ಲೈಫ್ ಸ್ಟೈಲ್
ಯೋಗದ ಅನ್ವೇಷಣೆ | ಮಿಸ್ ಮಾಡ್ದೆ ಈ ಲೇಖನ ಓದಿ..!
- ನಿತ್ಯತೃಪ್ತ
ಪುರಾತನರು, ನಾನು ಯರು? ಏಕೆ ಹುಟ್ಟಿದ್ದೇನೆ? ಯಾಕೆ ಸಾಯುತ್ತೇನೆ? ಯಾಕೆ ಬದುಕಿದ್ದೇನೆ? ನನ್ನ ಮುಂದಿರುವ ವೈವಿಧ್ಯಮಯ ಸೃಷ್ಟಿಗೆ ಕರ್ತ ಯಾರು? ಇದರ ಉದ್ದೇಶ ಏನು? ಈ ಪ್ರಶ್ನೆಗಳನ್ನ ಮುಂದಿಟ್ಟುಕೊಂಡು ಮಾಡಿದ 6ಸಾವಿರ ವರ್ಷಗಳ ಪ್ರಯೋಗವೇ ನಾಲ್ಕು ವೇದಗಳು. ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದ.
ಋಗ್ವೇದದ ಪ್ರಾಯೋಗಿಕ ಅಂತ್ಯ -ಪ್ರಙ್ಞನಂ ಬ್ರಹ್ಮ
ಯಜುರ್ವೇದದ ಪ್ರಾಯೋಗಿಕ ಅಂತ್ಯ – ಅಹಂ ಬ್ರಹ್ಮಾಸ್ಮಿ
ಸಾಮವೇದದ ಪ್ರಾಯೋಗಿಕ ಅಂತ್ಯ- ತತ್ವ ಮಸಿ
ಅಥರ್ವಣ ವೇದದ ಪ್ರಾಯೋಗಿಕ ಅಂತ್ಯ- ಅಯಂ ಆತ್ಮ ಬ್ರಹ್ಮ
ವೇದಾಂಗಗಳ ಅರಣ್ಯಕಗಳು ಸಂಹಿತೆಗಳು ಬ್ರಾಹ್ಮಣಕಗಳು ಕೊನೆಯದಾಗಿ ಉಪನಿಷತ್ತುಗಳಲ್ಲಿ ಹೇರಳವಾಗಿ ಯೋಗದ ಬಗೆ ವಿವರಿಸಲದಪಟ್ಟಿದೆ.
ನಾಲ್ಕು ವೇದಗಳಿಗೆ ಸೇರಿದ 108 ಉಪನಿಷತ್ತುಗಳಲ್ಲಿ ಕೆಳಕಂಡಂತೆ ಇವೆ.
- ಮುಖ್ಯವಾದ ಉಪನಿಷತ್ತುಗಳು (ಬೃಹತ್)-10
- ವೇದಾಂತಕ್ಕೆ ಸಂಬಂಧಪಟ್ಟ ಉಪಿಷತ್ತುಗಳು- 25
- ಶಾಕ್ತರಿಗೆ ಸಂಬಂಧಪಟ್ಟ ಉಪನಿಷತ್ತುಗಳು-08
- ವೈಷ್ಣವರಿಗೆ ಸಂಬಂಧಪಟ್ಟ ಉಪನಿಷತ್ತುಗಳು-14
- ಶೈವರಿಗೆ ಸಂಬಂಧಪಟ್ಟ ಉಪನಿಷತ್ತುಗಳು- 14
- ಸನ್ಯಾಸಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು- 17
- ಯೋಗಕ್ಕೆ ಸಂಬಂಧಪಟ್ಟ ಉಪನಿಷತ್ತುಗಳು-20
ಈ ಮೇಲಿನ 108 ಉಪನಿಷತ್ತುಗಳು ಅರ್ಥವಾಗದಿದ್ದಕ್ಕೆ 6 ಶಾಸ್ತ್ರಗಳನ್ನು ಬರೆದರು. ಅವು ಸಾಂಖ್ಯ ಶಾಸ್ತ್ರ, ವೈಷೇಶಿಕ ಶಾಸ್ತ್ರ, ಯೋಗ ಶಾಸ್ತ್ರ, ನ್ಯಾಯ ಶಾಸ್ತ್ರ, ಉತ್ತರ ಮೀಮಾಂಸೆ ಮತ್ತು ಪೂರ್ವ ಮೀಮಾಂಸೆ.
