ದಿನದ ಸುದ್ದಿ
ದಲಿತ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ : ಪಿಎಸ್ಐ ಅರ್ಜುನ್ ಶಿಕ್ಷೆಗೆ ಆಗ್ರಹ

- ನಾಗರಾಜ್ ಹೆತ್ತೂರು
ಕೋವಿಡ್ ನಡುವೆ ಇಡೀ ರಾಜ್ಯವೇ ಬೆಚ್ಚಿ ಬಿಳಿಸುವ ಅಮಾನವೀಯ ಘಟನೆಯೊಂದು ಚಿಕ್ಕಮಗಳೂರಿನಲ್ಲಿ ನಡೆದು ಹೋಯ್ತು. ಪುನೀತ್ ಎಂಬ ಇಪ್ಪತ್ತೆರಡು ವಯಸ್ಸಿನ ಯುವಕನ ಬಾಯಿಗೆ ಮೂತ್ರ ಕುಡಿಸಿ ಕೊನೆಗೆ ನೆಲಕ್ಕೆ ಸುರಿದಿದ್ದ ಮೂತ್ರವನ್ನು ನಾಲಗೆಯಿಂದ ನೆಕ್ಕಿಸಿದ ಗೋಣಿಬೀಡಿದ ಪಿಎಸ್ಐ ಅರ್ಜುನ್ ಎಂಬಾತ ತನ್ನ ವಿಕೃತಿಯನ್ನು ಮರೆದ.
ನಿಜ, ಕೋವಿಡ್ ಇಲ್ಲದಿದ್ದರೆ ಇಡೀ ರಾಜ್ಯಕ್ಕೆ ರಾಜ್ಯವೇ ಈ ಘಟನೆಯನ್ನು ಖಂಡಿಸುತ್ತಿತ್ತು. ನಾನು ಪುನೀತ್ ಪರ `am stand with puneeth ‘ ಎಂದು ಜನ ದಂಗೆ ಏಳುತ್ತಿದ್ದರು ಮೂಡಿಗೆರೆ, ಕಿರಗುಂದ ಚಲೋಗಳು ನಡೆಯುತ್ತಿದ್ದವು.
ಇಂತಹುದೊಂದು ಅಮಾನವೀಯ ಕೃತ್ಯ ನಡೆದರೂ ಅರ್ಜುನ್ ಎಂಬ ಪಿಎಸ್ಐ ಗೆ ಯಾವ ಶಿಕ್ಷೆಯೂ ಆಗಿಲ್ಲ. ಜನರ ಕೋಪ, ಆಕ್ರೋಶ ಶಮನಗೊಳಿಸಲು ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿರುವ ಇಲಾಖೆ ಮುಖ್ಯಸ್ಥರು ಕೇವಲ ಕಣ್ಣು ಒರೆಸುವ ಕೆಲಸ ಮಾಡಿದ್ದಾರೆ. ಮೂತ್ರ ಕುಡಿಸಿದಂತ ಅತ್ಯಂತ ಅಮಾನವೀಯ ಪ್ರಕರಣ ನಡೆದರೂ ಮಾನವ ಹಕ್ಕು ಆಯೋಗ ತುಟಿ ಬಿಚ್ಚಿಲ್ಲ…
ಇಡೀ ವ್ಯವಸ್ಥೆ ಎಷ್ಟು ಜಡ್ಡುಗಟ್ಟಿದೆ ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿಯಾಗಿದ್ದು ಇದರ ಸಂಪೂರ್ಣ ಡೀಟೆಲ್ ಸ್ಟೋರಿಯನ್ನು ಜನರಿಗೆ ತಿಳಿಸುವ ಪ್ರಯತ್ನವನ್ನು ‘ಭೀಮ ವಿಜಯ ‘ಮಾಡುತ್ತಿದೆ.
ಈತನ ಹೆಸರು ಪುನೀತ್ 22 ವರ್ಷದ ಸ್ತುರದ್ರೂಪಿ ಯುವಕ ಮೂಡಿಗೆರೆ ತಾಲೂಕಿನ ಕಿರಗುಂದ ಗ್ರಾಮದವನು. ಐಟಿಐ ಮಾಡಿಕೊಂಡು ಹೊರಗುತ್ತಿಗೆಯಲ್ಲಿ ಕಂಪ್ಯೂಟರ್ ಕೆಲಸ ಮಾಡಿಕೊಂಡಿರುತ್ತಾನೆ.
ಇದೇ ಗ್ರಾಮದ ಗಂಡ ಹೆಂಡತಿ ವಿಚಾರಕ್ಕೆ ಸಂಬಂಧಪಟ್ಟಂತೆ ಜಗಳವೊಂದು ನಡೆಯಿತು. ಆರು ತಿಂಗಳ ಹಿಂದೆ ಪುನೀತ್ ಕಾಣೆಯಾದ ಹೆಂಗಸಿನ ನಂಬರ್ ಗೆ ಕರೆ ಮಾಡಿರುತ್ತಾನೆ. ಈ ವಿಚಾರ ಅವರ ಮನೆಗೂ ಗೊತ್ತಾಗಿ ಕರೆಸಿ ಮದುವೆಯಾದ ಹೆಣ್ಣುಮಕ್ಕಳಿಗೆ ಕರೆ ಮಾಡಬಾರದೆಂದು ಬುದ್ದಿ ಹೇಳಿ ಕಳಿಸುತ್ತಾರೆ.
