙ್ಞನವೂ ಹೌದು, ಅಂದರೆ ಐಕ್ಯತೆ ಅಥವಾ ವೃತ್ತಿ ನಿರೋಧವೇ ಯೋಗ. ಮಾತು ಮತ್ತು ಆಲೋಚನೆ ಮಾಡುವ ಕ್ರಿಯೆಯನ್ನು ಸಮನ್ವಯಗೊಳಿಸುವುದೇ ಯೋಗ. ಅಲ್ಲದೆ ಜನ್ಮ ಜನ್ಮಾಂತರ ಗಳಿಂದ ಬಂದ ಅಭ್ಯಸಗಳ ವವೃತ್ತಿಗಳನ್ನು ನಿಯಂತ್ರಿಸಿ, ನಿರೋಧಿಸಿ ಜೀವನದ ಉತ್ತುಂಗ ಕಲೆಯನ್ನು ಬೋಧಿಸುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ಇರುವ ಅಡಚಣೆತಳನ್ನು ತೆಗೆದು ಹಾಕುತ್ತದೆ. ಇದು ಪಶುತ್ವದಿಂದ ಪರಮಾತ್ಮನ ಕಡೆಗೆ ಕೊಂಡೊಯ್ಯುತ್ತದೆ.
ಯೋಗದ ಚರ್ಚೆ ಮಾಡುವುದರಿಂದ ವೇಷ ಭೂಷಣಗಳಿಂದ ಶಾಸ್ತ್ರ ಅಧ್ಯಯನದಿಂದ ದೊರೆಯುವುದಿಲ್ಲ. ಯೋಗಿ ಯಾಗಬೇಕಾದರೆ ಸಾಧನೆ ಮಾಡಬೇಕು. ಸಾಧನೆಯಿಂದ ಮಾತ್ರ ಸಿದ್ಧಿ ದೊರೆಯುತ್ತದೆ. ಯೋಗವನ್ನು ಹುಡುಗರು, ಮುದುಕರು, ತೀರಾ ಮುದುಕರು, ರೋಗಿಗಳು, ನಿತ್ರಾಣ ಹೊಂದಿರುವವರು ಅಭ್ಯಾಸ ಮಾಡಿ ಸಿದ್ಧಿ ಪಡೆಯಬಹುದು(ಹ.ಠ ಪ್ರದೀಪಿಕೆ 64.65.66 ಪ್ರಥಮ ಉಪದೇಶ).
ತಪಸ್ಸು ಸ್ಥಳೀಯ ಅದ್ಯಯನ, ಈಶ್ವರಿ ಪ್ರಣಿಧ್ಯಾನ ಇವೆ ಯೋಗ ಕ್ರಿಯೆಗಳು. ಇದೇ ಅಷ್ಟಾಂಗ ಯೋಗ, ಯಮ, ನಿಯಮ, ಆಸನ, ಪ್ರಾಣಯಾಮ ಪ್ರತ್ಯಾಹಾರ ಇವು ಹ.ಠ ಕ್ರಿಯೆಗಳು ಧರಣ ಧ್ಯಾನ ಸಮಾಧಿ ಇವು ರಾಜ ಯೋಗ(king of yoga).