ಇವುಗಳೂ ಕೂಡ ಅರ್ಥವಾಗದಿದ್ದಕ್ಕೆ 18 ಪುರಾಣಗಳನ್ನು ಬರೆದರು. ಅವು ಭಾಗವತ ಪುರಾಣ, ವಿಷ್ಣುಪುರಾಣ, ಮತ್ಸಯ ಪುರಾಣ, ಶಿವ ಪುರಾಣ, ಗರುಡ ಪುರಾಣ, ಬ್ರಹ್ಮ ಪುರಾಣ, ನಾರದೇಯ ಪುರಾಣ, ವಾಮನ ಪುರಾಣ, ಭವಿಷ್ಯ ಪುರಾಣ, ಬ್ರಹ್ಮ ಪುರಾಣ, ಲಿಂಗ ಪುರಾಣ, ವಿರಹ ಪುರಾಣ, ಅಗ್ನಿ ಪುರಾಣ, ಮಾರಖಂಡಯ್ಯ ಪುರಾಣ, ಕೂರ್ಮ ಪುರಾಣ, ಪದ್ಮ ಪುರಾಣ, ಸ್ಕಂದ ಪುರಾಣ.
ಇವುಗಳ ಜೊತೆಗೆ ಎರಡು ಮಹಾ ಕಾವ್ಯಗಳನ್ನು ವ್ಯಾಸರು ಮತ್ತು ವಾಲ್ಮೀಕಿ ಬರೆದಿದ್ದಾರೆ. ಈ ಮಹಾನ್ ಕೃತಿಗಳೇ ರಾಮಾಯಣ ಮತ್ತು ಮಹಾಭಾರತ. ಇವುಗಳಲ್ಲಿ ರಾಜಯೋಗ, ಹಠಯೋಗ, ಙ್ನನಯೋ, ಭಕ್ತಿಯೋಗ, ಕರ್ಮಯೋಗ, ಕುಂಡಲಿನಿಯೋಗ, ಮಂತ್ರಯೋಗ, ಲಯ ಯೋಗ ಈ ರೀತಿ ಯೋಗದ ಬಗ್ಗೆ ಬರೆದ ಸವಿಸ್ತಾರವಾದ ಕೃತಿಗಳು.
ರಾಮಾಯಣದಲ್ಲಿ ವಾಲ್ಮೀಕಿಯು 32ಸಾವಿರ ಶ್ಲೋಕಗಳು ಬೃಹತ್ ಯೋಗ ವಾಷಿಷ್ಠ ಕೃತಿಯನ್ನು ರಚಿಸಿದ್ದಾರೆ. ಮಹ ಬಾರತದಲ್ಲಿ ವ್ಯಾರು 700 ಶ್ಲೋಕಗಳು ಭಗವದ್ಗೀತೆಯನ್ನು ಬರೆದು, 18 ರೀತಿ ಯೋಗಗಳನ್ನು ವಿವರಿಸಿದ್ದಾರೆ. ಕಾಲಗತಿಯಲ್ಲಿ ಇವುಗಳೆಲ್ಲ ಮಠ ಮತ್ತು ಗುಹೆಗಳಲ್ಲಿ ಸೇರಿಕೊಂಡು ಸಾಮಾನ್ಯ ಜನರಿಗರ ದೊರೆಯದೆ ಬರಿ ಕಂದಾಚರಗಳ ವೇದಾಂತವಾಗಿ ಮನೆ ಮನೆ ಹೊಕ್ಕಿವೆ.