ಇದೀಗ ಆ ಹೆಣ್ಣುಮಗಳು ಪಕ್ಕದ ಮನೆಯಾತನೊಂದಿಗೆ ಓಡಿ ಹೋಗಿದ್ದು ಇದರಲ್ಲಿ ಪುನೀತನ ಕೈವಾಡ ಇರಬಹುದೆಂಬ ಶಂಕೆಯಿಂದ ಕೆಲವರು ಆತನ ಮನೆ ಮುಂದೆ ಬಂದು ಜಗಳ ಮಾಡುತ್ತಾರೆ. ಈ ಬಗ್ಗೆ ಮಾಹಿತಿಯೇ ಇಲ್ಲದ ಪುನೀತ್ ಇದರಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಎಷ್ಟೇ ಹೇಳಿದರೂ ಜನರು ಒಪ್ಪದಿದ್ದಾಗ ಹೆದರಿದ ಆತ 112 ಪೊಲೀಸರಿಗೆ ಕರೆ ಮಾಡಿ ನಮಗೆ ರಕ್ಷಣೆ ನೀಡುವಂತೆ ಮನವಿ ಮಾಡುತ್ತಾನೆ. ಇದಾದ ನಂತರ ವಿಚಾರಿಸಿದ ಪೊಲೀಸರು ರಕ್ಷಣೆ ಮಾಡುವ ಸಲುವಾಗಿ ಪೊಲೀಸ್ ಠಾಣೆಗೆ ಈತನನ್ನು ಜೀಪಿಗೆ ಕೂರಿಸಿಕೊಳ್ಳುತ್ತಾರೆ.ಅಷ್ಟರಲ್ಲಿ ಪಿಎಸ್ಐ ಅರ್ಜುನ್ ಕೂಡ ಅಲ್ಲಿಗೆ ಬರುತ್ತಾರೆ.
ಈ ನಡುವೆ ಈತನ ಮೇಲೆ ಯಾರೂ ದೂರು ನೀಡದಿರುವುದರಿಂದ ಈತನ ಪಾತ್ರ ಏನೂ ಇಲ್ಲ ಎಂದು ಹೇಳುತ್ತಾರೆ. ಆದರೆ ಅಲ್ಲಿನ ಕೆಲ ಪೊಲೀಸರು “ಸಾರ್ ಈತನದ್ದು ಕೈವಾಡ ಇದೆ . ಅವರು ಓಡಿ ಹೋಗಲು ಈತನೇ ಕಾರಣ ’’ ಎಂದು ಪಿಎಸ್ಐ ಗೆ ಕಿವಿ ಚುಚ್ಚುತ್ತಾರೆ
ಅವರ ಮಾತು ನಂಬಿದ ಪಿಎಸ್ ಐ ` ಗಾಡಿ ಹತ್ತು ಸೂಳೆ ಮಗನೇ’ ಎಂದು ಗಾಡಿ ಹತ್ತಿಸಿಕೊಂಡು ಹೊರಡುತ್ತಾರೆ. ಮಾರ್ಗ ಮದ್ಯೆ 112 ನಿಂದ ತಮ್ಮ ಜೀಪಿಗೆ ಆತನನ್ನು ತುಂಬಿಕೊಳ್ಳುತ್ತಾರೆ. ಅಲ್ಲಿ ಏನೇನು ನಡೆಯಿತು ಎಂಬುದನ್ನು ಪುನೀತ್ ಬಾಯಿಯಿಂದ ಕೇಳೋಣ
ಗೋಣಿ ಬೀಡಿನ ಠಾಣೆಯಲ್ಲಿ ನರಕ ದರ್ಶನ ತೋರಿಸಿದ ಅರ್ಜುನ್
`ನಾನು ಪೊಲೀಸ್ ವಾಹನದಿಂದ ಕೆಳಗೊಳಿದ ತಕ್ಷಣ ಠಾಣೆಯ ಮೇಲಿನ ಕೋಣೆಯೊಂದಕ್ಕೆ ಕರೆದುಕೊಂಡು ಹೋದರು ನನ್ನ ಮೇಲೆ ದೂರಿಲ್ಲ ಎಂದು ಬೇಡಿಕೊಂಡರೂ ಕೇಳಲಿಲ್ಲ. ಬಟ್ಟೆ ಬಿಚ್ಚು ಸೂಳೆ ಮಗನೇ ಎಂದು ಬೈದರು. ನನ್ನ ಕೈ ಕಾಲು ಕಂಬಕ್ಕೆ ಕಟ್ಟಿ ನೇತು ಹಾಕಿದರು. ಮಧ್ಯೆ ಕಬ್ಬಿಣದ ರಾಡು ಇಟ್ಟರು. ಮುಂಗಾಲಿಗೆ, ಅಂಗಾಲಿಗೆ ಹೊಡೆದರು.