ಸುದ್ದಿದಿನ.ಕಾಂ|ವಾಟ್ಸಾಪ್|9980346243

ಕ್ರೀಡೆ
ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು

ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ; ಇ-ಖಾತೆ ಅಭಿಯಾನ ಹಾಗೂ ಇತರೆ ಪ್ರಮುಖ ಸುದ್ದಿಗಳು
1. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿ ತಲುಪಿದ್ದಾರೆ. ಇಂದು ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿ, 5 ಪ್ರಮುಖ ಮಸೂದೆಗಳಿಗೆ ಅಂಗೀಕಾರ ನೀಡುವಂತೆ ಮನವಿ ಮಾಡಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ಭದ್ರಾ ಮೇಲ್ದಂಡೆ ಯೋಜನೆ ಸೇರಿದಂತೆ ರಾಜ್ಯದ ವಿವಿಧ ನೀರಾವರಿ ಯೋಜನೆಗಳಿಗೆ, ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ, ಕೇಂದ್ರದ ಜಲಶಕ್ತಿ ಖಾತೆ ಸಚಿವರನ್ನು ಕೋರುವುದಾಗಿ, ಇದೇ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
2. ರಾಜ್ಯದ ಗ್ರಾಮ ಪಂಚಾಯ್ತಿಗಳ ಹಂತದಲ್ಲಿ ಜುಲೈ 15ರಿಂದ, ಸಾರ್ವಜನಿಕರ ಆಸ್ತಿಗಳ ಇ-ಖಾತೆ ರೂಪಿಸುವ ಅಭಿಯಾನವನ್ನು ಕಂದಾಯ ಇಲಾಖೆ ಆಯೋಜಿಸಲಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
3. ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆಗೆ ಸಂಬಂಧಿಸಿ, ಇಲ್ಲಿಯವರೆಗೆ ಹೆಸರು ನೋಂದಾಯಿಸದವರು, ಕರ್ನಾಟಕ ಒನ್ ಸೇವಾ ಕೇಂದ್ರಗಳಲ್ಲಿ, ಈ ತಿಂಗಳ 30ರವರೆಗೆ ಮಾಹಿತಿ ನೀಡಲು ಅವಕಾಶವಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ತಿಳಿಸಿದ್ದಾರೆ.
4. ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಸುರಿಯುತ್ತಿರುವ ಮಳೆಯಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಭಾಗಶ: ಭರ್ತಿಯಾಗಿದ್ದು, ಒಳ ಹರಿವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಅಣೆಕಟ್ಟೆಯಿಂದ 5 ಸಾವಿರದಿಂದ 15 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ.
5. ಕತಾರ್ನಲ್ಲಿರುವ ಅಲ್ ಉದೈದ್ ಅಮೇರಿಕ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯ ನಂತರ ಜಾಗತಿಕ ತೈಲ ಬೆಲೆಗಳು ಐದು ವರ್ಷಗಳಲ್ಲಿ ನಿನ್ನೆ ಒಂದೇ ದಿನದಲ್ಲಿ ತೀವ್ರ ಕುಸಿತವನ್ನು ದಾಖಲಿಸಿದೆ.
6. ಕರ್ನಾಟಕ, ಮಧ್ಯಪ್ರದೇಶ, ಬಿಹಾರ, ಜಾಖಂಡ್, ಒಡಿಶಾ, ಛತ್ತೀಸ್ಗಢ, ಪಶ್ಚಿಮ ಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಕೊಂಕಣ, ಗೋವಾ, ಮಹಾರಾಷ್ಟ್ರ, ಗುಜರಾತ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಶ್ಚಿಮ ಉತ್ತರ ಪ್ರದೇಶ, ರಾಜಸ್ಥಾನ, ಕೇರಳದ ಕೆಲವು ಸ್ಥಳಗಳಲ್ಲಿ ಇಂದು ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
7. ಅಯೋವಾದಲ್ಲಿ ನಾಳೆ ಆರಂಭವಾಗಲಿರುವ ಯುಎಸ್ ಓಪನ್ 2025 ಬ್ಯಾಡ್ಮಿಂಟನ್ ಪಂದ್ಯಾವಳಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ಹರಿಹರನ್ ಅಂಶಕರುಣನ್ ಮತ್ತು ರೂಬನ್ ಕುಮಾರ್ ರೆಥಿನಸಬಪತಿ, ಭಾರತವನ್ನು ಮುನ್ನಡೆಸಲಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ರಾಜ್ಯದಲ್ಲಿ ಜಾತಿ ಗಣತಿ ಮರು ಸಮೀಕ್ಷೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ : ಸಿಎಂ ಸಿದ್ದರಾಮಯ್ಯ

ಸುದ್ದಿದಿನಡೆಸ್ಕ್:ಜಾತಿಗಣತಿ ಮರು ಸಮೀಕ್ಷೆಗೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ.
ಸಂಪುಟ ಸಭೆಯ ಬಳಿಕ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಎಂದು ಹೇಳಿದ್ದಾರೆ.