ಪಾಶ್ಚಿಮಾತ್ಯ ವಿದ್ವಾಂಸರಾದ ಮ್ಯಾಕ್ಸ್ಮುಲ್ಲರ್ ಭಾರತಕ್ಕೆ ಬಂದು ಸಂಸ್ಕøತ ಕಲಿತು 4 ವೇದಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಮ್ಯಾಕ್ಸ್ಮುಲ್ಲರ್ ವಿಶ್ವವಿದ್ಯಾಲಯದಲ್ಲಿ ವೇದಗಳ ಅಧ್ಯಯನ ನಡೆಯುತ್ತಿದೆ. ಇದೇ ತರಹ Sarpent power ಎಂಬ ತತ್ವ ಙ್ಞನಿ ಭಾರತಕ್ಕೆ ಬಂದು ಇಲ್ಲಿ ನೆಲೆಸಿ ಸಂಸ್ಕøತ ಕಲಿತು ಯೋಗದ 20 ಉಪನಿಷತ್ತುಗಳನ್ನು ಹಗೂ ಯಂತ್ರ, ತಂತ್ರ, ಮಂತ್ರ ಸ್ವರ ಮುಂತದ ಶಾಸ್ತ್ರಗಳನ್ನು ಇಂಗ್ಲಿಷ್ಗೆ ಭಾಷಾಂತರಿಸಿ Sarpent power ಎಂಬಕೃತಿ ಬರೆದರು. ಈ ಕೃತಿಯ ಮೂಲಕ ಯೋಗವನ್ನು ಪಾಶ್ಚಿಮಾತ್ಯರಿಗೆ ಪರಿಚಯಿಸಿದ ಮಹತ್ಮ.
ಹಾಗೆಯೇ ಸ್ವಾಮಿ ವಿವೇಕಾನಂದರು, ಯೋಗನಂದರು, ಋಷಿಕೇಷದ ಸ್ವಾಮಿ ಶಿವಾನಂದರ ಶಿಷ್ಯರಾದ ಸ್ವಾಮಿ ಸತ್ಯಾನಂದರು ಪ್ರಪಂಚದಾದ್ಯಂತ ಉಪದೇಶಿಸಿದ್ದಾರೆ. ಪ್ರಪಂಚದಾದ್ಯಂತ ಯೋಗದ ಬಗೆಗಿನ ಸಾಹಿತ್ಯ ಹೇರಳವಾಗಿ ದೊರೆಯುವಂತೆ ಮಾಡಿದ್ದಾರೆ. ಬುದ್ದ ಹುಟ್ಟಿದ್ದು, ಬೌದ್ಧಧರ್ಮ ಹುಟ್ಟಿದ್ದು ಭಾರತವಾದರೆ ಬೆಳೆದದ್ದು ಮಾತ್ರ ಪರರಾಷ್ಟ್ರಗಳಲ್ಲಿ, ಯೋಗವೂ ಸಹ ಹಾಗೆಯೇ.
ಯೋಗ ಒಂದು ಅಮೂಲ್ಯವಾದ ಸಂಸ್ಕøತಿ. ಮನುಷ್ಯನಿಂದ ಹುಟ್ಟಿ ಮನುಷ್ಯನಿಗೋಸ್ಕರ ಮನುಷ್ಯ ಇರುವ ತನಕ ಇರುವುದೋ ಅದೇ ಸಂಸ್ಕøತಿ. ಯೋಗವು ಒಂದು ವಿಙ್ಞನವೂ ಹೌದು, ಅಂದರೆ ಐಕ್ಯತೆ ಅಥವಾ ವೃತ್ತಿ ನಿರೋಧವೇ ಯೋಗ. ಮಾತು ಮತ್ತು ಆಲೋಚನೆ ಮಾಡುವ ಕ್ರಿಯೆಯನ್ನು ಸಮನ್ವಯಗೊಳಿಸುವುದೇ ಯೋಗ. ಅಲ್ಲದೆ ಜನ್ಮ ಜನ್ಮಾಂತರ ಗಳಿಂದ ಬಂದ ಅಭ್ಯಸಗಳ ವವೃತ್ತಿಗಳನ್ನು ನಿಯಂತ್ರಿಸಿ, ನಿರೋಧಿಸಿ ಜೀವನದ ಉತ್ತುಂಗ ಕಲೆಯನ್ನು ಬೋಧಿಸುತ್ತದೆ. ಆತ್ಮ ಸಾಕ್ಷಾತ್ಕಾರಕ್ಕೆ ಇರುವ ಅಡಚಣೆತಳನ್ನು ತೆಗೆದು ಹಾಕುತ್ತದೆ. ಇದು ಪಶುತ್ವದಿಂದ ಪರಮಾತ್ಮನ ಕಡೆಗೆ ಕೊಂಡೊಯ್ಯುತ್ತದೆ.