ಸುಮಾರು 2 ಗಂಟೆ ಹಿಂಸೆ ಕೊಟ್ಟರು. `ಸಾರ್ ನಾನೇನಾದ್ರೂ ಇದರಲ್ಲಿ ಇದ್ದೀನಿ ಎಂದರೆ ಸತ್ತು ಹೋಗುತ್ತೇನೆ ಅವರನ್ನು ಕರೆಸಿ ಒಂದು ಮಾತು ಕೇಳಿ ಎಂದು ಅತ್ತು ಬೇಡಿಕೊಂಡೆ….ಅವರ ಮನ ಕರಗಲಿಲ್ಲ. ಬದಲಾಗಿ `ನೀನೇ ಮಾಡಿರುವುದು ಎಂದು ಒಪ್ಪಿಕೋ’ ಎಂದು ಮತ್ತೆ ಹೊಡೆದರು ಕೊನೆಗೆ ಇವರ ಹೊಡೆತ, ಹಿಂಸೆ ಹೆಚ್ಚಾದಾಗ ಸಾಯಿಸುತ್ತಾರೆ ಎಂದು ಹೆದರಿ ಒಪ್ಪಿಕೊಂಡೆ .
ಆಗ ಸ್ವಲ್ಪ ಹೊತ್ತು ಸುಮ್ಮನಾದರು. ಗಂಟಲು ಒಣಗಿ ಹೋಗಿತ್ತು ಉಸಿರಾಡಲು ಕಷ್ಟ ಆಗುತ್ತಿತ್ತು ಬಾಯಾರಿಕೆ ಆಗುತ್ತಿದೆ ನೀರು ಕೊಡಿ ಎಂದು ಬೇಡಿಕೊಂಡೆ. ಅಲ್ಲೇ ಇದ್ದ ಪೊಲೀಸನಿಂದ ಖಾಲಿ ಬಾಟಲ್ ನಲ್ಲಿ ಉಳಿದಿದ್ದ ಎರಡೇ ಹನಿ ಹಾಕಿದರು. `ಚೆನ್ನಾಗಿದ್ದೀಯಾ’ ಎಂದು ಅಣಕಿಸಿ ಕೇಳಿದರು .
ನಾನು ನೇತಾಡುತ್ತಲೇ ಇದ್ದೆ. ನೀನು ಅಪ್ಪನಿಗೆ ಹುಟ್ಟಿದ್ದೀಯಾ..? ಎಂದು ಕೇಳಿದರು. ಹೌದು ಎಂದೆ. ಇದಕ್ಕೆ ಗ್ಯಾರಂಟಿ ಏನು..? ಎಂದರು… ಯಾವ ಜಾತಿ..?ಎಂದರು ಎಸ್ಸಿ ಎಂದಿದ್ದಕ್ಕೆ ಮತ್ತೆ ಹೊಡೆದರು. ನಿಮ್ಮದು ಇದೇ ಕೆಲಸ ಸೋಳೆ ಮಕ್ಕಳ ಎಂದು ಪಾದಕ್ಕೆ ಹೊಡೆದರು. ಕೊನೆಗೆ ಬಾಯಿ ಸಂಪೂರ್ಣ ಒಣಗಿದ್ದರಿಂದ ತಡೆಯದೇ ನೀರು ಬೇಕೇ ಬೇಕು ಎಂದು ಎಂದೆ.
ಚೇತನ ಎಂಬುವನಿಂದ ಉಚ್ಚೆ ಕುಡಿಸಿದ ಪಾಪಿ ಅರ್ಜುನ
`ಬಾಯಾರಿಕೆ ತಡೆಯದೆ ಸಾಯುವಂತಾಗುತ್ತಿತ್ತು. ನೀರು ಬೇಕೇ ಬೇಕೆಂದು ಅಂಗಲಾಚಿದೆ. ನನ್ನ ಇರಿಸಿಕೊಂಡಿದ್ದ ಕೋಣೆಯಲ್ಲಿ ಕಳ್ಳತನದ ಆರೋಪದಲ್ಲಿ ಚೇತನ್ ಎಂಬುವನನ್ನು ಕರೆದು ಕೂರಿಸಿಕೊಂಡಿದ್ದರು. ಆತನನ್ನು ಕರೆದ ಅರ್ಜುನ್ ` ಈತನಿಗೆ ನೀರು ಬೇಕೆಂತೆ ಉಚ್ಚೆ ಹೂಯ್ಯೋ ‘ ಎಂದರು ಆತ ಹಿಂಜರಿದ. ಆದರೆ ಆತನಿಗೆ ಭಯ ಹುಟ್ಟಿಸಿ ನಿನಗೂ ಇದೇ ರೀತಿ ಮಾಡುತ್ತೇನೆಂದು ಹೆದರಿಸಿದರು.
ಆಗ ನನ್ನ ಬಳಿ ಬಂದ ಆತ ಜಿಪ್ಪು ಬಿಚ್ಚು ನನ್ನ ಬಾಯಿಗೆ ಮೂತ್ರ ಮಾಡಿದ. ನಾನು ತಲೆ ಎತ್ತಿ ಬೇಡ ಎಂದರೂ ಬಿಡದ ಪಿಎಸ್ಐ ಉಚ್ಚೆ ಹೂಯಿಸಿದರು. ನನಗೆ ಆಗಲೇ ಸಾವು ಬರಬಾರದೆ ಅನಿಸಿತು. ಹೊಡೆದ ಹೊಡೆತಕ್ಕೆ ಕೈಕಾಲುಗಳು ಸಂಪೂರ್ಣ ಬಿದ್ದು ಹೋಗಿದ್ದವು. ನಂತರ ಕೆಲವರು ಕೆಳಗೆ ಇಳಿಸಿದರು. ಆಗಲೂ ಬಿಡದ ಅರ್ಜುನ್ ಅಲ್ಲಿ ಬಿದ್ದಿದ್ದ ಮೂತ್ರವನ್ನು ನಾಲಿಗೆಯಿಂದ ನೆಕ್ಕಿಸಿದರು.