54 ಮಾನದಂಡಗಳನ್ನು ಇಟ್ಟುಕೊಂಡು ಹೋಗಿ ಮನೆ ಮನೆ ಸಮೀಕ್ಷೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಹೈಕಮಾಂಡ್ ನೀಡಿದ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಗಣತಿ ವಿಚಾರದಲ್ಲಿ ಸರಿಯಾದ ಸ್ಪಷ್ಟತೆ ನೀಡಬೇಕು ಎಂದು ಉಡುಪಿ – ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯನವರೇ ಜಾತಿ ಗಣತಿಗೆ 200 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದು161 ಕೋಟಿ ರೂಪಾಯಿ ಖರ್ಚಾಗಿದೆ ಎಂದು ಹೇಳಿ, ಇದೀಗ ಜಾತಿ ಜನಗಣತಿಯನ್ನು ವಾಪಸ್ ಪಡೆಯುವುದಾಗಿ ಹೇಳುತ್ತಿರುವುದು ಹಾಸ್ಯಸ್ಪದವಾಗಿದೆ ಎಂದು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
RCB ಸಂಭ್ರಮಾಚರಣೆ : 18 ರೂಪಾಯಿಗೆ ಬಿರಿಯಾನಿ ಮಾರಾಟ

ಸುದ್ದಿದಿನ,ಬೆಂಗಳೂರು:ಆರ್ಸಿಬಿ ವಿಜಯೋತ್ಸವದಲ್ಲಿ ಬೆಂಗಳೂರು ಮಿಂದೆದ್ದಿದೆ. ಜನ ವಿಭಿನ್ನ ರೀತಿಯಲ್ಲಿ ತಮ್ಮ ಸಂಭ್ರಮಾಚರಣೆ ವ್ಯಕ್ತಪಡಿಸಿದ್ದಾರೆ. ಹೋಟೆಲ್ ರೆಸ್ಟೋರೆಂಟ್ಗಳೂ ಕೂಡ ಇದನ್ನೇ ಬಂಡವಾಳ ಮಾಡಿಕೊಂಡು ಭರ್ಜರಿ ವ್ಯಾಪಾರ ಮಾಡಿವೆ.
ಬೆಂಗಳೂರಿನ #NativeCooks ಫುಡ್ ಡೆಲಿವರಿ ಸಂಸ್ಥೆಯು ಕೇವಲ 18 ರೂಪಾಯಿಗೆ ಬಿರಿಯಾನಿ ಮಾರಾಟ ಮಾಡುವ ಮೂಲಕ ಆರ್ಸಿಬಿ ಅಭಿಮಾನಿಗಳ ಮನ ಗೆದ್ದಿದೆ.
ಹೌದು, ಹೆಬ್ಬಾಳ, ಆರ್ಟಿ ನಗರ, ಸದಾಶಿವನಗರದಲ್ಲಿ ಡೆಲಿವರಿ ಶುಲ್ಕವಿಲ್ಲದೆ ಅತಿ ಕಡಿಮೆ ದರದಲ್ಲಿ ಫುಡ್ ಡೆಲಿವರಿ ಮಾಡುತ್ತಿರುವ #NativeCooks ಸಂಸ್ಥೆಯು ಆರ್ಸಿಬಿ ಅಭಿಮಾನಿಗಳನ್ನು ಖುಷಿಪಡಿಸಲು ಈ ರೀತಿ ಹೊಸ ಆಫರ್ ಬಿಟ್ಟಿತ್ತು. ಮೂಲಗಳ ಪ್ರಕಾರ ಸುಮಾರು ಒಂದು ಸಾವಿರ ಬಿರಿಯಾನಿ ಲಂಚ್ಬಾಕ್ಸ್ಗಳನ್ನು ತಲಾ 18ರೂಪಾಯಿಯಂತೆ ಮಾರಾಟ ಮಾಡಿದೆ.