ಯೋಗದ ಚರ್ಚೆ ಮಾಡುವುದರಿಂದ ವೇಷ ಭೂಷಣಗಳಿಂದ ಶಾಸ್ತ್ರ ಅಧ್ಯಯನದಿಂದ ದೊರೆಯುವುದಿಲ್ಲ. ಯೋಗಿ ಯಾಗಬೇಕಾದರೆ ಸಾಧನೆ ಮಾಡಬೇಕು. ಸಾಧನೆಯಿಂದ ಮಾತ್ರ ಸಿದ್ಧಿ ದೊರೆಯುತ್ತದೆ. ಯೋಗವನ್ನು ಹುಡುಗರು, ಮುದುಕರು, ತೀರಾ ಮುದುಕರು, ರೋಗಿಗಳು, ನಿತ್ರಾಣ ಹೊಂದಿರುವವರು ಅಭ್ಯಾಸ ಮಾಡಿ ಸಿದ್ಧಿ ಪಡೆಯಬಹುದು(ಹ.ಠ ಪ್ರದೀಪಿಕೆ 64.65.66 ಪ್ರಥಮ ಉಪದೇಶ).
ತಪಸ್ಸು ಸ್ಥಳೀಯ ಅದ್ಯಯನ, ಈಶ್ವರಿ ಪ್ರಣಿಧ್ಯಾನ ಇವೆ ಯೋಗ ಕ್ರಿಯೆಗಳು. ಇದೇ ಅಷ್ಟಾಂಗ ಯೋಗ, ಯಮ, ನಿಯಮ, ಆಸನ, ಪ್ರಾಣಯಾಮ ಪ್ರತ್ಯಾಹಾರ ಇವು ಹ.ಠ ಕ್ರಿಯೆಗಳು ಧರಣ ಧ್ಯಾನ ಸಮಾಧಿ ಇವು ರಾಜ ಯೋಗ(king of yoga).
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ವಿದ್ಯಾರ್ಥಿಗಳು ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು: ಹೆಚ್ ಎನ್ ಶಿವಕುಮಾರ್
ಸುದ್ದಿದಿನ,ರಾಣೇಬೆನ್ನೂರ: ಸಾಮಾಜಿಕ ಹಾಗೂ ಶೈಕ್ಷಣಿಕ ಜವಾಬ್ದಾರಿಗಳ ಅಗತ್ಯವು ವಿದ್ಯಾರ್ಥಿಗಳಿಗೆ ಅವಶ್ಯಕವಾಗಿದೆ. ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು.ಸದಾಕಾಲ ಜ್ಞಾನವನ್ನು ಪಡೆಯುವ ತನಕ ಹೊಂದಿ ಜ್ಞಾನಿಗಳಾಗುವ ಗುರಿ ಹೊಂದಲು ಬಾಪೂಜಿ ಮಹಾವಿದ್ಯಾಲಯ ಉಪ ಪ್ರಾಚಾರ್ಯರಾದ ಎಚ್ ಎನ್ ಶಿವಕುಮಾರ್ ನುಡಿದರು.