ನಾನು ಇಲ್ಲಿದ್ದೇನೆಂದು ಯಾರಿಗೂ ಗೊತ್ತಿರಲಿಲ್ಲ . 5.30 ಕ್ಕೆ ನನ್ನ ಮಾವ ಬಂದಿದ್ದರೂ ನನ್ನ ಭೇಟಿಯಾಗಲು ಬಿಟ್ಟಿರಲಿಲ್ಲ. ರಾತ್ರಿ 10 ಗಂಟೆಗೆ ಬರಲು ಹೇಳಿದ್ದರು. ಕೊನೆಗೆ 10.30 ಕ್ಕೆ ಮಾವ ಬಂದರು. ನನ್ನ ಸ್ಥಿತಿ ನೋಡಿ ಅತ್ತರು. ಅವರೊಂದಿಗೆ ಬೈಕಲ್ಲಿ ಬರುತ್ತಾ ನಡೆದಿದ್ದೆಲ್ಲವನ್ನೂ ಹೇಳಿದೆ. ಆದರೆ ಅಪ್ಪ ಅಮ್ಮನಿಗೆ ವಿಚಾರ ಹೇಳಿರಲಿಲ್ಲ.
ಮತ್ತೆ ಟಾರ್ಚರ್ ಶುರುವಾಯ್ತು
ಅದಾಗಿ ಮತ್ತೆ ಅರ್ಜುನ್ ಅವರೇ ಕರೆ ಮಾಡಿ ನೀನೇ ಅವರನ್ನು ಎಲ್ಲಿಗೆ ಕಳಿಸಿದ್ದೀಯಾ ಕರೆದುಕೊಂಡು ಬಾ ಎಂದು ಹೆದರಿಸಿದರು. ಆಗ ಭಯ ಇನ್ನೂ ಶುರುವಾಯ್ತು . ಸಾಯಬೇಕೆನಿಸಿತು. ಕೊನೆಗೆ ಮಾವನಿಗೆ ಹೇಳಿದೆ. ನಂತರ ಗೊತ್ತಿರುವ ಪತ್ರಕರ್ತರ ಮೂಲಕ ಎಸ್ಪಿ, ಐಡಿ, ಡಿಐಜಿ , ಎಸ್ಪಿ ಮಾನವ ಹಕ್ಕು ಆಯೋಗಕ್ಕೆ ಪತ್ರ ಬರೆದೆವು. ಮಾಧ್ಯಮಗಳಲ್ಲಿ ಸುದ್ದಿ ಬಂತು. ಘಟನೆ ಬಗ್ಗೆ ನಮ್ಮ ಎಂಎಲ್ ಎ ಎಂಪಿ ಕುಮಾರಸ್ವಾಮಿ, ಮೋಟಮ್ಮ ಮೊದಲಾದವರು ವಿಚಾರಿಸಿಕೊಂಡರು.
ದಲಿತ ಸಂಘಟನೆಗಳೆಲ್ಲ ನಮ್ಮ ಪರ ಬಂದರು. ಈ ನಡುವೆ ಈ ಬಗ್ಗೆ ತನಿಖೆ ನಡೆಸುವಂತೆ ಡಿವೈಎಸ್ಪಿಗೆ ವಹಿಸಲಾಗಿದ್ದು ಅವರು ಬಂದು ನನ್ನ ಹೇಳಿಕೆ ತೆಗೆದುಕೊಂಡಿದ್ದಾರೆ. ಮೂತ್ರ ಕುಡಿಸಿದ ಚೇತನ್ ನಾಪತ್ತೆಯಾಗಿದ್ದಾನೆ. ಆತನಿಗೆ ಹಣ ಮತ್ತು ಬೆದರಿಕೆ ಹಾಕಿ ಎಲ್ಲೋ ಬಚ್ಚಿಡಲಾಗಿದೆ. ಆತ ಯಾರ ಕೈಗೂ ಸಿಗುತ್ತಿಲ್ಲ.
ಕೆಲವು ಪೊಲೀಸರು ಹಾಗೂ ಕೆಲ ಮುಖಂಡರು ನನ್ನ ಮನೆಗೆ ಬಂದಿದ್ದರು ಎರಡು ಲಕ್ಷ ಹಣ ಕೊಡುತ್ತೇವೆ , ಕೆಲಸ ಕೊಡಿಸುತ್ತೇವೆ ರಾಜಿ ಮಾಡಿಕೋ ಎಂದರು. ನಾನು ಒಪ್ಪಿಕೊಳ್ಳಲಿಲ್ಲ. ನನಗೆ ಅವನ ಮೇಲೆ ವಯಕ್ತಿಕ ದ್ವೇಷ ಇಲ್ಲ ನನಗೆ ಆದ ಅವಮಾನ ಯಾರಿಗೂ ಆಗಬಾರದು. ಆತನನ್ನು ಎಸ್ಪಿ ಕಚೇರಿಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಆದರೆ ಆತನ ಅಮಾನತ್ತು ಆಗಬೇಕು ನನಗೆ ನ್ಯಾಯ ಬೇಕು ಇಷ್ಟೆ ನಾನು ಕೇಳಿಕೊಳ್ಲುವುದು ಎನ್ನುತ್ತಾನೆ ಪುನೀತ್ .