ಮನೆಯಲ್ಲೇ ಮಾಡಿದ ಆಹಾರ ಪದಾರ್ಥಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವ ನೇಟೀವ್ ಕುಕ್ಸ್ ಸಂಸ್ಥೆಯು ಹೆಣ್ಣುಮಕ್ಕಳೇ ಸೇರಿ ನಡೆಸುತ್ತಿರುವ ಪುಟ್ಟ ಕೇಟರಿಂಗ್ ಆಗಿದೆ. ವಾರದಲ್ಲಿ 6 ದಿನಗಳ ಕಾಲ ಕಾರ್ಯ ನಿರ್ವಹಿಸುವ ಈ ಕೇಟರಿಂಗ್. ವೆಜ್ ಊಟವನ್ನು ಕೇವಲ 80 ರೂಪಾಯಿಗೆ ಹಾಗೂ ನಾನ್ವೆಜ್ ಊಟವನ್ನು 135 ರೂಪಾಯಿಗೆ ಹಾಗೂ ಎಕ್ ಮೀಲ್ಅನ್ನು ಕೇವಲ 110 ರೂಪಾಯಿಗೆ ಮಾರಾಟ ಮಾಡುತ್ತಿದೆ.
ಸದ್ಯಕ್ಕೆ ಹೆಬ್ಬಾಳ, ಆರ್ಟಿನಗರ ಹಾಗೂ ಸದಾಶಿವನಗರಕ್ಕೆ ಡೆಲಿವರಿ ಶುಲ್ಕ ಇಲ್ಲದೇ ಆಹಾರ ವಿತರಿಸುತ್ತಿದ್ದು, ಹೆಚ್ಚಿನ ಮಾಹಿತಿಗೆ 80 4853 6206 ಸಂಪರ್ಕಿಸಬಹುದು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ4 days ago
ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ, ಗಿಗ್, ಸಿನಿ ಹಾಗೂ ಮನೆಗೆಲಸ ಕಾರ್ಮಿಕರ ಕಲ್ಯಾಣಕ್ಕಾಗಿ ಅಧಿನಿಯಮ ಜಾರಿಗೆ ಕ್ರಮ : ಸಚಿವ ಸಂತೋಷ್ ಲಾಡ್
-
ಅಂಕಣ3 days ago
ಆತ್ಮಕತೆ | ಕೃಷ್ಣಪ್ಪನವರ ನಿಧನ : (09.06.1938 – 30.04.1997)
-
ದಿನದ ಸುದ್ದಿ5 days ago
500 ಪಡಿತರ ಚೀಟಿಗಳಿಗೆ ಒಂದು ಪಡಿತರ ಅಂಗಡಿ ತೆರೆಯಲು ಸರ್ಕಾರ ನಿರ್ಧಾರ
-
ದಿನದ ಸುದ್ದಿ4 days ago
ರಾಷ್ಟ್ರೀಯ ಲೋಕ ಅದಾಲತ್ನಲ್ಲಿ 9360 ಪ್ರಕರಣ ಇತ್ಯರ್ಥ ; ವಿಚ್ಚೇದನ ಕೋರಿ ಸಲ್ಲಿಸಿದ್ದ 23 ಜೋಡಿ ವೈವಾಹಿಕ ಜೀವನ ಸುಖಾಂತ್ಯ
-
ದಿನದ ಸುದ್ದಿ6 days ago
ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರೆಣೆ
-
ದಿನದ ಸುದ್ದಿ5 days ago
ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ : ಕರವೇ ಮನವಿ
-
ದಿನದ ಸುದ್ದಿ6 days ago
ಪಿಹೆಚ್ಡಿ ವ್ಯಾಸಂಗ ಮಾಡುತ್ತಿರುವ ಅಲ್ಪಸಂಖ್ಯಾತರಿಗೆ ವಿದ್ಯಾರ್ಥಿವೇತನ : ಅರ್ಜಿ ಆಹ್ವಾನ
-
ದಿನದ ಸುದ್ದಿ5 days ago
ದತ್ತಾಂಶ ನಿರ್ವಾಹಕ ಗ್ರೇಡ್ ಎ ಪರೀಕ್ಷೆಗೆ ಅರ್ಜಿ ಆಹ್ವಾನ