ಅವರು ಸ್ಥಳೀಯ ಬಿಎಜೆಎಸ್ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರತಿಭಾ ಪುರಸ್ಕಾರ, ಬಿಳ್ಕೋಡಿಗೆ ಕಾರ್ಯಕ್ರಮ ಮತ್ತು ವಿದ್ಯಾರ್ಥಿ ಒಕ್ಕೂಟದ, ಎನ್ ಎಸ್ ಎಸ್ ಚಟುವಟಿಕೆ, ಯುವ ರೆಡ್ ಕ್ರಾಸ್ ಘಟಕದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದ ಬಿಎ ಜೆಎಸ್ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿಗಳು ಡಾ.ಆರ್ ಎಂ ಕುಬೇರಪ್ಪ ಮಾತನಾಡಿ ವಿದ್ಯೆಯನ್ನು ವಿನಯದಿಂದ ವಿದ್ಯೆಕಲಿಯಬೇಕು ಸಂಸ್ಕಾರವಂತರಾಗ ಬೇಕು, ಸಂಸ್ಕಾರ ಹೊಂದಿರುವ ವ್ಯಕ್ತಿಗಳು ಪುರಸ್ಕಾರ ಪಡೆದರೆ ಸಂಸ್ಕಾರ ಇಲ್ಲದವರು ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾಗುವರು.ನಿಮ್ಮ ಬದುಕನ್ನು ನೀವೆ ಕಟ್ಟಿಕೊಳ್ಳುವ ನೆಲೆಯಲ್ಲಿ ಪ್ರಯತ್ನಿಸಬೇಕು ಎಂದು ನುಡಿದರು.
ಪ್ರಾಚಾರ್ಯರಾದ ಪ್ರಕಾಶ್ ಬಸಪ್ಪನವರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಎಚ್ ಎನ್ ಭೀಕ್ಷಾವರ್ತಿಮಠ ಹಾಗೂ ಕೆ ಕೆ ಹಾವಿನಾಳ ರವರು ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಆರಂಭದಲ್ಲಿಪ್ರೋ.ಎಂ ಡಿ ಹೊನ್ನಮ್ಮನವರ ಸ್ವಾಗತಿಸಿದರು.ಪ್ರೋ.ಶ್ರೀಕಾಂತ ಕುಂಚೂರ, ಪ್ರಾಸ್ತಾವಿಕ ಮಾತನಾಡಿ ವಾರ್ಷಿಕ ವರದಿ ವಾಚಿಸಿದರು.
ಕೊನೆಯಲ್ಲಿ ಪ್ರೋ.ಪುಷ್ಟಾ ಕಬ್ಬಿನಾಲೆ ವಂದಿಸಿದರು.ಇದೆ ಸಮಾರಂಭದಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆಗಳಲ್ಲಿವಿದ್ಯಾರ್ಥಿಗಳ ಸಾಧನೆ ಗುರುತಿಸಿ ಪುರಸ್ಕಾರ ಮಾಡಲಾಯಿತು.ವರ್ಷದ ಮಹಾವಿದ್ಯಾಲಯ ಉತ್ತಮ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕಾರ ಪ್ರದಾನ ಮಾಡಲಾಯಿತು.ವಿವಿಧ ವಿಷಯದ ಉಪನ್ಯಾಸಕರು, ವಿದ್ಯಾರ್ಥಿಗಳು, ಸಿಬ್ಬಂದಿ ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿಗೆ ದಾವಣಗೆರೆಯ ಪಾಪು ಗುರು ಆಯ್ಕೆ
ಸುದ್ದಿದಿನ,ದಾವಣಗೆರೆ: ಕವಿ ಗವಿಸಿದ್ಧ ಎನ್. ಬಳ್ಳಾರಿ ವೇದಿಕೆ ಹಾಗೂ ಗವಿಸಿದ್ಧ ಎನ್. ಬಳ್ಳಾರಿ ಸಾಂಸ್ಕೃತಿಕ, ಕಲಾ, ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆ, ಕೊಪ್ಪಳ ವತಿಯಿಂದ ನೀಡಲಾಗುವ **”ಗವಿಸಿದ್ಧ ಎನ್. ಬಳ್ಳಾರಿ ಕಾವ್ಯ ಪ್ರಶಸ್ತಿ – 2026″**ಕ್ಕೆ ದಾವಣಗೆರೆಯ ಕವಿ ಹಾಗೂ ಪತ್ರಕರ್ತ ಪಾಪು ಗುರು ಅವರ “ಈ ಹೊತ್ತಿಗೆ ಇಷ್ಟು ಸಾಕು” ಕವನ ಹಸ್ತ ಪ್ರತಿ ಆಯ್ಕೆಯಾಗಿದೆ.