ನಿಜ ಕೋವಿಡ್ ಸಂದರ್ಭದಲ್ಲಿ ಯಾರೂ ಪ್ರಶ್ನಿಸುವುದಿಲ್ಲ ಎನ್ನುವ ಕಾರಣಕ್ಕೆ ಇಂತಹ ಪ್ರಕರಣಗಳು ಮುಚ್ಚಿ ಹೋಗಬಾರದು ನಿಜವಾಗಿಯೂ ಮನುಷ್ಯತ್ವ , ಮಾನವೀಯತೆ ಯನ್ನೆ ಬೆಚ್ಚಿ ಬೀಳಿಸುವ ಪ್ರಕರಣ. ಒಬ್ಬ ಯುವಕನ ಮೇಲೆ ಯಾವ ದೂರು ಇಲ್ಲದೆ ಆತನನ್ನು ನೇತು ಹಾಕಿ ಮೂತ್ರ ಕುಡಿಸುತ್ತಾರೆಂದರೆ ಇಡೀ ಮಾನವ ಕುಲವೇ ತಲೆ ತಗ್ಗಿಸುವಂತದ್ದು.
ಅರ್ಜುನ್ ಎಂಬ ವಿಕೃತ ಸಬ್ ಇನ್ಸ್ ಪೆಕ್ಟರ್ ತಲೆ ದಂಡವಾಗಲೇಬೇಕು . ಪುನೀತ್ ಎಂಬ ಯುವಕನ ಪರ ನಾಡಿನ ಜನತೆ ನಿಲ್ಲೋಣ. ಪುನೀತ್ ಅವರ ದೂರವಾಣಿ ಸಂಖ್ಯೆ : 63614 70284
ಕೃಪೆ : ಭೀಮ ವಿಜಯ ಪತ್ರಿಕೆ
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಶಾಸಕರ ಹಿಡಿತ ತಪ್ಪಿದ ‘ಕೈ’ ಕಾರ್ಯಕರ್ತರಲ್ಲಿ ಶಂಕೆ

-
- ಗಿರೀಶ್ ಕುಮಾರ್ ಗೌಡ, ಬಳ್ಳಾರಿ
ಸಮುದಾಯದ ಭದ್ರ ಕೋಟೆಯಲ್ಲಿ ಬಹುದಿನದ ಕನಸು ನನಸಾಗಲಿಲ್ಲ
ಸಮುದಾಯಕ್ಕೆ ಸರ್ಮಪಣೆ ‘ಕೈ’ ಸಾಧನಾ ಸಮಾವೇಶ
ಸುದ್ದಿದಿನಡೆಸ್ಕ್:ಎರಡು ವರ್ಷ ಕಳೆದರೂ ರೈತರ ಜೀವನಾಡಿಯಾದ ವಿಜಯನಗರ ಜಿಲ್ಲೆಯ ಸಕ್ಕರೆ ಕಾರ್ಖಾನೆ ನಿರ್ಮಾಣ ಆಗದೇ ಇರೋದು ಜೊತೆಗೆ ತುಂಗಭದ್ರಾ ಜಲಾಶಯದ ಹೂಳು ಎತ್ತದೆ ಇರೋದು ದೊಡ್ಡ ದುರಂತವಾಗಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಸಕ್ಕರೆ ಕಾರ್ಖಾನೆ ಆರಂಭವಾಗಿಲ್ಲ ಎಂದು ಸಾರ್ವಜನಿಕರ ವಲಯದಲ್ಲಿ ವಿಜಯನಗರ ಜಿಲ್ಲೆಗೆ ಬಹಳ ಅನಾಯ್ಯವಾಗಿದೆ ಅನುದಾನ ಬಿಡುಗಡೆಯಲ್ಲಿ ಮತ್ತು ಸ್ವಪಕ್ಷದ ಮೇಲೆ ಅಸಮಾಧಾನ ವ್ಯಕ್ತ ಪಡಿಸಿದ ಶಾಸಕ ಗವಿಯಪ್ಪ
ಯಾವುದೇ ಅಭಿವೃದ್ಧಿ ಗಳನ್ನು ಕೈಗೊಳ್ಳದೇ, ಯೋಜನೆಗಳಿಗೆ ಶಿಲಾನ್ಯಾಸ ಮಾಡದೇ ವಿಜಯನಗರದ ಜಿಲ್ಲೆಯಲ್ಲಿ ಎರಡು ವರ್ಷದ ಸಾಧನ ಸಮಾವೇಶ ಯಾವ ಪುರುಷಾರ್ಥಕ್ಕೆ ಮಾಡುತ್ತಿದ್ದಾರೆ ಎನ್ನುವುದು ಸಾರ್ವಜನಿಕರಲ್ಲಿ ಚರ್ಚೆ ಆಗುತ್ತಿದೆ.
ಸ್ವಪಕ್ಷದ ವಿರುದ್ಧವೇ ಮುನಿಸಿಕೊಂಡ ಶಾಸಕ ಗವಿಯಪ್ಪ ಅವರು ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಭಾಗಿನ ಕಾರ್ಯಕ್ರಮದಲ್ಲಿ ಮುನಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗದೇ ವಾಪಾಸು ಹೋಗಿದ್ದರು. ಅವರ ಕಛೇರಿಯವರೆಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ಕರೆಯಲು ಹೋದರೂ ಸಹ ಬರಲಿಲ್ಲ. ಇದರಿಂದ ಸಹ ಶಾಸಕರು ಸಿಎಂ ಮೇಲೆ ಮುನಿಸಿಕೊಂಡರು.
ಜಿಲ್ಲೆಯ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ ಪತ್ರಿಕಾಗೋಷ್ಟಿಯಲ್ಲಿ ಶಾಸಕ ಗವಿಯಪ್ಪ ವಿರುದ್ಧ ಇವರು ಕ್ಷೇತ್ರಕ್ಕೆ ‘ಶಾಪ’ ಎಂದು ಹೇಳಿ, ಜಿಲ್ಲೆಗೆ ಅನುದಾನ ತರುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮತ್ತು ಕಾರ್ಯಕರ್ತರ ನಡುವೆ ಅಸಮಾಧಾನಗಳ ನಡುವೆ ಸ್ವಪಕ್ಷಗಳಿಂದ ಶಿರಾಜ್ ಶೇಖ್ ಮತ್ತು ಮಾಜಿ ಶಾಸಕ ಭೀಮಾನಾಯ್ಕ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದರು. ಇವರಿಬ್ಬರ ನಡುವಿನ ಜಗಳ ಸಮಾಧಾನ ಮಾಡಲು ಕೆ.ಪಿ.ಸಿ.ಸಿ ಮಧ್ಯೆ ಪ್ರವೇಶ ಮಾಡಿ ಸಂಧಾನ ಮಾಡುವಲ್ಲಿ ವಿಫಲವಾಯಿತು.
ಸಾಧನೆ ಮತ್ತು ಸಮರ್ಪಣೆ ಇವುಗಳಲ್ಲಿ ಯಾವುದನ್ನು ಮಾಡುತ್ತಾರೋ ಅವರಲ್ಲಿಯೇ ಗೊಂದಲ ಇದೆ. ಯಾವುದು ಸಮರ್ಪಣೆ ?, ಯಾವುದು ಸಾಧನೆ ? ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡುವಲ್ಲಿ ತಾರತಮ್ಯ ಮಾಡಿ ಅವಳಿ ಜಿಲ್ಲೆಗೆ ಸಚಿವರನ್ನು ನೇಮಕ ಮಾಡದೇ ಕ್ಷೇತ್ರಕ್ಕೆ ಅನ್ಯಾಯ ಮಾಡಿದೆ ಎನ್ನುವುದು ಸಾರ್ವಜನಿಕರಲ್ಲಿ, ರಾಜಕೀಯದಲ್ಲಿ ಗೊಂದಲ ನಿರ್ಮಾಣ ಮಾಡಿದೆ.
ಜಿಲ್ಲೆಯಲ್ಲಿ ಶಾಸಕಾಂಗ ಮತ್ತು ಆಡಳಿತದಲ್ಲಿ ಒಂದೇ ಸಮುದಾಯದವರು ಇರೋದರಿಂದ ಅಭಿವೃದ್ಧಿ ಆಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ಭದ್ರ ಕೋಟೆ ಎನ್ನುವ ಮಾಹಿತಿಯನ್ನು ಈ ಕ್ಷೇತ್ರದ ಜನರಿಗೆ ತಿಳಿಸಲು ಈ ಸಮರ್ಪಣೆ ಕಾರ್ಯಕ್ರಮ ಮಾಡುತ್ತಿದ್ದಾರೆ.
ದಿವಂಗತ ಮಾಜಿ ಪ್ರಧಾನಿ, ಉಕ್ಕಿನ ಮಹಿಳೆ ಇಂದಿರಾ ಗಾಂಧೀ ಕಟ್ಟೆಯನ್ನು ನಾಲ್ಕು ದಿನಗಳಲ್ಲಿ ಅಭಿವೃದ್ಧಿ ಪಡಿಸಿರುವುದು ವಿಜಯನಗರ ಕ್ಷೇತ್ರದ ಜನರಿಗೆ ಹಾಗು ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಗವಿಯಪ್ಪ ನೀಡುತ್ತಿರುವುದು ಬಹು ದೊಡ್ಡ ಕೊಡುಗೆ ಆಗಿದೆ.
ಇನ್ನು ಈ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಸಮರ್ಪಣೆ, ಸಾಧನ ಸಮಾವೇಶ ಮಾಡಿದರೆ ಶಾಸಕ ಗವಿಯಪ್ಪ ಅವರಿಗೆ ಸಚಿವ ಸ್ಥಾನ ನೀಡುತ್ತಾರೆ ಎನ್ನುವ ಹಿಂಬಾಲಕರ ನಿರೀಕ್ಷೆ ಸಹ ಇದೆ.
2025 ಮೇ 20 ರಂದು ನಡೆಯುವ ಜಿಲ್ಲೆಯ ಪುನೀತ್ ರಾಜ್ ಕುಮಾರ್ ಮೈದಾನದಲ್ಲಿ ಸಾಧನ ಸಮಾವೇಶದಲ್ಲಿ ಎಷ್ಟೆಲ್ಲಾ ಗೊಂದಲದ ನಡುವೆ ಯಶಸ್ವಿಯಾಗುವುದೇ ಎಂದು ಸಾರ್ವಜನಿಕರ ವಲಯದಲ್ಲಿ ಚರ್ಚೆ ಆಗುತ್ತಿದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸ್ಟಾಕ್ ಮಾರ್ಕೇಟ್ 17.75 ಲಕ್ಷ ವಂಚನೆ, ಒಬ್ಬನ ಬಂಧನ ; 5 ಲಕ್ಷ ಜಪ್ತಿ !