ಪ್ರಶಸ್ತಿಗೆ ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 53 ಕವನ ಹಸ್ತಪ್ರತಿಗಳು ಬಂದಿದ್ದು, ಅಂತಿಮ ಆಯ್ಕೆ ಪ್ರಕ್ರಿಯೆಯಲ್ಲಿ ಪಾಪು ಗುರು ಅವರ ಕೃತಿ ಪ್ರಶಸ್ತಿಗೆ ಪಾತ್ರವಾಗಿದೆ.
ಪ್ರಶಸ್ತಿಯು ₹5,000 ನಗದು ಹಾಗೂ ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ನವೆಂಬರ್ ತಿಂಗಳಲ್ಲಿ ಕೊಪ್ಪಳದಲ್ಲಿ ನಡೆಯಲಿರುವ ಗವಿಸಿದ್ಧ ಎನ್. ಬಳ್ಳಾರಿ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಸಾಹಿತ್ಯೋತ್ಸವದ ಸಂಚಾಲಕ ಮಹೇಶ್ ಬಳ್ಳಾರಿ ತಿಳಿಸಿದ್ದಾರೆ.
ಈಗಾಗಲೇ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪಾಪು ಗುರು ಅವರ ‘ಮುಳ್ಳೆಲೆಯ ಮದ್ದು’, ‘ಮಣ್ಣೇ ಮೊದಲು’ ಕವನ ಸಂಕಲನಗಳು ಹಾಗೂ ‘ಸೂಜಿ’ ಕಾದಂಬರಿ ಪ್ರಕಟವಾಗಿವೆ. ಅಲ್ಲದೆ ‘ಕೆಂಪು ಕಾಂಡದ ಹೂ’ ಮತ್ತು ‘ಹಸಿರು ಹಾದಿಯ ಹೆಜ್ಜೆಗಳು’ ಕೃತಿಗಳನ್ನು ಸಂಪಾದನೆ ಮಾಡಿದ್ದಾರೆ. ಅವರ ಸೂಳೆಕೆರೆಯ ಇತಿಹಾಸದ ಹಿನ್ನೆಲೆ ಇರುವ ‘ಶಾಂತದೇವಿ’ ಕಾದಂಬರಿ ಮುದ್ರಣ ಹಂತದಲ್ಲಿದೆ.
ಸಾಹಿತ್ಯ, ಪತ್ರಿಕೋದ್ಯಮ ಮತ್ತು ಸೃಜನಶೀಲ ಬರವಣಿಗೆಯ ಮೂಲಕ ತಮ್ಮದೇ ಆದ ಛಾಪು ಮೂಡಿಸಿರುವ ಪಾಪು ಗುರು ಅವರಿಗೆ ದೊರೆತಿರುವ ಈ ಪ್ರಶಸ್ತಿ ಸಾಹಿತ್ಯ ವಲಯದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇವರಿಗೆ ಜಿಲ್ಲೆಯ ಅಭಿಮಾನಿಗಳು, ಪತ್ರಕರ್ತರು ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ ಸಾಹಿತಿ ಸಂತೆಬೆನ್ನೂರು ಫೈಜ್ನಟ್ರಾಜ್ ಹಾಗೂ ಹೆಚ್ ಬಿ. ಇಂದ್ರಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ದಾವಣಗೆರೆ | ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ
ಸುದ್ದಿದಿನ,ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಆಧುನಿಕ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಜೂನ್ 15 ಮತ್ತು 16 ರಂದು ಆಯೋಜಿಸಲಾಗಿದೆ.
ಆಸಕ್ತ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿಯೊಂದಿಗೆ ಹಾಜರಾಗಬೇಕು. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರ, ದಾವಣಗೆರೆ ಕಚೇರಿ ದೂ.ಸಂ: 08192-233787 ಸಂಪರ್ಕಿಸಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಪಶುವೈದ್ಯಾಧಿಕಾರಿಗಳು ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243