- ಗಿರೀಶ್ ಕುಮಾರ್,ಬಳ್ಳಾರಿ
ಸುದ್ದಿದಿನ,ಬಳ್ಳಾರಿ:ಸೈಬರ್, ಆರ್ಥಿಕ, ಮಾದಕ ದ್ರವ್ಯ ಅಪರಾಧ ಪೊಲೀಸ್ ಠಾಣೆ, ಬಳ್ಳಾರಿ ಕಾರ್ಯಚರಣೆ ಕರ್ನಾಟಕ ರಾಜ್ಯದ ವಿಜಯನಗರ ಜಿಲ್ಲೆ ಹೊಸಪೇಟೆ ನಗರದ ವ್ಯಕ್ತಿಯಿಂದ ನಗದು ಹಣ ರೂಪಾಯಿ 5 ಲಕ್ಷ ಜಪ್ತಿ ಮಾಡಿರುವ ಘಟನೆ ಗಣಿನಾಡು ಬಳ್ಳಾರಿಯಲ್ಲಿ ನಡೆದಿದೆ.
ಕು. ಲಕ್ಷ್ಮೀ ವಿ.ಎಸ್ ತಂದೆ ವಿ. ಟಿ ಸತ್ಯನಾರಾಯಣ ವಾಸ: ಬಳ್ಳಾರಿ ರವರಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದ ವಾಸಿಯಾದ ರಂಜಿತ ಎಂಬುವವರು ಸ್ಟಾಕ್ ಮಾರ್ಕೆಟ್ನಲ್ಲಿ ಹಣ ಹೂಡಿಕೆ ಮಾಡಿ ಹೆಚ್ಚಿನ ಲಾಭಾಂಶ ಕೊಡಿಸುವುದಾಗಿ ಹೇಳಿ ನಂಬಿಸಿ ಪಿರ್ಯಾದಿದಾರರಿಂದ ಹಣ ರೂ. 17,75,865 ಆನ್ಲೈನ್ ಮೂಲಕ ಹಾಕಿಸಿಕೊಂಡು ಮೋಸ ಮಾಡಿರುತ್ತಾನೆ. ಆದರೆ 5 ಲಕ್ಷ ಮಾತ್ರ ರಿಕವರಿ, ಉಳಿದ ಹಣ ಎಲ್ಲಿಗೆ ಹೋಗಿದೆ.
ಪೊಲೀಸ್ ಅಧೀಕ್ಷಕಿ ಡಾ: ಶೋಭಾರಾಣಿ ವಿ.ಜೆ ಅವರ ಬಳ್ಳಾರಿ ಮಾರ್ಗದರ್ಶನದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ನೇತೃತ್ವದಲ್ಲಿ, ಬಳ್ಳಾರಿ ಸಿಇಎನ್ ಕ್ರೈಂ ಪೊಲೀಸ್ ಠಾಣೆಯ ಡಿಎಸ್ಪಿ ಡಾ: ಸಂತೋಷ ಚೌವ್ಹಾಣ್ ತಾಂತ್ರಿಕ ಸಾಕ್ಷ್ಯಾಧಾರಗಳನ್ನು ಸಂಗ್ರಹಣೆ ಮಾಡಿಸಿ ತನಿಖೆ ಕೈಗೊಂಡು, ಪೊಲೀಸ್ ಸಬ್-ಇನ್ಸ್ಪೆಕ್ಟರ್ ವಲಿಬಾಷ ಮತ್ತು ಸಿಬ್ಬಂದಿಯ ತಿಪ್ಪೇರುದ್ರ ಎಎಸ್ಐ, ಸುರೇಶ, ಉಮಾಮಹೇಶ್ವರ, ಕೆ. ಯಲ್ಲೇಶ್, ಎನ್ ಚಂದ್ರಶೇಖರ ಅವರೊಂದಿಗೆ ಸೇರಿ ಆರೋಪಿ ರಂಜಿತ್ ಹೊಸಪೇಟೆ, ವಿಜಯನಗರ ಜಿಲ್ಲೆ ಪತ್ತೆಮಾಡಿ ಈತನನ್ನು ವಿಚಾರಣೆಗೊಳಪಡಿಸಿ ಆರೋಪಿತ ಪಡೆದಿದ್ದ ನಗದು ಹಣ ರೂಪಾಯಿ 5 ಲಕ್ಷ ಜಪ್ತು ಮಾಡಿದ್ದಾರೆ.
ಪೊಲೀಸ್ ಅಧೀಕ್ಷಕರು ಬಳ್ಳಾರಿ, ಈ ಕಾರ್ಯಚರಣೆ ಮಾಡಿದ ಬಳ್ಳಾರಿ ಸಿ.ಇ.ಎನ್. ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ಅವರಿಗೆ ಶ್ಲಾಘಿಸಿರುತ್ತಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ
ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ

ಸುದ್ದಿದಿನ,ದಾವಣಗೆರೆ:ಪ್ರಸಕ್ತ ಸಾಲಿನ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಸಹಶಿಕ್ಷಕರು ಮತ್ತು ಮುಖ್ಯಶಿಕ್ಷಕರು, ತತ್ಸಮಾನ ವೃಂದದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮೂಲಕ ಭರ್ತಿ ಮಾಡಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಆನ್ ಲೈನ್ ವೆಬ್ ಸೈಟ್ www.schooleducation.karnataka.gov.in
ಮೂಲಕ ಅರ್ಜಿ ಸಲ್ಲಿಸಲು ಮೇ.26 ಕೊನೆಯ ದಿನವಾಗಿರುತ್ತದೆ.
ಹುದ್ದೆಗಳ ವಿವರ
ಪ್ರಾಥಮಿಕ ಶಾಲಾ ಸಹಶಿಕ್ಷಕರು-ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳು(ಸಿ.ಆರ್.ಪಿ), ಕ್ಷೇತ್ರ ಸಂಪನ್ಲೂಲ ವ್ಯಕ್ತಿ(ಬಿ.ಆರ್.ಪಿ), ತಾಂತ್ರಿಕ ಸಹಾಯಕರು(ಪ್ರಾಥಮಿಕ)
ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರು ಮತ್ತು ಹಿರಿಯ ಮುಖ್ಯ ಶಿಕ್ಷಕರು-ಶಿಕ್ಷಣ ಸಂಯೋಜಕರು, ಪ್ರೌಢಶಾಲಾ ಸಹಶಿಕ್ಷಕರು- ಕ್ಷೇತ್ರ ಸಂಪನ್ಲೂಲ ವ್ಯಕ್ತಿ(ಬಿ.ಆರ್.ಪಿ), ಶಿಕ್ಷಣ ಸಂಯೋಜಕರು(ಪ್ರವಢ), ತಾಂತ್ರಿಕ ಸಹಾಯಕರು(ಪ್ರೌಢ) ಪ್ರೌಢಶಾಲಾ ಮುಖ್ಯ ಶಿಕ್ಷಕರು-ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ(ಬಿ.ಆರ್.ಪಿ), ಸಹಾಯಕ ಯೋಜನಾ ಸಮನ್ವಯಾಧಿಕಾರಿ(ಎ.ಪಿ.ಸಿ), ವಿಷಯ ಪರಿವೀಕ್ಷಕರು, ಸಹಾಯಕ ನಿರ್ದೇಶಕರು ಹುದ್ದೆಗಳು.
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು(ಆಡಳಿತ) ಹಾಗೂ ಪದನಿಮಿತ್ತ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಇಲಾಖೆ ದಾವಣಗೆರೆ ಸಂಪರ್ಕಿಸಲು ಇಲಾಖೆಯ ಉಪನಿರ್ದೇಶಕರಾದ ಕೊಟ್ರೇಶ್.ಜಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243

-
ದಿನದ ಸುದ್ದಿ7 days ago
ಅವಹೇಳನಕಾರಿ ಹೇಳಿಕೆ ; ಲೋಕಿಕೆರೆ ನಾಗರಾಜ್ ಕೂಡಲೇ ಕ್ಷಮೆ ಕೇಳಬೇಕು : ಸವಿತಾ ಹುಲ್ಲುಮನೆ ಗಣೇಶ್ ಆಗ್ರಹ
-
ದಿನದ ಸುದ್ದಿ3 days ago
ದೇಶಾದ್ಯಂತ 11 ದಿನಗಳ ಕಾಲ ತಿರಂಗ ಯಾತ್ರೆ
-
ದಿನದ ಸುದ್ದಿ5 days ago
ಆಪರೇಷನ್ ಸಿಂದೂರ್ ಕಾರ್ಯಾಚರಣೆಯಲ್ಲಿ ನೂರು ಉಗ್ರಗಾಮಿಗಳು ಹತ : ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್
-
ದಿನದ ಸುದ್ದಿ4 days ago
ದಾವಣಗೆರೆ | ಮುಂಗಾರು ವಿಪತ್ತು ನಿರ್ವಹಣೆಗೆ ಸಿದ್ದತೆ, ಸಿಡಿಲಬ್ಬರ ಮುನ್ನೆಚ್ಚರಿಕೆಗೆ ಆಪ್ ಅಳವಡಿಸಿಕೊಳ್ಳಲು ಸಲಹೆ
-
ದಿನದ ಸುದ್ದಿ3 days ago
ರಕ್ತ ಮತ್ತು ನೀರು ಒಟ್ಟಿಗೆ ಹರಿಯಲಾರವು : ಪ್ರಧಾನಿ ನರೇಂದ್ರ ಮೋದಿ
-
ದಿನದ ಸುದ್ದಿ4 days ago
ದಾವಣಗೆರೆ | ಡಿ.ಇ.ಎಲ್.ಇಡಿ. ದಾಖಲಾತಿಗೆ ಅರ್ಜಿ ಆಹ್ವಾನ
-
ದಿನದ ಸುದ್ದಿ3 days ago
ಚನ್ನಗಿರಿ | ಇದೇ 15 ರಂದು ಲೋಕಾಯುಕ್ತ ಪೊಲೀಸರಿಂದ ಅಹವಾಲು ಸ್ವೀಕಾರ
-
ದಿನದ ಸುದ್ದಿ3 days ago
ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